ಸಾಹಿತಿ ಫಕೀರ್ ಮಹಮ್ಮದ್ ಕಟ್ಪಾಡಿಯವರ ‘ಸೂಫಿಸಂತರು’ ಮತ್ತು ದೇವುಡು ಅವರ ‘ಮಯೂರ’ ಕೃತಿಗಳನ್ನು ಬಿಡುಗಡೆ |
ಪ್ರಕಟಿಸಿದ ದಿನಾಂಕ : 2010-02-08
(ಚಿತ್ರ ನಿರ್ದೇಶಕ ಪಿ.ಶೇಷಾದ್ರಿಯವರಿಗೆ ಸನ್ಮಾನ)
ಬೆಂಗಳೂರು: ನಗರದ ಅಂಕಿತ ಪುಸ್ತಕ ಪ್ರಕಾಶನದ ಮಳಿಗೆ ಆವರಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಸಾಹಿತಿ ಫಕೀರ್ ಮಹಮ್ಮದ್ ಕಟ್ಪಾಡಿಯವರ ‘ಸೂಫಿಸಂತರು’ ಮತ್ತು ದೇವುಡು ಅವರ ‘ಮಯೂರ’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಹೊಸ ವಿಚಾರ, ವಿಷಯಗಳು ಬೆಳಕಿಗೆ ಬಂದಾಗ, ಸಹಜವಾಗಿ ಗೊಂದಲ ಮತ್ತು ಅನುಮಾನ ಗಳು ಮೂಡುತ್ತವೆ. ವಿಚಾರಗಳ ಬಗ್ಗೆ ಪ್ರಶ್ನೆಗಳು ಏಳುತ್ತವೆ’ ಎಂದು ಅವರು ತಿಳಿಸಿದರು.
‘ನನಗೆ ಗೊಂದಲ ಮತ್ತು ಅನುಮಾನಗಳು ಸದಾ ಕಾಡುತ್ತಲೇ ಇರುತ್ತವೆ. ಈ ಕಾರಣದಿಂದಲೇ ಚಿಂತನೆ ಕೈಗೊಳ್ಳಲು ಮತ್ತು ಕೃತಿಗಳನ್ನು ರಚಿಸಲು ಸಾಧ್ಯವಾಯಿತು’ ಎಂದು ಅವರು ತಿಳಿಸಿ ದರು.
ಬಿ.ಟಿ ಬದನೆ ವಿಷಯ ಪ್ರಸ್ತಾಪಿಸಿದ ಅವರು, ‘ಬಿ.ಟಿ ಬದನೆಯಿಂದ ಗಂಭೀರ ಸ್ವರೂಪದ ಪರಿಣಾಮಗಳು ಎದುರಾಗಲಿವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳನ್ನು ನಮ್ಮ ಮೇಲೆ ಅನಗತ್ಯ ಹೇರಲಾಗುತ್ತಿದೆ’ ಎಂದರು.
ಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ‘ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿ ಕೊಂಡಿರುವ ನನಗೆ ಅನಂತಮೂರ್ತಿ ಯವರ ಕೃತಿಯಾಧಾರಿತ ಚಿತ್ರವನ್ನು ನಿರ್ದೇಶಿಸುವ ಬಯಕೆಯಿದೆ. ಅವರು ಶೀಘ್ರವೇ ಅನುಮತಿ ನೀಡುತ್ತಾರೆ ಎಂಬ ನಿರೀಕ್ಷೆಯಿದೆ’ ಎಂದರು.
‘ಮಯೂರ’ ಕೃತಿಯನ್ನು ಓದಿದ ಡಾ. ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಅವರು ಕೃತಿಯನ್ನು ಆಧರಿಸಿ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದರು.
ಚಿತ್ರನಿರ್ಮಾಣದಲ್ಲಿ ಆಸಕ್ತಿಯಿಂದ ತೊಡಗಿಕೊಂಡ ಅವರು ಯಶಸ್ಸು ಸಹ ಗಳಿಸಿದರು’ ಎಂದು ಅವರು ತಿಳಿಸಿದರು.
ಸಾಹಿತಿ ಫಕೀರ್ ಮಹಮ್ಮದ್ ಕಟ್ಪಾಡಿ, ದೇವುಡು ಪುತ್ರ ಗಂಗಾಧರ ದೇವುಡು, ಅಂಕಿತ ಪುಸ್ತಕ ಪ್ರಕಾಶನದ ಮಾಲೀಕರಾದ ಪ್ರಕಾಶ್ ಕಂಬತ್ತಳ್ಳಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತ ರಿದ್ದರು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-08
|
|
|