ಧಾರವಾಡ: ಕರ್ನಾಟಕ ವಿಶ್ವವಿದ್ಯಾನಿಲಯದಿ೦ದ ಭೈರಪ್ಪ, ಜೋಶಿ, ಸವದತ್ತಿಗೆ ಗೌರವ ಡಾಕ್ಟರೇಟ್ |
ಪ್ರಕಟಿಸಿದ ದಿನಾಂಕ : 2010-02-09
ಧಾರವಾಡ, ಫೆ.೮ : ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಅನುಪಸ್ಥಿತಿ ಯಲ್ಲಿ ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ, ವಿಶ್ರಾಂತ ಕುಲಪತಿ ಡಾ. ಎಂ.ಐ. ಸವದತ್ತಿ, ಖ್ಯಾತ ನೇತ್ರ ತಜ್ಞ ಡಾ. ಎಂ.ಎಂ. ಜೋಶಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಸೋಮವಾರ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಡಾ.ಎಂ.ಐ. ಸವದತ್ತಿ, ಈ ಕ್ಷಣ ಅವೀಸ್ಮ ರಣೀಯ. ಈ ವಿಶ್ವವಿದ್ಯಾಲಯದ ಹುಟ್ಟಿನೊಂದಿಗೆ ನಾನು ಪದವಿ ಪಡೆದೆ. ೧೯೫೩ರಲ್ಲಿ ಬಿ.ಎಸ್ಸಿ, ೧೯೫೫ರಲ್ಲಿ ಎಂ.ಎಸ್ಸಿ ಹಾಗೂ ೧೯೬೧ರಲ್ಲಿ ಪಿಎಚ್.ಡಿ ಪಡೆದುಕೊಂಡು ಇದೇ ವಿವಿಯಲ್ಲಿ ಹೆಚ್ಚು ಕಾಲ ಸೇವೆ ಸಹ ಸಲ್ಲಿಸಿದ್ದೇನೆ. ಈ ಗೌರವ ಒಂದು ರೀತಿಯಲ್ಲಿ ತವರು ಮನೆ ಕಾಣಿಕೆ. ವಿಶ್ವ ವಿದ್ಯಾಲಯದ ಗೌರವಕ್ಕೆ ನಾನು ಋಣಿ ಎಂದು ನುಡಿದರು.

ಡಾ.ಎಸ್.ಎಲ್. ಭೈರಪ್ಪ ಮಾತನಾಡಿ, ಈ ವಿಶ್ವವಿದ್ಯಾಲಯ ಸಾಂಸ್ಕೃತಿಕವಾಗಿ ಮಹತ್ವ ಪಡೆದ ವಿಶ್ವವಿದ್ಯಾಲಯ. ಈ ಗೌರವ ಕೊಟ್ಟಿದ್ದು ವಿಶೇಷ ಗೌರವ ಎಂದರು.
ಡಾ. ಎಂ.ಎಂ. ಜೋಶಿ ಮಾತನಾಡಿ, ಕವಿವಿ ನನಗೆ ಈ ಗೌರವ ನೀಡಿದ್ದು ನನ್ನ ಸಂಪತ್ತಿಗೆ ಹಾಗೂ ಜನಪ್ರೀಯತೆಗಲ್ಲ. ಬಡ ಜನರಿಗೆ ಗುಣಮಟ್ಟದ ಸೇವೆ ನೀಡಿರುವ ಕಾರಣ. ಯಾವತ್ತೂ ಈ ವಿಶ್ವವಿ ದ್ಯಾಲಯಕ್ಕೆ ನಾನು ಋಣಿ ಎಂದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ಎಂ.ಎನ್. ವೆಂಕಟಾ ಚಲಯ್ಯ, ಕವಿವಿ ಕುಲಪತಿ ಡಾ.ಎಸ್.ಕೆ. ಸೈದಾಪುರ, ಕುಲಸಚಿವ ಡಾ.ಎಸ್.ಬಿ. ಹಿಂಚಿಗೇರಿ, ಮೌಲ್ಯಮಾಪನ ಕುಲಸಚಿವ ಡಾ.ಸಿ. ರಾಜಶೇಖರ ಮತ್ತಿತರರು ಇದ್ದರು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-09
|
|
|