`ಅಭಿನವ ಭಾರ್ಗವ'ನಿಗೆ `ಛಾಯಾ ಗುಚ್ಛ'ದ ಮೂಲಕ ಭಾಷ್ಪಾಂಜಲಿ |
ಪ್ರಕಟಿಸಿದ ದಿನಾಂಕ : 2010-01-13
{ VERY RARE & MEMORABLE PICS }
ಕನ್ನಡ ಚಿತ್ರರಂಗದ ವಿಭಿನ್ನ ನಟ, ಅಭಿಮಾನಿಗಳ ಪಾಲಿನ ಸಾಹಸಸಿಂಹ, ನಟ ಭಾರ್ಗವ ಡಾ. ವಿಷ್ಣುವರ್ಧನ್ ಇನ್ನು ನೆನಪು. ಡಾ. ರಾಜ್ ನಂತರ ಕನ್ನಡ ಚಿತ್ರರಂಗದಲ್ಲಿ ಅಪೂರ್ವ ಅಭಿಮಾನಿ ಸಮೂಹವನ್ನು ಹೊಂದಿದ್ದ ಈ ಹಿರಿಯ ನಟನ ನಿಧನದಿಂದ ಕನ್ನಡ ಚಿತ್ರರಂಗದ `ಮುತ್ತಿನ ಹಾರ'ದಿಂದ ಅಮೂಲ್ಯ ಮುತ್ತೊಂದು ಕಳಚಿ ಬಿದ್ದಂತಾಗಿದೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ಅಭಿನಯಿಸಿ ಬಹುಭಾಷಾ ತಾರೆಯಾಗಿ ಕಂಗೊಳಿಸಿ `ಅಭಿನವ ಭಾರ್ಗವ' ಎಂದೆಣಿಸಿಕೊಂಡರು.
`ನನ್ನ ಹಾಡು ನನ್ನದು... ನನ್ನ ರಾಗ ನನ್ನದು... ' ಎಂಬ ರೀತಿಯಲ್ಲಿಯೇ ವಿಭಿನ್ನ ಅಭಿನಯ ಶೈಲಿ ಮತ್ತು ಹಾವಭಾವಗಳಿಂದ ಎಲ್ಲಾ ವರ್ಗದ ಪ್ರೇಕ್ಷರಿಗೂ ವಿಷ್ಣು ಆಪ್ತವಾಗುತ್ತಾ ಹೋದರು. ಸಾಹಸ ಸಿಂಹನಾಗಿದ್ದ ವಿಷ್ಣು `ಬಂಧನ'ದ ಬಳಿಕ ಹೆಂಗಳೆಯರ ಪಾಲಿನ ನೆಚ್ಚಿನ ನಟನಾದರು.
ಮೂರೂವರೆ ದಶಕಗಳ ಸಾರ್ಥಕ ವೃತ್ತಿಜೀವನ ನಡೆಸಿದ ಈ ಮೇರು ನಟನ ಅಗಲುವಿಕೆಯಿಂದ ಕನ್ನಡ ಚಿತ್ರರಂಗದ ಆಧಾರವೊಂದು ಕುಸಿದಂತಾಗಿದೆ ಎಂದರೆ ಖಂಡಿತವಾಗಿಯೂ ಅತಿಶಯೋ ಕ್ತಿಯಾಗಲರಾದು. ಹಲವಾರು ಯುವ ನಟರಿಗೆ ಮಾದರಿಯಾಗಿ, ಚಿತ್ರೋದ್ಯಮದ ಹಿರಿಯಣ್ಣನಂತಿ ದ್ದ ವಿಷ್ಣುವರ್ಧನ್ ಅಗಲುವಿಕೆ ಅವರ ಅಭಿಮಾನಿ ಬಳಗವನ್ನು ದು:ಖದ ಮಡುವಿನಲ್ಲಿ ಮುಳುಗು ವಂತೆ ಮಾಡಿದೆ.
ಭಾವಪೂರ್ಣ ಅಭಿನಯ ಶರಧಿಗೆ ಈ ಅಪೂರ್ವ `ಛಾಯಾ ಗುಚ್ಛ'ದ ಮೂಲಕ ಭಾಷ್ಪಾಂಜಲಿ ಸಲ್ಲಿಸುತ್ತಿದೆ.
ವರದಿಯ ವಿವರಗಳು |
 |
ಕೃಪೆ : ಚಿತ್ರಗಳು : ಭವಾನಿ ಲಕ್ಷ್ಮೀ ನಾರಾಯಣ ಮತ್ತು `ಉದಯವಾಣಿ' `ರೂಪತಾರಾ' ಸಂಗ್ರಹ. ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-13 00:00:00
|
|
| ranjana, udupi,barkur | 2010-01-16 | | i love vishnu very much. ಅವರನ್ನ ಮರೆಯೋಕೆ ಆಗಲ್ಲ. ಅವರು ನಮ್ಮೊಂದಿಗಿಲ್ಲ ಎನ್ನೋ ವಿಷಯವನ್ನ ಅರಗಿಸಿಕೊಳ್ಳೋದೆ ಕಷ್ಟ. ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ...ವಿಷ್ಣು ನೀವು ಇನ್ನೊಮ್ಮೆ ಕರುನಾಡಲ್ಲಿ ಹುಟ್ಟಿ ಬನ್ನಿ....... |
|