ಯಾವುದೇ ಮತಾಂತರ ಮಾಡುವುದು ಸೇವೆಯಲ್ಲ: ಭಾಗವತ್ ಕಿಡಿ |
ಪ್ರಕಟಿಸಿದ ದಿನಾಂಕ : 2010-02-09
ಬೆಂಗಳೂರು, ಸೋಮವಾರ, 8 ಫೆಬ್ರವರಿ 2010
ಇಸ್ಲಾಂನ ಜಿಹಾದಿಗಳಿಗೆ ಹಿಂದೂಗಳ ವಿರುದ್ಧ ಹೋರಾಡುವುದೇ ಪುಣ್ಯದ ಕೆಲಸ ಎಂದು ಭಾವಿಸಿರುವ ಹಾಗೆ, ಕ್ರೈಸ್ತ ಮಿಷನರಿಗಳು ಮತಾಂತರ ಮಾಡುವುದೇ ಸೇವೆ ಎಂಬುದಾಗಿ ಹೇಳುತ್ತವೆ. ಇದು ನಿಜಕ್ಕೂ ಅಪರಾಧ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರಿಷ್ಠ ಮೋಹನ್ ಭಾಗವತ್ ತಿಳಿಸಿದ್ದು, ಮತಾಂತರ ಮಾಡುವುದು ಸೇವೆಯಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸೇವಾಭಾರತಿ ನಗರದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಮಟ್ಟದ ಸಮಾವೇಶದಲ್ಲಿ ಕ್ರೈಸ್ತ ಮಿಷನರಿಗಳ ಕಾರ್ಯವೈಖರಿ ಬಗ್ಗೆ ಮಾತನಾಡಿದರು.
ಸೇವೆ ಮಾಡುವುದು ಪುಣ್ಯದ ಸಂಪಾದನೆ ಅಲ್ಲ ಎಂದ ಭಾಗ್ವತ್, ಅದರ ಹಿಂದೆ ಸದುದ್ದೇಶ ಇರಬೇಕು. ಆದರೆ ಇಂದು ಕೆಲವರಿಗೆ ಅದು ಫ್ಯಾಷನ್ ಆಗಿದೆ. ಯಾರನ್ನೋ ಮುಗಿಸಲು ಸೇವೆಯ ಹೆಸರಿನಲ್ಲಿ ಮತಾಂತರ ಮಾಡುವುದು ಒಪ್ಪತಕ್ಕ ವಿಷಯವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಸೇವೆಯ ಹೆಸರಿನಲ್ಲಿ ಕ್ರೈಸ್ತ ಮಿಷನರಿಗಳ ವಿವಿಧ ಸಂಘಟನೆಗಳು ವ್ಯವಸ್ಥಿತವಾಗಿ ಅನಕ್ಷರಸ್ಥರನ್ನು ಮತಾಂತರ ಮಾಡುತ್ತಿವೆ ಎಂದು ಆಪಾದಿಸಿದ ಅವರು, ಸೇವೆ ಎನ್ನುವುದು ಜನರನ್ನು ಸಮೃದ್ದಗೊಳಿಸಬೇಕು ಎಂದರು.
ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಮಾಜಕ್ಕಾಗಿ ಕಾರ್ಯನಿರ್ವಹಿಸುವವರನ್ನು, ಮಡಿಯುವವರನ್ನು ತಯಾರು ಮಾಡುತ್ತಿದೆ. ಯಾರೂ ಸ್ವಾರ್ಥಕ್ಕಾಗಿ ಕಾರ್ಯನಿರ್ವಹಿಸದೆ, ಸಮಾಜ ಕಟ್ಟು ಕೆಲಸದಲ್ಲಿ ತೊಡಗೋಣ ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-09 00:00:00
|
|
| Ronald, Udupi | 2010-02-10 | | Hey Bhagawatha, Do you mean to say, stoning Church and Masjid is sewe? |
| Ibrahim Hussain, Udipi, Karnataka | 2010-02-09 | | ಮಸ್ಜಿದ್ ಮತ್ತು ಚರ್ಚ ಗಳಿಗೆ ದಾಳಿಯಿಡುವ ಮತ್ತು ಸಮಾಜದ ಸ್ವಾಸ್ತ ಕೆಡಿಸುವೂದು ಕೇಸರಿವಾದಿಗಳ ಸೇವೆಯಲ್ಲ. ಇದು ಪುಂಡಾಟಿಕೆ ಎಂದು ಹೇಳಿರಿ ತಾಳಮದ್ದಳೆಯ ಭಾಗವತರೇ. |
|