ಜಾನಪದದ ಹರಿವಿನ ಸೆಲೆಯಾದ ನಾಟಕ ಸ್ಪರ್ಧೆ |
ಪ್ರಕಟಿಸಿದ ದಿನಾಂಕ : 2010-03-11
ಮುಂಬಯಿಯ ಕರ್ನಾಟಕ ಸಂಘವು ಹತ್ತು ಹಲವು ಅರ್ಥ ಪೂರ್ಣ ಚಟುವಟಿಕೆಗಳ ಮೂಲಕ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಮಹತ್ತರ ಕೊಡುಗೆ ನೀಡುತ್ತಿದೆ. ಪ್ರತಿ ವರ್ಷವೂ ನಡೆಯುವ ಕನ್ನಡ ನಾಟಕ ಸ್ಪರ್ಧೆ ಇದಕ್ಕೊಂದು ನಿದರ್ಶನ. ಈ ವರ್ಷದ ೧೪ನೇ ಅಖಿಲ ಭಾರತ ಕುವೆಂಪು ಸ್ಮಾರ ಕ ಕನ್ನಡ ಏಕಾಂಕ ಜಾನಪದ ನಾಟಕ ಸ್ಪರ್ಧೆ ಯಲ್ಲಿ ೧೪ ತಂಡಗಳು ಭಾಗವಹಿಸಿದ್ದು, ತಲಾ ಒಂದು ಗಂಟೆ ಅವಧಿಯ ನಾಟಕಗಳನ್ನು ಪ್ರದರ್ಶಿಸಿದವು.
ಮೂರು ದಿನಗಳ ಕಾಲ ನಡೆದ ಈ ಸ್ಪರ್ಧೆಯು ವಸ್ತುಶಃ ನಾಟಕೋತ್ಸವವೇ ಆಗಿತ್ತು. ಸಂಘಟಕರ ಕೌಶಲ ಮತ್ತು ಆತ್ಮೀಯತೆ, ತಂಡಗಳ ಶಿಸ್ತು ಮತ್ತು ಉತ್ಸಾಹ, ನಾಟಕಗಳ ಗುಣಮಟ್ಟ ಮತ್ತು ವೈವಿಧ್ಯ ಹಾಗೂ ಎಲ್ಲಕ್ಕಿಂತಲೂ ಮಿಗಿಲಾಗಿ ಕನ್ನಡದ ಪ್ರೇಕ್ಷಕರ ನಾಟಕ ಪ್ರೀತಿ ಮತ್ತು ಪ್ರೋ ತ್ಸಾಹ ಹಬ್ಬದ ವಾತಾವರಣವನ್ನು ಸೃಷ್ಟಿಸಿದವು. ಹೊರನಾಡ ಕನ್ನಡಿಗರಲ್ಲಿ ಕನ್ನಡದ ಛಾಪು ಎದ್ದು ಕಾಣುತ್ತಿತ್ತು. ಸಂಸ್ಕೃತಿ ಎಂದರೆ ಹೋರಾಟದ ವಸ್ತುವಲ್ಲ, ಅದು ಮನಸ್ಸುಗಳನ್ನು ಬೆಸೆಯುವ ಸಂಬಂಧ ಎನ್ನುವುದನ್ನು ಸಾಬೀತುಪಡಿಸಿದ ಸಂಘಟಕರು ಹಾಗೂ ನಾಟಕ ತಂಡಗಳು ಅಭಿನಂ ದನಾರ್ಹರು.
ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ನಾಟಕಗಳು `ಜಾನಪದ' ಅರ್ಥ ವಿಸ್ತಾರವನ್ನು ಹೆಚ್ಚಿಸಿ ದವು. ಸಂಗ್ಯಾ ಬಾಳ್ಯಾ ದಂತಹ ನಾಟಕಗಳಿಂದ ಹಿಡಿದು ಕೊಂಬಿನ ಕುದುರೀ, ಸಂಕರ, ಈಡಿಪ ಸ್, ಕಾಲ ಇತ್ಯಾದಿ ನಾಟಕಗಳು ಜಾನಪದವನ್ನು ಪ್ರಸ್ತುತ ಗೊಳಿಸಿದ ರೀತಿ ಉಲ್ಲೇಖನಾರ್ಹ. ತಮ್ಮ ಕಥೆಗಳಲ್ಲಿ, ಶೈಲಿಯಲ್ಲಿ, ನಿರೂಪಣಾ ತಂತ್ರಗಳಲ್ಲಿ ಅಥವಾ ಜಾನಪದ ಅರ್ಥ ವಿಶ್ಲೇಷಣೆ ಯನ್ನು ಮಾಡುವಲ್ಲಿ ಈ ನಾಟಕಗಳು ಜಾನಪದ ಲೋಕದ ವ್ಯಾಖ್ಯಾನಕ್ಕೆ ಹೊಂಬೆಳಕು ಚೆಲ್ಲಿದ ವು.
ಪ್ರದರ್ಶನಗೊಂಡ ನಾಟಕಗಳನ್ನು `ಜಾನಪದ' ಪರಿಕಲ್ಪನೆಯಡಿ ಯಲ್ಲಿ ಈ ರೀತಿ ವಿಂಗಡಿಸ ಬಹುದು. ಮೊದಲನೆಯದಾಗಿ, ಸಾಮಾನ್ಯ ವಾಗಿ ಜಾನಪದ ನಾಟಕಗಳೆಂದು ಈವರೆಗೆ ಗುರುತಿ ಸಿಕೊಂಡು ಬಂದಿರುವ ನಾಟಕಗಳು, (ಮುಖ್ಯವಾಗಿ ಕಂಬಾರರ ಜೋಕುಮಾರಸ್ವಾಮಿ, ಸಂಗ್ಯಾ ಬಾಳ್ಯಾ, ಬೆಪ್ಪುತಕ್ಕಡಿ ಬೋಳೇ ಶಂಕರ, ಹುಲಿಯ ನೆರಳು) ಎರಡನೆಯದಾಗಿ, ಜಾನಪದ ಮತ್ತು ಆಧುನಿಕ ಜಗತ್ತುಗಳ ಹೊಯ್ದಾಟಗಳನ್ನು ಜಾನಪದ ಶೈಲಿಯಲ್ಲಿ ಬಿತ್ತರಿಸುವ ನಾಟಕಗಳು (ರಾಕ್ಷಸ, ಕೊಂಬಿನ ಕುದುರೀ), ಮೂರನೆ ಯದಾಗಿ ಜಾನಪದ ಕಥೆಯನ್ನು ಆಧರಿಸಿದ ನಾಟಕ ಗಳು (ಮೃತ್ಯು, ಕೆರೆಗೆಹಾರ, ದೊರೆ, ಈಡಿಪಸ್, ಭೂತಾಳ ಪಾಂಡ್ಯ) ಹಾಗೂ ನಾಲ್ಕನೆಯದಾಗಿ ಜಾನಪದ ಆಚರಣೆಗಳನ್ನು ಆಧುನಿಕ ವಿಶ್ಲೇಷಣೆಗೆ ಒಡ್ಡುವ ನಾಟಕಗಳು (ಡೋಲು, ಅಶುದ್ಧ, ಸಂಕರ ಮತ್ತು ಕಾಲ).
ನಾಟಕದ ವಸ್ತು ಮತ್ತು ಶೈಲಿಯನ್ನು ಗಮನಿಸಿದಾಗ ಡಾ| ಚಂದ್ರ ಶೇಖರ ಕಂಬಾರರ ನಾಟಕ ಗಳನ್ನು `ಜಾನಪದ ನಾಟಕ'ಗಳೆಂದು ಕರೆಯಬಹುದಾದರೂ ಅವುಗಳೊಳಗಿನ ತಾಕಲಾಟಗಳು ಆಧುನಿಕ ಪ್ರಜ್ಞೆಯನ್ನು ಬಿಂಬಿಸಿ ವಿಶ್ಲೇಷಿಸುತ್ತವೆ. ಈ ನಾಟಕಗಳನ್ನು ಒಂದು ಗಂಟೆಯ ಮಿತ ಅವಧಿಯ ಪ್ರದರ್ಶನವಾಗಿಸುವುದೂ ನಿರ್ದೇಶಕ ರಿಗೊಂದು ಸವಾಲು. ರಂಗ ಪ್ರಸ್ತುತಿಗೊಳ್ಳು ವಾಗ ಜಾನಪದ, ಆಧುನಿ ಕತೆಗಳ ಮೇಳೈಸುವಿಕೆಯಲ್ಲಿ ಈ ನಾಟಕಗಳು ಆಕರ್ಷಕವೂ ಮತ್ತು ಅಷ್ಟೇ ಚಿಂತನಾಶೀಲವೂ, ಪ್ರಗತಿಪರವೂ ಆಗಬಲ್ಲವು. ಇಂತಹ ಸಂಕೀರ್ಣತೆಯುಳ್ಳ ನಾಟಕಗಳ ನ್ನು ೪ ತಂಡಗಳು ಪ್ರದರ್ಶಿಸಿದವು.
ಕಂಬಾರರ ಜೋಕುಮಾರಸ್ವಾಮಿಯನ್ನು ಕನ್ನಡ ಕಲಾ ಸಂಘ, ತುಂಗಭದ್ರಾ ಡ್ಯಾಂ ಇವರಿಗಾಗಿ ಧನಂಜಯ ಕುಲಕರ್ಣಿ ಅವರು ನಿರ್ದೇಶಿಸಿದ್ದರು. ಸಂಕಲನದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿ ಹೆಣ್ಣು/ಗಂಡು, ಪ್ರೇಮ/ಕಾಮ, ಶೀಲ/ಅಶ್ಲೀಲ ಅಥವಾ ಮಡಿ/ಮೈಲಿಗೆಗಳ ನಿರ್ಮಿತ ಆವರಣಗಳನ್ನು ಒಡೆಯುತ್ತಾ ಸಾಗುವ ನಾಟಕ ಮಾನವೀಯ ಸಂಬಂಧಗಳತ್ತ ಮುಖ ಮಾಡಿರು ವುದನ್ನು ಸೂಚಿಸುತ್ತದೆ. ಜಾನಪದ ನಾಟಕದ ಶೈಲಿಯನ್ನು ಶಿಸ್ತು ಬದ್ಧವಾಗಿ, ಚುರುಕಾಗಿ ನಿರ್ವ ಹಿಸಿದ ತಂಡವು ಸುಮಧುರ ಸಂಗೀತ, ಆಕರ್ಷಕ ರಂಗ ವಿನ್ಯಾಸಗಳಿಂದಾಗಿ ಹಾಗೂ ಗುಣಮಟ್ಟ ದ ಸಾಂಘಿಕ ಅಭಿನಯದಿಂದಾಗಿ ಪ್ರಥಮ ಬಹುಮಾನ ಪಡೆಯಿತು.
ಕಂಬಾರರ ಬೆಪ್ಪುತಕ್ಕಡಿ ಬೋಳೇಶಂಕರ (ನಿ.: ಮೈಮ್ ರಮೇಶ್, ತಂಡ: ಜಿಪಿಐಆರ್ ಮೈಸೂ ರು) ಸರಳ ನಿರೂಪಣೆಯಿಂದ ಆಹ್ಲಾದ ಕಾರಿಯಾಗಿತ್ತು. ಆಕರ್ಷಕ ವೇಷಭೂಷಣ, ಸುಂದರ ಸಂಗೀತ ನಾಟಕಕ್ಕೆ ಕಳೆಕಟ್ಟಿದವು. ಸುಮನಸಾ ಕೊಡವೂರು ಇವರ `ಹುಲಿ ನೆರಳು' (ನಿ.: ಬಾಸುಮ ಕೊಡಗು) ಗಂಭೀರ ನಾಟಕವಾದರೂ, ನಟರ ಅಭಿನಯದ ಸಾಮರ್ಥ್ಯದಿಂದ ಹಾಗೂ ಸುಂದರ ಬೆಳಕಿನ ವಿನ್ಯಾಸದಿಂದ ಪ್ರೇಕ್ಷಕರನ್ನು ಹಿಡಿದಿಟ್ಟಿತು.
ಶ್ರೀಮಾತಾ ಸಾಂಸ್ಕೃತಿಕ ಸಂಘದ ಸುಧಾ ಅನಂತ ಮೂರ್ತಿ ಅವರು ನಿರ್ದೇಶಿಸಿದ ಸಂಗ್ಯಾ ಬಾಳ್ಯಾ ಜಾನಪದ ನಾಟಕದ ಚೌಕಟ್ಟಿನಲ್ಲಿದ್ದೇ ಆಧುನಿಕ ಪ್ರಜ್ಞೆ ಯನ್ನು ತಟ್ಟಿತು. ಮುಖ್ಯವಾಗಿ ಸ್ನೇಹ-ಪ್ರೀತಿ-ಕಾಮ ಗಳ ಶೋಧನೆಯೊಂದಿಗೆ ಸಂಪತ್ತಿನ ಒಡೆತನ ತರುವ ದೌರ್ಬಲ್ಯಗಳನ್ನೂ ಎತ್ತಿ ತೋರಿಸಿದ್ದು ಈ ರಂಗ ಪ್ರಸ್ತುತಿಯ ವಿಶೇಷ. ಮಹಿಳೆಯರೇ ಎಲ್ಲ ಪಾತ್ರಗಳನ್ನು ನಿರ್ವಹಿ ಸಿದ್ದು ಶ್ಲಾಘನೆಗೊಳಗಾಯಿತು. ಮಹಿಳಾ ತಂಡವೆಂಬ `ಅನುಕಂಪ'ಕ್ಕೆ ಆಸ್ಪದ ನೀಡದೇ ಸ್ವಶಕ್ತಿಯಿಂದ ತೃತೀಯ ಬಹುಮಾನ ಗಳಿಸಿತು.
ಜಾನಪದ ಶೈಲಿಯನ್ನು ರೂಢಿಸಿಕೊಂಡು ಆಧುನಿಕ ತಲ್ಲಣಗಳನ್ನು ಅರ್ಥೈಸುವ ನಾಟಕಗಳ ವರ್ಗದಲ್ಲಿ ರಾಕ್ಷಸ ಪ್ರಮುಖ ನಾಟಕ. ಹೂಲಿ ಚಂದ್ರಶೇಖರ್ ಅವರ ರಚನೆಯನ್ನು ನಿರ್ದೇಶಿಸಿದ ಮಾಲತೇಶ ಬಡಿಗೇರ ಆಧುನಿಕ ಜಗತ್ತಿನ ಕುಡಿತದ ವ್ಯಸನದ ರಾಕ್ಷಸ ನನ್ನೇ ಗುರಿಯಾಗಿಸಿ ನಿರೂಪಣೆಯನ್ನು ಕಟ್ಟಲು ಸಫಲರಾಗಿದ್ದಾರೆ. ಆಧುನಿಕತೆ ಮತ್ತು ಸಂಪ್ರದಾಯಗಳ ಕಸಿಯಾಗಿ ರುವ ಗಿಂಡಿ ಸ್ವಾಮಿ, ನಾಟಕದ ಸಮಕಾಲೀನತೆಗೆ ಸಾಕ್ಷಿ. ಮಾಧ್ಯಮದ ಸತ್ಯವನ್ನೂ, ಜಾನಪದ ಕತೆಯೊಳಗಿನ ಸತ್ಯಗಳನ್ನೂ ಬಿಚ್ಚಿಡುತ್ತಾ ಸಾಗುವ ನಾಟಕ ವನ್ನು ನಟ ವರ್ಗವು ಸಮರ್ಥವಾಗಿ ರಂಗಕ್ಕೇರಿಸಿದೆ. ಹಾಗಾಗಿ ಈ ಪ್ರಯೋಗ ಎರಡನೇ ಬಹುಮಾನ ಗಳಿಸಿತು.
ಪ್ರಸನ್ನ ಕುಮಾರ್ ಅವರ ಕೊಂಬಿನ ಕುದುರೀ (ನಿ.: ರಮೇಶ್ ಕುಮಾರ್ ಎಂ.ಜಿ.)ಯನ್ನು ಈ ಪ್ರಸ್ತುತಗೊಳಿಸಿದ ರಂಗಶಿಲ್ಪಿ ಕಲಾವಿ ದರ ಬದ್ಧತೆ, ನಾಟಕದ ಸರಳ ಸೂತ್ರಗಳನ್ನು ಧಿಕ್ಕರಿಸು ತ್ತಾ ನಾಟಕ ಕಟ್ಟಿ ಕೊಳ್ಳುತ್ತಾ ಹೋಗುವ ರಂಗಪ್ರಕ್ರಿಯೆ ಪರಿಣಾಮಕಾರಿಯಾಗಿತ್ತು.
ಮೂರನೇ ವರ್ಗದ, ಜಾನಪದ ಕಥೆ ಆಧಾರಿತ ಮೃತ್ಯು ನಾಟಕದ ತಂಡ ಸ್ಫೂರ್ತಿ, ಬೆಳಕಿನ ಆಟಗಳು ಖುಷಿ ನೀಡಿದವು. ಕೆರೆಗೆ ಹಾರದ ನಟಿಯರ ಅಭಿವ್ಯಕ್ತಿ ಪರಿಣಾಮಕಾರಿಯಾಗಿತ್ತು.
ಗ್ರೀಕ್ ಜಾನಪದ ಕಥೆ ಆಧಾರಿತ ದೊರೆ ಈಡಿಪಸ್ನ ಅಂತ್ಯ ದಲ್ಲಿ ಈಡಿಪಸ್ನನ್ನು ಅರಮನೆಯ ಒಳಗೆ ಸ್ವೀಕರಿಸುವ ಭಾವನೆ ಮೆಚ್ಚುಗೆಗೆ ಪಾತ್ರವಾಯಿತು. ಜಾನಪದ ಆಚರಣೆಗಳನ್ನು ವಿಶ್ಲೇಷಿ ಸುವ ನಾಟಕಗಳಲ್ಲಿ ಜಾನಪದ ರಂಗ ಮಾಧ್ಯಮ, ಚನ್ನರಾಯಪಟ್ಟಣ ಇವರ ಸಂಕರ (ರ.: ಡಾ| ಚಂದ್ರು ಕಾಳೇಹಳ್ಳಿ, ನಿ.: ಚರಣ್) ಪ್ರಮುಖ ವಾದುದು. ಜಾತಿಯ ನಿಲುವುಗಳನ್ನು ಪ್ರಶ್ನಿಸುವ, ಜಾತಿಯ ಆಚಾರ ಗಳೊಳಗೆ ಶೋಷಣೆಗೊಳಗಾಗಿರುವ ಧ್ವನಿ ಸಂಕರದಲ್ಲಿದೆ.
ನಮ ತುಳುವೆರ್ ಕಲಾ ಸಂಘಟನೆ, ಮುದ್ರಾಡಿ ಇವರ ಅಶುದ್ಧ (ರೂಪಾಂತರ/ನಿರ್ದೇಶನ ಸುಕುಮಾರ್ ಮೋಹನ್) ಶೋಷಣೆಯ ವ್ಯವಸ್ಥೆಯ ಹಿಂದಿರುವ ಧರ್ಮ ಮತ್ತು ರಾಜಕೀಯದ ಆಟಗಳನ್ನು ಬಯಲು ಮಾಡುತ್ತಾ, ಜಾನಪದ ವಾದ್ಯವನ್ನು ನುಡಿಸುವಲ್ಲಿ ಜಾತೀ ಯತೆಯ ಪ್ರಶ್ನೆಗಳನ್ನು ಎತ್ತುತ್ತದೆ. ಶೋಷಣೆಯ ಕ್ರೌರ್ಯಕ್ಕೆ ಜಾನಪದ ಬಲಿಯಾಗುವುದನ್ನು ಸಂಕೇತಿ ಸುತ್ತದೆ. ಕನ್ನಡ ಸೇವಾ ಸಂಘ, ಪೂವಾಯ್ ಇವರ ಡೋಲು ಕೂಡ ಡೋಲು ಬಾರಿಸುವ ಜಾತಿ ಶೋಷಣೆಯನ್ನು ತೆರೆದಿಟ್ಟು, ಡೋಲು ಬಾರಿಸುವವನು ಅಸಹಾಯಕನಾಗುವುದನ್ನು ತೋರಿಸು ತ್ತದೆ. ಪ್ರಯೋಗಶೀಲ ನಾಟಕ ಕಾಲ (ತಂಡ: ರಂಗ ಲೋಕ, ರ/ನಿ: ಗುರುರಾಜ ಮಾರ್ಪಳ್ಳಿ) ಮನುಷ್ಯನು ಅಧಿಕಾರ, ಧರ್ಮ ಮತ್ತು ರಾಜಕೀಯದ ಕೆಸರಲ್ಲಿ ತೊಳಲಿ ಪ್ರಕೃತಿಗೆ/ಜಾನಪದಕ್ಕೆ ಮರಳಬೇಕಾದ ಅನಿವಾರ್ಯತೆ ಮೂಡುವುದನ್ನು ಸಂಕೇತಿಸುತ್ತದೆ.
ಈ ಎಲ್ಲ ನಾಟಕಗಳೂ ಜಾನಪದ ಎಂದರೆ ಹಿಂದಿನ ತಲೆಮಾರು ಕಟ್ಟಿಕೊಟ್ಟ ಸ್ಥಿರ, ಸುಂದರ ಕಲಾಪ್ರಕಾರ ಎನ್ನುವ ಸಾಮಾನ್ಯ ಧೋರಣೆಯನ್ನು ಪ್ರಶ್ನಿಸುತ್ತದೆ. ಜಾನಪದವನ್ನು ಮಾನವನ ಬದುಕಿನ ಸ್ಥಿತ್ಯಂತರಗಳ ಮೂಲಕ ಗ್ರಹಿಸಲು ಪ್ರಯತ್ನಿಸುವುದನ್ನು ಮತ್ತು ತಮ್ಮ ತಮ್ಮ ದೃಷ್ಟಿ ಕೋನಗಳನ್ನು ಪ್ರಾಸಂಗಿಕವಾಗಿ ನಿರೂಪಿಸುತ್ತಾ ವರ್ತಮಾನಕ್ಕೆ ಅಳವಡಿಸಿ ಶಾಂತಿ ಸಮಷ್ಟಿ ಯತ್ತ ಮುಖ ಮಾಡಿರುವುದನ್ನು ಗಮನಿಸಬಹುದು. ಹೀಗೆ ಜಾನಪದವನ್ನು ಆರೋಗ್ಯಪೂರ್ಣ ವಾಗಿ, ವಿಶಾಲ ಮನೋಭಾವದಿಂದ ನೋಡುವ ಪ್ರಯತ್ನ ಸಫಲವಾಗಲಿ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|