ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಭೂಸ್ಖಲನ: ಯಾರಿಗೆ ಬೇಕು ಈ ಲೋಕ?

ಹವಾಮಾನ ವೈಪರೀತ್ಯದ ವಿಷಯ ಬಂದಾಗಲೆಲ್ಲಾ ಹಿಮಾಲಯದ ನೀರ್ಗಲ್ಲಿನದೇ ಯೋಚನೆ. ಪರಿಸರವಾದಿಗಳು ಹಿಮಾಲಯದ ನೀರ್ಗಲ್ಲುಗಳ ಮೇಲೆ `ಮಲಗಿಬಿಟ್ಟರು'. ಆದರೆ ಅದಕ್ಕಿಂತ ಪಶ್ಚಿಮ ಘಟ್ಟಗಳ ಮೇಲೆ ಹೆಚ್ಚು ಪರಿಣಾಮ ಆಗುತ್ತದೆ ಎಂಬ ಜಾಗೃತಿ ಕಾಣಲೇ ಇಲ್ಲ.

ಪಶ್ಚಿಮಘಟ್ಟವೆಂಬ ದೇವಲೋಕಕ್ಕೆ ನಿರಂತರವಾಗಿ ರಕ್ಕಸರ ದಾಳಿ ಆಗುತ್ತಲೇ ಇದೆ. ಈ ದೇವ ಲೋಕದ ವ್ಯಾಪ್ತಿ ಒಂದು ರಾಜ್ಯಕ್ಕೆ ಸೇರಿದ್ದಲ್ಲ. ಕರ್ನಾಟಕ, ಗೋವಾ, ತಮಿಳುನಾಡು, ಕೇರಳ ಸೇರಿ ೬ ರಾಜ್ಯಗಳನ್ನು ವ್ಯಾಪಿಸಿದೆ. ಈ ಲೋಕಕ್ಕೆ ಭಾಷಾ ವ್ಯಾಪ್ತಿ ಇಲ್ಲ, ನದಿಗಾಗಿ ಜಗಳವಿಲ್ಲ, ಗಡಿಯ ಸಮಸ್ಯೆ ಇಲ್ಲವೇ ಇಲ್ಲ. ಏಕೋಭಾವದ ಈ ಪರಿಸರಕ್ಕೆ ಹಲವು ದಶಕದಿಂದ ಆತಂಕ ಮಾತ್ರ ಇದ್ದೇ ಇದೆ.

ರಕ್ಕಸರ ದಾಳಿ ವಿರುದ್ಧ ಹೋರಾಟ ಮಾತ್ರ ನಿಂತಿಲ್ಲ. ೬ ರಾಜ್ಯಗಳಲ್ಲಿ ಒಂದರ ಹಿಂದೊಂದು ಯೋಜನೆಗಳು ಪಶ್ಚಿಮಘಟ್ಟ ಪ್ರವೇಶಿಸಿದಾಗ ಅದನ್ನು ತಡೆಯೊಡ್ಡುವ ಕೆಲಸ ನಡೆದೇ ಇದೆ. ಆದರೆ ಈಗ ಹೋರಾಟಕ್ಕೆ ಸಂಘಟಿತ ಮೂರ್ತರೂಪ ಸಿಕ್ಕಿದೆ. ಪರಿಸರವಾದಿಗಳು, ಹೋರಾಟ ಗಾರರು, ತಜ್ಞರು, ಪರಿಸರ ಪ್ರೇಮಿ ಸಂಘಟನೆಗಳು ಒಂದೆಡೆ ಸೇರಿರುವುದು ಸಂತಸದ ಸಂಗತಿ.

ಈ ಹೋರಾಟದ ನೇತೃತ್ವ ವಹಿಸಿರುವ `ಅಪ್ಪಿಕೋ ಚಳವಳಿ'ಯ ಪಾಂಡುರಂಗ ಹೆಗಡೆ ಮಾತಿನಲ್ಲಿ ವಾಸ್ತವವನ್ನು ಕೇಳುವುದಾದರೆ...

ಹವಾಮಾನ ವೈಪರೀತ್ಯದ ವಿಷಯ ಬಂದಾಗಲೆಲ್ಲಾ ಹಿಮಾಲಯದ ನೀರ್ಗಲ್ಲಿನದೇ ವರಿ. ಪರಿ ಸರವಾದಿಗಳು ಹಿಮಾಲಯದ ನೀರ್ಗಲ್ಲುಗಳ ಬಗ್ಗೆ ಹೆಚ್ಚು ಆತಂಕ ವ್ಯಕ್ತಪಡಿಸಿದರು. ಆದರೆ ಅದಕ್ಕಿಂತ ಪಶ್ಚಿಮ ಘಟ್ಟಗಳ ಮೇಲೆ ಹೆಚ್ಚು ಪರಿಣಾಮ ಆಗುತ್ತದೆ ಎಂಬುದು ಚರ್ಚೆ ಆಗಲೇ ಇಲ್ಲ. ಹೀಗಾಗಿ ೨೦೦೯ರಲ್ಲಿ ಮತ್ತೆ ಪಶ್ಚಿಮಘಟ್ಟ ಅಭಿಯಾನದ ಸದಸ್ಯರೆಲ್ಲಾ ಒಂದೆಡೆ ಸೇರಲು ತೀರ್ಮಾನಿಸಿದರು.

ಮತ್ತೆ ಗೋವಾದಿಂದಲೇ ಆಂದೋಲನ ಕೈಗೆತ್ತಿಕೊಳ್ಳಲು ಆರಂಭಿಸಲು ತೀರ್ಮಾನಿಸಿದರು. ಮೊ ದಲ ಸಭೆ ಗೋವಾದಲ್ಲಿ ನಡೆಯಿತು. ಗೋವಾ ಎಂದರೆ ಬೀಚ್ ಕಣ್ಣಮುಂದೆ ನಿಲುತ್ತದೆ. ಇಲ್ಲೇಕೆ ಹೋರಾಟ ಎಂದು ಮನಸ್ಸಿನಲ್ಲಿ ಬರುವುದು ಸಹಜ. ಆದರೆ ಗೋವಾದಲ್ಲಿರುವ ಪಶ್ಚಿಮಘಟ್ಟಕ್ಕೆ ಗಣಿಗಾರಿಕೆ ಕೊಡಲಿ ಪೆಟ್ಟುಕೊಟ್ಟಿತ್ತು.

ಸಭೆಯಲ್ಲಿ ಮುಂದಿನ ಒಂದು ವರ್ಷದಲ್ಲಿ ಏನೇನು ಕಾರ್ಯಕ್ರಮ ರೂಪಿಸುವ ಬಗ್ಗೆ ಚರ್ಚಿಸಲಾಯಿ ತು. ಈ ಪ್ರಯತ್ನಕ್ಕೆ ಮೊದಲ ಜಯವೂ ಸಿಕ್ಕಿದೆ.

ಪಶ್ಚಿಮಘಟ್ಟ ಉಳಿಸಲು ಪ್ರಾಧಿಕಾರ ರಚಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾ ಯಿತು. ಅದರ ಪ್ರತಿಫಲ ಈಗ ಸಹ್ಯಾದ್ರಿ ಪರಿಸರ ಪ್ರಾಧಿಕಾರ ರಚನೆಗೆ ಕೇಂದ್ರ ಸಚಿವರು ಅಸ್ತು ಎಂದಿದ್ದಾರೆ. ರಾಷ್ಟ್ರೀಯ ಹವಾಮಾನ ವೈಪರೀತ್ಯ ಕ್ರಿಯಾಯೋಜನೆ ಅಡಿ ೮ ಮಿಷನ್ ರಚಿಸಲಾ ಯಿತು. ಅದರಲ್ಲಿ ಪಶ್ಚಿಮಘಟ್ಟ ಸೇರಿಸಿರಲಿಲ್ಲ. ಇದನ್ನು ಸೇರಿಸಿ ಎಂಬ ದೊಡ್ಡ ಬೇಡಿಕೆಯೂ ಇದೆ.

ಪಶ್ಚಿಮಘಟ್ಟ ಪರವಾದ ಹೋರಾಟದಲ್ಲಿ ಗೆದ್ದಿದ್ದು ಸೋತಿದ್ದು ಎರಡೂ ಇದೆ. ಗೆದ್ದಿದ್ದು ಹಣಕೋಣ, ಗುಂಡ್ಯಾ (ಕರ್ನಾಟಕದಲ್ಲಿ) ಊಟಿ ಬಳಿಯಲ್ಲಿ ಭೂಗರ್ಭದಲ್ಲಿ ನಡೆಯಬೇಕಾಗಿದ್ದ ನ್ಯೂಟ್ರಿನೋ ಪ್ರಾಜೆಕ್ಟ್ ಸ್ಥಗಿತವಾಯಿತು. ಹುಬ್ಬಳ್ಳಿ-ಅಂಕೋಲ ಸದ್ಯಕ್ಕೆ ನಿಂತಿದೆ.

ಕುದುರೆಮುಖ ಗಣಿಗಾರಿಕೆ ಪುನಾರಂಭ ಆಗಲಿಲ್ಲ. ಕೇರಳದ `ಅತಿರಪಲ್ಲಿ ಪವರ್ ಪ್ರಾಜೆಕ್ಟ್' ಕೂಡ ಈ ಪಟ್ಟಿಯಲ್ಲಿ ಸೇರಿದೆ.

ಕಳೆದುಕೊಂಡಿರುವ ಪಟ್ಟಿಯೂ ದೊಡ್ಡದಿದೆ. ಮಹಾರಾಷ್ಟ್ರದಲ್ಲಿ ಪ್ರತಿ ೨೦ ಕಿಲೋಮೀಟರ್‌ಗೆ ಒಂದು ವಿದ್ಯುತ್ ಯೋಜನೆ ಬರುತ್ತಿದೆ. ಈ ಯೋಜನೆ ಮಾಡಿದರೆ ಉಪಯುಕ್ತ ಎಂಬ ವರದಿ ಯೂ ಬಂದಿದೆ. ಪವರ್ ಪ್ರಾಜೆಕ್ಟ್ ಮಾಡುವುದರಿಂದ ಅದರಿಂದ ಉತ್ಪಾದನೆಯಾಗುವ ಧೂಳು ಆಪೋಸ್ ಮ್ಯಾಂಗೋ ಇಳುವರಿ ಕೊಡಲು ಕಾರಣವಾಗುತ್ತಂತೆ.

ಪರಿಸರ ಪ್ರವಾಸದ ಹೆಸರಿನಲ್ಲಿ ಅಪಾಯ ಹೆಚ್ಚಾಗುತ್ತಲೇ ಇದೆ. ಸಬ್ಸಿಡಿ ಸಿಗುತ್ತದೆಂದು ಕಂಡ ಕಂಡಲೆಲ್ಲಾ ಪರಿಸರ ಪ್ರವಾಸೋದ್ಯಮಕ್ಕೆ ಮುಂದಾಗಿದ್ದಾರೆ. ಕಂಡ ಕಂಡ ಕಡೆ ಕಟ್ಟಡ ಕಟ್ಟುತ್ತಿ ದ್ದಾರೆ. ಇದರಿಂದ ಪರಿಸರ ಹಾಳಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಶೇಕಡಾ ೪೦ರಷ್ಟು ಪಶ್ಚಿಮಘಟ್ಟ ಹೊಂದಿರುವ ಕರ್ನಾಟಕದಲ್ಲಿ ಆತಂಕ ಹೆಚ್ಚೇ ಇದೆ. ೨೬೦ ಮೈಕ್ರೋ ಹರ್ಡಲ್ ಪ್ರಾಜೆಕ್ಟ್ ಸಿದ್ಧವಾಗಿದೆ. ಇದಕ್ಕಾಗಿ ಸೈಟ್ ಸಿದ್ಧವಾಗಿದೆ. ಇವುಗಳನ್ನು ಎಲ್ಲಿ ಮಾಡುತ್ತಿದ್ದಾರೆ ಎಂದರೆ, ಅರಣ್ಯದೊಳಗೇ ಮಾಡುತ್ತಿದ್ದಾರೆ. ಯೋಜನೆ ಸರ್ಕಾರ ರೂಪಿಸುವುದಲ್ಲ ಖಾಸಗಿಯದ್ದು.

ಈಗಾಗಲೇ ೭ ಯೋಜನೆಗಳು ಕಾರ್ಯರೂಪಕ್ಕೆ ಬಂದಿದೆ. ಘಟ್ಟದಲ್ಲಿರುವ ನದಿ ತೊರೆಗಳು ದಟ್ಟ ಅರಣ್ಯ ಪ್ರದೇಶದಲ್ಲಿ ಮಾಡುವುದರಿಂದ ಆ ಪ್ರದೇಶದ ವಾಸಸ್ಥಾನ ಹೊಂದಿದ ಪ್ರಾಣಿಗಳು ವಲಸೆ ಹೋಗಬೇಕಾಗುತ್ತದೆ. ವಲಸೆ ಹೋಗುವುದಾದರೂ ಎಲ್ಲಿಗೆ?

ಉತ್ತರ ಕರ್ನಾಟಕ, ಶಿವಮೊಗ್ಗ, ಉಡುಪಿ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿ ಯಲ್ಲೇ ಈ ಯೋಜನೆಗಳು ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖವಾಗಲಿವೆ.

ದಟ್ಟ ಅರಣ್ಯದ ಕಡೆಯೇ ಪ್ರಾಜೆಕ್ಟ್ ಆರಂಭವಾಗುತ್ತದೆ. ಅಂದರೆ ಅಪರೂಪದ ಪ್ರಾಣಿಗಳು ಇರು ವುದೇ ಅಲ್ಲಿ. ಚಿಕ್ಕ ಚಿಕ್ಕ ತೊರೆಗಳಿರುವ ಕಡೆಯೇ ಪ್ರಾಣಿಗಳು ಹೆಚ್ಚಾಗಿರುತ್ತವೆ.

ಹಾಗಾದರೆ ನೀತಿ ನಿಯಮಗಳೆಲ್ಲಿ ಊರುಬಿಟ್ಟವೇ ಎಂಬ ಪ್ರಶ್ನೆ ಏಳಬಹುದು. ಆದರೆ ನಿಯಮ ಗಳಲ್ಲಿ ಅನೇಕ ತಪ್ಪಿಸಿಕೊಳ್ಳುವ ಉಪಾಯಗಳಿವೆ. ಇವನ್ನೇ ಉಪಯೋಗಿಸಿಕೊಂಡು ಸ್ಥಳೀಯ ವಾಗಿಯೇ ಅನುಮತಿ ಪಡೆದು ಯೋಜನೆ ಕಾರ್ಯರೂಪಕ್ಕೆ ಬರುತ್ತಿವೆ.

ಯೋಜನೆ ಅಂದ ಮೇಲೆ ಯಂತ್ರೋಪಕರಣಗಳು ಕಾಡಿನೊಳಗೆ ಪ್ರವೇಶ ಮಾಡಲೇಬೇಕು. ಇದಾದ ಮೇಲೆ ಕಟ್ಟಡ ನಿರ್ಮಾಣ, ಸಾಮಗ್ರಿ ಕೊಂಡೊಯ್ಯಲು ಏಕಾ ಏಕಿ ರಸ್ತೆ ಮಾಡಿಯೇ ಮಾಡುತ್ತಾರೆ. ಹೀಗೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಆದರೆ, ಅನೇಕ ಕಡೆಗಳಲ್ಲಿ ಜನ ಜಾಗೃತರಾಗಿ ಈ ಬೆಳವಣಿಗೆಗೆ ಅವಕಾಶ ಕೊಟ್ಟಿಲ್ಲ.

ಇನ್ನೊಂದು ಕುದಿಯುವ ವಿಚಾರವೆಂದರೆ ಸಿಡಿ‌ಎಂ- `ಕ್ಲೀನ್ ಡೆವಲಪ್‌ಮೆಂಟ್ ಮೆಕಾನಿಸಂ ಪ್ರಾಜೆಕ್ಟ್'ನಲ್ಲಿಯೇ ಯೋಜನೆ ರೂಪುಗೊಳ್ಳುತ್ತಿವೆ. ಇವಕ್ಕಾಗಿ ಸರ್ಕಾರದಿಂದ ಹೆಚ್ಚು ಅನುದಾನ ಇದೆ. ಇದು ಖಾಸಗಿ ಪ್ರಾಜೆಕ್ಟ್‌ಗಳು. ಗ್ರೀನ್ ಟೆಕ್ನಾಲಜಿ ಅಂತಾರೆ. ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್‌ಗೆ ಕೊಟ್ಟು ಕಾಸು ಮಾಡಿಕೊಳ್ಳುತ್ತಾರೆ.

ಆತಂಕಗಳು ಹಲವು:

೧. ಮಹಾರಾಷ್ಟ್ರದ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಪ್ರತಿ ೨೦ ಕಿಲೋಮೀಟರ್‌ಗೆ ಒಂದು ಪವರ್ ಪ್ಲಾಂಟ್ ಬರುತ್ತಿದೆ.

೨. ಊಟಿ ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಭೂ ಕುಸಿತಗಳು ನಡೆಯು ತ್ತಿದೆ. ಹವಾಮಾನ ವೈಪರೀತ್ಯದ ಪರಿಣಾಮ ಇದು.

೩. ಕರ್ನಾಟಕದಲ್ಲಿ ೨೬೦ ಪವರ್ ಪ್ಲಾಂಟ್‌ಗೆ ಅನುಮತಿ ನೀಡಲಾಗಿದೆ.

೪. ಚಿಕ್ಕ ನದಿಗಳನ್ನು ಬಳಸಿಕೊಂಡು ಇರಿಗೇಷನ್ ಪ್ರಾಜೆಕ್ಟ್ ಜಾಸ್ತಿಯಾಗಿವೆ.

೫. ಕರ್ನಾಟಕ ಮತ್ತು ಇತರೆ ರಾಜ್ಯಗಳಲ್ಲಿ ವನ್ಯಜೀವಿ ಮತ್ತು ಮನುಷ್ಯನ ಸಂಬಂಧ ದುಸ್ಥರವಾ ಗಿದೆ. ಉದಾಹರಣೆ ಎಂಬಂತೆ ಆನೆದಾಳಿಗಳು ಕಣ್ಣಮುಂದಿವೆ.

೬. ಉಪಗ್ರಹ ಚಿತ್ರದ ಪ್ರಕಾರ ಶೇ.೧ರಷ್ಟು ಅರಣ್ಯ ಹೆಚ್ಚಾಗಿದೆ. ವೈಜ್ಞಾನಿಕವಾಗಿ ಶೇ.೬೬ ಅರಣ್ಯ ಇರಬೇಕು. ಆದರೆ ಶೇ.೩೦ಕ್ಕಿಂತ ಕಡಿಮೆ ಆಗಿದೆ. ಪ್ಲಾಂಟೇಶನ್ ಫಾರೆಸ್ಟ್ ಜಾಸ್ತಿ ಆಗಿದೆ. ಸಹಜ ವಾಗಿರುವುದು ಶೇ.೧೦ ಮಾತ್ರ.

೭. ಕಾಡು ಕಡಿಯುವ ಮಾಫಿಯಾ ಹೆಚ್ಚಾಗಿದೆ. ಇದಕ್ಕೆ ರಾಜಕೀಯ ಬೆಂಬಲ ಸಿಕ್ಕಿದೆ.

ನೀಲಗಿರೀಸ್ ಭಾಗದಲ್ಲಿ ಭೂಸ್ಖಲನ ಆಗುತ್ತಲೇ ಇದೆ. ಕಳೆದ ಮಳೆಗಾಲದಲ್ಲಿ ೫೦೦ ಕೋಟಿ ರುಪಾಯಿ ನಷ್ಟವಾಗಿದೆ. ೬೦ ಜನ ಮೃತಪಟ್ಟಿದ್ದಾರೆ. ಅದಕ್ಕಾಗಿ ತಮಿಳುನಾಡು ಸರ್ಕಾರ ೪೦ ಕೋಟಿ ಕೊಟ್ಟಿದೆ.

ಈ ಘಟನೆ ವಾತಾವರಣ ವೈಪರೀತ್ಯದ ಒಂದು ಬೆಳವಣಿಗೆಯಷ್ಟೇ.ಇದೇ ರೀತಿ ಇನ್ನೊಂದು ವಿಚಾರವೆಂದರೆ, ಜೇನು ಉತ್ಪಾದನಾ ಪ್ರಮಾಣದಲ್ಲಿ ತೀರಾ ಇಳಿಕೆ ಕಂಡಿದೆ. ಕಳೆದ ದಶಕದಲ್ಲಿ ಒಂದು ಸಾಮಾನ್ಯ ಜೇನುಗೂಡಿನಲ್ಲಿ ೨೦ ಲೀಟರ್‌ನಷ್ಟು ಜೇನು ತುಪ್ಪ ಸಿಗುತ್ತಿತ್ತು. ಈಗ ಅದರ ಪ್ರಮಾಣ ೭-೮ ಲೀಟರ್‌ಗೆ ಇಳಿದೆ. ಇದಕ್ಕೆ ಕಾರಣ ಹೆಜ್ಜೇನಿಗೆ ಪರಾಗವೇ ಸಿಗುತ್ತಿಲ್ಲ. ಮಳೆಗಾಲ ದಲ್ಲಿ ಚಳಿ, ಚಳಿಯಲ್ಲಿ ಬೇಸಿಗೆ... ಇದು ಒಂದು ಬದಲಾವಣೆಯ ಅಂಶ.

ಕರ್ನಾಟಕದಲ್ಲಿ ನೆಲ್ಲಿಕಾಯಿಗೆ ಬರ ಬಂದಿರುವುದೂ ಒಂದು ಪ್ರಮುಖಾಂಶ. ಇವೆಲ್ಲಾ ಹವಾಮಾನ ವೈಪರಿತ್ಯ ಪಶ್ಚಿಮಘಟ್ಟದ ಮೇಲಾಗಿರುವುದರ ಸೂಚನೆಗಳು. ಹಾಗೆಯೇ ಈ ಬೆಳವಣಿಗೆ ಹಿಮಾ ಲಯಕ್ಕಿಂತ ಅಪಾಯಕಾರಿ ಎಂಬುದನ್ನೂ ತೋರಿಸುತ್ತಿವೆ.

ಯೋಜನೆ ಬಂತೆಂದರೆ ಪರಿಸರ- ಅಭಿವೃದ್ಧಿ ನಡುವಿನ ಯುದ್ಧ, ಜನಸಂಖ್ಯೆ ಹೆಚ್ಚುತ್ತಿದೆ ಅಭಿವೃದ್ಧಿ ಬೇಕು ಅಂತಾರೆ? ಇದಕ್ಕೆ ಪರ್ಯಾಯ ಏನು? ಇದಕ್ಕೆ ಉತ್ತರವೇನು? ಆ ಜವಾಬ್ದಾರಿ ನಮ್ಮದು ಎಂದು ಹೇಳುವುದು ತಪ್ಪು ಎನ್ನುತ್ತಾರೆ ಪರಿಸರವಾದಿಗಳು. ನೀವು ಹಾಳುಮಾಡುವುದು, ನಮಗೆ ಪರ್ಯಾಯ ಕೊಡಬೇಕೆಂದರೆ ಹೇಗೆ? ಎಂಬುದು ಪ್ರಶ್ನೆ.

ಇನ್ನೊಂದು ಆತಂಕಕಾರಿ ವಿಚಾರಕ್ಕೆ ಬರುವುದಾದರೆ, ಇವತ್ತು ಉತ್ತಮ ಮಳೆ ಬಂದರೂ ಡ್ಯಾಂಗ ಳಲ್ಲಿ ಶೇ.೬೦ಕ್ಕಿಂತ ವಿದ್ಯುತ್ ಉತ್ಪಾದಿಸುತ್ತಿಲ್ಲ. ಈಗ ಶೇ.೬೦ಕ್ಕಿಂತ ಹೆಚ್ಚು ವಿದ್ಯುತ್ ತರದ ಯೋಜನೆ, ಮುಂದಿನ ಕಥೆ ಏನು?

ಇದ್ದ ಡ್ಯಾಂಗಳಿಂದಲೇ ಪೂರ್ಣ ಪ್ರಮಾಣದ ಉಪಯೋಗವಾಗುತ್ತಿಲ್ಲ. ಇನ್ನೂ ಪ್ರಾಜೆಕ್ಟ್ ಮಾಡೋ ಣ ಎಂದು ಸರ್ಕಾರ ಹೇಳುತ್ತವೇ ಇದೆ. ಪರ್ಯಾಯ ಸಾಕಷ್ಟಿದ್ದರೂ ಅದರ ಬಗ್ಗೆ ಯೋಚಿಸುತ್ತಿಲ್ಲ.

ಇದು ಯಾರ ತಪ್ಪು. ಪರಿಸರವಾದಿಗಳದ್ದೋ? ಸರ್ಕಾರದ್ದೋ? ಮುಗುಮ್ಮಾಗಿರುವ ಪಶ್ಚಿಮಘಟ್ಟ ದ ಸಾಲು ಉತ್ತರವನ್ನು ನಿರೀಕ್ಷಿಸುತ್ತಿದೆ.

ಪರ್ಯಾಯ ಇದೆ:

ಹೋರಾಟಗಾರರೆಂದರೆ ಅಭಿವೃದ್ಧಿ ವಿರೋಧಿಗಳೇ ಎಂದು ಹಣೆಪಟ್ಟಿ ಕಟ್ಟಲಾಗಿದೆ. ಆದರೆ ಪರಿಸರ ವಿರೋಧಿಗಳಿಗೆ ಪರ್ಯಾಯ ಇದೆ ಎಂದು ಪರಿಸರವಾದಿಗಳು ತೋರಿಸುವವರಿದ್ದಾರೆ. ಅನೇಕ ಉದಾಹರಣೆಗಳೂ ಇವೆ.

ಕೋಟಗಿರಿಯಲ್ಲಿ ಜೇನು ಕುರುಬ ಜನಾಂಗದೊಂದಿಗೆ ಸೇರಿ ಗ್ರೀನ್ ಎಕಾನಮಿಯನ್ನು ತೋರಿಸಿ ದ್ದಾಗಿದೆ. ಉತ್ತರ ಕರ್ನಾಟದಲ್ಲಿ ಸಿದ್ದಿ ಜನಾಂಗದೊಂದಿಗೆ ಅರಣ್ಯ ಉತ್ಪನ್ನಗಳ ಮೌಲ್ಯವೃದ್ಧಿ ಮಾಡಿ ತೋರಿಸಲಾಗಿದೆ. ಕೇರಳದ ಅತಿರಪಲ್ಲಿಯ ಬಂಬೂ ಬ್ಯಾಂಡ್ ಸಹ ಹೊಸ ಲೋಕ ಸೃಷ್ಟಿಸಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-03-07 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಪಳೆಯುಳಿಕೆಗಳಾಗುತ್ತಿರುವ ಗ್ರಾಮೀಣ ಪರಿಕರಗಳು: ಸಾಂಪ್ರದಾಯಿಕ ಪರಿಕರಗಳು ಆಧುನಿಕತೆಯ ಸೋಗಿನಲ್ಲಿ ಕಣ್ಮರೆ
»ಕೋಮುವಾದದತ್ತ ಜಾರುತ್ತಿದೆಯೇ ಭಾರತ?...
»ವಿದೇಶದಲ್ಲಿದ್ದವನ ಭಾರತದ ಮೆಲುಕುಗಳು..!
»ಮಾತು ಬೇರೆ ಬೇಕೆ ಗೆಳೆಯ ...
»ಕೋಡಗನ ಕೋಳಿ ನುಂಗಿತ್ತಾ....
»ರಾಜಕೀಯ ನನಗೆ ಆಶ್ರಯ ತಾಣ ಅಲ್ಲ!
» ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ : ಕಟ್ಟ್ ನಿಘಂಟುಗಳ ಕೋಲ ನೇಮಗಳಲ್ಲಿ ಪದಭೂತಗಳ ನಲಿಕೆ
»ಮನೆಯ ಪರಿಸರ ಚೆನ್ನಾಗಿರ್ಬೇಕಂದ್ರೆ ಕುಡಿತ ಬಿಡಬೇಕು:ಸಾಲುಮರದ ತಿಮ್ಮಕ್ಕ
» ಸುಗ್ಗಿಯ ಕಾಲದ ಹಬ್ಬ: ಉತ್ತರಾಯಣದ ಪುಣ್ಯಕಾಲ ಮಕರ ಸಂಕ್ರಾಂತಿ
»ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ ಕುಮಾರಪರ್ವತ...
»ಫ್ರೀಲಾನ್ಸ್ ಪತ್ರಕರ್ತನಾಗುವುದು ಹೇಗೆ?...
»ಹೊಸವರ್ಷದಲ್ಲಿ ನಾವೂ ಹೊಸಬರಾಗೋಣ...
»ಕನ್ನಡಪ್ರೇಮಿ ಕರ್ನಾಟಕ ಕ್ರೈಸ್ತರಿಗೆ ಜಯಹೆ
»ಸುತ್ತೂರಿನಲ್ಲೊಂದು ಕೃಷಿ ಬ್ರಹ್ಮಾಂಡ...
»ಆತನೂ ಅನಿವಾರ್ಯ. . .
»ಜವರಾಯನ ಲೋಕಕ್ಕೆ `ಪತ್ತೇದಾರ'ನ ಪಯಣ ( ಪರಿಷ್ಕ್ತತ ವರದಿ )
»ಸುರೇಶ್ ಗೌಡ ಮಾತ್ರ ಯಾಕೆ ಉಡುಗೊರೆಗೆ ಯೋಗ್ಯ!
»ಅಟಲ್‌ಜೀ ಒಡನಾಟದ ಝಲಕು-ಮೆಲುಕು
»ಶೂನ್ಯ ಬಂಡವಾಳ ಪ್ರತಿಪಾದಕ ಬಡಗರ ಸಿದ್ದಾಶ್ರಮದ ಶ್ರೀ. ಮೋಹನಕುಮಾರ್ ಸ್ವಾಮೀಜಿ
»ಮದ್ಯಪಾನದ ಮೋಜಲ್ಲಿ ಆರೋಗ್ಯ ಮರೆಯದಿರಿ
»ಮಡಿಕೇರಿಯಲ್ಲಿ ಮಂಜಿನ ಚಿತ್ತಾರ...
»ಮಲೇರಿಯಾ ತಡೆಯೋದಕ್ಕೆ ಕೆರೆ ಮುಚ್ಚಿದ್ರು, ಗೊತ್ತಾ?
»ಕರ್ಮವೀರ ಪುರಸ್ಕಾರ ಪ್ರಶಸ್ತಿ ವಿಜೇತ ಕೊಡಕ್ಕಲ್ ಶಿವಪ್ರಸಾದ್
» ಕoದ....
»ಸರ್ಕಾರವೇ ಭೂ ದಲ್ಲಾಳಿಯಾದರೆ ಜನರ ಗತಿ ಏನು?
»ಸುಳ್ಯದ ಸಮ್ಮೇಳನದಲ್ಲಿ ಕನ್ನಡ ನಾಡಗೀತೆ ಹಾಡಿದ ಸ್ವೀಡನ್ನಿನ ಸಿಸಿಲಿಯಾ
»ಗೋಬಿ ಮಂಚೂರಿ : ಎಚ್ಚರ !
»ಶಾಲೆ ಮುಚ್ಚುವ ನಿರ್ಧಾರದಲ್ಲಿ ಗೊಂದಲಗಳಿವೆ : ಮುಖ್ಯಮ೦ತ್ರಿ ಚ೦ದ್ರು ಅವರೊ೦ದಿಗೆ ಸ೦ದರ್ಶನ
»ಮೈಕ್ರೋ ವೇವ್ ಕುಕ್ಕಿಂಗ್
»ಹೆಣ್ಣೇ ನಿನಗೆ ನಮೋ ನಮಃ...
»ಮಡೆಸ್ನಾನ: ತಿಳಿಹೇಳುವುದನ್ನು ಬಿಟ್ಟು ನಂಬಿಕೆ ನೆಪವೇಕೆ? ...
»ಸಾಮಾಜಿಕ ತಾಣಗಳಲ್ಲೂ ಬೇಕಲ್ಲವೇ ಸ್ವಾಸ್ಥ್ಯದ ಪರಿಕಲ್ಪನೆ?...
»ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ರೆಡ್‌ಕ್ರಾಸ್ ಶಾಲಾ ವಿದ್ಯಾರ್ಥಿಗಳು: 17 ತಿಂಗಳಿನಿಂದ ಸಂಬಳವಿಲ್ಲದೆ ಕಂಗಾಲಾದ ಸಿಬ್ಬಂದಿ
»ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ...
»ನೂರೆಂಟು ನೋಟ: ಪ್ರೇಮ ಚಲನೆಯ ಸಂಕೇತ, ಮದುವೆ ನಿಶ್ಚಲದ ಪ್ರತೀಕ!
»ಎಲ್ಲಕ್ಕೂ ಒಂದು ಕೊನೆಯಿದೆ, ಮಡೆಸ್ನಾನಕ್ಕೂ ಇರಲಿ
»ಪುಣ್ಯಕೋಟಿಯ ಹಾಡು....
» ಪೌರಾಣಿಕ ಹಿನ್ನಲೆಯಲ್ಲೂ ಪ್ರಸಿದ್ದ: ಅದ್ಬುತ ಪ್ರವಾಸಿ ತಾಣ; ಶಿರಸಿಯ ಯಾಣ
»ಒಂದು ಕ್ಷಣದ ಆತುರದಿಂದ ತನ್ನ ಜೀವವನ್ನೇ ತೆತ್ತ ಆ ಚಿಕ್ಕ ಹುಡುಗ.
»ಭಾಷಾ ದುರಾಭಿಮಾನಿಗಳನ್ನು ಕನ್ನಡದ ನೆಲದಿಂದ ದೂರವಿಡಿ..!
»ಪರಮಾತ್ಮ ಸ್ವರೂಪ ...
»ಕಣ್ಣಾಲಿಗಳು ತೇವವಾಗುತ್ತದೆ...
»ಕನಕದಾಸರ ಜನ್ಮದಿನದ ಜಿಜ್ಞಾಸೆ : ಆಧ್ಯಾತ್ಮ ಕ್ಷೇತ್ರ: ಕನಕದಾಸರ ಕೊಡುಗೆ ಅಪಾರ
»ಕುಂಬಾರರೀಗ ಕುಲಕಸುಬು ನೆಚ್ಚಿಕೊಳ್ಳುವಂತಿಲ್ಲ...
»ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು............
»ನ್ಯಾ ಸುಧೀಂದ್ರರಾವ್ : ಬಂಗಾರಪೇಟೆಯ ಸ್ಟಾಂಪ್ ವೆಂಡರ್ ಮಗ ಇಂದಿಗೂ ಮನೆ ಸಾಲ ಕಟ್ಟುತ್ತಿರುವ ನ್ಯಾಯಾಧೀಶ
»ಸೈಟು ಪ್ರಶಿಸುವವರ ಕಣ್ಣಿಗೆ ಸಂಘದ ಸಾಮಾಜಿಕ ಬದ್ಧತೆಯೇಕೆ ಕಾಣುವುದಿಲ್ಲ?
»ಕನ್ನಡಿಗರ ಕಣ್ಮಣಿಯಾಗುತ್ತಿರುವ ನಮ್ಮ ಸುವರ್ಣ ವಾರ್ತಾ ವಾಹಿನಿ 24X7
»ಆ ಪಟ್ಟಿಯಲ್ಲಿ ಈ ಪದ್ಯಾಣರ ಹೆಸರಿರಬೇಕಿತ್ತು...!
»ಇದು ನಮ್ಮ ಗ್ರ್ಯಾಂಡ್ ಪ್ರಿಕ್ಸ್: ರಥ V/S ಫಾರ್ಮುಲಾ 1

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri