ಪುತ್ತೂರು: ಕಂಡಲ್ಲಿ ಕಸ ಎಸೆದವರಿಗೆ ಕಾದಿದೆ ಜೈಲು ಶಿಕ್ಷೆ |
ಪ್ರಕಟಿಸಿದ ದಿನಾಂಕ : 2010-03-15
`ಕಾನೂನು ಒಂದು ಕತ್ತೆ' ಎನ್ನುವ ಮಾತುಗಳನ್ನು ನೀವೂ ಕೇಳಿರಲೇಬೇಕು. ಏಕೆಂದರೆ ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವಿಸುವ ಸಲುವಾಗಿ ಸರಕಾರವೇ ರೂಪಿಸಿರುವ ಅಸಂಖ್ಯ ಕಾನೂ ನುಗಳು ಇರುವುದೇ ಮುರಿಯುವ ಸಲುವಾಗಿ, ಎನ್ನುವುದನ್ನು ಸಮರ್ಥಿಸುವಂತಹ ಅನೇಕ ಘಟನೆಗಳನ್ನು ನೀವೂ ಕಂಡಿರಬೇಕು. ಭಾರತದ ಉದ್ದಗಲಕ್ಕೂ ಪ್ರತಿನಿತ್ಯ ಕಾಣಸಿಗುವ ಕಾನೂ ನು ಉಲ್ಲಂಘನೆಯ ಪ್ರಕರಣಗಳನ್ನು ಕಂಡೂ ಕಾಣದಂತೆ ವರ್ತಿಸುವ ಪ್ರಜೆಗಳು, ಸಂದರ್ಭೋಚಿ ತವಾಗಿ ತಾವೂ ಸಣ್ಣಪುಟ್ಟ ಕಾನೂನುಗಳನ್ನು ಉಲ್ಲಂಘಿಸಲು ಹಿಂಜರಿಯುವುದಿಲ್ಲ !
ಪ್ರಸ್ತುತ ದೇಶದ ಪ್ರತಿಯೊಂದು ರಾಜ್ಯಗಳಲ್ಲಿನ ಸ್ಥಳೀಯಾಡಳಿತ ಸಂಸ್ಥೆಗಳ ಪಾಲಿಗೆ ಬಗೆಹರಿಸ ಲಾಗದ ಸಮಸ್ಯೆ ಎನಿಸುತ್ತಿರುವ ತ್ಯಾಜ್ಯ ಸಂಗ್ರಹ - ವಿಲೇವಾರಿಗಳ ಸಂದರ್ಭದಲ್ಲಿ ಉದ್ಭವಿಸು ತ್ತಿರುವ ತೊಂದರೆಗಳನ್ನು ಪರಿಹರಿಸುವ ಸಲುವಾಗಿ ಸರಕಾರವು ಕೆಲವೊಂದು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಿದೆ.
ದೇಶದ ಎಲ್ಲೆಡೆ ಕಾನೂನಿಗೆ ವ್ಯತಿರಿಕ್ತವಾಗಿ ಸಾಮಾನ್ಯ ಮತ್ತು ಅಪಾಯಕಾರಿ ತ್ಯಾಜ್ಯಗಳನ್ನು ಕಂಡಲ್ಲಿ ಎಸೆಯುವ ಹವ್ಯಾಸ ಹೆಚ್ಚುತ್ತಿದೆ. ಖಾಲಿ ಜಾಗಗಳು, ಸಣ್ಣ - ದೊಡ್ಡ ಚರಂಡಿಗಳು, ರಸ್ತೆಯ ಬದಿಗಳು ಮತ್ತು ಕೆರೆಕುಂಟೆಗಳಲ್ಲಿ ಜನಸಾಮಾನ್ಯರು ಎಸೆಯುತ್ತಿರುವ ವೈವಿಧ್ಯಮಯ ತ್ಯಾಜ್ಯ ಗಳು,ಆರೋಗ್ಯದ ಮತ್ತು ಇತರ ಅನೇಕ ವಿಧದ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ.
ಅನೇಕ ನಗರ - ಪಟ್ಟಣಗಳಲ್ಲಿ ತ್ಯಾಜ್ಯಗಳು ಉತ್ಪನ್ನವಾಗುವ ಸ್ಥಳದಿಂದಲೇ ಇವುಗಳನ್ನು ಪ್ರತ್ಯೇಕಿಸಿ, ಸಂಗ್ರಹಿಸುವ ವ್ಯವಸ್ಥೆ ಆರಂಭಗೊಂಡಿದ್ದರೂ ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಿಸುವ ತ್ಯಾಜ್ಯಗಳ ಪ್ರಮಾಣವು ಅಗಾಧವಾಗಿದೆ. ಇವುಗಳಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಚೀಲಗಳಿಂದ ಆರಂಭಿಸಿ, ನಿರುಪಯುಕ್ತ ವಸ್ತುಗಳೊಂದಿಗೆ ಕೋಳಿ - ಮಾಂಸಗಳನ್ನು ಮಾರಾಟ ಮಾಡುವ ಫಾರ್ಮ್ಗಳಲ್ಲಿ ಉತ್ಪನ್ನವಾಗುವ ಹಾಗೂ ಕ್ಷಿಪ್ರಗತಿಯಲ್ಲಿ ಕೊಳೆತು ನಾರುವ ಅಪಾಯಕಾರಿ ತ್ಯಾಜ್ಯಗಳೂ ಸೇರಿವೆ.
ಇದಿಷ್ಟು ಸಾಲದೆನ್ನುವಂತೆ ಅನೇಕ ಹೊಟೇಲ್ಗಳಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳು, ಇವುಗಳ ಸಮೀಪದಲ್ಲಿನ ಚರಂಡಿಗಳನ್ನು ಸೇರುತ್ತವೆ. ಮತ್ತೆ ಕೆಲವೆಡೆಗಳಲ್ಲಿ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ಜೈವಿಕ - ವೈದ್ಯಕೀಯ ತ್ಯಾಜ್ಯಗಳು, ದ್ರವಗಳು, ಕೀವು - ರಕ್ತ ಮತ್ತು ಅಸಂಖ್ಯ ರೋಗಾಣುಗಳಿರುವ ಬ್ಯಾಂಡೇಜು ಇತ್ಯಾದಿಗಳೊಂದಿಗೆ, ಬಳಸಿ ಎಸೆಯುವ ಸಿರಿಂಜ್ಗಳಂತಹ ಸಾಧನಗಳು ರಸ್ತೆ ಬದಿಯಲ್ಲಿರುವ ಕಸದ ತೊಟ್ಟಿ ಅಥವಾ ಚರಂಡಿಗಳಲ್ಲಿ ಪತ್ತೆಯಾದ ಪ್ರಕರಣ ಗಳು ಪತ್ರಿಕೆಗಳಲ್ಲಿ ವರದಿಯಾಗಿವೆ. ಈ ಗಂಭೀರ ಸಮಸ್ಯೆಗೆ ಕಾನೂನಿನ ಕಡಿವಾಣವನ್ನು ತೊಡಿ ಸುವ ಮೂಲಕ ನಿಯಂತ್ರಿಸಲು ಸರಕಾರ ಸನ್ನದ್ಧವಾಗಿದೆ.
ಸರಕಾರದ ಮುಖ್ಯ ಕಾರ್ಯದರ್ಶಿಗಳು ಕಳುಹಿಸಿರುವ ಸುತ್ತೋಲೆಯನ್ನು ನಗರಪಾಲಿಕೆ, ನಗರ ಸಭೆ, ಪುರಸಭೆ, ಮತ್ತು ಗ್ರಾ.ಪಂ.ಗಳು ಮತ್ತು ಜಿಲ್ಲಾ ಹಾಗೂ ತಾಲೂಕು ಆಡಳಿತಾಧಿಕಾರಿಗಳಿಗೆ ಕಳುಹಿಸಿದ್ದು, ಪುರಸಭಾ ಘನ ತ್ಯಾಜ್ಯ ಸಂಗ್ರಹ - ವಿಲೇವಾರಿ ನಿಯಮಗಳು ೨೦೦೦ರಂತೆ, ಇವು ಗಳನ್ನು ಸುರಕ್ಷಿತ ಹಾಗೂ ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವಂತೆ ಆದೇಶಿಸ ಲಾಗಿದೆ. ಇದರೊಂದಿಗೆ ಜೈವಿಕ ವೈದ್ಯಕೀಯ ತ್ಯಾಜ್ಯಗಳ ನಿಯಮ ೧೯೯೮ನ್ನು ಕಟ್ಟು ನಿಟ್ಟಾಗಿ ಅನುಷ್ಠಾನಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಆದರೆ ಈ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಸಂಬಂಧಿತ ಇಲಾಖೆಯಲ್ಲಿ ಆವಶ್ಯಕ ಸಂಖ್ಯೆಯ ಸಿಬಂದಿಗಳು ಮತ್ತು ಪ್ರಾಮಾಣಿಕ ಅಧಿಕಾರಿಗಳ ಆವಶ್ಯಕತೆ ನಿಶ್ಚಿತವಾಗಿಯೂ ಇದೆ. ಇದಕ್ಕೂ ಮಿಗಿಲಾಗಿ ದೇಶದ ಕಾನೂನುಗಳನ್ನು ಗೌರವಿಸುವ ಹಾಗೂ ಅನುಷ್ಠಾನಿಸುವ ಪ್ರಜೆಗಳ ಪರಿಪೂರ್ಣ ಸಹಕಾರದ ಆವಶ್ಯಕತೆಯೂ ಇದೆ. ಇವೆರಡೂ ಇಲ್ಲದಿದ್ದಲ್ಲಿ ಸರಕಾರದ ಸುತ್ತೋಲೆ ಯೂ ಕಸದ ತೊಟ್ಟಿಯನ್ನು ಸೇರುವ ಸಾಧ್ಯತೆಗಳಿವೆ !
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-15 00:00:00
|
|
| nazeem golden dubai, mangalore puttur | 2010-03-15 | | OUR PUTTUR IS ALWAYS GOOD ,KEEP IT UP SAME |
|