ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಕಾರ್ಕಳದ ವಿವಾಹಿತೆ ತನುಜಾ ಭಂಡಾರಿ ಆತ್ಮಹತ್ಯೆಗೆ ಶರುಣು?... ಇದು ನಿಯೋಜಿತ ಕೊಲೆ ಪ್ರಕರಣ: ತನುಜಾ ಕುಟುಂಬಸ್ಥರು

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬೈ: ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಇಲ್ಲಿನ ಲೀಲಾವತಿ ನಿಲಯದ ನಿವಾಸಿ ದಿವಂಗತ ಮಂಜಪ್ಪ ಭಂಡಾರಿ ಮತ್ತು ಶ್ರೀಮತಿ ಶ್ಯಾಮಲಾ ಮಂಜಪ್ಪ ಭಂಡಾರಿ ಇವರ ಏಕೈಕ ಸುಪುತ್ರಿ ಶ್ರೀಮತಿ ತನುಜಾ ಮಂಜಪ್ಪ ಭಂಡಾರಿ ಯಾನೆ ತನುಜಾ ರತೀಶ್ ಸಗ್ಗಮ್ (29.) ಇವರು ಕಳೆದ ೨೦೧೦ರ ಮಾರ್ಚ್ 03ನೇ ಬುಧವಾರ ಪೂರ್ವಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಇದು ಆತ್ಮಹತ್ಯೆ ಪ್ರಕರಣವೇ ಆಗಿರದೆ ಇದೊಂದು ಕೊಲೆಯಾಗಿದೆ ಎಂದು ತನುಜಾ ಪರಿವಾರವು ಆರೋಪಿಸಿದೆ.

ಕಳೆದ ಏಳು ವರ್ಷಗಳ ಹಿಂದೆ ತನ್ನ ಪದವಿ ಮುಗಿಸಿ ಕೊಂಡು ಹೈದರಬಾದ್ ಮೂಲದ ಸಾಫ್ಟ್‌ವೇರ್ ಪ್ರೋಗ್ರಮರ್ ಆಗಿ ಕೆಲಸ ಮಾಡಿತ್ತಿದ್ದ ರತೀಶ್ ಸಗ್ಗಮ್ ಇವರೊಂದಿಗೆ ಪ್ರೇಮವಿವಾಹ ಮಾಡಿಸಿಕೊಂಡು ಸದ್ಯ ಚಾರ್ಟರ್ಡ್ ಎಕೌಂಟೆಂಟ್ (ಸಿ‌ಎ) ಅಭ್ಯಾಸ ನಿರತ, ನಾಲ್ಕುವರೆ ವರ್ಷದ ಶ್ರುತಿ ನಾಮದ ಸುಪುತ್ರಿಯನ್ನು ಹೊಂದಿದ್ದ ತನುಜಾ ಭಂಡಾರಿ ಕಳೆದ ಬುಧವಾರ ಮುಂಬಯಿ ಉಪನಗರದ ಚೆಂಬೂರು ಇಲ್ಲಿನ ಗೋವಂಡಿಯ ಶಿವಾಜಿನಗರದ ಬಾಡಿಗೆ ಮನೆಯಲ್ಲಿ ಕ್ರೂರ ವಿಧಿಯಲೀಲೆಗೆ ಬಲಿಯಾದ ವಿದ್ರವಕ ಘಟನೆ ನಡೆದಿತ್ತು.

ತನ್ನ ಮಾವ-ಅತ್ತಿಗೆ ಕುಟುಂಬದ ಜೊತೆ ಪತಿ ರತೀಶ್ ಮತ್ತು ಸುಪುತ್ರಿ ಶ್ರುತಿ ಜೊತೆ ಚೆಂಬೂರ್‌ನ ದೇವನಾರ್ ಇಲ್ಲಿ ತನುಜಾ ವಾಸಿಸುತ್ತಿದ್ದರು. ನಂತರದ ವರುಷ್ಗಳಲ್ಲಿ ಪತಿ ರತೀಶ್ ತನಗೆ ಡೈವೋರ್ಸ್ ನೀಡುವಂತೆ ಪೀಡಿಸಿ, ಹಲವಾರು ಭಾರಿ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಿದ್ದ ಎಂದು ಹಲವು ಸಲ ಮನೆಮಂದಿಗೆ ತಿಳಿಸಿದ್ದಳು. ರತೀಶ್ ಅನೇಕಭಾರಿ ವಿಪರೀತ ಕಿರುಕುಳವನ್ನು ನೀಡಿ ಪೀಡಿಸುತ್ತಿದ್ದು, ಕಳೆದ ಸಪ್ಟೆಂಂಬರ್ ತಿಂಗಳಲ್ಲಿ ಹಲ್ಲೆಗೊಳಗಾಗಿ ಮತಿಹೀನಳಾದ ತನುಜಾಳನ್ನು ಸ್ಥಳಿಯ ಶಿವಾಜಿನಗರದ ಖಾಸಾಗಿ ಆಸ್ಪತ್ರೆಗೆ ದಾಖಲಾಗಿಸಗಾಗಿತ್ತು ಈ ಬಗ್ಗೆ ಶಿವಾಜಿನಗರದ ಪೋಲಿಸ್ ಠಾಣೆಯಲ್ಲಿ ಎನ್‌ಸಿ ಕೂಡಾ ದಾಖಲಾಗಿಸಲಾಗಿದೆ. ತದನಂತರ ತನುಜಾ ಮತ್ತು ಪುತ್ರಿಯ ಜೊತೆ ಗೋವಂಡಿಯ ಶಿವಾಜಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಎನ್‌ಸಿ ದೂರು ಸ್ವೀಕರಿಸಿದ ಪೋಲಿಸು ಅಧಿಕಾರಿಗಳು ಕೂಡಾ ಕುಟುಂಬಸ್ಥರ ಸಮ್ಮುಖದಲ್ಲಿ ಸಮಜಾಯಿಸಿ ಮಾತುಕತೆ ನಡೆಸಿ ಈ ಬಾಡಿಗೆ ಮನೆಯನ್ನು ಖಾಲಿ ಮಾಡುವಂತೆಯೂ ರತೀಶ್‌ಗೆ ಎಚ್ಚರಿಸಿದ್ದರು ಎನ್ನಲಾಗಿದೆ. ಮಗಳ ಸಂಕಷ್ಟದ ಜೀವನದಿಂದ ನೊಂದ ತಂದೆ ಮಂಜಪ್ಪ ಭಂಡಾರಿಯವರೂ ಕೂಡಾ ನೊಂದು ಇತ್ತೀಚೆಗಷ್ಟೇ ಹೃದಯಾಘಾತಕ್ಕೆ ಬಲಿಯಾದರು ಎಂದು ತನುಜಾಳ ಸಹೋದರ ಸಂತೋಷ್ ಜೈನ್ (ಭಂಡಾರಿ) ತಿಳಿಸಿದ್ದಾರೆ.

ನಾವು ಜೈನ ಸಮೂದಾಯದವರಾಗಿದ್ದು ಸಸ್ಯಹಾರಿಗಳಾಗಿದ್ದು ಅಂತೆಯೇ ರತೀಶ್ ಸಗ್ಗಮ್ ಕೂಡಾ ತನುಜಾಳೊಂದಿಗೆ ಸಸ್ಯಹಾರಿಯಾಗಿಯೇ ಜೀವನ ಸಾಗಿಸುತ್ತಿದ್ದ. ಆದರೆ ಕಳೆದ ಅನೇಕ ತಿಂಗಳುಗಳಿಂದ ರತೀಶ್ ಅತಿಯಾಗಿ ಮದ್ಯಸೇವನೆಗೈದ್ದು ತನಗೂ ಕೂಡ ಸೇವಿಸುವಂತೆ ಮತ್ತು ಮಾಂಸಹಾರಿ ಖಾದ್ಯಗಳನ್ನು ಮಾಡಿಕೊಡಲು ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಮೈದುನ ರವೀಂದ್ರ ಸಗ್ಗಮ್ ಕೂಡಾ ರತೀಶ್‌ನಲ್ಲೇ ಹೊಂದಿಕೊಂಡು ಜೀವನ ನಡೆಸುತ್ತಿದ್ದು, ಕಳೆದ ಭಾರಿ ರತೀಶ್‌ನ ಕ್ರೆಡೀಟ್ ಕಾರ್ಡ್ ಮೂಲಕ ಹಣ ವಂಚನೆಗೈದಿದ್ದು, ಈ ಬಗ್ಗೆ ತನುಜಾಳೊಂದಿಗೆ ತಕರಾರು ನಡೆಸಿದ್ದ ಎನ್ನಲಾಗಿದೆ.

ಆದರೆ ಅನಿವಾರ್ಯ ಎಂಬಂತೆ ಕಳೆದ ಬುಧವಾರ ಪೂರ್ವಾಹ್ನ ನಿನ್ನ ಸಹೋದರಿ ಆತ್ಮಹತ್ಯೆಗೆ ಶರಣು ಆಗಿದ್ದಾಳೆ ಎಂದು ಪರವ್ಯಕ್ತಿಯೋರ್ವರು ನನಗೆ ಪೋನ್ ಮೂಲಕ ಮಾಹಿತಿ ನೀಡಿದ್ದು, ನಾವು ಕುಟುಂಬ ಸಹಿತರಾಗಿ ತನುಜಾಳ ನಿವಾಸಕ್ಕೆ ಸೇರುವಷ್ಟರಲ್ಲಿ ರತೀಶ್ ಕಡೆಯವರು ನಮ್ಮನ್ನು ಅಥವಾ ಪೊಲಿಸು ಅಧಿಕಾರಿಗಳನ್ನು ಲೆಕ್ಕಿಸದೆ ಬಾಗಿಲು ಒಡೆದಿದ್ದರು. ಗಂಡ ರತೀಶ್ ಸಗ್ಗಮ್ ಸ್ಥಳಿಯ ಸಾಯಿ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಭರ್ತಿಗೊಂಡಿದ್ದ ಮಾತ್ರವಲ್ಲದೆ ತಾನು ಸಾಕಿನಾಕದ ಸಂಸ್ಥೆಯೊಂದರಲ್ಲಿ ನೌಕರಿಗಾಗಿ ಇಂಟರ್‌ವ್ಯೂ ನೀಡಲು ಹೋಗಿದ್ದೆ (ಕಳೆದ ೨-೩ ತಿಂಗಳುಗಳಿಂದ ನಿರುದ್ಯೋಗಿ ಆಗಿ ಮನೆಯಲ್ಲೆ ಇದ್ದನು) ಮನೆ ಸೇರುವಷ್ಟರಲ್ಲೆ ಘಟನೆ ನೋಡಿ ಮೈ ನಡುಕ ಬಂದು ತಲೆಸುತ್ತು ಬಂದಿತು. ಎನ್ನುತ್ತಾ ತನ್ನ ಇಂಟರ್‌ವ್ಯೂ ಕಾರ್ಡ್‌ನ್ನೇ ಪದೇ ಪದೇ ತೋರಿಸಿ ಏನನ್ನೋ ಅಡಗಿಸಿ ಮಾತನಾಡುತ್ತಿದ್ದು, ಮರುದಿನ ನೋಡಿದಾದ ಆಸ್ಪತ್ರೆ ಯಿಂದ ಬಿಡುಗಡೆಗೊಂಡು ತನ್ನ ದೇವನಾರ್‌ನಲ್ಲಿನ ಮನೆಯಲ್ಲಿದ್ದ. ವಿಚಿತ್ರ ಎಂದರೆ ರತೀಶ್‌ನ ಮಾತಾಪಿತರು (ತನುಜಾ ಅತ್ತೆ-ಮಾವ) ಅನಿರೀಕ್ಷಿತವಾಗಿ ಊರಿಗೆ ಹೋಗಿದ್ದಾರೆ.

ಪೋಲಿಸರೂ ಕೂಡಾ ನಮ್ಮ ಎಫ್‌ಐ‌ಆರ್ ಸ್ವೀಕರಿಸದೆ, ಘಾಟ್ಕೋಪರ್‌ ನಲ್ಲಿನ ರಾಜವಾಡಿ ಸರಕಾರಿ ಆಸ್ಪತ್ರೆಗೆ ದಾಖಲಿಸ ಲಾಗಿದ್ದ ಮೃತದೇಹವನ್ನು ನೀವು ಒಯ್ದು ಅಂತ್ಯಕ್ರೀಯೆ ನಡೆಸುವಂತೆ ಒತ್ತಾಯಿಸು ತ್ತಿದ್ದರು. ನಿಮ್ಮ ತಕರಾರು ಮುಗಿಸಿರಿ ಎನ್ನುತ್ತಿ ದ್ದರು. ನನ್ನ ಪತಿ ರತೀಶ್ ಸಗ್ಗಮ್ ಬಗ್ಗೆ ನಾನು ಶಿವಾಜಿನಗರದ ಪೋಲಿಸ್ ಠಾಣೆಯಲ್ಲಿ ಬರೆಸಿದ್ದ ಎನ್‌ಸಿಯನ್ನು ಹಿಂದೆಗೆದು ಕೊಂಡು ನನ್ನ ಎಲ್ಲಾ ಹಣ-ಒಡವೆಗಳನ್ನು ನನ್ನ ಮಗಳು ಶ್ರುತಿಗೆ ನೀಡಿರಿ. ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದ ಪತ್ರ ವೊಂದು ಸಿಕ್ಕಿದ್ದು ಈ ಆಧಾರದ ಮೇಲೆಯೇ ಇದು ಸ್ವಯಂಪ್ರೇರಿತ ಆತ್ಮಹತ್ಯೆ ಎಂದು ನಾವು ಐಪಿ‌ಎಸ್ ಪ್ರಕರಣ ೪೯೮ (ಂ), ೩೦೬,೩೪ ಪ್ರಕಾರ ಕೇಸು ದಾಖಲಿಸಿದ್ದೇವೆ ಎಂದು ಸಂತೋಷ್ ಜೈನ್ ವಿವರಿಸಿದ್ದಾರೆ.

ಸುಪುತ್ರಿ ಶ್ರುತಿ ಹೇಳಿಕೆ: ಏನೂ ಅರಿಯದ ಮುಗ್ಧೆ, ಜನನಿದಾತೆಯನ್ನು ಕಳಕೊಂಡ ನಾಲ್ಕುವರೆ ವರ್ಷದ ಶ್ರುತಿ ಹೇಳುವಂತೆ ತನ್ನ ಹೆತ್ತವರಿಬ್ಬರೂ ಎಂದಿನಂತೆ ನಿನ್ನೆ ರಾತ್ರಿ ಮತ್ತು ಇಂದು ಮುಂಜಾನೆಯೂ ತೀವ್ರವಾಗಿ ಜಗಳವಾದುತ್ತಿದ್ದರು. ಈ ಮಧ್ಯೆ ಚೂರಿಯೂ ಕೂಡಾ ಪ್ರವೇಶಿಸಿತ್ತು. ನಾನು ಬೆಳಿಗ್ಗೆ ಸ್ಕೂಲ್‌ಗೆ ಹೋದ ಬಳಿಕ ಏನಾಯಿತೋ ತಿಳಿದಿಲ್ಲ. ಅಂತೂ ನಾನು ಮಾತೆಯನ್ನು ಕಲಕೊಂಡ ತಬ್ಬಲಿಯಾದೆ. ತನುಜಾ ಕುಟುಂಬಿಕರು ಸದ್ಯ ಶ್ರುತಿಯನ್ನು ತಮ್ಮ ಮನೆಯಲ್ಲಿರಿಸಿದ್ದಾರೆ ಆದರೂ ಈ ವರೇಗೆ ರತೀಶ್ ಕಡೆಯವರು ಮಗಳ ಬಗ್ಗೆ ಮೌನವಾಗಿದ್ದಾರೆ.

ತನುಜಾ ಕುಟುಂಬಿಕರ ಆರೋಪ ಮತ್ತು ಒತ್ತಾಯ : ನಮ್ಮ ತನುಜಾಳು ಆತ್ಮಹತ್ಯೆಗೈಯುವಷ್ಟು ಕೀಳು ಮನೋ ಭಾವದ ಹುಡಿಗಿಯಲ್ಲ. ಎಲ್ಲಾ ವಿಷಯಗಳಲ್ಲೂ ಸೂಕ್ಷ್ಮವಾಗಿದ್ದು, ಜಾಣ್ಮೆತನ ದಿಟ್ಟತನ ಹೊಂದಿದ್ದಳು. ನಾವು ಶುಕ್ರವಾರ ಮುಂಜಾನೆ ತನುಜಾಳ ಅಂತಿಮಕ್ರಿಯೆ ನಡೆಸಿದ್ದು ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿಸಿದ್ದರೂ ಇದು ಕೊಲೆ ಪ್ರಕರಣ ವಾಗಿದೆ. ಮೃತ ದೇಹದ ಕೊಠಡಿಯಲ್ಲಿ ರಕ್ತದ ನಿಶಾನೆಗಳು ಹಾಗೂ ಹಗ್ಗದಿಂದ ಕುತ್ತಿಗೆ ಬಿಗಿದ ಗುರುಗಳು ಮೇಲ್ನೋಟಕ್ಕೆ ಕಂಡಿದ್ದು, ಈ ಬಗ್ಗೆ ನಾವೂ ಅನೇಕ ಪುರಾವೆಗಳ ಆಧಾರವಾಗಿರಿಸಿ ಕೂಲಂಕುಷವಾಗಿ ತನಿಖೆ ನಡೆಸಿ ನ್ಯಾಯಕ್ಕಾಗಿ ಕೊಲೆ ಪ್ರಕರಣ ಎಂದು ದೂರು ದಾಖಲಿಸಿದ್ದೇವೆ. ಘಟನೆಯ ಹಿಂದಿನ ನಿಜವಾದ ಪಿತೂರಿ ಬಯಲಿಗೆಳೆದು ಆರೋಪಿಗಳಿಗೆ ಸೂಕ್ತವಾದ ಶಿಕ್ಷೆಗೆ ಒತ್ತಾಯಿಸಿದ್ದೇವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಘಟನೆಯನ್ನು ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಅಧ್ಯಕ್ಷ ಬಿ.ಮುನಿರಾಜ್ ಜೈನ್ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ತೀವ್ರವಾಗಿ ಖಂಡಿಸಿದ್ದು ಸೂಕ್ತವಾದ ಕ್ರಮಕ್ಕೆ ಸಂಬಂಧಿತ ಅಧಿಕಾರಿ, ಸಚಿವರ್ಯರನ್ನು ಒತ್ತಾಯಿಸಿದ್ದಾರೆ.

ನಿಮಗೆ ಸೂಕ್ತವಾದ ನ್ಯಾಯ ಒದಗಿಸಿ ಕೊಡುತ್ತೇವೆ. ನಾವು ಮುಂಬಯಿ ನಗರದ ಹೆಸರಾಂತ ಸಮಾಜ ಸೇವಕರು. ನೀವು ನಮಗೆ ದೂರು ನೀಡಿರಿ. ಈ ಬಗ್ಗೆ ನಮ್ಮಲ್ಲಿ ದೂರು ನೀಡಲು ಏಕೆ ಅಂಜುತ್ತೀರಿ. ನೀವು ನಮ್ಮ ಅಂಧೇರಿ ಆಫೀಸಿಗೆ ಬನ್ನಿ. ಎಲ್ಲವನ್ನೂ ಕುಳಿತು ಮಾತನಾಡಿ ಸರಿ ಪಡಿಸುವ ಎಂದು ಅಂಧೇರಿಯ ಶಂಕರ್ ಪೂಜಾರಿ ಇವರು ತನುಜಾಳ ಸಹೋದರ ಸಂತೋಷ್ ಜೈನ್ ಇವರಲ್ಲಿ ಒತ್ತಡ ಹಾಕುತ್ತಿದ್ದರು ಎನ್ನುವುದು ಮತ್ತೊಂದು ವಿಶೇಷತೆ ಎನ್ನಲಾಗಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಚಿತ್ರ / ವರದಿ : ರೋನ್ಸ್ ಬಂಟ್ವಾಳ್
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-07 00:00:00

Tell a Friend

ಪ್ರತಿಸ್ಪಂದನ
ASHU KATEEL, BAHRAIN
2010-03-09
I agree with Amar. Love is nothing It\'s Sweet Poison.Never neglet parants. They will hide all thire problem and keep childrens feture bright upto 20 years. We never think about then for few minits. It\'s a good moral to Girls.
dhanajaya gurpur, manglore
2010-03-09
well, it is more or less good story. keep light on same news.
amar, udupi
2010-03-08
ninage bekitha love .it is good msg msg for all love birds .amma appa nodida hudugannanu marriage agi love is only attraction (only sex)
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»"ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
»ಮುಂಬಯಿಗೆ ದಳನಾಯಕನ ಭೇಟಿ: ಮುಖ್ಯಮಂತ್ರಿ ಹುದ್ದೆಗಾಗಿ ಕಾದುಕೂತಿಲ್ಲ: ಹೆಚ್.ಡಿ ರೇವಣ್ಣ
»ಅಣ್ಣನ ಉದ್ಯೋಗ ಗಳಿಸುವ ದುರಾಸೆಯಿಂದ ಅತ್ತಿಗೆಯ ಹತ್ಯೆಗೈದ ಸಹೋದರರು!
»ಹೆತ್ತವರ ಅನುಮತಿ ಇಲ್ಲದೆ, ಅವರ ಮನೆಯಲ್ಲಿ ಪ್ರಾಪ್ತ ವಯಸ್ಕ ಮಕ್ಕಳು ಉಳಿಯುವಂತಿಲ್ಲ: ನ್ಯಾಯಾಲಯ
»ಸಾಂತಾಕ್ರೂಜ್ ಕನ್ನಡ ಸಂಘದಲ್ಲಿ ಗಣರಾಜ್ಯೋತ್ಸವ ಆಚರಣೆ
»ಡೊಂಬಿವಲಿ: 'ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ'
»ಡಾ|ಬಿ.ಹೆಗ್ಡೆಯವರು ರಾಷ್ಟ್ರದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಮಹಾನುಭಾವರು : ಜಸ್ಟೀಸ್ ಶ್ರೀಕೃಷ್ಣ
»ಬಾಂಬ್ ನಿಷ್ಕ್ರಿಯ ಸೂಟ್‌ಕೇಸ್ ಹಗರಣ: ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿ ಕೋರಿಕೆ
»ಚಾರ್ ಕೋಪ್ ಕನ್ನಡಿಗರ ಬಳಗದ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮ
»273 ಕೋಟಿ ವಿಮೆ ಹಗರಣ, ರಿಲಯನ್ಸ್ ಆರೋಪಿ
»ನಮ್ಮೂರು ಅಭಿವೃದ್ಧಿ ಕಂಡು ಶ್ರೀಮಂತ ನಾಡಾಗಿ ಬದಲಾಗುತ್ತಿದೆ: ಪ್ರೊ.ಬಿ.ಎಂ ಹೆಗ್ಡೆ
»9 ಜನರ ಸಾವು: ಬಸ್ ಚಾಲಕ ಇಂದು ಕೋರ್ಟ್‌ಗೆ ಹಾಜರು
»ಚೆಂಬೂರು ಕರ್ನಾಟಕ ಜೂನಿಯರ್ ಕಾಲೇಜು ಮತ್ತು ಹೈಸ್ಕೂಲ್‌ಗಳ ಸಂಯುಕ್ತ ವಾರ್ಷಿಕೋತ್ಸವ: ಗೌರವಬದ್ಧ ನಡತೆಯಿಂದ ಜೀವನ ಪರಿಪೂರ್ಣ:ಸುರೇಂದ್ರ ಪೂಜಾರಿ
»ಚಿನ್ನ, ಬೆಳ್ಳಿ ಧಾರಣೆಯಲ್ಲಿ ತೀವ್ರ ಕುಸಿತ
»ಭಾರತ್ ಬ್ಯಾಂಕ್ ನ ಆಡಳಿತ-ನಿರ್ದೇಶಕರಾಗಿ ಚಂದ್ರಶೇಖರ್ ಆರ್. ಮೂಲ್ಕಿ ನೇಮಕ
»ಬಿ.ಎಸ್.ಕೆ.ಬಿ.ಸಂಸ್ಥೆಯ ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್ ನ ವತಿಯಿಂದ ಶ್ರೀ ಮಧ್ವ ನವಮಿ ಆಚರಣೆ
»‘ಆವಯ್ಚಿ ಆಶಾ’ ಕೊಂಕಣಿ ಕಥಾ ಪುಸ್ತಕ ಬಿಡುಗಡೆ ಮತ್ತು ಕೊಂಕಣಿ ಲೇಖಕ ರೋನ್ ಮಾಯ್ಕಲ್ ಅವರಿಗೆ ಸನ್ಮಾನ
»ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ 2012-15ರ ನೂತನ ಪದಾಧಿಕಾರಿಗಳ ಆಯ್ಕೆ
»‘ಅವಮಾನ’: ಕಾಂಗ್ರೆಸ್‌ಗೆ ಪ್ರಿಯಾ ದೂರು
»ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯೋಜನಾ ಬ್ರೊಶರ್ ಬಿಡುಗಡೆ
»ಮುಂಬಯಿ ಸಾಮರಸ್ಯ ಬದುಕಿನ ಪವಾಡಗಳ ಪುಣ್ಯಭೂಮಿ : ಹೆಚ್.ಡಿ ರೇವಣ್ಣ
»ಶೆಟ್ಟಿ ಟೀ ಹೌಸ್ ಮಾಲಕ ಸಂಜೀವ ಪಿ.ಶೆಟ್ಟಿ ನಿಧನ
»ಮುಂಬೈ: ಹುಡುಗಿಗೆ ಆ್ಯಸಿಡ್ ಎರಚಿದ ಆರೋಪಿಯ ಬಂಧನ
»ಸಲೀಂ ವಿರುದ್ಧದ ವಿಚಾರಣೆ ಮುಕ್ತಾಯಕ್ಕೆ ಸಿಬಿಐ ವಿರೋಧ
»ಕೆಸಿ‌ಎ ನಲಸೋಫರಾ ಸಂಸ್ಥೆಯಿಂದ 16ನೇ ವಾರ್ಷಿಕೋತ್ಸವ ಸಂಭ್ರಮ
»ಫೆ.11: ಖಾರ್ ಪೂರ್ವದ ಪಹೇಲ್ವಾನ್ ಚಾಳ್‌ನಲ್ಲಿ 45ನೇ ವಾರ್ಷಿಕ ಶನೀಶ್ವರ ಮಹಾಪೂಜೆ
»ಇಂದು ಅಸಲ್ಫಾದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ದಂಪತಿ ಭೇಟಿ
»ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
»ವಡಲಾ ರಾಮ ಮಂದಿರದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಂಭ್ರಮ
»ಹಿರಿಯ ಅಧಿಕಾರಿಯ ಕಿರುಕುಳ: ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್‌ಟೇಬಲ್
»ಮಲಾಡ್ ಪೂರ್ವದ ರಾಯನ್ ಟಿವಿ ಸ್ಟೂಡಿಯೋದಲ್ಲಿ ಕನ್ನಡಿಗ ಪತ್ರಕರ್ತರ ಕಾರ್ಯಕ್ರಮ: ಬೃಹದಾದ ಕನಸು ಕಂಡು ಗೆಲ್ಲುವ ಛಲವನ್ನು ಮೈಗೂಡಿಸಿ : ಮೇಡಂ ಪಿಂಟೋ
»ರಾಷ್ಟ್ರದ ಕನ್ನಡ ಪತ್ರಿಕಾ ರಂಗದಲ್ಲಿ ಇತಿಹಾಸ ರೂಪಿಸಿದ ಕನ್ನಡ ಪತ್ರಿಕಾ ಪ್ರತಿನಿಧಿಗಳ ಸಮ್ಮೇಳನ: ಕಪಸಮ ಮುಂಬಯಿಯಲ್ಲಿ ಭಾಷಾ ಬೆಸೆಯುವ ಕೆಲಸ ಮಾಡುತ್ತಿದೆ: ಸಾಂಡ್‌ಭೋರ್
»ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಕ್ರೀಡೋತ್ಸವ-೨೦೧೨:ಕ್ರೀಡೆ ನಮ್ಮ ಬದುಕಿನ ಜೀವಾಳವಾಗಿದೆ : ಜಯ ಶೆಟ್ಟಿ
»ಜಯಕರ ಡಿ.ಪೂಜಾರಿ ಬರಹದ ‘ತುಳು ಲಿಪಿ ತೆರಿಲೆ’ ಪುಸ್ತಕ ಬಿಡುಗಡೆ
»ಉಗ್ರರಿಗೆ ನೆರವಾಗುತ್ತಿರುವ ನಕಲಿ ಸಿಮ್ ಕಾರ್ಡ್‌: ಮಹಾರಾಷ್ಟ್ರ ಎಟಿಎಸ್
»ಜ.28: ದೇವಾಡಿಗ ಸೆಂಟರ್‌ನಲ್ಲಿ ‘ತುಲು ಲಿಪಿ ತೆರಿಲೆ’ ಪುಸ್ತಕ ಬಿಡುಗಡೆ
»9 ಜನರ ಪಾಲಿಗೆ ಯಮಸ್ವರೂಪಿಯಾದ ಸರಕಾರಿ ಬಸ್ ಡ್ರೈವರ್ ಮಾನೆ ಪೊಲೀಸ್ ವಶಕ್ಕೆ
»ಖೋಜಾಗಳಿಗೂ ಸಮಾನ ಹಕ್ಕುಗಳಿವೆ: ಬಾಂಬೆ ಹೈಕೋರ್ಟ್
»ಪುಣೆಯಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ದೇವಾಡಿಗ ಸಂಘ: ಅಧ್ಯಕ್ಷರಾಗಿ ಪ್ರಭಾಕರ ಜಿ. ದೇವಾಡಿಗ ಆಯ್ಕೆ
»9 ಜನರ ಪಾಲಿಗೆ ಯಮಸ್ವರೂಪಿಯಾದ ಸರಕಾರಿ ಬಸ್ ಡ್ರೈವರ್
»ಧರ್ಮಪಾಲ ಯು. ದೇವಾಡಿಗರಿಗೆ ಕುವೆಂಪು ವಿಶ್ವ ಮಾನವ ಅಂತರಾಷ್ಟ್ರೀಯ ಪ್ರಶಸ್ತಿ
»ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ ಕೃತಿ ಬಿಡುಗಡೆ
»ಉತ್ತರ ಪ್ರದೇಶ ಚುನಾವಣೆಗೆ ಸ್ಪರ್ಧಿಸಲಿರುವ ಮಾಲೆಗಾಂವ್ ಸ್ಫೋಟ ಆರೋಪಿ
»ಅಖಿಲ ಭಾರತ ಕನ್ನಡ ಪತ್ರಿಕಾ ಸಂಘಟನೆಗಳ ಪ್ರತಿನಿಧಿಗಳ ಮಹಾ ಸಹಮಿಲನ-ಸಂವಾದ ಕಾರ್ಯಕ್ರಮ
»ಯುಪಿ, ಬಿಹಾರ್ ಭಯೋತ್ಪಾದನೆಯ ಕೇಂದ್ರಗಳು: ರಾಜ್ ಠಾಕ್ರೆ
»ಜ.26 ರಿಂದ ಚೆಂಬೂರು ಕರ್ನಾಟಕ ಸಂಘದ ಸರಣಿ ಕಾರ್ಯಕ್ರಮಗಳು
»ಮಾಹೆ ಮಾಜಿ ಉಪಕುಲಪತಿ ಪದ್ಮಭೂಷಣ ಡಾ|ಬಿ.ಎಂ.ಹೆಗ್ಡೆಗೆ ಚೆಂಬೂರು ಕರ್ನಾಟಕ ಸಂಘದ ಚೊಚ್ಚಲ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ
»ಮುಂಬೈ ತ್ರಿವಳಿ ಸ್ಫೋಟ: ಇಬ್ಬರು ಬಂಧನ | ತಪ್ಪು ವ್ಯಕ್ತಿಗಳ ಬಂಧನ:ಗೃಹ ಸಚಿವಾಲಯ
»ಗತ ವೈಭವದೊಂದಿಗೆ ದಶಮಾನೋತ್ಸವ ಸಂಭ್ರಮಿಸಿದ ಬಿಲ್ಲವರ ಜಾಗೃತಿ ಬಳಗ: ಯುವ ಶಕ್ತಿಯ ಪ್ರೋತ್ಸಾಹದಿಂದಲೇ ಜನಾಂಗೀಯ ಪ್ರಗತಿ: ಸುಚಿತ್ ಕುಮಾರ್
»ಪ್ರಜ್ಞಾ ಸಿಂಗ್‌ಗೆ ವಿಮಾನ, ಹವಾನಿಯಂತ್ರಿತ ರೈಲು ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ನ್ಯಾಯಾಲಯ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri