ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್. ಮಹಾಸಭೆ, ನೂತನ ಕಛೇರಿ ಕಾರ್ಯಾರಂಭ. |
ಪ್ರಕಟಿಸಿದ ದಿನಾಂಕ : 2010-01-27
ಕರ್ನಾಟಕ ಸಲಫಿ ಅಸೋಸಿಯೇಶನ್, ಕುವೈತ್ ಇದರ ೨೦೧೦-೧೨ ನೇ ಸಾಲಿನ ಮಹಾಸಭೆಯು ಮಂಗಫ್ ಕೆಆರ್ಎಚ್ ಕ್ಯಾಂಪಿನಲ್ಲಿ ಅಧ್ಯಕ್ಷರಾದ ಅಬ್ದುಲ್ ಕಾದರ್ ದೇರಳಕಟ್ಟೆಯವರ ನೇತೃತ್ವದಲ್ಲಿ ನಡೆಯಿತು.
ಕರ್ನಾಟಕ ಸಲಫಿ ಅಸೋಸಿಯೇಶನ್ ಮತ್ತು ಕುವೈತ್ ಕೇರಳ ಇಸ್ಲಾಹಿ ಸೆಂಟರ್ ಸದಸ್ಯರುಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬಶೀರ್ರವರು ಗತ ಎರಡು ವರ್ಷಗಳ ಪ್ರವರ್ತನಾ ವರದಿಯನ್ನು, ಆಝಮ್ ಬೋಳಾರ್ ದಅ’ವಾ ಚಟುವಟಕೆಗಳು ಮತ್ತು ಹಾರಿಸ್ ನಂದಾವರ ಪ್ರಕಾಶನ ವಿಭಾಗದ ವರದಿಯನ್ನು ಸಭೆಯ ಮುಂದಿಟ್ಟರು.
ದಕ್ಷಿಣ ಕರ್ನಾಟಕದಲ್ಲಿ ಏಕದೇವ ವಿಶ್ವಾಸದ ನೈಜ ಸಂದೇಶವನ್ನು ಪ್ರಚರಿಸುವ ಸಂಘಟನೆಯಾದ ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್, ಮಂಗಳೂರು ಇದರ ಸಹಯೋಗದೊಂದಿಗೆ ಸಂಘಟನೆಯು ಕಳೆದೆರಡು ವರ್ಷಗಳಲ್ಲಿ ನಡೆಸಿದ ಚಟುವಟಿಕೆಗಳು ಮತ್ತು ಕುವೈತ್ನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ದಅ’ವಾ ಸಂಘಟನೆಯಾದ ’ಇಂಟರ್ನ್ಯಾಷನಲ್ ಇಸ್ಲಾಮಿಕ್ ಸೆಂಟರ್’ ಶಾಖೆಯನ್ನು ಹಂಪನಕಟ್ಟೆಯಲ್ಲಿ ಪ್ರಾರಂಭಿಸಲು ಸಾಧ್ಯವಾದ ಬಗ್ಗೆ ಸದಸ್ಯರು ತಮ್ಮ ತೃಪ್ತಿ ವ್ಯಕ್ತಪಡಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಮುಂದಿನ ವರ್ಷಗಳಲ್ಲಿ ಸಂಘಟನೆ ಕೈಗೆತ್ತಿಕೊಳ್ಳಲು ಬಯಸುವ ಯೋಜನೆಗಳನ್ನು ಸದಸ್ಯರಿಗೆ ವಿವರಿಸಿ ಎಲ್ಲರ ಸಹಕಾರವನ್ನು ಕೋರಿದರು. ಕರ್ನಾಟಕದ ಮುಸ್ಲಿಮ್ ಸಮುದಾಯದಲ್ಲಿ ಪುರೋಹಿತಶಾಹಿ ಬಿತ್ತಿರುವ ಅಪಾಯಕಾರಿ ಅಂಧವಿಶ್ವಾಸ, ನೂತನವಾದ, ಕಂದಾಚಾರಗಳು, ಉಗ್ರವಾದ ಮತ್ತು ಧಾರ್ಮಿಕ ಶೋಷಣೆಗಳ ವಿರುದ್ದ ಸಮರ ಸಾರಿರುವ ಸಲಫಿ ಚಳುವಳಿಯನ್ನು ಇನ್ನಷ್ಟು ತೀವ್ರಗತಿಯಲ್ಲಿ ಮುನ್ನಡೆಸಲು ಕಟಿಬದ್ದರಾಗುವಂತೆಯೂ ಅವರು ಆಗ್ರಹಿಸಿದರು. ಅಲ್ಲಾಹನ ಗ್ರಂಥ ಮತ್ತು ಪ್ರವಾದಿವರ್ಯರ(ಸ.ಅ) ಚರ್ಯೆಯನ್ನು ಆಧರಿಸಿ ಇಸ್ಲಾಮಿಗೆ ಜನರನ್ನು ಆಹ್ವಾನಿಸುವ ಏಕೈಕ ಕನ್ನಡ ಪಾಕ್ಷಿಕ ’ಪವಿತ್ರಸಂದೇಶ’ ಮತ್ತು ಮುಸ್ಲಿಮೇತರ ಸಮುದಾಯದ ಮಧ್ಯೆ ಇಸ್ಲಾಮಿನ ಕುರಿತಾದ ತಪ್ಪು ಗ್ರಹಿಕೆಯನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯವೆಸಗುತ್ತಿರುವ ಮಾಸಿಕ ’ಸತ್ಯಸಂದೇಶ’ವನ್ನು ಕುವೈತ್ನಲ್ಲಿರುವ ಕನ್ನಡಿಗರ ಮಧ್ಯೆ ಪ್ರಚಾರಪಡಿಸಲು ಮತ್ತು ಕುವೈತ್ ಕೇರಳ ಇಸ್ಲಾಹಿ ಸೆಂಟರ್ ವತಿಯಿಂದ ಫೆಬ್ರವರಿ ತಿಂಗಳಲ್ಲಿ ಕುವೈತಿನಲ್ಲಿ ನಡೆಯಲಿರುವ ೨ನೇ ಬೃಹತ್ ಇಸ್ಲಾಮಿಕ್ ಸೆಮಿನಾರನ್ನು ಯಶಸ್ಚಿಯಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗತವರ್ಷದ ಸಮಿತಿಯನ್ನು ವಿಸರ್ಜಿಸಿ ೨೦೧೦-೧೨ನೇ ಸಾಲಿಗೆ ಈ ಕೆಳಗಿನ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷ: ಅಬ್ದುಲ್ ಕಾದರ್ ದೇರಳಕಟ್ಟೆ. ಉಪಾಧ್ಯಕ್ಷ: ಮುಹಮ್ಮದ್ ಹನೀಫ್ ಉಳ್ಳಾಲ, ಪ್ರಧಾನ ಕಾರ್ಯದರ್ಶಿ: ಅಬ್ದುಲ್ ಬಶೀರ್ ಅರ್ಕುಳ, ಜತೆಕಾರ್ಯದರ್ಶಿ: ರಿಝ್ವಾನ್ ಅಬ್ದುಲ್ ರಝಾಕ್ ಉಳ್ಳಾಲ, ಆರ್ಥಿಕ ಕಾರ್ಯದರ್ಶಿ: ಮುಹಮ್ಮದ್ ನೂರುದ್ದೀನ್ ಉಜಿರೆ, ಖಜಾಂಚಿ: ಮುಹಮ್ಮದ್ ಶರೀಫ್ ಕುತ್ತಾರ್, ದಅ’ವಾ ವಿಭಾಗ ಪ್ರಧಾನ ಕಾರ್ಯದರ್ಶಿ: ಆಝಮ್ ಬೇಕಲ, ಸಹಾಯಕ ಕಾರ್ಯದರ್ಶಿಗಳಾಗಿ: ಹಾರಿಸ್ ನಂದಾವರ (ಪ್ರಕಾಶನ), ಇಕ್ಬಾಲ್ ಬಜಾಲ್ (ಶ್ರವಣ, ದೃಶ್ಯ ಮಾಧ್ಯಮ), ಬದ್ರುದ್ದೀನ್ ಉಚ್ಚಿಲ (ಸಾರ್ವಜನಿಕ ಮಾಹಿತಿ).
ಕಾರ್ಯಕಾರಿ ಸಮಿತಿ: ಅನ್ವರ್ ಹುಸೈನ್ ಬಂದರ್, ಮಕ್ಸೂದ್ ಶಿವಮೊಗ್ಗ, ಮುಹಮ್ಮದ್ ಅಬ್ಬಾಸ್ ಕಾಪು, ಸಯ್ಯದ್ ಇಕ್ಬಾಲ್ ಕೃಷ್ಣಾಪುರ, ಫಿರೋಝ್ ಅಬ್ದುಲ್ ಸಮದ್ ಜಪ್ಪು, ಮುಹಮ್ಮದ್ ಇಕ್ಬಾಲ್ ಬಂದರ್.
ಇದೇ ಸಂದರ್ಭದಲ್ಲಿ ಕುವೈತಿನ ’ಇಂಟರ್ನ್ಯಾಷನಲ್ ಇಸ್ಲಾಮಿಕ್ ಸೆಂಟರ್’ನ ಸಹಯೋಗದೊಂದಿಗೆ ಫಹಾಹೀಲ್ನಲ್ಲಿ ಸ್ಥಾಪಿಸಲ್ಪಟ್ಟ ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್ ನೂತನ ಕಛೇರಿಯನ್ನು ಇಂಟರ್ನ್ಯಾಷನಲ್ ಇಸ್ಲಾಮಿಕ್ ಸೆಂಟರ್ ನಿರ್ದೇಶಕರಾದ ಶೈಖ್ ಫೈಸಲ್ ಅಲ್ಹಾಶ್ಮಿ ಕಾರ್ಯಾರಂಭಗೊಳಿಸಿದರು.
ವರದಿಯ ವಿವರಗಳು |
 |
ಕೃಪೆ : ಮೋಹನ್ ದಾಸ್ ಕಾಮತ್ ಮಂಜೇಶ್ವರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-27
|
|
| ISMAIL BALEHONNUR, MANGALORE | 2010-01-27 | | CONGRATS TO NEW OFFICE BEARERS.WISH YOU ALL THE BEST .
BY PRESIDENT AND MEMBERS .INDIAN ISLAHI CENTRE KARNATAKA , DUBAI |
|