ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ;ಮೀಸಲಾತಿಯ ಬಗ್ಗೆ ಲಾಲೂ-ಮುಲಾಯಂಗಿರುವಷ್ಟು ಪ್ರಜ್ಞೆ ಮುಸ್ಲಿಮ್ ರಾಜಕೀಯ ನಾಯಕರಿಗಿಲ್ಲ: ಅಬೂಬಕರ್ |
ಪ್ರಕಟಿಸಿದ ದಿನಾಂಕ : 2010-03-13
ಮಂಗಳೂರು,ಮಾ.12: ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಇಂದು ಸಂಜೆ ನಗರದ ನೆಹರೂ ಮೈದಾನದಲ್ಲಿ ಬ್ರಹತ್ ಸಾರ್ವಜನಿಕ ಸಮಾವೇಶವು ನಡೆಯಿತು.
ರಾಜ್ಯ ಸಮಿತಿ ಸದಸ್ಯ ಮೆಹಬೂಬ್ ಆವಾದ್ ಶರೀಫ್ ಸಮಾವೇಶವನ್ನು ಉದ್ಘಾಟಿಸಿದರು. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಷ್ಟ್ರಾಧ್ಯಕ್ಷರಾದ ಇ.ಅಬೂಬಕರ್ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶರೀಫ್ ಮುಖ್ಯ ಭಾಷಣ ಮಾಡಿದರು.
ಉತ್ತರಕನ್ನಡದ ರೋಶನ್ ಮುಲ್ಲಾ, ಅಹಿಂದ ರಾಜ್ಯಧ್ಯಕ್ಷ ಮುಕುಡಪ್ಪ ಮುಖ್ಯ ಅತಿಥಿಗಳಾಗಿ ದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಾಪ್ಯುಲರ್ ಫ್ರಂಟ್ನ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಸ್ವಾಗತ ಸಮಿತಿ ಸಂಚಾಲಕ ಇಕ್ಬಾಲ್.ಎನ್, ಹೈದರ್ ನೀರ್ಶಾಲ್ ಇನ್ನಿತರರು ಉಪಸ್ಥಿತ ರಿದ್ದರು.
ಇಂಡಿಯಾ ದೇಶದಾದ್ಯಂತ ಸರ್ವ ಮುಸ್ಲಿಮರಿಗೆ ಮೀಸಲಾತಿಯನ್ನು ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ೨೦೧೦ರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ರಾಷ್ಟ್ರೀಯ ಅಭಿಯಾನ ಹಮ್ಮಿಕೊಂಡಿದ್ದು, ದೇಶದ್ಯಾಂತ ವಿವಿಧ ಕಾರ್ಯಕ್ರಮಗಳ ಮೂಲಕ ಮೀಸಲಾತಿ ಬಗ್ಗೆ ಜನ ಜಾಗ್ರತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ದ.ಕ.ಜಿಲ್ಲೆಯಲ್ಲೂ ಮುಸ್ಲಿಮ್ ಮೀಸಲಾತಿಗಾಗಿ ಕೆಂದ್ರ ಸರಕಾರದ ಮೇಲೆ ಒತ್ತಾಡ ಹೇರಲು ಈ ಬ್ರಹತ್ ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಂಡಿದ್ದೆವೆ.
ಜಸ್ಟಿಸ್ ರಂಗನಾಥ್ ಮಿಶ್ರ ಕಮಿಷನ್ ಇತ್ತೀಚಿಗೆ ಸಲ್ಲಿಸಿದ ಶಿಫಾರಸುಗಳ ಅದಾರದಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವಂತೆ ಅಗ್ರಹಿಸಿ, ಕೇಂದ್ರ ಸರಕಾರಕ್ಕೆ ಮೀಸಲಾತಿಯ ಅವಶ್ಯಕಗಳ ಅರಿವು ಮೂಡಿಸಲು ಜನರ ಒಕ್ಕೊರಳ ಧ್ವನಿಯನ್ನು ಸರಕಾರಕ್ಕೆ ತಲುಪಿಸುವ ಸಲುವಾಗಿ ಮಾರ್ಚ್ 15 ರಂದು ನವದೆಹಲಿಯಲ್ಲಿ ನಡೆಯುವ ಪಾರ್ಲಿಮೆಂಟ್ ಮಾರ್ಚ್ ನೊಂದಿಗೆ ಅಭಿಯಾನವು ಸಮಾರೋಪಗೊಳ್ಳಲಿದೆ ಎಂದು ಸಂಘಟಕರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಮೀಸಲಾತಿಯ ಬಗ್ಗೆ ಲಾಲೂ-ಮುಲಾಯಂಗಿರುವಷ್ಟು ಪ್ರಜ್ಞೆ ಮುಸ್ಲಿಮ್ ರಾಜಕೀಯ ನಾಯಕರಿಗಿಲ್ಲ: ಅಬೂಬಕರ್
ಮಂಗಳೂರು, ಮಾ.೧೨: ಮುಸ್ಲಿಮ್ ಮೀಸ ಲಾತಿಗೆ ಸಂಬಂಧಪಟ್ಟಂತೆ ರಾಷ್ಟ್ರಾದ್ಯಂತ ಪಿಎಫ್ಐ ನಡೆಸುತ್ತಿರುವ ಜನಜಾಗೃತಿಯ ಮಧ್ಯೆ ಮಹಿಳಾ ಮೀಸಲಾತಿಯಲ್ಲೂ ಅಹಿಂದ ವರ್ಗಕ್ಕೆ ಪ್ರತ್ಯೇಕ ಮೀಸಲಾತಿ ಕೊಡಬೇಕು ಎಂದು ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಆಗ್ರಹಿಸುತ್ತಿ ದ್ದಾರೆ. ಆದರೆ, ಅವರಿಗೆ ಇರು ವಷ್ಟು ಪ್ರಜ್ಞೆ ಮುಸ್ಲಿಮ್ ರಾಜಕೀಯ ನಾಯಕರಿಗೆ ಇಲ್ಲದಿರುವುದು ವಿಷಾದನೀಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರಾಧ್ಯಕ್ಷ ಇ. ಅಬೂಬಕರ್ ಹೇಳಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮುಸ್ಲಿಮ್ ಮೀಸಲಾತಿಗೆ ಆಗ್ರಹಿಸಿ ನಗರದ ನೆಹರೂ ಮೈದಾನದಲ್ಲಿ ಇಂದು ಹಮ್ಮಿಕೊಂಡ ಸಾರ್ವಜನಿಕ ಸಮಾವೇಶದಲ್ಲಿ ಮುಖ್ಯ ಭಾಷಣ ಕಾರರಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಇಂದು ಭಾರತದಲ್ಲಿ ಮುಸ್ಲಿಮರು ಸಾಮಾ ಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ. ಈ ಬಗ್ಗೆ ಎಲ್ಲ ಸರಕಾರಗಳು ಒಂದೊಂದು ಆಯೋಗಗಳನ್ನು ರಚಿಸಿ ವರದಿ ತರಿಸಿ ಕೊಳ್ಳುತ್ತಿವೆ. ಆದರೆ, ಅದನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ಆ ಮೂಲಕ ಜಾತ್ಯತೀತ ಪಕ್ಷಗಳು ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಸಿಪಿಎಂ ಮುಸ್ಲಿಮರನ್ನು ತುಷ್ಟೀಕರಣ ಮಾಡಿದರೆ, ಬಿಜೆಪಿ-ಸಂಘ ಪರಿವಾರ ಮುಸ್ಲಿಮರಿಗೆ ದೇಶದ್ರೋಹದ ಪಟ್ಟ ಕಟ್ಟುತ್ತಿವೆ. ಇವೆಲ್ಲದರ ವಿರುದ್ಧ ಸೆಟೆದು ನಿಲ್ಲಲು ಮುಸ್ಲಿಮ್ ಯುವಕರು ಪಿಎಫ್ಐ ಮೂಲಕ ಎಸ್ಡಿಪಿಐ ಪಕ್ಷವನ್ನು ಬಲಪಡಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾ ಗಿದೆಂದು ಅಬೂಬಕರ್ ನುಡಿದರು.
ಪಿಎಫ್ಐ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಕೆ.ಎಂ.ಶರೀಫ್ ಮಾತನಾಡಿ, ಅಂದು ಬ್ರಿಟಿಷರು ಹಿಂದು ಮುಸ್ಲಿಮರನ್ನು ಒಡೆದಾಳುತ್ತಿ ದ್ದರೆ, ಇಂದು ದಲಿತರು ಮತ್ತು ಮುಸ್ಲಿಮರನ್ನು ಒಡೆದು ಆಳಲು ಹಿಂದುತ್ವವಾದಿಗಳು ಪ್ರಯತ್ನಿಸು ತ್ತಿದ್ದಾರೆ. ದೇಶದಲ್ಲಿ ಕೋಮುಗಲಭೆ ಸೃಷ್ಟಿಸಿ ಆ ಮೂಲಕ ಮುಸ್ಲಿಮರನ್ನು ದೇಶದ್ರೋಹಿಗಳು ಎಂದು ಚಿತ್ರಿಸುವುದು ಇವರ ಮೂಲ ಉದ್ದೇಶ ವಾಗಿದೆ. ಮಹಿಳಾ ಮೀಸಲಾತಿ ಯಿಂದ ಕೇವಲ ಮೇಲ್ವರ್ಗದ ಮಹಿಳೆಯರೇ ಮತ್ತೆ ಮೇಲುಗೈ ಸಾಧಿಸುವ ಅಪಾಯವಿದೆ. ಅದನ್ನು ತಡೆಗಟ್ಟಲು ಒಳ ಮೀಸಲಾತಿಯ ಅಗತ್ಯವಿದೆ ಎಂದು ಹೇಳಿದರು.
ಸಮಾವೇಶದ ಅಧ್ಯಕ್ಷತೆಯನ್ನು ಪಿಎಫ್ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧ್ಯಕ್ಷ ಅಮೀರ್ ಹಂಝ, ಚಿಕ್ಕಮ ಗಳೂರು ಜಿಲ್ಲಾಧ್ಯಕ್ಷ ಅಕ್ಬರ್ ಅಲಿ, ಎಸ್ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್, ಪಿಎಫ್ಐ ಮುಖಂಡರಾದ ಅಬೂಬಕರ್ ಕಾರ್ನಾಡ್, ಅಸ್ಲಮ್ ಹಸನ್, ಅಬ್ದುಲ್ ರಝಾಕ್ ಕೆಮ್ಮಾರ ಭಾಗವಹಿಸಿದ್ದರು. ಅನ್ವರ್ ಸಾದಾತ್ ಸ್ವಾಗತಿಸಿದರು. ಹೈದರ್ ವಂದಿಸಿದರು. ಸಲೀಂ ಕಾರ್ಯಕ್ರಮ ನಿರೂಪಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-13 00:00:00
|
|
| praveen, chennai | 2010-03-17 | | Muslimarige igiruva reservation saaku.
India dalli alpa sankyataru antha bekadasthu reservation kottagide. |
| nazeem golden dubai, mangalore puttur | 2010-03-13 | | mashaalla |
|