ಮು೦ಬಯಿ: ಸಾಹಿತಿ ವಿರೂಪಾಕ್ಷ ಕುಕರ್ಣಿಯವರಿಗೆ ವರದರಾಜ ಆದ್ಯ ಪ್ರಶಸ್ತಿ ಸ್ಮಾರಕ ಪ್ರದಾನ |
ಪ್ರಕಟಿಸಿದ ದಿನಾಂಕ : 2010-03-08
ಮುಂಬಯಿ: ಗಡಿನಾಡಿನಲ್ಲಿರುವ ಬೆಳಗಾವಿಯ ರಾಜಕೀಯ ವಾತಾವರಣದಿಂದಾಗಿ ನಡೆಯುತ್ತಿ ರುವ ಕನ್ನಡ-ಮರಾಠಿಯ ವಾದಗಳ ಕಲುಷಿತ ಪ್ರಭಾವ ಬೆಳಗಾವಿಯವರೇ ಆಗಿರುವ ನನ್ನ ಹಾಗೂ ನನ್ನ ಪತ್ನಿ ಉಮಾ ಇಬ್ಬರ ಮೇಲೂ ಇತ್ತು. ಇದರಿಂದ ಹೊರಬರಲು ಅನುವಾದದ ಮೂಲಕ ಸಮನ್ವಯವನ್ನು ಸಾಧಿಸಬಹುದಾದ ಒಂದು ಗುರಿ ನಮಗೆ ಲಭಿಸಿತು ಎಂದು ಹೆಸ ರಾಂತ ಅನುವಾದ ಸಾಹಿತಿ ಪುಣೆಯ ವಿರೂಪಾಕ್ಷ ಕುಲಕರ್ಣಿ ಹೇಳಿದರು.
ಫೆ.೨೫ರಂದು ಸಂಜೆ ಮುಂಬೈನ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಕರ್ನಾಟಕ ಸಂಘದ ೨೦೦೯ನೇ ಸಾಲಿನ ವರದರಾಜ ಆದ್ಯ ಸ್ಮಾರಕ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡು ತ್ತಾ ಪತ್ನಿ ಉಮಾ ಕುಲಕರ್ಣಿ ಅವರ ಅನುವಾದಗಳಿಂದಾಗಿ ಕನ್ನಡದ ಉತ್ತಮವಾದ ಸಾಹಿತ್ಯ ಕೃತಿಗಳು ಮರಾಠಿಯ ಓದುಗರನ್ನು ತಲುಪಿ ಅವುಗಳ ಬಗೆಗೆ ಅವರಲ್ಲಿ ಆತ್ಮೀಯತೆ ಹುಟ್ಟಿಕೊಳ್ಳ ಲು ಸಾಧ್ಯವಾಯಿತು.
ಸಾವರ್ಕರ್ ಜನ್ಮಶತಾಬ್ಧಿಯ ನಿಮಿತ್ತ ಅವರ `ನನ್ನ ಜೀವಾವಧಿ ಶಿಕ್ಷೆ'ಯನ್ನು ಮೊದಲಿಗೆ ಅನು ವಾದ ಮಾಡಿದೆ. ಕಳೆದ ಮೂರು ದಶಕಗಳಿಂದ ಅನುವಾದದ ಕೆಲಸವನ್ನು ಮಾಡುತ್ತಿದ್ದು ಈವರೆಗೆ ೧೮ ಪುಸ್ತಕಗಳು ಪ್ರಕಟಗೊಂಡಿವೆ. ಒಬ್ಬ ಅನುವಾದಕನಿಗೆ ಜೀವನದಲ್ಲಿ ಹಲವಾರು ಲೇಖಕರ ಪರಿಚಯವಾಗುವುದರ ಮೂಲಕ ಇದಕ್ಕಿಂತ ಹೆಚ್ಚಿಗೆ ಮತ್ತೇನೂ ಬೇಕಿಲ್ಲ ಎಂದರು.
ಮುಖ್ಯ ಅತಿಥಿ ಶೋಟ್ಗನ್ ಎಂಟರ್ಟೈನ್ಮೆಂಟ್ ಪ್ರೈ.ಲಿ. ಸಿಇಓ ರವಿಮಲ್ಲಿಕ್, ಗೌರವ ಅತಿಥಿ ಖ್ಯಾತ ಮರಾಠಿ ರಂಗಕರ್ಮಿ ಅರವಿಂದ ಪಿಳಗಾಂವ್ಕರ್ ಮಾತನಾಡಿದರು.ಕರ್ನಾಟಕ ಸಂಘದ ಅಧ್ಯಕ್ಷ ಮನೋಹರ ಎಂ. ಕೋರಿ ಮತ್ತು ರವಿ ಮಲ್ಲಿಕ್ ಅವರು ವಿರೂಪಾಕ್ಷ ಕುಲಕರ್ಣಿಯವರಿಗೆ ಶಾಲು, ೧೧ ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಗಳನ್ನಿತ್ತು ವರದರಾಜ ಆದ್ಯ ಸ್ಮಾರಕ ಪ್ರಶಸ್ತಿ ಯನ್ನು ನೀಡಿ ಗೌರವಿಸಿದರು.
ಸಂಘದ ಉಪಾಧ್ಯಕ್ಷ ಭರತಕುಮಾರಕ ಪೊಲಿಪು, ಗೌ. ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಹಾಜರಿದ್ದು ಸಹಕರಿಸಿದರು. ಪ್ರಕಾಶ್ ಬುರ್ಡೇ ನಿರೂಪಿಸಿದರು. ಬಿ.ಜಿ. ನಾಯಕ್ ವಂದಿಸಿದರು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-08 00:00:00
|
|
|