ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜುವೆಲ್ಲರ್ಸ್‌ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ
Latest news item ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಐಪಿಎಲ್: ವರ್ಣರಂಜಿತ ಉದ್ಘಾಟನೆಗೆ ಕ್ಷಣಗಣನೆ; ಸೌರವ್ ಗಂಗೂಲಿ ಸಾರಥ್ಯದ ಕೋಲ್ಕತ್ತ ನೈಟ್ ರೈಡರ್ಸ್ ಹಾಗು ಹಾಲಿ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ಉದ್ಘಾಟನಾ ಪಂದ್ಯ

ತಂಡಗಳು 8, ಪಂದ್ಯಗಳು 60, ದಿನಗಳು 43, ಓವರ್‌ಗಳು 2400

ಜಾಗತಿಕ ಕ್ರಿಕೆಟ್ ಉತ್ಸವ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ.   

ಮುಂಬೈ: ಅದಕ್ಕಾಗಿ ಡಿ.ವೈ.ಪಾಟೀಲ್ ಕ್ರೀಡಾಂಗಣದತ್ತ ಎಲ್ಲರ ಚಿತ್ತ ಹರಿದಿದೆ. ಶುಕ್ರವಾರ ಸಂಜೆ ಟೂರ್ನಿಯ ಮೂರನೇ ಅವತರಣಿಕೆಗೆ ಚಾಲನೆ ಸಿಗಲಿದೆ. ಬಣ್ಣ ಬಣ್ಣದ ಲೋಕ ಸೃಷ್ಟಿಸಿ ಕ್ರಿಕೆಟ್ ಪ್ರೇಮಿಗಳ ಹೃದಯ ತಾಕಲು ಎಲ್ಲಾ ಸಿದ್ಧತೆ ನಡೆದಿದೆ.

ಸಂಗೀತದ ನಿನಾದ ಹಾಗೂ ನೃತ್ಯದ ಮೆರುಗಿನ ಮೂಲಕ ಕ್ರಿಕೆಟ್‌ಗೆ ಗ್ಲಾಮರ್ ಸ್ಪರ್ಶ ಸಿಗಲಿದೆ. ಎಂಟು ತಂಡಗಳ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.  ಅಂತರರಾಷ್ಟ್ರೀಯ ಹೆಸರಾಂತ ಕಲಾವಿದರಾದ ಲಿಯೊನೆಲ್ ರಿಚಿ, ‘ಯುವಿ40’ಯ ಅಲಿ ಕ್ಯಾಂಬೆಲ್ ಹಾಗೂ ಬೋರ್ನ್ ಕಾರ್ಯಕ್ರಮಕ್ಕೆ ಹೊಳಪು ನೀಡಲಿದ್ದಾರೆ.

ಕ್ಯಾಂಬೆಲ್ ಅವರು ‘ಕಾಂಟ್ ಹೆಲ್ಪ್ ಫಾಲಿಂಗ್ ಇನ್ ಲವ್’ ಎಂಬ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ಹಾಡುಗಳಿಗೆ ಸಹ ಕಲಾವಿದರ ಜೊತೆ ಹೆಜ್ಜೆ ಹಾಕಲಿದ್ದಾರೆ.
ಉದ್ಘಾಟನೆ ಕಾರ್ಯಕ್ರಮದ ಬಳಿಕ ಹಾಲಿ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಹಣಾಹಣಿ ನಡೆಸಲಿವೆ.  
 
ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯವನ್ನು ಕೋಲ್ಕತ್ತದಲ್ಲಿ ಭಾನುವಾರ ನೈಟ್ ರೈಡರ್ಸ್ ಎದುರು ಆಡಲಿದೆ.  ಚಾಲೆಂಜರ್ಸ್‌ನ 7 ಪಂದ್ಯ ಹಾಗೂ 2 ಸೆಮಿಫೈನಲ್ ಸೇರಿದಂತೆ 9 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲ ಪಂದ್ಯ ಜರುಗಲಿದೆ

ಚಾರ್ಜರ್ಸ್ ಗೆಲುವಿನ ‘ಫೇವರಿಟ್’ 
  
ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಎರಡನೇ ಬಾರಿ ಉದ್ಘಾಟನಾ ಪಂದ್ಯ ಆಡಲು ಅವಕಾಶ ಲಭಿಸಿದೆ. ಆದರೆ ಎರಡನೇ ಅವತರಣಿಕೆಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಈ ತಂಡದ ಮುಂದೆ ಈಗ ದೊಡ್ಡ ಸವಾಲೇ ಎದುರಿದೆ.  

ಮುಂಬೈ: ಸೌರವ್ ಗಂಗೂಲಿ ಸಾರಥ್ಯದ ನೈಟ್ ರೈಡರ್ಸ್ ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ಹಾಲಿ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಆ್ಯಡಂ ಗಿಲ್‌ಕ್ರಿಸ್ಟ್ ಸಾರಥ್ಯದ ಡೆಕ್ಕನ್ ಚಾರ್ಜರ್ಸ್ ಮೇಲ್ನೋಟಕ್ಕೆ ಗೆಲುವಿನ ಫೇವರಿಟ್ ಆಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಳೆದ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಈ ತಂಡ ಈಗ ಅದೇ ಯಶಸ್ಸನ್ನು ಮುಂದುವರಿಸಲು ಕಾತರವಾಗಿದೆ.

ಎರಡನೇ ಅವತರಣಿಕೆಯಲ್ಲಿ ಶಾರೂಖ್ ಖಾನ್ ಒಡೆತನದ    ಕೋಲ್ಕತ್ತ ತಂಡ ಹಲವು ವಿವಾದಗಳಿಗೆ ಸಿಲುಕಿತ್ತು. ಆದರೆ ಈ ಬಾರಿ ಬ್ರೆಂಡನ್ ಮೆಕ್ಲಮ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಗಂಗೂಲಿಗೆ ಸಾರಥ್ಯ ನೀಡಲಾಗಿದೆ. ಅಂತರರಾಷ್ಟ್ರೀಯ ಕರ್ತವ್ಯ ಇರುವುದರಿಂದ ಕೆಲ ಪಂದ್ಯಗಳಿಗೆ ಕ್ರಿಸ್ ಗೇಲ್ ಹಾಗೂ ಮೆಕ್ಲಮ್ ಲಭ್ಯರಾಗುತ್ತಿಲ್ಲ.  
 
ಅದೇ ರೀತಿ ಹೈದರಾಬಾದ್ ತಂಡ ಡ್ವೇನ್ ಸ್ಮಿತ್, ಕೆಮರ್ ರೋಕ್, ರ್‍ಯಾನ್ ಹ್ಯಾರೀಸ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಬೇಕಾಗಿದೆ.

ತಂಡಗಳು ಇಂತಿವೆ: ಡೆಕ್ಕನ್ ಚಾರ್ಜರ್ಸ್: ಆ್ಯಡಂ ಗಿಲ್‌ಕ್ರಿಸ್ಟ್ (ನಾಯಕ), ಹರ್ಷೆಲ್ ಗಿಬ್ಸ್, ವಿ.ವಿ.ಎಸ್.ಲಕ್ಷ್ಮಣ್, ರೋಹಿತ್ ಶರ್ಮ, ಆ್ಯಂಡ್ರ್ಯೂ ಸೈಮಂಡ್ಸ್, ಟಿ.ಸುಮನ್, ಡಿವಿ ರವಿ ತೇಜಾ, ವೈ.ವೇಣುಗೋಪಾಲ್ ರಾವ್, ಆರ್.ಪಿ.ಸಿಂಗ್, ಚಮಿಂದಾ ವಾಸ್, ಹರ್ಮಿತ್ ಸಿಂಗ್, ಪ್ರಗ್ಯಾನ್ ಓಜಾ, ಅನಿರುದ್ಧ ಸಿಂಗ್, ರಾಹುಲ್ ಶರ್ಮ, ಅಜರ್ ಬಿಲಾಕಿಯಾ, ಮೋನಿಷ್ ಮಿಶ್ರಾ. ಎ.ಆಶೀಶ್ ರೆಡ್ಡಿ, ಹಾಗೂ ಬಿ.ಸುಮಂತ್.

ಕೋಲ್ಕತ್ತ ನೈಟ್ ರೈಡರ್ಸ್: ಸೌರವ್ ಗಂಗೂಲಿ (ನಾಯಕ), ಬ್ರಾಡ್ ಹಾಡ್ಜ್, ಓವಾಯಿಸ್ ಷಾ, ಆ್ಯಂಜೆಲೊ ಮ್ಯಾಥ್ಯೂಸ್, ಲಕ್ಷ್ಮಿ ರತನ್ ಶುಕ್ಲಾ, ವೃದ್ಧಿಮಾನ್ ಸಹಾ, ಮುರಳಿ ಕಾರ್ತಿಕ್, ಇಶಾಂತ್ ಶರ್ಮ, ಅಜಂತ ಮೆಂಡೀಸ್, ಇಕ್ಬಾಲ್ ಅಬ್ದುಲ್ಲಾ, ಅರೋನ್ ವರುಣ್, ಅಜಿತ್ ಅಗರ್ಕರ್, ಎಕ್ಲಖಾ ಅಹ್ಮದ್, ಅಶೋಕ್ ದಿಂಡಾ, ಜಿ.ವಿಗ್ನೇಶ್, ಚಾರ್ಲ್ಸ್ ಲಾಂಗ್‌ವೆಲ್ಟ್, ಚಿರಾಗ್ ಪಠಾಕ್, ಮನೋಜ್ ತಿವಾರಿ, ಚೇತೇಶ್ವರ ಪೂಜಾರ, ರೋಹನ್ ಗಾವಸ್ಕರ್, ಹರ್ಷದ್ ಖಡಿವಾಲೆ.

ಪಂದ್ಯದ ಆರಂಭ: ರಾತ್ರಿ ಎಂಟು ಗಂಟೆಗೆ.

ಗಂಗೂಲಿ: ಹಿಂದಿನ ಘಟನೆಗಳ ಬಗ್ಗೆ ನನಗೆ ಅಷ್ಟೊಂದು ಆಸಕ್ತಿ ಇಲ್ಲ. ಈ ಬಾರಿಯ ಟೂರ್ನಿಗೆ ನಾವು ವಿಭಿನ್ನವಾಗಿ ಸಿದ್ಧರಾಗಿ ಬಂದಿದ್ದೇವೆ. ತಂಡದ ಆಟಗಾರರು ತುಂಬಾ ಖುಷಿಯಾಗಿದ್ದಾರೆ. ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ.

ಫೋರ್ಸ್ ಒನ್: ಮಹಾರಾಷ್ಟ್ರ ಸರ್ಕಾರ ಹೊಸದಾಗಿ ರಚಿಸಿರುವ ‘ಫೋರ್ಸ್ ಒನ್’ ಭದ್ರತಾ ಪಡೆ ಐಪಿಎಲ್ ಪಂದ್ಯ ನಡೆಯಲಿರುವ ಕ್ರೀಡಾಂಗಣದ ಭದ್ರತೆಯ ಪರಿಶೀಲನೆ ನಡೆಸಿದೆ.

ಮಾಂಗೂಸ್ ಬ್ಯಾಟ್: ಚೆನ್ನೈ ಕಿಂಗ್ಸ್ ಇಲೆವೆನ್ ತಂಡದ ಮ್ಯಾಥ್ಯು ಹೇಡನ್ ಚೆನ್ನೈನಲ್ಲಿ ಮಾಂಗೂಸ್ ಬ್ಯಾಟ್‌ಗಳಿಗೆ ಚಾಲನೆ ನೀಡಿದರು. ಈ ಬ್ಯಾಟ್‌ನ ಹ್ಯಾಂಡಲ್ ಉದ್ದವಾಗಿದ್ದು ಚೆಂಡು ಬಾರಿಸುವ ಸ್ಥಳ ಚಿಕ್ಕದಾಗಿದೆ.

ಪಾಕ್ ಮನವಿ ವಜಾ (ಕರಾಚಿ ವದಿ): ತಮ್ಮ ಆಟಗಾರರನ್ನು ಪರಿಗಣಿಸದ ಐಪಿಎಲ್ ಆಡಳಿತದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಕ್ ಕ್ರಿಕೆಟ್ ಮಂಡಳಿ ಮಾಡಿದ್ದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ದೇಶಿ ಟೂರ್ನಿಗಳ ಬಗ್ಗೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಐಸಿಸಿ ಹೇಳಿದೆ. 

ಇಪ್ಪತ್ತು ಓವರ್‌ಗಳ ಗಮ್ಮತ್ತು

ಮುಂಬೈ: ಫುಟ್ಬಾಲ್ ಪ್ರೀಮಿಯರ್ ಲೀಗ್, ಬಾಸ್ಕೆಟ್‌ಬಾಲ್ ಲೀಗ್ ನಂತರ ಜಗತ್ತಿನ ಎಲ್ಲ ಕ್ರೀಡೆಗಳನ್ನು ಬದಿಗೊತ್ತಿ ಮುನ್ನುಗುತ್ತಿರುವ ಕ್ರಿಕೆಟ್‌ನ ಪ್ರತಿಷ್ಠಿತ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿ‌ಎಲ್) ನ ಮೂರನೇ ವರ್ಷದ ಹಬ್ಬಕ್ಕೆ ಶುಕ್ರವಾರ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣ ಸಾಕ್ಷಿಯಾಗಲಿದೆ.

೪೩ ದಿನಗಳ ಕಾಲ ೬೦ ಪಂದ್ಯಗಳ ಕ್ರಿಕೆಟ್ ಹಬ್ಬಕ್ಕೆ ಈ ಬಾರಿಗೆ ಮುಂಬೈನಲ್ಲಿ ಮುನ್ನುಡಿ ದೊರೆಯಲಿದೆ. ಅದೇ ರೀತಿ ಫೈನಲ್ ಪಂದ್ಯವೂ ಮುಂಬೈನಲ್ಲೇ ನಡೆಯಲಿದೆ.

ಶುಕ್ರವಾರದ ಆರಂಭೋತ್ಸವದಲ್ಲಿ ಭಾರತ ಹಾಗೂ ಜಾಗತಿಕ ಸಾಂಸ್ಕೃತಿ ಲೋಕ ಎಂದಿನಂತೆ ಕ್ರಿಕೆಟ್ ಪ್ರೇಮಿಗಳ ಮನವನ್ನು ತಣಿಸಲಿದೆ. ಮೊದಲ ಪಂದ್ಯದಲ್ಲೇ ಕಳೆದ ಬಾರಿಯ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ಹಾಗೂ ಕೊನೆ ಸ್ಥಾನ ಪಡೆದಿದ್ದ ಕೋಲ್ಕತ ನೈಟ್ ರೈಡರ್ಸ್ ತಂಡಗಳು ಸ್ಪರ್ಧಿಸಲಿವೆ.

ಉದ್ಘಾಟನಾ ಸಮಾರಂಭದಲ್ಲಿ ಮನೋರಂಜನ ಕಾರ್ಯಕ್ರಮವನ್ನು ನೀಡಲಿರುವ ಡಿ‌ಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರಕಾರ ಮೈನವಿರೇಳಿಸುವ ಸಾಹಾಸ, ದಿಗ್ಭ್ರಮೆಗೊಳಿಸುವ ಬೆಳಕಿನಾಟ, ಯುಬಿ೪೦ ಮತ್ತು ಬಾರ್ನ್ ಎಗೈನ್‌ನ ಲಿಯೊನೆಲ್ ರಿಚಿ ಮತ್ತು ಆಲಿ ಕ್ಯಾಂಬೆಲ್ ಅವರ ಕಾರ್ಯಕ್ರಮಗಳು ಡಿವೈ ಪಾಟೀಲ್ ಅಂಗಣದಲ್ಲಿ ಅನಾವರಣಗೊಳ್ಳಲಿವೆ.

ಉದ್ಘಾಟನಾ ಸಮಾರಂಭಕ್ಕೆ ಮುನ್ನ ಐಪಿ‌ಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ೮ ತಂಡಗಳ ನಾಯಕರು ಎಂಸಿಸಿ -ಸ್ಪಿರಿಟ್ ಆಫ್ ಕ್ರಿಕೆಟ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಂತರ ಕ್ರಿಕೆಟ್ ಸ್ಫೂರ್ತಿಗಾಗಿ ೮ ನಾಯಕರು ಸಹಿ ಮಾಡಲಿದ್ದಾರೆ.

ಕೈ ಜೋಡಿಸಿದ ಯುನೆಪ್: ಈ ಬಾರಿ ಐಪಿ‌ಎಲ್ ಪರಿಸರದ ಬಗ್ಗೆಯೂ ಕಾಳಜಿ ವಹಿಸಿದೆ. ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮ (ಯುನೈಟೆಡ್ ನೇಷನ್ಸ್ ಎನ್ವಿರಾನ್‌ಮೆಂಟ್ ಪ್ರೋಗ್ರಾಮ್)ದ ಪ್ರಕಾರ ಪುನಃ ಬಳಸಬಹುದಾದ ವಸ್ತುಗಳಿಂದ ನಿರ್ಮಿಸಿದ ಭೂಪಟದ ಮೇಲೆ ನಾಯಕರು ಸಹಿ ಮಾಡಲಿದ್ದಾರೆ. ಕ್ರಿಕೆಟ್ ಮೂಲಕ ಪರಿಸರ ರಕ್ಷಿಸುವ ಸಂದೇಶ ಸಾರುವುದೇ ಈ ಬಾರಿಯ ಐಪಿ‌ಎಲ್‌ನ ಉದ್ದೇಶವಾಗಿದೆ.

ನಂತರ ಆಲಿ ಕ್ಯಾಂಬೆಲ್ ಹಾಗೂ ಸಂಗಡಿಗರು ಜನಪ್ರಿಯ ಪಾಪ್ ಹಾಡು ’ಕಾಂಟ್ ಹೆಲ್ಪ್ ಫಾಲಿಂಗ್ ಇನ್ ಲವ್’ಗೆ ಹೆಜ್ಜೆ ಹಾಕಲಿದ್ದಾರೆ. ಬಾರ್ನ್ ಎಗೈನ್ ಗ್ರೂಪ್‌ನಿಂದ ಅಬ್ಬಾಸ್ ಸೂಪರ್ ಹಿಟ್ ಹಾಡು ’ಡಾನ್ಸಿಂಗ್ ಕ್ವೀನ್’ ನೃತ್ಯ ರೂಪದಲ್ಲಿ ಪ್ರದರ್ಶನಗೊಳ್ಳಲಿದೆ. ಇದರಲ್ಲಿ ೧೬ ಮಂದಿ ನೃತ್ಯಗಾರರು ಪಾಲ್ಗೊಳ್ಳಲಿದ್ದಾರೆ. ನಂತರ ೨೪೦ ಮಂದಿ ಕಲಾವಿದರು ಹೊಳಪಿನ ಉಡುಪು ಧರಿಸಿ ಐಪಿ‌ಎಲ್ ಮತ್ತೆ ಭಾರತಕ್ಕೆ ಬಂದಿತು ಎಂಬ ಸಂದೇಶವನ್ನು ಸಾರಲಿದ್ದಾರೆ. ನಂತರ ಅಂಗಣದಲ್ಲಿ ಕತ್ತಲು ಆವರಿಸುತ್ತಿದ್ದಂತೆ ಕಿರಣಗಳ ಹೊಸ ಜಗತ್ತು ಅಲ್ಲಿ ಸೃಷ್ಚಿಯಾಗಲಿದೆ. ಎಂಟು ತಂಡಗಳ ಧ್ವಜ ಬೆಳಕಿನ ನಡುವೆ ರಾರಾಜಿಸಲಿದೆ. ಎರಡು ವರ್ಷಗಳ ಐಪಿ‌ಎಲ್‌ನ ಸಾಧನೆ ಬೃಹತ್ ಪರದೆಯ ಮೇಲೆ ಕ್ರಿಕೆಟ್ ಅಭಿಮಾನಿಗಳ ಮನ ತಣಿಸಲಿದೆ.

ದೀಪಿಕಾ ದೀಪ: ದೀಪಗಳ ಬಣ್ಣ ಮರೆಯಾಗುತ್ತಿದ್ದಂತೆ ಖ್ಯಾತ ಬಾಲಿವುಡ್ ತಾರೆ, ಕನ್ನಡತಿ ದೀಪಿಕಾ ಪಡುಕೋಣೆ ಐಪಿ‌ಎಲ್ ಆರಂಭಕ್ಕೆ ಹೊಸ ರಂಗು ನೀಡಲಿದ್ದಾರೆ. ಕ್ಯಾಲಿಫೋರ್ನಿಯಾದ black eyed peas ತಂಡದ ಜನಪ್ರಿಯ ಹಾಡು ‘ಟು ನೈಟ್ ಈಸ್ ಗೋಯಿಂಗ್ ಟು ಬಿ ಗುಡ್ ನೈಟ್’ ಹಾಡಿಗೆ ದೀಪಿಕಾ ಹೆಜ್ಜೆ ಹಾಕಲಿದ್ದಾರೆ. ಸ್ವತಃ ತಾನೇ ನಟಿಸಿರುವ ’ಕಾರ್ತಿಕ್ ಕಾಲಿಂಗ್ ಕಾರ್ತಿಕ್’ ಚಿತ್ರದ ’ತೇರಿ ಅದಾಯೇಂ’ ಮತ್ತು ‘ಲವ್ ಆಜ್ ಕಲ್’ಚಿತ್ರದ ‘ಟ್ವಿಸ್ಟ್’ಗೆ ಕುಣಿಯಲಿದ್ದಾರೆ.

ಸೊಂಟ ತಿರುಗಿಸುತ್ತ ರೊಮಾಂಚನಗೊಳಿಸುವ ಹೂಲಾ ಹೂಪ್ ಜಗ್ಲಿಂಗ್ ತಂಡ ಐಪಿ‌ಎಲ್‌ನ ೮ ತಂಡಗಳ ಲಾಂಛನಗಳನ್ನು ಅಂಗಣದಲ್ಲಿ ಬೆಳಗಲಿದ್ದಾರೆ. ಇದು ಮುಗಿಯುತ್ತಿದ್ದಂತೆ ಅಂಗಣಕ್ಕೆ ಮುತ್ತಿಡಲಿದೆ ಲೇಸರ್ ಕಿರಣ. ಲೇಸರ್ ಕಿರಣಗಳು ಮಿಂಚಿ ಮರೆಯಾಗುತ್ತಿದ್ದಂತೆ ಲಿಯೋನೆಲ್ ರಿಚಿ ’ಡ್ಯಾನ್ಸಿಂಗ್ ಆನ್ ದಿ ಸೀಲಿಂಗ್’ ಹಾಡು ತೇಲಿ ಬರಲಿದೆ.

ಮನರಂಜನಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಗರದ ಆಗಸದಲ್ಲಿ ಸುಡುಮದ್ದುಗಳ ಬೆಳಕಿನ ಮೆರವಣಿಗೆ ನಡೆಯಲಿದೆ. ನಂತರ ಡೆಕ್ಕನ್ ಚಾರ್ಜ ರ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವೆ ಹೋರಾಟ ನಡೆಯಲಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-12 00:00:00

Tell a Friend

ಪ್ರತಿಸ್ಪಂದನ
suresh, udupi
2010-03-12
Mutahlik Where are u now? Why you didn\'t teach your sisters to wear full indian dress instead of showing their figure? may be companies sponsoring them paid You???
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಬಿಸಿಸಿಐ-ಸಹಾರಾ ಭಿನ್ನಮತ ಬಗೆಹರಿಯಲಿದೆ: ಗಂಗೂಲಿ ವಿಶ್ವಾಸ
»ರೀಲ್‌ಗೆ ರಾಜಕುಮಾರಿ ಡಯಾನಾ ರಿಯಲ್ ಸ್ಟೋರಿ
» ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
»ಉದ್ದೀಪನಾ ಮದ್ದು ಸೇವನೆ ಪ್ರಕರಣ: ಅಕ್ಕುಂಜೆ ಟೀಂ 2ವರ್ಷ ನಿಷೇಧಿಸಿ: ವಾಡಾ ಆಗ್ರಹ
»ಸೂಪರ್ ಸ್ಟಾರ್ ರಜನಿಕಾಂತ್ ಅವರ ’ಕೊಚಡಯ್ಯಾನ್’ಗೆ ದೀಪಿಕಾ ನಾಯಕಿ
»ಹಾಡು ಬರೆದ ಗೀತಪ್ರಿಯರಿಗೀಗ ಮಾತೇ ಬರುತ್ತಿಲ್ಲ
»ನಟಿ ಅಮೂಲ್ಯ ಗುಂಗಿನಲಿ ಬಸವರಾಜ್ ಬದುಕು ಬರ್ಬಾದ್
»ಕ್ರಿಕೆಟ್ ತಂಡಕ್ಕೆ ಕಡಿವಾಣ: ಹಾಕಿ ನೆರವಿಗೆ ನಿಂತ ಸಹರಾ
»ಕ್ಯಾನ್ಸರ್ ಗೆದ್ದ ಲೀಸಾ ರೇ ಹಸಮಣೆ ಏರಲು ಸಿದ್ಧ
»ನೂರು ಕೋಟಿ ದಾಟಿದ ಅಗ್ನಿಪಥ್ ಚಿತ್ರದ ಗಳಿಕೆ
»ತ್ರಿಕೋನ ಪ್ರೇಮಕತೆ: ಸೋನಂ ಕಪೂರ್‌ ಜೊತೆ ಸಿದ್ಧಾರ್ಥ್ ಮಲ್ಯ ಡೇಟಿಂಗ್
»ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸುವರ್ಣಾವಕಾಶ: ಪೇಸ್
»ಹಾಲಿವುಡ್ ಕಡೆ ಹಾರಿದ ದೇಸಿ ಬಾಯ್ಸ್ ಜೋಡಿ
»ಜೊತೆ ಜೊತೆಯಲಿ ಯೋಗಿ-ರಾಧಿಕಾ ಹ್ಯಾಟ್ರಿಕ್!
»ಅಮೇರ್ ಮತ್ತೊಂದು ಅವಕಾಶಕ್ಕೆ ಅರ್ಹರು: ಶೋಯಿಬ್ ಅಖ್ತರ್
»ಸಂಚಿತಾ ಕೈಯಲ್ಲಿ ತಮಿಳು, ಮನದಲ್ಲಿ ಕನ್ನಡ..!
»ಸ್ನೂಕರ್‌: ಆದಿತ್ಯ ಮೆಹ್ತಾಗೆ ರಾಷ್ಟ್ರೀಯ ಸ್ನೂಕರ್‌ ಚಾಂಪಿಯನ್‌ಶಿಪ್‌ನ ಪ್ರಶಸ್ತಿ
»ವರ್ತಮಾನದ ತೆಳು ಚಿತ್ರಣ: ಹಿಂದಿಚಿತ್ರ: ಗಲಿ ಗಲಿ ಚೋರ್ ಹೈ
»ಯುವರಾಜ್‌ಗೆ ಕ್ಯಾನ್ಸರ್; ಅಮೆರಿಕದಲ್ಲಿ ಚಿಕಿತ್ಸೆ ( Updated)
»ಬಾಲಿವುಡ್ ಚಿತ್ರ ನಿರ್ಮಾಪಕ ರಾಜ್ ಕನ್ವರ್ ಅಂತ್ಯಕ್ರಿಯೆ
»ದಿಗಂತ್, ಐಂದ್ರಿತಾ ಜೋಡಿಯ ಪಾರಿಜಾತ ಬಿಡುಗಡೆ
»ಶ್ವಾಸಕೋಶದ ಕ್ಯಾನ್ಸರ್: ಅಮೆರಿಕಾದಲ್ಲಿ ಕಿಮೊತೆರಪಿ ಚಿಕಿತ್ಸೆಗೊಳಗಾಗಲಿರುವ ಯುವರಾಜ್ ಸಿಂಗ್
»ಪ್ರೇಮಿಗಳ ದಿನ ಅರ್ಜುನ್ 'ಅದ್ದೂರಿ' ಆಡಿಯೋ ಬಿಡುಗಡೆ
»ಕಾಮನ್‌ವೆಲ್ತ್‌ ಗೆಮ್ಸ್‌ ಹಗರಣ: ಜಾಮೀನಿನಲ್ಲಿ ಬಿಡುಗಡೆ: ಸುರೇಶ್‌ ಕಲ್ಮಾಡಿಗೆ ಭವ್ಯ ಸ್ವಾಗತ!
»ಐಪಿ‌ಎಲ್ ಹರಾಜು: ಆರ್‌ಸಿಬಿ ತೆಕ್ಕೆಗೆ ವಿನಯ್ ಕುಮಾರ್ ( Upadated)
»ಕೊಡಿಗೇಹಳ್ಳಿ ಮಣ್ಣಲ್ಲಿ ಕರಿಬಸವಯ್ಯ ಲೀನ: ಅಂತಿಮ ದರ್ಶನಕ್ಕೆ ಜನಸಾಗರ(Updated)
»ಕ್ರಿಕೆಟ್ ಮಂಡಳಿ ಬೇ’ಸಹಾರ’: ಭಾರತ ತಂಡ ಪ್ರಾಯೋಜಕತ್ವ ಕೈಬಿಟ್ಟ ಸಹಾರ ಸಂಸ್ಥೆ
»ತಬ್ಬಿದ ಸಚಿನ್ ಜೋಷಿ; ಪ್ರಿಯಾಮಣಿ ತಬ್ಬಿಬ್ಬು..!
»ಚಿಂಗಾರಿ ಚಿತ್ರವಿಮರ್ಶೆ; ದರ್ಶನ್ ಅಭಿಮಾನಿಗಳಿಗೆ ಹಬ್ಬ
»ಬಣ್ಣ ಮಾತ್ರವಲ್ಲ, ಕರಿಬಸವಯ್ಯನ ಬದುಕೇ ಕತ್ತಲು..!
»ಬಿಸಿಸಿಐ ಪ್ರಾಯೋಜಕತ್ವಕ್ಕೆ ಸಹಾರಾ ಗುಡ್‌ಬೈ?...
»ಹಾಕಿ: ಗೋಲ್ ಕೀಪಿಂಗ್ ಕೋಚ್ ಆಗಿ ಸುಬ್ಬಯ್ಯ ನೇಮಕ
»ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
»ಪ್ರಭುದೇವಗೆ ಕೈ ಕೊಟ್ಟ ನಯನತಾರಾ: ಮತ್ತೆ ಕನ್ನಡಕ್ಕೆ?
»ಲವ್ಲಿ ಜೆನ್ನಿಯ ಮಧುರ ದಾಂಪತ್ಯ: ರಿತೇಶ್ ವರಿಸಿದ ಜೆನಿಲಿಯಾ
»ಶಿಸ್ತುಬದ್ಧ ಆಟ; ಕೊನೆಗೂ ಭಾರತಕ್ಕೆ ಒಲಿದ ವಿಜಯಲಕ್ಷ್ಮೀ..!
»ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
»ಶನಿವಾರ ನಡೆಯಲಿರುವ ಐಪಿಎಲ್ ಹರಾಜು; ಜಡೇಜಾ, ಮೆಕಲಮ್‌ಗೆ ಭಾರಿ ಡಿಮ್ಯಾಂಡ್
»ಕನ್ನಡದಲ್ಲಿ ಮತ್ತೆ ಬಣ್ಣಹಚ್ಚಲಿದ್ದಾರೆ ನಟಿ ನಯನತಾರಾ
»ಕಮಲ್ ಹಾಸನ್ ಬಿಗ್ ಬಜೆಟ್‌ ಚಿತ್ರಕ್ಕೆ ಕತ್ರಿನಾ ನಾಯಕಿ?
»ಕ್ರೀಡೆಯ ಮಹಾ ದುರಂತ; ಫುಟ್ಬಾಲ್ ಹಿಂಸಾಚಾರಕ್ಕೆ 73 ಬಲಿ;1000ಕ್ಕೂ ಹೆಚ್ಚು ಮಂದಿ ಗಾಯ
» ನಟಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್ ವಿವಾಹ: ತಾ.2ರ ರೋನ್ಸ್ ರವರ ಚಿತ್ರವರದಿಗಳು
»ಅಖಿಲ ಭಾರತ ಅಂತರ್ ವಿವಿ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಅಣ್ಣಾಮಲೈ ಚಾಂಪಿಯನ್, ಮಂಗಳೂರು ರನ್ನರ್ ಅಪ್
»ಕುಡಿದ ಅಮಲಿನಲ್ಲಿ ಶಾರುಕ್ ಖಾನ್ ಅಮಲಿನ ಅವತಾರ
»'ಗಂಡ ಹೆಂಡತಿ’ ಸಂಜನಾಗೆ ಬಿಕಿನಿ ಅಂದ್ರೆ ಭಯ!
»ಧೋನಿ ಸೂಕ್ತ ಟೆಸ್ಟ್ ನಾಯಕ: ಅಜರುದ್ದೀನ್
»ಸೆಹ್ವಾಗ್ ನಾಯಕರಾಗಲು ಅರ್ಹರಲ್ಲ: ಧೋನಿಗೆ ಅಕ್ರಂ ಸಾಥ್
»ಫೇಸ್‌ಲೆಸ್ ಫೇಸ್‌ಬುಕ್!: 12 ಎ‌ಎಂ‘ ಚಿತ್ರದ ಬಣ್ಣನೆ
»ಸಾನಿಯಾ ’ಬಾಬಿ’ಯ ಪಾಟ್ನರ್ ಆಗಲು ಖುರೇಷಿ ಬಯಕೆ
»ಇಂದು ಆಸೀಸ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri