ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ನೆನಪಾದ ಚಿಂದೋಡಿ ಲೀಲಾ

ಇಂಗ್ಲೆಂಡ್, ಅಮೆರಿಕ ಪ್ರವಾಸದಲ್ಲಿ ಕರ್ನಾಟಕದ ಸಾಹಿತಿ ಕಲಾವಿದರ ತಂಡ ಜೊತೆಯಲ್ಲದ್ದಷ್ಟೂ ಕಾಲ ಚಿಂದೋಡಿ ಲೀಲಾ ನಾವು ಮತ್ತು ನಮ್ಮ ಮಿತ್ರ ಪಂಡಿತಾರಾಧ್ಯ ಅವರ ಜೊತೆಗೇ ಹೆಚ್ಚಿನ ಆತ್ಮೀಯತೆಯಿಂದ ಇದ್ದರು; ಸ್ನೇಹದ ಸಂತೋಷವನ್ನು ನೀಡಿದ್ದರು. 

ಕನ್ನಡ ವೃತ್ತಿರಂಗಭೂಮಿಯ ರಾಣಿ ಕಲಾವಿದೆ ಎಂಬಂತೆ ಬೆಳಗಿದ ಚಿಂದೋಡಿ ಲೀಲಾ ಅವರ ಬಗ್ಗೆ ಕೇಳಿದ್ದೆ; ಪರಿಚಯವಿರಲಿಲ್ಲ. 2000ರಲ್ಲಿ ಅಮೆರಿಕದ ಹ್ಯೂಸ್ಟನ್‌ನಲ್ಲಿ ದ್ವಿಸಹಸ್ರಮಾನ ವಿಶ್ವ ಕನ್ನಡ ಸಮ್ಮೇಳನವಾಯಿತು. ಅದೇ ಸಂದರ್ಭಕ್ಕೆ ಹೊಂದಿಕೊಂಡಂತೆ ನಾಲ್ಕು ದಿನ ಮೊದಲು ಇಂಗ್ಲೆಂಡಿನ ಮೆಂಚೆಸ್ಟರಿನಲ್ಲಿಯೂ ಇಂಗ್ಲೆಂಡಿನ ಕನ್ನಡಿಗರು ಕನ್ನಡ ಸಮ್ಮೇಳನ ಮಾಡಿದ್ದರು.

ಎರಡೂ ಸಮ್ಮೇಳನಗಳಿಗೆ ಸರ್ಕಾರ ನನ್ನನ್ನು ಸಾಹಿತಿ ಪ್ರತಿನಿಧಿಯಾಗಿ, ಚಿಂದೋಡಿ ಲೀಲಾ ಅವರನ್ನು ರಂಗಕಲಾವಿದೆಯಾಗಿ ಆಯ್ಕೆಮಾಡಿ ಕಳಿಸಿತ್ತು. ನನ್ನ ಪತ್ನಿ ಮೀರಾ ನಾಯಕ ಮಹಿಳೆ ಸಂಬಂವಾದ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಲು ಆಹ್ವಾನಿರಾಗಿದ್ದರು. ಡಾ ಪಂಡಿತಾರಾಧ್ಯರು ಕನ್ನಡ ಗಣಕ ಸಂಬಂಧವಾದ ಚರ್ಚೆಯ ಗೋಷ್ಠಿಗಳಲ್ಲಿ ಭಾಗವಹಿಸಲು ಆಹ್ವಾನಿತರಾಗಿದ್ದರು.

ಆ ಪ್ರವಾಸದಲ್ಲಿ ಚಿಂದೋಡಿ ಲೀಲಾ ನಮ್ಮೊಡನೆ ತುಂಬು ಆತ್ಮೀಯತೆಯಲ್ಲಿ ನಡೆದುಕೊಂಡದ್ದು ಮರೆಯದ ನೆನಪು. ಅವರ ಜೊತೆ ಅವರ ಸೋದರನ ಮಗ ಶಂಭುಲಿಂಗಪ್ಪನವರು ಬಂದಿದ್ದರು. ಲೀಲಾ ಅವರು ಎಲ್ಲಿಯೂ ಒಮ್ಮೆಯೂ ಅವರ ಕಲಾವಿದೆ ಕೀರ್ತಿಯ ಹಿರಿಮೆಯನ್ನು ತೋರಿಸದೆ ಹರ್ಷಚಿತ್ತರಾಗಿ ನಮ್ಮೊಡನೆ ನಡೆದುಕೊಂಡದ್ದು ಹಿತದ ಅನುಭವ.

ಇಂಗ್ಲೆಂಡ್, ಅಮೆರಿಕಗಳಿಗೆ ವೀಸಾ ಪಡೆಯಲು ಚೆನ್ನೈಗೆ ಹೋಗಬೇಕಾಗಿತ್ತು. ಬೆಂಗಳೂರಿನಿಂದ ಬಸ್ ಮಾಡಿಕೊಂಡು ಹೋಗಿ ಬರಲು ವ್ಯವಸ್ಥೆಯಾಗಿತ್ತು. ವೀಸಾ ಪಡೆದು ತಿರುಗಿ ಬರುವಾಗ ಬಸ್ಸಿನಲ್ಲಿ ಹಾಡುವುದು ಇತ್ಯಾದಿ ಪ್ರಾರಂಭವಾದವು. ನಾನು ಬೇಂದ್ರೆ ಕವನಗಳನ್ನು, ಯಕ್ಷಗಾನದ ಹಾಡುಗಳನ್ನು ಹಾಡಿದ್ದೆ. ಚಿಂದೋಡಿ ಲೀಲಾ ಅವರೂ ನಾಟಕದ ಹಾಡುಗಳನ್ನು ಹಾಡಿದ್ದರು. ಇತರರಲ್ಲಿಯೂ ಒಬ್ಬಿಬ್ಬರು ಹಾಡಿದ್ದರು. ಹಾಡುಗಳ ಬಗ್ಗೆ ಮೆಚ್ಚಿಗೆ ಸೂಚಿಸುತ್ತ ಇನ್ನೊಂದು, ಮತ್ತೊಂದು ಎಂದು ಹೇಳುತ್ತ ನಾನು ಎಲ್ಲರಿಗಿಂತ ಹೆಚ್ಚು ಹಾಡುಗಳನ್ನು ಹಾಡುವುದಕ್ಕೆ ಅವರು ಕಾರಣರಾಗಿದ್ದರು.

ಇಂಗ್ಲೆಂಡಿನಲ್ಲಿ ಕನ್ನಡ ಸಮ್ಮೇಳನ ಮುಗಿದ ಮೇಲೆ ಶೇಕ್ಸ್‌ಪಿಯರನ ಮನೆ ಹಾಗೂ ವರ್ಡ್ಸ್‌ ವರ್ತ ನ ಲೇಕ್ ಡಿಸ್ಟ್ರಿಕ್ಟ್‌ಗಳನ್ನು ನಮಗೆ ತೋರಿಸುವ ವ್ಯವಸ್ಥೆಯನ್ನು ಇಂಗ್ಲೆಂಡಿನ ಕನ್ನಡ ಸಂಘದವರು ಮಾಡಿದ್ದರು. ಆ ಬಸ್ ಪ್ರಯಾಣದಲ್ಲಿಯೂ ನಾನು ಬೇಂದ್ರೆಯವರ ಕವನಗಳನ್ನೂ ಯಕ್ಷಗಾನದ ಹಾಡುಗಳನ್ನೂ ಹಾಡಿದ್ದೆ. ಆಗಲೂ ಚಿಂದೋಡಿ ಲೀಲಾ ಮೆಚ್ಚಿಗೆ ಸೂಚಿಸಿ ನನ್ನನ್ನು ಹಾಡುವಂತೆ ಹುರಿದುಂಬಿಸಿದ್ದರು. ಶಾಸ್ತ್ರೀಯ ಶಿಸ್ತಿನ ತರಬೇತಿ ಇಲ್ಲದ, ನನಗೆ ತಿಳಿದಂತೆ, ನಾನೊಲಿದಂತೆ ಹಾಡಿದ ಆ ಹಾಡುಗಳಿಗೂ ಸಹೃದಯತೆ ತೋರಿದ ಚಿಂದೋಡಿ ಲೀಲಾ ಅವರ ಬಗ್ಗೆ ನನ್ನಲ್ಲಿ ತುಂಬು ಸದ್ಭಾವನೆ ಬೆಳೆದಿತ್ತು.

ಇಂಗ್ಲೆಂಡ್, ಅಮೆರಿಕ ಪ್ರವಾಸದಲ್ಲಿ ಕರ್ನಾಟಕದ ಸಾಹಿತಿ ಕಲಾವಿದರ ತಂಡ ಜೊತೆಯಲ್ಲದ್ದಷ್ಟೂ ಕಾಲ ಚಿಂದೋಡಿ ಲೀಲಾ ನಾವು ಮತ್ತು ನಮ್ಮ ಮಿತ್ರ ಪಂಡಿತಾರಾಧ್ಯ ಅವರ ಜೊತೆಗೇ ಹೆಚ್ಚಿನ ಆತ್ಮೀಯತೆಯಿಂದ ಇದ್ದರು; ಸ್ನೇಹದ ಸಂತೋಷವನ್ನು ನೀಡಿದ್ದರು. ಇಂಗ್ಲೆಂಡಿನ ಬಕಿಂಗ್‌ಹ್ಯಾಮ್ ಅರಮನೆ ನೋಡಲು ಹೋದಾಗ ಅವರಾಗಿ ಇಷ್ಟಪಟ್ಟು ಕೇಳಿ ನಮ್ಮ ಜೊತೆಯಲ್ಲಿ ಎರಡೊ ಮೂರೊ ಫೋಟೊಗಳನ್ನು ತೆಗೆಸಿಕೊಂಡರು. ನಮ್ಮ ಜೊತೆಗೆ ಈ ಪ್ರವಾಸ ಮಾಡಿದ ನೆನಪಿಗಾಗಿ ಇರಲಿ ಎಂದು ತಿರು ತಿರುಗಿ ಹೇಳಿದ್ದರು.

ಇಂಗ್ಲೆಂಡ್ ಅಮೆರಿಕ ಎರಡೂ ಕಡೆಯ ಕನ್ನಡ ಸಮ್ಮೇಳನಗಳಲ್ಲಿ ಬಣ್ಣ ಹಚ್ಚಿ ಟಿಪ್ಪೂಸುಲ್ತಾನ್, ಕಿತ್ತೂರು ಚೆನ್ನಮ್ಮ ಪಾತ್ರಗಳಲ್ಲಿ ಕಿರುಅವಧಿಯ ಅಭಿನಯ ನೀಡಿ ಲೀಲಾ ಅವರು ರಂಜಿಸಿದ್ದರು. ಇಂಗ್ಲೆಂಡಿನಲ್ಲಿ ಅವರು ಟಿಪ್ಪೂಸುಲ್ತಾನನ ಮೇಕ್ಅಪ್ ಮಾಡಿಕೊಂಡು ಬಂದ ಮೇಲೆಯೂ ರಂಗದ ಮೇಲೆ ಅಭಿನಯಿಸಲು ಬಹಳ ಹೊತ್ತು ಕಾಯಬೇಕಾಯಿತು.

ಅವರು ತಾಳ್ಮೆಯಿಂದ ಪ್ರೇಕ್ಷಕರ ಸಾಲಿನಲ್ಲಿ ಕಾದು ತಮ್ಮ ಅವಧಿ ಬಂದಾಗ ತನ್ಮಯತೆಯಿಂದ ಅಭಿನಯಿಸಿದರು. ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ಚೆನ್ನಮ್ಮ ಮತ್ತು ವೀರ ಪುರುಷ ಟಿಪ್ಪೂಸುಲ್ತಾನ್ ಪಾತ್ರಗಳನ್ನೇ ಆಯ್ದುಕೊಂಡು ಅವರು ಅಭಿನಯಿಸಿದ್ದು ಕೂಡ ವಿಶೇಷ ಸಂಗತಿ ಯೆ ಆಗಿತ್ತು.

ಇಂಗ್ಲೆಂಡ್, ಅಮೆರಿಕ ದೇಶಗಳ ನಮ್ಮ ಆ ಪ್ರವಾಸದ ಅನಂತರದ ಕಾಲದಲ್ಲಿ ಚಿಂದೋಡಿ ಲೀಲಾ ಅವರ ಕೆಬಿಆರ್ (ಕರಿ ಬಸವ ರಾಜೇಂದ್ರ) ನಾಟಕದ ಕಂಪನಿ ಮೈಸೂರಿಗೆ ಬಂದಿತ್ತು. ಪುರಭವ ನದ ಆವರಣದಲ್ಲಿ ರಂಗಮಂದಿರ ನಿರ್ಮಾಣವಾಗಿತ್ತು. ‘ಪೊಲೀಸನ ಮಗಳು’ ನಾಟಕ ನೋಡಲು ಲೀಲಾ ಅವರು ನನ್ನನ್ನೂ ನನ್ನ ಹೆಂಡತಿಯನ್ನೂ ನಮ್ಮ ಮನೆಗೆ ಬಂದು ಆಹ್ವಾನಿಸಿದ್ದರು.

ಅವರು ನಮ್ಮನ್ನು ಆಹ್ವಾನಿಸಿದ್ದೇ ಗೌರವ ಎಂದು ಭಾವಿಸಿದ ನಾವು ಟಿಕೆಟ್ ಕೊಂಡಿದ್ದೆವು. ನಾವು ಹಾಗೆ ಮಾಡಿದ್ದು ಸರಿಯಲ್ಲ ಎಂದು ಲೀಲಾ ಅವರು ಹೇಳಿಯೂ ಹೇಳಿದರು. ನಾಟಕ ಮುಗಿದ ಮೇಲೆ ಅವರು ಬಣ್ಣ ಒರೆಸಿಕೊಂಡು ಬರುವವರೆಗೆ ನಾವು ಇರುವಂತೆ ತಮ್ಮ ಕಂಪನಿಯವರ ಮೂಲಕ ಹೇಳಿ ಕಳುಹಿಸಿ, ಬಂದು ನಮಗೆ ಕಾಫಿ, ಬಿಸ್ಕತ್ತುಗಳ ಆತಿಥ್ಯ ನೀಡಿ ಒಂದಷ್ಟು ಹೊತ್ತು ವಿಶ್ವಾಸದಿಂದ ಮಾತನಾಡಿಸಿ ಕಳಿಸಿದ ಅವರ ಸೌಜನ್ಯ ಸಜ್ಜನಿಕೆಯ ನೆನಪು ಮರೆಯುವಂಥ ದಲ್ಲ. 

‘ಪೊಲೀಸನ ಮಗಳು’ 4500 ಪ್ರಯೋಗಗಳನ್ನು ಕಂಡ ಕನ್ನಡ ನಾಟಕ ಮಾತ್ರವಲ್ಲ, ಜಗತ್ತಿನಲ್ಲಿ ಯೇ ಅಷ್ಟು ಪ್ರಯೋಗಗಳನ್ನು ಕಂಡ ನಾಟಕವೆಂದು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಅದರ ಲ್ಲಿ ಲೀಲಾ ಅವರೇ ಪೊಲೀಸನ ಮಗಳ ಪಾತ್ರದಲ್ಲಿದ್ದರು. ಆಗ ಅವರಿಗೆ ಅರುವತ್ತೆರಡೊ ಅರುವತ್ಮೂರೊ ವರ್ಷ.

ಆ ವಯಸ್ಸಿನಲ್ಲಿ ಅವರು ಮದುವೆಯಾಗಲಿರುವ ಪ್ರಾಯದ ಹೆಣ್ಣಿನ ಪಾತ್ರದಲ್ಲಿ ಅಭಿನಯ ನೀಡಿದ್ದ ರು. ಅವರ ವಯಸ್ಸೆಷ್ಟೆಂಬುದರ ನೆನಪು ಒಂದಷ್ಟು ಹೊತ್ತು ನಮ್ಮ ಮನಸ್ಸಿನಲ್ಲಿ ಎಣಿಕೆಗೊಂಡಿದ್ದ ರೂ ಬಲು ಬೇಗ ಅವರ ಅಭಿನಯದಲ್ಲಿ ತನ್ಮಯರಾಗಿಬಿಟ್ಟೆವು. ಚಿಂದೋಡಿ ಲೀಲಾ ನಿಜವಾದ ಜನ್ಮಜಾತ ಪ್ರತಿಭೆಯ ರಂಗ ಕಲಾವಿದೆ ಎಂಬುದು ನಮಗೆ ಮನವರಿಕೆಯಾಗಿತ್ತು.

ಕೇವಲ ಎರಡನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಲೀಲಾ ಕರ್ನಾಟಕ ರಂಗಭೂಮಿ ಯಲ್ಲಿ ಆರು ದಶಕಗಳಿಗಿಂತ ಹೆಚ್ಚು ಕಾಲ ಲಕ್ಷಾಂತರ ಪ್ರೇಕ್ಷಕರನ್ನು ರಂಜಿಸಿ ಮೆರೆದ ಕಥೆ ನಾಟಕ ರಂಗಭೂಮಿಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂಥದು. ಲೀಲಾ ಅವರ ಆ ಸಾಧನೆ ಸಾಮಾನ್ಯವಾದುದಲ್ಲ. ಲೀಲಾ ಕಲಾವಿದೆ ಮಾತ್ರವಲ್ಲ, ಬೆಳಗಾವಿಯಲ್ಲಿ ಮರಾಠಿಗರ ಕಿರುಕುಳ ಗಳನ್ನು ದಿಟ್ಟವಾಗಿ ಎದುರಿಸಿ ಅಲ್ಲಿಯೇ ಕನ್ನಡ ನಾಟಕವನ್ನು ಆಡಿದ ಮತ್ತು ಶಾಶ್ವತ ರಂಗಮಂದಿ ರವನ್ನು ನಿರ್ಮಿಸಿದ ಧೀರ ಮಹಿಳೆ. ಅವರು ಶಿವಾಜಿ ನಾಟಕವನ್ನು ಅಭಿನಯಿಸಿ ಮರಾಠಿಗರನ್ನೂ ಒಲಿಸಿಕೊಂಡರು. ಬೆಳಗಾವಿಯ ನಗರಸಭೆಗೂ ಆಯ್ಕೆಯಾಗಿದ್ದರು.  ಅವರು ನಾವಿರುವವರೆಗೂ ಹಿತವಾದ ನೆನಪಾಗಿ ನಮ್ಮೊಡನೆ ಉಳಿದಿರುತ್ತಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಜಿ.ಎಚ್. ನಾಯಕ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-07 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ರಷ್ಯನ್‌ ಕಥೆಗಳು ಪುಸ್ತಕ ಬಿಡುಗಡೆ: ಕನ್ನಡ ಸಾಹಿತ್ಯ ಲೋಕದಲ್ಲಿ ಅನುವಾದಕರಿಗೆ ವಿಪುಲ ಅವಕಾಶ: ಪ್ರೋ.ಸಿ. ನಾಗಣ್ಣ
» ಪ್ರಶಂಸೆಗೆ ಪಾತ್ರವಾದ ಸಿಕ್ಕಿಂ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ : ನೆರೆದವರ ರಂಜಿಸಿದ ಜಟಾಯು ಮೋಕ್ಷ
»ಜಾತಿ, ಮತದ ಗಡಿ ದಾಟಿದರೆ ಮಾತ್ರ ಕವಿಯಾಗಬಲ್ಲ: ಎಚ್.ಎಸ್.ವೆಂಕಟೇಶಮೂರ್ತಿ
»2011ನೇ ಸಾಲಿನ ಪ.ಗೋ. ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ
»ಕುಕ್ಕೆ ಸುಬ್ರಹ್ಮಣ್ಯ: ಮಲೆ ಮಾದೇಶ್ವರಕ್ಕೆ ISO ಅಂತಾರಾಷ್ಟ್ರೀಯ ಮಾನ್ಯತೆ
»ಕವನ : ಕ್ಲಾಸ್ ಶಯನ...
»ಮಾತು ಬೇರೆ ಬೇಕೆ ಗೆಳೆಯ....
»ಚಂದ್ರಶೇಖರ ಕೆದ್ಲಾಯರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ; ಫೆ.4ರಂದು ಪ್ರಶಸ್ತಿ ಪ್ರದಾನ
»ಉಡುಪಿ :ದಿವಂಗತ ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಪ್ರದಾನ
»ಕವಿ, ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಯಕ್ಷಗಾನಕ್ಕೆ ನಿರ್ದಿಷ್ಟ ಸ್ವರೂಪ ಅಗತ್ಯ- ಗೋವಿಂದ ಭಟ್‌
»ತೋನ್ಸೆ ಕಾಂತಪ್ಪ ಮಾಸ್ತರರ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ: ಪರಿಪೂರ್ಣ ಕಲಾವಿದನಾಗಬೇಕಾದರೆ ಯಕ್ಷಗಾನದ ಬಗ್ಗೆ ಆಸಕ್ತಿ ಜ್ಞಾನ ಅಗತ್ಯ- ಡಾ. ಭಾಸ್ಕರಾನಂದ ಕುಮಾರ್
»ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರಿಗೆ ಸನ್ಮಾನ
»ಕವನ : ನನ್ನ ಸುಬ್ಬಿ
»ಮಲಯಾಳಂನ ಖ್ಯಾತ ಸಾಹಿತಿ ಸುಕುಮಾರ್ ಅಝಿಕೋಡ್ ನಿಧನ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೋವಿಂದ ಭಟ್ಟ
»ಭಾರತದ ಪ್ರಪಿತಾಮಹನೆ ...
»ಖ್ಯಾತ ಸಾಹಿತಿ ನಾಡೋಜ ಪ್ರೊ. ಹಂಪ. ನಾಗರಾಜಯ್ಯರಿಗೆ ‘ವಿಶ್ವಮಾನವ ಪ್ರಶಸ್ತಿ’; ಕನ್ನಡ ಸಾಹಿತ್ಯಕ್ಕೆ ಸಂಕುಚಿತತೆ ಇಲ್ಲ: ಎಚ್.ಆರ್.ಭಾರದ್ವಾಜ್
» ಅನಂತಮೂರ್ತಿ ವಿಚಾರಧಾರೆ : ಅನಂತಮೂರ್ತಿ ಸೃಜನಶೀಲ ಸಾಹಿತಿ:ಡಾ.ನ. ರತ್ನ
»ಅದೆರಳಿದೆ....
»ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ತಾನೂ ಆಕಾಂಕ್ಷಿ: ಚಂಪಾ
»ಡಾ| ಪಾಟೀಲ ಪುಟ್ಟಪ್ಪಗೆ ನಾಗರಿಕ ಸಮ್ಮಾನ: ಗಾಂಧೀಜಿ ತತ್ವ ಪ್ರಚುರಪಡಿಸಲು ಗಾಂಧಿ ಗ್ರಾಮ ಸ್ಥಾಪನೆ:ಜಗದೀಶ ಶೆಟ್ಟರ್
»ಆಸ್ಟ್ರೋ ಮೋಹನ್ ರವರ ’ಪಿಕ್ಟೋರಿಯಲ್ ಜರ್ನಿ ಟು ಉಡುಪಿ”ಪುಸ್ತಕ ಬಿಡುಗಡೆ ಸಮಾರಂಭ
»ಮತ್ತೆ ಮಳೆ ಬರುವುದೆ....
»ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ:ಗಣಿತ ನನಗೆ ಕಬ್ಬಿಣದ ಕಡಲೆಯಾಗಿತ್ತು: ಡಾ. ಚಂದ್ರಶೇಖರ ಕಂಬಾರ
»ಡಾ.ಜಿ.ಎನ್. ಉಪಾಧ್ಯಗೆ ‘ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’
»ಕಾಳಿಂಗ ನಾವಡ ಯಶೋಗಾಥೆ ಸಾಕ್ಷ್ಯಚಿತ್ರ ವಿಡಿಯೋ
»ಕುವೆಂಪು ಕಂಚಿನ ಪ್ರತಿಮೆಗೆ ಪ್ಲಾಸ್ಟಿಕ್ ಮುಸುಕು!: ರಾಷ್ಟ್ರ ಕವಿ ಪ್ರತಿಮೆಗೂ ಬಿಜೆಪಿ ಭಿನ್ನಮತದ ಕರಿನೆರಳು; ಸಿಎಂಗಾಗಿ ಕಾದು ಕುಳಿತಿರುವ ಅಧಿಕಾರಿಗಳು
»ಗಾಯಕಿ ಎಸ್.ಜಾನಕಿಗೆ ಬಸವಭೂಷಣ ಪ್ರಶಸ್ತಿ ಪ್ರದಾನ
»ಜ್ಞಾನಪೀಠ ಶ್ರೇಷ್ಠವಾದದ್ದಲ್ಲ; ನಾಟಕ ಬರೆದದ್ದೇ ಆಕಸ್ಮಿಕ: ಡಾ| ಗಿರೀಶ ಕಾರ್ನಾಡ
»ಪಾರ್ಥಸಾರಥಿಯವರಿಗೆ ಕೊಲರಾಡೋ ಕನ್ನಡ ಪ್ರಶಸ್ತಿ
»ಯಕ್ಷಗಾನದ ಮೇರುನಟರ ಕ್ಯಾಲೆಂಡರ್‌ ಬಿಡುಗಡೆ; ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್‌ ಕೂಡ ತಯಾರಿಯಲ್ಲಿ.
»30 ಜಿಲ್ಲೆಗಳಲ್ಲಿ ಕಂಬಾರರ ನಾಟಕಗಳ ಉತ್ಸವ
»ಎಲೆಯ ಮರೆಯ ಹೂ...
»ಪುತಿನ ಕಲಾಮಂದಿರ ಲೋಕಾರ್ಪಣೆ
»ಸುಳ್ಯ ಯಶಸ್ವೀ ಸಂಗೀತ ಸಂಭ್ರಮ 2011
»ಹಿರಿಯ ಸಾಹಿತಿ ಏರ್ಯ ಲಕ್ಷಿನಾರಾಯಣ ಆಳ್ವ ರಿಂದ ಡಾ| ಮೋಹನ ಆಳ್ವರಿಗೆ ಕಿಲ್ಲೆ ಪ್ರಶಸ್ತಿ ಪ್ರಧಾನ
»`ಕುವೆಂಪು ಪ್ರಭಾವ ಎಲ್ಲೆಡೆ ಪಸರಿಸಲಿ' ....
»ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚಂಪಾ, ಹಾಲಂಬಿ ಸ್ಪರ್ಧೆ?
»ಕವನ : ಕನಸಿನಾಳದಿಂದ .....
»ನಾಲ್ವರು ಸಾಧಕರಿಗೆ `ನಾಡೋಜ' ಗೌರವ ಪದವಿ ನೀಡಿ ಸನ್ಮಾನ
»ಸಂತೆ ಶಿವಾರದಲ್ಲಿ ಸಾಹಿತಿ ಡಾ ಭೈರಪ್ಪರಿಗೆ ಸನ್ಮಾನ
»ಕವನ...
»ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರಿಗೆ 2009ನೇ ಸಾಲಿನ ಪಂಪ ಪ್ರಶಸ್ತಿ: ಬೇನಾಮಿ ಇಂಗ್ಲಿಷ್ ಶಾಲೆ ಮುಚ್ಚಿ: ಪ್ರೊ. ಚಂದ್ರ ಶೇಖರ ಪಾಟೀಲ
»ಇಂದು ಸರಸ್ವತಿ ಪುತ್ರನಿಗೆ ಹುಟ್ಟೂರ ಸನ್ಮಾನ: ಸಾಹಿತಿ ಡಾ. ಭೈರಪ್ಪ ಅವರಿಗೆ ಸಂತೇಶಿವರದಲ್ಲಿ ಅಭಿನಂದನೆ, ವಿಚಾರಸಂಕಿರಣ
»ಜೋಗಿ ಬರೆದ ಫೇಸ್ ಬುಕ್ ಕಥೆ ಪುಸ್ತಕ ಬಿಡುಗಡೆ...
»ಉತ್ತರ ಕನ್ನಡದ ವಕ್ಕಲಿಗರ ಜನಪದ ಸೊಗಡು ಸುಗ್ಗೀ ಹಬ್ಬ
»ಅಮೇರಿಕಾದ ನ್ಯೂಜೆರ್ಸಿಯ ಶ್ರೀ ಕೃಷ್ಣವೃಂದಾವನದಿಂದ ಹರಿದಾಸ ಸಾಹಿತ್ಯ ವಿದ್ವಾಂಸರಾದ ಡಾ| ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಗೆ ‘ಆಸ್ಥಾನ ವಿದ್ವಾಂಸ’ಪದವಿ ಹಾಗೂ ‘ವಿದ್ಯಾಕಲ್ಪತರು’ ಪ್ರಶಸ್ತಿ ಪ್ರದಾನ.
»ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ಪೈ, ಮೆಲ್ವಿನ್‌ ರವರ ಪರಿಚಯ (Updated)
»ಗುಹಾ, ಪೈ, ಖಲೀಲ್, ರೋಡ್ರಿಗಸ್‌ಗೆ ಕೇಂದ್ರ ಸಾಹಿತ್ಯ ಅಕಾಡಮಿ ಗೌರವ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri