| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಂಡ್ಯ: ಜಾಗತೀಕರಣದ ಆಕ್ರಮಣದಿಂದ ಜನಪದ ರಕ್ಷಿಸಲು ಡಾ. ಬಂಜಗೆರೆ ಕರೆ |
ಪ್ರಕಟಿಸಿದ ದಿನಾಂಕ : 2010-03-13
ಮಂಡ್ಯ, ಮಾ.೧೨: ಜಾಗತೀಕರಣದ ಆಕ್ರಮಣಕಾರಿ ಸಂಸ್ಕೃತಿಯಿಂದ ದೇಶೀಯ ಸಂಸ್ಕೃತಿಯನ್ನು ಕಾಪಾಡುವ ಅನನ್ಯತೆ ಹಾಗೂ ಅಧಿಕೃತತೆ ಇರುವುದು ಜಾನಪದ ಕಲೆ ಮತ್ತು ಸಾಹಿತ್ಯಕ್ಕೆ ಮಾತ್ರ ಎಂದು ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಪ್ರತಿಪಾದಿಸಿದ್ದಾರೆ.
ನಗರದ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಮೂರು ದಿನಗಳ ರಾಜ್ಯಮಟ್ಟದ ಯುವಕತಿ-ಜಾನಪದ ಕಲಾಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಾನಪದ ಕಲೆ ಮತ್ತು ಸಾಹಿತ್ಯದ ಅನನ್ಯತೆಗಾಗಿ ಮನೋ ಭೂಮಿಕೆ ಸಿದ್ಧವಾಗಬೇಕೆಂದರು.
ಜನರ ಬದುಕಿನೊಂದಿಗೆ ಬೆರೆತು ಹೋಗಿರುವ ಜನಪದ ಸಂಸ್ಕೃತಿ ಅವಸಾನದತ್ತ ಸಾಗುತ್ತಿದೆ. ಇದಕ್ಕೆ ಯುವಜನರಲ್ಲಿನ ಅನುಕರಣ ಮನೋ ಭಾವ ಕಾರಣ. ಅನುಕರಣ ಸಂಸ್ಕೃತಿಯ ದಾಸ್ಯದಿಂದ ಹೊರ ಬಂದಾಗ ಮಾತ್ರ ಜನಪದ ಉಳಿಯಲು ಸಾಧ್ಯ ಎಂದು ಅವರು ಹೇಳಿದರು.
ಜನಪದ ಜನರ ಬದುಕಿನ ಜತೆಂi ಹುಟ್ಟಿದ ಕಲೆ. ದುಡಿಮೆಗೂ ಜನಪದಕ್ಕೂ ವ್ಯತ್ಯಾಸವಿಲ್ಲ. ಸಮುದಾ ಯಗಳಿಂದಲೇ ಹುಟ್ಟಿ ಸಮುದಾಯ ದಿಂದಲೇ ರಕ್ಷಿಸಿಕೊಂಡು ಬರುತ್ತಿರುವ ಕಲೆ. ಆದರೆ, ಇಂದು ಈ ಕಲೆಗೆ ಗಂಡಾಂತರ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಜನಪದವನ್ನು ಉಳಿಸಿ ಬೆಳೆಸುವುದು ಸವಾಲಿನ ಪ್ರಶ್ನೆಯಾಗಿದೆ. ಸವಾಲಾಗಿ ಸ್ವೀಕರಿಸಿದರೆ ಸಮಸ್ಯೆ ಬಗೆಹರಿಸುವುದು ಕಷ್ಟವಾಗುವುದಿಲ್ಲ. ಜನರಿರುವವರೆಗೂ ಜಾನಪದ ಇರುತ್ತೆ. ಆದರೆ, ಕಾಲಕ್ಕೆ ತಕ್ಕಂತೆ ಕಲೆ ಮಾರ್ಪಾಟಾದರೆ ಪ್ರೇಕ್ಷಕರು ಸಿಗುತ್ತಾರೆ. ಇದು ತಪ್ಪಾಗು ವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಮೇಳವನ್ನು ಉದ್ಘಾಟಿಸಿ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿದರು. ಶಾಸಕ ಎಂ. ಶ್ರೀನಿವಾಸ್, ಪ್ರಭಾರ ಜಿಲ್ಲಾಧಿಕಾರಿ ಪುಟ್ಟಮಾದಯ್ಯ, ಜಾನಪದ ವಿದ್ವಾಂಸ ಹ.ಕ. ರಾಜೇಗೌಡ, ಜಾನಪದ ಪ್ರಾಧ್ಯಾ ಪಕಿ ಡಾ. ಶಾಲಿನಿ ರಘುನಾಥ್, ಎನ್ವೈಕೆ ಅಧಿಕಾರಿ ಎಸ್. ಸಿದ್ದರಾ ಮಪ್ಪ, ವಕೀಲ ಎಂ. ಪುಟ್ಟೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಹೂಗಾರ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ, ಯುವಜನ ಸೇವಾ ಮತ್ತು ಕ್ರೀಡಾಧಿ ಕಾರಿ ಡಾ. ಮಂಜುಳ ಪತ್ರಕರ್ತರ ಸಂಘದ ಅಧ್ಯಕ್ಷ ಲಿಂಗರಾಜು ವೇದಿಕೆಯಲ್ಲಿದ್ದರು.
ಇದೇ ವೇಳೆ ಏರ್ಪಡಿಸಿರುವ ವಸ್ತು ಪ್ರದರ್ಶನವನ್ನು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದ ಎನ್ವೈಕೆ ನಿರ್ದೇಶಕ ಎಂ. ಸದಾಚಾರವೇಲು ಉದ್ಘಾಟಿಸಿದರು. ಮೇಳದಲ್ಲಿ ರಾಜ್ಯದ ೨೦ ಜಿಲ್ಲೆಗಳಿಂದ ೪೦೦ ಜಾನಪದ ಕಲಾವಿದರು ಭಾಗವಹಿಸಿದ್ದಾರೆ. ಇದಕ್ಕೂ ಮುನ್ನ ಸಿಲ್ವರ್ ಜ್ಯುಬಿಲಿ ಪಾರ್ಕ್ನಿಂದ ಕಲಾಮಂದಿರದವರೆಗೆ ಕಲಾಜಾಥಾ ನಡೆಯಿತು. ಇದರಲ್ಲಿ ವಿವಿಧ ಜಾನಪದ ಕಲಾವಿದರು ಪಾಲ್ಗೊಂಡಿದ್ದರು. ಜಾಥಾಗೆ ಪ್ರಭಾರ ಜಿಲ್ಲಾಧಿಕಾರಿ ಪುಟ್ಟಮಾದಯ್ಯ ಚಾಲನೆ ನೀಡಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-13 00:00:00
|
|
|
|
|