ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ. |
ಪ್ರಕಟಿಸಿದ ದಿನಾಂಕ : 2010-03-11
ಮಂಗಳೂರು,ಮಾ.11: ರಾಷ್ಟ್ರೀಯ ವ್ರತ್ತಿ ಶಿಕ್ಷಣ ಪರಿಷತ್ತಿಗೆ ಸಂಯೋಜನೆಗೊಂಡಿರುವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ, ನೌಕರರ ಹಾಗೂ ಆಡಳಿತ ಮಂಡಳಿಗಳ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಖಾಸಗಿ ಐ.ಟಿ.ಐ ಮಂಡಳಿ, ಪ್ರಾಂಶುಪಾಲರು, ನೌಕರರು ಹಾಗೂ ವಿದ್ಯಾರ್ಥಿಗಳು ಇಂದು ನಗರದಲ್ಲಿ ರ್ಯಾಲಿ ಹಾಗೂ ಧರಣಿ ಸತ್ಯಾಗ್ರಹ ನಡೆಸಿದರು.
ಕಳೆದ ೫೫ ವರ್ಷಗಳಿಂದ ಜಿಲ್ಲೆಯ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಿರಂತರ ಶ್ರಮಿಸುತ್ತಿರುವ ಐ.ಟಿ.ಐ ನೌಕರರಿಗೆ ಇತರ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗಿರುವಂತೆ ಪಿಂಚಣಿ ಯೋಜನೆ, ಸೇವಾ ಹಿರಿತನದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನಾಕಾರರು ಅಗ್ರಹಿಸಿದರು.
ಖಾಸಗಿ ಐ.ಟಿ.ಐಗಳ ಬೆಳವಣಿಗೆಯ ನಿಟ್ಟಿನಲ್ಲಿ ಸರಕಾರ ಈ ಶಿಕ್ಷಣ ಸಂಸ್ಥೆಗಳ ಸ್ಥಿತಿಗತಿ ಅಧ್ಯಯನ ಕೈಗೊಂಡಿದ್ದರೂ, ಅದರ ವರದಿಯ ಅನುಷ್ಠಾನ ಈವರೆಗೆ ಅಗಿಲ್ಲ. ರಾಜ್ಯದಲ್ಲಿ ಎಳು ವರ್ಷಗಳನ್ನು ಪೊರೈಸಿರುವ ಅರ್ಹ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೂ ಅನುದಾನ ದೊರೆತಿಲ್ಲ. ಇದರಿಂದಾಗಿ ನೌಕರರ ಸ್ಥಿತಿ ಅತಂತ್ರವಾಗಿದೆ ಎಂದು ಸಭೆಯಲ್ಲಿ ಮಾತನಾಡಿದ ದ.ಕ ಮತ್ತು ಉಡುಪಿ ಜಿಲ್ಲಾ ಖಾಸಗಿ ಐ.ಟಿ.ಐ ನೌಕರರ ಸಂಘದ ಪದಾಧಿಕಾರಿಗಳು ಆರೋಪಿಸಿದರು.
ಸಂಘದ ಅಧ್ಯಕ್ಷ ವೈ.ಎನ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಕೆ.ಪ್ರಶಾಂತ್ ನಾಯಕ್, ಚಂದ್ರಹಾಸ್, ಚೇತನ್, ಸುಧೀರ್, ಗೋಪಾಲಕ್ರಷ್ಣ ಮೊದಲಾದವರು ನೇತ್ರತ್ವವಹಿಸಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|