ಯು. ಎ. ಇ. ಬಂಟ್ಸ್ ವಿಹಾರ ಕೂಟ ಯಶಸ್ವಿ...ಆತ್ಮೀಯತೆಗೆ ಮನಸೋತ ಐ.ಜಿ.ಪಿ ಗೋಪಾಲ್ ಬಿ. ಹೊಸುರ್. |
ಪ್ರಕಟಿಸಿದ ದಿನಾಂಕ : 2010-02-06
(ಚಿತ್ರಗಳು: ಆಶೋಕ್ ಬೆಳ್ಮಣ್)

ಫೆಬ್ರವರಿ ೫, ಶುಕ್ರವಾರ ೨೦೧೦ ರಂದು ದುಬಾಯಿ ಜಬೀಲ್ ಪಾರ್ಕ್ ಹಚ್ಚ ಹಸಿರಿನ ಹುಲ್ಲು ಹಾಸಿನ ಮೇಲೆ ದಿನಪೂರ್ತಿ ಆಹ್ಲಾದಕರ ವಾತಾವರಣದಲ್ಲಿ ಬೆಳಗಿನಿಂದ ಸಂಜೆಯವರೆಗೆ, ಯು.ಎ.ಇ.ಯಲ್ಲಿ ನೆಲೆಸಿರುವ ಬಂಟ ಬಾಂಧವರು ಒಟ್ಟು ಸೇರಿ ವಿಹಾರ ಕೂಟದಲ್ಲಿ ಸಂಭ್ರಮಿಸಿದರು. ಆಕಾಶದಲ್ಲಿ ಮಳೆ ಮೋಡ ಕವಿದಿದ್ದು ಮಳೆ ಬರುವ ಸೂಚನೆ ಇದ್ದರೂ, ಮಳೆ ಮಾಯವಾಗಿ ವಿಹಾರಿಗಳು ದಿನವಿಡಿ ನಕ್ಕು ನಲಿಯಲು ಪ್ರಕೃತಿ ಅನುವು ಮಾಡಿಕೊಟ್ಟಿದ್ದು ಇಂದಿನ ವಿಶೇಷವಾಗಿತ್ತು.

ಯು.ಎ.ಇ. ಬಂಟರ ಸಂಘಟನೆಯ ಸಂಘಟಕರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಯು.ಎ.ಇ. ಯ ವಿವಿಧ ಕಡೆಗಳಿಂದ ಆಗಮಿಸಿದ ಬಂಧು ಮಿತ್ರರನ್ನು, ಊರಿನ ಸುರತ್ಕಲ್ ಬಂಟರ ಸಮಾಜದಿಂದ ದುಬಾಯಿಗೆ ಆಗಮಿಸಿದ್ದ ಹದಿನೆಂಟು ಮಂದಿ ಮಹಿಳಾ ತಂಡದವರನ್ನು ಮತ್ತು ಇನ್ನಿತರ ಅತಿಥಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ವೈವಿಧ್ಯಮಯ ಸ್ಪರ್ಧೆಗಳಿಗೆ ಅಧಿಕೃತವಾಗಿ ಚಾಲನೆ ನೀಡಿದರು. ಮಂಗಳೂರು, ಉಡುಪಿ-ಪುತ್ತೂರು, ಬ್ರಹ್ಮವಾರ-ಕುಂದಾಪುರ, ಕಾಪು-ಮುಲ್ಕಿ, ನಾಲ್ಕು ವಿವಿಧ ತಂಡಗಳಾಗಿ ರಚಿಸಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಐ.ಜಿ.ಪಿ ಗೋಪಾಲ್ ಬಿ. ಹೊಸುರ್. ಮೆಚ್ಚುಗೆ.
ವಿಹಾರ ಕೂಟದಲ್ಲಿ ಮಂಗಳೂರಿನಿಂದ ಆಗಮಿಸಿದ್ದ ಪಶ್ಚಿಮ ವಲಯದ ಐ.ಜಿ.ಪಿ.ಯಾಗಿರುವ ಶ್ರೀ ಗೋಪಾಲ್ ಬಿ. ಹೊಸುರ್ ಮತ್ತು ಅವರ ಶ್ರೀಮತಿಯವರು ಅತಿಥಿಗಳಾಗಿ ಹಾಗೂ ಯು. ಎ. ಇ. ಬಂಟ್ಸ್ ನ ಮಹಾಪೋಷಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು ಭಾಗವಹಿಸಿದ್ದರು. ವೈವಿಧ್ಯಮಯ ಜನಪದ ಆಟಗಳ ಸ್ಪರ್ಧೆ, ಶಿಸ್ತುಬದ್ಧವಾಗಿ ಭಾಗವಹಿಸಿ, ನಕ್ಕು ನಲಿದಾಡುತ್ತಿದ್ದ ಮಕ್ಕಳು, ಹಿರಿಯರು ಸಂತೋಷ ಪಡುತ್ತಿದ್ದ ದೃಶ್ಯವನ್ನು ನೋಡಿ ಆನಂದಿಸಿದ ಅತಿಥಿಗಳು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ದಕ್ಷಿಣ ಕನ್ನಡದಲ್ಲಿ ನೆಲೆಸಿರುವ ತುಳು, ಕನ್ನಡ, ಕೊಂಕಣಿ, ಬ್ಯಾರಿ ಭಾಷೆಗಳನ್ನಾಡುವ ಶ್ರೀಮಂತ ಸಂಸ್ಕೃತಿಯ ನಾಡಿನಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತ್ತಿದ್ದನ್ನು ಸ್ಮರಿಸಿಕೊಂಡು, ವೀರಪ್ಪನ್ ಕಾರ್ಯಚರಣೆಯಲ್ಲಿ ಗುಂಡೆಟಿನಿಂದ ಜೀವನ್ಮರಣದಲ್ಲಿ ಬದುಕಿಬಂದ ಸನ್ನಿವೇಶಗಳನ್ನು ವಿವರಿಸಿ, ಮತ್ತೊಮ್ಮೆ ಸೇವೆ ಸಲ್ಲಿಸುವ ಅವಕಾಶ ದೊರೆತದ್ದನ್ನು ತಿಳಿಸುತ್ತಾ, ಕೊಲ್ಲಿರಾಷ್ಟ್ರದಲ್ಲಿ ಕರ್ನಾಟಕ ಪರ ವಿವಿಧ ಸಂಘ ಸಂಸ್ಥೆಗಳು, ಭಾಷಾ, ಸಮುದಾಯ ಸಂಘಟನೆಗಳು ವಿವಿಧ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮ ನೋಡಿ ಹರ್ಷಿತನಾಗಿದ್ದೇನೆ ಎಂದು ಹೇಳಿದರು.

ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು ಆಗಮಿಸಿದ ಅತಿಥಿಗಳಿಗೆಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಮಕ್ಕಳಿಗೆ ಸಂಗೀತ ಕುರ್ಚಿ, ನಾಲ್ಕು ತಂಡಗಳಿಗೆ ನಡೆದ ಸ್ಪರ್ಧೆಗಳು ಪಾಸಿಂಗ್ ದಿ ಬಾಲ್, ಪಾಸಿಂಗ್ ದಿ ರೋಪ್, ರಸಪ್ರಶ್ನೆ ವಿಭಾಗದಲ್ಲಿ ಕರ್ನಾಟ್ಕದ ಸ್ಥಳನಾಮಗಳು, ಬಂಟ ಸಮುದಾಯದ ಪ್ರಸಿದ್ದ ವ್ಯಕ್ತಿಗಳು, ಸ್ಮರಣ ಶಕ್ತಿ ಸ್ಪರ್ಧೆ, ಜಾನಪದ ನೃತ್ಯ, ಮೂಕಾಭಿನಯ, ಜಾಹಿರಾತು ಪ್ರದರ್ಶನ, ಪುರುಷ ಸ್ತ್ರೀ ವೇಷದಲ್ಲಿ ನೃತ್ಯ ಸ್ಪರ್ಧೆ ಇತ್ಯಾದಿ ಆಕರ್ಷಕ ಸ್ಪರ್ಧೆಗಳು ಅತ್ಯಂತ ಪೈಪೋಟಿಯಲ್ಲಿ ನಡೆದು, ಉಡುಪಿ-ಪುತ್ತೂರು ತಂಡ ಹೆಚ್ಚು ಅಂಕ ಗಳಿಸಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡು ತಂಡದ ನಾಯಕ ಜಯರಾಮ ರೈ ತಂಡದ ಪ್ರಥಮ ಬಹುಮಾನ ಸ್ವೀಕರಿಸಿದರು.

ದ್ವಿತೀಯ ಸ್ಥಾನ ಮಂಗಳೂರು ತಂಡದ ನಾಯಕ ಸಂತೋಷ್ ರೈ ದ್ವಿತೀಯ ತಂಡದ ಬಹುಮಾನ ಪಡೆದರು. ಮುಲ್ಕಿ-ಕಾಪು ತಂಡದ ನಾಯಕ ಸುದರ್ಶನ್ ಶೆಟ್ಟಿ, ಬ್ರಹ್ಮವಾರ-ಕುಂದಾಪುರ ತಂಡದ ನಾಯಕತ್ವ ಸುಧೀರ್ ಶೆಟ್ಟಿ ವಹಿಸಿದ್ದರು.

ಸ್ಪರ್ಧೆಯ ತೀರ್ಪುಗಾರರಾಗಿ ಶೋಧನ್ ಪ್ರಸಾದ್, ಗಣೇಶ್ ಉರ್ವಾ, ರಾಮಣ್ಣ ಶೆಟ್ಟಿ ಬಹೆರಿನ್, ಸಂತೋಷ್ ಶೆಟ್ಟಿ ಮತ್ತು ಬಾಲಕೃಷ್ಣ ಶೆಟ್ಟಿ ಕಾಪು ಕಾರ್ಯ ನಿರ್ವಹಿಸಿದ್ದರು.
ಕಾರ್ಯಕಾರಿ ಸಮಿತಿಯ ಸಮವಸ್ತ್ರ ಟಿ ಷರ್ಟ್ ವಾಸು ಶೆಟ್ಟಿಯವರು ಬ್ರಿಟಾನಿಯ ಸಂಸ್ಥೆಯ ಪರವಾಗಿ ಪ್ರಾಯೋಜಿಸಿದ್ದರು. ಎನ್.ಎಂ.ಸಿ. ಚಹದ ವ್ಯವಸ್ಥೆ, ಫುಡ್ ಲ್ಯಾಂಡ್ ಹೊಟೆಲಿನ ರುಚಿಕರ ಭೋಜನ ವ್ಯವಸ್ಥೆಯಾಗಿದ್ದು ಕೊನೆಯಲ್ಲಿ ಗಣೇಶ್ ರೈ ವಂದನಾರ್ಪಣೆ ಮಾಡಿದರು.

ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳಾದ, ಗಲ್ಫ್ ಕನ್ನಡಿಗದ ಅಶೋಕ್ ಬೆಳ್ಮಣ್, ದಾಯಿವರ್ಲ್ಡ್ ನ ಹರೀಶ್ ಕಾಮತ್, ಮಂಗಳೂರಿಯನ್.ಕಾಮ್ ನ ಅಲ್ಫೋನ್ಸ್ ಮೆಂಡೊನ್ಸಾ, ನಮ್ಮ ಟಿ. ವಿ. ಯ ನವೀನ್ ರವರು ವಿಹಾರಕೂಟದಲ್ಲಿ ಭಾಗಿಗಳಾಗಿದ್ದು ತಮ್ಮ ಮಾಧ್ಯಮ ಸೇವೆಯನ್ನು ಸಲ್ಲಿಸಿದ್ದಾರೆ.

ಯು. ಎ. ಇ. ಬಂಟ್ಸ್ ೨೦೧೦ ರ ಕಾರ್ಯಕಾರಿ ಸಮಿತಿಯವರಾದ ಗುಣಶೀಲ್ ಶೆಟ್ಟಿ, ಶಹನಾ ಶೆಟ್ಟಿ ನವೀನ್ ಆಳ್ವ, ಅಪರ್ಣಾ ಆಳ್ವ, ಪ್ರಸನ್ನ ಶೆಟ್ಟಿ, ಲತಾ ಶೆಟ್ಟಿ, ಶಶಿಧರ್ ಶೆಟ್ಟಿ, ಪ್ರತಿಮಾ ಶೆಟ್ಟಿ, ಆನಂದ್ ಶೆಟ್ಟಿ, ಪುಷ್ಪಾ ಶೆಟ್ಟಿ, ಜಯಾನಂದ್ ಪಕ್ಕಳ, ಜಯಲಕ್ಮೀ ಪಕ್ಕಳ, ಅನಿಲ್ ಹೆಗ್ಡೆ, ಚೈತ್ರ ಹೆಗ್ಡೆ, ಸುರೇಶ್ ಶೆಟ್ಟಿ, ಭಾರತಿ ಶೆಟ್ಟಿ ಇವರುಗಳ ಅತ್ಯುತ್ತಮ ಮಟ್ಟದ ಪೂರ್ವ ತಯಾರಿ, ಶ್ರಮದ ಫಲವಾಗಿ ಸರ್ವೋತ್ತಮ ಶೆಟ್ಟಿಯವರ ಮಾರ್ಗದರ್ಶನದಲ್ಲಿ ವಿಹಾರಕೂಟ ಯಶಸಿಯಾಗಿತ್ತು.




















ವರದಿಯ ವಿವರಗಳು |
 |
ಕೃಪೆ : ಗಣೇಶ್ ರೈ. ಚಿತ್ರ: ಆಶೋಕ್ ಬೆಳ್ಮಣ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-06
|
|
| shashikant shetty, udupi | 2010-02-07 | | We enjoyed a lot in bunts Picnic. It is memorable day for all of bunts in U.A.E
Media also supported for our picnic. Mr. Ashok Belman Captured beautiful Photos of our enjoyment. Thank you very much to Gulf Kannadiga and specially to Ashok Belman. |
| Sarvotham Shetty, Abu Dhabi | 2010-02-07 | | Dear BG,
On behalf of UAE Bunts my sincere thanks to you and entire Team of Gulfkannadiga.com for the detailed coverage of the event. GOD bless GULFKANNADIGA.COM |
|