ಗುರುವಾರ, 11-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
Latest news item ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ
Latest news item ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ
Latest news item ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ
Latest news item ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್
Latest news item ಅಸಭ್ಯ ವರ್ತನೆ- ಏಳು ಸಂಸದರ ಅಮಾನತು; ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ
Latest news item ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
Latest news item ಉಡುಪಿ: ಅಸಮಾನತೆಯ ನಿವಾರಣೆ ಕಾಲದ ಬೇಡಿಕೆಯಾಗಿದೆ
Latest news item ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ
Latest news item ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!
Latest news item ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ
Latest news item ಮಂಗಳೂರು: ಬ್ರಾಹ್ಮಣೀಕರಣದ ಭ್ರಮೆಯಿಂದ ಹೊರಬರಲು ಕೊರಗರಿಗೆ ಕರೆ: ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ದಲ್ಲಿ ಜ್ಯೋತಿ ಚೇಳ್ಯಾರು
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಅಪ್ರತಿಮ ವೀರ ಸೇನಾನಿ, ದೇಶ ಭಕ್ತ, ಕನ್ನಡಿಗ, ಕೊಡಗಿನ ವರ ಪುತ್ರ.

ಸೂರ್ಯೋದಯದಲ್ಲಿ ಸೈನಿಕನ ಪ್ರತಿಮೆಗೆ ಸಲ್ಯೂಟ್ ಹೊಡೆದು ದಿನಚರಿಯನ್ನು ಪ್ರಾರಂಭಿಸುತ್ತಿದ್ದ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪನವರ ಜನ್ಮದಿನ 28 ಜನವರಿ....  ಅಪ್ಪಟ ದೇಶಪ್ರೇಮಿಯ ಒಂದು ನೆನಪು....

(ವಿಶೇಷ ಲೇಖನ : ಬಿ. ಕೆ. ಗಣೇಶ್ ರೈ)

ವೀರರ ಶೂರರ ನಾಡು ಕೊಡಗು

ವಿಶ್ವದಲ್ಲೇ ತನ್ನದೇ ಆದ ಸಂಪ್ರದಾಯ, ಉಡುಪು, ಭಾಷೆ, ಕಾಫಿ, ಕಿತ್ತಳೆ, ಯಾಲಕ್ಕಿ, ಭತ್ತ, ಕರಿಮೆಣಸು ಜೇನುಕೃಷಿ, ಜೀವನಾಡಿ ಕಾವೇರಿ ನದಿಯ ಉಗಮಸ್ಥಾನ, ನಿತ್ಯ ಹರಿಧ್ವರ್ಣ, ಹಚ್ಚ ಹಸಿರಿನ ವನಸಿರಿಯ ನಾಡು, ೧೬೦೦ ರಿಂದ ೧೮೩೪ ರ ವರೆಗೆ ಹಾಲೇರಿ ರಾಜವಂಶದ ಅರಸರ ಆಳ್ವಿಕೆಯಲ್ಲಿದ್ದು, ೧೮೩೯ ರಿಂದ ೧೯೪೧ ರ ವರೆಗೆ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟು, ನಂತರ ೧೯೫೦ ರಲ್ಲಿ ಪ್ರತ್ಯೇಕ ರಾಜ್ಯವಾಗಿ ’ಸಿ’ ತರಗತಿಯ ಸಂಸ್ಥಾನವಾಗಿ ಚೀಫ್ ಕಮೀಷನರ್ ಆಳ್ವಿಕೆಗೆ ಒಳಪಟ್ಟು ೧೯೫೬ ನವಂಬರ್ ಒಂದರಿಂದ  ಮೈಸೂರು ರಾಜ್ಯದಲ್ಲಿ ಕೊಡಗು ವಿಲೀನವಾಗಿ, ಜಿಲ್ಲೆಯಾಗಿ ಇಂದು ಕರ್ನಾಟಕ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ.

ಕೊಡಗು ಜಿಲ್ಲೆ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಮತ್ತು ಜನರಲ್ ಕೆ. ಎಸ್. ತಿಮ್ಮಯ್ಯ, ಹಾಗೂ ಪ್ರತಿಯೊಂದು ಕುಟುಂಬದಿಂದ ಕಡ್ಡಾಯವಾಗಿ ಭಾರತೀಯ ಸೇನೆಗೆ ಸೈನಿಕರನ್ನು ನೀಡಿದ ವೀರ ಪರಂಪರೆಯ ಪುಣ್ಯ ಭೂಮಿಯಾಗಿದೆ.

ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ನವರ ಹೆಜ್ಜೆ ಗುರುತುಗಳು....

ಕೊಡಗಿನ ಕೊಡವ ಮನೆತನದ ಕೊಡಂದೆರಾ ಮಾದಪ್ಪ ಕಾರಿಯಪ್ಪ ೨೮ ಜನವರಿ ೧೯೦೦ ರಲ್ಲಿ ಕೊಡಗಿನ ಶನಿವಾರಸಂತೆ ಗ್ರಾಮದಲ್ಲಿ ಜನಿಸಿದರು. ಬ್ರಿಟಿಷ್ ಆಡಳಿತದ ಸಮಯದಲ್ಲಿ ರೆವಿನ್ಯೂ ಇಲಾಖೆಯಲ್ಲಿ ಅವರ ತಂದೆ ಸೇವೆ ಸಲ್ಲಿಸುತ್ತಿದ್ದರು. ಮೂವರು ಸಹೋದರರು, ಇಬ್ಬರು ಸಹೋದರಿಯರಿದ್ದ ಇವರು ತಮ್ಮ ಎಳೆಯ ವಯಸಿನಲ್ಲೇ ಮಾತಾ ಪಿತರನ್ನು ಕಳೆದು ಕೊಂಡರು.

ಮಡಿಕೇರಿಯ ಸೆಂಟ್ರಲ್ ಸ್ಕೂಲ್ ( ಸರಕಾರಿ ಜೂನಿಯರ್ ಕಾಲೇಜು ) ನಲ್ಲಿ ವಿದ್ಯಾರ್ಥಿಯಾಗಿರುವಾಗಲೇ ಗಣಿತ, ಡ್ರಾಯಿಂಗ್, ವ್ಯಂಗ್ಯ ಚಿತ್ರ,ದಲ್ಲಿ ವಿಶೇಷ ಆಸಕ್ತಿ. ಹಾಕಿ, ಕ್ರಿಕೆಟ್ ಆಟಗಾರರಾಗಿ ಮುಂದುವರೆದ ಅವರು ವಿದ್ಯಾಭ್ಯಾಸವನ್ನು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮುಗಿಸಿದರು.

ಅಚ್ಚುಮೆಚ್ಚಿನ ಮಿಲಿಟರಿಗೆ ಸೇರ್ಪಡೆ

ಪ್ರಥಮ ಜಾಗತಿಕ ಯುದ್ಧ ೧೯೧೮ ರಲ್ಲಿ ಮುಗಿದ ಸಂದರ್ಭ. ಭಾರತೀಯರು ಸೇನೆಯಲ್ಲಿ ಅಧಿಕಾರಿಗಳನ್ನಾಗಿ ಆಯ್ಕೆ ಮಾಡುವಂತೆ ಬೇಡಿಕೆ ಇಟ್ಟ ಸಮಯ  ಕೆ.ಸಿ.ಐ.ಒ. (ಕಿಂಗ್ಸ್ ಕಮೀಶನ್ಡ್ ಇಂಡಿಯನ್ ಆಫಿಸರ್ಸ್) ಕಿಂಗ್ಸ್ ಕಮೀಶನ್ - ಡಾಲಿ ಕೆಡೆಟ್ ಕಾಲೇಜು ಇಂದೊರ್ ನಲ್ಲಿ ಪ್ರಥಮ ಬ್ಯಾಚಿನಲ್ಲಿ ಅತ್ಯಂತ ಕಠಿಣ ಆಯ್ಕೆಯಲ್ಲಿ ಕೆ. ಎಂ. ಕಾರಿಯಪ್ಪನವರು ಆಯ್ಕೆಯಾದರು. ನಂತರ ಕರ್ನಾಟಿಕ್ ಇನ್ ಫೆಂಟ್ರಿ ಮುಂಬೈಯಲ್ಲಿ ಪ್ರಥಮ ದರ್ಜೆ ಅಧಿಕಾರಿಯಾದರು. ನಂತರ ಮೆಸಪೊಟೆಮಿಯಾದ (ಇರಾಕ್) ಡೋಗ್ರಾದಲ್ಲಿ ಸೇವೆ ಸಲ್ಲಿಸುತಿದ್ದರು. ಆ ಸಂದರ್ಭದಲ್ಲಿ ಎರಡನೆಯ ವಿಕ್ಟೋರಿಯಾ ಮಹಾರಾಣಿಯ ಸ್ವಂತ ’ರಜಪೂತ್’ ಇನ್ಫೆಂಟ್ರಿ ರೆಜಿಮೆಂಟ್ ಗೃಹದಿಂದ ಆಯ್ಕೆಯಾದ ಪ್ರಥಮ ಭಾರತೀಯ ಅಧಿಕಾರಿಯಾಗಿ ಸ್ಟಾಫ್ ಕಾಲೇಜು ’ಕ್ಯೂಟಾ’ದಲ್ಲಿ ೧೯೩೩ ರಲ್ಲಿ ತರಭೇತಿ ಪಡೆದರು. ೧೯೪೬ ರಲ್ಲಿ ’ಬ್ರಿಗೇಡಿಯರ್’ ಆಗಿ ಭಡ್ತಿಯನ್ನು ಪಡೆದು "ಫ್ರಾಂಟಿಯರ್ ಬ್ರಿಗೇಡ್ ಗ್ರೂಪ್" ನಲ್ಲಿ ಸೇವೆ ಸಲ್ಲಿಸಿದರು. ಆ ಸಂದರ್ಭದಲ್ಲಿ ಕರ್ನಲ್ ಅಯೂಬ್ ಖಾನ್ ಕಾರಿಯಪ್ಪನವರ ಅಧೀನದಲ್ಲಿ ಸೇವೆ ಸಲ್ಲಿಸುತಿದ್ದರು. ( ೧೯೬೨ ರಿಂದ ೧೯೬೯ ರ ವರೆಗೆ ಅಯೂಬ್ ಖಾನ್ ರವರು ಪಾಕಿಸ್ಥಾನದಲ್ಲಿ ಫೀಲ್ಡ್ ಮಾರ್ಷಲ್ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.)

 ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ ಪ್ರಶಸ್ತಿ ಪಡೆದ ಭಾರತೀಯ

ಫಿ. ಮಾ. ಕೆ. ಎಂ. ಕಾರಿಯಪ್ಪವವರು ೧೯೪೧ -೪೨ ರಲ್ಲಿ ಸಿರಿಯಾ, ಇರಾಕ್, ೧೯೪೩-೪೪ ರಲ್ಲಿ ’ಮೈನ್ಮರ್’ ಗಳಲ್ಲಿ ಪ್ರಥಮ ಭಾರತೀಯ ಸೇನಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಬರ್ಮದಲ್ಲಿದ್ದ ಜಪಾನೀಯರನ್ನು ಬಿಡುಗಡೆಗೊಳಿಸುವ ಕಾರ್ಯಾಚರಣೆಯಲ್ಲಿ "ಆರ್ಡರ್ ಆಫ್ ಬ್ರಿಟಿಷ್ ಎಂಪೈರ್" ಪ್ರಶಸ್ತಿಯನ್ನು ಪಡೆದ ಪ್ರಥಮ ಭಾರತೀಯರಾಗಿದ್ದಾರೆ.

೧೯೪೭ ರಲ್ಲಿ ಸ್ವಾತಂತ್ರ್ಯವನ್ನು ಅಂಗ್ಲರ ಆಧಿಪತ್ಯದಿಂದ ಪಡೆಯುವ ಸಂದರ್ಭ ಕೆ. ಎಂ ಕಾರಿಯಪ್ಪನವರು ತಮ್ಮ ಸೈನಿಕರನ್ನು ಉದ್ಧೇಶಿಸಿ - " ಇಸ್ ವಕ್ತ್ ಆಪ್ ಮಪ್ತ್, ಹಮ್ ಮಪ್ತ್, ಮುಲ್ಕ್ ಮಪ್ತ್, ಸಭ್ ಕುಛ್ ಮಪ್ತ್ ಹೈ" ಎಂದು ಹೇಳಿ ಸೈನಿಕರಿಗೆ ಸ್ವಾತಂತ್ರ್ಯದ ಬಗ್ಗೆ ಅಭಿಮಾನ ಮೂಡಿಸಿದರು.

ಲೆಫ್ಟಿನೆಂಟ್ ಜನರಲ್ ಆಗಿ ಭಡ್ತಿ

೧೯೪೭ ರಲ್ಲಿ ಪ್ರಥಮ ಭಾರತೀಯನಾಗಿ ಕೆ. ಎಂ. ಕಾರಿಯಪ್ಪ ನವರು "ಇಂಪಿರಿಯಲ್ ಡಿಫೆನ್ಸ್ ಕಾಲೇಜು" ಕ್ಯಾಂಬರ್ಲಿ, ಯುನೈಟೆಡ್ ಕಿಂಗ್ಡಂ ನಲ್ಲಿ ಉನ್ನತ ಯುದ್ದ ತರಭೇತಿಯನ್ನು ಪಡೆದರು.

ಭಾರತಕ್ಕೆ ಸ್ವಾತಂತ್ರ್ಯ ದೊರೆತು, ಭಾರತ ಪಾಕಿಸ್ಥಾನ ವಿಭಜನೆಯಾದಾಗ ಸೇನಾ ಪಡೆಯನ್ನು ಸರಿಸಮಾನವಾಗಿ ಇಬ್ಭಾಗ ಮಾಡುವಾಗ ಅದರ ಜವಾಬ್ಧಾರಿಯನ್ನು ಕೆ. ಎಂ. ಕಾರಿಯಪ್ಪ ನವರು ವಹಿಸಿದ್ದರು. ಸ್ವಾತಂತ್ರ್ಯನಂತರ ಪೂರ್ವ ವಿಭಾಗದ ಸೇನಾ ಪಡೆಯ ’ಲೆಫ್ಟಿನೆಂಟ್ ಜನರಲ್’ ಆಗಿ ಭಡ್ತಿ ಪಡೆದರು.

ಪ್ರಥಮ ಕಮಾಂಡರ್ ಇನ್ ಚೀಫ್ (ಸೇನಾ ಮಹಾ ದಂಡನಾಯಕ)

ಭಾರತೀಯ ಸೇನಾ ಪಡೆಗಳ (ಭೂ ಸೇನೆ, ವಾಯು ಸೇನೆ, ನೌಕಾಪಡೆ) ಪ್ರಥಮ ಮುಖ್ಯಸ್ಥ " ಪ್ರಥಮ ಕಮಾಂಡರ್ ಇನ್ ಚೀಫ್" ಪಧವಿಯನ್ನು ಜನವರಿ ೧೫ ರಂದು ೧೯೪೯ ರಲ್ಲಿ ಬ್ರಿಟಿಷ್ ಸೇನಾಧಿಕಾರಿ ಜನರಲ್ ರಾಯ್ ಬುಚ್ಚರ್ ನಿಂದ ಅಧಿಕಾರವನ್ನು ತೆಗೆದುಕೊಂಡರು. ಅತ್ಯಂತ ಉನ್ನತ ಹುದ್ದೆಗೆ ಏರಿದ "ಕನ್ನಡಿಗ" ಕೊಡಗಿನ ಕುವರ, ಕೊಡಗಿನ ಕುಲದೇವತೆ ಕಾವೇರಿ ಮಾತೆಯ ವರ ಪುತ್ರ ಜನರಲ್ ಕೆ. ಎಂ. ಕಾರಿಯಪ್ಪ ನವರು ಸಾರ್ವಕಾಲಿಕ ಗೌರವಾನ್ವಿತರಾಗಿ ಭಾರತೀಯರ ಮನದಲ್ಲಿ ಗೌರವದ ಸ್ಥಾನ ಪಡೆದಿದ್ದಾರೆ.

ಜನರಲ್ ಕಾರ್ಯಪ್ಪ ವಾಂಟ್ಸ್ ಟು ಮೀಟ್ ಯುವರ್ ಜನರಲ್

ಭಾರತ ಪಾಕಿಸ್ಥಾನ ಯುದ್ದ ಸಂದರ್ಭದಲ್ಲಿ ಜನರಲ್ ಕೆ. ಎಂ. ಕಾರಿಯಪ್ಪನವರು ಭಾರತದ ಗಡಿ ದಾಟಿ ಪಾಕಿಸ್ಥಾನದ ನೆಲದಲ್ಲಿ ನಿಂತು "ಜನರಲ್ ಕಾರಿಯಪ್ಪ ವಾಂಟ್ಸ್ ಟು ಮೀಟ್ ಯುವರ್ ಜನರಲ್" ಎಂದು ಎತ್ತರದ ಧ್ವನಿಯಲ್ಲಿ ಕರೆಕೊಟ್ಟರು. ತಕ್ಷಣ ಪೊದೆಯಲ್ಲಿ ಅಡಗಿ ಕುಳಿತಿದ್ದ ಪಾಕ್ ಯೋಧರು ಎದ್ದು ನಿಂತು ಶತ್ರು ಸೇನಾನಿಗೆ ಸಲ್ಯೂಟ್ ಹೊಡೆದು ಅವರನ್ನು ಅವರ ಸೇನಾನಿ ಬಳಿಗೆ ಕರೆದುಕೊಂಡು ಹೋದರು. ಇಂತಹ ಘಟನೆ ಇಡಿ ವಿಶ್ವದ ಇತಿಹಾಸದಲ್ಲಿ ಎಲ್ಲಿಯೂ ನಡೆದಿರಲಿಲ್ಲ. ಭಾರತದ ಈ ಸೇನಾನಿಯನ್ನು ಹೊಡೆದು ನೆಲಕ್ಕೆ ಉರುಳಿಸಲು ಕೇವಲ ಒಂದು ಬುಲೆಟ್ ಸಾಕಾಗಿತ್ತು. ಆದರೆ ಜನರಲ್ ಕೆ. ಎಂ. ಕಾರಿಯಪ್ಪನವರ ಬಗ್ಗೆ ತಿಳಿದಿದ್ದ ಸೈನಿಕರು ಶತ್ರುಗಳಾಗಿದ್ದರೂ ಅವರು ನೀಡಿದ ಗೌರವ ಇನ್ಯಾರಿಗೂ ಸಿಗಲಾರದು.

ಭಾರತ ಪಾಕ್ ಯುದ್ದ ನಡೆಯುವ ಸಂದರ್ಭದಲ್ಲಿ ’ವಿಶ್ವ ಸಂಸ್ಥೆಯಿಂದ ಯುದ್ದ ವಿರಾಮಕ್ಕೆ ಆಜ್ಞೆ ಬಂದಿತ್ತು. ಪ್ರಧಾನಿ ನೆಹರೂ ಆದೇಶದಂತೆ ಕಾಶ್ಮಿರದಲ್ಲಿ ಯುದ್ದ ನಿಲ್ಲಿಸಬೇಕಾಯಿತು. ಇನ್ನು ಹದಿನೈದು ದಿನ ಸಮಯ ದೊರಕಿದ್ದಿದ್ದರೆ ಕಾಶ್ಮೀರ ಸಮಸ್ಯೆ ಅಂದೇ ಮುಗಿದು ಬಿಡುತಿತ್ತು. ಇದರಿಂದ  ಕೆ. ಎಂ ಕಾರಿಯಪ್ಪನವರು ಮನನೊಂದು ಯುದ್ಧಭೂಮಿಯಿಂದ ಹಿಂತಿರುಗಬೇಕಾಯಿತು.

ಮಹಾ ದಂಡನಾಯಕ ಪದವಿಯನ್ನು ಕಂಡು ಅಂಜಿದ ಜವಹರ್ ಲಾಲ್ ನೆಹರೂ

ಭಾರತದ ಮೂರು ಸೇನಾಪಡೆಗಳ ಅಧಿಕಾರವನ್ನು ಪಡೆದಿದ್ದ ಜನರಲ್ ಕೆ. ಎಂ. ಕಾರಿಯಪ್ಪನವರು ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯ ನಂತರ ಅವರು ನಡೆದು ಬಂದ ದಾರಿ, ಅವರ ಸಾಹಸ, ಶೌರ್ಯ, ದೇಶಭಕ್ತಿ, ಪ್ರಾಮಾಣಿಕತೆ, ದೃಡನಿರ್ಧಾರ, ದಿಟ್ಟಹೆಜ್ಜೆ, ಧೈರ್ಯವನ್ನು ಕಂಡ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರ್ ಲಾಲ್ ನೆಹರೂರವರು ಅಲ್ಲಿ ತಮ್ಮ ರಾಜಕರಣಕ್ಕೆ ಕುತ್ತುಬಂದು, ಅಧಿಕಾರ ಕಳೆದು ಕೊಳ್ಳುವ ಅಳುಕು ಅಂಜಿಕೆಯಿಂದ, ೨೯ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಅನುಭವಿ ಸೇನಾನಿ ಕೆ. ಎಂ. ಕಾರಿಯಪ್ಪನವರು ಎಲ್ಲಿಯಾದರು ದೇಶವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳ ಬಹುದೆಂಬ ಭಯದಿಂದ ಉಪಾಯವಾಗಿ ಅವರನ್ನು ೧೯೫೩ ರಲ್ಲಿ ನಿವೃತ್ತಿಗೊಳಿಸಿ ನ್ಯೂಜಿಲ್ಯಾಂಡ್ ಗೆ ೩ನೇ ರಾಯಬಾರಿಯಾಗಿ ನೇಮಿಸಿ ಕಳುಹಿಸಿದರು. ೧೯೫೬ ರ ವರೆಗೆ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ದಲ್ಲಿ ರಾಯಾಭಾರಿಯಾಗಿ ಸೇವೆ ಸಲ್ಲಿಸಿ ಭಾರತಕ್ಕೆ ಹಿಂತಿರುಗಿದರು.

ವೀರ ಸೇನಾನಿಯ ನಿವೃತ್ತಿ ಜೀವನ - ಅಚ್ಚು ಮೆಚ್ಚಿನ ’ರೋಶನಾರ’ ದಲ್ಲಿ

ಭಾರತದ ಸೇನೆಯನ್ನು ಭದ್ರವಾಗಿ ಕಟ್ಟಿದ ಪ್ರಾಮಾಣಿಕ ಸೇನಾನಿ ಕೆ. ಎಂ. ಕಾರಿಯಪ್ಪನವರು ತಮ್ಮ ನಿವೃತ್ತಿ ಜೀವನವನ್ನು ಸುಂದರ ತಾಣ ವನಸಿರಿಯ ಮದ್ಯದಲ್ಲಿರುವ ಮಡಿಕೇರಿಯಲ್ಲಿ ಅರಣ್ಯ ಇಲಾಖೆಯಿಂದ ಐವತ್ತು ಏಕರೆ ಜಾಗವನ್ನು ಖರೀದಿಸಿ ನೆಲೆಸಿದರು. ಅಲ್ಲಿಯೆ ಬ್ರಿಟಿಷರಿಂದ ನಿರ್ಮಾಣವಾದ ಬಂಗಲೆಯಿತ್ತು. ತಾವು ವಾಸಿಸಿತ್ತಿದ್ದ ಬಂಗಲೆ "ರೋಶನಾರ" ಅವರ ಅಚ್ಚುಮೆಚ್ಚಿನ ವಾಸಸ್ಥಾನವಾಗಿತ್ತು. 

ಒಮ್ಮೆ ಮೈಸೂರಿನಿಂದ ಮಡಿಕೇರಿಗೆ ಪ್ರಯಾಣ ಮಾಡುತ್ತಿದ್ದಾಗ ಅವರ ಕಾರು ಅಕಸ್ಮಿಕವಾಗಿ ಒಂದು ದನಕ್ಕೆ ಡಿಕ್ಕಿಹೊಡೆದು ದನ ಅರೆಜೀವವಾಗಿ ನೆಲದಲ್ಲಿ ಬಿದ್ದಿತು. ಊರಿನ ಜನರೆಲ್ಲರೂ ಇವರ ಕಾರನ್ನು ತಡೆದು ಚಾಲಕನನ್ನು ತಳಿಸಲು ಮುಂದಾದರು. ಪರಿಸ್ಥಿತಿ ವಿಪರೀತವಾಗುವ ಮೊದಲೆ ಜನರಲ್ ಕೆ. ಎಂ. ಕಾರಿಯಪ್ಪನವರು ಕಾರಿನಿಂದ ಹೊರಕ್ಕೆ ಬಂದಾಗ ನಡೆದ ಘಟನೆಯಲ್ಲಿ ಸೇನಾನಿಯ ಕಾರು ಎಂದು ತಿಳಿದು ಗ್ರಾಮಸ್ಥರು ಬೆಚ್ಚಿದರು. ದನದ ಮಾಲಿಕನನ್ನು ಕರೆದು ಆತನಿಗೆ ಪರಿಹಾರದ ಪೂರ್ಣ ಹಣವನ್ನು ನೀಡಿದರು. ಪ್ರಾಣ ಯಾತನೆಯಿಂದ ನರಳುತ್ತಿದ್ದ ದನವನ್ನು ಅಂಗ ವಿಕಲತೆಯಿಂದ ನರಳುವುದು ಬೇಡ ಎಂದು ನಿರ್ಧರಿಸಿ ತಮ್ಮ ಬಳಿಯಿದ್ದ ಪಿಸ್ತೂಲ್ ನಿಂದ ಶೂಟ್ ಮಾಡಿದರು. ನಂತರ ಕಳೆಬರವನ್ನು ಗ್ರಾಮಸ್ಥರಿಂದ ಗುಂಡಿತೆಗೆಸಿ ಹಾಕಿ ಮುಚ್ಚಿಸಿ ನಂತರ ತಮ್ಮ ಪ್ರಯಾಣವನ್ನು ಮುಂದುವರೆಸಿದರು.

ಯುದ್ಧ ಸಂದರ್ಭದಲ್ಲಿ ಸೇನಾನಿಗೆ ಕರೆ

ಭಾರತದ ವಿರುದ್ದ ೧೯೬೨, ೧೯೬೫, ೧೯೭೧ ರಲ್ಲಿ ನಡೆದ ಯುದ್ಧ ಸಂದರ್ಭದಲ್ಲಿ ಸೈನಿಕರಿಗೆ ಆತ್ಮ ಸ್ಥೈರ್ಯ, ಬಲತುಂಬಲು, ನಿವೃತ್ತಿ ಜೀವನ ನಡೆಸುತಿದ್ದ ಸೇನಾನಿ ಕೆ. ಎಂ. ಕಾರಿಯಪ್ಪ ನವರನ್ನು ಭಾರತ ಸರ್ಕಾರ ಕರೆಯಿಸಿ ಕೊಂಡು ಅವರ ಸೇವೆಯನ್ನು ಬಳಸಿಕೊಂಡು ಗೌರವ ಸಲ್ಲಿಸಿದೆ.

ನನ್ನ ಮಗನಲ್ಲ ಆತನೀಗ ದೇಶದ ಮಗ

೧೯೬೫ ರ ಪಾಕ್ ಯುದ್ಧ ಸಂದರ್ಭದಲ್ಲಿ ಜನರಲ್ ಕೆ. ಎಂ. ಕಾರಿಯಪ್ಪನವರ ಪುತ್ರ ಫೈಟ್ ಲೆಪ್ಟಿನೆಂಟ್ ಕೆ. ಸಿ. ನಂದಾ ಕಾರ್ಯಪ್ಪ (ನಂತರ ಏರ್ ಮಾರ್ಷಲ್ ಆಗಿ ಸೇವೆ ಸಲ್ಲಿಸಿದವರು) ನವರ ಹಂಟರ್ ಏರ್ ಕ್ರಾಫ್ಟನ್ನು ಹೊಡೆದು ಉರುಳಿಸಿ ೧೯೬೬ ರ ವರೆಗೆ ಯುದ್ಧ ಖೈದಿಯನ್ನಾಗಿರಿಸಿದರು. ಆ ಸಂದರ್ಭದಲ್ಲಿ ಜನರಲ್ ಕೆ. ಎಂ. ಕಾರಿಯಪ್ಪನವರ ಅಧೀನದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ ಫಿ. ಮಾ. ಅಯೂಬ್ ಖಾನ್ ರವರು ಮಡಿಕೇರಿಯಲ್ಲಿದ್ದ ಕಾರಿಯಪ್ಪ ನವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಅವರ ಮಗನನ್ನು ಶತ್ರು ಪಡೆಯಿಂದ ಬಿಡುಗಡೆ ಮಾಡುವಂತೆ ಶತ್ರು ರಾಷ್ಟ್ರದ ಮುಖ್ಯಸ್ಥರನ್ನು ಕೋರಿಕೊಳ್ಳಲು ಸೂಚಿಸಿದರು. ತಕ್ಷಣ ಕಾರಿಯಪ್ಪನವರು " ಆತ ಈವಾಗ ನನ್ನ ಮಗನಲ್ಲ ಆತನೀಗ ದೇಶದ ಮಗ" ಇನ್ನಿತರ ಖೈದಿಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೊ ಅದೇ ರೀತಿ ನಡೆಸಿ ಕೊಳ್ಳಲಿ. ಒಂದು ಸಮಯ ಎಲ್ಲಾ ಖೈದಿಗಳನ್ನು ಬಂದ ಮುಕ್ತವಾಗಿಸಿದರೆ ಮಾತ್ರ ಬಿಡುಗಡೆ ಮಾಡಲಿ, ಅವನಿಗೆ ಮಾತ್ರ ವಿಶೇಷ ಸವಲತ್ತು ನೀಡುವುದು ಬೇಡಾ ಎಂದು ಪ್ರತಿಕ್ರಿಯೆ ನೀಡಿದರು. ಈ ವಿಚಾರ ಪಾಕ್ ಸೇನಾನಿಗಳ ಗಮನಕ್ಕೆ ಬಂದು ಎಲ್ಲಾ ಬಂದಿತ ಯುದ್ದ ಖೈದಿಗಳನ್ನು ಗೌರವದಿಂದ ಭಾರತಕ್ಕೆ ಕಳುವಿಸಿಕೊಟ್ಟರು. ಜನರಲ್ ಕೆ. ಎಂ. ಕಾರಿಯಪ್ಪನವರ  ಈ ರೀತಿಯಾದ ಮಾತೃಭೂಮಿಯ ಮೇಲಿರುವ ಅಭಿಮಾನವೇ ಭಾರತೀಯ ಸೈನ್ಯದ ಪ್ರತಿಯೊಬ್ಬ ಯೋಧನಿಗೆ ದೇಶ ಸೇವೆ ಸಲ್ಲಿಸುವ ಪ್ರೇರಣೆಯಾಗಿದೆ.

ಜಗತ್ತಿನ ಬಲಿಷ್ಠ ಸೇನಾ ಪಡೆಗಳಿಗೆ ಸಲಹೆ, ಸೂಚನೆ,  ಮಾರ್ಗದರ್ಶನ

ಜನರಲ್ ಕೆ. ಎಂ. ಕಾರಿಯಪ್ಪ ನವರು ಜಗತ್ತಿನ ಬಲಿಷ್ಠ ಸೇನಾ ಪಡೆಗಳಾದ ಚೀನಾ, ಜಪಾನ್, ಯುನೈಟೆಡ್ ಸ್ಟೇಟ್ಸ್, ಗ್ರೇಟ್ ಬ್ರಿಟನ್, ಕೆನಾಡಾ, ಯುರೋಪಿನ ಹಲವಾರು ಸೇನಾ ಪಡೆಗಳಿಗೆ ಭೇಟಿ ನೀಡಿ ಸಲಹೆ, ಸೂಚನೆ, ಮಾರ್ಗದರ್ಶನ ನೀಡಿದ್ದಾರೆ. ಅಮೇರಿಕಾ ಅಧ್ಯಕ್ಷರಾದ ಹ್ಯಾರಿ ಎಸ್. ಟ್ರೂಮನ್ ರವರು "ಆರ್ಡರ್ ಆಫ್ ದಿ ಚೀಫ್ ಕಮಾಂಡರ್ ಆಫ್ ದಿ ಲೆಜಿನ್ ಆಫ್ ಮೆರಿಟ್" ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಭಾರತದ ಅತ್ಯಂತ ಉನ್ನತ  ’ಫೀಲ್ಡ್ ಮಾರ್ಷಲ್’ ಪದವಿ ಕೆ. ಎಂ. ಕಾರಿಯಪ್ಪನವರಿಗೆ.

ಭಾರತದ ಯುವ ಪ್ರಧಾನಿ ರಾಜೀವ್ ಗಾಂಧಿಯವರ ಸಮಯದಲ್ಲಿ ಭಾರತ ಸರ್ಕಾರ ತುಂಬಾ ತಡವಾದರೂ ಜನರಲ್ ಕೆ. ಎಂ ಕಾರಿಯಪ್ಪ ನವರ ದೇಶ ಸೇವೆಯನ್ನು ಮರೆಯದೆ ಜೀವಿತಾವಧಿಯಲ್ಲಿಯೇ ಆಗಿನ ಭಾರತದ ರಾಷ್ಟ್ರಪತಿಯಾಗಿದ್ದ ಜೈಲ್ ಸಿಂಗ್ ರವರು ೧೯೮೬ ರಲ್ಲಿ ರಾಷ್ಟ್ರಪತಿ ಭವನದಲ್ಲಿ ಜನರಲ್ ಕೆ. ಎಮ್. ಕಾರಿಯಪ್ಪನವರಿಗೆ "ಫೀಲ್ಡ್ ಮಾರ್ಷಲ್" ಪದವಿಯನ್ನು ನೀಡಿ ಗೌರವಿಸಿದರು. ಅವರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿದ್ದರೂ, ಅವರು ನಿಂತು ಕೊಂಡೇ ಪದವಿಯನ್ನು ಸ್ವೀಕರಿಸಿದರು.

ಫೀಲ್ಡ್ ಮಾರ್ಷಲ್ ಪದವಿ ನೀಡಿದ ಸರ್ಕಾರ ಅವರಿಗೆ ದೇಶದ ಒಳಗೆ ಯಾವುದೇ ಭಾಗಕ್ಕೆ ಸಂಚರಿಸಲು ಹೆಲಿಕ್ಯಾಪ್ಟರ್ ಸೌಲಭ್ಯ ನೀಡಿತ್ತು. ಆದರೆ ಒಮ್ಮೆಯಾದರೂ, ಆ ಸೌಲಭ್ಯವನ್ನು ಬಳಸಿಕೊಳ್ಳಲೇ ಇಲ್ಲ.

ನೈಜ್ಯ ಭಾರತೀಯ ಫಿ. ಮಾ. ಕೆ. ಎಂ. ಕಾರಿಯಪ್ಪನವರ ಸಮಯ ಪ್ರಜ್ಞೆ

ಫಿ. ಮಾ. ಕೆ. ಎಂ ಕಾರಿಯಪ್ಪ ನವರು ಯಾವುದೇ ಸಭೆ ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದರೆ, ಸರಿ ಸಮಯದಲ್ಲೇ ಹಾಜರಾಗಿರುತ್ತಿದ್ದರು. ಕೆಲವು ಸಲ ಕಾರ್ಯಕ್ರಮ ಆಯೋಜಕರು ಸಮಾರಂಭದ ತಯಾರಿ ಪೂರ್ಣವಾಗದೆ, ಇವರು ಪ್ರತ್ಯಕ್ಷವಾದಾಗ ಕಕ್ಕಾಬಿಕ್ಕಿ ಯಾಗಿದ್ದು ಇದೆ.

ಪ್ರಖ್ಯಾತ ಗಾಯಕಿ ಎಂ. ಎಸ್. ಸುಬ್ಬುಲಕ್ಷ್ಮಿ ಯವರ ಸಂಗೀತ ಕಾರ್ಯಕ್ರಮ ರಾತ್ರಿಯಲ್ಲಿ ನಡೆಯುತ್ತಿದ್ದಾಗ ಅಕಸ್ಮಾತ್ ವಿದ್ಯುತ್ ನಿಂತು ಕತ್ತಲೆ ಆವರಿಸಿದಾಗ, ವೇದಿಕೆಯ ಮೇಲಿದ್ದ ಫಿ. ಮಾ. ಕೆ. ಎಂ. ಕಾರಿಯಪ್ಪನವರು ತಮ್ಮ ಕಿಸೆಯಿಂದ ಕ್ಯಾಂಡಲ್ ಬೆಂಕಿ ಪೊಟ್ಟಣ ತೆಗೆದು, ಕ್ಯಾಂಡಲ್ ಹಚ್ಚಿ ಬೆಳಗಿಸಿದಾಗ ಇಡೀ ಸಭೆಯೇ ದಿಗ್ಬ್ರ್‍ಆಂತವಾಯಿತು.

ಬೆಟ್ಟಗುಡ್ಡಗಳ ಹಾದಿಯಲ್ಲಿ ಪ್ರಯಾಣಿಸುವಾಗ ಅವರ ಕಾರಿನಲ್ಲಿ ಕತ್ತಿ, ಕೊಡಲಿ, ಹಗ್ಗ ಯಾವಾಗಲೂ ಇರುತ್ತಿತ್ತು. ದಾರಿಯಲ್ಲಿ ಮರ ಬಿದ್ದು ರಸ್ತೆ ತಡೆಯಾಗಿದ್ದರೆ, ತಮ್ಮಲ್ಲಿರುವ ಉಪಕರಣದಿಂದ ಸರಿಪಡಿಸಿಕೊಂಡು ಪ್ರಯಾಣ ಮುಂದುವರೆಸಿಕೊಂಡು ಹೋಗುತ್ತಿದ್ದರು.

ಮಡಿಕೇರಿ ಜನತೆಗೆ ನೀರಿನ ಸೌಲಭ್ಯ ನೀಡಿದ ಮಹಾ ದಾನಿ

ಫಿ. ಮಾ. ಕೆ. ಎಂ. ಕಾರಿಯಪ್ಪನವರು ತಾವೇ ಖರೀದಿಸಿದ್ದ ಜಾಗದಲ್ಲಿ ಜಲದ ನೆಲೆ ಇದ್ದು, ಮಡಿಕೇರಿಯ ಜನತೆ ನೀರಿಗಾಗಿ ಪರದಾಡುವ ಪರಿಸ್ಥಿತಿಯನ್ನು ಕಂಡ ಇವರು ತಮ್ಮ ಜಾಗದಲ್ಲಿರುವ ಎಂಟು ಏಕರೆ ನೀರಿನ ಜಾಗವನ್ನು ಮಡಿಕೇರಿ ಪುರ ಸಭೆಗೆ ದಾನವಾಗಿ ನೀಡಿ, ಜನತೆಯ ನೀರಿನ ಸಮಸ್ಯೆಯನ್ನು ನೀಗಿಸಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಮಹಾ ದಾನಿ.

 ನಾನು ಪ್ಲಾಂಟರ್ ಅಲ್ಲ ಪೆನ್ಶನರ್

ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ಚಿತ್ರ ಕಲಾವಿದರು ಒಟ್ಟು ಸೇರಿ "ಕೊಡಗು ಕಲಾ ಪರಿಷತ್" ಸಂಸ್ಥೆಯನ್ನು ಸ್ಥಾಪಿಸಿ ಜಿಲ್ಲೆಯಾದ್ಯಂತ ಕಲಾಶಿಬಿರ, ಕಲಾ ಜಾತಾ, ಚಿತ್ರಕಲಾಸ್ಪರ್ಧೆ, ತೈಲವರ್ಣ ಜಲವರ್ಣ ಚಿತ್ರಕಲಾ ಪ್ರದರ್ಶನ ನಡೆಸಿಕೊಂಡು ಬರುತಿದ್ದ ಸಂದರ್ಭ, ಮಡಿಕೇರಿ ಕಾವೇರಿ ಕಲಾ ಕ್ಷೇತ್ರದಲ್ಲಿ ಸಮೂಹ ಚಿತ್ರಕಲಾ ಪ್ರದರ್ಶನ ನಡೆಯುತಿತ್ತು. ನಾವೆಲ್ಲಾ ಕಲಾವಿದರು ಒಟ್ಟು ಸೇರಿ ಫಿ. ಮಾ. ಕೆ. ಎಂ. ಕಾರಿಯಪ್ಪನವರನ್ನು ಕಲಾ ಪ್ರದರ್ಶನ ವೀಕ್ಷಿಸಲು ಆಹ್ವಾನಿಸಿದ್ದೆವು. ಸಮಯ ನಿಗದಿಯಾಗಿತ್ತು, ನಾವೆಲ್ಲರೂ ಶಿಸ್ತಿನ ಸಿಪಾಯಿಗಳಂತೆ ಅವರ ಬರುವಿಕೆಯನ್ನು ಎದುರು ನೋಡಿಕೊಂಡಿರುವಂತೆ ಒಂದು ನಿಮಿಷ ಹಿಂದೆ ಮುಂದೆಯಾಗದಂತೆ ಕಲಾ ಪ್ರದರ್ಶನ ಗ್ಯಾಲರಿಯೊಳಗೆ ಪ್ರವೇಶಿಸಿದರು. ಒಂದೊಂದು ತೈಲವರ್ಣ, ಜಲವರ್ಣ ಕಲಾಕೃತಿಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಾ, ರಚಿಸಿದ ಕಲಾವಿದರಿಂದ ಪೂರ್ಣ ವಿವರ, ಸನ್ನಿವೇಶ, ಸಂದರ್ಭ, ಸಂದೇಶಗಳ ವಿವರಗಳನ್ನು ತಿಳಿದುಕೊಂಡು ಹರ್ಷಚಿತ್ತರಾಗಿ,ತಮ್ಮ ಕೋಟು ಕಿಸೆಯಿಂದ ಒಂದು ಚೆಕ್ಕನ್ನು ಹೊರತೆಗೆದು ನಮಗೆ ನೀಡುತ್ತಾ ”ನಾನು ಪ್ಲಾಂಟರ್ ಅಲ್ಲ ಪೆನ್ಶನರ್’ ಎಂದು ನುಡಿಯುತ್ತಾ ’ಕೊಡಗು ಕಲಾ ಪರಿಷತ್’ ಗೆ ಒಂದು ಸಾವಿರ ರೂಪಾಯಿಯನ್ನು ಕೊಡುಗೆಯಾಗಿ ನೀಡಿ ಕೊಡಗಿನ ಕಲಾ ಸಂಸ್ಕೃತಿ, ಕಲಾವಿದರಿಗೆ ಪ್ರೋತ್ಸಾಹ ನೀಡಿದ ಪ್ರಥಮ ದಾನಿಯಾದರು. ಆಕ್ಷಣದಲ್ಲಿ ಅವರ ಮಾತಿನ ಅರ್ಥ ನಮಗೆ ತಿಳಿದಿರಲಿಲ್ಲ, ಅವರಿಗೆ ಒಂದು ತಿಂಗಳಿಗೆ ಎರಡು ಸಾವಿರದ ಎಂಟು ನೂರು ರೂಪಾಯಿಗಳು ಮಾತ್ರ ನಿವೃತ್ತಿ ವೇತನ ದೊರೆಯುತ್ತಿದ್ದದು ನಮಗೆ ನಂತರ ತಿಳಿದದ್ದು.

ಕಲಾಪ್ರದರ್ಶನ ವೀಕ್ಷಿಸಿ ಗ್ಯಾಲರಿಯಿಂದ ಹೊರಬರುವಾಗ, ಪುಟ್ಟ ಬಾಲಕಿಯೊಬ್ಬಳು "ಆಟೋಗ್ರಾಫ್" ಪಡೆಯಲು ಕಿರು ಪುಸ್ತಕವನ್ನು ಫಿ. ಮಾ. ಕಾರ್ಯಪ್ಪನವರಿಗೆ ನೀಡಿದಾಗ ಅವರ ಬಳಿಯಿದ್ದ ಪೆನ್ನ್ ನಿಂದ ಪುಸ್ತಕದ ಹಾಳೆಯ ಮೇಲೆ ಒಂದು ಸುಂದರವಾದ ಗಜರಾಜನ ಚಿತ್ರವನ್ನು ರಚಿಸಿ ಅದರ ಕೆಳಗೆ ಇದನ್ನು ರಕ್ಷಿಸಿ ಎಂದು ಬರೆದು ಸಹಿ ಮಾಡಿಕೊಟ್ಟರು. ಅವರ ಕೈಯಲ್ಲಿ ಮೂಡಿಬಂದ ರೇಖಾ ಚಿತ್ರದ ಗೆರೆಗಳನ್ನು ನೋಡಿದಾಗ ನಾವು ಮೂಕವಿಸ್ಮಿತರಾದೆವು. ಅವರ ಗನ್ ಹಿಡಿದ ಕೈ ಪೆನ್ ಹಿಡಿದು ಕಲಾಕೃತಿ ರಚಿಸಿದ ಅವರ ಕಲಾನೈಪುಣ್ಯತೆಗೆ ಸಾಕ್ಷಿಯಾಗಿತ್ತು. ಅವರ ಚಿತ್ರದ ಸಂದೇಶದ ಹಿಂದೆ ಅವರ ಮನಸಿನಲ್ಲಿ ನೋವಿತ್ತು. ಅಂದಿನ ದಿನಗಳಲ್ಲಿ ಕಾಡುಗಳ್ಳ, ಗಜರಾಜ ಹಂತಕ ಲೆಕ್ಕವಿಲ್ಲದಷ್ಟು ಆನೆಗಳ ಹತ್ಯೆ ಮಾಡಿ ಮಾರಣ ಹೋಮ ನಡೆಸುತ್ತಿದ್ದ ಸಮಯವಾಗಿತ್ತು. ಅವರ ಆ ಸಂದೇಶದ ಚಿತ್ರ ಆಗಿನ ಭ್ರಷ್ಟ ರಾಜಕಾರಣಿಗಳಿಗೆ ಮತ್ತು ಸರ್ಕಾರಕ್ಕೆ ನೀಡಿದ್ದ ಸೂಚನೆಯಾಗಿತ್ತು.

ಫಿ. ಮಾ. ಕೆ. ಎಂ. ಕಾರಿಯಪ್ಪ ನವರು ವಾಸಿಸುತ್ತಿದ್ದ "ರೋಶನಾರ" ಬಂಗಲೆ ಮಡಿಕೇರಿಯ ಪ್ರಕೃತಿಯ ಮಡಿಲಲ್ಲಿ ಸುಂದರ ಕಾನನ, ಗಂಧದ ಮರಗಳ ನಡುವೆ ಪ್ರಶಾಂತ ವಾತಾವರಣದಲ್ಲಿತ್ತು. ಕಲಾವಿದರಾದ ನಮಗೆ ಚಿತ್ರ ರಚನೆ ಮಾಡಲು ಹೆಚ್ಚು ಸ್ಪೂರ್ತಿ ಕೊಡುತಿದ್ದ ಸ್ಥಳವಾದುದರಿಂದ, ಹೆಚ್ಚು ಹೆಚ್ಚಾಗಿ ಅಲ್ಲಿ ತೆರಳಿ ಪ್ರಕೃತಿಯ ಸೊಬಗನ್ನು ಕ್ಯಾನವಾಸಿನ ಮೇಲೆ ಮೂಡಿಸುತಿದ್ದೆವು. ಕಲಾಕೃತಿ ರಚಿಸಿಯಾದನಂತರ ನಾವು ಫಿ.ಮಾ. ಕಾರ್ಯಪ್ಪನವರ ಬಳಿಗೆ ತೆಗೆದುಕೊಂಡು ಹೋಗಿ ತೋರಿಸುತ್ತಿದ್ದೆವು. ಅವರು ದಿನನಿತ್ಯ ನೋಡುತ್ತಿದ್ದ ದೃಶ್ಯಗಳನ್ನು ನಾವು ಕ್ಯಾನವಾಸಿನ ಮೇಲೆ ಕಲಾಕೃತಿಯನ್ನಾಗಿ ಮೂಡಿಸಿದ್ದನ್ನು ಕಂಡು ಸಂತೋಷ ಪಡುತ್ತಿದ್ದರು. ತಕ್ಷಣ ಅವರ ಅಡುಗೆಯ ಬಟ್ಲರನ್ನು ಕರೆದು ನಮಗೆ ಬಿಸಿ ಬಿಸಿಯಾದ ಕಾಫಿಯನ್ನು ಮಾಡಿಕೊಡಲು ಹೇಳಿ, ನಾವು ಆ ರುಚಿಯಾದ ಕಾಫಿಯನ್ನು ಕುಡಿದು ಅವರ ಆಶೀರ್ವಾದ ಪಡೆದು ತೆರಳುತ್ತಿದ್ದ ಆ ದೃಶ್ಯ ಇಂದಿಗೂ ನಮ್ಮ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ.

ಕಾವೇರಿ ಮಾತೆಯ ಫ್ರೇಮಿಂಗ್ ಚಿತ್ರ ಬಿಡುಗಡೆ

ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಚಿತ್ರವನ್ನು ನಾನು ರಚಿಸಿ ಶಿವಕಾಶಿಯಲ್ಲಿ ಅಫ್ ಸೆಟ್ ಮುದ್ರಣದಲ್ಲಿ ವರ್ಣರಂಜಿತವಾಗಿ ಮುದ್ರಿಸಿಯಾಗಿತ್ತು. ನಂತರ ಚಿತ್ರವನ್ನು ಮಡಿಕೇರಿಯಲ್ಲಿ ಬಿಡುಗಡೆ ಮಾಡಬೇಕಿತ್ತು. ನಾನು ಚಿತ್ರ ಸಹಿತ ಫಿ. ಮಾ. ಕೆ. ಎಂ. ಕಾರಿಯಪ್ಪನವರನ್ನು ಭೇಟಿ ಮಾಡಲು ’ರೋಶನಾರ’ ಬಂಗಲೆಗೆ ತೆರಳುವಾಗ ಅವರು ಕಾರಿನಲ್ಲಿ ಕುಳಿತು ಬೆಂಗಳೂರಿಗೆ ಪ್ರಯಾಣ ಬೆಳೆಸಲು ಕಾರ್ ಸ್ಟಾರ್ಟ್ ಮಾಡಿಯಾಗಿತ್ತು. ನಾನು ನಿರಾಶನಾದೆ, ಬಂದ ಕೆಲಸವಾಗಲಿಲ್ಲ ಎಂದು ಮನಸಿನಲ್ಲೇ ಚಿಂತಿಸುತ್ತಿರುವಾಗ, ಅವರು ನನ್ನನ್ನು ಕಾರಿನ ಕಿಟಕಿಯಬಳಿಗೆ ಕರೆದು ಬಂದ ವಿಚಾರ ಏನೆಂದು ಕೇಳಿದಾಗ, ಕಾವೇರಿ ಮಾತೆಯ ಚಿತ್ರವನ್ನು ಅವರಿಗೆ ನೀಡಿ, ಈ ಚಿತ್ರವನ್ನು ತಾವು ಬಿಡುಗಡೆ ಮಾಡಬೇಕೆಂದು ಕೇಳಿಕೊಂಡಾಗ, ಅವರು ಬೆಂಗಳೂರಿನಿಂದ ಒಂದು ವಾರ ಕಳೆದು ಬರುತ್ತೇನೆ, ನಂತರದ ದಿನಾಂಕ ಸಮಯವನ್ನು ನನಗೆ ತಿಳಿಸಿದರು. ಆ ಮೇಲೆ ಅವರು ಪ್ರಯಾಣ ಮುಂದುವರೆಸಿದರು. ಇದು ಕೇವಲ ಎರಡು ನಿಮಿಷದಲ್ಲಿ ನಡೆದ ಘಟನೆಯಾಗಿತ್ತು.

ತಲಕಾವೇರಿ ಪುಣ್ಯಕ್ಷೇತ್ರವನ್ನು ಪಿಕ್ ನಿಕ್ ತಾಣವನ್ನಾಗಿ ದಯವಿಟ್ಟು ಮಾಡಬೇಡಿ

ಮಡಿಕೇರಿಯ ಕಾವೇರಿ ಕಲಾ ಕ್ಷೇತ್ರದಲ್ಲಿ ಚಿತ್ರ ಬಿಡುಗಡೆ ಸಮಾರಂಭ ನಿಶ್ಚಿತ ದಿನದಂದು ನಿಗಧಿತ ಸಮಯದಲ್ಲಿ ಏರ್ಪಾಡಾಗಿತ್ತು. ಫಿ. ಮಾ. ಕೆ. ಎಂ. ಕಾರಿಯಪ್ಪನವರು ಸರಿ ಸಮಯದಲ್ಲೇ ಸಮಾರಂಭಕ್ಕೆ ಆಗಮಿಸಿ "ಕಾವೇರಿ ಮಾತೆ" ಯ ಚಿತ್ರವನ್ನು ಬಿಡುಗಡೆ ಮಾಡಿದರು. ನಾಡಿನ ಜನತೆಗೆ ಶುಭವನ್ನು ಕೋರಿದರು, ಸಭೆಯಲ್ಲಿ ಎಲ್ಲರನ್ನು ಎದ್ದು ನಿಲ್ಲಿಸಿ ಕಾವೇರಿ ಮಾತೆಯ ಬಗ್ಗೆ ಗೀತೆಯನ್ನು ಹೇಳಿ ಎಲ್ಲರನ್ನು ಧ್ವನಿಗೂಡಿಸಿ ಹಾಡಿನ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಅವರ ಗಾಯನ ಶೈಲಿ ನೋಡಿದಾಗ ಅವರಲ್ಲಿ ಇನ್ನು ಯಾವ ಯಾವ ಪ್ರತಿಭೆಗಳು ಅಡಗಿವೆ ಎನ್ನುವ ವಿಚಾರ ನಮ್ಮನ್ನು ಕಾಡುತಿತ್ತು. ಅವರ ಮನದಾಳದಿಂದ  ಹೊರಬಂದ ಮಾತುಗಳು "ತಲಕಾವೇರಿ ಪುಣ್ಯಕ್ಷೇತ್ರವನ್ನು ಪಿಕ್ ನಿಕ್ ತಾಣವನ್ನಾಗಿ ದಯವಿಟ್ಟು ಮಾಡಬೇಡಿ" ಅವರ ಆ ಮಾತುಗಳು ಅವರ ಧ್ವನಿಯಲ್ಲೆ ಬೆಳಗಿನ ಆಕಾಶವಾಣಿಯಲ್ಲಿ ಬಿತ್ತರವಾಗಿ ನಾಡಿನಾದ್ಯಂತ ಜನರು ಆಲಿಸುವಂತಾಯಿತು. ಎಲ್ಲಾ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಅವರ ಸಂದೇಶ ಮುದ್ರಿತವಾಗಿತ್ತು. ನೋಡಲು ನಡೆ ನುಡಿ ಬ್ರಿಟಿಷರಂತೆ ಕಾಣುತಿದ್ದ ಫಿ. ಮಾ. ಕೆ. ಎಂ ಕಾರಿಯಪ್ಪ ನವರು ಕರ್ನಾಟಕದಲ್ಲಿ ಯಾವುದೇ ಸ್ಥಳಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಅವರು ಅಚ್ಚ ಸ್ವಚ್ಚ ಕನ್ನಡ ಭಾಷೆಯಲ್ಲಿ ಭಾಷಣ ಮಾಡುತಿದ್ದರು. ಅಂದಿನ ದಿನಗಳಲ್ಲಿ ಅವರ ಕನ್ನಡ ಭಾಷೆಯ ಬಗ್ಗೆ ಅವರಿಗಿದ್ದ ಅಭಿಮಾನ ಕಾಳಜಿಯನ್ನು ಕಂಡವರು ಇಂದಿಗೂ ಕನ್ನಡ ಭಾಷೆಯ ಬಗ್ಗೆ ಇರುವ ಗೌರವವನ್ನು ಉಳಿಸಿಕೊಂಡಿದ್ದಾರೆ.

ಮಡಿಕೇರಿ ಜೂನಿಯರ್ ಕಾಲೇಜಿನ ಮಹಾದ್ವಾರದ ಕಲಾಕೃತಿಯ ಉದ್ಘಾಟನೆ

ಮಡಿಕೇರಿ ಜೂನಿಯರ್ ಕಾಲೇಜಿನ ಅಂದಿನ ಪ್ರಾಂಶುಪಾಲರಾಗಿದ್ದ ಶ್ರೀ ಪಿ. ಪಿ. ಅಯ್ಯಣ್ಣ ನವರು ಕಲಾಭಿರುಚಿಯುಳ್ಳ ವ್ಯಕ್ತಿತ್ವದವರಾಗಿದ್ದರು. ಅದರ ಫಲವಾಗಿ ಕಾಲೇಜಿನ ಬೃಹತ್ ಮಹಾದ್ವಾರದಲ್ಲಿ ಶಿಲ್ಪ ಕೆತ್ತನೆಯನ್ನು ಮಾಡಿಸಿದರು. ಅದರ ಉದ್ಘಾಟನೆಯನ್ನು ೧೯೭೩ ರಲ್ಲಿ ಅದೇ ವಿಧ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಯಾದ ಫಿ. ಮಾ. ಕೆ. ಎಂ. ಕಾರಿಯಪ್ಪನವರಿಂದ ಮಾಡಿಸಿದರು. ಆ ಸಂದರ್ಭದಲ್ಲಿ ಕಲಾಕೃತಿ ರಚನೆ ಮಾಡುವ ಅವಕಾಶ ನನಗೆ ದೊರೆತುದರಿಂದ, ಸಮಾರಂಭದಲ್ಲಿ ಶಿಲ್ಪಕಲಾವಿದನಾದ ನನ್ನನ್ನು ಫಿ. ಮಾ. ಕಾರ್ಯಪ್ಪನವರಿಂದ ಸನ್ಮಾನಿಸಿ ಗೌರವಿಸಿದರು. ಅಂದಿನ ಆ ಸನ್ಮಾನ ಗೌರವ, ಆಶಿರ್ವಾದ ನನ್ನ ಕಲಾ ಜೀವನದ ಪ್ರಥಮ ಸೌಭಾಗ್ಯವಾಗಿತ್ತು. ಅಂದಿನ ದಿನ ತೆಗೆದ ಸಮಾರಂಭದ ಛಾಯಚಿತ್ರ ಕೊಡಗಿನಲ್ಲೆ ಪ್ರಥಮ ವರ್ಣರಂಜಿತ ಚಿತ್ರವಾಗಿತ್ತು. ಚಿತ್ರತೆಗೆದ ಫಿಲಂನ್ನು ಮುಂಬಯಿಯಲ್ಲಿ ಸಂಸ್ಕರಿಸಿ ಮುದ್ರಣ ಮಾಡಿಸಲಾಗಿತ್ತು.

ಕೊಡಗಿನ ಕ್ರೀಡೆ ಹಾಕಿ ಪಂದ್ಯಾಟಗಳಲ್ಲಿ

ಮಡಿಕೇರಿಯ ಮ್ಯಾನ್ಸ್ ಕಂಪೌಂಡ್ ಕ್ರೀಡಾಂಗಣ ವಿಶ್ವ ಮಟ್ಟದ ಕ್ರೀಡಾ ಪಟುಗಳನ್ನು ನೀಡಿರುವ ಆಟದ ಮೈದಾನ. ಈ ಮೈದಾನದಲ್ಲಿ ಪ್ರತಿವರ್ಷ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಹಾಕಿ ಪಂದ್ಯಾಟಗಳು ನಡೆಯುತ್ತಿರುತ್ತವೆ. ಫಿ. ಮಾ. ಕೆ. ಎಂ.ಕಾರಿಯಪ್ಪನವರು ಪಂದ್ಯಾಟ ವೀಕ್ಷಿಸಲು ಬಂದು ಹಾಕಿ ಮೈದಾನದ ಮಧ್ಯದಲ್ಲಿ ಎರಡೂ ತಂಡದ ಆಟಗಾರರನ್ನು ಹಸ್ತಲಾಘವ ನೀಡಿ ಹುರಿದುಂಬಿಸಿ, ತಾನೇ ಸ್ವತ: ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದು ಚೆಂಡನ್ನು ಹೊಡೆದು ಪಂದ್ಯಾಟಕ್ಕೆ ಚಾಲನೆ ನೀಡುತ್ತಿದ್ದರು.

ಮಡಿಕೇರಿ ದಸರಾ ಉತ್ಸವದಲ್ಲಿ

ಮಡಿಕೇರಿಯಲ್ಲಿ ನಡೆಯುವ ದಸರಾ ಉತ್ಸವದಲ್ಲಿ ರಾತ್ರಿ ಪೂರ್ತಿ ನಡೆಯುವ ಕಲಾಕೃತಿಗಳ ವಿದ್ಯುತ್ ದೀಪಾಲಂಕಾರ ಮಂಟಪಗಳ ಮೆರವಣಿಗೆಯ ಅಂತಿಮ ಘಟ್ಟದಲ್ಲಿ, ಅಕ್ಟೋಬರ್ ತಿಂಗಳಿನ ವಿಪರೀತ ಚಳಿಯಲ್ಲಿಯೂ ಸಹ ಬೆಳಗಿನ ಜಾವ ನಾಲ್ಕು ಗಂಟೆಗೆ ಫಿ. ಮಾ. ಕಾರ್ಯಪ್ಪನವರು ಅಗಮಿಸಿ ಎಲ್ಲಾ ಮಂಟಪಗಳನ್ನು ವೀಕ್ಷಿಸಿ, ಸಂತೋಷ ಪಡುತ್ತಿದ್ದರು. ಎಲ್ಲಾ ಮಂಟಪಗಳ ಸಮಿತಿಯವರಿಗೆ ಧನ ಸಹಾಯ ನೀಡಿ ಪ್ರೋತ್ಸಾಹಿಸುತ್ತಿದ್ದರು.

ತಲಕಾವೇರಿಯಲ್ಲಿ ಪುಣ್ಯಸ್ನಾನ

ಕೊಡಗಿನ ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿ - ಭಾಗಮಂಡಲ ಕ್ಷೇತ್ರ ದಿಂದ ಎಂಟು ಕಿ.ಮೀ. ದೂರದಲ್ಲಿದೆ.  ಈಗ ರಸ್ತೆ ಸುಗಮವಾಗಿದ್ದು ವಾಹನ ಸಂಚಾರಕ್ಕೆ ಯೋಗ್ಯವಾಗಿದೆ. ಬಹಳ ವರ್ಷಗಳ ಹಿಂದೆ ಅರಣ್ಯ ಮಾರ್ಗವಾಗಿ ಕಾಲು ದಾರಿಯಲ್ಲಿ ನಡೆದುಕೊಂಡು ಗುಡ್ಡ ಬೆಟ್ಟವನ್ನು ಏರಿಕೊಂಡು ತಲಕಾವೇರಿಗೆ ಹೋಗಿ ದರ್ಶನ ಮಾಡಿ ಬರಬೇಕಾಗಿತ್ತು. ಈಗಲೂ ಹಲವಾರು ಭಕ್ತರು ನಡೆದುಕೊಂಡೇ ಹೋಗಿ ಬರುತ್ತಾರೆ. ಫಿ. ಮಾ. ಕಾರ್ಯಪ್ಪನವರು ಭಾಗಮಂಡಲದಿಂದ ತಲಕಾವೇರಿಗೆ ನಡೆದುಕೊಂಡು ಹೋಗಿ ತಲಕಾವೇರಿಯಲ್ಲಿ ತೀರ್ಥ ಸ್ನಾನ ಮಾಡಿ ಬರುತ್ತಿದ್ದರು.

ಕೊಡವ ಸಾಂಪ್ರದಾಯಿಕ ಉಡುಪಿನ ಕಟ್ಟಾ ಅಭಿಮಾನಿ

ಕೊಡವ ಜನಾಂಗದ ಪರಂಪರೆಯಲ್ಲಿ ವಿಶಿಷ್ಠ ಸ್ಥಾನವನ್ನು ಪಡೆದ ಕೊಡವ ಉಡುಪು ಪುರುಷರ ದಟ್ಟಿ ಕುಪ್ಪಸ "ಕುಪ್ಪ್ಯಚಾಲೆ" ಯನ್ನು ಕೊಡವರು ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಧರಿಸುತ್ತಾರೆ. ಫಿ. ಮಾ. ಕಾರ್ಯಪ್ಪನನರು ಮದುವೆ ಸಮಾರಂಭಕ್ಕೆ ಹೋಗುವಾಗ ಕಡ್ಡಾಯವಾಗೆ ತಪ್ಪದೆ "ಕುಪ್ಪ್ಯಚಾಲೆ" ಧರಿಸಿಯೇ ಪಾಲ್ಗೊಳ್ಳುತಿದ್ದರು. ದಿ. ಪುಟ್ಟಣ್ಣ ಕಣಗಾಲ್ ರವರ ಶರಪಂಜರ ದಲ್ಲಿ ಕೊಡವ ಮದುವೆ ಸಂದರ್ಭದಲ್ಲಿ ಪಿ. ಮಾ. ಕೆ. ಎಂ. ಕಾರಿಯಪ್ಪನವರು ಕೊಡಗಿನ ಕೊಡವ ಉಡುಪು "ಕುಪ್ಪ್ಯಾ ಚಾಲೆ" ಯನ್ನು ಧರಿಸಿ ಮದುವೆಯಲ್ಲಿ ಪಾಲ್ಗೊಂಡಿರುವುದನ್ನು ವಿಶೇಷವಾಗಿ ಚಿತ್ರಿಕರಿಸಿದ್ದಾರೆ.

’ರೋಶನಾ’ ವಿಶಿಷ್ಟ ವಸ್ತು ಸಂಗ್ರಹಾಲಯ

ಕರ್ನಾಟಕ ಅರಣ್ಯ ಇಲಾಖೆಯಿಂದ ಐವತ್ತು ಎಕರೆ ಸ್ಥಳವನ್ನು ಖರೀದಿಸಿ ರಮಣೀಯ ಕಾನನದ ನಡುವೆ ಬ್ರಿಟಿಷ್ ಆಳ್ವಿಕೆಯಲ್ಲಿ ನಿರ್ಮಿಸಿದ್ದ ಬಂಗಲೆ ಫಿ. ಮಾ. ಕಾರ್ಯಪ್ಪನವರು ವಾಸವಾಗಿದ್ದ ಪ್ರಶಾಂತ ಸ್ಥಳವಾಗಿತ್ತು. ಮಂಜು ಮುಸುಕಿನ ನಡುವಿನಲ್ಲಿ ಮಂಗಳೂರು ಹಂಚಿನ ಮೇಲ್ಛಾವಣಿ, ಒಳಗೆ ಪ್ರವೇಶಿಸುವಾಗ ಕೋಣೆಯ ಒಂದು ಬದಿಯಲ್ಲಿ ಕಟ್ಟಿಗೆಯಿಂದ ಬೆಂಕಿ ಹಾಕಿಕೊಂಡು ಮಡಿಕೇರಿಯ ಚಳಿ ಕಾಯಿಸಿಕೊಳ್ಳಲು ಚಿಮಣಿ ಇರುವ ಗೂಡು. ವೆರಾಂಡದಲ್ಲಿ ಒಂದು ಕಾರ್ಯಪ್ಪನವರಿಗೆ ಕುಳಿತುಕೊಳ್ಳಲು ಆರಾಮ ಕುರ್ಚಿ. ಮನೆಯಲ್ಲಿಯೂ ಸಹ ಸೂಟುಧಾರಿಯಾಗಿ ಇರುತ್ತಿದ್ದರು. ಅವರ ಭೇಟಿಗೆ ವಿಶ್ವದಾದ್ಯಂತದಿಂದ ಹಲವಾರು ಗಣ್ಯರು ಬಂದು ಹೋಗುತ್ತಿದ್ದರು. ನನಗೆ ಅವರನ್ನು ಕಾಣುವ ಅವಕಾಶ ಸಿಗುವ ಸಂದರ್ಭದಲ್ಲಿ ವೆರಾಂಡದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು ಕೈಯಲ್ಲಿ ಒಂದು ಸಿಗಾರ್ ಪೈಪು ಹಿಡಿದುಕೊಂಡಿದ್ದರು. ಕೊಡಗಿನ ಸಂಪ್ರದಾಯದಂತೆ ತಲೆಬಾಗಿ ಅವರ ಕಾಲು ಮುಟ್ಟಿ ನಮಸ್ಕರಿಸಿದಾಗ ಅವರು ಎದ್ದುನಿಂತು ನಮ್ಮನ್ನು ಆಶೀರ್ವಾದ ಮಾಡುತಿದ್ದರು. ನಂತರ ಒಳಗೆ ಕರೆದುಕೊಂಡು ಹೋಗಿ ಸ್ವತ: ತಮ್ಮ ಸಂಗ್ರಹವನ್ನು ವಿಶಿಷ್ಟ ವಸ್ತುಗಳನ್ನು ಪ್ರೀತಿಯಿಂದ ತೋರಿಸಿ ವಿವರಿಸುತ್ತಿದ್ದರು. ಬೇರೆ ಬೇರೆ ದೇಶದ ಅಪರೂಪದ ಯಂತ್ರಗಳ ಮಿನಿಯೇಚರ್ ಗಳು, ಗಡಿಯಾರಗಳು, ಟೆಲಿಫೋನ್ ಗಳು, ವಿಗ್ರಹಗಳು, ಧ್ವಜಗಳು, ನಾಣ್ಯಗಳು, ಕರೆನ್ಸಿಗಳು, ಸಿಗಾರ್ ಪೈಪುಗಳು, ವಿದ್ಯುತ್ - ಬ್ಯಾಟರಿ ಇಲ್ಲದೆ ಚಲಿಸುವ ಪಂಪ್ ಸೆಟ್ ಮಾದರಿಗಳು, ಅವರಲ್ಲಿದ್ದ ಕಲಾ ಪ್ರೇಮ ಸೌಂದರ್ಯ ಪ್ರಜ್ಞೆಗೆ ಸಾಕ್ಷಿಯಾಗಿತ್ತು.

ಅವರನ್ನು ಭೇಟಿಯಾಗಲು ಹೋಗುವಾಗ ಮೊದಲು ಒಮ್ಮೆ ನಮ್ಮ ತಲೆ ಮುಟ್ಟಿ ಸವರಿ ಕೂದಲು ಗಿಡ್ಡವಾಗಿದ್ದು ನೀಟ್ ಕ್ರಾಪ್ ಇದೆಯೇ ಎಂದು ಖಾತ್ರಿ ಪಡಿಸಿ, ಧರಿಸಿರುವ ಬಟ್ಟೆಗಳು ಶುಭ್ರವಾಗಿದ್ದು, ನಡೆ, ನುಡಿ, ವಿನಯ, ಗೌರವ, ಸಮಯ ಪ್ರಜ್ಞೆ ಶಿಸ್ತುಬದ್ಧವಾಗಿ ಇದ್ದರೆ ಮಾತ್ರ ನಾವು ಬಚಾವ್, ಇಲ್ಲದಿದ್ದರೆ ನಮಗೆ ಒಳಗೆ ಪ್ರವೇಶವಿಲ್ಲ. ಅವರ ಶಿಸ್ತಿನಲ್ಲಿ ಕೇವಲ ಕೆಲವು ಅಂಶವನ್ನಾದರು ಪಾಲಿಸಿದರೆ ಸಾಕು, ನಾವು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಿದೆ ಎಂದು ಅವರ ಶಿಸ್ತನ್ನು ಪಾಲಿಸಿದವರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.

ಭಾರತದ ಸೈನ್ಯಕ್ಕೆ ಕೊಡಗಿನ ಪ್ರತಿಯೊಂದು ಕುಟುಂಬದಿಂದ ಸೈನಿಕರ ಸೇವೆ

ವೀರರ ಪರಂಪರೆಯ ನಾಡಾದ ಕೊಡಗು ಜಿಲ್ಲೆ ಭಾರತ ದೇಶದ ಸೈನ್ಯಕ್ಕೆ ಎರಡು ದಂಡನಾಯಕರಾದ ಫಿ. ಮಾ. ಕೆ. ಎಂ. ಕಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ ರವರನ್ನು ನೀಡಿದೆ. ಕೊಡಗಿನಲ್ಲಿ ಗಂಡು ಮಗು ಜನಿಸಿದರೆ ಮನೆಯ ಹೊರಗೆ ಅಂಗಳದಲ್ಲಿ ಮನೆಯ ಯಜಮಾನ ಕೈಯಲ್ಲಿ ಬಂದೂಕ ಹಿಡಿದು ಆಕಾಶದ ಕಡೆಗೆ ಗುಂಡು ಹಾರಿಸಿ ಗಂಡು ಮಗುವಿನ ಜನನದ ಸುದ್ದಿಯನ್ನು ಊರಿನ ಜನತೆಗೆ ತಿಳಿಯುವಂತೆ ಮಾಡುತ್ತಾನೆ. ಹುಟ್ಟಿದಾಗಲೆ ಗುಂಡಿನ ಸದ್ದನ್ನು ಕೇಳಿದ ಮಗು ಮುಂದೊಂದು ದಿನ ಕೈಯಲ್ಲಿ ಬಂದೂಕ ಹಿಡಿದು ದೇಶವನ್ನು ರಕ್ಷಿಸುವ ಸೈನಿಕನಾಗುತ್ತಾನೆ. ಕೊಡಗಿನ ವೀರ ಪುತ್ರರು ದೇಶದ ಗಡಿಯನ್ನು ಕಾಯುತಿದ್ದರೆ. ಸೈನ್ಯದಲ್ಲಿ ಸೈನಿಕನಿಂದ ಹಿಡಿದು ವಿವಿದ ಹುದ್ದೆಯ ಅಧಿಕಾರಿಗಳಾಗಿ, ಕರ್ನಲ್, ಮೇಜರ್, ಬ್ರಿಗೇಡಿಯರ್, ಮಾರ್ಷಲ್, ಕಮಾಂಡರ್, ಕ್ಯಾಪ್ಟನ್.... ಇತ್ಯಾದಿ ಪದವಿಯನ್ನು ಅಲಂಕರಿಸಿ, ಯುದ್ದ ಭೂಮಿಯಲ್ಲಿ ಹೋರಾಡಿದ್ದಾರೆ, ಜಯಗಳಿಸಿದ್ದಾರೆ, ದೇಶಕ್ಕಗಿ ಬಲಿದಾನ ಮಾಡಿ ಹುತಾತ್ಮರಾಗಿದ್ದಾರೆ. ಇವರೆಲ್ಲರಿಗೂ ಸ್ಪೂರ್ತಿಯ ಚಿಲುಮೆ ಫಿ. ಮಾ. ಕೆ. ಎಂ.  ಕಾರ್ಯಪ್ಪನವರಾಗಿದ್ದರು.ಇದನ್ನು ಪೂರ್ಣವಾಗಿ ಅರಿತಿದ್ದ ಭಾರತೀಯ ಸೈನ್ಯ ನಿವೃತ್ತಿಯಾಗಿ ಮಡಿಕೇರಿಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದ ಫಿ.ಮಾ. ಕಾರ್ಯಪ್ಪನವರನ್ನು ೧೯೭೧ ರ ಯುದ್ದ ಸಂದರ್ಭದಲ್ಲಿ  ಸೈನಿಕರನ್ನು ಹುರಿದುಂಬಿಸಿ, ಶತ್ರು ಸೈನ್ಯದೆಡೆಗೆ ಮುನ್ನುಗ್ಗುವಂತೆ ಪ್ರೇರೆಪಿಸುವಂತೆ ಮಾಡಲು ಕರೆಸಿಕೊಂಡಿದ್ದರು.

ಎಂದಿಗೂ ಋಣಮುಕ್ತನಾಗಿ ಜೀವಿಸುವುದೇ ಅವರು ಬಯಕೆಯಾಗಿತ್ತು

ಒಮ್ಮೆ. ಫಿ. ಮಾ. ಕಾರಿಯಪ್ಪನವರು ಅನಾರೋಗ್ಯ ನಿಮಿತ್ತ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿದ್ದರು. ಆ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಜಡಿಮಳೆ ಸುರಿಯುತಿತ್ತು. ಅದರ ಪರಿಣಾಮವಾಗಿ ಅವರ ಮನೆಯ ಒಂದು ಬದಿಯ ಗೋಡೆ ಕುಸಿದು ಬಿದ್ದಿತ್ತು. ಅವರ ಮನೆಯ ಅಡುಗೆಯನಿಂದ ತಿಳಿದ ಮಡಿಕೇರಿಯ ಪುರಸಭಾ ಅಧ್ಯಕ್ಷರಾಗಿದ್ದ ಕೆ. ಎಸ್. ದೇವಯ್ಯನವರು ನೂತನ ಗೋಡೆ ಕಟ್ಟಿಸಿ ಸರಿಪಡಿಸಿದರು. ಫಿ. ಮಾ. ಕೆ. ಎಂ ಕಾರಿಯಪ್ಪ ನವರು ಗುಣಮುಖರಾಗಿ ಹಿಂತಿರುಗಿದ ಮೇಲೆ ನಡೆದ ಘಟನೆಯನ್ನು ತಿಳಿದು, ಕೆ. ಎಸ್. ದೇವಯ್ಯ ನವರಿಗೆ ಒಂದು ಕೃತಜ್ಞತಾ ಪತ್ರ ಜೊತೆಗೆ ತಗಲಿದ ಖರ್ಚು ಒಂದು ಸಾವಿರದ ಐನೂರು ರೊಪಾಯಿ ಚೆಕ್ ಲಗತ್ತಿಸಿ ಕಳುವಿಸಿ ಕೊಟ್ಟಿದ್ದರು. ಎಂದಿಗೂ ಋಣಮುಕ್ತನಾಗಿ ಜೀವಿಸುವುದೇ ಅವರು ಬಯಸುತಿದ್ದರು.

ಮಡಿಕೇರಿಯ ರಸ್ತೆಯಲ್ಲಿ ಎಂ. ವೈ. ಜೆಡ್ ೧೦೦ ನಂಬರಿನ ಕಾರು

ಮಡಿಕೇರಿಯ ರಸ್ತೆಯಲ್ಲಿ ಎಂ. ವೈ. ಜೆಡ್ ೧೦೦ ನಂಬರಿನ ಬ್ಲಾಕ್ ಬ್ಯೂಕ್ ಕಾರು ಚಲಿಸುತಿದ್ದರೆ, ಅದು ಫಿ. ಮಾ. ಕಾರ್ಯಪ್ಪ ನವರದಾಗಿತ್ತು. ಸೂಟುಧಾರಿಯಾಗಿ, ತಲೆಯ ಮೇಲೆ ಹ್ಯಾಟ್ ಧರಿಸಿ ಬಾಯಲ್ಲಿ ಸಿಗಾರ್ ಪೈಪ್ ಇಟ್ಟುಕೊಂಡು ಕುಳಿತು ಚಲಿಸುತಿದ್ದ ಕಾರನ್ನು ನೋಡಿದ  ಮಾರ್ಗದಲ್ಲಿ ನಡೆದಾದುತಿದ್ದ ಜನರು ತಲೆಬಾಗಿ ನಮಸ್ಕರಿಸಿ ಗೌರವ ಸಲ್ಲಿಸುತಿದ್ದರು. ರಸ್ತೆಯಬದಿಯಲ್ಲಿ ಮಕ್ಕಳನ್ನು ಕಂಡರೆ ಕಾರು ರಸ್ತೆಯ ಬದಿಯಲ್ಲಿ ನಿಲ್ಲುತಿತ್ತು. ಕೆಳಗಿಳಿದ ಫಿ. ಮಾ. ಕಾರ್ಯಪ್ಪನವರು ಮಕ್ಕಳನ್ನು ಬಳಿಗೆ ಕರೆದು ನಿಲ್ಲಿಸಿ, ತಮ್ಮ ಕಿಸೆಯಿಂದ ಪೆಪ್ಪರ್ ಮೆಂಟ್ ತೆಗೆದು ಮಕ್ಕಳಿಗೆ ನೀಡಿ ನಂತರ ಅವರ ಕೈಗಳನ್ನು ಎತ್ತಿ "ಜೈ ಹಿಂದ್" ಜೋರಾಗಿ ಹೇಳಿಸಿ ನಂತರ ತಮ್ಮ ಕಾರನ್ನು ಏರಿ ಹೊಗುತಿದ್ದರು.

ಫಿ. ಮಾ. ಕೆ. ಎಂ. ಕಾರಿಯಪ್ಪನವರ ಅಂತಿಮ ಯಾತ್ರೆ

ಭಾರತಾಂಭೆಯ ಮಡಿಲಿನಲ್ಲಿ ಜನಿಸಿದ, ಕಾವೇರಿ ಮಾತೆಯ ವರಪುತ್ರ, ಭಾರತೀಯರು ಕಂಡ ಕಳೆದ ಶತಮಾನದ ಅಪ್ಪಟ ದೇಶ ಪ್ರೇಮಿ ತನ್ನ ಇಳಿವಯಸ್ಸಿನಲ್ಲಿ ಆರೋಗ್ಯ ಕ್ಷೀಣಿಸಿ, ಬೆಂಗಳೂರಿನ ಏರ್ ಫೋರ್ಸ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ತನ್ನ ೯೪ ನೇ ವಯಸ್ಸಿನಲ್ಲಿ ಮೆ ೧೫ -೧೯೯೩ ರಲ್ಲಿ ಕೊನೆಯುಸಿರು ಎಳೆದರು. ಭರತವರ್ಷ ಕಂಡ ದಿವ್ಯ ಚೇತನ ಲೀನವಾಯಿತು. ಸುದ್ದಿ ತಿಳಿಯುತಿದ್ದಂತೆ ನಾಡಿನಾದ್ಯಂತ ಜನರು ತಮ್ಮ ಗೌರವವನ್ನು ಆಶ್ರುತರ್ಪಣದ ಮೂಲಕ ಸಮರ್ಪಿಸಿದರು. ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಮಡಿಕೇರಿಗೆ ತಂದು ಕಾವೇರಿ ಕಲಾ ಕ್ಷೇತ್ರದ ಸಭಾಂಗಣದಲ್ಲಿ ವೇದಿಕೆಯ ಮೇಲೆ ಇಡಲಾಗಿತ್ತು. ಕಾವೇರ್‍ಇ ಮಾತೆಯ ಚಿತ್ರವನ್ನು ಬಿಡುಗಡೆ ಮಾಡಿದ ಸ್ಥಳದಲ್ಲಿ ಅವರ ಕಾರ್ಯಕ್ರಮ ಸಾರ್ವಜನಿಕವಾಗಿ ಕೊನೆಯ ಕಾರ್ಯಕ್ರಮವಾಗಿತ್ತು. ನಂತರ ಅದೇ ಸ್ಥಳದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ನಾಡಿನಾದ್ಯಂತ ಜನರು ಪಡೆದರು. ಮಡಿಕೇರಿಯ ಮುಖ್ಯ ರಸ್ತೆಯಲ್ಲಿ ಭಾರತ ಸೇನೆಯ ಮೂರು ವಿಭಾಗದ ಮುಖ್ಯಸ್ತರೊಂದಿಗೆ ತೆರೆದ ವಾಹನದಲ್ಲಿ ಸಕಲ ಮಿಲಿಟರಿ ಗೌರವದೊಂದಿಗೆ ಸೇನಾ ಪಡೆಯ ಕವಾಯಿತಿನೊಂದಿಗೆ ಅವರು ವಾಸಿಸುತ್ತಿದ್ದ ರೋಶನಾರದ ಬಳಿಗೆ ತರಲಾಯಿತು. ಕೊಡವ ಪದ್ದತಿಯಂತೆ ಶವ ಸಂಸ್ಕಾರದ ವಿಧಿ ವಿಧಾನಗಳನ್ನು ನಡೆಸಿ ಭಾರತ ಸರ್ಕಾರದ ಸಕಲ ಗೌರವದೊಂದಿಗೆ, ಶ್ರೀಗಂಧದ ಚಿತೆಯಲ್ಲಿರಿಸಿ ಅಂತಿಮ ಸಂಸ್ಕಾರ ನಡೆಸಲಾಯಿತು.

ಮಡಿಕೇರಿಯಲ್ಲಿ ಫಿ. ಮಾ. ಕೆ. ಎಂ. ಕಾರ್ಯಪ್ಪ ಪ್ರತಿಮೆ

ಮಡಿಕೇರಿಯ ಪುರಸಭೆಯ ಅಧ್ಯಕ್ಷರಾಗಿದ್ದ ಶ್ರೀ ವಾಸುದೇವ ಮತ್ತು ಗಣ್ಯರಾದ ಬೆನ್ ಗಣಪತಿ, ಶಿಲ್ಪಿಗಳಾದ ಕಾಮಯಂಡ ಮುತ್ತಣ್ಣ ಮತ್ತು ಬಿ. ಕೆ. ಗಣೇಶ್ ರೈ ಹಾಗೂ ಇನ್ನಿತರ ನಿವೃತ್ತ ಸೇನಾ ಅಧಿಕಾರಿಗಳ ನೇತ್ರತ್ವದಲ್ಲಿ ಫಿ. ಮಾ. ಕೆ. ಎಂ. ಕಾರಿಯಪ್ಪ ಪ್ರತಿಮೆ ಸಮಿತಿಯನ್ನು ರಚಿಸಿ ಮುಂಬೈಯಲ್ಲಿ ಕಂಚಿನ ಪ್ರತಿಮೆಯನ್ನು ತಯಾರಿಸಿ ತಂದು,
ಮಡಿಕೇರಿಯ ಫಿ. ಮಾ. ಕೆ. ಎಂ. ಕಾರಿಯಪ್ಪ ವೃತ್ತದ ಬದಿಯಲ್ಲಿ ಸುಂದರ ಹೂದೋಟದ ಮದ್ಯದಲ್ಲಿ ಎತ್ತರದ ಕೆಂಪು ಗ್ರಾನೈಟ್ ಪೀಠದ ಮೆಲೆ ಕಂಚಿನ ಶಿಲ್ಪವನ್ನು ನಿಲ್ಲಿಸಲಾಗಿದೆ. ೧೯೯೫ ರ ಜನವರಿ ೨೮ ಫಿ. ಮಾ. ಕೆ. ಎಂ. ಕಾರಿಯಪ್ಪನವರ ಜನ್ಮದಿನದಂದು ಭಾರತದ ಸೇನಾ ದಂಡನಾಯಾಕರಾಗಿದ್ದ ಜನರಲ್ ಎಸ್ ರಾಯ್ ಚೌಧರಿಯವರು ಸಕಲ ಮಿಲಿಟರಿ ಗೌರವದೊಂದಿಗೆ ಪ್ರತಿಮೆಯನ್ನು ಅನಾವರಣ ಗೊಳಿಸಿದರು. ಸುಂದರ ಮಡಿಕೇರಿ ನಗರವನ್ನು ಬೆಂಗಳೂರು ಮೈಸೂರು ರಸ್ತೆಯ ಮೂಲಕ ಪ್ರವೇಶಿಸುವಾಗ, ಮೊದಲು ಸಿಗುವುದು  ಫಿ. ಮಾ. ಕೆ. ಎಂ. ಕಾರಿಯಪ್ಪ ವೃತ್ತ. ಮಡಿಕೇರಿಗೆ ಬರುವ ಪ್ರತಿಯೊಬ್ಬರು ಪ್ರತಿಮೆಯನ್ನು ನೋಡುತ್ತಾರೆ. ಅದೇ ರಸ್ತೆಯಲ್ಲಿ ಮುಂದೆ ಬರುವಾಗ ಸಿಗುವ ಎರಡನೆಯ ವೃತ್ತ ಜನರಲ್ ತಿಮ್ಮಯ್ಯ ವೃತ್ತ. ಮದ್ಯಭಾಗದಲ್ಲಿ ಜೆನರಲ್ ತಿಮ್ಮಯ್ಯ ನವರ ಪ್ರತಿಮೆ ಸಹ ನೋಡ ಬಹುದಾಗಿದೆ.

ಫಿ. ಮಾ. ಕೆ. ಎಂ. ಕಾರ್ಯಪ್ಪನವರ ಅಂಚೆ ಚೀಟಿ ಬಿಡುಗಡೆ

ಭಾರತ ಸರ್ಕಾರ  ಫಿ. ಮಾ. ಕೆ. ಎಂ. ಕಾರ್ಯಪ್ಪನವರ ಗೌರವಾರ್ಥವಾಗಿ ೧೯೯೫ ರಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿದೆ.

ಫಿ. ಮಾ. ಕೆ. ಎಂ. ಕಾರ್ಯಪ್ಪ ವಿಶ್ವವಿದ್ಯಾಲಯ

ಫಿ. ಮಾ. ಕಾರ್ಯಪ್ಪನವರ ಸ್ಮರಣಾರ್ತವಾಗಿ ಮಡಿಕೇರ್‍ಇಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಉನ್ನತ ದರ್ಜೆಗೇರಿಸಿ ಸ್ನಾತಕೋತರ ಪದವಿಯನ್ನು ಪಡೆಯಲು ಮಂಗಳೂರು ವಿಶ್ವ ವಿಧ್ಯಾಲಯದ ಆಧೀನದಲ್ಲಿ "ಫಿ. ಮಾ. ಕಾರ್ಯಪ್ಪ ವಿಶ್ವವಿದ್ಯಾಲಯ" ಎಂದು ಪುನರ್ ನಾಮಕರಣ ಮಾಡಲಾಗಿದೆ.

ಫಿ. ಮಾ. ಕೆ. ಎಂ. ಕಾರ್ಯಪ್ಪ ಒಳಾಂಗಣ ಕ್ರೀಡಾಂಗಣ

ಮಡಿಕೇರಿ ಕಿರಿಯ ಮಹಾವಿಧ್ಯಾಲಯದ ಅವರಣದಲ್ಲಿ ಫಿ. ಮಾ. ಕಾರ್ಯಪ್ಪನವರ ಸ್ಮರಣಾರ್ತವಾಗಿ ಬೃಹತ್ ಸಭಾಂಗಣ ಮತ್ತು ಓಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ.

ಫಿ. ಮಾ. ಕೆ. ಎಂ. ಕಾರಿಯಪ್ಪನವರು ಜನಿಸಿದ ಶನಿವಾರಸಂತೆ ಗ್ರಾಮದಲ್ಲಿರುವ ಅವರ ಮನೆಯನ್ನು ಕರ್ನಾಟಕ ಸರ್ಕಾರ "ಸ್ಮಾರಕ" ವನ್ನಾಗಿ ಸಂರಕ್ಷಿಸಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ.

ಪ್ರತಿಯೊಬ್ಬ ಭಾರತೀಯರು ಫಿ. ಮಾ. ಕೆ. ಎಂ. ಕಾರಿಯಪ್ಪನವರ, ಸಮಯ ಪಾಲನೆ, ಸಮಯ ಪ್ರಜ್ಞೆ, ದೇಶ ಪ್ರೇಮ, ಮಾತೃ ಭೂಮಿಯ ಮೇಲೆ ಗೌರವ, ಭಾಷಾ ಪ್ರೇಮವನ್ನು ಪಾಲಿಸಿ, ಮುಂದಿನ ಜನಾಂಗಕ್ಕೆ ತಿಳಿಸಿ ಕೊಟ್ಟು ಜೀವನದಲ್ಲಿ ಅಳವಡಿಸಿಕೊಂಡರೆ ಅದೇ ನಾವು ಭಾರತ ದೇಶಕ್ಕೆ ಸಲ್ಲಿಸುವ ಗೌರವವಾಗಿದೆ.

’ಶುದ್ಧ ಹಸ್ತ, ಕಷ್ಟಸಹಿಷ್ಣುತೆ, ಕರ್ತವ್ಯ ನಿಷ್ಠೆ, ಸಮಯಪಾಲನೆ, ದೇಶಭಕ್ತ, ಆಡಳಿತಗಾರ, ಶಿಸ್ತಿನ ಸಿಪಾಯಿ, ಧೀಮಂತ, ಮಹಾತೇಜಸ್ವಿ - ಶತಕೋಟಿಗೊಬ್ಬರೆ ಜನ್ಮತಾಳುವುದ

ಜೈ ಹಿಂದ್

ಬಿ. ಕೆ. ಗಣೇಶ್ ರೈ
ಪೂರ್ವ ಅಧ್ಯಕ್ಷರು
ಕರ್ನಾಟಕ ಸಂಘ ಶಾರ್ಜಾ
ಅರಬ್ ಸಂಯುಕ್ತ ಸಂಸ್ಥಾನ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಬಿ. ಕೆ. ಗಣೇಶ್ ರೈ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-28

Tell a Friend

ಪ್ರತಿಸ್ಪಂದನ
Kandavara Mohan Salian, Bahrain
2010-02-16
Hello Mr Ganesh Rai....congratulations!!! good beginning..keep up the good work..Please continue to and write more this is just opened one page of life style ..best of luck always.
Uday Kumar Kateel, Kateel
2010-01-30
What a Amazing Personality !! The younger generation of today have lot to learn from this Great Soul.. Many thanks for the good writeup.. Yes , HE is one in Crores .. Jai Hind..
Harish Kodi, Kodagu
2010-01-30
I Salute this Great man and with his blessings,I can believe that my friend Ganesh Rai is doing a fantastic job of reminding this great man to the new generation with his rare collection of photos, thanks to Gulf kannadiga for publishing this article during his 93rd Birthday remembrance.
ಕೆ. ಎಸ್. ಮುತ್ತಣ್ಣ, ಮಡಿಕೇರಿ, ಕೊಡಗು
2010-01-29
ಯುದ್ದ ಸಂದರ್ಭದಲ್ಲಿ ಸೈನಿಕರನ್ನು ಯುದ್ದಭೂಮಿಗೆ ಕರೆದುಕೊಂಡು ಹೋಗುವ ರೈಲು ತಮಿಳುನಾಡಿನಿಂದ ಕಾಶ್ಮೀರಕ್ಕೆ ಚಲಿಸುವಾಗ ಮದ್ರಾಸ್ ರೈಲು ನಿಲ್ದಾಣದಲ್ಲಿ ಸೈನಿಕರಿಗೆ ಎರಡು ರೂಪಾಯಿಗೆ ಚಹ ಸಿಗುತ್ತದೆ. ಮದ್ಯಪ್ರದೇಶದಲ್ಲಿ ಚಹ ಒಂದು ರೂಪಾಯಿಗೆ ದೊರೆಯುತ್ತದೆ. ಉತ್ತರ ಪ್ರದೇಶದಲ್ಲಿ ಐವತ್ತು ಪೈಸೆಗೆ ಚಹ. ಅದೇ ರೈಲು ಮುಂದೆ ಕಾಶ್ಮೀರದ ಕಡೆಗೆ ಚಲಿಸುವಾಗ ಸೈನಿಕರಿಗೆ ಚಹಾ ಉಚಿತ! ನಂತರದ ಎಲ್ಲಾ ನಿಲ್ದಾಣದದಲ್ಲಿ ಬಾಸ್ಕೇಟಿನಲ್ಲಿ ಹಣ್ಣು ತಿಂಡಿ ತುಂಬಿಸಿ ಸೈನಿಕರಿಗೆ ನೀಡುತ್ತಾರೆ. ಹೆಂಗಸರು ತಟ್ಟೆಯಲ್ಲಿ ಜ್ಯೋತಿ ಇಟ್ಟು ಸೈನಿಕರಿಗೆ ಆರತಿ ಎತ್ತಿ, ಹಣೆಗೆ ಕುಂಕುಮ ಹಚ್ಚಿ ನಮ್ಮನ್ನು, ದೇಶವನ್ನು ರಕ್ಷಿಸುವ ವೀರ ಯೋಧರಿಗೆ ಹರಸಿ ಕಳುವಿಸಿ ಕೊಡುತ್ತಾರೆ. ಯುದ್ದ ಭೂಮಿಯಲ್ಲಿ ಸೈನಿಕರಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದ ಭಾವವಿಲ್ಲ ಅಲ್ಲಿ ಎಲ್ಲಾ ಸೈನಿಕರು ಭಾರತೀಯರೆಂಬ ಒಂದೇ ಮನದಲ್ಲಿ ವೀರ ಯೋಧರಾಗಿ ದೇಶವನ್ನು ರಕ್ಷಿಸುವ ಗುರಿಯನ್ನು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪನವರಿಂದ ದೇಶ ಪ್ರೇಮವನ್ನು ನಾವು ಮೈಗೂಡಿಸಿಕೊಂಡಿದ್ದೇವೆ. ತುಂಬಾ ಹತ್ತಿರದಿಂದ ನೋಡಿದ ವೀರ ಸೇನಾನಿಯನ್ನು ಮತ್ತೊಮ್ಮೆ ನೋಡಲು ಚಿತ್ರದಲ್ಲಿ ಲೇಖನ ಸಹಿತ ಪ್ರಕಟಿಸಿದ ಆತ್ಮೀಯ ಮಿತ್ರರಾದ ಗಣೇಶ್ ರೈ ಯವರಿಗೆ ಮತ್ತು ಗಲ್ಫ್ ಕನ್ನಡಿಗದ ಸಂಪಾದಕರು ಮತ್ತು ತಂಡಕ್ಕೆ ಶುಭವಾಗಲಿ.
ಪ್ರಕಾಶ್, ಉಡುಪಿ, ದುಬಾಯಿ
2010-01-29
ಭಾರತ ದೇಶದ ಗಣರಾಜ್ಯೋತ್ಸವದ ಕೊಡುಗೆಯಾಗಿ ದೇಶಪ್ರೇಮಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪನವರ ಲೇಖನ ಅಪರೂಪದ ಚಿತ್ರಗಳೊಂದಿಗೆ ಪ್ರಕಟಿಸಿ ಗಲ್ಫ್ ಕನ್ನಡಿಗ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ಶ್ರೀ ಬಿ. ಕೆ. ಗಣೇಶ್ ರೈ ಮತ್ತು ಶ್ರೀ ಬಿ. ಜಿ. ಮೋಹನ್ ದಾಸ್ ಹಾಗೂ ಗಲ್ಫ್ ಕನ್ನಡಿಗ ತಂಡಕ್ಕೆ ಅಭಿನಂದನೆಗಳು! ಜೈ ಹಿಂದ್.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಕರಾವಳಿಗೆ ಬಜೆಟ್ ಕೊಡುಗೆ ಘೋಷಣೆ ಮಾತ್ರ
»ಭಾರತ ದೇಶದ ಒಡಲು ಸರ್ವ ಧರ್ಮಗಳ ಮಡಿಲು
»‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!
»ಭೂಸ್ಖಲನ: ಯಾರಿಗೆ ಬೇಕು ಈ ಲೋಕ?
»ನೀವು ಎಲ್ಲೇ ಇರಿ ಹುಸೇನ್, ಕಲೆಯ ಅರಳಿಸಿ: ಕತಾರ್ ರಾಷ್ಟ್ರೀಯತೆಯನ್ನು ಒಪ್ಪಿಕೊಳ್ಳುವ ನಿರ್ಧಾರ ಅವರದೇ ಸ್ವತಂತ್ರ ಬಯಕೆ
»ಪವಿತ್ರ ನದಿಗಳಲ್ಲಿ ಒ೦ದಾದ ಗ೦ಗೆಯಲ್ಲಿ ಹರಿಯುತ್ತಿದೆ ಅಪವಿತ್ರ ನೀರು
»ಯಾರಿಗೆ ನ್ಯಾಯ ಸಿಕ್ಕಿದೆ ? ಹೋರಾಟದ ಕಿಡಿ ಜ್ವಾಲೆಯಾಗಬೇಕೇನೋ!
»ಕ್ರಿಕೆಟ್ ಗೂ ಯಕ್ಷಗಾನಕ್ಕೂ ಏನು ಸಂಬಂಧ ಬಲ್ಲಿರೇನಯ್ಯ...?
»ಬೆ೦ಗಳೂರಿನಿ೦ದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ
»ಅ೦ತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ನಾಸಾದ ಅಭಿವ್ರದ್ದಿಯ ಹೆಜ್ಜೆಗಳು
»ವೀರಪ್ಪ ಮೊಯಿಲಿ (ವ್ಯಕ್ತಿ ವಿಚಾರ)
»ಸೌ೦ದರ್ಯ ಆರಾಧಕರ ಉಪಾಸನೆಯಾದ ಮುಳ್ಳಯ್ಯನಗಿರಿ ಬೆಟ್ಟ
»ವರುಷ ನೂರು ತುಂಬಿದ ಸಂಭ್ರಮದಲ್ಲಿ...ಎಲ್ಲರ ಪ್ರೀತಿಯ ವಡ್ಲಿ ಮಾಯ್ (ಅಜ್ಜಿ ಸಿಸ್ಟರ್)
»ಚೇರ್ಕಾಡಿ ಎಂಬ ರೈತ ಸಂತ
»ವಿಶ್ವಪ್ರವಾದಿಯ ವಿಶ್ವಮಾನವ ದರ್ಶನ
»ಭಟ್ಕಳ ಎಂದರೆ ಮಾಧ್ಯಮಗಳಿಗೇಕಿಷ್ಟು ಮತ್ಸರ???
»ವಿದ್ಯುತ್ತಿನ ನಾಡು ಈ ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ಬೀಡು
»ಕಾನೂನಿನ ಹೆಸರಿನಲ್ಲಿ ಮಕ್ಕಳಿಗೆ ಅನ್ಯಾಯ
»ಮೈಸೂರು ಪ್ರವಾಸೋದ್ಯಮಬೇಕಿದೆ ಉತ್ತೇಜನ
»ಅಭಿವ್ರದ್ದಿಯ ಹೆಸರಿನಲ್ಲಿ ತನ್ನ ಮೂಲ ಸ್ಥಾನದಿ೦ದ ಕಣ್ಮರೆಯಾಗುವಳೇ ಗಂಗಾ?
»ದೇಗುಲದಲ್ಲಿ ಸೂರ್ಯ ರಶ್ಮಿ
»ಉಡುಪಿ ಪತ್ರಿಕಾರ೦ಗ ಭೀಷ್ಮ ಎ೦ದೇ ಖ್ಯಾತರಾಗಿದ್ದ ನಿಷ್ಠುರವಾದಿ ಬನ್ನಂಜೆ ರಾಮಾಚಾರ್ಯ
»‘ಸಂಸ್ಕೃತಿ ಗ್ರಾಮ’ದ ಅಪೂರ್ವ ಮ್ಯೂಸಿಯಂ
»ಹೊಯ್ಸಳರ ಶಿಲ್ಪ ಕಲಾ ವೈಭವದ ಸ೦ಕೇತ ಅಣ್ಣಿಗೇರಿಯ ಅಮೃತೇಶ್ವರ
»ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರವಾಸಿ ಸ್ಥಳಗಳು
»ಮೋಡಗಳ ಅರಮನೆಯಲ್ಲಿ ಕುಂದಾದ್ರಿ ಸ್ಪೆಷಲ್
»ಗೂಗಲ್‌ನಲ್ಲೇನು ಗುಡುಗುತ್ತಿದೆ......‘ಬಝ್’ ?
»ಚಳಿಗಾಲದಲ್ಲಿ ಕೊಡಚಾದ್ರಿಯ ಸೊಬಗನ್ನು ನೋಡಲು ಬಲು ಚೆ೦ದ
»ಬೀ ಈಟರ್ ಎಂಬ ತಿನ್ನುಬಾಕ ಹಕ್ಕಿ
»ಫೇಸ್ ಬುಕ್ ಮುಸ್ಲಿಂ ವಿರೋಧಿ?
»ಉಮೇಶ ರಾವ್ ಎಕ್ಕಾರು ಎಂಬ ಮಾತಾಡುವ ಇತಿಹಾಸ
»ಸರಕಾರಿ ಕನ್ನಡ ಶಾಲೆಗಳನ್ನು ಏಕೆ ಮುಚ್ಚಬೇಕು?
»ಪರಿಸರ ಪ್ರವಾಸಿ ತಾಣ ‘ಸಹಸ್ರ ಲಿಂಗ’
»ಸಾಗರಾಳದ ಕೇಬಲ್ ಸುನಾಮಿ ಅನ್ವೇಷಕ!
»ಭಾರತದ ರಾಜಕಾರಣ ಮತ್ತು ಮುಸ್ಲಿಮರ ತುಷ್ಟೀಕರಣ!
»ಕೆರೆ ಸುತ್ತ ಹಸಿರು, ಶುಭ್ರ ಆಕಾಶದಲ್ಲಿ ಕೈ ಬೀಸಿ ಕರೆಯುವ ಬಾನಾಡಿ ಇದುವೇ ಪಕ್ಷಿಗಳ ತಾಣ ರ೦ಗನತಿಟ್ಟು
»ಚೇರ್ಕಾಡಿ ರಾಮಚಂದ್ರ ರಾಯರಿಗೆ ಸ್ವಾವಲಂಬಿ ಕೃಷಿಕ ಪ್ರಶಸ್ತಿ
»ಮಹಿಳಾ ಚಳವಳಿ - ಮಹಿಳಾ ಅಧ್ಯಯನ: ಸೇತುವೆಯಾಗುವ ಯತ್ನ...
»ಮುಸ್ಲಿ೦ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿರುವ ಕೆಲವು ದೇವಾಲಯಗಳು
»ಮುಸ್ಲಿ೦ ಪಾಷಾ ಅಯ್ಯ೦ಗಾರ್‌ನ ಹ್ರದಯ ಪುರಾಣ
»ಶಿಗ್ಗಾಂವಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಗಾ೦ಧೀಜಿ ಕನಸಿನ ` ಸ್ವಾವಲ೦ಬಿ ಶಿಲಾಗ್ರಾಮ' ಸ್ರಷ್ಟಿ
»ದೇವಿ ಯಾನ ಅಮೃತಪಾನ : ಇದು ಚಂಡಿಕಾಂಬ ತೀರ್ಥಧಾರಾ
»ಮ೦ಜೇಶ್ವರ ಕಾಲೇಜಿನ ಟೂರ್ ಹುಡುಗರ ಉತ್ಸಾಹದಲ್ಲಿ ನಿರ್ಮಾಣವಾದ ‘ಏರುಮಾಡ’
»ಮರಳಿಗೆ ರೂಪ ನೀಡುವ ಕಲಾವಿದ ಪಟ್ನಾಯಕ್
»ಸೇವೆಯಲ್ಲಿಯೇ ಸುಖ ಕಂಡ ಜಯಮ್ಮ
»ಬ್ರಹ್ಮಪುರ: 450 ವರ್ಷಗಳ ಇತಿಹಾಸವಿರುವ ದೇಶಮುಖ ದರ್ಬಾರ್
»ವೋಟ್ ಫಾರ್ ಕಾಸರವಳ್ಳಿ; ಘಟಾನುಘಟಿಗಳು ಹುಟ್ಟುವುದೇ ಹೀಗೆ
»ಕರ್ನಾಟಕವನ್ನೇ ಅವಲ೦ಭಿಸಿ ಅಭಿವ್ರದ್ದಿ ಹೊ೦ದುತ್ತಿರುವ ಗೋವಾದಲ್ಲಿ ಕನ್ನಡಿಗರಿಗೆ ಹೊಲಸು ಜನರೆಂಬ ಬಿರುದು!
»ತಾಂತ್ರಿಕ ಪ್ರಪಂಚದ ಮಾಂತ್ರಿಕ ಈ ಮೂರ್ತಿ
»ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಅಪ್ರತಿಮ ವೀರ ಸೇನಾನಿ, ದೇಶ ಭಕ್ತ, ಕನ್ನಡಿಗ, ಕೊಡಗಿನ ವರ ಪುತ್ರ.
»ದೇವರಿಲ್ಲದ ಗುಹಾಂತರ ಗುಡಿ
»ಕರ್ನಾಟಕದ ಅತೀ ಎತ್ತರದ ಬೆಟ್ಟ ಎ೦ಬ ಖ್ಯಾತಿ ಹೊ೦ದಿದ ಮುಳ್ಳಯ್ಯನ ಗಿರಿ ಬೆಟ್ಟ
»ಗಣರಾಜ್ಯೋತ್ಸವವಾದ ಇ೦ದು ಸ್ವಾತಂತ್ರ್ಯ ಹೋರಾಟಗಾರರ ಸಾವಿರದ ಕನಸುಗಳನ್ನು ನೆನೆಸೋಣ
»ಬೇಕಾಗಿದ್ದಾರೆ-ಸೋಮಾರಿಗಳು : ಸುಮ್ಮನೆ ಮಲಗುವುದೇ ಕೆಲಸ
»ಗಾಯಕ, ಬೋಧಕ, ವಾಗ್ಗೇಯಕಾರ, ನಟ ಹಾಗೂ ಸಂಘಟಕರಾಗಿ ಸಂಗೀತ ಕ್ಷೇತ್ರದಲ್ಲಿ ಬಹು ವಿಧ ಸೇವೆ ಸಲ್ಲಿಸುತ್ತಿರುವ ನಾದ ಕಿಂಕರ ಆರ್.ಕೆ.ಪದ್ಮನಾಭ
»ವಿದೇಶದಲ್ಲಿ ದೇಸಿ ನಾದ ನುಡಿಸಿದ ಪನ್ನಾಲಾಲ್ ಘೋಷ್
»ಫಾಲ್ಕೆ ಪುರಸ್ಕೃತ ಸಿನೆಛಾಯಾಗ್ರಾಹಕ ವಿ. ಕೆ. ಮೂರ್ತಿ
»ಮೊರೊಕ್ಕೋದ ಮರ ಹತ್ತುವ ಕುರಿಗಳು
» ಭಾರತೀಯ ಚಿತ್ರರಂಗಕ್ಕೆ ಕನ್ನಡಿಗರ ಕೊಡುಗೆ
»ಬೀದರ್ : `ವಲಿ' ದರ್ಗಾದ ಗೋಡೆಗಳ ಮೇಲೆ ಅರಳಿದ ಕಾವ್ಯ ಕಲೆ
»ಖಾಲಿಯಾದ ಮನೆಯಲ್ಲಿ ನೆನಪುಗಳ ಮೆರವಣಿಗೆ
»ಬಹು ಜನರ ಬಾಳಿಗೆ ಬೆಳಕಾದ ನಿಷ್ಠಾವಂತ ಅಧಿಕಾರಿ ಚಂದಪ್ಪ ಪಾಟೀಲ
»ಮದರಸಾಗಳ ಸುಧಾರಣೆ ಮುಸ್ಲಿಮರಿಗೇ ಒಳ್ಳೆಯದು
»ಶಿವಗಂಗೆ: ಧರ್ಮ, ಇತಿಹಾಸ, ಸಂಸ್ಕೃತಿಗಳ ಸಂಗಮ
»ಶಿರಾಡಿ ಘಟ್ಟದ ಸುಂದರಿಯರು
»ರಮ್ಯಾ,ರಾಜು ಶೆಟ್ಟರ ರೊಮ್ಯಾಂಟಿಕ್ ಪ್ರಣಯದಲ್ಲಿ ಅನಾಥೆಯಾದ ಸಫಿಯಾ...
»3 ಈಡಿಯಟ್ಸ್ - ನಿಜವಾಗಿಯೂ ಇದು ಒಂದು ವಾಸ್ತವ ವ್ಯಥೆ
»ಮಾಗಡಿ ಡೇಸ್ : ಮೋಡಿ ಮಾಡುವ ಕತೆಗಳಿವೆ
»ಕರಾವಳಿಗರ ಈ ಸಾಧನೆ ಕರ್ನಾಟಕಕ್ಕೇಕೆ ಪಸರಿಸಬಾರದು?
»ದೇಹ ಪ್ರೀತಿಸಿದ ವಜ್ರದೇಹಿ : ಏಕಲವ್ಯ ಪ್ರಶಸ್ತಿ ವಿಜೇತ ದಾವಣಗೆರೆಯ ಕರಿಬಸಪ್ಪ
»ಜಲಸ್ತಂಭನದ’ ವಿದ್ಯೆಯಲ್ಲಿ ಮಹಾಭಾರತದ ದುರ್ಯೋಧನನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಕನ್ನಡಿಗ ಗಿನ್ನಿಸ್ ದಾಖಲೆಯತ್ತ
»‘ಸಿತಾರ್, ಪುಸ್ತಕಗಳೇ ನನ್ನ ಸಂಗಾತಿ...’ ಶಾ೦ತಾಬಾಯಿ
»ಬದುಕಿನ ಸತ್ಯತೆ.
»ಒಂದು ಐತಿಹಾಸಿಕ ಸ್ಮಾರಕ ಎಂಬಂತೆ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಮಹಾಮನೆ
»ಇ೦ದಿಗೂ ತಮ್ಮ ಆಕರ್ಷನೆಯನ್ನು ಉಳಿಸಿಕೊ೦ಡಿರುವ ಸಿಹಿಮೊಗೆಯ ಧಾರ್ಮಿಕ ತಾಣಗಳು
»ಪ್ರವಾಸಿಗರನ್ನು ಕೈಬೀಸಿ ಕರೆಯುವ ವಿಶ್ವ ವಿಖ್ಯಾತ ಜೋಗಜಲಪಾತ
»ಬಂತು ಹೊಸವರ್ಷ 2010 : ಸಡಗರಕೆ ಗ್ರಹಣದ ಮರೆ
»ಮಂದಿರ ಮಸೀದಿಗಳು ಆರ್ಥಿಕ ಲಾಭಕ್ಕಾಗಿ ನಿರ್ಮಿಸಲಾಗಿವೆಯೇ...?
»ಬೆಂಗಳೂರು - ಮಂಗಳೂರು ಹಗಲು ರೈಲು : ಬಿಂದಾಸ್ ಪ್ರಯಾಣ
»ಹಟ್ಟಿ ಚಿನ್ನದ ಗಣಿಯ ಇತಿಹಾಸ
»ಬ್ರಾಹ್ಮಣರು ಉಂಡ ಎಲೆ ಹೊತ್ತರೆ ರೋಗ ವಾಸಿ!
»ಡಾ.ಡಿ.ವೀರೇ೦ದ್ರ ಹೆಗ್ಡೆಯವರ ಚೆನ್ನುಡಿ: ಮಾನವತೆಯ ೫ ಗುಣಗಳು
»ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಸತ್ಯನ್
»ದೇವಪುತ್ರ ಮಾನವ ಪ್ರೇಮಿ ಏಸುಕ್ರಿಸ್ತ
»ಶರ್ಮಿಳಾ ಚಾನು : ಮಣಿಪುರದ `ಉಕ್ಕಿನ ಮಹಿಳೆ'
»ಬೆಂಗಳೂರು-ಕಾರವಾರ ಬೇಸಗೆ ರಜಾ ರೈಲಿಗೆ ಪ್ರವಾಸಿಗರ ಸುಗ್ಗಿ !
»ಚಂದ್ರಗುತ್ತಿಯ ತ್ರಿಶೂಲ ಹರಕೆ
»ಸಾವಿರಾರು ರೈತ ಕುಟು೦ಬಗಳಿಗೆ ಆಸರೆಯಾಗಿರುವ ಸೂಳೆಕೆರೆ ಎಂಬ ‘ಸಾಗರ’
»ಪರ್ವತಾರೋಹಣ ಮಾಡುವವರಿಗೆ ಸಾವನದುರ್ಗ ಒಂದು ಅದ್ಭುತವಾದ ಸ್ಥಳ
»ಕುಖ್ಯಾತ ವೀರಪ್ಪನ್ ಸ್ರಷ್ಟಿಸಿದ ತಾಣ ಈಗ ಪ್ರವಾಸಿ ತಾಣವಾಗುತ್ತಿದೆ
»ಇಂಟರ್‌ನೆಟ್ ಜಾಲಾಡುವ ವ್ಯಸನ..
»ಆರ್ಥಿಕ ಹಿಂಜರಿತಕ್ಕೆ ಹಿಂದಡಿಯಿಡದ ಪ್ರವಾಸೋದ್ಯಮ
»ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಉಂಟಾಗಬಹುದೇ ?
»ಅಬ್ಬರಿಸಿದ ಲಿಬಾರ್ಹಾನ್ - ಮಾನ ಮುಚ್ಚಿಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿ, ಆರ್‌ಎಸ್ಸೆಸ್ಸ್
»ಟಾಯ್ಲೆಟ್ ರೋಲ್ ಮತ್ತು ಪೀತ ಪತ್ರಿಕೆಗಳು..
»ಅತಿ ನವ್ಯ ರಸಕಾವ್ಯ: ಕಾಷ್ಠಶಿಲ್ಪದ ಅತ್ಯದ್ಭುತ: ಶಿರೂರು ಮಠ
»ಲವ್ ಜಿಹಾದ್-ಹೀಗೂ ಉಂಟೇ....!? ಡಬ್ಬ ಸ್ಟೋರಿಯ ಸುತ್ತ.....!
»‘ಪ್ರತಿಭೆ’ಗೆ ಬೇಕಿದೆ ವೈದ್ಯಕೀಯ ನೆರವು
»ಅತ್ಯಂತ ವಿವಾದಾಸ್ಪದ ಮತ್ತು ಜೀವಭಯ ಎದುರಿಸುತ್ತಿರುವ ಲೇಖಕಿ ತಸ್ಲಿಮಾರ ನಿಜ ಕತೆ ಇಲ್ಲಿದೆ
»ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸರ್ವತ್ರ ಮೌನ ಸಮ್ಮತಿ
»‘ಗಂಡು ಕಲೆ’ಯಲ್ಲಿ ಮಹಿಳೆ ಅಟಾಟೋಪ
»ದೀಪದಿಂದ ದೀಪ ಹಚ್ಚಿಸಿ ಸಮಾಜ ಸೇವೆಯಲ್ಲಿ ತೊಡಗಿದ ಬೆ೦ಗಳೂರಿನ ನಿವಾಸಿ
»ಅಂಗವಿಕಲರು ವಿಕಲಚೇತನರೇ?
»ಉಡುಪಿ: ಎರಡು ತಲೆ ಹಾವಿಗೆ ಬಂತು ಸಂಚಕಾರ
»ಕೊಲ್ಲೂರಿನ ಕಾನನದಲ್ಲಿ ಕೊಡಚಾದ್ರಿಯ ಕನಸುಗಳು
»ಎಂಜಲು ಎಲೆ ಮೇಲೆ ಉರುಳು ಸೇವೆ! ಧರ್ಮದ ಹೆಸರಿನಲ್ಲಿ ಇಂತಹ ಮೌಢ್ಯವೇ?
»ಅವನತಿಯತ್ತ ಕದಂಬರ ‘ವೀರಭದ್ರ’ ದೇವಸ್ಥಾನ
»ಕರುಣಾಜನಕ ಕಥೆ ಹೇಳುವ ಪುರಾತನ ಬಾವಿ
»ಬಿಜಾಪುರ: ಕಂದಮ್ಮಗಳ ಎಸೆಯುವ ಹೀಗೊಂದು ವಿಶಿಷ್ಟ ಬಗೆಯ ಹರಕೆ!
»ನೂಯಿ ಮೋಡಿ: ಪೆಪ್ಸಿಕೋದ ಪ್ರಥಮ ಮಹಿಳಾ ಸಿಇಒ ಮ೦ಗಳೂರಿನ ಸೊಸೆ
»ಬಯಲು ಮುಗಿದಿತ್ತು, ಆಲಯ ಕರೆದಿತ್ತು...
»ಈ ಪರಿಷತ್ ಚುನಾವಣೆ ನಡೆಯೋದ್ಹೇಗೆ ಗೊತ್ತಾ?; ಈ ರಾಜಕೀಯ ರಣಕಣದ ಗಣಿತ ಲೆಕ್ಕಾಚಾರ ಇಲ್ಲಿದೆ
»ವಿಶೇಷ ಮಕ್ಕಳಿಗಾಗಿ ‘ವೀಣಾ ಅರ್ಪಣ್’
»ವಿಶ್ವದಾಖಲೆ ಯತ್ನ : ಏಡ್ಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಹಿ ಮತ್ತು ಸಂದೇಶ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ
»ಮುಸ್ಲಿಂ ವಸತಿ ಶಾಲೆಯ ಮುಗಿಯದ ಗೋಳು: ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೈರು; ಮುಖ್ಯ ಶಿಕ್ಷಕಿಯ ಅಮಾನತಿಗೆ ಆಗ್ರಹ
»ಬಾಬಾ ಬುಡಾನ್‌ಗಿರಿ ವಿವಾದ: ಮತ್ತೊಮ್ಮೆ ನ್ಯಾಯಾಂಗ ನಿಂದನೆ?
»ವಾಟಾಳ್ ‘ಗರುಡ’ ಹಾರುತ್ತಿದೆ
»ಮಾಧ್ಯಮ ಲೋಕದ ಆಶಾಕಿರಣ ಶ್ರೀ ಶಂಶೀರ್ ಬುಡೋಳಿ..
»ಬೇರುಗಳಿಲ್ಲದ ಅರ್ಥವ್ಯವಸ್ಥೆ
»ಚಿತ್ರಬೇಟೆಗೆ ಪ್ರಶಸ್ತಿಯ ಕಿರೀಟ
»ಅಂಗವಿಕಲತೆ ಮೆಟ್ಟಿನಿಂತ ವ್ಯಂಗ್ಯಚಿತ್ರ ಕಲಾವಿದ ರಮೇಶ್
»ಮಳ್ಳ ಮಳ್ಳಿ ತರಹ ಗಡಿಯೊಳಗೆ ನುಸುಳಿ ಇನ್ನೊಂದು ದೇಶಕ್ಕೆ ನುಗ್ಗುವುದು ಮಹಾಪರಾಧ
»ನೌಕಾಪಡೆ ಮುಕುಟಕ್ಕೆ ಮಹಿಳಾ ‘ಗರಿ’
»ಪ್ರೇಮ ವಂಚನೆಯ ಕುರಿತು ಡಾ.ಜಗದೀಶ್ ಅವರೊ೦ದಿಗೆ ಸ೦ದರ್ಶನ
»ತ್ಯಾಗ-ಬಲಿದಾನಗಳ ಬಕ್ರೀದ್
»ಧಾರ್ಮಿಕ ಪ್ರವಾಸಿ ತಾಣಗಳ ನೆಲೆ ಈ ತುಮಕೂರು ಜಿಲ್ಲೆ
»ನಿಮ್ಮ ಬೇಸರ ಕಳೆದುಕೊಳ್ಳಲು, ನಿಸರ್ಗದ ಮಡಿಲಿನಲ್ಲಿ ಮಗುವಿನಂತೆ ಮೈ ಮರೆಯಲು ಬನ್ನಿ ಶಿರಲೆ ಫಾಲ್ಸ್‌ಗೇ.
»ಪರಿಸರ ಪ್ರೇಮಿಗಳಿಗೆ ಇಷ್ಟವಾಘುವ೦ತಹ ಸ್ಥಳ ಅಯ್ಯನಕೆರೆ, ಆಹಾ ಓಹೋ ಇದೇನು ನಡೆ!
»ಗ್ರಾಮೀಣ ಕಾಲೇಜಿಗೂ ಬಂತೂ ಆನ್‌ಲೈನ್ ಪರೀಕ್ಷೆ
»ಯಾಕಿಂಗಾಡ್ತಾರೋ ಈ ಹುಡುಗಿರು...
»ಉತ್ತರ ಕನ್ನಡದ ನೆರೆ-ಪೀಡಿತ ಪ್ರದೇಶಗಳನ್ನು, ಖಾಯಂ ನಿರಾಶ್ರಿತರ ಜಿಲ್ಲೆ ಎಂದು ಘೋಷಿಸಲಿ
»ಹುಲಿ, ಹುಲ್ಲು , ಇಲಿ, ಗೆದ್ದಲು, ಕೋಲ... ಇವರೊಳಗೂ ಇಂತಿಂಥ ಸಂಬಂಧವಯ್ಯ
»ಕಣಿವೆಯಲ್ಲಿ ಯುವಜೋಡಿಯ ಮಾರಣಹೋಮ!!
»ಸಾಧನೆಯ ಹಾದಿಯಲ್ಲಿ....ಮು೦ದುವರಿದ ಮಹಿಳೆಯರು
»ಉಡುಪಿ: ಹೊಲ, ಹುಲ್ಲು, ಹುಲಿ, ಹೊಳೆಗೆ ಎಂಥ ವೈಜ್ಞಾನಿಕ ಸಂಬಂಧವಿರಬಹುದು? ಇದೂ ಒಂದು ವಿಜ್ಞಾನವಾದೀತೆ?
»ಬಂತೆ ಕನ್ನಡಕ್ಕೆ ಗಂಡಾಂತರ?: ಅಮೇರಿಕಾದ ಕನ್ನಡ ವಿದ್ವಾ೦ಸರೊಬ್ಬರ ಅಭಿಪ್ರಾಯ
»ಪ್ರವಾಸಕ್ಕೂ- ಭಕ್ತಿಗೂ- ಪೂಜೆ ಪುನಸ್ಕಾರಕ್ಕೂ ಹೇಳಿ ಮಾಡಿಸಿದ ತಾಣ ಮುಡುಕುತೊರೆ!
»ಕಾರವಾರ: ಕಪ್ಪು ಮರಳು ಇರುವ ಸಮುದ್ರ ತೀರ...
»ಪೋಗೋ ಕಿಡ್ಸ್ ಪಟ್ಟಿಯಲ್ಲಿ ಬೆ೦ಗಳೂರಿನ ಸೋಹನ್
»ಅನಾಥವಾಗಿರುವ ಉಗ್ರರ ದಾಳಿಗೆ ಬಲಿಯಾದ ಬಿ‌ಎಸ್‌ಎಫ್ ಯೋಧನ ಮಕ್ಕಳು
»ಸೇನೆಯಲ್ಲಿ ಮಹಿಳಾ ಯುಗ: ಗಡಿ ಕಾವಲಿಗೆ ನೀರೆಯರು
»ಒಮ್ಮೆ ನೋಡಬನ್ನಿ ನಮ್ಮೂರ: ಕಾರವಾರದ ರಿವರ್ ಎಡ್ಜ್ ರೆಸಾರ್ಟಿಗೆ ಪಿಕ್ನಿಕ್
»ಕಾಯಕಲ್ಪಕ್ಕೆ ಕಾದಿರುವ ಕಿತ್ತೂರು ಕೋಟೆ
»ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಸೇವಕ ತೂಂಬ್ ಹಮೀದ್ ಇವರ ಮನೆಯೇ ಒ೦ದು ‘ಮ್ಯೂಸಿಯಂ’
»ತಲಕಾಡು ಜಲಧಾಮಕ್ಕೆ ಬನ್ನಿ ಮಸ್ತ್ ಮಜಾ ಮಾಡಿ...
»ಪ್ರತಿ ಆರು ಸೆಕೆಂಡ್‌ಗೆ ಒಂದು ಮಗು ಬಲಿ......ಇದು ಬಡತನ ನಿರ್ಮೂಲನೆಯೇ?
»ಮುಂಬೈ: ಸಂವಿಧಾನದ ಮಾನ ಕಳೆದ ಕಪಾಳಮೋಕ್ಷ
»ಬೆಡಗಿನ ನರ್ತನ: ಮಧುರ ಗಾಯನ
»ವಂದೇಮಾತರಂ ಕೋಮುವಾದ ಗೀತೆಯೆ?
»ಯಾವ ಹಸಿವು ದೊಡ್ಡದು?
»ಕಾಲಿನಿಂದ ಚಿತ್ರ ಬಿಡಿಸುವ ‘ಜ್ಯೋತಿ’
»ಲವ್+ ಕಾಮ ಜಿಹಾದ್ + ಹತ್ಯೆಯ ಸುತ್ತ ಒಂದು ಸುತ್ತು.
»ಮೂವರಿಗೊಂದು ಜಾನುವಾರು.. ಹಾಲಿನ ಕೊರತೆ.. ಗೋ ಯಾತ್ರೆ
»ಆನಂದೋಬ್ರಹ್ಮ: ಅಭಯಾರಣ್ಯದಲ್ಲಿ ಭಯವಿಲ್ಲ
»ಹುಟ್ಟುತ್ತಿದೆ ‘ಪ್ರಯೋಗಾಲಯದ ಕೂಸು’!
»ಮುಖ್ಯಮಂತ್ರಿಗಳೆ ಏಕೆ ಅಳುತ್ತೀರಿ ?
»ಬಿಜೆಪಿ ಸರಕಾರದ 'ಕ್ಲಿಯೋಪಾತ್ರ' ಶೋಭಾ!
»ಪತ್ರಕರ್ತ ಎಂಜಲು ಕಾಸಿಯ ಆಸ್ತಿ ವಿವರ...
»ಕರ್ನಾಟಕದಲ್ಲಿ ವ್ಯಾಪಕವಾಗುತ್ತಿರುವ ಶಿಶು ಮರಣ
»ಪ್ರತಿ ಆರು ಸೆಕೆಂಡ್‌ಗೆ ಒಂದು ಮಗು ಬಲಿ......ಇದು ಬಡತನ ನಿರ್ಮೂಲನೆಯೇ?
»ಪ್ರವಾಸಿಗಳ ಸ್ವರ್ಗವಾಗಿದೆ ನಮ್ಮೀ ಉಡುಪಿ ಜಿಲ್ಲೆ
»ಬಾಗಲಕೋಟೆ: ಗುಳೇದಗುಡ್ಡದಲ್ಲಿ ಜಲಪಾತದ ವೈಭವ!
»ಕರ್ಕರೆಯನ್ನು ಯಾರು ಕೊ೦ದರು?
»ವಿಶ್ವದ ಅತಿದೊಡ್ಡ ನೈಸರ್ಗಿಕ ಕಡಲದಂಡೆ
»ಸಹ್ಯಾದ್ರಿ ನೆತ್ತಿ ಮೇಲೆ ಶಿವಭಕ್ತಿ
»ಅ೦ಗವಿಕಲತೆ ಸಾಧನೆಗೆ ಅಡ್ಡಿಯಾಗುವುದಿಲ್ಲ ಎ೦ದು ತೋರಿಸಿಕೊಟ್ಟ ಕೆಲ ವ್ಯಕ್ತಿಗಳ ಪರಿಚಯ
»ಸಾಮಾಜಿಕ ಸಬಲೀಕರಣದ ಕೊರತೆ ಇನ್ನೂ ಇದೆ
»`ಲವ್ ಜಿಹಾದ್' ವದಂತಿಗೆ ಸಾಕ್ಷಿ ಸಮೇತ ತೆರೆ ಎಳೆದ ದ.ಕ.ಜಿಲ್ಲಾ ಪೊಲೀಸರು
»ಬೈ೦ದೂರು: ಕರಾವಳಿ ಭತ್ತದ ಗದ್ದೆಯಲ್ಲಿ ಕಟಾವು ಯಂತ್ರ ಕಲರವ
»ಮಲೆನಾಡಿನಲ್ಲೊ೦ದು ಗಾಂಜಾ ಬೆಳೆ ಮಾಫಿಯಾ ಜಾಲ !
»ಒಣಗಿದ ಬೇರು,ಬೊಡ್ಡೆಗೆ ‘ಜೀವ’ ತರಿಸಿದ ಕಲಾಕಾರ
»ಕಾರವಾರ: ರೈಲು ಸೇವೆ ಬೇಕೆಂದರೆ ಹೋರಾಟ ನಡೆಸಲೇಬೇಕು !
»ಮಾಲೆಗಾ೦ವ್ ಸ್ಪೋಟದ ನ೦ತರ ಈಗ ಗೋವಾ ಸ್ಪೋಟ : ಗೋಮುಖ ವ್ಯಾಘ್ರಗಳ ನಿಜಮುಖ ಬಯಲಾಗಲಿ
»ಚುನಾವಣೆಗಳು ಜನತೆಗೆ ಕೊಟ್ಟದ್ದೇನು?
»ಮಂತ್ರಾಲಯ ಪುನರುತ್ಥಾನ ದೊಡ್ಡ ಸವಾಲು
»ಕರಾವಳಿಯಲ್ಲಿ ಮರೆಯಾಗುತ್ತಿರುವ ಸಾ೦ಪ್ರದಾಯಿಕ ದೀಪಾವಳಿ
»ಹಿ೦ದು-ಮುಸ್ಲಿ೦ ಭಾಯಿ ಭಾಯಿ
»ಓ, ಬಲೀಂದ್ರ... ‘ಪೊಲಿ’ ಕೊರ್ಲ
»ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು 'ತೀರ್ಥೋದ್ಭವ'; ನಿಶ್ಚಿತಗಳಿಗೆ ಕನ್ಯಾ ಲಗ್ನದಲ್ಲಿ ಕಾವೇರಿ ಮಾತೆಯು ಜಲರೂಪದಲ್ಲಿ ನೀಡುವ ದರ್ಶನ
»ಶ್ರೀನಿವಾಸ ಸಾಗರ ಮಹಿಮೆ
»ಗುಡ್ಡದ ಮೇಲೆ ಗೊಮ್ಮಟ: ಕಣ್ಣಲ್ಲೂ ನೀರೇನೇ...ಮಣ್ಣಲ್ಲೂ ನೀರೇನೇ...
»ಬಿ‌ಎಸ್‌ಎಫ್‌ನಲ್ಲಿ ಮಹಿಳಾ ಮನ್ವಂತರ
»ಬ೦ದಿದೆ ಸ೦ತಸ ಸಡಗರದ ದೀಪಾವಳಿ ಹಬ್ಬ
»ಸ೦ಗೀತ ಲೋಕದ ಹಿರಿಯಜ್ಜ : ಮನ್ನಾ ಡೇ
»ಗಳಿಕೆಯೊಂದಿಗೆ ಕಲಿಕೆಗೊಂದು ಸುವರ್ಣಾವಕಾಶ....
»ಹಾಲಕ್ಕಿಗಳು ಪರಿಶಿಷ್ಟ ಪಂಗಡಕ್ಕೆ-ಏಳು ಸೀಮೆಗೆ ಗೌರವ
»ಬೆಂಗಳೂರಿನ ಕೇಂದ್ರ ಕಾರಾಗೃಹದ ನೆನಪಿನಲ್ಲಿ ಸ್ವಾತಂತ್ರ ಉದ್ಯಾನವನ
»ಜನ ಕೊಟ್ಟ ದುಡ್ಡು ಲೂಟಿಯಾದೀತು ಎಚ್ಚರ!
»ಇದು ಅಸಂಸ್ಕೃತಿಯ ಅಣಕ ಮಾಡಿದಂತೆಯೇ....
»ಸಬಲೀಕರಣದ ಹಾದಿಯಲ್ಲಿ ಮಹಿಳಾ ಸಾಕ್ಷರತಾ ಕಾರ್ಯಕ್ರಮ
»ಗಾಂಧೀಜಿಗೇಕೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಲಿಲ್ಲ?
»2012 ಡಿಸೆ೦ಬರ್ 21ರ೦ದು ರುದ್ರ ಭಯ೦ಕರವಾದ ಪ್ರಳಯ!
»ಚಂದ್ರನಲ್ಲಿ ತೀರ್ಥೋದ್ಭವ; ನಾಸಾದಲ್ಲಿ ಹರ್ಷೋದ್ಭವ
»2 ಲಕ್ಷ ಸಾರಿಗೆ ವಾಹನಗಳಿದ್ದರೂ-ಮಾಲಕರಿಗೆ ಲಾಭ ಇಲ್ಲ, ಜನರಿಗೆ ಸುಖ ಇಲ್ಲ !
»ರೈಲು ಪ್ರಯಾಣಕ್ಕೆ ಹೆಸರಾದ ದೂಧ್‌ಸಾಗರ್
»ಮಡಿಕೇರಿ ದಸರಾ ಎಷ್ಟೊಂದು ಸುಂದರ!
»ಮಡಿಕೇರಿಯ ದೊಡ್ಡಪಾರೆ ಜಲಪಾತ ನೋಡಲು ಎಷ್ಟು ಚೆ೦ದ!
»ವಿಶ್ವದೆಲ್ಲೆಡೆ ಗಾ೦ಧಿ ನೆನಪಿನಲ್ಲಿ ಅಂಚೆ ಚೀಟಿ ಬಿಡುಗಡೆ...
»ವಿಸ್ತಾರಗೊಳ್ಳುತ್ತಿರುವ ಅನೌಪಚಾರಿಕ ಶಿಕ್ಷಣ
»ಮಂಗಳೂರಲ್ಲಿ ಮಹಾತ್ಮಾ ಗಾಂಧಿ ಅಂತಿಮ ಭೇಟಿಗೆ ೭೫ ವರ್ಷ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri