ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ |
ಪ್ರಕಟಿಸಿದ ದಿನಾಂಕ : 2010-02-07
ದುಬಾಯಿಯ ಸುಂದರ ಸಂಜೆಯಲ್ಲಿ ಅವಿಸ್ಮರಣೀಯ ಆತ್ಮೀಯ ಹೃದಯಸ್ಪರ್ಶಿ ಸಮಾರಂಭ ಲೋಟಸ್ ಅಪಾರ್ಟ್ಮೆಂಟ್ ಸಭಾಂಗಣದಲ್ಲಿ ಯು. ಎ. ಇ. ಕನ್ನಡಿಗರ ಲಾಂಛನ ದಲ್ಲಿ ಗಣ್ಯರ ಸಮ್ಮುಖದಲ್ಲಿ ಮಂಗಳೂರಿನಿಂದ ದುಬಾಯಿಗೆ ಆಗಮಿಸಿದ್ದ ಕರ್ನಾಟಕದ ಪಶ್ಚಿಮ ವಲಯದ ಐ.ಜಿ.ಪಿ. (ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್) ಮಾನ್ಯ ಗೋಪಾಲ್ ಬಿ. ಹೊಸೂರ್ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.




ಯು. ಎ. ಇ. ಕನ್ನಡಿಗರ ಮಹಾ ಪೋಷಕರಾಗಿರುವ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು, ಗಲ್ಫ್ ನಲ್ಲಿನ ಕನ್ನಡಿಗರ ಜನ ಮೆಚ್ಚಿದ ಮುಂದಾಳು ಶ್ರೀ ಸರ್ವೊತ್ತಮ ಶೆಟ್ಟರ ನೇತ್ರತ್ವದಲ್ಲಿ ಆಯೋಜಿಸಿದ್ದ ಈ ಸಮಾರಂಭಕ್ಕೆ ಯು. ಎ. ಇ. ಯಲ್ಲಿರುವ ಎಲ್ಲಾ ಕರ್ನಾಟಕ ಪರ ಸಂಘಟನೆಯ ಮುಖ್ಯಸ್ಥರುಗಳು, ಉಧ್ಯಮಿಗಳು ಮತ್ತು ಕುವೈಟ್, ಮುಂಬೈಯಿಂದ ಅತಿಥಿಗಳು, ಸುರತ್ಕಲ್ ಬಂಟರ ಸಂಘದಿಂದ ದುಬಾಯಿಗೆ ಹದಿನೆಂಟು ಮಹಿಳೆಯರ ತಂಡದವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.
ಅಬುಧಾಬಿ ಕರ್ನಾಟಕ ಸಂಘ, ಯು.ಎ.ಇ ಬಂಟ್ಸ ನ ಅದ್ಯಕ್ಷ ಮತ್ತು ಯು.ಎ.ಇ ಕನ್ನಡಿಗರ ಸಂಘಟಕ ಶ್ರೀ ಸರ್ವೋತ್ತಮ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿ, ಕರ್ನಾಟಕ ರಾಜ್ಯ ಕಂಡ ಕೆಲವೇ ಕೆಲವು ದಕ್ಷ ಉನ್ನತ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾದ ಮಾನ್ಯ ಶ್ರೀ ಗೋಪಾಲ್ ಬಿ. ಹೊಸೂರ್ ರವರ ವೃತ್ತಿ ಜೀವನದ ಹಿನ್ನೆಲೆಯನ್ನು ಸಬಿಕರಿಗೆ ತಿಳಿಸುತ್ತಾ ಮುಖ್ಯ ಅತಿಥಿಗಳ ಪರಿಚಯದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಡಾ. ಬಿ. ಆರ್. ಶೆಟ್ಟಿಯವರು ಮಾನ್ಯ ಗೋಪಾಲ್ ಬಿ. ಹೊಸೂರ್ ಮತ್ತು ಅವರ ಶ್ರೀಮತಿ ಪ್ರೇಮಲತಾ ರವರನ್ನು ಶಾಲು ಹೊದಿಸಿ, ಫಲ ಪುಷ್ಪ, ಸನ್ಮಾನ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು.

ಕರ್ನಾಟಕ ರಾಜ್ಯದ ಗಂಡುಗಲಿಗಳ ನಾಡಾದ ಬೆಳಗಾಂ ಜಿಲ್ಲೆಯಲ್ಲಿ ಅಥಣಿಯಲ್ಲಿ ಜನಿಸಿದ್ದು. ತಮ್ಮ ಅಚ್ಚುಮೆಚ್ಚಿನ ಕರ್ನಾಟಕ ಪೊಲೀಸ್ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆಯಲ್ಲಿ ತರಭೇತಿಯನ್ನು ಪಡೆದು, ೧೯೮೦ ರಲ್ಲಿ ಕರ್ನಾಟಕ ಪೊಲೀಸ್ ಸೇವೆಯಲ್ಲಿ ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಸೇವೆಯನ್ನು ಪ್ರಾರಂಭಿಸಿದ್ದರು. ಬೆಂಗಳೂರಿನಲ್ಲಿ ಜಂಟಿ ಕಮೀಶನರ್ ಆಫ್ ಪೋಲಿಸ್ ಆಗಿ ಸೇವೆ ಸಲ್ಲಿಸಿದ್ದಾರೆ. ೧೯೯೩ ರಲ್ಲಿ ದಂತ ಚೋರ ನರಹಂತಕ ವೀರಪ್ಪನ್ ಬಂದನದ ಎಸ್.ಟಿ.ಎಫ್. ಕಾರ್ಯಚರಣೆಯಲ್ಲಿ ಗುಂಡೇಟಿಗೆ ತುತ್ತಾಗಿ ಜೊತೆಗಾರರು ಅಸುನೀಗಿದರು. ಗೋಪಾಲ್ ಹೊಸೂರ್ ರವರಿಗೆ ಗುಂಡು ವಾಯು ನಾಳ ಅನ್ನನಾಳವನ್ನು ತುಂಡರಿಸಿ ಎದೆಯಭಾಗದಲ್ಲಿ ಹೊಕ್ಕಿ ಜೀವನ್ಮರಣಗಳ ಮಧ್ಯೆ ಹೋರಾಡಿ ಡಾ. ನಿತ್ಯಾನಂದ ಶೆಟ್ಟಿಯವರ ಶಸ್ತ್ರಚಿಕಿತ್ಸೆಯಿಂದ ಪುನರ್ಜನ್ಮ ಪಡೆದು, ಕರ್ನಾಟಕದ ಕನ್ನಡಿಗರ ಸೇವೆಯನ್ನು ಮಾಡುವ ಭಾಗ್ಯವನ್ನು ಪಡೆದರು
ಫೆಬ್ರವರಿ ೨೦೦೯ ರಲ್ಲಿ ಐ.ಜಿ.ಪಿ. (ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್) ಪಶ್ಚಿಮ ವಲಯದಲ್ಲಿ ಅಧಿಕಾರ ಸ್ವೀಕರಿಸಿ ನಕ್ಸಲ್ ನಿಗ್ರಹ ಪಡೆಯ ಜವಬ್ದಾರಿ ವಹಿಸಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ಕರಾವಳಿ ತೀರದಲ್ಲಿ "ಸಮುದ್ರ ರಕ್ಷಕ ದಳ" ಸುಸಜ್ಜಿತ ಸ್ಪೀಡ್ ಬೋಟ್ ಪಡೆಯನ್ನು ಸ್ಥಾಪಿಸಿ ಸ್ಥಳಿಯರರಿಂದಲೇ ತಂಡವನ್ನು ರಚಿಸಿ ಕರಾವಳಿಯನ್ನು ರಕ್ಷಿಸುವ ಕಾರ್ಯಯೋಜನೆ ಶ್ಲಾಘನೀಯವಾಗಿದೆ.
ಶ್ರೀಮತಿ ಪ್ರೇಮಾಲತಾ ರವರನ್ನು ಬಾಳಾ ಸಂಗಾತಿಯನ್ನಾಗಿ ಪಡೆದು ಇಬ್ಬರು ಪುತ್ರರಾದ ಕು. ಶೇಯಸ್, ಕು. ಸಮರ್ ರವರೊಂದಿಗೆ ಸುಖ ಜೀವನ ನಡೆಸುತ್ತಿರುವ ಗೋಪಾಲ್ ಹೊಸೂರ್ ನಿಸ್ವಾರ್ಥ ಸೇವೆ, ಬಡವರು, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಇರುವ ತಾವು, ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ದಕ್ಷ ಉನ್ನತ ಅಧಿಕಾರಿಯಾಗಿ. ಅಪ್ರತಿಮ ಸಾಹಸಿಗರಾಗಿ, ನಿರ್ಭಯದಿಂದ ದುಷ್ಟ ಶಕ್ತಿಗಳನ್ನು ಸದೆ ಬಡಿಯುವ ಚಮತ್ಕಾರಿಕೆ ಇವರಲ್ಲಿದೆ.
ಕರಾವಳಿ ಕರ್ನಾಟಕದ ಶಾಂತಿ ಸುವ್ಯವಸ್ಥೆ ಕೆಲವು ಕಿಡಿಗೇಡಿಗಳಿಂದ ಹದಗೆಡುವ ಸನ್ನಿವೇಶ ಸೃಷ್ಠಿಯಾಗಿ ಜನರಲ್ಲಿ ಭಯದ ಅತಂಕ ಮೂಡುವಾಗ, ಕರಾವಳಿಯಲ್ಲಿ ಶಾಂತಿ ನೆಮ್ಮದಿ ಕಾಪಾಡಲು ಕರ್ನಾಟಕ ಸರ್ಕಾರ ಒರ್ವ ದಕ್ಷ ಪೊಲೀಸ್ ಅಧಿಕಾರಿ ಯನ್ನು ನೇಮಿಸಿ ಕರಾವಳಿಯ ಜನತೆ ನೆಮ್ಮದಿಯಿಂದ ದಿನ ಕಳೆಯುವಂತಾಗಿದೆ.

ಬ್ಯಾರಿಸ್ ಕಲ್ಚರಲ್ ಫೋರಂ ಯು.ಎ.ಇ. ವತಿಯಿಂದ ಅಧ್ಯಕ್ಷರಾದ ಡಾ. ಬಿ. ಕೆ. ಯೂಸುಫ್ ರವರು ಸ್ಮರಣಿಕೆ ನೀಡಿ ಗೌರವಿಸಿ ದರು.

ಚಿಲಿವಿಲ್ಲಿ ಮಾಲಿಕರಾದ ಸತೀಶ್ ವಿ. ಪುಷ್ಪಗುಚ್ಚ ನೀಡಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ಗೋಪಾಲ್ ಬಿ. ಹೊಸೂರ್ ರವರು ಯು.ಎ.ಇ. ಕನ್ನಡಿಗರಿಗೆ ಸಲ್ಲಿಸಿದ ಮನದಾಳದ ಕೃತಜ್ಞತೆ ಸಮರ್ಪಣೆ...
ಕಾರ್ಯಕ್ರಮದ ಪ್ರಾರಂಭದಲ್ಲಿಯೆ ಸಭಾಂಗಣದಲ್ಲಿದ್ದ ಪ್ರತಿಯೊಬ್ಬರ ಪರಿಚಯವನ್ನು ಮಾಡಿಕೊಂಡಿದ್ದು, ಸರ್ವರಿಗೂ ತಮ್ಮ ಕೃತಜ್ಞತೆಯನ್ನು ಸಲ್ಲಿಸಿ, ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ಹಲವಾರು ಸನ್ಮಾನ, ಪ್ರಶಸ್ತಿ ಪಡೆದಿದ್ದರೂ, ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ವಿವಿಧ ಸಂಘಟನೆಗಳು, ವಿವಿಧ ಧಾರ್ಮಿಕ, ಸಮುದಾಯದವರು ಒಂದಾಗಿ ಯು. ಎ. ಇ. ಕನ್ನಡಿಗರಾಗಿ ಸನ್ಮಾನ ಸಲ್ಲಿಸಿದ್ದು ಕನ್ನಡ ನಾಡಿನಲ್ಲಿ ಸೇವೆಸಲ್ಲಿಸುವ ನನ್ನ ಕನ್ನಡತನವನ್ನು ಜಾಗೃತಿಗೊಳಿಸಿದೆ. ಎಂದು ತಮ್ಮ ಹರ್ಷ ವ್ಯಕ್ತ ಪಡಿಸಿದರು.
ತಮ್ಮ ಸುಂದರ ಕನ್ನಡ ಭಾಷೆಯಲ್ಲಿ ಸ್ವಾರಸ್ಯವಾಗಿ ಮಾತನಾಡುತ್ತಾ. ಕರ್ನಾಟಕದಲ್ಲಿ ಕೇವಲ ೦.೫% ವಿಕೃತ ಮನಸಿನ ಕಿಡಿಗೇಡಿಗಳು ನಡೆಸುವ ದುಷ್ಕೃತ್ಯಗಳು ಇಡಿ ಸಮುದಾಯವನ್ನು ಸಂಶಯ ದೃಷ್ಟಿಯಲ್ಲಿ ನೋಡುವಂತಾಗಿತ್ತು. ಕರಾವಳಿ ಪ್ರದೇಶದಲ್ಲಿ ಶಾಂತಿ ನೆಲೆಸುವ ಪ್ರಯತ್ನದಲ್ಲಿ ಹಲವಾರು ನಾಗರಿಕ, ಧಾರ್ಮಿಕ ಮುಖಂಡರು, ಜನ ಪ್ರತಿನಿಧಿಗಳು ಒಟ್ಟಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಮಿತಿ ರಚಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುತ್ತಾ ನೆಮ್ಮದಿ ನೆಲೆಸುವಂತೆ ಮಾಡಿದ್ದು ಜನರು ಭಯವಿಲ್ಲದೆ ಇರುವಂತಾಗಿದೆ ಎಂದು ತಿಳಿಸಿದರು.

ಮಾನ್ಯ ಗೋಪಾಲ್ ಬಿ. ಹೊಸೂರ್ ರವರೊಂದಿಗೆ ಯು.ಎ.ಇ. ಕನ್ನಡಿಗರ ನೇರ ಸಂವಾದ...



ಸುಧೀರ್ ಕುಮಾರ್ ಶೆಟ್ಟಿ : ಯು. ಎ. ಇ. ಯಲ್ಲಿ ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಇರುವುದರಿಂದ ಇಲ್ಲಿ ನೆಲೆಸಿರುವವರು ಭಯದಿಂದ ಕಾನೂನಿಗೆ ವಿರುದ್ದ ಹೋಗುವುದಿಲ್ಲ. ಸಣ್ಣ ತಪ್ಪು ಮಾಡಿದವನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದೇ ರೀತಿ ಭಾರತದಲ್ಲಿಯೂ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಲು ಸಾಧ್ಯವೇ?
ಗೋಪಾಲ್ ಬಿ. ಹೊಸೂರ್ : ಭಾರತದಲ್ಲಿ ತಪ್ಪು ಮಾಡಿದವನಿಗೆ ಸರಿಯಾದ ಸಾಕ್ಷಿ ಆಧಾರದ ಮೇಲೆ ಶಿಕ್ಷೆಯಾಗುತ್ತದೆ. ಆದರೇ ಎಲ್ಲಿಯಾದರು ಅಪರಾಧಿ ಕಾನೂನಿಂದ ತಪ್ಪಿಸಿ ಕೊಂಡರೂ, ಒಬ್ಬ ನಿರಪರಾಧಿಯೂ ಶಿಕ್ಷೆಯನ್ನು ಪಡೆಯುದನ್ನು ತಪ್ಪಿಸಿ ನ್ಯಾಯ ದೊರಕುವಂತೆ ಮಾಡುವುದನ್ನು ಕಾನೂನು ಎತ್ತಿ ಹಿಡಿಯುತ್ತದೆ.
ಗಣೇಶ್ ರೈ : ಪೊಲೀಸ್ ಬೇಹುಗಾರಿಕೆ, ಅಪರಾಧ ಪತ್ತೆ, ಅರೋಪಿಯ ಮಂಪರು ಪರೀಕ್ಷೆಯ ಮಾಹಿತಿ, ಇನ್ನಿತರ ಗೌಪ್ಯವಾಗಿ ಇಡಬೇಕಾದ ವಿಚಾರಗಳು ಪೊಲೀಸ್ ಇಲಾಖೆಗೆ ತಿಳಿಯುವ ಮೊದಲೆ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿ ಬಹಿರಂಗವಾಗುತ್ತದೆ. ಇದರಿಂದ ತಮ್ಮ ಪತ್ತೆದಾರಿಕೆಗೆ ತೊಂದರೆಯಾಗುವುದಿಲ್ಲವೆ?
ಗೋಪಾಲ್ ಬಿ. ಹೊಸೂರ್ : ಹೌದು ಖಂಡಿತವಾಗಿಯೂ ತೊಂದರೆಯಾಗುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ನೂತನ ಕಾನೂನು ಜಾರಿಗೊಳ್ಳಿಸಲು ಯೋಚನೆ ಮಾಡುತ್ತಿದೆ. ಕೆಲವು ಗೌಪ್ಯವಿಚಾರಗಳನ್ನು ಬಹಿರಂಗ ಪಡಿಸುವಂತಿಲ್ಲ. ಆದರೆ ಕೆಲವು ಸಂದರ್ಭದಲ್ಲಿ ಮಾಧ್ಯಮಗಳ ಮೂಲಕ ಮಾಹಿತಿ ಲಭ್ಯವಾಗಿ ಪ್ರಯೋಜನವಾಗಿದ್ದು ಇದೆ.
ಡಾ. ಮಹ್ಮದ್ ಕಾಪು : ಜನರಿಗೆ ಪೊಲೀಸ್, ಅರಕ್ಷಕ ಠಾಣೆ ಎಂದರೆ ಭಯ, ಅದುದರಿಂದ ಜನರಿಗೆ ಮತ್ತು ಪೊಲೀಸರಿಗೆ ನಿಕಟ ಭಾಂದವ್ಯ ಬೆಳೆಯುವ ಸಲುವಾಗಿ, ಜನಸಮೂಹದಲ್ಲಿ ಮತ್ತು ಶಾಲಾ ವಿದ್ಯಾರ್ಥಿಗಳಲ್ಲಿ ಪೊಲೀಸ್ ವಿಚಾರ ಸಂಕಿರಣ, ಮಾಹಿತಿ, ಸಂಪರ್ಕ, ಗೌರವ ಮೂಡಿಸುವಲ್ಲಿ ಕಾರ್ಯಯೋಜನೆ ರೂಪಿಸಲು ಸೂಚಿಸಿದಾಗ....
ಗೋಪಾಲ್ ಬಿ. ಹೊಸೂರ್ : ಎರಡು ಉನ್ನತ ಪೊಲೀಸ್ ಅಧಿಕಾರಿಗಳು ಹತ್ತು ಸಾವಿರಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಪೊಲೀಸ್ ಮಾಹಿತಿಯ ಬಗ್ಗೆ ತಿಳುವಳಿಕೆ ನೀಡುತ್ತಾ ಬರುತಿದ್ದಾರೆ. ಮುಂದುವರಿಸಿಕೊಂಡು ಹೋಗುತಿದ್ದಾರೆ.
ಹರ್ಮನ್ ಲೂವಿಸ್ : ಪೊಲೀಸ್ ಇಲಾಖೆಯಲ್ಲಿ ಎನ್. ಆರ್.ಐ.ಗಳಿಗೆ ವಿಶೇಷ ವಿಭಾಗ ತೆರೆಯಲು ಕೋರಿಕೆ, ಮಾಧ್ಯಮದ ಬಗ್ಗೆ, ಸಿ. ಆರ್. ಶೆಟ್ಟಿ : ಊರಿನಲ್ಲಿರುವ ಅಮಾಯಕರ ಮೇಲೆ ಪೊಲೀಸರ ಸುಳ್ಳು ಕೇಸ್ ದಾಖಲೆ, ಅವರುಗಳ ಪರದಾಟ, ಮಾನಸಿಕ ವೇಧನೆ.... ಕೆ. ಆರ್. ತಂತ್ರಿ : ಕೆಂದ್ರ ಸರ್ಕಾರ, ರಾಜ್ಯ ಸರ್ಕಾರ, ಜನಪ್ರತಿನಿಧಿಗಳ ಜೊತೆಗೆ ಪೊಲೀಸ್ ಇಲಾಖೆಯ ಸಂಬಂಧಗಳ ಬಗ್ಗೆ... ಮಹಾಬಲಮೂರ್ತಿ ಕೊಂಡ್ಲಕೆರೆ : ಸಾರ್ವಜನಿಕರೊಂದಿಗೆ ಪೊಲೀಸರ ಸಂಬಂಧ, ನವೀನ್ : ಪೊಲೀಸ್ ಇಲಾಖೆಯ ಭ್ರಷ್ಟಚಾರ....
ಗೋಪಾಲ್ ಬಿ. ಹೊಸೂರ್ : ಕ್ರಮವಾಗಿ... ಜನರು ಇಂದಿನ ದಿನಗಳಲ್ಲಿ ಪೊಲೀಸ್ ಎಂದರೆ ಹೆದರಬೇಕಾಗಿಲ್ಲ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಗರಿಕ ಮುಖಂಡರನ್ನು ಒಳಗೊಂಡ ಸಮಿತಿ ಇದೆ, ಅವರ ಮೂಲಕ ವಾಗಿಯೂ ದೂರು ಸಲ್ಲಿಸ ಬಹುದು, ಅಥವಾ ನೇರವಾಗಿ ಠಾಣೆಯಲ್ಲಿ ದೂರು ಸಲ್ಲಿಸಬಹುದು. ಅಥವಾ ಪೊಲೀಸ್ ಉನ್ನತ ಅಧಿಕಾರಿಯವರ ಕಛೇರಿಯಲ್ಲಿ ವಿಶೇಷ ದೂರು ದಾಖಲಿಸುವ ಕೇಂದ್ರವಿದೆ. ದೂರು ಪಡೆದು ಅತೀ ಶಿಘ್ರದಲ್ಲಿಯೇ ಪೊಲೀಸ್ ಉನ್ನತ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡುತ್ತಾರೆ. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗೆ ಅಧಿಕೃತ ಈಮೈಲ್ ವಿಳಾಸವಿದೆ. ಪೊಲೀಸ್ ಇಲಾಖೆಗೆ ಮಾಹಿತಿ, ದೂರು, ಸಲಹೆಗಳನ್ನು ಈಮೈಲ್ ಮೂಲಕ ಕಳುವಿಸಿ ಉತ್ತರ ಪಡೆಯಬಹುದು.



ಇನ್ನೂ ಹಲವಾರು ಉಪಯುಕ್ತ ಮಾಹಿತಿ, ಸಲಹೆ ಗಳನ್ನು ನೀಡಿ ಕರ್ನಾಟಕ ಪೊಲೀಸ್ ಭಾರತದ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ನೂತನ ತಂತ್ರಜ್ಞಾನದೊಂದಿಗೆ ಕರ್ನಾಟಕ ಪೊಲೀಸ್ ಕಾರ್ಯಪಡೆ ಜನಸೇವೆಗೆ ಸಿದ್ಧವಾಗಿದೆ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಭಯಪಡುವ ಅಗತ್ಯವಿಲ್ಲ. ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಅನಿವಾಸಿ ಕನ್ನಡಿಗರಿಗೆ ಮಾಹಿತಿ ನೀಡಿ ಕೊನೆಯಲ್ಲಿ ತಮ್ಮ ಕೊಲ್ಲಿರಾಷ್ಟ್ರದ ಭೇಟಿ ಅವಿಸ್ಮರಣೀಯವಾಗಿದೆ ಎಂದು ತಿಳಿಸಿದರು.

ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು, ದಕ್ಷ ಅಧಿಕಾರಿ ಮಾನ್ಯ ಗೋಪಾಲ್ ಬಿ. ಹೊಸೂರ್ ರವರನ್ನು ಅಭಿನಂದಿಸಿ, ಯು. ಎ. ಇ. ಕನ್ನಡಿಗರಿಗೆ ಪೂರ್ಣಮಾಹಿತಿಯನ್ನು ನೀಡಿ ಅಮೂಲ್ಯ ಸಲಹೆಗಳನ್ನು ನೀಡಿದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ಸಮಾರಂಭದ ಕೊನೆಯಲ್ಲಿ ರುಚಿಯಾದ ಭೋಜನವನ್ನು ಸ್ವೀಕರಿಸಿ ಆಗಮಿಸಿದ್ದ ಅತಿಥಿಗಳೆಲ್ಲರು ನಗುಮೊಗದೊಂದಿಗೆ ಹಿಂತಿರುಗಿದರು.
ವರದಿಯ ವಿವರಗಳು |
 |
ಕೃಪೆ : ಬಿ.ಕೆ.ಗಣೇಶ್ ರೈ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-07
|
|
| abbas ali sheikh, basrur kundapur taluk | 2010-07-07 | | allaru nirbhaya aagi policesariga dooru kodu vavraga beku.lancha khora policeru erabaaradu. apradi aadaru avniga byya baardu,hodaya baaradu,policeru yaara jotagu apa maryady aagi vartisa baaradu.policeru sari idraya namma bharatha is too good. |
| Zulfikar Ali, Mangalore, KSA | 2010-03-02 | | Adhivaasi kannadigara, prathyekavaagi Dr. BR Shettyavara ashrayadhalli IGP Shree Gopal Hosururavarannu gauravisidhdhu kannadigarellarigu hemmaya vishayavaagidhe. i samdharbadhalli IGPyavaru thamma dhainamdhina jeevanadha kiru parichayavannu haggoo polis ilaakeyu yaavareethi jana saamanyarige thumbu hradhayadhimdha sahaaya hasthavannu needuthadhe embuvudhannu vivaravaagi thilisi sabikara bayavannu edhdhodisidharu. IGP hosuru ramthaha dhaksha polis adhikaarigaliddare idee Karnatakavannu samaajahda dhrohigalimdha rakshisabahudu. Avarannu sanmaanisidha UAE Kannanada Vedhikieya samgadha naayakarigoo, gauravisidha ella sabikarigoo nanna nechchina namanagalu. |
| ಜಯರಾಮ ಸೋಮಯಾಜಿ, ಬಿರ್ತಿ, ಸಾಲಿಕೇರಿ. | 2010-02-07 | | ಪದ್ಮಶ್ರಿ ಡಾ. ಬಿ.ಆರ್. ಶೆಟ್ಟಿಯವರ ಆಶ್ರಯದ ಯು.ಎ.ಇ. ಕನ್ನಡಿಗರ ವೇದಿಕೆಯಲ್ಲಿ, ಇ.ಜಿ.ಪಿ. ಶ್ರೀ ಗೋಪಾಲ್ ಹೊಸೂರ್ ಅವರನ್ನು ಗೌರವಿಸಿ ಸನ್ಮಾನಿಸಿರುವುದು ಎಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ನೆರೆದ ಸಭಿಕರಿಗೆ ಶ್ರೀ. ಹೊಸೂರ್ ಅವರ ಪರಿಚಯ, ಪೋಲೀಸ್ ಇಲಾಖೆಯ ಹಲವಾರು ವಿಚಾರಗಳು ತಿಳಿದಿರುವುದು ಸಂತಸದ ವಿಷಯವಾಗಿದೆ. ಶ್ರೀ. ಸರ್ವೊತ್ತಮ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಎಲ್ಲಾ ಕನ್ನಡಿಗರ ಪರವಾಗಿ ಅಭಿನಂದನೆಗಳು.-ಜಯರಾಮ ಸೋಮಯಾಜಿ. |
|