|
ಪ್ರಕಟಿಸಿದ ದಿನಾಂಕ : 2010-01-28
- ಧಾರ್ಮಿಕ ಕೇಂದ್ರ ಧ್ವಂಸಗೊಳಿಸುವವರ ವಿರುದ್ಧ ಮುಖ್ಯಮಂತ್ರಿ ತೀವ್ರ ಆಕ್ರೋಶ - ಉಳವಿ ಕ್ಷೇತ್ರದಲ್ಲಿ ಸಿಎಂ ಗರಂ - ಬಡವರು, ಧರ್ಮ ರಕ್ಷಣೆಗೆ ನಾನು ಯಾರನ್ನೂ ಕೇಳ ಬೇಕಾಗಿಲ್ಲ - ಒಬಾಮಾ ಅಭಿವೃದ್ದಿಗೆ ಭಾರತೀಯರನ್ನೇ ಆಯ್ಕೆಮಾಡಿದ್ದಾರೆ
ಜೋಯಿಡಾ:’ದೇವಸ್ಥಾನ, ಚರ್ಚ್, ಮಸೀದಿಗಳನ್ನು ಧ್ವಂಸಗೊಳಿಸುವವರ ಕೈ ಕತ್ತರಿಸಿ, ಅಂಥವರ ಮೇಲೆ ಕ್ರಮ ಕೈಗೊಳ್ಳಲು ಯಾರ ಮುಲಾಜಿಗೂ ಕಾಯಬೇಡಿ’ ’ಸರ್ಕಾರಕ್ಕೆ ಮಸಿ ಬಳಿಯಲು ದುಷ್ಟಶಕ್ತಿಗಳು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿವೆ. ಈ ಬುಡಮೇಲು ಕೃತ್ಯ ನೋಡಿ ಸಂತಸಪಡುವ ಜನರಿದ್ದಾರೆ. ಅವರ ಉದ್ದೇಶ ಏನು? ಸ್ವಾರ್ಥಿಗಳು ಎಲ್ಲಿ ಬೇಕಾದರೂ ಬುಡಮೇಲು ಕೃತ್ಯ ನಡೆಸುತ್ತಾರೆ...’
ತಾಲೂಕಿನ ಉಳವಿಯಲ್ಲಿ ಶ್ರೀ ಚನ್ನಬಸವೇಶ್ವರನ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳ್ಳಿ ರಥ ಉದ್ಘಾಟಿಸಿ ಅನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ ಪೂಜಾ, ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ಮಾಡುವವರ ವಿರುದ್ಧ ಗುಡುಗಿದ ಪರಿ ಇದು.
ಮುಖ್ಯಮಂತ್ರಿಯವರ ಕೋಪ ಇನ್ನೂ ಮುಂದುವರಿದಿದ್ದು ಅವರ ಈ ಮಾತುಗಳಲ್ಲಿ ಹರಿದುಬಂತು.
’ಒಳ್ಳೆಯದನ್ನು ಮಾಡಿದರೆ ಒಳ್ಳೆಯದು ಎಂದು ಹೇಳುವುದನ್ನು ಬಿಟ್ಟು ಪ್ರತಿಪಕ್ಷಗಳು ವ್ಯರ್ಥ ಆಪಾದನೆ ಮಾಡುತ್ತಿವೆ. ೬೦ ವರ್ಷ ಆಗದ್ದನ್ನು ಈ ಯಡಿಯೂರಪ್ಪ ಎರಡು ವರ್ಷಗಳಲ್ಲಿ ಮಾಡೋಕಾಗತ್ತಾ?’.
’ನಾನು ಮಠಗಳಿಗೆ ಹಣ ನೀಡುವುದನ್ನು ಪ್ರತಿಪಕ್ಷಗಳು ಆಕ್ಷೇಪಿಸುತ್ತಿವೆ. ಆದರೆ, ಬಡ, ದೀನ- ದಲಿತರ ಮತ್ತು ಧರ್ಮದ ರಕ್ಷಣೆ ಮಾಡಲು ನಾನು ಯಾರನ್ನೂ ಕೇಳಬೇಕಾದ ಅಗತ್ಯವಿಲ್ಲ’.
ಯಾವ ದೇಶ ಇತಿಹಾಸವನ್ನು ಮರೆಯುತ್ತದೆಯೋ ಆ ದೇಶಕ್ಕೆ ಭವಿಷ್ಯವಿಲ್ಲ. ೨೧ನೇ ಶತಮಾನ ಎಂದರೆ ಭಾರತೀಯರ ಶತಮಾನ. ಅಮೆರಿಕ ಅಧ್ಯಕ್ಷ ಒಬಾಮಾ ಕೂಡ ಅಭಿವೃದ್ಧಿಗಾಗಿ ಭಾರತೀಯರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು ಸಿಎಂ.
ಇದೇ ಮೊದಲಲ್ಲ: ‘ಕತ್ತರಿ’ಸುವ ಹೇಳಿಕೆಗಳ ಆರಂಭವಾಗಿದ್ದು ಫಿಲಿಬಿಟ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ವರುಣ್ ಗಾಂಧಿ ಅವರಿಂದ.
ಹಿಂದುತ್ವ ವಿರೋಧಿಸುವವರನ್ನು ಕಡಿದು ಹಾಕಬೇಕು ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು.
ನಂತರ ಚುನಾವಣಾ ಸಂದರ್ಭದಲ್ಲಿ ಮಾರ್ಚ್ ಅಂತ್ಯದಲ್ಲಿ ಕಾಗೋಡು ತಿಮ್ಮಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಂಗಾರಪ್ಪ ಪರವಾಗಿ ಸಾಗರದಲ್ಲಿ ಚುನಾವಣಾ ಭಾಷಣ ಮಾಡುವಾಗ ‘ಈ ಹಿಂದುತ್ವ ಅಂತ ಹೇಳ್ತಕ್ಕಂತಾ ಕೈ ಮೊದಲು ಕಡೀಬೇಕು. ಬಹುಸಂಖ್ಯಾತರು ಅಂದ್ರೆ ಯಾರು ಎಷ್ಟು ಪರ್ಸೆಂಟ್ ಇದೀರಿ ನೀವು? ನೀವು ಪೂಜೆ ಮಾಡಕ್ಕೆ ನಾವ್ ಪ್ರಸಾದ ತಗೊಳ್ಳಕ್ಕೆ ನಾಚ್ಕೆ ಆಗಲ್ಲ ನಿಮಗೆ?’ ಎಂದು ಬಹಿರಂಗ ಸಭೆಯಲ್ಲಿ ಗುಡುಗಿದ್ದರು.ಆ ಬಗ್ಗೆ ಸಾಗರ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾಗೋಡು ಮಾತಿಗೆ ಪ್ರತಿಯಾಗಿ ಈಗ ಅಬ್ಕಾರಿ ಸಚಿವರಾಗಿರುವ ರೇಣುಕಾಚಾರ್ಯ ಹಿಂದುತ್ವ ವಿರೋಧಿಗಳ ತಲೆಕಡಿಯಬೇಕು ಎಂದು ಗುಡುಗಿದ್ದರು.ಅದಕ್ಕೂ ಬಹಳ ಹಿಂದೆ ಗೋಹತ್ಯೆ ಮಾಡುವವರನ್ನು ಕೈಗಳನ್ನು ಕಡಿಯಬೇಕು ಎಂದು ಈಗ ಇಂಧನ ಸಚಿವರಾಗಿರುವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದರು.
ಪ್ರತಿಕ್ರಿಯೆಗಳು
ಮುಖ್ಯಮಂತ್ರಿ ಆ ಭಾವನೆಯಲ್ಲಿ ಹೇಳಿಲ್ಲ. ಧಾರ್ಮಿಕ ಕೇಂದ್ರಗಳಿಗೆ ಮುಖ್ಯಮಂತ್ರಿ ಹೇಳಿಕೆ ಹಿನ್ನೆಲೆಯಲ್ಲಿ ಜನ ಎಚ್ಚರಗೊಳ್ಳಬೇಕೆಂಬುದೇ ಆಗಿದೆ. ಉದ್ರೇಕಗೊಳಿಸಲು ಈ ರೀತಿ ಹೇಳಿಲ್ಲ. - ಧನಂಜಯ ಕುಮಾರ್, ಬಿಜೆಪಿ ವಕ್ತಾರ
ಅವರಿಗೆ ಸಿಟ್ಟು ಬಂದಿದೆ ಅಷ್ಟೇ. ಅವರು ಬೇಕೆಂದೇ ಹೇಳಿದ್ದಾರೆ ಎಂದೆನಿಸುತ್ತಿಲ್ಲ. - ಯು.ಆರ್. ಅನಂತಮೂರ್ತಿ
ಹೇಳಿಕೆಯ ಭಾವನೆಯನ್ನಷ್ಟೇ ಅರ್ಥ ಮಾಡಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಳ್ಳಬೇಕೆಂದು ಹೇಳಿಲ್ಲ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. - ಸಿ.ಟಿ.ರವಿ, ಬಿಜೆಪಿ ವಕ್ತಾರ
ಸಿಎಂ ಆಗಿ ಈ ಮಾತು ಹೇಳಬಾರದಿತ್ತು. ದೇವಸ್ಥಾನಗಳನ್ನು ಒಡೆದಾಗ ಈ ರೀತಿ ಹೇಳಲ್ಲ. ಚರ್ಚ್ ಒಡೆದಾಗ ಈ ರೀತಿ ಹೇಳಿಕೆ ಬರುತ್ತವೆ. ಹೇಳಿಕೆಯಲ್ಲೂ ತಾರತಮ್ಯ ತೋರಿಸುತ್ತಾರೆ. - ಪ್ರಮೋದ್ ಮುತಾಲಿಕ್
ಸರ್ಕಾರಕ್ಕೆ ಮಸಿ ಬಳಿಯಲು ದುಷ್ಟಶಕ್ತಿಗಳು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿವೆ. ಈ ಕೃತ್ಯ ನೋಡಿ ಸಂತಸಪಡುವ ಜನರಿದ್ದಾರೆ. ಅವರ ಉದ್ದೇಶ ಏನು? - ಯಡಿಯೂರಪ್ಪ
ಕ್ರಿಮಿನಲ್ಗಳು ಮಾತನಾಡುವ ಶಬ್ದ. ಸಿಎಂ ಮೂಲತಃ ಆರ್ಎಸ್ಎಸ್ನವರು, ಅವರ ಫ್ಯಾಸಿಸ್ಟ್ ಮನೋಭಾವ ತೋರಿಸುತ್ತದೆ. - ಸಿದ್ದರಾಮಯ್ಯ
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-28 00:00:00
|
|
| rizwan, manglore | 2010-01-28 | | abhinandanegalu manya mukhyamanthrigalavre,
nimma e kanoonu jarige bandare rss,bajarangadala,munthada sangatenegalu mayavagabahudu.and edu munduvaridare sangaparivaadavaralli yaarigoo kai iralikkilla. |
| farzan, siddakatte(dubai) | 2010-01-28 | | this is not good.this is stupid. CM has so big ressponsibility.so that is worng statement |
| VS. Shetty, MUDIPU, SA | 2010-01-28 | | Mukyamanthrimdha i reethiya helikeyaadhare, namma graha rakshaka manthiyavariyavaru
ಪ್ರಾರ್ಥನಾ ಮಂದಿರಗಳಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ: ಕೈ ಚೆಲ್ಲಿದ ಆಚಾರ್ಯ
idharalli yaavudhu sari?. nijavaagiyo athavaa thorikeyo?... |
|