| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ: ಮಂಗಳೂರು ರೈಲ್ವೆ ವಿಭಾಗ ಈಶಾನ್ಯ ವಲಯಕ್ಕೆ ಸೇರಲಿ ಸಾಹಿತ್ಯ ಸಮ್ಮೇಳನದ ನಿರ್ಣಯ |
ಪ್ರಕಟಿಸಿದ ದಿನಾಂಕ : 2010-03-18
ಮಂಗಳೂರು, ಮಾ.೧೭: ನಗರದ ಪುರಭವನದಲ್ಲಿ ಕಳೆದ ಮೂರು ದಿನದಿಂದ ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ೧೬ನೆ ಸಾಹಿತ್ಯ ಸಮ್ಮೇಳನ ಬುಧವಾರ ಸಮಾಪ್ತಿಗೊಂಡಿತು.
ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿ ‘ಕನ್ನಡಿಗರು ಕನ್ನಡತನವನ್ನು ಉಳಿಸಿ ಬೆಳೆಸಬೇಕು’ ಎಂದು ಕರೆ ನೀಡಿದರು.
ಮುಂಬೈ ವಿ.ವಿ. ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ತಾಳ್ತಜೆ ವಸಂತ ಕುಮಾರ್ ಸಮಾರೋಪ ಭಾಷಣ ಮಾಡಿದರು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಪಾದೆಕಲ್ಲು ನರಸಿಂಹ ಭಟ್ಟ, ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹ್ಮಾನ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ, ಕಸಾಪ ಮಾಜಿ ಅಧ್ಯಕ್ಷ ಹರಿಕಷ್ಣ ಪುನರೂರು, ಮೇಯರ್ ರಜನಿ ದುಗ್ಗಣ್ಣ, ಜಿಲ್ಲಾ ಕಸಾಪ ಕೋಶಾಧಿಕಾರಿ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರಾ ಸ್ವಾಗತಿಸಿದರು.
ಡಾ.ಎಂ.ಪಿ. ಶ್ರೀನಾಥ ಉಜಿರೆ ವಂದಿಸಿದರು.ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಬಹಿರಂಗ ಅದಿವೇಶನದಲ್ಲಿ ಮಂಗಳೂರು ರೈಲ್ವೆ ವಿಭಾಗ ಈಶಾನ್ಯ ವಲಯಕ್ಕೆ ಸೇರಲಿ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆ ಪರೀಕ್ಷೆ ಸಹಿತ ಪಠ್ಯ ವನ್ನು ಅಳವಡಿಸಬೇಕು ಎಂಬುದೂ ಸೇರಿದಂತೆ ಒಂಬತ್ತು ನಿರ್ಣಯಗಳನ್ನು ಮಂಡಿಸಲಾಯಿತು.
ನಿರ್ಣಯಗಳು
೧.ಮಂಗಳೂರು ರೈಲು ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಮತ್ತು ಕನ್ನಡಿಗರ ಹಿತ ಕಾಪಾಡು ವುದಕ್ಕಾಗಿ ಪಾಲ್ಘಾಟ್ ವಿಭಾಗದಿಂದ ಮಂಗಳೂರನ್ನು ಪ್ರತ್ಯೇಕಿಸಿ ಈಶಾನ್ಯ ವಲಯಕ್ಕೆ ಸೇರಿಸಬೇಕು.,
೨. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಕನ್ನಡ ಚಟುವಟಿಕೆ ನಡೆಸಲು ಕೇಂದ್ರ ಭಾಗದಲ್ಲಿ ಕನ್ನಡ ಭವನ ನಿರ್ಮಾಣ ಅಥವಾ ಶಾಲೆ, ಸರಕಾರಿ ಕಟ್ಟಡಗಳನ್ನು ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗೆ ಒಪ್ಪಿಸುವುದು.
೩.ಪರಿಸರ ವಿರೋಧಿ, ಜನ ವಿರೋಧಿ ನೇತ್ರಾವತಿ ನದಿ ತಿರುಗಿಸುವ ಯೋಜನೆ ಕೈ ಬಿಡಬೇಕು.
೪. ಅನುದಾನಿತ ಮತ್ತು ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳ ವ್ಯತ್ಯಾಸದ ಬದಲಾಗಿ ಏಕರೂಪಿ ಶಿಕ್ಷಣವನ್ನು ಜಾರಿಗೆ ತರಬೇಕು.
೫.ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವುದರೊಂದಿಗೆ ಪ್ರತೀ ತರಗತಿಗೂ ಶಿಕ್ಷಕರನ್ನು ನೇಮಿಸಬೇಕು. ಇದೇ ಅನುಪಾತದಲ್ಲಿ ಸಾಂಸ್ಕೃತಿಕ ಕ್ರೀಡೆ, ಗ್ರಂಥಪಾಲಕ, ಅಡುಗೆ ಸಿಬ್ಬಂದಿಗಳನ್ನು ನೇಮಿಸಬೇಕು.
೬. ಪ್ರತೀ ತಾಲೂಕಿಗೆ ನಿವೇಶನ ಸಹಿತ ಸಾಹಿತ್ಯ ಭವನ ಅನುಷ್ಠಾನಗೊಳಿಸಬೇಕು.
೭. ನನೆಗುದಿಗೆ ಬಿದ್ದ ರಂಗಮಂದಿರ ಯೋಜನೆಯನ್ನು ಕಾರ್ಯಗತಗೊಳಿಸಬೇಕು.
೮. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆ ಪರೀಕ್ಷೆ ಸಹಿತ ಪಠ್ಯವನ್ನು ಅಳವಡಿಸಬೇಕು. ಉನ್ನತ ಶಿಕ್ಷಣಗಳಲ್ಲೂ ಇದೇ ಭಾಷಾ ನೀತಿಯನ್ನು ಅನುಸರಿಸಬೇಕು.
೯.ಚಿಕ್ಕಮಗಳೂರು, ಶಿಶಿಲ, ಅರಸಿನಮಕ್ಕಿ ಮಾರ್ಗವಾಗಿ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವುದು. ಮಡಿಕೇರಿ ಕೂಜುಮಲೆ ದ್ವಾರಾ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವುದು.
ಸಾಹಿತ್ಯ ಜೀವನ್ಮುಖಿಯಾಗಬೇಕು: ಸಂವಾದ ಗೋಷ್ಠಿಯಲ್ಲಿ ಲಕ್ಷ್ಮೀಶ ತೋಳ್ಪಾಡಿ
ಮಂಗಳೂರು, ಮಾ.೧೭: ಸಾಹಿತ್ಯ ಜೀವನ್ಮುಖಿಯಾಗಬೇಕು. ಆಗ ಸಾಹಿತ್ಯದ ಯಾವ ಪ್ರಾಕಾರಗಳು ಎನ್ನುವ ವಗೀಕರಣ ಮುಖ್ಯವಾಗುವುದಿಲ್ಲ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಾದೆಕಲ್ಲು ನರಸಿಂಹ ಭಟ್ಟರೊಂದಿಗೆ ನಡೆದ ಸಂವಾದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವೇದಬಲ್ಲವನು ಪರಿಪೂರ್ಣವಾಗಿ ತಿಳಿದ ವನು ಎಂದುಕೊಳ್ಳಬಾರದು ಎಂದು ವೇದ ದಲ್ಲೇ ಹೇಳಲಾಗಿದೆ. ವೇದದ ಜೊತೆ ಇತಿ ಹಾಸ, ಪುರಾಣ ಓದಿದವನು ಬಹುಶ್ರುತ ಕೇವಲ ವೇದಬಲ್ಲವ ಅಲ್ಪಶ್ರುತನಾಗುತ್ತಾನೆ. ಇಂದಿನ ಕಾಲಘಟ್ಟದಲ್ಲಿ ಅದ್ಯಯನ ಪರಂಪರೆ ಶಿಥಿಲಗೊಳ್ಳುತ್ತಿದೆ. ಇದರ ಪರಿಣಾಮವಾಗಿ ಪರಂಪರೆಯ ಕೊಂಡಿ ಕಳಚಿದೆ. ಪ್ರಸಿದ್ಧಿಯ ಹುಚ್ಚಿನಿಂದ ಮೌಲ್ಯ ಯುತ ಸಾಹಿತ್ಯ ಕೃತಿಗಳು ಕಡಿಮೆಯಾಗು ತ್ತಿದೆ ಎಂದು ತೋಳ್ಪಾಡಿ ತಿಳಿಸಿದರು.

ಈ ಸಂದರ್ಭ ಶ್ರೀಧರ ಡಿ.ಎಸ್., ಅವಿನಾಶ್, ಶ್ರೀನಿವಾಸ ಭಟ್ಟ, ಗಣರಾಜ ಕುಂಬ್ಳೆ, ಪದ್ಮನಾಭ ಮರಾಠೆ, ಪುಂಡಿಕಾ ಗಣಪಯ್ಯ, ಭುವನೇಶ್ವರಿ ಹೆಗಡೆ ಮೊದಲಾದವರು ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಡಾ. ಪಾದೆಕಲ್ಲು ವಿಷ್ಣು ಭಟ್ ಕಾರ್ಯಕ್ರಮ ನಿರೂಪಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-18 00:00:00
|
|
|
|
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ] |
|