ಮಂಗಳೂರು: ಜಿಲ್ಲಾ ಸರಕಾರಿ ಅಸ್ಪತ್ರೆ ವೆನ್ಲಾಕ್ ಗೆ ಅರೋಗ್ಯ ಸಚಿವ ಶ್ರೀರಾಮುಲು ಬೇಟಿ - ಲ್ಯಾಬೋರೆಟರಿಯಲ್ಲಿನ ಅವ್ಯವಸ್ಥೆಗೆ ಸಿಡಿಮಿಡಿಗೊಂಡ ಸಚಿವರು. |
ಪ್ರಕಟಿಸಿದ ದಿನಾಂಕ : 2010-02-09
(ವಿಶೇಷ ವರದಿ ಚಿತ್ರ : ಸತೀಶ್ ಕಾಪಿಕಾಡ್)
ಮಂಗಳೂರು, ಫೆ.09: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್ಲಾಕ್ ಗೆ ಇಂದು ಭೇಟಿ ನೀಡಿದರು. ಅವರು ಬೇಟಿ ನೀಡುವ ಮಾಹಿತಿಯನ್ನು ಮಾದ್ಯಮಗಳಲ್ಲಿ ಮೊದಲೇ ಪ್ರಕಟಿಸಲಾಗಿದ್ದರಿಂದ ಅಸ್ಪತ್ರೆಯನ್ನು ಸಂಪೂರ್ಣವಾಗಿ ಸ್ವಚ್ಚವಾಗಿಡಲಾಗಿತ್ತು.
ಆಸ್ಪತ್ರೆಯ ಸ್ಕ್ಯಾನಿಂಗ್ ಕೊಠಡಿ, ರೋಗಿಗಳ ವಿಭಾಗಗಳನ್ನು ಪರಿಶೀಲಿಸಿದ ಸಚಿವರು ಬಳಿಕ ಮಕ್ಕಳ ಆರೋಗ್ಯ ಕೇಂದ್ರ ಹಾಗೂ ಸರಕಾರಿ ಲ್ಯಾಬೋರೆಟರಿಗೆ ಬೇಟಿ ನೀಡಿದರು.
ಈ ಸಂಧರ್ಭದಲ್ಲಿ ಲ್ಯಾಬೋರೆಟರಿಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡದ ಬಗ್ಗೆ ಅಸಮಾಧಾನಗೊಂಡ ಸಚಿವರು ಬಳಿಕ ಲ್ಯಾಬಿನ ಒಳಗೆ ಕೂಡ ಅವ್ಯವಸ್ಥೆ ಇರುವುದನ್ನು ಗಮನಿಸಿ ಸಿಡಿಮಿಡಿಗೊಂಡರು. ತಕ್ಷಣ ಅಲ್ಲೇ ಇದ್ದ ಸಮ್ಮಂದಪಟ್ಟ ಇಲಾಖೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವರು ಮಂಗಳೂರಿನ ಅಸ್ಪತ್ರೆಗಳ ಬಗ್ಗೆ ತುಂಬಾ ನಿರೀಕ್ಷೆ ಇಟ್ಟಿದೆ. ಆದರೆ ಇಲ್ಲಿನ ಪರಿಸ್ಥಿತಿ ಕಂಡಾಗ ದುಃಖವಾಗುತ್ತದೆ.ಲ್ಯಾಬೋರೆಟರಿಯ ಅವ್ಯವಸ್ಥೆ ಕಂಡಾಗ ಮನಸ್ಸಿಗೆ ಬಹಳ ನೋವಾಗುತ್ತಿದೆ. ಈ ಬಗ್ಗೆ ಸಮ್ಮಂದ ಪಟ್ಟ ಅಧಿಕಾರಿಗಳಿಗೆ ನೋಟಿಸು ಜಾರಿ ಮಾಡಲಾಗುವುದು. ಈ ಅವ್ಯವಸ್ಥೆಯನ್ನು ಈ ತಿಂಗಳ ಒಳಗೆ ಸರಿಪಡಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಸಕ ಎನ್ ಯೋಗಿಶ್ ಭಟ್, ಕರಾವಳಿ ಅಭಿವ್ರದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ ಕುಮಾರ್ ಭಂಡಾರಿ, ಬಿ.ಜೆ.ಪಿ ನಗರಾಧ್ಯಕ್ಷ ಶ್ರೀಕರ್ ಪ್ರಭು, ಜಿಲ್ಲಾ ವೈದ್ಯರ ಸಂಘದ ಅಧ್ಯಕ್ಷ ಡಾ| ಮೋಹನ್ ದಾಸ್ ಭಂಡಾರಿ, ನಾಗರೀಕ ಹಿತಾರಕ್ಷಣ ವೇದಿಕೆಯ ಹನುಮಂತ್ ಕಾಮತ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಕರೀಶ್ಮ.ಶೆಟ್ಟಿ,ಎಸ್,ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-02-09
|
|
|