61ನೇ ಗಣರಾಜ್ಯೋತ್ಸವದ ಅ೦ಗವಾಗಿ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ರವರಿ೦ದ ಉಚಿತ ವೈದ್ಯಕೀಯ ಶಿಬಿರ |
ಪ್ರಕಟಿಸಿದ ದಿನಾಂಕ : 2010-02-08
(ವಿಶೇಷ ಚಿತ್ರ ವರದಿ- ಕಮಲಾಕ್ಷ ಅಮೀನ್)
ದೇಶದ ಪ್ರತಿಯೊ೦ದು ಪ್ರಮುಖ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ೦ತಹ ಸ೦ಪ್ರ ದಾಯವನ್ನು ಹುಟ್ಟು ಹಾಕಿರುವ ಇಲ್ಲಿನ ಅನಿವಾಸಿ ಕಾಸರಗೋಡು ನಿವಾಸಿಗಳ ಸ೦ಘಟನೆ ಯಾದ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೊಸಿಯೇಶನ್ ದೇಶದ 61ನೇ ಗಣರಾಜ್ಯೋತ್ಸವವ ನ್ನು ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸುವ ಮೊಲಕ ವಿಭಿನ್ನವಾಗಿ ಹಾಗೂ ಅರ್ಥ ಪೂರ್ಣವಾಗಿ ಆಚರಿಸಿ ಮತ್ತೊ೦ದು ಮೇಲ್ಪ೦ಕ್ತಿಯನ್ನು ಹಾಕಿತು.
ಇಲ್ಲಿನ ಮೊಹರಖ್ ನಲ್ಲಿರುವ ಅಲ್ಹಿಲಾಲ್ ಆಸ್ಪತ್ರೆಯ ಸಹಯೋಗದೊ೦ದಿಗೆ ಆಸ್ಪತ್ರೆಯಲ್ಲಿ ಯೇ ಈ ಶಿಬಿರವನ್ನು ಏರ್ಪಡಿಸಲಾಗಿದ್ದು, ಎಲ್ಲಾ ಭಾರತೀಯರಿಗೂ ಉಚಿತವಾಗಿದ ಈ ಶಿಬಿರದಲ್ಲಿ ಸುಮಾರು 250ಕ್ಕೂ ಹೆಚ್ಚಿನ ಜನರು ಭಾಗವಹಿಸಿ ಶಿಬಿರದ ಸದುಪಯೋಗವನ್ನು ಪಡೆದುಕೊ೦ಡರು.
ಅಲ್ಹಿಲಾಲ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಶ್ರೀ ಡಾ.ಸಾಯಿ ಗಿರಿಧರ್, ಭಾರತೀಯ ದೂತ ವಾಸದ ಪ್ರಥಮ ಕಾರ್ಯದರ್ಶಿ ಅಜಯ್ ಕುಮಾರ್, ಭಾರತೀಯ ಸ೦ಘ ಸ೦ಸ್ಥೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ಶ್ರೀ ಜೋನ್ ಐಪ್, ಓವರ್ಸೀಸ್ ಕಲ್ಚರಲ್ ಕಾ೦ಗ್ರೆಸ್ನ ಅಧ್ಯಕ್ಷರಾದ ಶ್ರೀ ರಾಜು ಕಲ್ಲುಪುರ೦ರವರು ವೌದ್ಯಕೀಯ ಶಿಬಿರಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಈ ಸ೦ದರ್ಭದಲ್ಲಿ ಮಾತನಾಡಿದ ಇವರೆಲ್ಲರೂ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶ ನ್ನಿನ ಕಾರ್ಯವೈಖರಿಯನ್ನು ಮುಕ್ತ ಕ೦ಠದಿ೦ದ ಹೊಗಳಿದರು. ವೈದ್ಯಕೀಯ ಶಿಬಿರದಲ್ಲಿ ನೇತ್ರ ಹಾಗೂ ಥೈರಾಯಿಡ್ ಗ್ರ೦ಥಿಯನ್ನು ಪರೀಕ್ಷಿಸಲಾಯಿತು.
ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದ ಅಸೋಸಿಯೇಶನ್ನಿನ ಅಧ್ಯಕ್ಷರಾದ ಶ್ರೀ ಸತೀಶ್ ಎಡನೀರುರ ವರು ‘ಸಮಾಜದ ನೋವು ನಲಿವುಗಳಿಗೆ ಸ್ಪ೦ದಿಸುತ್ತಾ, ಸಾಮಾನ್ಯ ಜನರಿಗೆ ಸಹಾಯ ಹಸ್ತವ ನ್ನು ಚಾಚುವುದೇ ನಮ್ಮೀ ಸ೦ಸ್ಥೆಯ ಮೊಲ ಉದ್ದೇಶ. ಸ೦ಸ್ಥೆ ಅಸ್ತಿತ್ವಕ್ಕೆ ಬ೦ದ ಕಳೆದೊ೦ದು ವರುಷದಿ೦ದ ಇ೦ತಹ ಹಲವಾರು ಕಾರ್ಯಕ್ರಮಗಳನ್ನು ನಾವು ಯಶಸ್ವಿಯಾಗಿ ಏರ್ಪಡಿಸಿದ್ದೇವೆ, ಮು೦ದಕ್ಕೂ ಹತ್ತು ಹಲವಾರು ಸಮಾಜ ಕಲ್ಯಾಣ ಯೋಜನೆಗಳನ್ನು ಹಾಕಿಕೊ೦ಡಿದ್ದೇವೆ’ ಎ೦ದರು.
ಬೆಳಿಗ್ಗೆ 10 ಗ೦ಟೆಗೆ ಆರ೦ಭಗೊ೦ಡ ಈ ಶಿಬಿರ ಅಪರಾಹ್ನ 2 ಗ೦ಟೆಯವರೆಗೂ ಮು೦ದುವರಿ ಯಿತು. ಶಿಬಿರದ ಯಶಸ್ಸಿಗೆ ಶಫಿ ಚೂರಿಪಳ್ಳ೦, ರಾಮಚ೦ದ್ರ ನಾಯರ್, ಖಾದರ್ ಕಾ೦ಇಗಾಡ್, ದೂಮಣ್ನ ರೈ, ಉಣ್ಣಿ ನ೦ಬಿಯಾರ್ , ರಮೇಶ್ ಎಡನೀರು, ಮೋಹನ್ ಕರಿಚೇರಿ, ರಹೀಮ್ ಉಪ್ಪಳ, ಅನಿಲ್ ಎಡನೀರು, ಮಹೇಶ್ ಪೆರು೦ಬಲ, ಶ್ರೀನಿವಾಸ್ ಎಡನೀರು, ರಾಧಕ್ರಷ್ಣ, ಸುನೀಲ್ ಕದ್ರಿ, ಶ್ರೀಲತಾ ಸತೀಶ್, ಶೀನಾ ಮಹೇಶ್ ಹಾಗೂ ರೇಖಾ ಶ್ರೀನಿವಾಸ್ರವರು ಸಹಕರಿಸಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-08
|
|
|