| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಹಿಳಾ ಮೀಸಲಾತಿ ಮಸೂದೆ: ಬಿಜೆಪಿಯಲ್ಲಿ ಭಿನ್ನಮತ |
ಪ್ರಕಟಿಸಿದ ದಿನಾಂಕ : 2010-03-12
ಹೊಸದಿಲ್ಲಿ, ಮಾ.೧೧: ಮಹಿಳಾ ಮೀಸಲಾತಿ ಮಸೂದೆಯ ಕುರಿತು ಲೋಕಸಭೆಯ ಕೆಲವು ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಮಸೂದೆಯ ವಿರುದ್ಧವಾಗಿ ಮತ ಚಲಾಯಿಸುವ ಬೆದರಿಕೆ ಹಾಕುವುದರೊಂದಿಗೆ ಪಕ್ಷದಲ್ಲಿ ಭಿನ್ನಾಭಿಪ್ರಾಯದ ಹೊಣೆ ಕಾಣಿಸಿಕೊಂಡಿದೆ.
ಇದರಿಂದಾಗಿ, ಮಸೂದೆಯನ್ನು ಬೆಂಬಲಿಸುವಂತೆ ಸದಸ್ಯರಿಗೆ ಸಚೇತಕಾಜ್ಞೆ ಜಾರಿಗೊಳಿಸುವ ಮೂಲಕ ಭಿನ್ನಮತೀಯರ ಸದ್ದಡಗಿಸಲು ಬಿಜೆಪಿ ನಾಯಕತ್ವ, ಗುರುವಾರ ನಿರ್ಧರಿಸಿದೆ.
ಲೋಕಸಭೆಯ ವಿಪಕ್ಷ ನಾಯಕಿ ಸುಶ್ಮಾ ಸ್ವರಾಜ್, ರಾಜ್ಯಸಭೆಯ ವಿಪಕ್ಷ ನಾಯಕ ಅರುಣ್ ಜೇಟ್ಲಿ ಹಾಗೂ ಪಕ್ಷದ ಮಾಜಿ ಅಧ್ಯಕ್ಷ ರಾಜನಾಥ ಸಿಂಗ್ ಗುರುವಾರ ಮುಂಜಾನೆ ಭಿನ್ನಮತೀಯರನ್ನು ಭೇಟಿಯಾಗಿ ಮಸೂದೆಯ ಕುರಿತಾದ ಅವರ ಭಯವನ್ನು ನಿವಾರಿಸುವ ಪ್ರಯತ್ನ ಮಾಡಿದರು.
ಮಸೂದೆಯು ಲೋಕಸಭೆಯಲ್ಲಿ ಮಂಡನೆಯಾಗುವ ವೇಳೆ ಪಕ್ಷವು ಅದರ ಪರವಾಗ ಸಚೇತಕಾಜ್ಞೆ ಜಾರಿಗೊಳಿಸುವುದೆಂದು ಸಭೆಯ ಬಳಿಕ ಸುಶ್ಮಾ ತಿಳಿಸಿದರು.
ಗೋರಖಪುರದ ಸಂಸದ ಯೋಗಿ ಆದಿತ್ಯನಾಥ, ಮಾಜಿ ಕೇಂದ್ರ ಸಚಿವ ಹುಕುಂ ದೇವ್ ನಾರಾಯಣ ಯಾದವ್ ಹಾಗೂ ಲೋಕಸಭೆಯ ಪಕ್ಷದ ಮುಖ್ಯ ಸಚೇತಕ ರಮೇಶ್ ಬೈಸ್ ಮಸೂದೆಯನ್ನು ವಿರೋಧಿಸುತ್ತಿರುವ ಪ್ರಮುಖ ಬಿಜೆಪಿ ಸಂಸದರಾಗಿದ್ದಾರೆ.
ಕಾಂಗ್ರೆಸ್ ಬಲೆಯಲ್ಲಿ ಬೀಳದಿರಿ
ಮಹಿಳಾ ಮೀಸಲಾತಿ ಮಸೂದೆಯಂತಹ ವಿಚಾರದಲ್ಲಿ ‘ಆಂತರಿಕ ಪ್ರಜಾಸತ್ತೆ’ ಅಗತ್ಯ. ಇತರ ಪ್ರಮುಖ ವಿಚಾರಗಳಿಮದ ದೇಶದ ಗಮನವನ್ನು ಬೇರೆಡೆ ಸೆಳೆಯುವ ಕಾಂಗ್ರೆಸ್ನ ತಂತ್ರಕ್ಕೆ ಬಲಿಯಾಗಬೇಡಿ ಎಂದು ಆದಿತ್ಯನಾಥ್ ಬಿಜೆಪಿ ಸಂಸದರಿಗೆ ಕಿವಿ ಮಾತು ಹೇಳಿದ್ದಾರೆ.
ಭಯೋತ್ಪಾದನೆ, ನಕ್ಸಲ್ ಸಮಸ್ಯೆ, ಬೆಲೆಯೇರಿಕೆ ಇತ್ಯಾದಿ ಅನೇಕ ಸಮಸ್ಯೆಗಳು ಚರ್ಚೆಗೆ ಬಾಕಿಯಿವೆ. ಮಹಿಳಾ ಮೀಸಲಾತಿಯ ನೆಪದಲ್ಲಿ ಒಂದು ವಾರದ ಕಲಾಪ ವ್ಯರ್ಥವಾಯಿತು. ಮೀಸಲಾತಿಗಿಂತಲೂ ಪ್ರಮುಖ ಸಮಸ್ಯೆಗಳು ಹಲವಿವೆ. ಇದು ದೇಸದ ಗಮನ ಬೇರೆಡೆ ಸೆಳೆಯುವ ಕಾಂಗ್ರೆಸ್ನ ತಂತ್ರವಾಗಿದೆಯೆಂದು ಅವರು ಆರೋಪಿಸಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-12 00:00:00
|
|
|
|
|