‘ಗಂಗೆಯಲ್ಲಿ ಮಿಂದು ಶುದ್ಧನಾಗುವೆ’: ನೋವು ಮರೆಯಲು ಹರಿದ್ವಾರ ಹೊಟೇಲಿನಲ್ಲಿ ನಿತ್ಯಾನಂದ ಧ್ಯಾನ! |
ಪ್ರಕಟಿಸಿದ ದಿನಾಂಕ : 2010-03-15
ಬಿಡದಿ ಬಳಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ, ಕುಂಭಮೇಳದಲ್ಲಿ ಪಾಲ್ಗೊಂಡಿದ್ದು, ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಶುದ್ಧೀಕರಿಸಿಕೊಳ್ಳಲು ತೀರ್ಮಾನಿಸಿದ್ದಾರೆ.
ಲಖನೌ: ಸಿನಿಮಾ ನಟಿಯೊಂದಿಗೆ ಅಶ್ಲೀಲ ಭಂಗಿಯಲ್ಲಿ ಕಾಣಿಸಿಕೊಂಡು ಭಕ್ತವೃಂದದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿರುವ ಬಿಡದಿ ಬಳಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ, ಕುಂಭಮೇಳದಲ್ಲಿ ಪಾಲ್ಗೊಂಡಿದ್ದು, ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಶುದ್ಧೀಕರಿಸಿಕೊಳ್ಳಲು ತೀರ್ಮಾನಿಸಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ದಿಢೀರ್ ಕಾಣಿಸಿಕೊಂಡ ನಿತ್ಯಾನಂದ, ತಮ್ಮ ಎಲ್ಲಾ ಕೊಳೆಗಳನ್ನು ಪವಿತ್ರ ಗಂಗಾನದಿಯಲ್ಲಿ ತೇಲಿಬಿಡಲು ಬಯಸಿದ್ದಾಗಿ ಹೇಳಿದರು.
ಹರಿದ್ವಾರ ಹೊರವಲಯದ ರಾಣಿಪುರದ ಗ್ರ್ಯಾಂಡ್ ಲೀ ಹೋಟೆಲ್ನ 104ನೇ ಕೊಠಡಿಯಲ್ಲಿ ವಾಸ್ತವ್ಯ ಹೂಡಿರುವ ಅವರು, ಮಾಧ್ಯಮದ ಜತೆ ಕೆಲವೇ ಸಮಯ ಮಾತನಾಡಿ, ತಮ್ಮ ವಿರುದ್ಧ ಮಾಡಲಾಗಿರುವ ಎಲ್ಲಾ ಆರೋಪಗಳೂ ಸುಳ್ಳು ಎಂದರು. ಭಾನುವಾರ ರಾತ್ರಿ ಹೋಟೆಲ್ಗೆ ಬಂದ ನಿತ್ಯಾನಂದ ಸ್ವಾಮಿಯವರು ಅರ್ಧಗಂಟೆಯಲ್ಲಿಯೇ ಅಜ್ಞಾತ ಸ್ಥಳಕ್ಕೆ ಹೊರಟು ಹೋದರು. ವಿಷಯ ತಿಳಿದ ಸ್ಥಳೀಯ ಮಾಧ್ಯಮದವರು ಅವರನ್ನು ಪತ್ತೆ ಮಾಡಿದರು. ಆಗ ಸ್ವಾಮೀಜಿ ಹಿಂಬಾಲಕರು ಮತ್ತು ಮಾಧ್ಯಮದವರ ನಡುವೆ ಮಾತಿನ ಚಕಮಕಿ ನಡೆಯಿತು. ಆಗಲೂ ಅಲ್ಲಿಂದ ತಪ್ಪಿಸಿಕೊಳ್ಳಲು ನಿತ್ಯಾನಂದ ಯತ್ನಿಸಿದರು.
‘ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಸಂಪೂರ್ಣ ತನಿಖೆಯ ನಂತರ ಸತ್ಯ ಹೊರಬರುತ್ತದೆ ‘ಎಂದು ಮುಗ್ಧರಂತೆ ನುಡಿದರು.
‘ನನ್ನ ವಿರುದ್ಧ ಸಂಚು ರೂಪಿಸಿ ಆರೋಪ ಹೊರಿಸಿರುವವರು ಯಾರು ಎನ್ನುವುದು ನನಗೆ ಗೊತ್ತಿಲ್ಲ. ತನಿಖೆ ಪೂರ್ಣಗೊಳ್ಳದಿದ್ದರೂ ನಾನೊಬ್ಬ ತಪ್ಪಿತಸ್ಥ ಎಂದು ಬಿಂಬಿಸಲಾಗುತ್ತಿದೆ’ ಎಂದರು.
ತಮಿಳುನಾಡಿನಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದರೂ ಸಹ ‘ಎಲ್ಲಿಯೂ ನನ್ನ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಕೇವಲ ಆರೋಪಗಳು ಮಾತ್ರ ಕೇಳಿ ಬರುತ್ತಿವೆ.’ ಎಂದು ನಿತ್ಯಾನಂದ ಹೇಳಿದರು. ‘ಹಿಂದಿನದರ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ಹೊಸ ಮನುಷ್ಯನಾಗಲು ಬಯಸಿದ್ದೇನೆ. ನನ್ನ ಹಿಂದಿನದೆಲ್ಲವನ್ನೂ ಮರೆತು ಗಂಗಾನದಿಯಲ್ಲಿ ಮಿಂದು ಶುದ್ಧಿಯಾಗಲು ತೀರ್ಮಾನಿಸಿದ್ದೇನೆ’ ಎಂದರು.
ನೋವು ಮರೆಯಲು ಹರಿದ್ವಾರ ಹೊಟೇಲಿನಲ್ಲಿ ನಿತ್ಯಾನಂದ ಧ್ಯಾನ!
ಹರಿದ್ವಾರ, ಸೋಮವಾರ, 15 ಮಾರ್ಚ್ 2010
ತಮಿಳು ನಟಿ ರಂಜಿತಾ ಜತೆಗಿನ ವಿವಾದಾಸ್ಪದ ವೀಡಿಯೋ ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ಪರಮಹಂಸ ನಿತ್ಯಾನಂದ ಸ್ವಾಮಿ ಹರಿದ್ವಾರದ ಹೊಟೇಲೊಂದರಲ್ಲಿ ನೋವು ಶಮನ ಮಾಡಲು ಧ್ಯಾನ ಮಾಡುತ್ತಿದ್ದಾರೆ.
ಇದನ್ನು ಸ್ವತಃ ಅವರೇ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಹರಿದ್ವಾರದಿಂದ ಖಾಸಗಿ ವಾಹಿನಿಯೊಂದು ಸಂದರ್ಶನವನ್ನು ಪ್ರಕಟಿಸಿದ ಬೆನ್ನಿಗೆ ರಾಷ್ಟ್ರೀಯ ಚಾನೆಲ್ಗಳು ಸ್ವಾಮೀಜಿಗೆ ಮುಗಿ ಬಿದ್ದ ಬಳಿಕ, ನಾನೇನು ತಪ್ಪು ಮಾಡಿಲ್ಲ ಎಂದೂ ನಿತ್ಯಾನಂದ ಪುನರುಚ್ಛರಿಸಿದ್ದಾರೆ.
ನಿತ್ಯಾನಂದ ಸ್ವಾಮಿ ಹರಿದ್ವಾರದಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ ಮಾಧ್ಯಮ ಪ್ರತಿನಿಧಿಗಳು ಅವರ ಅಡಗುದಾಣಕ್ಕೆ ಮುತ್ತಿಗೆ ಒಮ್ಮೆಲೆ ಮುತ್ತಿಗೆ ಹಾಕಿದ್ದವು. ಆರಂಭದಲ್ಲಿ ಸ್ವಾಮಿ ಸಹಚರರು ಭೇಟಿಗೆ ಅವಕಾಶ ನೀಡಲೇ ಇಲ್ಲ. ಕೊನೆಗೂ ಒತ್ತಡಕ್ಕೆ ಮಣಿದು ಹೊರಗೆ ಬಂದ ಕಳಂಕಿತ ಸ್ವಾಮಿ, ಹತ್ತಾರು ಮಾಧ್ಯಮಗಳೊಂದಿಗೆ ಮಾತಿಗಿಳಿದು ತನ್ನನ್ನು ಸಮರ್ಥಿಸಿಕೊಂಡಿದ್ದಾರೆ.
ನನ್ನ ಬಗ್ಗೆ ಮಾಧ್ಯಮಗಳು ಕೆಟ್ಟದಾಗಿ ವರದಿ ಮಾಡಿರುವುದರಿಂದ ಬಹಳಷ್ಟು ನೋವನ್ನು ಅನುಭವಿಸಿದ್ದೇನೆ. ಹಲವು ಜನರಿಂದ ನನಗಾಗಿರುವ ನೋವನ್ನು ಕಡಿಮೆ ಮಾಡಲು ನಾನು ಧ್ಯಾನದ ಮೊರೆ ಹೋಗುತ್ತಿದ್ದೇನೆ ಎಂದು ನಿತ್ಯಾನಂದ ಸ್ವಾಮಿ ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದಯವಿಟ್ಟು ಯಾರೂ ಆತುರದ ನಿರ್ಧಾರಕ್ಕೆ ಬರಬೇಡಿ. ಮಾಧ್ಯಮಗಳು ಪ್ರಸಾರ ಮಾಡಿರುವ ವೀಡಿಯೋ ಸಂಪೂರ್ಣವಾಗಿ ನಿಜವಾದುದಲ್ಲ. ಇದರಲ್ಲಿ ಪಿತೂರಿಯಿದೆ. ಸಾಕಷ್ಟು ಬದಲಾವಣೆ ಮಾಡಲಾಗಿದೆ. ತಾಳ್ಮೆಯಿಂದ ಕಾಯಿರಿ, ಸತ್ಯ ಹೊರಗೆ ಬರುತ್ತದೆ ಎಂದು ಸ್ವಾಮಿ ತಿಳಿಸಿದ್ದಾರೆ.
ಅಲ್ಲದೆ ಭಕ್ತರು ಧ್ಯಾನದ ಮಾರ್ಗವನ್ನು ಆರಿಸುವ ಮೂಲಕ ಮನಸ್ಸನ್ನು ಶುದ್ಧಪಡಿಸಿಕೊಳ್ಳಬೇಕು. ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು. ಸಣ್ಣಪುಟ್ಟ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಕರೆ ನೀಡಿದ್ದಾರೆ.
ನಿತ್ಯಾನಂದ ಸ್ವಾಮಿ ಹರಿದ್ವಾರದಲ್ಲಿನ ಹೊಟೇಲೊಂದರಲ್ಲಿ ಉಳಿದುಕೊಂಡಿದ್ದಾರೆ. ಆದರೆ ಹೊಟೇಲ್ ಕೊಠಡಿಯನ್ನು ಬೇರೊಬ್ಬರ ಹೆಸರಿನಲ್ಲಿ ಬುಕ್ ಮಾಡಲಾಗಿದೆ. ಯಾರ ಹೆಸರಿನಲ್ಲಿದೆ ಮುಂತಾದ ವಿವರಗಳನ್ನು ನೀಡಲು ಹೊಟೇಲ್ ಆಡಳಿತ ನಿರಾಕರಿಸಿದೆ.
ಪೊಲೀಸರಲ್ಲಿ ಪ್ರಬಲ ಸಾಕ್ಷ್ಯಗಳಿಲ್ಲ... ನಾವು ಮೈಸೂರು, ಬೆಂಗಳೂರು, ಚೆನ್ನೈಗಳಲ್ಲಿ ಹುಡುಕುತ್ತಿದ್ದೇವೆ ಎಂದು ಹೇಳುತ್ತಾ ಬಂದಿದ್ದ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಹರಿದ್ವಾರಕ್ಕೆ ಹೋಗಿಯೇ ಇಲ್ಲ ಮತ್ತು ಸ್ವಾಮಿಯನ್ನು ಬಂಧಿಸಲು ಅಗತ್ಯವಿರುವ ಪ್ರಕರಣಗಳನ್ನು ಸರಕಾರಗಳು ದಾಖಲಿಸಿಯೇ ಇಲ್ಲ ಎಂಬ ವಿಚಾರವೂ ಬಹಿರಂಗವಾಗಿದೆ.
ವೀಡಿಯೋ ಟೇಪ್ ಪ್ರಕರಣದಲ್ಲಿ ಕಾಣಿಸಿಕೊಂಡಿರುವ ಮಹಿಳೆ ದೂರು ಕೊಡದ ಹೊರತು ಸ್ವಾಮಿ ವಿರುದ್ಧ ಕ್ರಮ ಅಸಾಧ್ಯ. ಕೇವಲ ಧಾರ್ಮಿಕ ಭಾವನೆಗಳಿಗೆ ಧಕ್ಕೆಯೆಸಗಿದ ಪ್ರಕರಣದಲ್ಲಿ ಬಂಧಿಸುವುದು ಸಾಧ್ಯವಿಲ್ಲ. ಬಿಡದಿಯಲ್ಲಿನ ಆಶ್ರಮವನ್ನು ವಶಪಡಿಸಿಕೊಳ್ಳುವುದು ಕೂಡ ಸಾಧ್ಯವಾಗುವ ಮಾತಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯಾ | ಪ್ರಜಾವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-15 00:00:00
|
|
| Mohammed Shafi, Kandlur | 2010-03-18 | | ಒಳ್ಳೇ ಇನ್ಟರ ನ್ಯಶ್ನಲ್ ಲಕ್ಸ್ ಸೊಪ್ ನಿನ್ದ ಸರಿಯಾಗಿ ತಿಕ್ಕಿ ತಿಕ್ಕಿ ತೊಳೆದರು ನಿನು ಪವಿಥ್ರ ಅಗೂದಿಲ್ಲ. ಅದು ಪವಿತ್ರ ಸ್ನನ ಮಡಲು ಹುದುಕಿದ ಸ್ಥಳ ಅನ್ನದರೆ ಪವಿಥ್ರ ವಾದ ಗನ್ಗಾ ನದಿ ಆ ನದಿ ಎಲ್ಲಿ ನಿನ್ ನನ್ಥ ಹ ನೀಚ ಸ್ವಾಮಿಗಲು ಸ್ನಾನ ಮಾಡೀ ಮಾಡಿ ಅದರ ಪಾವಿಥ್ರಥೆ ಈಗಾ ಎಲ್ಲಿ ಉಲಿದೀದೆ
|
| AKSHAY, udupi | 2010-03-17 | | AYYO SWAMI YAKAPPA GANGA NADEYANNA MALNA MADTHIYA NENU SNANA MADIREA JANA NENNA KAMADATA MARETHUBETHARA. EVAGLU NENA YARU HELIDURU SWAMI AGU ANTHA MADUVE MADIKO MAHANUBAHVA. AMELEA YENADURU MADIKO YARU YENU HELALA. NANENDA INDIA da population kadime agthide andre adu nenna thappu . |
| SURESH, MANGALORE | 2010-03-16 | | Ganga River already unclean.So how he will become clean. If Govt allows this!... all court cases can be solved like this easily |
| ಆಫಾಖ್ ನಾಗುರು , ದುಬೈ | 2010-03-16 | | ಈಗಾಗಲೆ ಈ ನಂಗಾ ಸ್ವಾಮಿಯ ಹಲವು ಕಾಮದ ಹಾಗು ಕೆನಡ ಮೂಲದ ವ್ಯಕ್ತಿಯ ಕೊಲೆಯ ಹಗರಣಗಳು ಬಹಿರಂಗಗೊಡರು ಮಾದ್ಯಮದವರು ಕೂಡ ಯಾವ ರೀತಿಯಲ್ಲಿ ಮರ್ಯಾದೆಯನ್ನು ಇಂಥಹ ನೀಚ ನಿತ್ಯ ನಂಗನಿಗೆ ನೀಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಸ್ವಾಮಿಜಿಗಳನ್ನು ಹಿಂದುಗಳಲ್ಲಿ ಪವಿತ್ರವಾದ ಪೀಟವನ್ನೇರಬೇಕಾದಲ್ಲಿ ತ್ಯಜಿಸಬೇಕಾಗಿದ್ದ \"ಕಾಮ\" ಇಂದಿನ ಪೀಟಕ್ಕೇರುವ ಸ್ವಾಮೀದೀಕ್ಷೆ ಪಡೆಯುವವರು ಪಾಲಿಸುವುದಿಲ್ಲವೆನ್ನುವುದಕ್ಕೆ ಈ ನೀಚನೆ ಸಾಕ್ಷಿ. ಈಗಾಗಲೆ ಕಾಮದಾಟಕ್ಕೆ ಹೆಸರುವಾಸಿಯಾದ ನಿತ್ಯಾನಂದನಿಂದ ಹಿಡಿದು ದೂರದ ದೆಹಲಿಯ ನೀಚ ಸ್ವಾಮಿಜಿಯವರ ಕರ್ಮಕಾಂಡವು ಜನತೆಯ ಮುಂದಿದೆ. ಮೊದಲು ನಿತ್ಯಾನಂದನಾಗಿದ್ದ ಈ ಕಾಮುಕ ಸ್ವಾಮಿ ಪೀಟವನ್ನೇರೀದ ನಂತರ ’ನಿತ್ಯಾ ನಂಗ ’ನಾಗಿದ್ದು ಸ್ವಾಮಿಜೀಯ ಹೆಸರಿಗೆ ಕಪ್ಪು ಚುಕ್ಕೆಯಾಗಿದೆ. ಇಂತಹ ಲೋಫರ್ ಸ್ವಾಮಿಜಿಗಳು ರಾತ್ರಿ ಹಗಲೆನ್ನದೆ ಬಾಡಿಗೆಯ ಹುಡುಗಿಯರನ್ನು ಆಶ್ರಮಕ್ಕೆ ಕರೆಸಿ ಮಜಾ ಉಡಾಯಿಸುವುದನ್ನು ಗಮನಿಸಿದರೆ ಇವರಿಗೆ ಸನ್ಯಾಸತ್ವದ ಪರಿಜ್ನಾನವೇ ಇಲ್ಲವೆನ್ನುವುದು ಅರಿವಾಗುತ್ತದೆ. ಮೊದಲಿಗೆ ತನ್ನ ಪ್ರಸಿದ್ದಿ ಸಹಿಸದೆ ಶತ್ರುಗಳು ತನ್ನ ವಿರುದ್ದ ವ್ಯವಸ್ತಿತ ಶಡ್ಯಂತ್ರ ರೂಪಿಸಿದ್ದಾರೇಂದು ಬೊಗಳಿದ ಈ ನೀಚ ಕೊನೆಯಲ್ಲಿ ಅನ್ಯರ ಜೊತೆ ಮಜಾ ಉಡಾಯಿಸಿದ್ದು ತಾನೆ ಎಂದು ಒಪ್ಪಿ ಈಗ ಒಮ್ಮೇಲೆ ಪಾಪ ವಿಮೋಚನೆಗೆ ಗಂಗೆಯಲ್ಲಿ ಸ್ನಾನ ಮಾಡಲು ಎರ್ಪಾಟು ನಡೆಸುತ್ತಿದ್ದಾನೆ. ಈ ನಿತ್ಯಾ ನಂಗನಿಂದ ಗಂಗೆಯ ನೀರು ಕೂಡ ಮಲೀನವಾಗಬಹುದು. ಸ್ವಾಮಿಜಿಯ ಹೆಸರಿಗೆ ಕಳಂಕ ತಂದ ಈ ನೀಚ ಗಂಗೆಯಲ್ಲಿ ಶುದ್ದಿಕರಣಗೊಳ್ಳುವುದಾದರೆ ಕೋರ್ಟ ಹಾಗು ಕಚೇರಿಯ ಉಪಯೋಗವಾದರು ಏನು??? ಇನ್ನು ಮುಂದೆ ಅತ್ಯಾಚಾರಿಗಳೆಲ್ಲರು ಗಂಗೆಯಲ್ಲಿ ಸ್ನಾನ ಮಾಡಿ ಶುದ್ದೀಕರಣಗೊಳ್ಳಬಹುದು. ಈ ರೀತಿಯಲ್ಲಿ ವಿಡಿಯೋದಲ್ಲಿ ಅಶ್ಲೀಲವಾಗಿ ವರ್ತಿಸಿದರು ಕೂಡ ಈ ನಿತ್ಯಾ ನಂಗನಿಗೆ ಇನ್ನು ಬಂದಿಸದೆ ಇರುವುದು ನಮ್ಮ ಕಾನುನು ಪಾಲಕರ ದ್ವಂದ್ವ ನಿಲುವಿಗೆ ಉದಾಹರಣೆಯಾಗಿದೆ. ಇವನು ಗಂಗೆಯಲ್ಲಿ ಸ್ನಾನ ಮಾಡಿ ಹಾಗು ಧ್ಯಾನದ ಮೂಲಕ ಶುದ್ದೀಕರಣಗೊಳ್ಳುದಾದರೆ ಇನ್ನು ಇಂತಹ ಅನೇಕ ಅತ್ಯಾಚಾರಿಗಳಿಗೆ ಶುದ್ದೀಕರಣಗೊಳ್ಳಲಿಕ್ಕಾಗಿ ಹೊಸ ಮಾರ್ಗವನ್ನು ತೋರಿಸಿದ ಹಾಗೆ ಎನ್ನುವುದು ಹಾಸ್ಯಾಸ್ಪದವಾಗಬಹುದು. |
| nazeem golden dubai, mangalore puttur | 2010-03-16 | | HELLO HOW MANY TIME YOU GOING TO BATH ,AGAIN BAD WORK AGAIN GOING TO BATH IN GANGA ,YOU NEVER GOING TO B GOOD BECOUSE NOW YOU HAVE TAKE TASTE TO MUCH GIRLS.NOW YOUR TIME YOU ARE LUCKY PERSON??? |
| hassanmukka, mangalore/ksa | 2010-03-16 | | ಪೊಲೀಸರಿಗೆ ಏನು ಕ್ರಮ ತೆಗೆದುಕೊಳ್ಲಿಕ್ಕೆ ಆಗದಿದ್ದರೆ ಪರವಾಗಿಲ್ಲ.ಜನರಿಗೆ ಬಿಟ್ಟು ಕೊಡ್ಲಿ.ಅವರೆ ವಿಚಾರಿಸಿಕೊಳ್ಳುತಾರೆ.
ಇನ್ನು ಸ್ವಾಮಿ ಎಲ್ಲಾ ಮಾಡಿ ಶುದ್ದಿ ಮಾಡ್ತೆನೆ ಅನ್ತ ಗನ್ಗೆ ಯಲ್ಲಿ ಸ್ನಾನ ಮಾಡಿದ್ರೆ ಮತ್ತೆ ಕೊರ್ಟು ಕಚೇರಿ ಯಾಕೆ.ಎಲ್ಲರು ಹಾಗೆ ಮಾಡ್ಬಹುದಲ್ಲ! |
|