ಬಿಎಸ್ಕೆಬಿಎ ಪ್ರಾಯೋಜಕತ್ವದ ಆಶ್ರಯದಲ್ಲಿ ಭಾವೈಕ್ಯತೆಯ ಸಹಮಿಲನ ಆಶ್ರಯವು ಸಮಗ್ರ ಜನತೆಗೆ ಆಸರೆ ನೀಡಬಲ್ಲ ವಿಶ್ವಪ್ರಿಯ ತಾಣವಾಗಲಿ : ನ್ಯಾ| ರೋಹಿಣಿ ಸಾಲ್ಯಾನ್ |
ಪ್ರಕಟಿಸಿದ ದಿನಾಂಕ : 2010-02-08
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಜಾತಿ-ಧರ್ಮ-ಮತ-ಪಂಥ-ಧರ್ಮ ಬರೇ ಮಾನವ ರೂಪಿಸಿದ ಸ್ವಾರ್ಥದ ಹಾದಿಯಾಗಿದ್ದು, ಇದು ಸರ್ವ ಧರ್ಮ ಸಮನ್ವಯತೆಯ ಬಾಳಿಗೆ ಅಡ್ಡಿಯಾಗದಿರಲಿ. ಬದಲಾಗಿ ಬ್ರಹ್ಮಶ್ರೀ ನಾರಾಯಣ ಗುರುವಿನ ಯುಕ್ತಿಯನುಸಾರ ರೂಪುಗೊಂಡ ಈ ಆಶ್ರಯ ಸಮಗ್ರ ಜನತೆಗೆ ಮಾರ್ಗದರ್ಶನ ನೀಡಬಲ್ಲ ಯೋಜನೆಯಾಗಲಿ. ಆಶ್ರಯ ತಾಣವು ಸುಖೋಷ್ಣತೆ ಭಾವನೆಯ ಕೇಂದ್ರವಾಗಿದ್ದು, ಜೀವನದ ಸಂಧ್ಯಾ ಕಾಲ ಕಳೆಯಲು ಸೂಕ್ತ ಇದು ಭವನ, ನನ್ನ ಮಾತಾಪಿತರ ಅಂದಿನ ಜೀವನ ವನ್ನು ಸದಾ ನೆನಪಿಸುತ್ತಾ, ಇವೆಲ್ಲಕ್ಕೂ ಇಂತಹ ಯೋಜನೆ ವರವಾಗಲಿ ಎಂದು ಮಹರಾಷ್ಟ್ರ ರಾಜ್ಯ ಸರಕಾರಿ ಪ್ರಾಸಿಕ್ಯೂಟರ್ ನ್ಯಾ| ರೋಹಿಣಿ ಜೆ.ಸಾಲ್ಯಾನ್ ನುಡಿದರು.
ಮುಂಬಯಿ ಮಹಾನಗರದಲ್ಲಿ ಹಲವಾರು ದಶಕಗಳಿಂದ ಸೇವಾ ನಿರತ ಕರ್ನಾಟಕ ಕರಾವಳಿ ಪ್ರಾಂತ್ಯದ ಬ್ರಾಹ್ಮಣ ಸಮೂದಾಯದ ಪ್ರತಿಷ್ಠಿತ ಸಂಸ್ಥೆ ಬಿಎಸ್ಕೆಬಿ ಎಸೋಸಿಯೇಶನ್ (ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್ಸ್ ಎಸೋಸಿಯೇಶನ್) ಮತ್ತು ಗೋಪಾಲಕ್ರಷ್ಣ ಪಬ್ಲಿಕ್ ಟ್ರಸ್ಟ್ ಇವುಗಳ ಸಂಚಾಲಕತ್ವದಲ್ಲಿ ಉಪನಗರ ನವಿ ಮುಂಬಯಿಯ ನೆರೂಳ್ ಇಲ್ಲಿನ ಸೆಕ್ಟರ್-೧೯ರಲ್ಲಿ ಸ್ಥಾಪಿಸಲ್ಪಟ್ಟ ವಯೋವೃದ್ಧರ ಮುದಿ ಜೀವಕ್ಕೆ ಸಾಂತ್ವನ ತುಂಬುವ ನೆಮ್ಮದಿಯ ತಾಣ ಮತ್ತು ಹಿರಿಯರ ನೆಮ್ಮದಿಯ ಬಾಳಸಂಜೆಗೊಂದು ಆಧಾರಕೇಂದ್ರ ಎಂದೇ ಕರೆಯಲ್ಪಡುವ ಆಶ್ರಯದ ಸಭಾಗೃಗದಲ್ಲಿ ಕಳೆದ (೦೬.೦೨.೨೦೧೦) ಶನಿವಾರ ಅಪರಾಹ್ನ ವೈಶಿಷ್ಟ್ಯಮಯವಾದ ಕಾರ್ಯ ಕ್ರವಾಗಿ 'ಭಾವೈಕ್ಯತೆಯ ಸಹಮಿಲನವನ್ನು ಆಯೋಜಿದ್ದು, ನ್ಯಾ| ರೋಹಿಣಿ ಸಾಲ್ಯಾನ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿ ಮಾತನಾಡಿದರು.
ಬಿ.ಎಸ್.ಕೆ.ಬಿ ಎಸೋಸಿಯೇಶನ್ನ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲ್ ಇವರು ಸಮಾ ರಂಭದ ಅಧ್ಯಕ್ಷತೆಯನ್ನು ವಹಿಸಿದ್ದು, ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ದೇವಾಡಿಗರ ಸಂಘ ಮುಂಬಯಿ ಇದರ ನಿಕಟಪೂರ್ವ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಶಾಫಿ ಬ್ಯಾರಿ ವೆಲ್ಫೇರ್ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ನ್ಯಾ| ಬಿ.ಮೊಹಿದ್ಧೀನ್ ಮುಂಡ್ಕೂರು, ಭಂಡಾರಿ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಬಾಲಕ್ರಷ್ಣ ಪಿ.ಭಂಡಾರಿ, ಹೆಚ್ಡಿಎಫ್ಸಿ ಬ್ಯಾಂಕ್ನ ಪ್ರಧಾನ ಪ್ರಬಂಧಕ ದಿಲೀಪ್ ಶೆಟ್ಟಿ, ಗೋದ್ರೇಜ್ ಸಂಸ್ಥೆಯ ಉನ್ನತಾಧಿಕಾರಿ ಸೋಮನಾಥನ್, ಬಂಟರ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಡಾ| ಪದ್ಮನಾಭ ವಿ. ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಆಸೀನರಾಗಿದ್ದರು.
ಸಾಮರಸ್ಯದ ಬಾಳಿಗೆ ಮುಂಬಯಿಯಲ್ಲಿ ಉತ್ತಮವಾದ ವಾತಾವರಣ ಇದೆ. ನಮ್ಮೂರ ಜನತೆ ಯ ಸಾಂಘಿಕ ಬದುಕು ಇದಕ್ಕೆ ಉದಾಹರಣೆಯಾಗಿದ್ದು, ತವರೂರ ದೈವ-ದೇವರುಗಳ ಅನುಗ್ರಹ ಇದಕ್ಕೆ ವರವಾಗಿದೆ. ನನಗೆ ಮತ್ತು ಬಿಎಸ್ಕೆಬಿ ಸಂಸ್ಥೆಗೆ ಅವಿನಾಭಾವ ಸಂಭದವಿದೆ. ನಾನು ಬಂಟನಾಗಿದ್ದು, ಅವರು ಬ್ರಾಹ್ಮೀಣರು ಆಗಿರಬಹುದು. ಆದರೆ ನಮಗೆ ತಾಯಿ ಮಾತ್ರ ಒಬ್ಬಳೇ ಕಟೀಲಶ್ವರಿ ಆಗಿದ್ದಾರೆ.
ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವ ಪಾವಿತ್ರ್ಯತೆಯ ಕಾಯಕಕ್ಕೆ ವಾತಾವರಣ ಸೃಷ್ಠಿಸಿದ ಈ ಸಂಸ್ಥೆಯ ನಿಜವಾಗಿಯೂ ಸಮಾಂಜಸ ಮತ್ತು ಅನುಕರಣೀಯವಾಗಿದೆ. ಆಶ್ರಯ ಯೋಜನೆ ೧೦೦% ಶತ ಫಲಧಿತ. ಇಲ್ಲಿ ಎನೂ ಕಡಿಮೆ ಇಲ್ಲದ ವ್ಯವಸ್ಥೆ ಮುಕ್ತ ಕಾಣಲು ಸಿಗುತ್ತಿ ದ್ದು, ನೋಡಲು ಬಂದವರಿಗೆ ತಂಗುವ ಬಯಕೆ ಇಲ್ಲಿ ನಿರ್ಮಾಣಗೊಂಡಿದೆ ಎಂದು ಐಕಳ ಹರೀಶ್ ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ನ್ಯಾ| ಮೊಹಿದ್ದೀನ್ ಮಾತನಾಡಿ ಈ ಆಶ್ರಯಯದ ಕಟ್ಟಡ ಕೇವಲ ಸಿಮೆಂಟ್ ಮತ್ತು ಕಲ್ಲುಗಳ ಜೋಡಣೆಯಿಂದ ನಿರ್ಮಾಣ ಆಗಿಲ್ಲ. ಇದು ಪ್ರೀತಿ ಮತ್ತು ಮಮತೆಯಿಂದ ನಿರ್ಮಾಣಗೊಂಡ ಪುಣ್ಯ ಕಟ್ಟಿಕೊಳ್ಳುವ ತಾಣವಾಗಿದೆ. ಇದು ಮಾನವೀಯತೆಯನ್ನು ಮೆರೆಯುವ ಅತೀ ದೊಡ್ಡ ಸಾಧನೆ ಆಗಿದೆ. ನಮ್ಮ ಪವಿತ್ರ ಕುರಾನ್ ನುಡಿಯಂತೆ ಈ ಭವನ ಸಿದ್ಧಗೊಂಡಂತಿದೆ. ಜಾತಿ-ಮತ-ಧರ್ಮವನ್ನು ಬದಿಗಿರಿಸಿ ಮಾನವೀಯತೆಯ ಮೌಲ್ಯಕ್ಕೆ ಸ್ಪಂದಿಸಿ ವಯೋವೃದ್ಧರಿಗೆ ಬದುಕು ರೂಪಿಸುವ ಈ ಯೋಜನೆ ಎಲ್ಲರಿಗೂ ಮಾದರಿಯಾಗಲಿ ಎಂದರು.
ಮಹಾನಗರಿಯಲ್ಲಿನ ನೂರಾರು ಹಿರಿಯ ನಾಗರಿಕರು ಉತ್ತಮ ವಾತಾವರಣ ಹರಸಿ ಕೊಯ ಮುತ್ತೂರು ಮತ್ತಿತರ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಆಶ್ರಯದಂಥ ಕೇಂದ್ರಗಳಲ್ಲಿ ದಿನ ನಿತ್ಯದ ಸೇವಾಧಿಗಳಿಗೆ ಉತ್ತಮ ತರಬೇತಿ ನೀಡಿ ಹಿರಿಯ ನಾಗರಿಕರಿಗೆ ತಾಳ್ಮೆಯಿಂದ ಕಾಣುವು ದನ್ನು ಕಲಿಸುವುದು ಅತ್ಯವತ್ಯ, ವಯೋವೃದ್ಧರಿಗೆ ಅಥವಾ ಅವರ ಮಕ್ಕಳಿಗೆ ಹಣ ಮುಖ್ಯವಾಗಿ ಭಾದಿಸುವುದಿಲ್ಲ. ಎಲ್ಲರಿಗೂ ಸಹಿಷ್ಣುತೆಯಿ೦ದ ಕಾಣುವ ಸದ್ಗುಣಗಳ ಸೇವೆ ಅಗತ್ಯ ವಾಗಿರುತ್ತದೆ ಎಂದು ಸೋಮನಾಥನ್ ತಿಳಿಸಿದರು.
ಧರ್ಮಪಾಲ್ ದೇವಾಡಿಗ ಮಾತನಾಡಿ ಈ ಆಶ್ರಯ ಎಂದರೆ ಎಲ್ಲರ ಮನೆ ಇದ್ದಹಾಗೆ. ಇಲ್ಲಿ ಭಾರತಾಂಭೆಯ ಮಕ್ಕಳಿಗೆಲ್ಲರಿಗೂ ಒಂದೇ ಸೂರು ಕಾಣಸಿಗುತ್ತದೆ. ಸ್ನೇಹಮಯಿ ಜೀವನದ ಒಳ್ಳೆಯ ಸಂಸ್ಕೃತಿ ಇಲ್ಲಿ ಸೃಷ್ಟಿಸಿದ್ದಾರೆ. ರಾಷ್ಟ್ರದ ಸರ್ವಂಗೀಣ ಭವಿಷ್ಯಕ್ಕೆ ಇದು ಉತ್ತಮ ಯೋಜನೆಯಾಗಿದೆ. ಭವಿಷ್ಯತ್ತಿನ ಪೀಳಿಗೆಗೆ ಆದರಣೀಯವೂ ಹೌದು ಎಂದರು.
ಮಾನವೀಯತೆಯ ಭದ್ರತೆ ಪ್ರಸಕ್ತ ಜನತೆಯ ಆಶಯವಾಗಿದ್ದು, ಈ ಯೋಜನೆಯನ್ನು ಅಳತೆಗೈ ಯಲು ಮಾಪಣವೇ ಇಲ್ಲದಂತಿದೆ. ಇಂತಹ ಯೋಜನೆಯ ಮುಖೇನ ಹಿರಿಯ ನಾಗರಿಕರಿಕರನ್ನು ಪ್ರೀತಿಸುವ ಸದ್ಗುಣಗಳನ್ನು ಪ್ರಸಕ್ತ ಪೀಳಿಗೆಯ ಮಕ್ಕಳಲ್ಲಿ ಬೋಧಿಸುವ ಪ್ರಯತ್ನ ನಡೆಯಬೇಕಾ ಗಿದೆ ಎಂದು ದಿಲೀಪ್ ಶೆಟ್ಟಿ ತಮ್ಮ ಅಭಿಪ್ರಾಯವನ್ನು ಉಚ್ಚರಿಸಿದರು.
ಇಂದು ಇಲ್ಲಿ ಈ ಯೋಜನೆಯನ್ನು ಕಂಡು ನನಗೂ ನಾಳೆಯೇ ಇಲ್ಲಿ ಸೇರುವ ಆಕಾಂಕ್ಷೆ ಹುಟ್ಟಿದೆ. ಕಾರಣ ಇಲ್ಲಿನ ಶಾಂತತೆಯ ವಾತಾವರಣವಾಗಿದೆ. ಕರ್ಮಭೂಮಿಯ ಒತ್ತಡದ ಬದುಕಿನಿಂದ ಮುಕ್ತಿಯುತವಾಗಲು ಭಗವಂತನೇ ಸೃಷ್ಠಿಸಿದ ಆಶ್ರಯದಂತಿದೆ. ಭಾರತದಂತಹ ಏಕೈಕ ಪವಿತ್ರ ದೇಶದಲ್ಲಿ ಮಾತ್ರ ಇಂತಹ ಕೇಂದ್ರಗಳ ಸ್ಥಾಪನೆ ಸಾಧ್ಯ. ಇದೂ ದೇವರಿಗೆ ಅತೀ ಸಾಮೀಪ್ಯವುಳ್ಳ ಬ್ರಾಹ್ಮಣರ ಸಮೂದಾಯದಿಂದ ಕೊಡಲ್ಪಟ್ಟ ಕೊಡುಗೆಯಾಗಿದೆ. ಇಲ್ಲಿ ವಾಸಸುವ ೬೦ರ ಮುದುಕರೂ ೩೦ರ ಯುವಕರನ್ನು ಮೀರಿಸುವಂತಿದೆ. ಇದಕ್ಕೆಲ್ಲಾ ಇಲ್ಲಿನ ವಾತಾವರಣ ಕಾರಣ ವಾಗಿದ್ದು, ಇದು ನಮ್ಮ ದೇಶದ ಮೊದಲ ಯೋಜನೆ ಎಂದೆಣಿಸಿದ್ದೇನೆ ಎಂದು ಬಾಲಕ್ರಷ್ಣ ಭಂಡಾರಿ ತಿಳಿಸಿದರು.
ಬಿ.ಎಸ್.ಕೆ.ಬಿ.ಎ. ಸಂಸ್ಥೆಯು ತೆರೆಯ ಮರೆಯಲ್ಲಿದ್ದು ರೂಪಿಸಿದ ಈ ಯೋಜನೆ ಸಮಗ್ರ ಸಮೂ ದಾಯಗಳಿಗೆ ಮಾದರಿಯಾಗಿದೆ. ಬಿ.ಎಸ್.ಕೆ.ಬಿ.ಎ. ಸಂಸ್ಥೆಯ ಸದಸ್ಯರ ನಿರಂತರ ಸಹಕಾರ ಮತ್ತು ಶ್ರಮಭರಿತ ಕೆಲಸದಿಂದಾಗಿ ಸ್ವಾರ್ಥರಹಿತ ಉದ್ದೇಶ ಹೊಂದಿರುವ ಈ ಯೋಜನೆ ವಿಶ್ವದ ಜನತೆಗೆ ಅಮೂರ್ತ ಅನುತಾಪಕ್ಕೆ ಸಮಾನ ಎನ್ನುವಂತಹದ್ದು. ಸ್ವಾರ್ಥರಹಿತ ಉದ್ದೇಶ ಹೊಂದಿರುವ ಈ ಯೋಜನೆ ಸಂಸ್ಥೆಯ ಸದಸ್ಯರ ನಿರಂತರ ಶ್ರಮಭರಿತ ಕೆಲಸದ ಫಲವಾಗಿದೆ. ಇದರ ಲಾಭ ಭಾರತೀಯರಿಗೆ ಸಲ್ಲಲು ಸಂಸ್ಥೆಯು ಆಹ್ವಾನಿಸಿದ್ದು ಇದು ನಮ್ಮ ಭಾಗ್ಯವೇ ಸರಿ ಎಂದು ಡಾ| ಪಿ.ವಿ ಶೆಟ್ಟಿ ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ| ಸುರೇಶ್ ಎಸ್. ರಾವ್ ನೆರೆದ ಹಿತೈಷಿಗಳಿಗೆ-ವಿವಿಧ ಸಂಸ್ಥೆಗಳ ಪದಾಧಿಕಾರಿಗಳಿಗೆ ಪುಷ್ಪಗಳನ್ನಿತ್ತು ಗೌರವಿಸಿದರು. ಬಳಿಕ ಮಾತನಾಡಿದ ಡಾ| ಸುರೇಶ್ ರಾವ್ ಮಾತನಾಡಿ ಇಂದು ಮುಂಬಯಿ ಸೇರಿದಂತೆ ಇಡೀ ವಿಶ್ವದಲ್ಲೇ ಹಿರಿಯ ನಾಗರಿ ಕರ ಮೇಲೆ ಅನೇಕ ತರದ ಅತ್ಯಾಚಾರ-ಅನ್ಯಾಯಗಳು, ಹಿಂಸಾತ್ಮಕ ಅನಾಹುತಗಳು, ಕ್ರೈಮ್ ಗಳು ನಡೆಯುತ್ತಿವೆ. ದೇಶದ ರಕ್ಷಣೆಗೈದಂತಹ ವಯೋವೃದ್ಧರಿಗೆ ಕೂಡಾ ರಕ್ಷಣೆ ಇಲ್ಲದ ಯುಗ ಇದಾಗಿದೆ.
ಜೀವನವಿಡೀ ಶ್ರಮಿಸಿ ಆಯುಷ್ಯದ ಕೊನೆಯ ದಿನಗಳನ್ನಾದರೂ ನೆಮ್ಮದಿಯಿಂದ ಕಳೆಯುವ ಲೆಕ್ಕಾಚಾರ ಹಾಕುವ ದಂಪತಿವರ್ಯರಿಗೆ ಆಶಿಸಿರುವ ಲೆಕ್ಕಾಚಾರಗಳು ತಲೆಕೆಳಗಾಗಿ ಬದುಕುವ ಆಸೆಯಿಂದ ವಂಚಿತರಾಗುತ್ತಾರೆ. ಇಂತಹ ಸಾವಿರಾರು ನಿದರ್ಶನಗಳನ್ನು ಮುಂದಿಟ್ಟು ಇಂಥ ವಯೋವೃದ್ಧರಿಗೆ ಕನಿಷ್ಟ ಮುಸ್ಸಂಜೆಯ ಬಾಳನ್ನು ನೆಮ್ಮದಿಯಿಂದ ಕಳೆಯುವ ಸೇವೆಗೆ ನಾವು ಸಂಕಲ್ಪ ಕೈಗೊಂಡಿರುತ್ತೇವೆ.
ಜಾತಿ-ಮತ-ಧರ್ಮದ ತಾರತಮ್ಯವಿಲ್ಲದೆ ೬೦ ವರ್ಷಕ್ಕೆ ಮೇಲ್ಪಟ್ಟ ಯಾರಿಗೂ ಆಶ್ರಯದ ಬಾಗಿಲು ತೆರೆದಿದೆ. ಇದೀಗಲೇ ಸಂಪೂರ್ಣಗೊಂಡ ಮೂರು ಮಹಡಿಯ ಈ ಕಟ್ಟಡದಲ್ಲಿ ಬಾಳಿನ ಮುಸ್ಸಂಜೆಯನ್ನು ಕಳೆಯಲು ಅಗತ್ಯವಿರುವ ಎಲ್ಲಾ ಸುಖೋಷ್ಣತೆ ಮುಂತಾದ ಭಾವನೆಗಳು ಸಹಜವಾಗಿಯೇ ಈ ಪ್ರಮುಖ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಆಶ್ರಯ ಸೇವೆಗೆ ಸನ್ನ ದ್ಧಾಗಿದೆ. ತಮ್ಮೆಲ್ಲರ ಸಹಕಾರ-ಸಹಾಯಹಸ್ತ ನಮಗೆ ಪ್ರೇರಣೆ ಆಗಬೇಕಾಗಿದೆ ಎಂದು ಆಶ್ರಯ ಯೋಜನೆಯ ಮಾಹಿತಿಯನ್ನು ಸವಿಸ್ತಾರವಾಗಿ ಬಿಚ್ಚಿಟ್ಟು ನುಡಿದರು.
ವಿಶೇಷ ಆಮಂತ್ರಿತರಾಗಿ ಬಾಂಬೇ ಬಂಟ್ಸ್ ಎಸೋಸಿಯೇಶನ್ ಇದರ ಉಪಾಧ್ಯಕ್ಷ ಶ್ಯಾಮ ಎನ್.ಶೆಟ್ಟಿ, ಜವಾಬ್ನ ಮಾಜಿ ಅಧ್ಯಕ್ಷ ಎನ್.ಸಿ.ಶೆಟ್ಟಿ, ಫೆಡರೇಶನ್ ಆಫ್ ಮುಂಬಯಿಸ್ ಕೆನರಾ ಕಾಥೋಲಿಕ್ ಎಸೋಸಿಯೇಶನ್ಸ್ ಅಧ್ಯಕ್ಷ ನೊರ್ಬಟ್ ಎಲ್.ಫೆರ್ನಾಂಡಿಸ್, ಕರ್ನಾಟಕ ವಿಶ್ವ ಕರ್ಮ ಎಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ ಜಿ.ಟಿ.ಆಚಾರ್ಯ, ಗಾಣಿಗ ಸಮಾಜ ಸೇವಾ ಸಂಘ ಮುಂಬಯಿ ಇದರ ಗೌ| ಪ್ರಧಾನ ಕಾರ್ಯದರ್ಶಿ ಬಿ.ವಿ ರಾವ್, ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಗೌ| ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಸಾಲ್ಯಾನ್, ಗೋಕುಲ ಮಾಸಿಕದ ಗೌ| ಸಂಪಾದಕ ವ್ಯಾಸರಾಯ ನಿಂಜೂರು, ಪ್ರೊ. ಡಿ.ಕೆ ಕುಂದರ್, ವಿಶ್ವ ನಾಥ್ ಯು.ಮಾಡಾ, ಎಂ.ಸುಬ್ರಹ್ಮಣ್ಯ ಶಾಸ್ತ್ರಿ, ವಸಂತ್ ಎ.ನಾಯ್ಕ್, ಬ್ಯಾಂಕ್ ಉದ್ಯಮಿಗಳಾದ ಎ.ನರಸಿಂಹ ರಾವ್, ಮಹೇಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದು, ಸಂಸ್ಥೆಯ ಪದಾಧಿಕಾರಿ ಗಳು ಆಶ್ರಯದ ಸರ್ವ ಸೌಲತ್ತುಗಳನ್ನು ಮತ್ತು ಯೋಜನೆಯ ಮಾಹಿತಿಯನ್ನು ಕ್ರಮವಾಗಿ ತಿಳಿಸಿದರು.
ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ಸುಮನ್ ಚಿಂಪ್ಲೂಣ್ಕರ್ ಸ್ವಾಗತಿಸಿದರು. ಕು| ಉಜ್ವಲಾ ಆಚಾರ್ಯ ಪ್ರಾರ್ತನೆಯನ್ನಾಡಿದರು. ಉಪಾಧ್ಯಕ್ಷ ಲಕ್ಷೀಶ್ ಆಚಾರ್ಯ ಪ್ರಾಸ್ತವಿಕ ನುಡಿಗಳನ್ನಾಡಿದರು. ಜತೆ ಕಾರ್ಯದರ್ಶಿ ಶ್ರೀಮತಿ ಚಿತ್ರಾ ಎ. ಮೇಲ್ಮನೆ ಕಾರ್ಯಕ್ರಮ ನಿರೂಪಿ ಸಿದರು. ಗೌ| ಕಾರ್ಯದರ್ಶಿ ಅನಂತ ಪಿ.ಕೆ. ಪೋತಿ, ಜತೆ ಕಾರ್ಯದರ್ಶಿಗಳಾದ ಪ್ರಶಾಂತ್ ಆರ್.ಹೆರ್ಲೆ, ಕ್ರಷ್ಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದು, ಮೇಲ್ವಿಚಾರಕಿ ಶ್ರೀಮತಿ ಚಂದ್ರಾವತಿ ಕೆ.ರಾವ್ ವಂದನಾರ್ಪಣೆಗೈದರು.
ವರದಿಯ ವಿವರಗಳು |
 |
ಕೃಪೆ : ರೋನ್ಸ್ ಬ೦ಟ್ವಾಳ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-08
|
|
|