ಕಲೆಯಲ್ಲೇ ನೆಲೆ ಕಂಡ ಕೆಲವೇ ಕಲಾವಿದರ ಪಟ್ಟಿಯಲ್ಲಿ ಅಗ್ರಪಂಕ್ತಿಯ ಹೆಸರು ಶಶಿಕಾಂತ ಶೆಟ್ಟಿ ಕಾರ್ಕಳ! |
ಪ್ರಕಟಿಸಿದ ದಿನಾಂಕ : 2010-02-06
ಕರಾವಳಿ ಕರ್ನಾಟಕದ ಅಸ್ಮಿತೆಯಾಗಿ ದೇಶ - ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಯಕ್ಷಗಾನ ಕಲೆಗೆ ಸಮರ್ಪಣಗೊಂಡ ಹಲವಾರು ಹಿರಿತಲೆಮಾರುಗಳ ಕೊಂಡಿಗಳನೇಕ ಕಳಚುತ್ತಾ ಹೋಗು ತ್ತಿರುವಂತೆ ಯಕ್ಷ ಪ್ರೇಮಿಗಳಲ್ಲಿ ಆತಂಕದ ಛಾಯೆ. ಅದಕ್ಕೆ ಕಾರಣವೆಂದರೆ ಈಗಾಗಲೇ ಜಾಗತೀ ಕರಣಕ್ಕೆ ಮುಖಮಾಡಿರುವ ಹೊಸ ಪೀಳಿಗೆಯ ಯುವಕ - ಯುವತಿಯರು ಯಕ್ಷಗಾನಕ್ಕೆ ಬಹುತೇ ಕ ಬೆನ್ನು ಹಾಕಿರುವುದೇ ಆಗಿದೆ.
ಒಂದೆಡೆ ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆಯಾದರೆ ಮತ್ತೊಂದೆಡೆ ರಂಗಕ್ಕೆ ಯುವ ಕಲಾವಿದರು ಪ್ರವೇಶಿಸಲು ಹಿಂಜರಿಯುತ್ತಿರುವುದು. ಹವ್ಯಾಸಿಗಳಾಗಿ ಅನೇಕ ಸೆಳೆಮಿಂಚುಗಳು ಅಲ್ಲಲ್ಲಿ ಗುರು ತಿಸಿಕೊಂಡಿವೆಯಾದರೂ ಅವರು ವೃತ್ತಿಪರರಾಗಲು ಹಿಂಜರಿಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಎಳೆ ಹರೆಯದಲ್ಲಿ ಯಕ್ಷಗಾನವನ್ನು ವೃತ್ತಿಯಾಗಿ, ಉಸಿರಾಗಿ, ಆರಿಸಿಕೊಂಡು ಕಲೆಯಲ್ಲೇ ನೆಲೆ ಕಂಡ ಕೆಲವೇ ಕಲಾವಿದರ ಪಟ್ಟಿಯಲ್ಲಿ ಅಗ್ರಪಂಕ್ತಿಯ ಹೆಸರು ಶಶಿಕಾಂತ ಶೆಟ್ಟಿ ಕಾರ್ಕಳ!
ಅವರೀಗ ವೃತ್ತಿಸಾಧನೆಯ ಹತ್ತನೇ ವರ್ಷದಲ್ಲಿದ್ದಾರೆ. ಈ ಅಲ್ಪ ಅವಧಿಯಲ್ಲಿ ಅವರಿಗೆ ಸ್ತ್ರೀವೇಷ ಧಾರಿಯಾಗಿ ಅಪಾರ ಜನಮನ್ನಣೆ, ಕೀರ್ತಿ, ಯಶಸ್ಸು, ಅಭಿಮಾನಿ ವರ್ಗ ಎಲ್ಲವೂ ದೊರೆತಿರು ವುದು ಹಾಗೂ ಅವರು ಕೀರ್ತಿಶನಿಯ ಪ್ರಭಾವಕ್ಕೆ ಒಳಗಾಗದಿರುವುದು ಯಕ್ಷಕಲೆಯ ಸೌಭಾಗ್ಯ.
ಕಾರ್ಕಳದ ದಿ| ಧರ್ನಪ್ಪ ಶೆಟ್ಟಿ ಮತ್ತು ಲಲಿತಾ ದಂಪತಿಯ ಎರಡನೇ ಮಗನಾಗಿ ಜನಿಸಿದ ಶಶಿ ಕಾಂತನಿಗೆ ಲಕ್ಷ್ಮಿಯ ಅವಕೃಪೆ ಬಾಲ್ಯದಲ್ಲಿ ಕಾಡಿದ್ದರಿಂದ ೯ನೆಯ ತರಗತಿಗೆ ವಿದ್ಯಾಭ್ಯಾಸ ನಿಂತು ಹೋಯಿತು. ಮನೆಯಲ್ಲಿ ಯಕ್ಷಗಾನದ ಹಿನ್ನೆಲೆಯ ಕಲಾವಿದರು ಯಾರೂ ಇರಲಿಲ್ಲ. ಆದರೆ ದೈವದತ್ತವಾಗಿ ಬಂದ ಮೃದುಕಂಠ ಮತ್ತು ಶಾರೀರ ನಾಟಕಗಳಲ್ಲಿ ಸ್ತ್ರೀಪಾತ್ರಗಳಿಗೆ ಹೇಳಿಮಾಡಿಸಿದಂತಿತ್ತು.
ನಾಟಕದ ಅಭಿನಯದ ಗೀಳು ಬಲಗೊಂಡಿತು. ಹೊಟ್ಟೆ ಪಾಡಿಗಾಗಿ ಕಾರ್ಕಳದ ಶಿವಾಜಿ ಟೈಲ ರ್ನಲ್ಲಿ ದರ್ಜಿ ವೃತ್ತಿ. ಅಲ್ಲಿಯೂ ಲೇಡೀಸ್ ಸ್ಪೆಶಲಿಸ್ಟ್ ಆಗಿ ಪ್ರಸಿದ್ಧಿ! ಕಾರ್ಕಳದ ಮಾರಿ ಗುಡಿಯಲ್ಲಿ ವಾರಕ್ಕೊಂದಾವರ್ತಿ ನಡೆಯುತ್ತಿದ್ದ ಯಕ್ಷ ತರಗತಿ ಯಲ್ಲಿ ಸತೀಶ್ ಎಂ. ಕಾರ್ಕಳ ಇವರಲ್ಲಿ ತೆಂಕುತಿಟ್ಟಿನ ಹೆಜ್ಜೆಗಾರಿಕೆ ಕಲಿತರು.
ಹಲವು ಸಂಘಸಂಸ್ಥೆಗಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಹವ್ಯಾಸಿಯಾಗಿ ಗೆಜ್ಜೆ ಕಟ್ಟಿದರು. ಬಾಲಗೋಪಾಲನಿಂದ ಸಖೀಪಾತ್ರ, ಅಲ್ಲಿಂದ ಪೀಠಿಕೆಯ ಸ್ತ್ರೀ ವೇಷಗಳಿಗೆ ಅತ್ಯಲ್ಪ ಅವಧಿಯಲ್ಲಿ ಭಡ್ತಿ!
ಕಲಿಯುವ ದಾಹ ತೀವ್ರವಾದಂತೆ ದರ್ಜಿ ವೃತ್ತಿಗೆ ಟಾಟಾ ಮಾಡಿ ಮಂದರ್ತಿ ಮೇಳಕ್ಕೆ ಸೇರಿ ಬಡಗುತಿಟ್ಟಿನ ಹೆಜ್ಜೆಗಾರಿಕೆಯನ್ನು ಸ್ವಪರಿಶ್ರಮದಿಂದ ಕಲಿತರು. ಒಂದೇ ವರ್ಷದಲ್ಲಿ ಮಂದರ್ತಿ ಮೇಳದ ಪ್ರಧಾನ ಸ್ತ್ರೀಪಾತ್ರಧಾರಿಯಾಗಿ ಪದೋನ್ನತಿ. ಬಡಗುತಿಟ್ಟಿನ ಪ್ರಸಿದ್ಧ ಡೇರೆಮೇಳ ಸಾಲಿ ಗ್ರಾಮ ಮೇಳದ ಯಜಮಾನ ಕಿಶನ್ ಹೆಗ್ಡೆಯವರಿಂದ ಕರೆ ಬಂತು. ಅಲ್ಲಿ ಖ್ಯಾತ ಭಾಗವತರಾದ ಹೆರಂಜಾಲು ಗೋಪಾಲ ಗಾಣಿಗರಿಂದ ನಿರ್ದೇಶನದ ಸೌಭಾಗ್ಯ.
ಮೊದಲ ವರ್ಷವೇ ಸೂಪರ್ ಹಿಟ್ ಪ್ರಸಂಗ ಈಶ್ವರಿ - ಪರಮೇಶ್ವರಿಯ ಈಶ್ವರಿ (ಅತ್ತೆ)ಯ ಪಾತ್ರ. ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರ ಸೊಸೆಗೆ ಇವರ ಅತ್ತೆಯ ಕಾಂಬಿ ನೇಶನ್ ಗಲ್ಲಾಪೆಟ್ಟಿಗೆ ತುಂಬಿಸುತ್ತಿತ್ತು. ಅಲ್ಲಿಂದ ಶಶಿಕಾಂತ ಹಿಂದಿರುಗಿ ನೋಡಲೇ ಇಲ್ಲ. ಕಾಲ್ಪನಿಕ ಪ್ರಸಂಗಗಳ ಪಾತ್ರಕ್ಕಷ್ಟೇ ಸೀಮಿತವಾಗದೆ ಪೌರಾಣಿಕ ಪಾತ್ರಗಳಲ್ಲಿಯೂ ಏಕಪ್ರಕಾರವಾಗಿ ವಿಜೃಂಭಿಸುತ್ತಿರುವುದು ಇವರ ಹೆಚ್ಚುಗಾರಿಕೆ.
ದ್ರೌಪದಿ, ಅಂಬೆ, ದಾಕ್ಷಾಯಿಣಿ, ಸೈರಂಧ್ರಿ, ಸೀತೆ, ಮಾಯಾ ಶೂರ್ಪನಖಿ, ಚಂದ್ರಮತಿ, ಕೈಕೇಯಿ, ಸತ್ಯಭಾಮೆ, ಶ್ರೀದೇವಿ, ಶಕುಂತಳೆ, ಮೇನಕೆ ಮೊದಲಾದ ಪಾತ್ರಗಳಲ್ಲಿ ತನ್ನದೇ ಛಾಪು ಮೆರೆ ದದ್ದು ಮಾತ್ರವಲ್ಲ ಕೋಳ್ಯೂರು, ಮಂಟಪ, ಕೆರೆ ಮನೆ ಗಜಾನನ ಹೆಗಡೆ, ಅರಾಟೆ ಮಂಜುನಾಥ, ಮಂಕುಡೆ ಸಂಜೀವ ಶೆಟ್ಟಿ ಮೊದಲಾದವರ ನೆನಪನ್ನು ತಂದುಕೊಟ್ಟಿದ್ದಾರೆ.
ಸೈರಂಧ್ರಿ ಹಾಗೂ ಲಂಕಾದಹನದ ಸೀತೆಯ ಪಾತ್ರಗಳಲ್ಲಿ ಖ್ಯಾತ ಕಲಾವಿದ ಎಂ.ಎ. ನಾಕರ ಎರಕವಿದೆ. ಅಂಬೆಯ ಪಾತ್ರವಂತೂ ಅದೊಂದು ಅದ್ಭುತ ಶಿಲ್ಪ!
ಆಧುನಿಕ ಪ್ರಸಂಗಗಳಲ್ಲಿ ಓಬವ್ವನ ಪಾತ್ರ ಅವರಿಗೆ ಕೀರ್ತಿ ತಂದುಕೊಟ್ಟಿದೆ. ಪುರುಷ ಪಾತ್ರಗಳಲ್ಲಿ ಯೂ ರಾಮ, ಕೃಷ್ಣ, ಪರಶುರಾಮ, ಅಶ್ವತ್ಥಾಮ, ಚಂದ್ರಹಾಸ ಮೊದಲಾದ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸಾಧನೆಯ ದಶಕವನ್ನು ವೃತ್ತಿಪರ ಮೇಳಗಳಲ್ಲಿ ಈ ವರ್ಷ ಪೂರೈಸಿರುವ ಶಶಿಕಾಂತ ಶೆಟ್ಟಿಯವರು ಸಮರ್ಪಣಾ ಭಾವದಿಂದ ದುಡಿಯುತ್ತಿರುವ ಕಲಾವಿದ.
ಹವ್ಯಾಸಿಯಾಗಿ ಕರ್ನಾಟಕ, ಬಪ್ಪನಾಡು, ಸುರತ್ಕಲ್, ಭಗವತಿ ಮೇಳಗಳಲ್ಲಿ ಹೆಜ್ಜೆ ಹಾಕಿದ್ದರೂ ಮಂದರ್ತಿ ಮೇಳದಲ್ಲಿ ೪ ವರ್ಷ ಹಾಗೂ ಇದೀಗ ಸಾಲಿಗ್ರಾಮದಲ್ಲಿ ೬ ವರ್ಷಗಳಲ್ಲಿ ವೃತ್ತಿಕಲಾವಿ ದನಾಗಿ ದಶಕದ ಸಾರ್ಥಕ ಕಲಾ ಸೇವೆ ಮಾಡಿದ್ದಾರೆ.
ಕೇವಲ ಕಲೆಗೆ ನಿಷ್ಠನಾಗಿ ೩೦ರ ಹರೆಯದಲ್ಲಿಯೇ ಎತ್ತರ ಸಾಧನೆ ಮಾಡಿರುವ ಶಶಿಕಾಂತ ಮುಂ ಬೈ, ಬೆಂಗಳೂರು, ಹೈದರಾಬಾದ್ ಮಾತ್ರವಲ್ಲ ವಿದೇಶಗಳಲ್ಲಿಯೂ ಪ್ರದರ್ಶನ ನೀಡಿ ಅಪಾರ ಅಭಿಮಾನಿ ವರ್ಗ ಪಡೆದಿದ್ದಾರೆ.
ಈಗಾಗಲೇ ನೂರಾರು ಸಂಘ ಸಂಸ್ಥೆಗಳಿಂದ ತುಂಬು ಸಮ್ಮಾನ ಪಡೆದಿರುವ ಅವರಿಗೆ ಈ ದಶಕ ದ ಸಾಧನೆಗಾಗಿ ಕಾರ್ಕಳದ ಅಭಿಮಾನಿ ಬಳಗ ದೊಡ್ಡ ರೀತಿಯಲ್ಲಿ ಸಮ್ಮಾನಿಸಲು ಸಿದ್ಧತೆ ನಡೆಸಿದೆ. ಕಲೆಯ ನೆರಳಾಗಿ ಬಂದು ಕೈಹಿಡಿದ ಪತ್ನಿ ದೇವಿಕಾ ಮತ್ತು ಪುತ್ರ ಶಿವರಂಜನ್ ಅವರೊಂದಿಗೆ ಸಾರ್ಥಕ ದಾಂಪತ್ಯ ನಡೆಸುತ್ತಿದ್ದಾರೆ. ಅವರ ಕಲಾಸೇವೆ ನೂರ್ಕಾಲ ಬಾಳಲಿ.
ವರದಿಯ ವಿವರಗಳು |
 |
ಕೃಪೆ : ರಾಜೇ೦ದ್ರ ಭಟ್ ಕೆ. ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-06
|
|
|