ಕುವೈಟ್: ಕರ್ನಾಟಕ ಸಲಫಿ ಅಸೋಸಿಯೇಶನ್ ಮಹಾಸಭೆ, ನೂತನ ಕಚೇರಿ ಕಾರ್ಯಾರಂಭ |
ಪ್ರಕಟಿಸಿದ ದಿನಾಂಕ : 2010-03-15
ಕುವೈಟ್, ಮಾ. ೮: ಇಲ್ಲಿನ ಕರ್ನಾಟಕ ಸಲಫಿ ಅಸೋಸಿಯೇಶನ್ನ ಮಹಾಸಭೆ ಮಂಗಫ್ ಕೆಆರ್ಎಚ್ ಕ್ಯಾಂಪಿನಲ್ಲಿ ಅಧ್ಯಕ್ಷ ಅಬ್ದುಲ್ ಖಾದರ್ ದೇರಳಕಟ್ಟೆ ಅವರ ನೇತೃತ್ವದಲ್ಲಿ ನಡೆಯಿತು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬಶೀರ್, ಆಝಮ್ ಬೋಳಾರ್ ಮತ್ತು ಹಾರಿಸ್ ನಂದಾವರ ಅವರು ವಿವಿಧ ವರದಿಗಳನ್ನು ಮಂಡಿಸಿದರು.
ದಕ್ಷಿಣ ಕರ್ನಾಟಕದಲ್ಲಿ ಏಕದೇವ ವಿಶ್ವಾಸದ ನೈಜ ಸಂದೇಶವನ್ನು ಪ್ರಚರಿಸುವ ಸಂಘಟನೆ ಯಾದ ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್, ಮಂಗಳೂರು ಇದರ ಸಹಯೋಗದೊಂದಿಗೆ ಸಂಘಟನೆಯು ಕಳೆದೆರಡು ವರ್ಷಗಳಲ್ಲಿ ನಡೆಸಿದ ಚಟುವಟಿಕೆಗಳು ಮತ್ತು ಕುವೈತ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ದಅವಾ ಸಂಘಟನೆಯಾದ ಇಂಟರ್ನ್ಯಾಷನಲ್ ಇಸ್ಲಾಮಿಕ್ ಸೆಂಟರ್ ಶಾಖೆಯನ್ನು ಹಂಪನಕಟ್ಟೆಯಲ್ಲಿ ಪ್ರಾರಂಭಿಸಲು ಸಾಧ್ಯವಾದ ಬಗ್ಗೆ ಸದಸ್ಯರು ತೃಪ್ತಿ ವ್ಯಕ್ತಪಡಿಸಿ ದರು.
ಇದೇ ಸಂದರ್ಭ ಕುವೈಟ್ನ ಇಂಟರ್ನ್ಯಾಶನಲ್ ಇಸ್ಲಾಮಿಕ್ ಸೆಂಟರ್ನ ಸಹಯೋಗದೊಂದಿಗೆ ಫಹಾಹಿಲ್ನಲ್ಲಿ ಸ್ಥಾಪಿಸಲ್ಪಟ್ಟ ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್ ನೂತನ ಕಚೇರಿ ಯನ್ನು ಇಂಟರ್ನ್ಯಾಶನಲ್ ಇಸ್ಲಾಮಿಕ್ ಸೆಂಟರ್ ನಿರ್ದೇಶಕ ಶೈಖ್ ಫೈಸಲ್ ಅಲ್ಹಾಶ್ಮಿ ಉದ್ಘಾಟಿಸಿದರು.
೨೦೧೦-೧೨ನೇ ಸಾಲಿನ ಸಮಿತಿ ಪದಾಧಿಕಾರಿಗಳ ವಿವರ ಇಂತಿದೆ: ಅಧ್ಯಕ್ಷ: ಅಬ್ದುಲ್ ಖಾದರ್ ದೇರಳ ಕಟ್ಟೆ. ಉಪಾಧ್ಯಕ್ಷ: ಮುಹಮ್ಮದ್ ಹನೀಫ್ ಉಳ್ಳಾಲ, ಪ್ರ. ಕಾರ್ಯದರ್ಶಿ: ಅಬ್ದುಲ್ ಬಶೀರ್ ಅರ್ಕುಳ, ಜತೆ ಕಾರ್ಯದರ್ಶಿ: ರಿಝ್ವಾನ್ ಅಬ್ದುಲ್ ರಝಾಕ್ ಉಳ್ಳಾಲ, ಆರ್ಥಿಕ ಕಾರ್ಯದರ್ಶಿ: ಮುಹಮ್ಮದ್ ನೂರುದ್ದೀನ್ ಉಜಿರೆ, ಖಜಾಂಚಿ: ಮುಹಮ್ಮದ್ ಶರೀಫ್ ಕುತ್ತಾರ್, ದಅವಾ ವಿಭಾಗ ಪ್ರಧಾನ ಕಾರ್ಯ ದರ್ಶಿ: ಆಝಮ್ ಬೇಕಲ, ಸಹಾಯಕ ಕಾರ್ಯದರ್ಶಿಗಳಾಗಿ: ಹಾರಿಸ್ ನಂದಾವರ (ಪ್ರಕಾಶನ), ಇಕ್ಬಾಲ್ ಬಜಾಲ್ (ಶ್ರವಣ, ದೃಶ್ಯ ಮಾಧ್ಯಮ), ಬದ್ರುದ್ದೀನ್ ಉಚ್ಚಿಲ (ಸಾರ್ವಜನಿಕ ಮಾಹಿತಿ). ಕಾರ್ಯಕಾರಿ ಸಮಿತಿ: ಅನ್ವರ್ ಹುಸೈನ್ ಬಂದರ್, ಮಕ್ಸೂದ್ ಶಿವಮೊಗ್ಗ, ಮುಹಮ್ಮದ್ ಅಬ್ಬಾಸ್ ಕಾಪು, ಸಯ್ಯದ್ ಇಕ್ಬಾಲ್ ಕೃಷ್ಣಾಪುರ, ಫಿರೋಝ್ ಅಬ್ದುಲ್ ಸಮದ್ ಜಪ್ಪು, ಮುಹಮ್ಮದ್ ಇಕ್ಬಾಲ್ ಬಂದರ್.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-15 00:00:00
|
|
| Mansoor Jeddah, Mangalore | 2010-03-21 | | Masha allah.
ನಿಜವಾಗಿಯೂ ಅಭಿನಂದಾರ್ಹ ಕಾರ್ಯ.
ನಿಮ್ಮ ಉತ್ತಮ ಕಾರ್ಯಕ್ಕೆ ನನ್ನ ಅಭಿನಂದನೆ.
|
|