ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜುವೆಲ್ಲರ್ಸ್‌ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ
Latest news item ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಮಂಗಳೂರು: ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚರಣೆ : 11 ಜನ ಛೋಟಾಶಕೀಲ್ ಸಹಚರರ ಬಂಧನ ;16 ಮೊಬೈಲ್ ಹಾಗೂ ನಗದು ಸಹಿತ ಮಾರಾಕಾಯುಧಗಳ ವಶ.

(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)

ಮಂಗಳೂರು,ಮಾ.17 : ಮಂಗಳೂರಿನ ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚ ರಣೆಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟನಾದ ಛೋಟಾ ಶಕೀಲ್‌ನ 11 ಜನ ಸಹಚರರನ್ನು ಬಂಧಿಸಲಾಗಿದೆ.

ಬಂಧಿತರಿಂದ ಒಂದು ರಿವಾಲ್ವರ್ ಮತ್ತು 3 ಮದ್ದುಗುಂಡುಗಳು, 5 ತಲವಾರು, 16 ಮೊಬೈಲ್ ಫೋನ್‌ಗಳು, ಒಂದು ಕಾರು, ಒಂದು ಬೈಕ್ ಹಾಗೂ 62 ಸಾವಿರ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.  


ಮಂಗಳೂರಿನಲ್ಲಿರುವ ನಾಲ್ಕು ಜನ ರವಿಪೂಜಾರಿಯ ಸಹಚರರನ್ನು 15 ದಿನದ ಒಳಗೆ ಹತ್ಯೆ ಮಾಡಿ ನಂತರ ಇಲ್ಲಿನ ಶ್ರೀಮಂತ ಉದ್ದಿಮೆದಾರರಿಗೆ ದೂರವಾಣಿ ಕರೆಗಳನ್ನು ಮಾಡಿ ಹಣ ವಸೂಲಿ ಮಾಡುವ ಷಡ್ಯಂತ್ರವನ್ನು ರೂಪಿಸಿದ್ದ ಛೋಟಾಶಕೀಲನ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.

ಪಶ್ಚಿಮ ವಲಯ ಐ.ಜಿ.ಪಿ ಗೋಪಾಲ ಹೊಸೂರು ಹಾಗೂ ದ.ಕ.ಜಿಲ್ಲಾ ಎಸ್.ಪಿ ಡಾ| ಸುಬ್ರಮಣ್ಯೇಶ್ವರ ರಾವ್ ಅವರು    ನಗರದಲ್ಲಿಂದು ಸುದ್ಧಿಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು.

ಕಳೆದ ಸಪ್ಟೆಂಬರ್ ನಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಸರಹದ್ದಿನ ಮದ್ದಡ್ಕ ಎಂಬಲ್ಲಿ ನಡೆದ ಮೂಸಕುಂಜ್ನಿ ಎಂಬವರ ಮೇಲಿನ ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆದಳಕ್ಕೆ ನಿರ್ದೇಶನ ನೀಡಲಾಗಿತ್ತು. ಅದರಂತೆ ನಿನ್ನೆ ದಿನ  ಮಂಗಳೂರಿನ ಅಶೋಕನಗರದ ದಂಬೇಲ್ ನಲ್ಲಿರುವ ಮನೆಯೊಂದರಲ್ಲಿ ಪ್ರಕರಣದ ಆರೋಪಿಯಾದ ಚಿಕ್ಕ ಮಂಗಳೂರಿನ ವಾಸಿ ಮಂಜುನಾಥ ಎಂಬವನು ಇರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಡಿ.ಸಿ.ಐ.ಬಿ ಪೊಲೀಸರು ಅಲ್ಲಿಗೆ ಧಾಳಿ ನಡೆಸಿದಾಗ  ಮಂಜುನಾಥನ ಜೊತೆಗೆ ಇತರ 7 ಜನರು ಅಲ್ಲಿದ್ದು, ಅವರ ಬಳಿ ಮಾರಾಕಾಯುಧಗಳು ಇರುವುದು ಕಂಡು ಬಂತು. ಅವರಗಳನ್ನು ಈ ಬಗ್ಗೆ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು.

ಬಂಧಿತರ ವಿವರ:
೧. ಮಂಜುನಾಥ್ ಯಾನೆ ಮಂಜು(೨೨ವ), ತಂದೆ: ಕಲ್ಲೇಶ ಗೌಡ, ವಾಸ: ಸಿ.ಮೂರ್ತಿ ನಿಲಯ ಕಾವೇರಿ ಸಾಮೀಲ್ ಹಿಂಬಾಗ, ಕೆಂಪನಹಳ್ಳಿ, ಚಿಕ್ಕಮಂಗಳೂರು.
೨. ಸುಶೀಲ್ ಕುಮಾರ್ ಯಾನೆ ಮೋನು(೨೪ ವ), ತಂದೆ: ಹರೀಶ್ ಸಾಲಿಯಾನ್, ವಾಸ: ಇ-ಎಲ್ ಶೆಡೈ ಮ್ಯಾನರ್, ತರುಣ ವ್ರಂದದ ಎದುರು, ಅಶೋಕನಗರ,ದಂಬೇಲ್, ಮಂಗಳೂರು.
೩. ಲತೀಶ್ ನಾಯಕ್ ಯಾನೆ ಲಸ್ಸೆ(೨೧ ವ), ತಂದೆ: ಮಾರುತಿ ವಿ ನಾಯಕ್, ವಾಸ: ಭಗೀರಥಿ ನಿವಾಸ, ಕುದ್ರೋಳಿ ಯುವಕ ಮಂಡಲದ ಬಳಿ, ಮಂಗಳೂರು.
೪.ಅಶ್ವಿನ್ ಅಂಚನ್(೨೫), ತಂದೆ: ಶ್ರೀನಿವಾಸ, ವಾಸ: ಡ್ರ್‍ಐವರ್ ನಾಗಪ್ಪ ಕಂಪೌಂಡ್, ಕುದೋಳಿ, ಮಂಗಳೂರು.
೫.ಸುರೇಶ್ ಅಲ್ಬನ್ ಡಿ’ಸೋಜ(೩೮), ತಂದೆ: ಡೋಲ್ಫಿ ಡಿ’ಸೋಜ, ವಾಸ: ಸಂದೀಪ್ ವಿಲ್ಲ, ಕೊಟ್ಟಾರ ಕ್ರಾಸ್, ಬಿಜೈ ಕಾಪಿಕಾಡು, ಮಂಗಳೂರು.
೬. ಲೋಹಿತ್ ಗಟ್ಟಿ(೨೧ವ), ತಂದೆ: ಕೂಸಪ್ಪ ಗಟ್ಟಿ, ವಾಸ: ಸಿ.ಬಿ.ಕಂಪೌಂಡ್, ಭವಂತಿಸ್ಟ್ರೀಟ್,ಮಂಗಳೂರು.
೭. ಪ್ರವೀಣ (೩೦ವ), ತಂದೆ: ನಾರಾಯಣ ಗಟ್ಟಿ, ವಾಸ:ಎನ್.ಎಸ್.ಕಂಪೌಂಡ್, ದೀಪಕ್ ನಿಲಯ, ವಿನಾಯಕ ನಗರ, ಉರ್ವಸ್ಟೋರ್, ಮಂಗಳೂರು.
೮. ಸುಶಾನ್‌ಚಂದ್ರ(೨೨ ವ), ತಂದೆ: ರಾಮಚಂದ್ರ, ವಾಸ: ಕ್ಯಾ/ಆಪ್ ಬಾಂಬೆ ಹೌಸ್, ಭಟ್‌ಲೇನ್, ಕಪಿತಾನಿಯ ಶಾಲೆಯ ಹಿಂಬಾಗ, ಕಪಿತಾನಿಯ ಮಂಗಳೂರು.

ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇವರುಗಳು ಭೂಗತ ಪಾತಕಿ ಛೋಟಾ ಶಕೀಲನ ನಿರ್ದೇಶನದಂತೆ ಮಂಗಳೂರಿನಲ್ಲಿರುವ ರವಿಪೂಜಾರಿಯ 4 ಜನ ಸಹಚರರು ಗಳನ್ನು 15 ದಿನದ ಒಳಗಾಗಿ ಹತ್ಯೆ ಮಾಡಿ ನಂತರ ಇಲ್ಲಿಂದ ಚಿಕ್ಕಮಂಗಳೂರಿಗೆ ಹೋಗಿ ತಲೆತಪ್ಪಿಸಿಕೊಳ್ಳವ ಉದ್ದೇಶಕ್ಕಾಗಿ ಚಿಕ್ಕಮಂಗಳೂರಿನ ಚಂದ್ರಕಟ್ಟೆಯಲ್ಲಿ ಒಂದು ಬಾಡಿಗೆ ಮನೆಯನ್ನು ಮಾಡಿದ್ದು, ಅಲ್ಲಿ ಮುಂಬಾಯಿಯಿಂದ ಬಂದ ಶಾರ್ಪ್ ಶೂಟರ್‌ಗಳು ಇರುತ್ತಾರೆ ಎಂದು  ತಿಳಿಸಿರುತ್ತಾರೆ. ಅಷ್ಟೇ ಅಲ್ಲದೇ ಈ ಉದ್ದೇಶಕ್ಕಾಗಿ ಛೋಟಾಶಕೀಲನು ಇವರುಗಳಿಗೆ ಈಗಾಗಲೇ 2 ಲಕ್ಷ ರೂಪಾಯಿ ಹಣವನ್ನು ವೆಸ್ಟರ್ನ್ ಯೂನಿಯನ್ ಮನಿ ಎಕ್ಸೆಂಜ್ ಮುಖಾಂತರ ಕಳುಹಿಸಿಕೊಟ್ಟಿದ್ದು, ಆರೋಪಿಗಳು ತಮ್ಮ ಐ.ಡಿ ಕಾರ್ಡ್‌ನ್ನು ನೀಡಿ ಹಣವನ್ನು ಪಡೆದುಕೊಂಡಿರು ವುದು ತಿಳಿದು ಬಂದಿರುತ್ತದೆ. ಇವರುಗಳ ಬಳಿಯಿಂದ 5 ತಲವಾರುಗಳು ಮತ್ತು ಕ್ರತ್ಯಕ್ಕೆ ಬಳ ಸಲು ಯೋಜಿಸಿದ್ದ  ಒಂದು ಕಾರು, ಒಂದು ಬೈಕ್ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿ ಕೊಳ್ಳಲಾಯಿತು.

ನಂತರ ಈ ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಚಿಕ್ಕಮಂಗಳೂರು ಚಂದ್ರಕಟ್ಟೆಯ ಮನೆಗೆ ದಾಳಿ ಮಾಡಿದಾಗ ಅಲ್ಲಿ ಮೂರು ಜನ ಆರೋಪಿಗಳು  ಸಿಕ್ಕಿದ್ದರೆ.

ಚಿಕ್ಕಮಂಗಳೂರು ಬಳಿ ಬಂಧಿತ ಅರೋಪಿಗಳ ಹೆಸರು:

೧.ಗಣೇಶ್ ಶಿವರಾಮ್ ಶೆಟ್ಟಿ (೩೫ ವ), ತಂದೆ: ಶಿವರಾಮ ಶೆಟ್ಟಿ, ವಾಸ: ನಂಬ್ರ ೧೭, ಚಾಲ್ ನಂಬ್ರ ೧, ಆದರ್ಶಲೇನ್, ಅಶೋಕವಾಡಿ, ಜವಹಾರನಗರ, ಕಾರ್‌ ಈಸ್ಟ್, ಮುಂಬಯಿ -೫೧.
೨. ರಾಕೇಶ್ ಮಿಶ್ರಾ ಯಾನೆ ರೋಹನ್(೨೮ವ), ತಂದೆ: ರಾಮಶಂಕರ್ ಮಿಶ್ರ, ವಾಸ: ಜ್ನಾನಬಹದ್ದೂರು ಮಿಶ್ರಾ ಚಾವ್ಲ್, ಆದರ್ಶಲೇನ್, ಜವಹಾರ್‌ನಗರ, ಖಾರ್‌ಈಸ್ಟ್, ಮುಂಬಯಿ, ಸ್ವಂತ ವಿಳಾಸ ಕಾಲಿಕಾಬಾರ್, ಸೇವಾಪುರಿ ಅಂಚೆ, ಕುಂಕರಿ, ವಾರಣಾಸಿ, ಉತ್ತರಪ್ರದೇಶ.
೩. ಮಂಜು ಯಾನೆ ಮಂಜುನಾಥ್ (೨೧ ವ), ತಂದೆ: ವೆಂಕಟೇಶ, ವಾಸ; ಅರಳೀಮರದ ಪಕ್ಕ, ಕೆಂಪನಹಳ್ಳಿ, ಚಿಕ್ಕ ಮಂಗಳೂರು.

ಇವರ ಬಳಿ ಒಂದು ರಿವಾಲ್ವರ್ ಮತ್ತು ಮತ್ತು 3 ಮದ್ದುಗುಂಡುಗಳು 63 ಸಾವಿರ ರೂಪಾಯಿ ನಗದು ಹಣ ಮತ್ತು ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾ ಯಿತು.

ಗಣೇಶ ಶಿವರಾಮ ಶೆಟ್ಟಿ ಎಂಬವನು ಮುಂಬಾಯಿಯಿಂದ ಈ ಕ್ರತ್ಯಕ್ಕೆ ಬಂದ ಶಾರ್ಪ್‌ಶೂಟರ್ ಆಗಿದ್ದು, ಈತನು ಮುಂಬಾಯಿಯಲ್ಲಿ ೧೯೯೪ ರಲ್ಲಿ ನಡೆದ ಮಹೇಂದ್ರ ಪ್ರತಾಪ್ ಸಿಂಗ್ ಎಂಬವರ ಹತ್ಯಾಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ ಯಾಗಿರುತ್ತಾನೆ. ಮುಂಬಯಿ ಉಚ್ಚ ನ್ಯಾಯಾಲಯದಿಂದಲೂ ಶಿಕ್ಷೆ ಖಾಯಂ ಆದ ನಂತರ ಈತ ತಲೆಮರೆಸಿಕೊಂಡಿದ್ದು, ಮುಂಬಯಿ ಪೊಲೀಸರು ಈತನ ಪತ್ತೆಗೆ ಶ್ರಮಿಸುತ್ತಿದ್ದರು. ಈತನ ಮೇಲೆ ಇನ್ನೂ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ಮುಂಬಯಿಯಲ್ಲಿ ದಾಖಲಾಗಿರುತ್ತದೆ.

ಈ ಪ್ರಕರಣದ ಪ್ರಮುಖ ಆರೋಪಿಯಾದ ಹರೀಶ ಶೆಟ್ಟಿ ಎಂಬವನು ತಲೆಮರೆಸಿಕೊಂಡು ನೇಪಾಳ ದೇಶಕ್ಕೆ ಹೋಗಿದ್ದು, ಈತನು ಮುಂಬಯಿಯಲ್ಲಿ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕುರುಪು ಸಹೋದರರ ೧೯೯೮ ರಲ್ಲಿ ನಡೆದ ಹತ್ಯಾಕಾಂಡ ಪ್ರಕರಣದಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ಆಗಿರುತ್ತದೆ. ಅವನನ್ನು ಬಂಧಿಸುವ ಪ್ರಯತ್ನವನ್ನು ಮುಂದುವರಿಸ ಲಾಗಿದೆ ಮತ್ತು ಈತನ ತಂಡದ ನೇಪಾಳದ ಮೈಕಲ್ ತಾಪ ಮತ್ತು ಜಿತೇಂದ್ರ ಎಂಬ ಇಬ್ಬರು ಆರೋಪಿಗಳನ್ನು ಮಂಗಳೂರಿನ ಡಿ.ಸಿ.ಐ.ಬಿ ಪೊಲೀಸರು ನೇಪಾಳದ ಗಡಿಪ್ರದೇಶವಾದ ಸೋನಾಲಿಯಲ್ಲಿ ವಶಕ್ಕೆ ತೆಗೆದುಕೊಂಡು ಸೋನಾಲಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ಅವರ ಬಳಿ ಶಸ್ತ್ರಾಸ್ತ್ರಗಳು ಸಿಕ್ಕಿದ್ದು, ಸೋನಾಲಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ.

ಬಂಧಿತ ಆರೋಪಿಗಳು  ಕೆಲವು ಪ್ರಮುಖ ಉದ್ಯಮಿಗಳು ಹಾಗೂ ರಾಜಕಾರಣಿಗಳ ಮೊಬೈಲ್ ನಂಬ್ರ ಹಾಗೂ ಮನೆ ಹಾಗೂ ಕಛೇರಿಗಳ ಪೋನ್ ನಂಬ್ರವನ್ನು ಸಂಹ್ರಗಿಸಿ ಈಗಾಗಲೇ ಛೋಟಾಶಕೀಲ ನಿಗೆ ಕಳುಹಿಸಿರುವುದಾಗಿ ಆರೋಪಿಗಳ ವಿಚಾರಣೆಯಿಂದ ತಿಳಿದು ಬಂದಿರು ತ್ತದೆ.

ಆರೋಪಿ ಲತೀಶ ನಾಯಕ್‌ನ ಮೇಲೆ ಸುಲಿಗೆ ಮತ್ತು ಕೋಮುಗಲಭೆ ಸಂಧರ್ಭದಲ್ಲಿ ಪ್ರಕರಣ ದಾಖಲಾಗಿದ್ದು, ವಾರಾಣಾಸಿಯಿಂದ ಬಂದಿರುವ ರಾಕೇಶ್ ವಿಶ್ರಾನ ಮೇಲೂ ಸಹ ಮುಂಬಯಿ ನಗರದಲ್ಲಿ ಪ್ರಕರಣಗಳು ದಾಖಲಾದ ಬಗ್ಗೆ ಮಾಹಿತಿಯನ್ನು ಲಭ್ಯವಾಗಿದೆ. ಆರೋಪಿ ಸುಶೀಲನ ಮೇಲೆ ಹಲ್ಲೆ ಪ್ರಕರಣಗಳು ಈಗಾಗಲೇ ದಾಖಲಾಗಿದೆ ಎಂದು ಅವರು ವಿವರಿಸಿದರು.

ಈ ಹಿಂದೆ ರಶೀದ್ ಮಲ್‌ಬಾರಿಯನ್ನು ಮಂಗಳೂರಿಗೆ ಕಳುಹಿಸಿ ಇಲ್ಲಿನ ಕೆಲವು ಜನರನ್ನು ಹತ್ಯೆ ಮಾಡಿ ಕೋಲಾಹಲ ಉಂಟು ಮಾಡುವ ಛೋಟಾಶಕೀಲನ ಷಡ್ಯಂತ್ರವನ್ನೂ ಸಹ ದ.ಕ ಜಿಲ್ಲಾ ಪೊಲೀಸರು ವಿಫಲಗೊಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಪಶ್ಚಿಮ ವಲಯ ಐ.ಜಿ.ಪಿ ಗೋಪಾಲ ಹೊಸೂರು, ಎಸ್.ಪಿ ಡಾ| ಸುಬ್ರಮಣ್ಯೇಶ್ವರ ರಾವ್ ಮತ್ತು ಎಡಿಷನಲ್ ಎಸ್.ಪಿ. ಆರ್.ರಮೇಶ್ ರವರ ಮಾರ್ಗದರ್ಶನದಲ್ಲಿ ಡಿ.ಸಿ.ಐ.ಬಿ ಇನ್ಸ್‌ಪೆಕ್ಟರ್ ವೆಂಕಟೇಶ ಪ್ರಸನ್ನ ಮತ್ತು ಎ.ಎಸ್.ಐ  ಕೆ.ನಾರಾಯಣ ಮಣಿಯಾಣಿ, ಸಿಬ್ಬಂದಿಯವರಾದ ಶಶಿಧರ ಶೆಟ್ಟಿ, ಚೇತನ ಬೊಟ್ಯಾಡಿ, ಗಣೇಶ್ ಮಾನ್ಯ, ಚಂದ್ರ ಆಡೂರು, ದಿನೇಶ್ ಬೇಕಲ್, ಸಂತೋಷ್ ಪಡೀಲ್, ಕುಮಾರ್ ಬಿ,  ಧರ್ಮೇಂದ್ರ, ಪ್ರಶಾಂತ್ ಶೆಟ್ಟಿ, ಗಣೇಶ್ ಕಲ್ಲಡ್ಕ, ರಿತೇಶ್ ಕೊಟ್ಟಾರಿ, ಸುಧಾಕರ  ಚಾಲಕರುಗಳಾದ ಶಾಂತ ಶೆಟ್ಟಿ ಮತ್ತು ದೇವಯ್ಯ ಹಾಗೂ ಡಿ.ಎ.ಆರ್ ಸಿಬ್ಬಂದುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕಾರ್ಯಾಚರಣೆ ತಂಡಕ್ಕೆ ನಗದು ಬಹುಮಾನ :

ಈ ಅರೋಪಿಗಳ ಬಂಧನ ಕಾರ್ಯಾಚರಣೆ ನಡೆಸಿದ ತಂಡಕ್ಕೆ ನಗದು ಬಹುಮಾನ 20 ಸಾವಿರವನ್ನು ಈ ಸಂದರ್ಭದಲ್ಲಿ ಐಜಿಪಿಯವರು ಪ್ರಕಟಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-17 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಬಿಸಿಯೂಟ: 30ಕ್ಕೂ ಅಧಿಕ ಮಕ್ಕಳು ಅಸ್ವಸ್ಥ
»‘ಬಡಗುತಿಟ್ಟು ಯಕ್ಷಗಾನದ ಮುಂದಿನ ನಡೆಗಳು’ ಕಾರ್ಯಾಗಾರ
»ಕಾರ್ಮಿಕ ಸೇವಾ ಸೌಲಭ್ಯ ಕೇಂದ್ರದ ಲಾಂಛನ ಬಿಡುಗಡೆ
»ಯಡಿಯೂರಪ್ಪತಂಡದ ಧರ್ಮಯಾತ್ರೆ
»ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ಮುಂದುವರಿದ ಪ್ರತಿಭಟನೆ; ‘ಸಿಕ್ಕಿಬಿದ್ದವರ’ ಶಾಸಕತ್ವ ರದ್ದುಗೊಳಿಸಲು ಕಾಂಗ್ರೆಸ್ ಆಗ್ರಹ
»ಭಟ್ಕಳ: ಒಂದು ಲಕ್ಷಕ್ಕೂ ಅಧಿಕ ವೌಲ್ಯದ ಅಕ್ರಮ ಸಾರಾಯಿ ನಾಶ
»ಭಟ್ಕಳ: ಗುಲ್ಮಿ ಕ್ರಾಸ್ ಬಳಿ ರಸ್ತೆ ಅಪಘಾತ; ಇಬ್ಬರು ಗಂಭೀರ
»ಸದನದಲ್ಲಿ ನೀಲಿಚಿತ್ರ ವೀಕ್ಷಣೆ : ಬಿಜೆಪಿಗೆ ಮುಜುಗರವಿಲ್ಲ: ಯಡಿಯೂರಪ್ಪ
»ವಿದ್ಯಾರ್ಥಿಗಳು ಸಾಂಸ್ಕೃತಿಕವಾಗಿ ಬೆಳೆದಾಗ ಮಾತ್ರ ಸಮಾಜದಲ್ಲಿ ಪ್ರಗತಿ ಪಡೆಯಲು ಸಾಧ್ಯ
»ಫೆ.12ರಿಂದ ಆಕಾಶವಾಣಿ ಹಬ್ಬ : ಅವಿಭಜಿತ ಜಿಲ್ಲೆಗಳಲ್ಲಿ ಸಾಂಸ್ಕೃತಿಕ ವೈಭವ
»ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: ನೈತಿಕತೆ ಇದ್ದಲ್ಲಿ ಪಕ್ಷದಿಂದ ತೆಗೆದುಹಾಕಿ: ಗಡ್ಕರಿಗೆ ಪೂಜಾರಿ ಸವಾಲು
»ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
»ಫೆ.11 : ಕಾಂಗ್ರೆಸ್ ಭವನದಲ್ಲಿ ಯುಪಿ‌ಎ ಸರ್ಕಾರದ ಯೋಜನೆಯ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ : ಸಿ.ಎಂ. ಧನಂಜಯ
»ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
»ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
»ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: ರಾಜ್ಯ ತಲೆ ತಗ್ಗಿಸುವ ಘಟನೆ: ಗೋಪಾಲ ಭಂಡಾರಿ
»‘ಭಾರತ್ ಬೀಡಿ’ಯ ಸಂಸ್ಥಾಪಕರ ದಿನಾಚರಣೆ
»ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್
»ಬ್ಲೂಫಿಲಂ ಪ್ರಕರಣ: ಕಾಂಗ್ರೆಸ್‌ನಿಂದ ವಿಧಾನಸಭೆ ಶುಚಿತ್ವ!
»ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
»ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ವಿಕಲಚೇತನರ ಕುಟುಂಬಗಳಿಗೆ ಚೈತನ್ಯ ತುಂಬಿದ ಖಾಝಿ ಭೇಟಿ
»ಫೆ.10: ಕೋಮುದೌರ್ಜನ್ಯ ಖಂಡಿಸಿ ಪ್ರತಿಭಟನೆ
»ಸಿಸಿಬಿ ಪೊಲೀಸರಿಂದ ಗುಲಾಂ ಮುಹಮ್ಮದ್ ವಿಚಾರಣೆ: ಬಿಡುಗಡೆ
»13ರಂದು ರಫ್ತುದಾರರ ಸಮಾವೇಶ: ವೀರಪ್ಪ ಮೊಯ್ಲಿ
»ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
»ಕಾಸರಗೋಡಿನಲ್ಲಿ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ; 200ಮಂದಿಯ ವಿರುದ್ಧ ಪ್ರಕರಣ ದಾಖಲು
»ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
»ಫೆ.10 ರಿಂದ ರಾಷ್ಟ್ರೀಯ ಮಟ್ಟದ ಮ್ಯಾನೇಜ್‌ಮೆಂಟ್ ಉತ್ಸವ
»ಫೆ.25ರಂದು ಭಾರತೀಯ ಮಜ್ದೂರ್ ಸಂಘದ 18ನೇ ತ್ರೈವಾರ್ಷಿಕ ಪ್ರದೇಶ ಅಧಿವೇಶನ
»ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
»ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
»ತಣ್ಣೀರುಪಂಥದ ಖತೀಜಮ್ಮ ಕೊಲೆ ಪ್ರಕರಣ: ಮೂವರ ಬಂಧನ
»ಏತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಆರಂಭೋತ್ಸವ
»ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ: ರಾಜ್ಯಾದ್ಯಂತ ಪ್ರತಿಭಟನೆ
»ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
»ಶ್ರೀ ಅಶೋಕ್ ಸಿಂಘಾಲ್ ಅವರಿಗೆ ಗೌರವಪೂರ್ವಕ ಸ್ವಾಗತ
»ಮಂಗಳೂರು: ಕ್ರೈಸ್ತ ಸಂಘಟನೆ ಮೇಲೆ ತೆರಿಗೆ ವಂಚನೆ ಆರೋಪ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ರೇವ್ ಪಾರ್ಟಿ: ಗ್ರಾಪಂಗೆ ಮಾಹಿತಿಯೇ ಇಲ್ಲ!...
»ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ: ಎರಡು ದಿನಗಳಿಂದ ಹೊಗೆಯಲ್ಲಿ ದಿನಗಳೆದ ಸ್ಥಳೀಯರು
»ಮಂಗಳೂರು: ಗೋದ್ರೆಜ್ ಅಲ್‌ಪೈನ್‌ಗೆ ಚಾಲನೆ
»ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಪ್ರತಿಭಟನೆ
»ಉಳ್ಳಾಲ ಪುರಸಭೆಗೆ ಸ್ಪೆಷಲ್ ರೆಕೊಗ್ನಿಷನ್ ಅವಾರ್ಡ್-2012
»ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಪತ್ತೆ
»ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ನಂಗ ನಾಚಿಗೆ ಮುಖ್ಯಮಂತ್ರಿ ಸಮರ್ಥನೆ : ಸಿ.ಎಮ್. ರಾಜಿನಾಮೆಗೆ ಜನಾರ್ಧನ್ ಪೂಜಾರಿ ಆಗ್ರಹ
»ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
»ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
»ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri