ಮು೦ಬೈ: ಪ್ರಚೋದನಕಾರಿ ಭಾಷಣ ಮಾಡದ೦ತೆ ರಾಜ್ಗೆ ಸು. ಕೋ. ತಾಕೀತು |
ಪ್ರಕಟಿಸಿದ ದಿನಾಂಕ : 2010-03-09
ಮುಂಬಯಿ, ಮಾ. ೮: ಉತ್ತರ ಭಾರತೀಯರನ್ನು ಗುರಿ ಮಾಡಿಕೊಂಡು ಪ್ರಚೋದನಕಾರಿ ಭಾಷ ಣ ಮಾಡದಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಅವರಿಗೆ ಸರ್ವೋ ಚ್ಚ ನ್ಯಾಯಾಲಯ ತಾಕೀತು ಮಾಡಿದೆ. ಪ್ರಚೋದನಕಾರಿ ಭಾಷಣದ ಪರಿಣಾಮವಾಗಿ ರಾಜ್ ವಿರುದ್ಧ ವಿವಿಧೆಡೆ ಹಲವಾರು ಕ್ರಿಮಿನಲ್ ಕೇಸುಗಳು ದಾಖಲಾಗಿವೆ.
ನಿಮ್ಮ ವಿರುದ್ಧ ಕ್ರಿಮಿನಲ್ ಕೇಸುಗಳು ದಾಖಲಾಗುತ್ತಾ ಹೋಗಬಹುದು. ಇಂತಹ ಭಾಷಣಗಳನ್ನು ನೀವೇಕೆ ನಿಲ್ಲಿಸಬಾರದು. ನೀವು ಪದೇ ಪದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದೀರಿ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಕೆ. ಜಿ. ಬಾಲಕೃಷ್ಣನ್ ಮತ್ತು ಜಸ್ಟಿಸ್ ಬಿ.ಎಸ್. ಚೌಹಾಣ್ ಅವರನ್ನೊಳಗೊಂಡಿರುವ ನ್ಯಾಯಪೀಠ ರಾಜ್ಗೆ ಹೇಳಿದೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-09 00:00:00
|
|
|