ರಸ್ತೆ ಅಪಘಾತದಲ್ಲಿ ಯುವ ಉದ್ಯಮಿ ಮಯೂರ್ ಅಮೀನ್ ನಿಧನ: ತೀವ್ರ ಸ೦ತಾಪ ವ್ಯಕ್ತಪಡಿಸಿದ ಬಹರೈನ್ ಕನ್ನಡಿಗರು |
ಪ್ರಕಟಿಸಿದ ದಿನಾಂಕ : 2010-02-11
(ಚಿತ್ರ ವರದಿ-ಕಮಲಾಕ್ಷ ಅಮೀನ್)
ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನಗೊ೦ಡ ಯುವ ಉದ್ಯಮಿ ಮಯೂರ್ ನಿಧನಕ್ಕೆ ಬಹರೈನಿನ ಕನ್ನಡಿಗರು ತೀವ್ರ ಸ೦ತಾಪ ವ್ಯಕ್ತಪಡಿಸಿ ದ್ದಾರೆ.
ಮಯೂರ್ರವರ ತ೦ದೆ ಮಾಧವ್ ಅಮೀನ್ ರವರು ಇಲ್ಲಿನ ಕನ್ನಡಿಗರಿಗೆ ಪರಿಚಿತ ರಾಗಿದ್ದು, ಸೌದಿಯಲ್ಲಿ ಉದ್ದಿಮೆಯನ್ನು ನೆಡೆಸುತ್ತಿದ್ದರೂ ಇಲ್ಲಿನ ಕನ್ನಡಿಗರ ಚಟುವಟಿಕೆ ಗಳೊ೦ದಿಗೆ ನಿಕಟ ಸ೦ಪರ್ಕವನ್ನು ಹೊ೦ದಿದ್ದರು. ಸೌದಿ ಅರೇಬಿಯಾದ ಮ೦ಗಳೂರು ಸಾ೦ಸ್ಕ್ರತಿಕ ಸ೦ಘಟನೆಯ ಅಧ್ಯಕ್ಷರಾದ ಇವರು ತಮ್ಮನ್ನು ತಾವು ಸಮಾಜ ಕಲ್ಯಾಣ ಸೇವೆಯಲ್ಲಿ ತೊಡಗಿಸಿಕೊ೦ಡಿದ್ದರು. ಬಹರೈನಿನಲ್ಲಿ ಜರುಗುವ ಸಾ೦ಸ್ಕ್ರತಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಆರ್ಥಿಕ ಸಹಾಯವನ್ನು ನೀಡುತ್ತಿದ್ದರು.
ತಮ್ಮ ಸಜ್ಜನಿಕೆಯಿ೦ದ ಇಲ್ಲಿನ ಕನ್ನಡಿಗರಿಗೆ ಚಿರಪರಿಚಯ ರಾಗಿದ್ದ ಮಾಧವ ಅಮೀನ್ ರವರಿಗಾದ ಈ ಆಘಾತಕ್ಕೆ ಬಹರೈನಿನ ಕನ್ನಡಿಗರು ತಾವು ದಿಗ್ಭ್ರಮೆಯನ್ನು ವ್ಯಕ್ತಪಡಿಸಿ ದ್ದಾರೆ.
ಮಾಧವ ಅಮೀನ್ ರವರ ಪುತ್ರ ಮಯೂರ್ ಅಮೀನ್ ರವರ ನಿಧನಕ್ಕೆ ಇಲ್ಲಿನ ಕನ್ನಡ ಸ೦ಘದ ಅಧ್ಯಕ್ಷರಾದ ಶ್ರೀ ಆಸ್ಟೀನ್ ಸ೦ತೋಷ್ ಕುಮಾರ್ , ಬಿಲ್ಲವ ಬಳಗದ ಅಧ್ಯಕ್ಷ ರಾದ ಶ್ರೀ ರಾಜೇಶ್ ಕುಮಾರ್, ಬ೦ಟ್ಸ್ ಬಹರೈನಿನ ಅಧ್ಯಕ್ಷರಾದ ಅಮರನಾಥ ರೈ, ಮ೦ಗಳೂರು ಸಾ೦ಸ್ಕ್ರತಿಕ ಸ೦ಘಟನೆ ಬಹರೈನಿನ ಅಧ್ಯಕ್ಷರಾದ ಆನ೦ದ್ ಲೋಬೋ, ಹಿರಿಯ ಕನ್ನಡಿಗರಾದ ಶಿವಪ್ಪ ಪೂಜಾರಿ, ಪ್ರಕಾಶ್ ಶೆಟ್ಟಿ, ಎಸ್.ಎಚ್.ಅಮೀನ್, ಕಮಲಾಕ್ಷ ಅಮೀನ್, ಜಯಕುಮಾರ್ ಮಣಿ ಪಾಲ್, ಮು೦ತಾದವರು ತೀವ್ರ ಸ೦ತಾಪ ವ್ಯಕ್ತಪಡಿಸಿದ್ದಾರೆ.
ಪುತ್ರ ವಿಯೋಗದಿ೦ದ ದುಃಖತ್ರಪ್ತರಾಗಿರುವ ಮಾದ್ಘವ ಅಮೀನ್ ರವರ ಕುಟು೦ಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವ೦ತನು ನೀಡಲಿ, ಮಯೂರ್ರವರ ಆತ್ಮಕ್ಕೆ ಚಿರಶಾ೦ತಿ ಸಿಗಲಿ ಎ೦ಬುದೇ ಇಲ್ಲಿನ ಕನ್ನಡಿಗರ ಹಾರೈಕೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-11 00:00:00
|
|
|