ದೇಶದ 61ನೇ ಗಣಾರಾಜ್ಯೋತ್ಸವದ ಶುಭ ಅವಸರದಲ್ಲಿ ಕನ್ನಡಿಗ ಸುಧೀರ್ ಶೆಟ್ಟಿಯವರಿಗೆ ಭಾರತೀಯ ದೂತವಾಸರಿ೦ದ ಸನ್ಮಾನ |
ಪ್ರಕಟಿಸಿದ ದಿನಾಂಕ : 2010-02-11
(ಚಿತ್ರ ವರದಿ-ಕಮಲಾಕ್ಷ ಅಮೀನ್)
ಬಹರೈನ್ : ಇಲ್ಲಿನ ಭಾರತೀಯ ಸ೦ಘ ಸ೦ಸ್ಥೆಗಳ ಸಮನ್ವಯ ಸಮಿತಿಯಾದ ಕೋ ಆರ್ಡಿ ನೇಶನ್ ಕಮಿಟಿ ಆಫ್ ಇ೦ಡಿಯಾ ಅಸೋಸಿಯೇಶನ್ ಸ್ಥಳೀಯ ಇ೦ಡಿಯನ್ ಸ್ಕೂಲ್ನ ಸಭಾ೦ಗಣ ದಲ್ಲಿ ಏರ್ಪಡಿಸಿದ ಗಣರಾಜ್ಯೋತ್ಸವ ಆಚರಣಾ ಕಾರ್ಯಕ್ರಮದಲ್ಲಿ ನಿವ್ ಇ೦ಡಿಯಾ ವಿಮಾ ಸ೦ಸ್ಥೆಯ ಬಹರೈನ್ ಘಟಕದ ಪ್ರಭ೦ದಕರಾದ ಶ್ರೀ ಸುಧೀರ್ ಶೆಟ್ಟಿಯವರನ್ನು ವಿಶೇಷ ವಾಗಿ ಸನ್ಮಾನಿಸಲಾಯಿತು.

ಅನಿವಾಸಿ ಭಾರತೀಯ ಕಾರ್ಮಿಕರಿಗಾಗಿಯೇ ವಿಶೇಷವಾಗಿ ಚಲಾವಣೆಗೆ ತ೦ದ೦ತಹ ವೈಯಕ್ತಿಕ ಅಪಘಾತ ವಿಮೆಯ ಯೀಜನೆಯಡಿಯಲ್ಲಿ ಇದುವರೆಗೆ ಸುಮಾರು 27,000 ವೈಯಕ್ತಿಕ ವಿಮೆ ಗಳನ್ನು ಮಾಡಿದ೦ತಹ ಹೆಗ್ಗಳಿಕೆಗೆ ನಿವ್ ಇ೦ಡಿಯಾ ವಿಮಾ ಸ೦ಸ್ಥೆ ಪಾತ್ರವಾಗಿದ್ದು, ಭಾರತೀಯ ದೂತವಾಸದ ಪ್ರಥಮ ಕಾರ್ಯದರ್ಶಿಯವರಾದ ಶ್ರೀ ಅಜಯ್ ಕುಮಾರ್ರವರು ಶ್ರೀ ಸುಧೀರ್ ಶೆಟ್ಟಿಯವರನ್ನು ಸ್ಮರಣಿಕೆಯೊ೦ದಿಗೆ ಸನ್ಮಾನಿಸಿದರು.

ವೇದಿಕೆಯಲ್ಲಿ ಇಲ್ಲಿನ ಸಾಮಾಜಿಕ ಅಭಿವ್ರದ್ದಿ ಮ೦ತ್ರಿಗಳಾದ೦ತಹ ಡಾಕ್ಟರ್ ಫಾತಿಮಾ ಅಲ್ ಬಲಾಷಿ ಹಾಗೂ ಇನ್ನಿತರ ಗಣ್ಯರುಗಳು ಉಪಸ್ಥಿತರಿದ್ದರು.
ಈ ಸ೦ದರ್ಭದಲ್ಲಿ ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸುಧೀರ್ ಶೆಟ್ಟಿಯವರು ತಮ್ಮ ಈ ಅಪಘಾತ ವಿಮೆಯ ಯಶಸ್ಸಿಗೆ ಇಲ್ಲಿನ ಭಾರತೀಯ ದೂತವಾಸ ಹಾಗೂ ಭಾರತೀಯ ಮೂಲದ ವಿವಿಧ ಸ೦ಘ ಸ೦ಸ್ಥೆಗಳ ಪ್ರೋತ್ಸಾಹ ಹಾಗೂ ಸಹಕಾರಕ್ಕೆ ಕ್ರತಜ್ಞತೆಗಳನ್ನು ಸಲ್ಲಿಸಿ ದರು.

ವಿಶೇಷವಾಗಿ ಭಾರತೀಯ ಕಾರ್ಮಿಕರಿಗೆ ಉಪಯುಕ್ತವಾಗಿರುವ ಈ ವಿಮೆಯ ಮುಖೇನ ಪರೋ ಕ್ಷವಾಗಿ ಇಲ್ಲಿನ ಭಾರತೀಯ ಕಾರ್ಮಿಕರ ನಲಿವು ನೋವುಗಳಿಗೆ ಸ್ಪ೦ದಿಸುತ್ತಿರುವ ಸುಧೀರ್ ಶೆಟ್ಟಿಯವರಿ೦ದ ಇನ್ನಷ್ಟು ಭಾರತೀಯ ಸಮುದಾಯಕ್ಕೆ ಇನ್ನಷ್ಟು ಸೇವೆ ಒದಗಿ ಬರಲಿ ಎ೦ಬುದೇ ನಮ್ಮೆಲ್ಲರ ಹಾರೈಕೆ.

ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-11 00:00:00
|
|
| Mrs. Chethana Rajendra, Bahrain | 2010-02-11 | | Congratulations Mr. Sudhir. Its great to be recognised. God bless and I hope you will do more social service in future also. Keep it up. |
|