ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

ದುಬಾಯಿಯ ಸುಂದರ ಸಂಜೆಯಲ್ಲಿ ಅವಿಸ್ಮರಣೀಯ ಆತ್ಮೀಯ ಹೃದಯಸ್ಪರ್ಶಿ ಸಮಾರಂಭ ಲೋಟಸ್ ಅಪಾರ್ಟ್ಮೆಂಟ್ ಸಭಾಂಗಣದಲ್ಲಿ  ಯು. ಎ. ಇ.  ಕನ್ನಡಿಗರ ಲಾಂಛನ ದಲ್ಲಿ ಗಣ್ಯರ ಸಮ್ಮುಖದಲ್ಲಿ ಮಂಗಳೂರಿನಿಂದ ದುಬಾಯಿಗೆ ಆಗಮಿಸಿದ್ದ ಕರ್ನಾಟಕದ ಪಶ್ಚಿಮ ವಲಯದ ಐ.ಜಿ.ಪಿ. (ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್) ಮಾನ್ಯ ಗೋಪಾಲ್ ಬಿ. ಹೊಸೂರ್ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಯು. ಎ. ಇ. ಕನ್ನಡಿಗರ ಮಹಾ ಪೋಷಕರಾಗಿರುವ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು, ಗಲ್ಫ್ ನಲ್ಲಿನ ಕನ್ನಡಿಗರ ಜನ ಮೆಚ್ಚಿದ  ಮುಂದಾಳು ಶ್ರೀ ಸರ್ವೊತ್ತಮ ಶೆಟ್ಟರ ನೇತ್ರತ್ವದಲ್ಲಿ ಆಯೋಜಿಸಿದ್ದ ಈ ಸಮಾರಂಭಕ್ಕೆ ಯು. ಎ. ಇ. ಯಲ್ಲಿರುವ ಎಲ್ಲಾ ಕರ್ನಾಟಕ ಪರ ಸಂಘಟನೆಯ ಮುಖ್ಯಸ್ಥರುಗಳು, ಉಧ್ಯಮಿಗಳು ಮತ್ತು ಕುವೈಟ್, ಮುಂಬೈಯಿಂದ ಅತಿಥಿಗಳು, ಸುರತ್ಕಲ್ ಬಂಟರ ಸಂಘದಿಂದ ದುಬಾಯಿಗೆ ಹದಿನೆಂಟು ಮಹಿಳೆಯರ ತಂಡದವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಅಬುಧಾಬಿ ಕರ್ನಾಟಕ ಸಂಘ, ಯು.ಎ.ಇ ಬಂಟ್ಸ ನ ಅದ್ಯಕ್ಷ  ಮತ್ತು ಯು.ಎ.ಇ ಕನ್ನಡಿಗರ  ಸಂಘಟಕ  ಶ್ರೀ ಸರ್ವೋತ್ತಮ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿ, ಕರ್ನಾಟಕ ರಾಜ್ಯ ಕಂಡ ಕೆಲವೇ ಕೆಲವು ದಕ್ಷ ಉನ್ನತ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾದ ಮಾನ್ಯ ಶ್ರೀ ಗೋಪಾಲ್ ಬಿ. ಹೊಸೂರ್ ರವರ ವೃತ್ತಿ ಜೀವನದ ಹಿನ್ನೆಲೆಯನ್ನು ಸಬಿಕರಿಗೆ ತಿಳಿಸುತ್ತಾ ಮುಖ್ಯ ಅತಿಥಿಗಳ ಪರಿಚಯದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

 ಡಾ. ಬಿ. ಆರ್. ಶೆಟ್ಟಿಯವರು ಮಾನ್ಯ ಗೋಪಾಲ್ ಬಿ. ಹೊಸೂರ್ ಮತ್ತು ಅವರ ಶ್ರೀಮತಿ ಪ್ರೇಮಲತಾ ರವರನ್ನು ಶಾಲು ಹೊದಿಸಿ, ಫಲ ಪುಷ್ಪ, ಸನ್ಮಾನ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು.

ಕರ್ನಾಟಕ ರಾಜ್ಯದ ಗಂಡುಗಲಿಗಳ ನಾಡಾದ ಬೆಳಗಾಂ ಜಿಲ್ಲೆಯಲ್ಲಿ ಅಥಣಿಯಲ್ಲಿ ಜನಿಸಿದ್ದು. ತಮ್ಮ ಅಚ್ಚುಮೆಚ್ಚಿನ ಕರ್ನಾಟಕ ಪೊಲೀಸ್ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆಯಲ್ಲಿ ತರಭೇತಿಯನ್ನು ಪಡೆದು, ೧೯೮೦ ರಲ್ಲಿ ಕರ್ನಾಟಕ ಪೊಲೀಸ್ ಸೇವೆಯಲ್ಲಿ ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಸೇವೆಯನ್ನು ಪ್ರಾರಂಭಿಸಿದ್ದರು. ಬೆಂಗಳೂರಿನಲ್ಲಿ ಜಂಟಿ ಕಮೀಶನರ್ ಆಫ್ ಪೋಲಿಸ್ ಆಗಿ ಸೇವೆ ಸಲ್ಲಿಸಿದ್ದಾರೆ. ೧೯೯೩ ರಲ್ಲಿ ದಂತ ಚೋರ ನರಹಂತಕ ವೀರಪ್ಪನ್ ಬಂದನದ  ಎಸ್.ಟಿ.ಎಫ್. ಕಾರ್ಯಚರಣೆಯಲ್ಲಿ ಗುಂಡೇಟಿಗೆ ತುತ್ತಾಗಿ ಜೊತೆಗಾರರು ಅಸುನೀಗಿದರು. ಗೋಪಾಲ್ ಹೊಸೂರ್ ರವರಿಗೆ ಗುಂಡು ವಾಯು ನಾಳ ಅನ್ನನಾಳವನ್ನು ತುಂಡರಿಸಿ ಎದೆಯಭಾಗದಲ್ಲಿ ಹೊಕ್ಕಿ ಜೀವನ್ಮರಣಗಳ ಮಧ್ಯೆ ಹೋರಾಡಿ ಡಾ. ನಿತ್ಯಾನಂದ ಶೆಟ್ಟಿಯವರ ಶಸ್ತ್ರಚಿಕಿತ್ಸೆಯಿಂದ ಪುನರ್ಜನ್ಮ ಪಡೆದು, ಕರ್ನಾಟಕದ ಕನ್ನಡಿಗರ ಸೇವೆಯನ್ನು ಮಾಡುವ ಭಾಗ್ಯವನ್ನು ಪಡೆದರು

ಫೆಬ್ರವರಿ ೨೦೦೯ ರಲ್ಲಿ ಐ.ಜಿ.ಪಿ. (ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್)  ಪಶ್ಚಿಮ ವಲಯದಲ್ಲಿ ಅಧಿಕಾರ ಸ್ವೀಕರಿಸಿ ನಕ್ಸಲ್ ನಿಗ್ರಹ ಪಡೆಯ ಜವಬ್ದಾರಿ ವಹಿಸಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ಕರಾವಳಿ ತೀರದಲ್ಲಿ "ಸಮುದ್ರ ರಕ್ಷಕ ದಳ" ಸುಸಜ್ಜಿತ ಸ್ಪೀಡ್ ಬೋಟ್ ಪಡೆಯನ್ನು ಸ್ಥಾಪಿಸಿ ಸ್ಥಳಿಯರರಿಂದಲೇ ತಂಡವನ್ನು ರಚಿಸಿ ಕರಾವಳಿಯನ್ನು ರಕ್ಷಿಸುವ ಕಾರ್ಯಯೋಜನೆ ಶ್ಲಾಘನೀಯವಾಗಿದೆ.

ಶ್ರೀಮತಿ ಪ್ರೇಮಾಲತಾ ರವರನ್ನು ಬಾಳಾ ಸಂಗಾತಿಯನ್ನಾಗಿ ಪಡೆದು ಇಬ್ಬರು ಪುತ್ರರಾದ ಕು. ಶೇಯಸ್, ಕು. ಸಮರ್ ರವರೊಂದಿಗೆ ಸುಖ ಜೀವನ ನಡೆಸುತ್ತಿರುವ ಗೋಪಾಲ್ ಹೊಸೂರ್ ನಿಸ್ವಾರ್ಥ ಸೇವೆ, ಬಡವರು, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಇರುವ ತಾವು, ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ದಕ್ಷ ಉನ್ನತ ಅಧಿಕಾರಿಯಾಗಿ. ಅಪ್ರತಿಮ ಸಾಹಸಿಗರಾಗಿ, ನಿರ್ಭಯದಿಂದ ದುಷ್ಟ ಶಕ್ತಿಗಳನ್ನು ಸದೆ ಬಡಿಯುವ ಚಮತ್ಕಾರಿಕೆ ಇವರಲ್ಲಿದೆ.

ಕರಾವಳಿ ಕರ್ನಾಟಕದ ಶಾಂತಿ ಸುವ್ಯವಸ್ಥೆ ಕೆಲವು ಕಿಡಿಗೇಡಿಗಳಿಂದ ಹದಗೆಡುವ ಸನ್ನಿವೇಶ ಸೃಷ್ಠಿಯಾಗಿ ಜನರಲ್ಲಿ ಭಯದ ಅತಂಕ ಮೂಡುವಾಗ, ಕರಾವಳಿಯಲ್ಲಿ ಶಾಂತಿ ನೆಮ್ಮದಿ ಕಾಪಾಡಲು ಕರ್ನಾಟಕ ಸರ್ಕಾರ ಒರ್ವ ದಕ್ಷ ಪೊಲೀಸ್ ಅಧಿಕಾರಿ ಯನ್ನು ನೇಮಿಸಿ ಕರಾವಳಿಯ ಜನತೆ ನೆಮ್ಮದಿಯಿಂದ ದಿನ ಕಳೆಯುವಂತಾಗಿದೆ.

ಬ್ಯಾರಿಸ್ ಕಲ್ಚರಲ್ ಫೋರಂ ಯು.ಎ.ಇ. ವತಿಯಿಂದ ಅಧ್ಯಕ್ಷರಾದ ಡಾ. ಬಿ. ಕೆ. ಯೂಸುಫ್ ರವರು ಸ್ಮರಣಿಕೆ ನೀಡಿ ಗೌರವಿಸಿ ದರು.

ಚಿಲಿವಿಲ್ಲಿ ಮಾಲಿಕರಾದ ಸತೀಶ್ ವಿ. ಪುಷ್ಪಗುಚ್ಚ ನೀಡಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ಗೋಪಾಲ್ ಬಿ. ಹೊಸೂರ್ ರವರು ಯು.ಎ.ಇ. ಕನ್ನಡಿಗರಿಗೆ ಸಲ್ಲಿಸಿದ ಮನದಾಳದ ಕೃತಜ್ಞತೆ ಸಮರ್ಪಣೆ...

ಕಾರ್ಯಕ್ರಮದ ಪ್ರಾರಂಭದಲ್ಲಿಯೆ ಸಭಾಂಗಣದಲ್ಲಿದ್ದ ಪ್ರತಿಯೊಬ್ಬರ ಪರಿಚಯವನ್ನು ಮಾಡಿಕೊಂಡಿದ್ದು, ಸರ್ವರಿಗೂ ತಮ್ಮ ಕೃತಜ್ಞತೆಯನ್ನು ಸಲ್ಲಿಸಿ, ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ಹಲವಾರು ಸನ್ಮಾನ, ಪ್ರಶಸ್ತಿ ಪಡೆದಿದ್ದರೂ, ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ವಿವಿಧ ಸಂಘಟನೆಗಳು, ವಿವಿಧ ಧಾರ್ಮಿಕ, ಸಮುದಾಯದವರು ಒಂದಾಗಿ ಯು. ಎ. ಇ. ಕನ್ನಡಿಗರಾಗಿ ಸನ್ಮಾನ ಸಲ್ಲಿಸಿದ್ದು ಕನ್ನಡ ನಾಡಿನಲ್ಲಿ ಸೇವೆಸಲ್ಲಿಸುವ  ನನ್ನ ಕನ್ನಡತನವನ್ನು ಜಾಗೃತಿಗೊಳಿಸಿದೆ. ಎಂದು ತಮ್ಮ ಹರ್ಷ ವ್ಯಕ್ತ ಪಡಿಸಿದರು.

ತಮ್ಮ ಸುಂದರ ಕನ್ನಡ ಭಾಷೆಯಲ್ಲಿ ಸ್ವಾರಸ್ಯವಾಗಿ ಮಾತನಾಡುತ್ತಾ. ಕರ್ನಾಟಕದಲ್ಲಿ ಕೇವಲ ೦.೫% ವಿಕೃತ ಮನಸಿನ ಕಿಡಿಗೇಡಿಗಳು ನಡೆಸುವ ದುಷ್ಕೃತ್ಯಗಳು ಇಡಿ ಸಮುದಾಯವನ್ನು ಸಂಶಯ ದೃಷ್ಟಿಯಲ್ಲಿ ನೋಡುವಂತಾಗಿತ್ತು. ಕರಾವಳಿ ಪ್ರದೇಶದಲ್ಲಿ ಶಾಂತಿ ನೆಲೆಸುವ ಪ್ರಯತ್ನದಲ್ಲಿ ಹಲವಾರು ನಾಗರಿಕ, ಧಾರ್ಮಿಕ ಮುಖಂಡರು, ಜನ ಪ್ರತಿನಿಧಿಗಳು ಒಟ್ಟಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಮಿತಿ ರಚಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುತ್ತಾ ನೆಮ್ಮದಿ ನೆಲೆಸುವಂತೆ ಮಾಡಿದ್ದು ಜನರು ಭಯವಿಲ್ಲದೆ ಇರುವಂತಾಗಿದೆ ಎಂದು ತಿಳಿಸಿದರು.

ಮಾನ್ಯ ಗೋಪಾಲ್ ಬಿ. ಹೊಸೂರ್ ರವರೊಂದಿಗೆ ಯು.ಎ.ಇ. ಕನ್ನಡಿಗರ ನೇರ ಸಂವಾದ...

ಸುಧೀರ್ ಕುಮಾರ್ ಶೆಟ್ಟಿ : ಯು. ಎ. ಇ. ಯಲ್ಲಿ ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಇರುವುದರಿಂದ ಇಲ್ಲಿ ನೆಲೆಸಿರುವವರು ಭಯದಿಂದ ಕಾನೂನಿಗೆ ವಿರುದ್ದ ಹೋಗುವುದಿಲ್ಲ. ಸಣ್ಣ ತಪ್ಪು ಮಾಡಿದವನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದೇ ರೀತಿ ಭಾರತದಲ್ಲಿಯೂ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಲು ಸಾಧ್ಯವೇ?

ಗೋಪಾಲ್ ಬಿ. ಹೊಸೂರ್ : ಭಾರತದಲ್ಲಿ ತಪ್ಪು ಮಾಡಿದವನಿಗೆ ಸರಿಯಾದ ಸಾಕ್ಷಿ ಆಧಾರದ ಮೇಲೆ ಶಿಕ್ಷೆಯಾಗುತ್ತದೆ. ಆದರೇ ಎಲ್ಲಿಯಾದರು ಅಪರಾಧಿ ಕಾನೂನಿಂದ ತಪ್ಪಿಸಿ ಕೊಂಡರೂ, ಒಬ್ಬ ನಿರಪರಾಧಿಯೂ ಶಿಕ್ಷೆಯನ್ನು ಪಡೆಯುದನ್ನು ತಪ್ಪಿಸಿ ನ್ಯಾಯ ದೊರಕುವಂತೆ ಮಾಡುವುದನ್ನು ಕಾನೂನು ಎತ್ತಿ ಹಿಡಿಯುತ್ತದೆ.

ಗಣೇಶ್ ರೈ : ಪೊಲೀಸ್ ಬೇಹುಗಾರಿಕೆ, ಅಪರಾಧ ಪತ್ತೆ, ಅರೋಪಿಯ ಮಂಪರು ಪರೀಕ್ಷೆಯ ಮಾಹಿತಿ, ಇನ್ನಿತರ ಗೌಪ್ಯವಾಗಿ ಇಡಬೇಕಾದ ವಿಚಾರಗಳು ಪೊಲೀಸ್ ಇಲಾಖೆಗೆ ತಿಳಿಯುವ ಮೊದಲೆ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿ ಬಹಿರಂಗವಾಗುತ್ತದೆ. ಇದರಿಂದ ತಮ್ಮ  ಪತ್ತೆದಾರಿಕೆಗೆ ತೊಂದರೆಯಾಗುವುದಿಲ್ಲವೆ?

ಗೋಪಾಲ್ ಬಿ. ಹೊಸೂರ್ : ಹೌದು ಖಂಡಿತವಾಗಿಯೂ ತೊಂದರೆಯಾಗುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ನೂತನ ಕಾನೂನು ಜಾರಿಗೊಳ್ಳಿಸಲು ಯೋಚನೆ ಮಾಡುತ್ತಿದೆ. ಕೆಲವು ಗೌಪ್ಯವಿಚಾರಗಳನ್ನು ಬಹಿರಂಗ ಪಡಿಸುವಂತಿಲ್ಲ. ಆದರೆ ಕೆಲವು ಸಂದರ್ಭದಲ್ಲಿ ಮಾಧ್ಯಮಗಳ ಮೂಲಕ ಮಾಹಿತಿ ಲಭ್ಯವಾಗಿ ಪ್ರಯೋಜನವಾಗಿದ್ದು ಇದೆ.

ಡಾ. ಮಹ್ಮದ್ ಕಾಪು : ಜನರಿಗೆ ಪೊಲೀಸ್, ಅರಕ್ಷಕ ಠಾಣೆ ಎಂದರೆ ಭಯ, ಅದುದರಿಂದ ಜನರಿಗೆ ಮತ್ತು ಪೊಲೀಸರಿಗೆ ನಿಕಟ ಭಾಂದವ್ಯ ಬೆಳೆಯುವ ಸಲುವಾಗಿ, ಜನಸಮೂಹದಲ್ಲಿ ಮತ್ತು ಶಾಲಾ ವಿದ್ಯಾರ್ಥಿಗಳಲ್ಲಿ ಪೊಲೀಸ್ ವಿಚಾರ ಸಂಕಿರಣ, ಮಾಹಿತಿ, ಸಂಪರ್ಕ, ಗೌರವ ಮೂಡಿಸುವಲ್ಲಿ ಕಾರ್ಯಯೋಜನೆ ರೂಪಿಸಲು ಸೂಚಿಸಿದಾಗ....

ಗೋಪಾಲ್ ಬಿ. ಹೊಸೂರ್ : ಎರಡು ಉನ್ನತ ಪೊಲೀಸ್ ಅಧಿಕಾರಿಗಳು ಹತ್ತು ಸಾವಿರಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಪೊಲೀಸ್ ಮಾಹಿತಿಯ ಬಗ್ಗೆ ತಿಳುವಳಿಕೆ ನೀಡುತ್ತಾ ಬರುತಿದ್ದಾರೆ. ಮುಂದುವರಿಸಿಕೊಂಡು ಹೋಗುತಿದ್ದಾರೆ.

ಹರ್ಮನ್ ಲೂವಿಸ್ : ಪೊಲೀಸ್ ಇಲಾಖೆಯಲ್ಲಿ ಎನ್. ಆರ್.ಐ.ಗಳಿಗೆ ವಿಶೇಷ ವಿಭಾಗ ತೆರೆಯಲು ಕೋರಿಕೆ, ಮಾಧ್ಯಮದ ಬಗ್ಗೆ, ಸಿ. ಆರ್. ಶೆಟ್ಟಿ : ಊರಿನಲ್ಲಿರುವ ಅಮಾಯಕರ ಮೇಲೆ ಪೊಲೀಸರ ಸುಳ್ಳು ಕೇಸ್ ದಾಖಲೆ, ಅವರುಗಳ ಪರದಾಟ, ಮಾನಸಿಕ ವೇಧನೆ.... ಕೆ. ಆರ್. ತಂತ್ರಿ : ಕೆಂದ್ರ ಸರ್ಕಾರ, ರಾಜ್ಯ ಸರ್ಕಾರ, ಜನಪ್ರತಿನಿಧಿಗಳ ಜೊತೆಗೆ ಪೊಲೀಸ್ ಇಲಾಖೆಯ ಸಂಬಂಧಗಳ ಬಗ್ಗೆ... ಮಹಾಬಲಮೂರ್ತಿ ಕೊಂಡ್ಲಕೆರೆ : ಸಾರ್ವಜನಿಕರೊಂದಿಗೆ ಪೊಲೀಸರ ಸಂಬಂಧ, ನವೀನ್ : ಪೊಲೀಸ್ ಇಲಾಖೆಯ ಭ್ರಷ್ಟಚಾರ....

ಗೋಪಾಲ್ ಬಿ. ಹೊಸೂರ್ : ಕ್ರಮವಾಗಿ... ಜನರು ಇಂದಿನ ದಿನಗಳಲ್ಲಿ ಪೊಲೀಸ್ ಎಂದರೆ ಹೆದರಬೇಕಾಗಿಲ್ಲ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಗರಿಕ ಮುಖಂಡರನ್ನು ಒಳಗೊಂಡ ಸಮಿತಿ ಇದೆ, ಅವರ ಮೂಲಕ ವಾಗಿಯೂ ದೂರು ಸಲ್ಲಿಸ ಬಹುದು, ಅಥವಾ ನೇರವಾಗಿ ಠಾಣೆಯಲ್ಲಿ ದೂರು ಸಲ್ಲಿಸಬಹುದು. ಅಥವಾ ಪೊಲೀಸ್ ಉನ್ನತ ಅಧಿಕಾರಿಯವರ ಕಛೇರಿಯಲ್ಲಿ ವಿಶೇಷ ದೂರು ದಾಖಲಿಸುವ ಕೇಂದ್ರವಿದೆ. ದೂರು ಪಡೆದು ಅತೀ ಶಿಘ್ರದಲ್ಲಿಯೇ ಪೊಲೀಸ್ ಉನ್ನತ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡುತ್ತಾರೆ. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗೆ ಅಧಿಕೃತ ಈಮೈಲ್ ವಿಳಾಸವಿದೆ. ಪೊಲೀಸ್ ಇಲಾಖೆಗೆ ಮಾಹಿತಿ, ದೂರು, ಸಲಹೆಗಳನ್ನು ಈಮೈಲ್  ಮೂಲಕ ಕಳುವಿಸಿ ಉತ್ತರ ಪಡೆಯಬಹುದು.

ಇನ್ನೂ ಹಲವಾರು ಉಪಯುಕ್ತ ಮಾಹಿತಿ, ಸಲಹೆ ಗಳನ್ನು ನೀಡಿ ಕರ್ನಾಟಕ ಪೊಲೀಸ್ ಭಾರತದ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ನೂತನ ತಂತ್ರಜ್ಞಾನದೊಂದಿಗೆ ಕರ್ನಾಟಕ ಪೊಲೀಸ್ ಕಾರ್ಯಪಡೆ ಜನಸೇವೆಗೆ ಸಿದ್ಧವಾಗಿದೆ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಭಯಪಡುವ ಅಗತ್ಯವಿಲ್ಲ. ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಅನಿವಾಸಿ ಕನ್ನಡಿಗರಿಗೆ ಮಾಹಿತಿ ನೀಡಿ ಕೊನೆಯಲ್ಲಿ ತಮ್ಮ ಕೊಲ್ಲಿರಾಷ್ಟ್ರದ ಭೇಟಿ ಅವಿಸ್ಮರಣೀಯವಾಗಿದೆ ಎಂದು ತಿಳಿಸಿದರು.

ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು, ದಕ್ಷ ಅಧಿಕಾರಿ ಮಾನ್ಯ ಗೋಪಾಲ್ ಬಿ. ಹೊಸೂರ್ ರವರನ್ನು ಅಭಿನಂದಿಸಿ, ಯು. ಎ. ಇ. ಕನ್ನಡಿಗರಿಗೆ ಪೂರ್ಣಮಾಹಿತಿಯನ್ನು ನೀಡಿ ಅಮೂಲ್ಯ ಸಲಹೆಗಳನ್ನು ನೀಡಿದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

ಸಮಾರಂಭದ ಕೊನೆಯಲ್ಲಿ ರುಚಿಯಾದ ಭೋಜನವನ್ನು ಸ್ವೀಕರಿಸಿ ಆಗಮಿಸಿದ್ದ ಅತಿಥಿಗಳೆಲ್ಲರು ನಗುಮೊಗದೊಂದಿಗೆ ಹಿಂತಿರುಗಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಬಿ.ಕೆ.ಗಣೇಶ್ ರೈ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-07 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»
»ಯು. ಎ. ಇ. ಬಂಟ್ಸ್ ವಿಹಾರ ಕೂಟ ಯಶಸ್ವಿ...ಆತ್ಮೀಯತೆಗೆ ಮನಸೋತ ಐ.ಜಿ.ಪಿ ಗೋಪಾಲ್ ಬಿ. ಹೊಸುರ್.
»

ಪ್ರತಿಸ್ಪಂದನ
S.Kumar Suratkal, Surathkal
2010-09-19
ಗೋಪಾಲ್ ಹೊಸುರು ಅವರ ಸೇವೆಯನ್ನು ಗುರುತಿಸಿ ಗೌರವಿಸಿದ ಯು.ಎ.ಇ ಕನ್ನಡಿಗರಿಗೆ ಅಭಿನಂದನೆಗಳು...
abbas ali sheikh, basrur kundapur taluk
2010-07-07
allaru nirbhaya aagi policesariga dooru kodu vavraga beku.lancha khora policeru erabaaradu. apradi aadaru avniga byya baardu,hodaya baaradu,policeru yaara jotagu apa maryady aagi vartisa baaradu.policeru sari idraya namma bharatha is too good.
Zulfikar Ali, Mangalore, KSA
2010-03-02
Adhivaasi kannadigara, prathyekavaagi Dr. BR Shettyavara ashrayadhalli IGP Shree Gopal Hosururavarannu gauravisidhdhu kannadigarellarigu hemmaya vishayavaagidhe. i samdharbadhalli IGPyavaru thamma dhainamdhina jeevanadha kiru parichayavannu haggoo polis ilaakeyu yaavareethi jana saamanyarige thumbu hradhayadhimdha sahaaya hasthavannu needuthadhe embuvudhannu vivaravaagi thilisi sabikara bayavannu edhdhodisidharu. IGP hosuru ramthaha dhaksha polis adhikaarigaliddare idee Karnatakavannu samaajahda dhrohigalimdha rakshisabahudu. Avarannu sanmaanisidha UAE Kannanada Vedhikieya samgadha naayakarigoo, gauravisidha ella sabikarigoo nanna nechchina namanagalu.
ಜಯರಾಮ ಸೋಮಯಾಜಿ, ಬಿರ್ತಿ, ಸಾಲಿಕೇರಿ.
2010-02-07
ಪದ್ಮಶ್ರಿ ಡಾ. ಬಿ.ಆರ್. ಶೆಟ್ಟಿಯವರ ಆಶ್ರಯದ ಯು.ಎ.ಇ. ಕನ್ನಡಿಗರ ವೇದಿಕೆಯಲ್ಲಿ, ಇ.ಜಿ.ಪಿ. ಶ್ರೀ ಗೋಪಾಲ್ ಹೊಸೂರ್ ಅವರನ್ನು ಗೌರವಿಸಿ ಸನ್ಮಾನಿಸಿರುವುದು ಎಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ನೆರೆದ ಸಭಿಕರಿಗೆ ಶ್ರೀ. ಹೊಸೂರ್ ಅವರ ಪರಿಚಯ, ಪೋಲೀಸ್ ಇಲಾಖೆಯ ಹಲವಾರು ವಿಚಾರಗಳು ತಿಳಿದಿರುವುದು ಸಂತಸದ ವಿಷಯವಾಗಿದೆ. ಶ್ರೀ. ಸರ್ವೊತ್ತಮ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಎಲ್ಲಾ ಕನ್ನಡಿಗರ ಪರವಾಗಿ ಅಭಿನಂದನೆಗಳು.-ಜಯರಾಮ ಸೋಮಯಾಜಿ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
»ದುಬೈಯಲ್ಲಿ ಹೊಸ ಗುರುದ್ವಾರ: ದುಬೈ ಆಡಳಿತಗಾರರಿಗೆ ಸಿಖ್ ಸಮುದಾಯದ ಕೃತಜ್ಞತೆ
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್: 26 ತಂಡಗಳು ಸರದಿಯಲ್ಲಿ
»ಫೆ.10: ಬಹು ನಿರೀಕ್ಷಿತ 8ನೇ ಜೆ.ಎಮ್.ಸಿ ಅಜ್ಮಾನ್ ಫನ್ ರನ್; ಈ ಪ್ರಸಿದ್ಧ ಓಟದಲ್ಲಿ ಭಾಗವಹಿಸಿ ಬಹುಮಾನ ಪಡೆಯಿರಿ...!
»ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
»ಅಬುಧಾಬಿಯಲ್ಲಿ 'ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಭರ್ಜರಿ ಸಾಂಪ್ರದಾಯಿಕ ಉದ್ಘಾಟನೆ....ಸಮ್ಮೇಳನಕ್ಕೆ ಚಾಲನೆ
»ಜನವರಿ ೨೭: ಅಬುಧಾಬಿಯಲ್ಲಿ ' ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಡಿ.ವಿ.ಸದಾನಂದ ಗೌಡರಿಂದ ಉದ್ಘಾಟನೆ....
»ಯು.ಎ.ಇ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಕರ ಸಂಕ್ರಾತಿ ಸಂಭ್ರಮ
»ದುಬೈ ದೇವಾಡಿಗ ಸಂಘ ೨೦ನೇ ವಷಕ್ಕೆ ಪಾದಾರ್ಪಣೆ : ಹೊಸ ಕಾರ್ಯಕಾರೀ ಸಮಿತಿ ರಚನೆ; ಹರೀಶ್ ಶೇರಿಗಾರ್ ಅದ್ಯಕ್ಷ
»Death toll from scaffolding collapse in UAE rises to three
»ಯು ಎ ಇ ಹವಾಮಾನ ವರದಿ: ಹೆಚ್ಚಿದ ಶೀತಗಾಳಿ ... ತಾಪಮಾನ ಶೂನ್ಯಕ್ಕೆ?
»ಪೆ.3 ರಂದು ದುಬಾಯಿಯಲ್ಲಿ ತುಳು ಸಾಮಾಜಿಕ ನಾಟಕ ಈ..ಪೊರ್ಲು.....ದಾಯೆ....?
»ಅಬುಧಾಬಿ: ಮಂಗಳೂರು ಕೊಂಕಣ್ಸ್ ಗೆ ಕೂಸಮ್ಮ ಶಂಬು ಶೆಟ್ಟಿ ಸ್ಮಾರಕ ಸಮಗ್ರ ಥ್ರೋ ಬಾಲ್ ಟ್ರೋಫಿ
»ಉಮಲ್ ಮೌಮಿನಿನ್ ಆಸೋಸಿಯೇಶನ್ ಮತ್ತು ಗಲ್ಪ್ ಮೆಡಿಕಲ್ ಯುನಿರ್ವಸಿಟಿ ಅಜ್ಮಾನ್ ವತಿಯಿಂದ ಜೀವನ ಪದ್ದತಿ ಮತ್ತು ಕೌಟುಂಬಿಕ ಆರೋಗ್ಯ ಕುರಿತ ಕಾರ್ಯಗಾರ
»ದುಬೈ: ಕನ್ನಡ ಕೂಟ ಯು.ಎ.ಇ. ಯಿಂದ ಸಂಭ್ರಮದ ಸಂಕ್ರಾಂತಿ ಆಚರಣೆ: ಲೇಖಕಿ ಸುಧಾ ಸರಣೋಮತ್ ಉಪಸ್ಥಿತಿ - ಹಲವು ಆಟೋಟಗಳಲ್ಲಿ ಮಕ್ಕಳಾದ ಹಿರಿಯರು
»ದುಬಾಯಿ: ನಾರಾಯಣ ಸೇವಾ ಸಮಿತಿಯ ವತಿಯಿಂದ ನಡೆದ ಅಖಂಡಾ ಭಜನಾ ಮಹೋತ್ಸವ
»Divine intervention: 'An angel saved my life'
»Dubai: How genuine are DSF discounts?
»Police deny woman confessed to helping kill her daughter; Suicide survivor suffers from amnesia, moved to psychiatric ward
»ಜ.೨೭. ಕುವೆಂಪು ಕಲಾ ಉತ್ಸವ ಮತ್ತು ಎರಡನೇ ವಿಶ್ವ ಕನ್ನಡ ಸಮ್ಮೇಳನ,ಅಬುಧಾಬಿ-೨೦೧೨: ಮುಖ್ಯ ಅತಿಥಿಯಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ
»ಉತ್ಸುಕರಾಗಿ ನಿರೀಕ್ಷಿಸಿರಿ.....! ದುಬೈಯಲ್ಲಿ 'ಆಷಾಡದ ಒಂದು ದಿನ'.....
»ಜ.20: ಕ್ರೀಡಾಭಿಮಾನಿಗಳು ಉತ್ಸುಕರಾಗಿ ನಿರೀಕ್ಷಿಸುತ್ತಿರುವ ಪ್ರಖ್ಯಾತ ಕೂಸಮ್ಮ ಶಂಬುಶೆಟ್ಟಿ ಸ್ಮಾರಕ ಥ್ರೋಬಾಲ್ ಪಂದ್ಯಾವಳಿ
»ಯು.ಎ.ಇ ಒಕ್ಕಲಿಗರ ಸಂಘ ಇದರ ವತಿಯಿಂದ ಜನವರಿ 20ರಂದು ಮಕರ ಸಂಕ್ರಾತಿ ಆಚರಣೆ
»ಉತ್ತೇಜನದಿಂದ ಜರುಗಿದ ಬ್ಯಾರಿಸ್ ಕಲ್ಚರಲ್ ಪೊರಂ ನ 2012 ರ ವಾರ್ಷಿಕ ಕ್ರೀಡೋತ್ಸವ
»ದುಬೈ: ಗಾಳಿಪಟ ಹಾರಿಸುವ ಸ್ಪರ್ದೆ: ಜನಪ್ರಿಯತೆ ಪಡೆದ ಟೀಂ ಮಂಗಳೂರಿನ ಬಣ್ನ ಬಣ್ನದ ಸಾಂಸ್ಕೃತಿಕ ವಿನ್ಯಾಸದ ಗಾಳೀ ಪಟಗಳು
»ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
»ದುಬೈ: ಜ 20 ರಂದು ಕನ್ನಡ ಕೂಟ ಯು.ಎ.ಇ. ಆಚರಿಸಲಿರುವ ಸಂಕ್ರಾಂತಿ - 2012 ಕಾರ್ಯಕ್ರಮ
»ನಮ ತುಳುವೆರ್ ಸಂಘಟನೆ ವತಿಯಿಂದ ನಾಳೆ ಜನವರಿ 13ರಂದು ನಡೆಯಲಿರುವ ’ಅಯೆ ಸುಬಗೆ’ ತುಳು ನಾಟಕ: ರಂಗತರಂಗ ತಂಡದ ಕಲಾವಿದರ ಆಗಮನ
» ಶಾರ್ಜಾ ಕರ್ನಾಟಕ ಸಂಘದ 2012 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ : ಅಧ್ಯಕ್ಷರಾಗಿ ಶ್ರೀ ಸತೀಶ್ ಪೂಜಾರಿ ಆಯ್ಕೆ
»ಸಮಸ್ತ ಸಮ್ಮೇಳನದ ಪ್ರಚಾರ ಹಾಗೂ C M ಉಸ್ತಾದರ ಅನುಸ್ಮರಣಾ ಸಮಾರಂಭ
»ಯು.ಎ.ಇ ಪೋಲಿಸ್ ವರದಿಗಳು...
»Sharjah: Indian woman murdered, government to bring back body
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್
»ದುಬಾಯಿಯಲ್ಲಿ ಜನವರಿ13ರಂದು ಅಖಂಡ ಭಜನಾ ಮಹೋತ್ಸವ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಕುಂದಾಪುರ ದೇವಾಡಿಗ ಮಿತ್ರರ ವೇದಿಕೆ ’ಕದಮ್’ ತನ್ನ ಪ್ರಥಮ ವರ್ಷಾಚರಣೆಯ ಸಂಭ್ರಮದಲ್ಲಿ...’ದೇವಾಡಿಗ ಸಾಧಕ ಪ್ರಶಸ್ತಿ’ ಶ್ರೀ ಬಿ. ಜಿ. ಮೋಹನ್ ದಾಸ್ ರವರ ಮಡಿಲಿಗೆ
»Govt clears proposal for providing insurance, pension benefits to overseas Indian workers
»ದುಬೈಗೆ ಬೇಟಿ ನೀಡಿದ ಎಸ್ಸೆಸ್ಸೆಫ್ ದಕ್ಷಿಣ ಭಾರತ ಅಧ್ಯಕ್ಷ ಅಬ್ದುರ್ರಶೀದ್ ಝೈನಿ ಕಾಮಿಲ್ ರವರಿಗೆ ದುಬೈ ವಿಮಾನ ನಿಲ್ಧಾಣದಲ್ಲಿ ಭವ್ಯ ಸ್ವಾಗತ
»ಯು.ಎ.ಇ.ಬಂಟ್ಸ್ ವಿಹಾರ ಕೂಟ: ಸಫಾ ಉಧ್ಯಾನವನದ ಆಹ್ಲಾದಕರ ವಾತವರಣದಲ್ಲಿ ನಕ್ಕು ನಲಿದಾಡಿದ ಬಂಟ ಬಾಂಧವರು.
»ಬಾಲಕನಿಂದ ಕಾರು ಚಾಲನೆ: ಇಬ್ಬರು ಮೃತ್ಯು
»ರಾಮಕ್ಷತ್ರೀಯ ಸಂಘ ಯು.ಎ.ಇ.ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿಪೂರ್ವಕವಾಗಿ ನಡೆದ 7ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ
»ಫೆ 10: ಪಂಬೂರ್ ಸೆವೆನ್ ಕ್ರಿಕೆಟ್ ಟೂರ್ನಮೆಂಟ್: ವಿನ್ನಿ’ಸ್ ಟ್ರೋಫಿ ಗೆಲ್ಲಲು ತಂಡಗಳ ಸಜ್ಜು
»ಮೊಗವೀರ್ ಯುಏಯಿ ಅವರ ನಾಲ್ಕನೇ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ
»ಅಬುದಾಬಿ ಕರ್ನಾಟಕ ಸಂಘದ ವತಿಯಿಂದ ವಾರ್ಷಿಕ ಪ್ರವಾಸ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಮೊಗವೀರ ಸಂಘಟನೆಯು 4ನೇ ವಾರ್ಷಿಕೋತ್ಸವ: ಡಿ.23ರಂದು ಶಾರ್ಜಾದ ವಂಡರರ್ಸ್ ಸ್ಪೋಟ್ಸ್ ಕ್ಲಬ್ ನಲ್ಲಿ ಕ್ರೀಡಾಕೂಟ
»ಅರಬ್ ಉಡುಪಿ ರೆಸ್ಟೊರೆಂಟ್ ಅಜ್ಮಾನ್; ಗೌ| ಶೇಖ್ ಡಾ. ಮಜಿದ್ ಬಿನ್ ಸಹೀದ್ ಅಲ್ ನುವೈಮಿ ಯವರಿಂದ ಉದ್ಘಾಟನೆ
»ಕಾಞಂಗಾಡ್ ಯುವಕ ಅಬುಧಾಬಿಯಲ್ಲಿ ಸಾವು
»ಯು.ಎ.ಇ ಯ 40ನೇ ವಾರ್ಷಿಕೋತ್ಸವ : ಬ್ಯಾರೀಸ್ ವೆಲ್ ಫೇರ್ ಫೋರಂ ವತಿಯಿಂದ ಪಿಕ್ ನಿಕ್ ಆಯೋಜನೆ
»ಅಬುಧಾಬಿ: ಸುರಂಗದಲ್ಲಿ ಸಿಲುಕಿ ಕಾಞಂಗಾಡ್ ಯುವಕನ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri