ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ಶೀಘ್ರದಲ್ಲಿ.

ಕುವೈಟ್ ಹಾಗೂ ಮಂಗಳೂರಿನ ವಿಮಾನಯಾನ ಅಧಿಕಾರಿಗಳು ಕುವೈಟಿನಿಂದ ಮಂಗಳೂರಿಗೆ ನೇರ ವಿಮಾನಯಾನಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.  ಶೀಘ್ರದಲ್ಲಿಯೇ ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ನೇರ ವಾಯುಯಾನ ಸಂಚಾರ ಆರಂಭಿಸಲಿದೆ ಎಂದು ಮಂಗಳೂರಿನ ವಿಮಾನ ನಿಲ್ಧಾಣ ಅಧಿಕಾರಿಗಳು ಭರವಸೆ ನೀಡಿದ್ದಾರೆ.  ಈ ಯಾನವು ಕುವೈಟಿನಲ್ಲಿರುವ ಭಾರತೀಯರ ಅದರಲ್ಲೂ  ಅನಿವಾಸಿ ಕರಾವಳಿ ಕನ್ನಡಿಗರ ಬಹುದಿನದ ಕನಸಾಗಿದ್ದು ಕೆಲದಿನಗಳ ಹಿಂದೆ ದುಬೈ ಮಂಗಳೂರು ನೇರ ವಿಮಾನಯಾನ ಪ್ರಾರಂಭವಾದ ಮೇಲೆ ಈ ಕನಸಿಗೆ ಗರಿ ಮೂಡಿತ್ತು. 

ಕಳೆದ ದಿನಗಳಲ್ಲಿ  ಪ್ರಮುಖ ಮಂತ್ರಿಯೊಬ್ಬರನ್ನೊಳಗೊಂಡ ಕುವೈಟ್ ಕನ್ನಡಿಗರ ಬಳಗ  ಈ ವಿಮಾನಯಾನವನ್ನು  ಆದಷ್ಟು ಬೇಗನೇ  ಆರಂಭಿಸುವಂತೆ ವಿಮಾನಯಾನ ಪ್ರಾಧಿಕಾರಕ್ಕೆ ತನ್ನ ಬೇಡಿಕೆ ಸಲ್ಲಿಸಿತ್ತು.  ಇವರ ಮನವಿಯನ್ನು ಮನ್ನೈಸಿದ ಪ್ರಾಧಿಕಾರ ತನ್ನ ಸಮ್ಮತಿ ಸೂಚಿಸಿದೆ.  ಮಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕರಾದ ಶ್ರೀ ಎಮ್.ಆರ್. ವಾಸುದೇವ್ ಅವರು ಈ ಬಗ್ಗೆ ವಿವರ ನೀಡುತ್ತಾ ಅಕ್ಟೋಬರ್ 28ರ ನಂತರ ಯಾವುದೇ ದಿನದಲ್ಲಿ ಈ ಯಾನ ಪ್ರಾರಂಭವಾಗಬಹುದೆಂದು ತಿಳಿಸಿದ್ದಾರೆ.

ವಿಮಾನಯಾನದ ಸಂಭಾವ್ಯ ವೇಳಾಪಟ್ಟಿ ಇಂತಿದೆ (ಅಂತಿಮ ಕ್ಷಣಗಳ ಬದಲಾವಣೆಗೆ ಒಳಪಟ್ಟಿದೆ):   

ಪ್ರಯಾಣದ ದಿನಗಳು: ವಾರದಲ್ಲಿ ಮೂರು ದಿನಗಳು (ಮಂಗಳವಾರ, ಗುರುವಾರ, ಹಾಗೂ ಶನಿವಾರ)

ಕುವೈಟಿನಿಂದ ಹೊರಡುವ ಸಮಯ :  ರಾತ್ರಿ 11:20

ಮಂಗಳೂರಿಗ ಆಗಮಿಸುವ ಸಮಯ: ಮರುದಿನ ಬೆಳಿಗ್ಗೆ 6:10ಕ್ಕೆ

ಮಂಗಳೂರಿನಿಂದ ಹೊರಡುವ ಸಮಯ :  ರಾತ್ರಿ 10:10ಕ್ಕೆ

ಕುವೈಟಿಗೆ  ಆಗಮಿಸುವ ಸಮಯ: ರಾತ್ರಿ 11:10 (ಕುವೈಟ್ ಸಮಯ)

ಕಳೆದವರ್ಷ ಅಕ್ಟೋಬರ್ 6 ರಿಂದ ದುಬೈ ಮಂಗಳೂರಿಗೆ ನೇರ ಪ್ರಯಾಣ ಆರಂಭಿಸಿ ಮಂಗಳೂರು ಅಂತರ್ರಾಷ್ಟ್ರೀಯ ವಾಯುಯಾನಕ್ಕೆ ನಾಂದಿ ಹಾಡಿದ್ದನ್ನು ಇಲ್ಲಿ ಸ್ಮರಿಸಬಹುದು.  ಈಗ ಸಧ್ಯಕ್ಕೆ ಮಂಗಳೂರಿಗೆ ದೋಹಾ-ಬಹ್ರೈನ್, ದುಬೈ ಹಾಗೂ ಮಸ್ಕತ್ ನಗರಗಳಿಗೆ ನೇರ ಸಂಪರ್ಕ ಒದಗಿಸಿದ್ದು  ಕುವೈಟಿನ ಈ ಯಾನದೊಂದಿಗೆ ಜಿ.ಸಿ.ಸಿ ದೇಶಗಳ ಐದು ನಗರಗಳ ಸಂಪರ್ಕ ಹೊಂದಿದಂತಾಗ್ದೆ.  ಶೀಘ್ರದಲ್ಲಿ ಸೌದಿ ಅರೇಬಿಯಾಕ್ಕೂ ಈ ಸೇವೆ ವಿಸ್ತರಿಸಲಿದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕಾಮತ್, ಮಂಜೇಶ್ವರ
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-10-15


ಪ್ರತಿಸ್ಪಂದನ
Iqbal, Mangalore
2008-06-16
This is not True.This news released almost a year back still no flight from Kuwait has landed in Mangalore!. Where do you get this kind of rumors?.This is not ture at all.....
K.S. CHANDRASHEKAR, KASARAGOD
2008-04-07
Iam Shekar from Kuwait.My State is Kerala but Iam a Kannadiga (Karavali).After reading this news I am very very happy. My next vacation is in June. So I will come directly to Mangalore and tell my family about it!.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri