ನೊಬೆಲ್ ಪುರಸ್ಕೃತ ವೆಂಕಟ್ರಾಮ್ಗೆ ಜನಾಂಗೀಯ ತಾರತಮ್ಯದ ಬಿಸಿ |
ಪ್ರಕಟಿಸಿದ ದಿನಾಂಕ : 2010-02-04
ಹೊಸದಿಲ್ಲಿ, ಫೆ.೩: ಬ್ರಿಟಿಷ್ ಮೊಬೈಲ್ ಫೋನ್ ದೈತ್ಯ ಒ೨, ನೋಬೆಲ್ ಪುರಸ್ಕೃತ ವಿಜ್ಞಾನಿ ವೆಂಕಟ್ರಾಮನ್ ರಾಮಕೃಷ್ಣನ್ಗೆ ಫೋನ್ ನೀಡಲು ನಿರಾಕರಿಸಿದ್ದು, ಇದರಲ್ಲಿ ಜನಾಂUಯ ವಾದದ ನೆರಳಿನ ಕುರಿತು ಅವರು ಶಂಕಿಸಿದ್ದಾರೆ.
ಪ್ರಕೃತ ಬ್ರಿಟನ್ನಲ್ಲಿ ಸಂಶೋಧನೆ ನಡೆಸುತ್ತಿರುವ ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ರಾಮಕೃಷ್ಣನ್ ಕಳೆದ ಡಿಸೆಂಬರ್ನಲ್ಲಿ ಕೇಂಬ್ರಿಜ್ನ ಒ೨ ಮಳಿಗೆಯೊಂದರಲ್ಲಿ ಬಲವಂತವಾಗಿ ಮೂರು ತಿಂಗಳ ಠೇವಣಿಯಾಗಿ ೩೨೫ ಪೌಂಡ್ಗಳನ್ನು ಪಾವತಿಸಲೇ ಬೇಕಾಯಿತು. ಆದರೆ ಉತ್ತಮ ವ್ಯವಹಾರ ದಾಖಲೆಯಿರುವ ಇತರರಿಂದ ಈ ರೀತಿಯ ಠೇವಣಿಯನ್ನು ಸಂಸ್ಥೆ ಕೇಳಿಲ್ಲ.
ಹೊಸ ಗ್ರಾಹಕನೊಂದಿಗಿನ ಪ್ರತಿ ಕರಾರು ಸ್ವಯಂಚಾಲಿತ ವ್ಯವಹಾರ ಪರಿಶೀಲನೆಗೆ ಒಳಪಡುತ್ತದೆ. ಈ ಬಗ್ಗೆ ಈಕ್ವಿ ಫ್ಯಾಕ್ಸ್ ಹಾಗೂ ಎಕ್ಸ್ಪೀರಿಯನ್ನಂತಹ ಸಂಸ್ಥೆಗಳು ನೀಡಿದ ಮಾಹಿತಿಯನ್ನು ಕಂಪೆನಿಗಳು ಸಾಲ ನೀಡಲು ಅಥವಾ ನಿರಾಕರಿಸಲು ಬಳಸುತ್ತವೆ.
ತನಗೆ ಯಾಕೆ ಸಾಲ ನೀಡಲು ನಿರಾಕರಿಸಲಾಯಿತೆಂಬುದಕ್ಕೆ ಯಾವುದೇ ತಾರ್ಕಿಕ ಕಾರಣ ದೊರೆಯದಿರುವುದರಿಂದ, ಇದರಲ್ಲಿ ಜನಾಂUಯ ವಾದದ ನೆರಳಿರುವ ಶಂಕೆ ತನಗುಂಟಾಗಿದೆ ಎಂದು ರಾಮಕೃಷ್ಣನ್ ಹೇಳಿದ್ದಾರೆ.
ಆದಾಗ್ಯೂ, ಒ೨ ವಕ್ತಾರೆ ಸಾರಾ ಟೇಲರ್, ಇದರಲ್ಲಿ ಜನಾಂಗೀಯ ವಾದವಿದೆಯೆಂಬ ಪ್ರೊ.ರಾಮಕೃಷ್ಣನ್ರ ಅಭಿಪ್ರಾಯ ತನಗೆ ನೋವುಂಟುಮಾಡಿದೆಯೆಂದಿದ್ದಾರೆ.
ತಮ್ಮ ಗಿರಾಕಿಗಳಲ್ಲಿ ರಾಮಕೃಷ್ಣನ್ರಂತಹ ನೋಬೆಲ್ ಪುರಸ್ಕೃತರು ಇರುವುದು ಹೆಮ್ಮೆಯ ವಿಚಾರವಾಗಿದೆ. ಪ್ರತಿ ಗಿರಾಕಿಗಳನ್ನು ಸಂಸ್ಥೆಯು ಜನಾಂಗ, ಜಾತಿ, ಮತ, ಬಣ್ಣಗಳ ಪರಿಗಣನೆಯಿಲ್ಲದೆ ಕಾನೂನು ರೀತ್ಯಾ ಒಂದೇ ರೀತಿಯಲ್ಲಿ ಕಾಣುತ್ತದೆ ಎಂದವರು ಹೇಳಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-04
|
|
|