ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ... |
ಪ್ರಕಟಿಸಿದ ದಿನಾಂಕ : 2010-01-14
( Please dont miss to see the Album)
2003 ಕೊಲ್ಲಿರಾಷ್ಟ್ರದ ದುಬಾಯಿಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಅಂದಿನ ದಿನದಲ್ಲಿ ಸಂಭ್ರಮ, ಅತುರ ಕಾತರ... ದುಬಾಯಿಗೆ ವಿಷ್ಣುವರ್ಧನ ಬರುವ ಸುದ್ದಿ ಕನ್ನಡಿಗರ ಮನೆ ಮನೆಗೆ ತಲುಪಿತ್ತು. ಕರ್ನಾಟಕ ಸಂಘ ದುಬಾಯಿ ಅದ್ದೂರಿ ಯಾಗಿ "ಕರ್ನಾಟಕೋತ್ಸವ" ಕಾರ್ಯಕ್ರಮ ಅಯೋಜಿಸಿತ್ತು. ವಿಶೇಷ ಅಕರ್ಷಣೆ ವಿಷ್ಣುವರ್ದನ್ ಸಮಾರಂಭಕ್ಕೆ ಬರುವುದಾಗಿತ್ತು......



ಹಾಲಿಡೆ ಇನ್ ಕ್ರೌನ್ ಫ್ಲಾಜಾ ಸಭಾಂಗಣ ಅಭಿಮಾನಿಗಳು ಕಿಕ್ಕಿರಿದು ಸೇರಿ ಭರ್ತಿಯಾಗಿತ್ತು. ವೇದಿಕೆಯ ಮೇಲೆ ಮೈಸೂರು ಅರಮನೆಯ ಬೃಹತ್ ಸೆಟ್ಟಿಂಗ್ಸ್ ಆಕರ್ಷಣೀಯವಾಗಿತ್ತು. ಬಾರಿಗಾತ್ರದ ಕನ್ನಡದ ಅಕ್ಷರಗಳು ಕಂಗೊಳಿಸುತಿದ್ದವು. ಒಂದು ಬದಿಯಲ್ಲಿ ವಿಷ್ಣುವರ್ಧನ್ ರವರ ಬಾರಿ ಗಾತ್ರದ ಕಟ್ ಔಟ್ ನಿಲ್ಲಿಸಲಾಗಿತ್ತು.

ಸಂಗೀತ ಸಂಜೆ ಪ್ರಾರಂಭವಾಗಿ ಮಂಜುಳಾ ಗುರುರಾಜ್ ತಂಡದವರಿಂದ ಸುಮಧುರ ಕನ್ನಡ ಗೀತೆಗಳು ಸುಶ್ರಾವ್ಯವಾಗಿ ಕೇಳಿಬರುತ್ತಿತ್ತು. ಒಂದು ಕ್ಷಣದಲ್ಲಿ ಸಂಗೀತ ಸ್ಥಬ್ದವಾಗಿ ಸಭಾಂಗಣದ ದೀಪಗಳು ಮಂಕಾಗಿ, ಪ್ರಕಾಶಮಾನವಾದ ಬೆಳಕು ಮಹಾಧ್ವಾರದ ಕಡೆಗೆ ಕೇಂದ್ರಿಕೃತ ವಾಯಿತು. ನೋಡುತಿದ್ದಂತೆ ವಿಷ್ಣುವರ್ಧನ್ ಪ್ರತ್ಯಕ್ಷರಾದರು.

ಜೈಕಾರದೊಂದಿಗೆ ಅಭಿಮಾನಿಗಳ ಗುಂಪು ಅವರನ್ನು ವೇದಿಕೆಯತ್ತ ಕರೆದುಕೊಂಡು ಬಂದರು. ವಾಧ್ಯವೃಂದದವರು ಅವರ ಪ್ರಸಿದ್ದ ಗೀತೆಗಳ ತುಣುಕುಗಳನ್ನು ಪ್ರತಿಧ್ವನಿಸುತ್ತಿದ್ದಂತೆ, ಸಭಾಂಗಣದ ಎಲ್ಲಾ ಅಭಿಮಾನಿಗಳ ಚಪ್ಪಳೆ ಹರ್ಷೋದ್ಘಾರದೊಂದಿಗೆ ವೇದಿಕೆಯ ಮೇಲೆ ಏರಿದರು. ಆ ಸಂದರ್ಭದಲ್ಲಿ ಕೆಲವು ಕ್ಷಣ ಮೂಕವಿಸ್ಮಿತರಾದರು. ಭಾವುಕರಾದರು. ಒಮ್ಮೆ ಹಿಂದೆ ತಿರುಗಿ, ಗಣೇಶ್ ರೈ ನಿರ್ಮಿಸಿದ್ದ ಮೈಸೂರು ಅರಮನೆಯನ್ನು ನೋಡಿದರು. ಇನ್ನೊಂದು ಬದಿಯಲ್ಲಿ ತಮ್ಮ ಕಟ್ ಔಟ್ ನೋಡಿದರು. ವಿದೇಶದ ನೆಲದಲ್ಲಿ ಕನ್ನಡದ ಅಕ್ಷರಗಳನ್ನು ಕಂದರು, ಹರ್ಷಿತರಾದರು. ಜೊತೆಯಲ್ಲಿ ಶ್ರೀಮತಿ ಭಾರತಿಯವರು ಸಹ ಇದ್ದರು.

ಸಮಾರಂಭದ ವೇದಿಕೆಯಲ್ಲಿ ಅಂದಿನ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಡಾ. ಬಿ. ಕೆ. ಯೂಸುಫ್ ರವರು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಸಮಸ್ತ ಕನ್ನಡಿಗರ ಪರವಾಗಿ, ಕನ್ನಡದ ಸೂಪರ್ ಸ್ಟಾರ್, ಅಭಿನವ ಭಾರ್ಗವ, ಸಾಹಸ ಸಿಂಹನಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಸಮಾರಂಭದಲ್ಲಿ ಗಣ್ಯರುಗಳಾದ ಡಾ. ಬಿ. ಆರ್. ಶೆಟ್ಟಿಯವರು, ಶ್ರೀ ಜಫ್ರುಲ್ಲಾ ಖಾನ್, ಶ್ರೀ ಟಿ.ಎಸ್.ಶೆಟ್ಟಿಗಾರ್, ಶ್ರೀ ಅಬ್ದುಲ್ ಲತಿಪ್ ಮತ್ತು ಕಾರ್ಯದರ್ಶಿ ಕೆ.ಜಿ.ಶೇಕರ್ ರವರು ಮತ್ತು ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಸರ್ಕಾರದ ಸಚಿವರಾಗಿದ್ದ ಶ್ರೀ ಡಿ. ಕೆ. ಶಿವಕುಮಾರ್, ಶ್ರೀಮತಿ ರಾಣಿ ಸತೀಶ್ ರವರ್ ಸಮುಖದಲ್ಲಿ ವಿಷ್ಣುವರ್ಧನ್ ರವರನ್ನು ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.

ಪೂರ್ವ ಅದ್ಯಕ್ಷ ಶ್ರೀ ಬಿ.ಜಿ.ಮೋಹನ್ ದಾಸ್ ಕಾರ್ಯಕ್ರಮವನ್ನು ತಮ್ಮದೆ ಆದ ವಿಶಿಷ್ಟ ಶೈಲಿಯಲ್ಲಿ ನೆಡೆಸಿಕೊಟ್ಟರು. ಉಪಾದ್ಯಕ್ಷ ಶ್ರೀ ಸತೀಶ್ ಶೆಟ್ಟಿ, ಶ್ರೀ ಮೋಹನ್ ಅತ್ತಾವರ್, ಶ್ರೀ ಬೋನಿಫೇಸ್ ಕಾರ್ಲೋ, ಶ್ರೀಮತಿ ಗೋಪಿಕ ಮಯ್ಯ, ಶ್ರೀ ಜಯರಾಮ ಸೋಮಯಾಜಿ, ಶ್ರೀ ದಯಾ ಕಿರೋಡಿಯನ್ ಮತ್ತಿತ್ತರು ಉಪಸ್ತಿತರಿದ್ದರು.

ಕೊಲ್ಲಿ ರಾಷ್ಟ್ರದ ಕನ್ನಡಿಗರ ಅಭಿಮಾನವನ್ನು ಕಂಡು, ಹೊರನಾಡಿನಲ್ಲಿ ಕನ್ನಡ ಭಾಷೆ, ಕಲೆ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಿಕೊಂಡು, ಜೊತೆಗೆ ತನ್ನನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿ ಸತ್ಕರಿಸಿದಕ್ಕೆ ಕೃತಜ್ಞತೆಯನ್ನು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು "ಕರ್ನಾಟಕೋತ್ಸವ" ವನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದರು.
ಕೆಲವು ಸಮಯದ ಹಿಂದೆ ವಿಷ್ಣುವರ್ಧನ್ ರವರ ಚಲನಚಿತ್ರ ’ವೀರಪ್ಪ ನಾಯಕ’ ದುಬಾಯಿಯ ಚಿತ್ರಮಂದಿರದಲ್ಲಿ ಪ್ರದರ್ಶನವಾದ ವಿಚಾರ ಕೇಳಿ ತುಂಬಾ ಸಂತೋಷಪಟ್ಟರು.


ಆಗಲಿದ ಜನನಾಯಕನಿಗೆ ಕೊಲ್ಲಿ ರಾಷ್ಟ್ರದ ಕನ್ನಡಿಗರ ಭಾವ ಪೂರ್ಣ ಶೃದ್ಧಾಂಜಲಿ...

ಕನ್ನಡ ಚಲನ ಚಿತ್ರರಂಗ ಕಳೆದ ಮೂವತ್ತೇಳು ವರ್ಷಗಳಿಂದ ಚಲನಚಿತ್ರದಲ್ಲಿ ನಾಯಕ ನಟನಾಗಿ ಮಾತ್ರವಲ್ಲದೆ, ಜನಮಾನಸದಲ್ಲಿ ಜನನಾಯಕನಾಗಿದ್ದ ಅಭಿನವ ಭಾರ್ಗವನನ್ನು ಕಳೆದುಕೊಂಡಿದೆ.
ಹೊಯ್ಸಳ ದೊರೆ ವಿಷ್ಣುವರ್ಧನ ಕನ್ನಡ ಕಲೆ ಸಂಸ್ಕೃತಿಯನ್ನು ಶಿಲ್ಪದಲ್ಲಿ ಅರಳಿಸಿ ಅಜರಾಮರಾಗಿದ್ದರೆ, ಪುಟ್ಟಣ್ಣ ನವರಿಂದ ನಾಮಕರಣಗೊಂಡ ವಿಷ್ಣುವರ್ಧನ್ ಬೆಳ್ಳಿ ತೆರೆಯ ಮೇಲೆ 200 ಚಿತ್ರಗಳನ್ನು ಮೂಡಿಸಿ ದಾಖಲೆ ಸೃಷ್ಠಿಸಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಪಂಚ ಭಾಷೆಯ ಚಲನಚಿತ್ರ ನಟನಾಗಿ, ರಾಷ್ಟ್ರೀಯ ದೂರದರ್ಶನ ವಾಹಿನಿಯಲ್ಲಿ ಶಂಕರ್ ನಾಗ್ ರವರ ’ಮಾಲ್ಗುಡಿ ಡೇಸ್’ ನಲ್ಲಿ ೧೮ ನೇ ಸಿರಿಯಲ್ ನಲ್ಲಿ ’ಫಾರ್ಟಿಫಿಫ್ತ್ ಎ ಮಂತ್’ ನಲ್ಲಿ ಅಭಿನಯಿಸಿ ರಾಷ್ಟ್ರವ್ಯಾಪಿ ಪ್ರಸಿದ್ದಿಯನ್ನು ಪಡೆದಿದ್ದರು.

ಪ್ರಥಮಬಾರಿಗೆ ವಿದೇಶದಲ್ಲಿ ಚಿತ್ರಿಕರಣವಾದ ಕನ್ನಡ ಚಲನ ಚಿತ್ರ ದ್ವಾರಕೀಶ್ ರವರ ಸಿಂಗಪೂರದಲ್ಲಿ ರಾಜಾ ಕುಳ್ಳ, ಕನ್ನಡದ ಪ್ರಥಮ ಸಿನೆಮಾ ಸ್ಕೋಪ್ ಚಿತ್ರ ಸೊಸೆ ತಂದ ಸೌಭಾಗ್ಯದಲ್ಲಿ ನಟಿಸಿದ ಯಾವುದೇ ರಾಜಕೀಯ, ಅಪವಾದಗಳಿಂದ ದೂರವಾಗಿದ್ದ ಅಧ್ಯಾತ್ಮಿಕವಾಗಿ, ಶಿಸ್ತಿನಿಂದ ಕನ್ನಡ ಚಿತ್ರರಂಗದ ಗೌರವವನ್ನು ಭಾರತೀಯರು ಉನ್ನತ ಸ್ಥಾನದಲ್ಲಿ ನೋಡುವಂತೆ ಮಾಡಿದ ಯಜಮಾನನಿಲ್ಲದೆ ಕನ್ನಡ ಚಿತ್ರರಂಗ ಭಣಗುಡುತಿದೆ. ಸಾಹಸ ಸಿಂಹನ ಹೆಜ್ಜೆಯ ಗುರುತು ಮಾಸಿದೆ.



"ವಿಷ್ಣು" ಮತ್ತೊಮ್ಮೆ ಹುಟ್ಟಿ ಬಾ...
"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"
ಬರಹ:
ಬಿ. ಕೆ. ಗಣೇಶ್ ರೈ ಪೂರ್ವ ಅಧ್ಯಕ್ಷರು ಕರ್ನಾಟಕ ಸಂಘ ಶಾರ್ಜಾ
ವರದಿಯ ವಿವರಗಳು |
 |
ಕೃಪೆ : ಬಿ. ಕೆ. ಗಣೇಶ್ ರೈ, ಪೂರ್ವ ಅಧ್ಯಕ್ಷರು,ಕರ್ನಾಟಕ ಸಂಘ ಶಾರ್ಜಾ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-14 00:00:00
|
|
| gayathridevi, mysore | 2011-12-17 | | ಲವ್ ಯು!!. ಅಣ್ಣಾ - ಅತ್ತಿಗೆಯವರಿಗೆ ನಿಮ್ಮ ಅಭಿಮಾನಿ ಯಾದ ಗಾಯತ್ರಿ ಮಾಡುವ ನಮಾಸ್ಕರಗಳು. ನಿವೆಂದರೆ ನನಗೆ ಪ್ರಾಣ. ನಿಮ್ಮ ಭಾವ ಚಿತ್ರ ವನ್ನು ನನ್ನ ಬಳಿ ಇಟ್ಟುಕೊಂಡಿದ್ದೇನೆ ಮತು ನೀವು ನನಗೆ ಬರೆದ ಪತ್ರ ಒಂದು ನನ್ನ ಬಳಿ ಇದೆ! ಇಂತಿ ನಿಮ್ಮ ಅಬಿಮಾನಿ, ಗಾಯತ್ರಿ ಮಹೇಶ್ |
| iqbal, saudi arabia | 2010-04-16 | | national waste what he done for karnataka he act only in some films and we watch the film in talkies by paying our own money |
| christopher uday, mangalore kottara chowki dubai | 2010-01-30 | | wow its wonderful collection thanks to you editor you have done a great job my feelings like vishnu i can see him here as alive he is my favorite my condelence to Dr.vishnu abhinav bhargav/sahassimha |
| SUJATHA SHRINIVASAN, DUBAI | 2010-01-17 | | Dr vishnuvardhan is my favourite actor always.
thank u Mr Ganesh Rai for ur nice information for the actor . |
| ಪ್ರಜ್ವಲ್ ಕುಮಾರ್, ಮಂಗಳೂರು, ದುಬಾಯಿ | 2010-01-17 | | ಸಿನೆಮಾದಲ್ಲಿಯೂ ಜೋಡಿ ಜೀವಗಳು, ನಿಜ ಜೀವನದಲ್ಲಿಯೂ ಜೋಡಿಯಾಗಿದ್ದ ವಿಷ್ನುವರ್ಧನ್ ಭಾರತಿ ದಂಪತಿಗಳು, ಕನ್ನಡಿಗರ ಅಭಿಮಾನದ ಜೋಡಿ ಹಕ್ಕಿಗಳು. ಒಂದು ಹಕ್ಕಿ ಮರೆಯಾಗಿದೆ. ಇನ್ನೊಂದು ಒಂಟಿ ಹಕ್ಕಿಗೆ ಮಾನಸಿಕ ವೇದನೆಯನ್ನು ಸಹಿಸುವ ಶಕ್ತಿ, ಮನಶಾಂತಿ ಕೊಡು ಎಂದು ಭಗವಂತನಲ್ಲಿ ಗಲ್ಫ್ ಕನ್ನಡಿಗದ ಮೂಲಕ ಪ್ರಾರ್ಥನೆ. |
| ಪ್ರಕಾಶ್, ಉಡುಪಿ, ದುಬಾಯಿ | 2010-01-17 | | ಕನ್ನಡಿಗರನ್ನು ಜಾಗೃತಿಗೊಳಿಸುವ ಇಂತಹ ಲೇಖನಗಳು ಹೆಚ್ಚು ಹೆಚ್ಚು ಬರಲಿ ಎಂದು ನಮ್ಮ ನಿರೀಕ್ಷೆಯಾಗಿದೆ. ಕರ್ನಾಟಕ ಸಂಘ ದುಬಾಯಿ ಸದಾ ನೆನಪಿನಲ್ಲಿ ಉಳಿಯುವಂತಹ ಉತ್ತಮ ಕಾರ್ಯಕ್ರಮ ನೀಡಿರುವ ಕನ್ನಡದ ಕಣ್ಮಣಿ ವಿಷ್ಣುವರ್ಧನ್ ಭಾರತಿ ಯವರ ಅತ್ಯುತ್ತಮ ಚಿತ್ರ ಲೇಖನ ಅಭಿಮಾನಿಗಳಿಗೆ ನೀಡಿದ ಗಲ್ಫ್ ಕನ್ನಡಿಗ ತಂಡಕ್ಕೆ ಅಭಿನಂದನೆಗಳು!
|
| Raghavendra Suvarna, Kirimunjeshwara | 2010-01-16 | | ನಾವು ಅತ್ಯುತ್ತಮ ಕನ್ನಡ ನಟನನ್ನು ಕಳೆದು ಕೊಂಡೆವು .ವಿಷ್ಣುವರ್ಧನ್ ರವರ ನಟನೆ ಯಾರಿಗೂ ಮೀರಲು ಸಾದ್ಯವಿಲ್ಲ. ’ತುತ್ತು ಅನ್ನ ತಿನ್ನೋಕ” ಈ ಹಾಡು ಯಾರೂ ಮರೆಯಲು ಸಾದ್ಯವಿಲ್ಲ. REALY WE LOST A GREAT ACTOR. |
| Satish Shetty Dubai (ALICO), Cherkady | 2010-01-15 | | Thanks to B.G.Mohandas and Ganesh Rai for bringing back the memories of vishnuvardhan in Dubai.It's a big loss to kannada film industry. As Mr Vijay Suvarna noted Kannada film industry is suffering because of lack of talent and lack of opportunity for the talented people.The demise of Vishnuvardhan is another blow for kannadabimanis. |
| ಜಯರಾಮ ಸೋಮಯಾಜಿ, ಬಿರ್ತಿ, ಸಾಲಿಕೇರಿ | 2010-01-15 | | ದುಬೈಯಲ್ಲಿ ನಡೆದ ಕಾರ್ಯಕ್ರಮದ ಸ್ಥಿರ ಚಿತ್ರಗಳ ಮೂಲಕ ಜೀವಂತವಾಗಿರಿಸಿ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ’ಗಲ್ಫ್ ಕನ್ನಡಿಗ’ವು ಅಗಲಿದ ನೆಚ್ಚಿನ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದೆ.
ಶ್ರೀ. ಬಿ ಜಿ. ಮೋಹನದಾಸ್ ಹಾಗೂ ಅವರ ತಂಡದವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.
ಅಗಲಿದ ಅಭಿನವ ಭಾರ್ಗವ, ಯಜಮಾನ, ವಿಷ್ಣುವರ್ಧನ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಆ ಭಗವಂತನು ಕರುಣಿಸಲಿ ಎಂದು ನಮ್ಮೆಲ್ಲರ ಪ್ರಾರ್ಥನೆ. ... ಜಯರಾಮ ಸೋಮಯಾಜಿ |
| K.B.Jagdish, Kinnigoli/Bahrain | 2010-01-14 | | ಕನ್ನಡ ಚಿತ್ರರಂಗ ಕಂಡ ಅಪೂರ್ವ ನಟರಲ್ಲೊಬ್ಬರಾದ ಸಾಹಸಸಿಂಹ ಡಾ|ವಿಷ್ಣುವರ್ಧನ್ ಇವರ ಅಕಾಲಿಕ ಕಣ್ಮರೆ ನಿಜಕ್ಕೂ ಚಲನಚಿತ್ರಪ್ರಪಂಚವನ್ನು ಬಡವಾಗಿಸಿದೆ ಅಂತೆಯೇ ಕನ್ನಡ ಚಿತ್ರರಸಿಕರಿಗಂತೂ ಭರಿಸಲಾರದ ನಷ್ಟವೇ ಸರಿ. ಪಂಚಭಾಷಾತಾರೆಯಾಗಿದ್ದ ಡಾ|ವಿಷ್ಣುವರ್ಧನ್ ರವರು ಕಲಾಬ್ರಹ್ಮ ದಿ|ಪುಟ್ಟಣ್ಣ ಕಣಗಾಲ್ ರವರು ನಿರ್ದೇಶಿಸಿದ \"ನಾಗರಹಾವು\" ಚಿತ್ರದಿಂದಾರಂಭಿಸಿ ಸುಮಾರು ೨೦೦ ಚಿತ್ರಗಳಲ್ಲಿ ತಮ್ಮ ವೈವಿಧ್ಯಮಯ ನಟನೆಯಿಂದ ಕಲಾರಸಿಕರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ.. ನಮ್ಮನ್ನಗಲಿದ ಇಂತಹ ಮಹಾನ್ ಕಲಾವಿದನಿಗೆ ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಪರವಾಗಿ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ, ಅವರು ಸಪತ್ನೀಕರಾಗಿ ೨೦೦೩ರಲ್ಲಿ ದುಬೈಕರ್ನಾಟಕಸಂಘ ಏರ್ಪಡಿಸಿದ್ದ \"ಕರ್ನಾಟಕೋತ್ಸವ\"ದ ಆತಿಥ್ಯವನ್ನು ಸ್ವೀಕರಿಸಿ ಆನಂದಿಸಿದ ಆ ಸವಿನೆನಪುಗಳನ್ನು ಚಿತ್ರಸಹಿತ ಮರುಕಳಿಸುವಂತೆ ಮಾಡಿದ ಶ್ರೀ ಬಿ.ಕೆ.ಗಣೇಶ್ ರೈಯವರಿಗೆ ಹಾಗೂ ಪ್ರಕಟಿಸಿದ ಗಲ್ಫಕನ್ನಡದ ಶ್ರೀ ಬೀಜೀ ಯವರಿಗೆ ಸಾದರ ಪ್ರಣಾಮಗಳು. |
| ವಿಜಯ್ ಸುವರ್ಣ , ಕತಾರ್ | 2010-01-14 | | \"ನೆನಪು\" ವಿನ ಮೂಲಕ ಸಾಹಸಸಿಂಹ ವಿಷ್ಣುವರ್ಧನ್ ರವರನ್ನು ಕಣ್ಣೆದುರಿಗೆ ಕೊಂಡು ಬಂದ ಗಲ್ಪ್ ಕನ್ನಡಿಗ ಬಳಗಕ್ಕೆ ಹ್ರತ್ಪೂರ್ವಕ ವಂದನೆಗಳು. ನಿಜವಾಗಿಯೂ ಕರ್ನಾಟಕದ ಕನ್ನಡ ಚಿತ್ರಪ್ರೇಮಿಗಳಿಗೆ ಮರೆಯಲಾಗದ ಭವ್ಯಚೇತನ ವಿಷ್ಣುವರ್ಧನ್...ಅವರ ನಟನೆಯ ಕೆಲವು ಚಿತ್ರಗಳಂತೂ ಕನ್ನಡ ಚಿತ್ರಪ್ರೇಮಿಯ ಕಣ್ಣೆದುರಿನಲ್ಲಿ ಸದಾ ಸುತ್ತುತ್ತಿರುತ್ತವೆ. ಉದಾಹರಣೆಗೆ, \"ಮಲಯಮಾರುತ, ಬಂಧನ, ನೀ ಬರೆದ ಕಾದಂಬರಿ, ಹೊಂಬೆಳಕು, ಮುತ್ತಿನಹಾರ, ಸುಪ್ರಭಾತ\" ಇತ್ಯಾದಿಗಳು. ಒಬ್ಬ ಪ್ರತಿಭಾವಂತ, ಉನ್ನತ ಮಟ್ಟದ, ಅಮೋಘ ನಟನನ್ನು ಕರ್ನಾಟಕ ಹಾಗೂ ಕನ್ನಡ ಚಿತ್ರಪ್ರೇಮಿಗಳು ಬೇಗದಲ್ಲೇ ಕಳೆದುಕೊಂಡದ್ದು ಕನ್ನಡಿಗರ ದುರಾಧ್ರಷ್ಟವೆನ್ನದೆ ವಿಧಿಯಿಲ್ಲ.
ನೇರವಾಗಿ ಹೇಳಬೇಕೆಂದರೆ ಕನ್ನಡ ಚಿತ್ರೋಧ್ಯಮದಲ್ಲಿ ಇಂದಿನದಿನಗಳಲ್ಲಿ ತಯಾಗುತ್ತಿರುವ ಚಿತ್ರಗಳನ್ನು ಚಲನಚಿತ್ರಗಳಲ್ಲಿ ಸದಭಿರುಚಿ ಇರುವ ಯಾವೊಬ್ಬನೂ ನೋಡಲು ಸಾದ್ಯವಿಲ್ಲ. ಹಣವಿರುವ ಯಾರುಯಾರೋ ಚಿತ್ರೋಧ್ಯಮಕ್ಕೆ ಧುಮುಕಿ ತಮ್ಮ ಮಗನನ್ನೋ ಇನ್ನಾರನ್ನೋ ಯಾವುದಕ್ಕೂ ಯೋಗ್ಯನಲ್ಲದವನನ್ನು ತಂದು ನಟನನ್ನಾಗಿಸುತ್ತಾ ಕನ್ನಡ ಚಿತ್ರರಂಗವೇ ಗಬ್ಬೆದ್ದು ಹೋಗುವಂತಾಗಿದೆ. ಕೆಲವು ಉತ್ತಮ ನಟರುಗಳು ಇದ್ದರು ಕೂಡಾ ಅವರಿಗೆ ಬೇಕಾಗುವ ಅವಕಾಶ ಲಭಿಸುತ್ತಿಲ್ಲ. ಕನ್ನಡದ ಮೇರು ನಟರೊಬ್ಬರ ಮಕ್ಕಳು ಚಿತ್ರರಂಗದಲ್ಲಿದ್ದು ಆ ಹಿಮಾಲಯದಂತಹಾ ಅತ್ತ್ಯುತ್ಕ್ರಷ್ಟ ನಟನ ಹೆಸರಿನಲ್ಲಿಯೇ ತಮ್ಮ ದಿನಗಳನ್ನು ನೂಕುತ್ತಿರುವರಲ್ಲದೆ ಬೇರಾವ ಯೋಗ್ಯತೆಗಳೂ ಅವರಲ್ಲಿಲ್ಲ. ಒಬ್ಬನಿಗಂತೂ ಕನ್ನಡ ಭಾಷೆಯ ಉಚ್ಚಾರವೇ ಸರಿಯಾಗಿ ಬರುತ್ತಲಿಲ್ಲ... ಅವರಿಗೂ ಕೂಡಾ ಹಲವಾರು ಬಿರುದುಗಳು...ಬಿರುದಾವಳಿಗಳು...ತಂದೆಯ ಮೆರುತನದ ವಶೀಲಿ ಅಷ್ಟೇ.
ವಿಷ್ಣುವರ್ಧನ್ ರವರ ನೆನಪನ್ನು \"ನೆನಪು\" ಮೂಲಕ ಮನಮುಟ್ಟುವ ಬರಹದಿಂದ ಸಾಕಾರಗೊಳಿಸಿದ ಗಣೇಶ್ ರೈ ಯವರಿಗೆ ಧನ್ಯವಾದಗಳು. |
| Harish Kodi, Dubai | 2010-01-14 | | Memories will neve fade....I was surprised by seeing this article those precious moments. Many Thanksto Gulf kannadiga for republishing this article. |
| Mohan Attavar, Dubai | 2010-01-14 | | Thanks Ganesh Rai and B.G. for bringing back old memories of our glorious days of Karnataka Sangha Dubai in general and our encounter with the great actor and a good human being Vishnuvardhan in particular. I still cherish the dhow ride we all had with the actor and his family where Vishnu mingled with everyone. No doubt Vishnu was my favorite actor during my Mangalore days and he shall always remain in my heart. I pray god to grant him eternal peace |
| harish shetty, abu dhabi | 2010-01-14 | | nice flash back,thanks for your golden collection, old is gold. |
|