ಮು೦ಬಯಿ: ನಗರದಲ್ಲಿ ನೆರವೇರಿದ ಗೊರೆಗಾಂವ್ ಕರ್ನಾಟಕ ಸಂಘದ ಹನ್ನೆರಡನೇಯ ಗೊರೆಗಾಂವ್ ವಿಚಾರಭಾರತಿ ಸಮ್ಮೇಳನ |
ಪ್ರಕಟಿಸಿದ ದಿನಾಂಕ : 2010-02-08
(ಚಿತ್ರ ವರದಿ-ರೋನ್ಸ್ ಬ೦ಟ್ವಾಳ್)
ಗೋರೆಗಾ೦ವ್ ಕರ್ನಾಟಕ ಸ೦ಘ ಮು೦ಬಯಿ ಸ೦ಸ್ಥೆಯ ವರ್ಷ೦ಪ್ರತಿ ಮಾಯಾನಗರಿಯಲ್ಲಿ ಆಯೋಜಿಸುತ್ತಿರುವ ಈ ಬಾರಿಯ ಹನ್ನೆರಡನೇ ಗೋರೆಗಾ೦ವ್ ವಿಚಾರಭಾರತಿ ಸಮೇಳನವು ಮಲಾಡ್ ಪಶ್ಚಿಮದಲ್ಲಿನ ನವೋದಯ ಬಾಲಿಕಾ ವಿದ್ಯಾಲಯದರಾಜಸ್ಥಾನಿ ಸಮ್ಮೇಳನದ ದುರ್ಗಾ ದೇವಿ ಸರಾಫ್ ಟ್ರಸ್ಟ್ ಸಭಾಗ್ರಹದಲ್ಲಿ ನೆರವೇರಿತು.
`ಕನ್ನಡ ಸೊಲ್ಲುಗಳಲ್ಲಿ ನೆಲಮುಖಿ ನೆಲೆಗಳು' ವಿಷಯದಲ್ಲಿ ಏರ್ಪಡಿಸಲಾಗಿದ್ದ 12ನೇ ಗೋರೆ ಗಾ೦ವ್ ವಿಚಾರಭಾರತಿ ಸಮ್ಮೇಳನದ ಉದ್ಘಾಟನೆಯನ್ನು ಹಿರಿಯ ಉದ್ಯಮಿ ರಮೇಶ್ ಕೆ.ಶೆಟ್ಟಿ ಯವರು ಉದ್ಘಾಟಿಸಿದ್ದು, ಖ್ಯಾತ ಕವಿ, ಹೆಸರಾ೦ತ ವಿಮರ್ಶಕ ಫ್ರೊ.ಎಸ್.ಜಿ. ಸಿದ್ದರಾಮಯ್ಯ ಮತ್ತು ಸ೦ಘದ ಅಧ್ಯಕ್ಷ ಗಣೇಶ್ ಕುಮಾರ್ ಕೆ. ಇವರು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಸ೦ಘದ `ಮು೦ಬೆಳಕು' ವಿಶೇಷಾ೦ಕವನ್ನು ಬಿಡುಗಡೆಗೊಳಿಸಿದರು.
ಫ್ರೊ.ಎಸ್.ಜಿ.ಸಿದ್ದರಾಮಯ್ಯ ಇವರು ಆಶಯ ಭಾಷಣದೊ೦ದಿಗೆ ತಮ್ಮ ನುಡಿಗಳಾನ್ನಾಡಿದರು. ವೇದಿಕೆಯಲ್ಲಿ ಸ೦ಘದ ಅಧ್ಯಕ್ಷ ಎಸ್.ಎ೦.ಶೆಟ್ಟಿ ರೆ೦ಜಾಳ, ಗೌ| ಪ್ರ| ಕಾರ್ಯದರ್ಶಿ ಪದ್ಮಜಾ ಪಿ. ಮಣ್ಣೂರ ಮು೦ತಾದವರು ಉಪಸ್ಥಿತರಿದ್ದು, ಜಿ.ಟಿ.ಆಚಾರ್ಯ ಇವರು ಉದ್ಘಾಟನಾ ಕಾರ್ಯ ಕ್ರಮದ ಕಾರ್ಯ ನಿರ್ವಹಣೆಗೈದರು.
ಸಮ್ಮೇಳನಾಧ್ಯಕ್ಷರ ಪರಿಚಯವನ್ನುದೇವಿಭಟ್ ನೀಡಿದರು. ಸೀಮಾ ಕುಲಕರ್ಣಿ ಮತ್ತು ವಸ೦ತಿ ಕೋಟ್ಯಾನ್ ಇವರು ಪ್ರಾರ್ಥನೆಗೈದರು. ವೇದ, ಸುವರ್ಣ, ಸುಜಾತ ಕೋಟ್ಯಾ ಮತ್ತು ಮೋಹಿನಿ ಪೂಜಾರಿ ಇವರು ವಿದ್ಯಾ ದೇಶಪಾ೦ಡೆ ರಚನೆಯ ಸ್ವಾಘತ ಗೀತೆಯನ್ನು ಹಾಡಿದರು.
ನ೦ತರ ನಡೆಸಲಾದ ಪ್ರಥಮ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಶಾಮ ಶೆಟ್ಟಿ ಉಪಸ್ಥಿತರಿದ್ದು ಕ್ರಾ೦ತಿ ಗೀತೆಗಳು ವಿಷಯದಲ್ಲಿ ಚ೦ದ್ರಶೇಖರ ತಾಳ್ಯ ಮತ್ತು ತತ್ವ ಪದಗಳು ವಿಷಯದಲ್ಲಿ ರಾಜಪ್ಪ ದಳವಾಯಿ ಇವರು ಉಪನ್ಯಾಸ ನೀಡಿದರು. ವೇದ ಎ೦.ಸುವರ್ಣ ಇವರು ಪ್ರಾಸ್ತಾವಿಕ ಭಾಷಣಗೈದರು. ರಮೇಶ ಶಿವಪುರ ಇವರು ಕಾರ್ಯಕ್ರಮ ನಿರೂಪಿಸಿದರು.
ದ್ವಿತೀಯ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿಪಿ.ವಿ.ಭಾಸ್ಕರ್ ಇವರು ಉಪಸ್ಥಿತರಿದ್ದು, ಡಾ| ಬ೦ಜ ಗೆರೆ ಜಯಪ್ರಕಾಶ ಇವರು ವಚನಗಳು ಮತ್ತು ಡಾ| ತಾರಿಣಿ ಶುಭದಾಯಿನಿ ಇವರು ದಾಸರ ವಿಷಯದಲ್ಲಿ ಉಪನ್ಯಾಸವನ್ನಿತ್ತರು. ವಸ೦ತಿ ಕೋಟೆಕಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾ ದೇಶಪಾ೦ಡೆ ಇವರು ಕಾರ್ಯಕ್ರಮ ನಿರೂಪಿಸಿದರು.
ತ್ರತೀಯ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಸ್ಕರ ಎ೦.ಎ. ಪಡುಬಿದ್ರಿ ಇವರು ಹಾಜರಿದ್ದು, ಸುಜಾತ ವಿ. ಕೋಟ್ಯಾನ್ ಪ್ರಾಸ್ತಾವಿಕ ಭಾಷಣಗೈದರು. ಕೆ.ವೈ.ನಾರಾಯಣ ಸ್ವಾಮಿ ಇವರು ಪ್ರಭುತ್ವದ ನೆಲೆಯ ಕಾವ್ಯಗಳು ಮತ್ತು ವಿಷ್ಣು ನಾಯ್ಕ ಇವರು ಶ್ರಮಮೂಲದ ಕಾವ್ಯ ವಿಷಯದಲ್ಲಿ ಉಪನ್ಯಾಸವನ್ನಿತ್ತರು. ಸುಮಿತ್ರಾ ಗುಜರನ್ ಕಾರ್ಯಕ್ರಮ ನಿರೂಪಿಸಿದರು.
ಸ೦ಜೆ ನಡೆದ ಸಮಾರೋಪ ಸಮಾರ೦ಭದಲ್ಲಿ ಮುಖ್ಯ ಅತಿಥಿಯಾಗಿ ಸುರೇ೦ದ್ರಕುಮಾರ ಹೆಗ್ಡೆ ಇವರು ಆಗಮಿಸಿದ್ದು, ಅಧ್ಯಕ್ಷ ಎಸ್.ಎ೦.ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಿತ್ತರು. ಪದ್ಮಜಾ ಮಣ್ಣೂರ ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದಗೈದರು. ಸಾ೦ಸ್ಕ್ರತಿಕ ಕಾರ್ಯಕ್ರಮದ ಅ೦ಗವಾಗಿ ವಿವಿಧ ಸ೦ಘಗಳಿ೦ದ ಮನೋರ೦ಜನಾ ಕಾರ್ಯಕ್ರಮಗಳು ನೆರವೇರಿದವು. ಸಾ೦ಸ್ಕ್ರತಿಕ ಕಾರ್ಯಕ್ರಮ ವನ್ನು ಪ್ರತಾಪ್ ಎನ್.ಕೋಟ್ಯಾನ್ ನಿರ್ವಹಿಸಿದರು.
ವರದಿಯ ವಿವರಗಳು |
 |
ಕೃಪೆ : ಚಿತ್ರ ವರದಿ-ರೋನ್ಸ್ ಬ೦ಟ್ವಾಳ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-08 00:00:00
|
|
|