ಪುತ್ತೂರು: ಪೊಲೀಸ್ ಕಾವಲಿದ್ದರೂ ಸಂಸದ ಡಿ.ವಿ. ಮನೆಯಲ್ಲಿ ಕಳ್ಳತನ; 5 ಲಕ್ಷ ರೂ. ನಗದು, 45 ಪವನ್ ಚಿನ್ನಾಭರಣ: ಉಡುಗೊರೆಯಾಗಿ ಸಿಕ್ಕಿದ ಚಿನ್ನದ ನಾಣ್ಯಗಳ ಕಳವು |
ಪ್ರಕಟಿಸಿದ ದಿನಾಂಕ : 2010-02-09
ಪುತ್ತೂರು, ಫೆ.೮: ಉಡುಪಿ ಸಂಸದ ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಡಿ.ವಿ. ಸದಾನಂದ ಗೌಡರ ಪುತ್ತೂರಿನ ಮನೆಗೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ನಗ-ನಗದು ಕಳವುಗೈದ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಡಿ.ವಿ.ಸದಾನಂದ ಗೌಡರ ಪುತ್ತೂರು ಪಡೀಲು ಎಂಬಲ್ಲಿರುವ ಮನೆಯಿಂದ ಸುಮಾರು ೫ ಲಕ್ಷ ರೂ. ನಗದು ಹಾಗೂ ೪೫ ಪವನ್ ಚಿನ್ನಾಭರಣ ಸೇರಿದಂತೆ ಉಡುಗೊರೆಯಾಗಿ ಸಿಕ್ಕಿದ ಚಿನ್ನದ ನಾಣ್ಯಗಳನ್ನು ಕಳವುಗೈಯಲಾಗಿದೆ ಎಂದು ತಿಳಿದು ಬಂದಿದೆ.
ರವಿವಾರ ತಡರಾತ್ರಿ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯ ೨ ಬೆಡ್ ರೂಂ ಗಳನ್ನು ಜಾಲಾಡಿದ್ದು, ಹಣ ಹಾಗೂ ಚಿನ್ನಗಳಿದ್ದ ೨ ಸೂಟ್ಕೇಸ್ಗಳನ್ನು ಒಯ್ದಿದ್ದಾರೆ. ಮನೆಯಿಂದ ಸುಮಾರು ೧೦೦ ಮೀ. ದೂರದಲ್ಲಿ ಸೂಟ್ಕೇಸ್ಗಳನ್ನು ಒಡೆದಿದ್ದು, ಅದರಲ್ಲಿದ್ದ ನಗ-ನಾಣ್ಯಗಳನ್ನು ದೋಚಿದ್ದಾರೆ. ಈ ಪೈಕಿ ಒಂದು ಸೂಟ್ಕೇಸ್ನೊಳಗಿದ್ದ ಒಂದು ಜೊತೆ ಬೆಂಡೋಲೆ ಹಾಗೂ ೨ ಚಿನ್ನದ ನಾಣ್ಯಗಳನ್ನು ಬಿಟ್ಟು ಹೋಗಿದ್ದಾರೆ. ಇದರೊಳಗಿದ್ದ ಡಿ.ವಿ.ಯವರ ಐಡಿ ಕಾರ್ಡ್ನಿಂದ ಈ ಕಳ್ಳತನ ಬೆಳಕಿಗೆ ಬಂದಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಗೆ ಪೊಲೀಸ್ ಕಾವಲಿದ್ದರೂ, ಈ ಕಳ್ಳತನ ನಡೆದಿರುವುದು ಅಚ್ಚರಿ ಮೂಡಿಸಿದೆ. ಸ್ಥಳಕ್ಕೆ ಜಿಲ್ಲಾ ಅಪರಾಧ ಪತ್ತೆದಳ, ಎಸ್ಪಿ ಸ್ಕ್ವಾಡ್, ಎಎಸ್ಪಿ ಸ್ಕ್ವಾಡ್, ಶ್ವಾನದಳದ ತಂಡ ಬೆರಳಚ್ಚು ತಜ್ಞರು, ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸ್ ಕಾವಲಿದ್ದರೂ ಮನೆಯಲ್ಲಿ ಕಳ್ಳತನ
ಫೆ. ೮: ಉಡುಪಿ - ಚಿಕ್ಕ ಮಗಳೂರು ಸಂಸದ ಡಿ.ವಿ. ಸದಾ ನಂದ ಗೌಡ ಅವರ ಪುತ್ತೂರು ನಗರದ ಪಡೀಲಿನಲ್ಲಿರುವ ಮನೆಗೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ ಮತ್ತು ನಗದು ಕಳವುಗೈದಿದ್ದಾರೆ.. ಸದಾನಂದ ಗೌಡ ಅವರ ಮನೆಗೆ ಸಶಸ್ತ್ರ ಪೊಲೀಸ್ ಸಿಬಂದಿ ಕಾವಲು ಇದ್ದರೂ, ಇಲ್ಲಿ ಕಳ್ಳ ತನ ನಡೆದ ಘಟನೆ ಜನರಲ್ಲಿ ಅಚ್ಚರಿ ಹುಟ್ಟಿಸಿದೆ.
ವಿವಾರ ರಾತ್ರಿಯಿಂದ ಸೋಮ ವಾರ ಬೆಳಗಿನ ಜಾವದ ಒಳಗಿನ ಅವಧಿಯಲ್ಲಿ ಈ ಕಳವಿನ ಘಟನೆ ನಡೆದಿದೆ. ಡಿ.ವಿ. ಸದಾನಂದ ಗೌಡ ಅವರು ರವಿ ವಾರ ರಾತ್ರಿ ೮ ಗಂಟೆಯ ತನಕ ಈ ಮನೆಯಲ್ಲಿದ್ದರು. ಬಳಿಕ ಮಂಗಳೂ ರಿಗೆ ತೆರಳಿದ್ದರು. ೨೪ ತಾಸು ಇಬ್ಬರು ಪೊಲೀಸ್ ಸಿಬಂದಿ ಪಾಳಿಯಲ್ಲಿ ಮನೆಗೆ ಕಾವಲು ನಡೆಸುತ್ತಿದ್ದಾರೆ. ರವಿ ವಾರ ರಾತ್ರಿ ಕೂಡ ಕಾವಲು ಪೊಲೀ ಸರು ಕರ್ತವ್ಯಕ್ಕೆ ಹಾಜರಾಗಿದ್ದರು.
ದಾನಂದ ಗೌಡ ಅವರ ಮನೆಯ ಹಿಂಬದಿಯ ಗ್ರಿಲ್ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಇನ್ನೊಂದು ಬಾಗಿಲಿನ ದಾರಂದವನ್ನು ಕೆತ್ತಿ ಒಳಗೆ ಪ್ರವೇಶಿಸಿದ್ದಾರೆ. ಮನೆಯೊ ಳಗಿದ್ದ ಸೊತ್ತುಗಳನ್ನು ಜಾಲಾಡಿದ ಕಳ್ಳರು ಚಿನ್ನಾಭರಣ ಮತ್ತು ನಗದು ಹಣವಿದ್ದ ಸೊಟ್ಕೇಸುಗಳನ್ನು ಮನೆ ಯಿಂದ ಹೊತ್ತೊಯ್ದು ಪಡೀಲಿನ ಕೋಳಿ ಅಂಗಡಿ ಬಳಿ ಸೊತ್ತು ತೆಗೆದು ಎಸೆದು ಹೋಗಿದ್ದಾರೆ.
ಸೋಮವಾರ ಬೆಳಗ್ಗೆ ಕೋಳಿ ಅಂಗಡಿಯ ಬಳಿ ಎರಡು ಸೂಟ್ಕೇಸುಗಳು ತೆರೆದ ಸ್ಥಿತಿಯಲ್ಲಿ ಬಿದ್ದಿದ್ದು, ಅಲ್ಲಿ ಚಿನ್ನದ ಸರ, ಕಿವಿಯ ಬೆಂಡು ಮತ್ತು ಡಿ.ವಿ. ಸದಾನಂದ ಗೌಡರ ಭಾವಚಿತ್ರವಿರುವ ಗುರುತು ಪತ್ರ ಕಂಡ ಸ್ಥಳೀ ಯರು ತತ್ಕ್ಷಣ ಪೊಲೀಸರಿಗೆ ತಿಳಿಸಿದರು. ಮನೆಯಲ್ಲಿ ಕಳ್ಳತನದ ವಿಚಾರ ತಿಳಿದ ಸದಾನಂದ ಗೌಡ ಮಂಗಳೂರಿ ನಿಂದ ಧಾವಿಸಿದರು.
ಶ್ವಾನದಳ ಆಗಮನ: ಡಿವಿಎಸ್ ಮನೆಯಲ್ಲಿ ನಡೆದ ಕಳವಿನ ಪ್ರಕರಣದ ತನಿಖೆಗೆ ಸಹಕರಿಸಲು ಪುತ್ತೂರು ನಗರ ಪೊಲೀಸರು ಶ್ವಾನದಳವನ್ನು ಸ್ಥಳಕ್ಕೆ ಕರೆಸಿದ್ದರು. ಡಿ.ವಿ.ಯವರ ಮನೆಯಿಂದ ಹೊರಟ ನಾಯಿ ಸಾಲ್ಮರ ರಸ್ತೆಯ ತನಕ ತೆರಳಿ ಅಲ್ಲಿಂದ ಮತ್ತೆ ಮುಖ್ಯ ರಸ್ತೆಯಲ್ಲಿ ಬಂದು ಸೂಟ್ ಕೇಸುಗಳು ಬಿದ್ದಿದ್ದ ಸ್ಥಳಕ್ಕೆ ಬಂದು ಶ್ವಾನ ನಿಂತಿತು. ಮುಂದೆ ಆರೋಪಿಯ ವಾಸನೆಯನ್ನು ಗ್ರಹಿಸಲು ಪೊಲೀಸ್ ಶ್ವಾನಕ್ಕೆ ಸಾಧ್ಯವಾಗಲಿಲ್ಲ.
ಬೆರಳಚ್ಚು ತಜ್ಞರು ಕೂಡಾ ಸ್ಥಳಕ್ಕೆ ಆಗಮಿಸಿದ್ದಾರೆ. ಪುತ್ತೂರು ಎ.ಎಸ್ಪಿ. ಡಾ| ಚಂದ್ರಗುಪ್ತಾ, ಪುತ್ತೂರು ನಗರ ಪೊಲೀಸ್ ಇನ್ಸ್ಪೆಕ್ಟರ್ ಕೆ. ಶ್ರೀಕಾಂತ್ ಮತ್ತು ಸಿಬಂದಿಗಳು ಸ್ಥಳಕ್ಕೆ ಆಗಮಿಸಿ, ತನಿಖಾ ಕಾರ್ಯ ಕೈಗೊಂಡರು. ಡಿವಿಎಸ್ ಅವರ ಆಪ್ತ ಸಹಾಯಕ ಧರ್ಣಪ್ಪ ಗೌಡ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಸಾಮಾನ್ಯರ ಪಾಡೇನು?: ಡಿ.ವಿ. ಸದಾನಂದ ಗೌಡ ಸ್ಥಳದಲ್ಲಿ ಹಾಜರಿದ್ದ ಎಎಸ್ಪಿ ಡಾ| ಚಂದ್ರಗುಪ್ತ ಅವರಲ್ಲಿ ಪೊಲೀಸ್ ಕಾವಲು ಇರುವ ಮನೆಯಲ್ಲಿ ಕಳವಾದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ಕಾವಲು ಪೊಲೀಸರು ಎಲ್ಲಿದ್ದರು?
ಕಾವಲು ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಸಿಬಂದಿ ರವಿವಾರ ರಾತ್ರಿ ಸ್ಥಳದಲ್ಲಿ ಹಾಜರಿದ್ದರೇ ಅಥವಾ ಕರ್ತವ್ಯ ಪುಸ್ತಕಕ್ಕೆ ಸಹಿ ಹಾಕಿ ಮನೆಗೆ ತೆರಳಿದ್ದರೇ ಎಂಬ ಸಂಶಯ ಸಾರ್ವ ಜನಿಕರನ್ನು ಕಾಡುತ್ತಿದೆ. ಒಟ್ಟಿನಲ್ಲಿ ಪೊಲೀಸ್ ಕಾವಲು ಇರುವ ಡಿ.ವಿ. ಸದಾನಂದ ಗೌಡರ ಮನೆಗೆ ಕಳ್ಳರು ನುಗ್ಗಿ ಕಳವುಗೈದ ಘಟನೆ ಜನರಲ್ಲಿ ಚರ್ಚೆಗೆ ಕಾರಣವಾಗಿದೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ | ಉದಯವಾಣಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-09
|
|
| ಬದ್ರುದ್ದೀನ್ ಹೆಂತಾರ್, ದುಬೈ | 2010-02-09 | | ಕರ್ನಾಟಕದಲ್ಲಿ ೧೫ ಕೋಟಿ ಮನೆಗಳಿವೆ ಅವುಗಳೀಗೆ ರಕ್ಷಣೆ ನೀಡಲು ಸಾದ್ಯವಿಲ್ಲ ಎಂದು ಗೃಹ ಸಚಿವಾಲಯದಿಂದ ಪ್ರತಿಕ್ರಿಯೆ ಈ ಸಲ ಬರಲಾರದು.ಇಲ್ಲಿ ರಕ್ಷಣೆಗೆ ನಿಂತ ಪೋಲೀಸರ ಕಣ್ಣಿಗೆ ಮಣ್ಣೆರಚಿ ಕಳ್ಳರು ಸಲೀಸಾಗಿ ಕದ್ದಿದ್ದಾದೆ ಅದೂ ಕೂಡ ಓರ್ವ ಸಂಸದರ ಮನೆಯಿಂದಾದರೆ ಜನ ಸಾಮಾನ್ಯರ ಅವಸ್ಥೆ ನಮ್ಮಲ್ಲಿ ಏನಾಗಿರಬಹುದು?
ಕಳ್ಳತನ, ಸುಲಿಗೆ,ಮೋಸ,ದರೋಡೆ, ಅಕ್ರಮ,ಕೊಲೆ, ಘರ್ಷಣೆ,ಕೋಮು ವಿದ್ವೇಷ, ಆರಾಧನಾಲಯಗಳ ಮೇಲೆ ಆಕ್ರಮಣ ಹೀಗೆ ಅಪರಾಧಗಳು ನಮ್ಮ ರಾಜ್ಯದಲ್ಲಿ ದಿನೇ ದಿನೇ ಹೆಚ್ತಾನೆ ಇದೆ. ಗೃಹ ಸಚಿವಾಲಯ ಎಚ್ಚೆತ್ತು ತಕ್ಷಣ ಪ್ರತಿಕ್ರಯಿಸದಿದ್ದರೆ ಜನರೀಗೆ ಸರಕಾರದ ಮೇಲಿರುವ ವಿಶ್ವಾಸ ನಷ್ಟವಾಗಿ ಮುಂದಿನ ಚುನಾವಣೆಯವರೇಗೆ ಕಾಯಲಾರರು.
ಜನತೆ ನೆಮ್ಮದಿಯ ಉಸಿರು ಬಿಡುವಂತಾಗಲಿ ಎಂದು ನಾವೆಲ್ಲಾ ಹಾರೈಸುವ.
|
|