ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ’ |
ಪ್ರಕಟಿಸಿದ ದಿನಾಂಕ : 2010-01-31
‘ನಾವು (ಬಿಜೆಪಿ) ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಬದಲಿಗೆ ಅಮಾಯಕರನ್ನು ಹತ್ಯೆ ಮಾಡುವ ಭಯೋತ್ಪಾದಕರ ವಿರೋಧಿಗಳು. ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರಗಳ ವಿರೋಧಿಗಳು....’: ನಿತಿನ್ ಗಡ್ಕರಿ
ಬೆಂಗಳೂರು: ‘ನಾವು (ಬಿಜೆಪಿ) ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಬದಲಿಗೆ ಅಮಾಯಕರನ್ನು ಹತ್ಯೆ ಮಾಡುವ ಭಯೋತ್ಪಾದಕರ ವಿರೋಧಿಗಳು. ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರಗಳ ವಿರೋಧಿಗಳು....’ ಹೀಗೆ ಹೇಳಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ.
ಇಲ್ಲಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರಾಜ್ಯ ಬಿಜೆಪಿ ಶನಿವಾರ ರಾತ್ರಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ನಮ್ಮ ಪಕ್ಷ ಭಯೋತ್ಪಾದನೆ ವಿರೋಧಿಸುತ್ತದೆ. ಲಷ್ಕರ್ ಎ ತೊಯ್ಬಾ, ಅಲ್ಖೈದಾ ಉಗ್ರಗಾಮಿ ಸಂಘಟನೆಗಳು ಮತ್ತು ಪಾಕ್ ಕಾರ್ಯವೈಖರಿ ಖಂಡಿಸುತ್ತದೆ. ಇದು ಬಿಟ್ಟರೆ ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಇದನ್ನು ಪಕ್ಷದ ಕಾರ್ಯಕರ್ತರು ದೇಶದ ಮೂಲೆ ಮೂಲೆಗೂ ತಿಳಿಸುವ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು. ಶ್ಲಾಘನೆ: ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಗಡ್ಕರಿ ಅವರು ಮುಂದಿನ ದಿನಗಳಲ್ಲೂ ಇದೇ ರೀತಿ ಕೆಲಸ ನಿರ್ವಹಿಸಬೇಕು. ಹೆಸರು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
‘ನಮ್ಮದೇ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇದೆ. ಅದರ ಸಮೀಕ್ಷೆ ಪ್ರಕಾರ ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ನನಗೆ ಸಮಧಾನ ತಂದಿದೆ. ದಕ್ಷಿಣ ಭಾರತದ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಜನರ ಮೇಲೂ ಈ ಕಾರ್ಯಶೈಲಿ ಪ್ರಭಾವ ಬೀರುವ ವಿಶ್ವಾಸ ಇದೆ’ ಎಂದು ಹೇಳಿದರು.
ಸಾಮೂಹಿಕ ನಾಯಕತ್ವ: ಪಕ್ಷದ ಸಾರಥ್ಯ ವಹಿಸಿಕೊಂಡ ನಂತರ ಈಶ್ವರಪ್ಪ ಮಾತನಾಡಿ, ಸಾಮೂಹಿಕ ನಾಯಕತ್ವದಡಿ ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವುದಾಗಿ ಘೋಷಿಸಿದರು.
‘ನಮ್ಮ ಜಪ ಅಭಿವೃದ್ಧಿ, ಸಂಕಲ್ಪ ಪಕ್ಷದ ಸಂಘಟನೆ’ ಎಂದು ಹೇಳಿದ ಅವರು ಈ ನಿಟ್ಟಿನಲ್ಲಿ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಕೆಲಸ ಮಾಡುವುದಾಗಿ ಹೇಳಿದರು.
‘27 ಲಕ್ಷ ಸದಸ್ಯರಿರುವ ಪಕ್ಷದ ಸಾರಥ್ಯ ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಇದನ್ನು ಖುಷಿಯಿಂದ ಸ್ವೀಕರಿಸಿದ್ದು, ಪಕ್ಷ ಸಂಘಟಿಸುವ ಕಡೆಗೆ ಗಮನ ನೀಡುವುದಾಗಿ’ ಹೇಳಿದರು.
ಇಚ್ಛೆ ಇದ್ದವರು ಬರಲಿ: ಪ್ರತಿಪಕ್ಷಗಳಲ್ಲಿ ಇನ್ನೂ ಕೆಲವರು ಒಳ್ಳೆಯವರಿದ್ದಾರೆ. ಅವರಿಗೆ ಬಿಜೆಪಿ ಸೇರುವ ಹಂಬಲ ಇದ್ದು, ಅಂತಹವರಿಗೆ ಪಕ್ಷದ ಬಾಗಿಲು ತೆರೆದಿದೆ ಎಂದು ನುಡಿದರು.
‘ಇತ್ತೀಚೆಗೆ ನಮ್ಮ ಪಕ್ಷಕ್ಕೂ ಸಣ್ಣ ಗ್ರಹಣ ಹಿಡಿದಿತ್ತು. ಅದನ್ನು ಈಗ ಓಡಿಸಿದ್ದೇವೆ. ಇನ್ನು ಮುಂದೆ ಆ ರೀತಿಯ ಯಾವ ಗೊಂದಲಗಳು ಎದುರಾಗದ ಹಾಗೆ ನೋಡಿಕೊಳ್ಳಲಾಗುವುದು. ಮುಂದಿನ ಚುನಾವಣೆಯಲ್ಲಿ ಕನಿಷ್ಠ 150 ಶಾಸಕರು ಗೆಲ್ಲುವ ಹಾಗೆ ಮಾಡುತ್ತೇವೆ’ ಎಂದು ನುಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
‘ಕರ್ನಾಟಕದ ಬಗ್ಗೆ ಚಿಂತೆ ಮಾಡಬೇಡಿ. ಉಳಿದ ರಾಜ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳಿ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಪಕ್ಷ ಸಂಘಟನೆಗೆ ನಾವು ಕೂಡ ಸಹಕರಿಸುತ್ತೇವೆ’ ಎಂದು ಹೇಳಿದರು.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮಾತನಾಡಿ, ‘ಗಡ್ಕರಿ ಅವರು ಅಭಿವೃದ್ಧಿ ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿದ್ದಾರೆ’ ಎಂದರು. ಪಕ್ಷದ ನಿರ್ಗಮಿತ ಅಧ್ಯಕ್ಷ ಡಿ.ವಿ.ಸದಾನಂದಗೌಡ ಮಾತನಾಡಿ, ನಾಲ್ಕು ವರ್ಷ ಸೇವೆ ಸಲ್ಲಿಸಲು ನೆರವಾದ ಸಂಘ ಪರಿವಾರ ಸೇರಿದಂತೆ ಪಕ್ಷದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
‘ಕುಗ್ರಾಮದಿಂದ ಬಂದ ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷದ ನೇತೃತ್ವ ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಈಶ್ವರಪ್ಪ ಅವರು ನನಗಿಂತ ಉತ್ತಮ ಕೆಲಸ ಮಾಡಿ, ಪಕ್ಷವನ್ನು ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯುವಂತೆ ಮಾಡುವ ವಿಶ್ವಾಸ ಇದೆ’ ಎಂದರು.
ಸಚಿವರಾದ ಡಾ.ವಿ.ಎಸ್.ಆಚಾರ್ಯ, ಜಗದೀಶ ಶೆಟ್ಟರ್, ಸುರೇಶ್ಕುಮಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್.ಅಶೋಕ, ಅರವಿಂದ ಲಿಂಬಾವಳಿ, ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಮುಮ್ತಾಜ್ ಆಲಿ ಖಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-31
|
|
| ಅಬ್ದುಲ್ ಲತೀಫ್ ದುಬಾಯಿ YARA, ಉಡುಪಿ | 2010-02-01 | | ಪ್ರಯತ್ನಕ್ಕೆ ಭೇಷ್ ಎನ್ನಲೇ ಬೇಕು! ಜರ್ಮನಿಯ ಸರ್ವಾಧಿಕಾರಿ ನರಹ೦ತಕ ಹಿಟ್ಲರ್ ನ ಮ೦ತ್ರಿ ಗೋಬೆಲ್ಸ್ ನು ಒ೦ದು ಸುಳ್ಳನ್ನು ಹತ್ತು ಬಾರಿ ಹೇಳಿದರೆ ಸತ್ಯವಾಗುತ್ತದೆ ಎ೦ದು ನ೦ಬಿದ್ದ.
ಅದೇ ಸ೦ಘಪರಿವಾರದ ರಾಜಕೀಯ ಮ೦ತ್ರಿ ನಿತಿನ್ ಗಡ್ಗರಿ, ಒ೦ದು ಸುಳ್ಳನ್ನು ಹಲವಾರು ಬಾರಿ ಹೇಳಿದರೂ ಪುನ: ಅದನ್ನೇ ಮು೦ದುವರಿಸಿದ್ದಾರೆ.
|
| mohammed., ksa | 2010-01-31 | | ಬಿ.ಜೆ.ಪಿ. ಅಲ್ಪಸಂಖ್ಯಾತರ ವಿರೋಧಿಯಲ್ಲ . ಬದಲಾಗಿ ಮಾನವತೆಯ ವಿರೋಧಿಗಳು. |
| anwar, mangalore | 2010-01-31 | | gujarath nalli muslimarannu kondaga kendradalli dda bjp enu madithu?. |
|