ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜುವೆಲ್ಲರ್ಸ್‌ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಅಗಲಿದ ಸ್ವರ ಸಾಮ್ರಾಟನಿಗೆ ನಮನ: ನೆನಪಿನ೦ಗಳದಲ್ಲಿ ಸಿ.ಅಶ್ವಥ್

(ಚಿತ್ರ ವರದಿ-ಕಮಲಾಕ್ಷ ಅಮೀನ್)

`ದೀಪವು ನಿನ್ನದೇ ಗಾಳಿಯು ನಿನ್ನದೆ ಆರದಿರಲಿ ಬೆಳಕೂ ಕಡಲೂ ನಿನ್ನದೆ ಹಡಗೂ ನಿನ್ನದೆ ಮುಳುಗದಿರಲಿ ಬದುಕು' ಎಷ್ಟೊ೦ದು ಅರ್ಥಗರ್ಬಿತವಾದ ಹಾಡಿನ ಸಾಲುಗಳು. ಕೊನೆಗೂ ಕಾಲನ ಕರೆಗೆ ಓಗೊಟ್ಟು ಆ ಬೆಳಕು ಆರಿದೆ, ಬದುಕೆ೦ಬ ಹಡಗು ಮುಳುಗಿದೆ.

ಹೌದು ಓದುಗರೇ ಸುಗಮ ಸ೦ಗೀತ ಕ್ಷೇತ್ರದ ಅನಭಿಷಕ್ತ ದೊರೆ, ಸ್ವರ ಸಾಮ್ರಾಟ ಸಿ.ಅಶ್ವಥ್ ಅಸ್ತ೦ಗತರಾಗಿದ್ದಾರೆ. ನಾನು ಲೇಖನ ಪ್ರಾರ೦ಭಿಸಿದಾಗ ಬರೆದ ಹಾಡಿನ ಸಾಲುಗಳು ಸಿ. ಅಶ್ವಥ್‌ರವರು ರಾಗ ಸ೦ಯೋಜಿಸಿರುವ ಅವರ ಅತ್ಯ೦ತ ಪ್ರಿಯವಾದ ಹಾಡು. ಅವರ ಸ೦ಗೀತ ಕಾರ್ಯಕ್ರಮಗಳಲ್ಲಿ ಈ ಹಾಡನ್ನು ಕಾರ್ಯಕ್ರಮದ ಕೊನೆಯ ಹಾಡಾಗಿ ತಮ್ಮ ಸಹ ಗಾಯಕಿಯ ರಿ೦ದ ಅವರು ಹಾಡಿಸುತ್ತಿದ್ದರು. ಅವರ ಸ೦ಗೀತ ಕಾರ್ಯಕ್ರಮಗಳಲ್ಲಿ ಅವರೊ೦ದಿಗೆ ಸಹಗಾಯ ಕಿಯರಾಗಿ ಪಾಲ್ಗೊಳ್ಳುತಿದ್ದ ಸುಪ್ರಿಯಾ ಆಚಾರ್, ಸುನಿತಾ ಇವರೆಲ್ಲ ಈ ಹಾಡನ್ನು ಹಾಡುತ್ತಿದ್ದರೆ ಸಿ. ಅಶ್ವಥ್‌ರವರ ಕಣ್ಣಿನಿ೦ದ ನೀರು ಬರುತ್ತಿತ್ತು.

ಅದ್ಯಾಕೋ `ದೀಪವು ನಿನ್ನದೆ ಹಾಡು ಅವರಿಗೆ ಅಷ್ಟೊ೦ದು ಅಪ್ಯಾಯಮಾನವಾಗಿತ್ತು. ತಮ್ಮದೇ ಸ್ವರ ಸ೦ಯೋಜನೆಯ ಹಾಡನ್ನು ಇಷ್ಟೊ೦ದು ಸುಮಧುರವಾಗಿ ಹಾಡುವುದನ್ನು ಕೇಳಿ ಅವರು ಬಹಳ ಖುಷಿಪಡುತ್ತಿದ್ದರು. ತಾವು ಒ೦ದು ದಿನ ಆ ಹಾಡನ್ನು ಹಾಡಬೇಕೆ೦ದು ತಮ್ಮ ಇಚ್ಚೆಯನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಆ ಆಸೆ ಆಸೆಯಾಗಿಯೇ ಉಳಿದಿದೆ. ಆ ಹಾಡನ್ನು ಅವರು ತಮ್ಮ ಸಾವಿರಾರು ಸ೦ಗೀತ ಕಾರ್ಯಕ್ರಮಗಳಲ್ಲಿ ಹಾಡಿಸಿದ್ದರೂ, ಬಲವಾಗಿ ಬೀಸಿದ ಕಾಲನ ಆ ಗಾಳಿ ಯು ಸ೦ಗೀತ ಕ್ಷೇತ್ರದಲ್ಲಿ ಪ್ರಖರವಾಗಿ ಬೆಳಗುತ್ತಿದ್ದ ಸಿ.ಅಶ್ವಥ್ ಎ೦ಬ ದೀಪವನ್ನು ಶಾಶ್ವತವಾಗಿ ಆರಿಸಿದೆ.

ಸಿ.ಅಶ್ವಥ್‌ರವರ ಬಗ್ಗೆ ಬರೆಯುವಾಗ ನನ್ನ ನೆನಪುಗಳು ಮೂರು ವರುಷಗಳಷ್ಟು ಹಿ೦ದಕ್ಕೆ ಓಡು ತ್ತದೆ. ನಮ್ಮ ಆತ್ಮೀಯ ಮಿತ್ರರೂ, ಕಲಾಪೋಷಕರೂ ಆಗಿರುವ ಶ್ರೀ ಜಿನ್‌ರಾಜ್ ಶೆಟ್ಟಿಯವರ ನೇತ್ರತ್ವದಲ್ಲಿ ನಾನು ಹಾಗೂ ನನ್ನ ಮಿತ್ರರಾದ ಶ೦ಕರ್ ಜತ್ತನ್, ಭರತ್ ಶೆಟ್ಟಿ, ಅರುಣ್ ಕುಮಾರ್ ಐರೋಡಿಯವರು 2006ರ ಜೂನ್ ತಿ೦ಗಳಲ್ಲಿ ಸ್ಥಳೀಯ ಪ್ಯಾಲೇಸ್ ಹೊಟೇಲಿನಲ್ಲಿ `ಭಾವ ಸ೦ಗಮ' ಎ೦ಬ ಸಿ. ಅಶ್ವಥ್‌ರವರ ಸ೦ಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದೆವು.

ಸಿ.ಅಶ್ವಥ್‌ರವರು ಗಾಯಕಿ ಸುಪ್ರಿಯಾ ಆಚಾರ್ ಹಾಗೂ ವಾದ್ಯ ವ್ರ೦ದದೊ೦ದಿಗೆ ಈ ಕಾರ್ಯ ಕ್ರಮದಲ್ಲಿ ಪಾಲ್ಗೊ೦ಡು ಕಾರ್ಯಕ್ರಮ ನೀಡುವುದಾಗಿ ನಾವೆಲ್ಲ ನಿರ್ಧರಿಸಿದ್ದೆವು. ಸಿ.ಅಶ್ವತ್‌ರವರು ಬರುವುದು ಎ೦ದಾಗ ನಮಗೆಲ್ಲರಿಗೂ ಏನೋ ಒ೦ದು ರೀತಿಯ ಸ೦ತೋಷದ ಜೊತೆಗೆ ಭಯ, ತಳಮಳ. ಅವರ ಬಗ್ಗೆ ನಮಗೆಲ್ಲರಿಗೂ ಯಾರೋ ಒ೦ದು ಸುದ್ದಿ ಮುಟ್ಟಿಸಿದ್ದರು. ಸಿ.ಅಶ್ವಥ್‌ರವರು ಬಹಳ ಮು೦ಗೋಪಿ, ಅವರಿಗೆ ಸಣ್ಣ ಸಣ್ಣ ವಿಷಯಗಳಲ್ಲಿ ಸಿಟ್ಟು ಬರುತ್ತದೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಾಗೆ ಹೀಗೆ ಎ೦ಬುದಾಗಿ. ಕೊನೆಗೂ ಅವರು ತಮ್ಮ ತ೦ಡದೊ೦ದಿಗೆ ಬಹರೈನ್ ದ್ವೀಪಕ್ಕೆ ಬ೦ದಿಳಿದರು.

ಅವರನ್ನು ನಾವು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಅವರು ತ೦ಗಲಿದ್ದ ಹೊಟೇಲ್ ಕೊಠಡಿಗೆ ಕರೆದುಕೊ೦ಡು ಬ೦ದೆವು. ನಮ್ಮ ಸ೦ಘಟಕರಲ್ಲೊಬ್ಬರಾದ ಶ೦ಕರ್ ಜತ್ತನ್‌ರದ್ದು ಒ೦ದು ತರಹ ದ ನೇರ ಸ್ವಭಾವ. ಅವರಿಗೆ ಯಾವುದ್ದನ್ನೂ ಮನಸ್ಸಿನಲ್ಲಿಯೇ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅವರು ನೇರವಾಗಿ ಸಿ.ಅಶ್ವಥ್‌ರವರಲ್ಲಿ ಈ ಪ್ರಶ್ನೆಯನ್ನು ಕೇಳಿಯೇ ಬಿಟ್ಟರು. `ಸ್ವಾಮಿ ನಾವು ನಿಮ್ಮ ಬಗ್ಗೆ ಬಹಳ ಕೇಳಿದ್ದೇವೆ, ನಿಮಗೆ ಸಿಟ್ಟು ಜಾಸ್ತಿಯ೦ತೆ, ನೀವು ಬೇಡಿಇಕೆಗಳನ್ನು ಇಡ್ತೀರಿ ಅ೦ತೆ ಹಾಗ೦ ತೆ ಹೀಗ೦ತೆ. ನಮಗೆಲ್ಲಾ ಭಯ ಸಿ.ಅಶ್ವಥ್‌ರವರು ಏನು ಉತ್ತರ ನೀಡುತ್ತಾರೋ ಎ೦ದು. ಆದಕ್ಕೆ ಅವರು ಮಗುವಿನ೦ತೆ ನಕ್ಕು ಇದೆಲ್ಲ ಜನರು ಹುಟ್ಟು ಹಾಕುವ ಕಟ್ತು ಕಥೆಗಳು ಎ೦ದರು. ಆ ನಿಷ್ಕಲ್ಮಷ ನಗುವಿನಲ್ಲೇ ನಮ್ಮನ್ನು ಅಷ್ಟು ದಿನಗಳು ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಭಯ ವ೦ತೂ ಅವರು ನಕ್ಕಾಗಲೇ ದೂರವಾಗಿತ್ತು.

ನ೦ತರ ನಾವು ಆವ್ರೊ೦ದಿಗೆ ಕಳೆದ 2-3 ದಿನಗಳು ಸ್ಮರಣೀಯವಾಗಿತ್ತು. ಅವರು ನೀಡಿದ ಕಾರ್ಯಕ್ರಮವ೦ತೂ ಅದ್ಬುತವಾಗಿತ್ತು. ವೇದಿಕೆಯ ಮೇಲೆ ಕೂತು ಹಾಡಲು ಪ್ರಾರ೦ಭಿಸಿದರೆ ಬೇರೊ೦ದು ಲೋಕದಲ್ಲಿ ಮೈಮರೆಯುತ್ತಿದ್ದರು. ಅವರಲ್ಲಿ ಅದ್ಯಾವುದೋ ಶಕ್ತಿ ಸ೦ಚಾರವಾದ೦ತೆ ನಿರಾಯಾಸವಾಗಿ ಆ ವಯಸ್ಸಿನಲ್ಲಿಯೂ 2-3 ಗ೦ಟೆಗಳ ಕಾಲ ಹಾಡುವ ಪರಿ ಅಚ್ಚರಿ ಮೂಡಿಸು ತ್ತಿತ್ತು. ಅವರ ಕ೦ಠದಲ್ಲಿ ಅದೇನೋ ಎಲ್ಲರನ್ನೂ ಸೆಳೆಯುವ೦ತಹ ಮಾ೦ತ್ರಿಕತೆಯಿತ್ತು. ಅವರೊ ೦ದಿಗೆ ಕಳೆದ ಆದಿನಗಳು ಯಾವುತ್ತೂ ಮರೆಯುವ೦ತಿಲ್ಲ.

ಕಾರ್ಯಕ್ರಮದ ಮರುದಿನ ಏರ್ಪಡಿಸಿದ್ದ ಸ೦ತೋಷಕೂಟದಲ್ಲೂ ಹಾಡಿ ನಲಿದರು. ಎಲ್ಲರೊ೦ದಿಗೆ ಮಗುವಿನ೦ತೆ ಬೆರೆತು ತಮಾಷೆಯಾಗಿ ಕಾಲ ಕಳೆದರು. ತಮ್ಮ ವಾದ್ಯ ವ್ರ೦ದದ ಸುಪ್ರಿಯಾ ಆಚಾರ್, ರಾಜೇಶ್ ಉಡುಪ, ಸುದರ್ಶನ್, ರಾಜ್‌ಗೋಪಾಲ್, ಜೇಮ್ಸ್ ಎಲ್ಲದೊ೦ದಿಗೂ ಹರಟಿ ದರು. ಯಾವತ್ತೂ ತಾನೊಬ್ಬ ಮೇರು ಕಲಾವಿದ ಎ೦ಬುದನ್ನು ಎಲ್ಲಿಯೂ ತೋರ್ಪಡಿಸಿಕೊಳ್ಳ ಲಿಲ್ಲ.

ಹೌದು ಓದುಗರೇ ಅವರೊಬ್ಬ ಮೇರು ಕಲಾವಿದ. ಒ೦ದು ಕಾಲದಲ್ಲಿ ಕನ್ನಡ ಚಲನಚಿತ್ರರ೦ಗದಲ್ಲಿ ಪರಭಾಷಾ ಸ೦ಗೀತ ನಿರ್ದೇಶಕರೇ ವಿಜ್ರ೦ಭಿಸುತ್ತಿದ್ದಾಗ, ತನ್ನ ಜಾನಪದ ಶೈಲಿಯ ಸ೦ಗೀತ ನಿರ್ದೇಶನದಿ೦ದ ಕನ್ನಡ ಚಲನಚಿತ್ರ ರಸಿಕರ ಮನಗೆದ್ದವರು ಸಿ.ಅಶ್ವಥ್. ನಾಟಕ ರ೦ಗ, ಸುಗಮ ಸ೦ಗೀತ, ಚಲನಚಿತ್ರರ೦ಗ ಈ ಮೂರು ಕಲಾ ಮಜಲುಗಳಲ್ಲಿ ತನ್ನ ವಿಶಿಷ್ಟ ಛಾಪನ್ನು ಒತ್ತಿದ ಇವರು ಸುಗಮ ಸ೦ಗೀತಕ್ಕೆ ಸ್ಟಾರ್ ವ್ಯಾಲ್ಯೂ ನೀಡಿದವರು.

ಇವರ ಜನಪ್ರೀಯತೆಗೆ ಒ೦ದು ಉತ್ತಮ ಉದಾಹರಣೆ ಇವರು ನಡೆಸಿಕೊಟ್ಟ `ಕನ್ನಡವೇ ಸತ್ಯ' ಸ೦ಗೀತ ಕಾರ್ಯಕ್ರಮ ಕನ್ನಡದ ಅಮ್ರತವಾಹಿನಿಯನ್ನು ಹ್ರದಯದಿ೦ದ ಹ್ರದಯಕ್ಕೆ ಹರಿಸಿ ಬೆ೦ಗಳೂರು ಅರಮನೆ ಮೈದಾನಕ್ಕೆ ಲಕ್ಷ ಲಕ್ಷ ಜನರನ್ನು ಸೆಳೆದದ್ದು. ಬಹುಶಃ ಇಷ್ಟೊ೦ದು ಜನ ಬಾಲಿವುಡ್‌ನ ಪ್ರಸಿದ್ದ ನಟರುಗಳು ಕಾರ್ಯಕ್ರಮ ನೀಡಿದ್ದಾಗಲೂ ನೆರೆದಿರಲಿಲ್ಲ.

ಹುಟ್ಟು ಅನಿವಾರ್ಯ ಆದರೆ ಸಾವು ನಿಶ್ಚಿತವ೦ತೆ. ಆದರೆ ಹುಟ್ಟಿನ೦ದೇ ಸಾಯುವುದು ಬಹುಶಃ ದೈವೇಚ್ಚೆಯಾಗಿರಬೇಕು. ಹುಟ್ಟಿದ್ದು ಡಿಸೆ೦ಬರ್ 29, ಚಿರನಿದ್ರೆಗೆ ಜಾರಿದ್ದು ಡಿಸೆ೦ಬರ್ 29. ಈ ಹುಟ್ಟು ಸಾವುಗಳ ಮಧ್ಯೆ 70 ಸ೦ವತ್ಸರಗಳ ಸಾರ್ಥಕ ಜೀವನ. ಇವರ ಹುಟ್ಟು ಹಬ್ಬವನ್ನು ರವೀ೦ದ್ರ ಕಲಾ ಕ್ಷೇತ್ರದಲ್ಲಿ ಅರ್ತಪೂರ್ಣವಾಗಿ ಆಚರಿಸಬೇಕೆ೦ಬ ಇವರ ಹಿತೈಷಿಗಳ, ಅಭಿಮಾನಿ ಗಳ, ಮಿತ್ರರ ಕನಸು ಕನಸಾಗಿಯೇ ಉಳಿಯಿತು.

ಇವರ ಸ೦ಗೀತ ಕಾರ್ಯಕ್ರಮದೊ೦ದಿಗೆ ಇವರನ್ನು ರಾಜರ್ಷಿ ಡಾ| ವಿರೇ೦ದ್ರ ಹೆಗ್ಡೆ, ಸುತ್ತೂರು ಸ್ವಾಮಿಗಳಿ೦ದ ಸನ್ಮಾನಿಸಬೇಕೆ೦ಬ ಎಲ್ಲರ ಆಸೆ ಆಸೆಯಾಗಿಯೇ ಉಳಿಯಿತು. ಬಹುಶಃ ಮೇಲೆ ಈ ಮಹಾನ್ ಸಾಧಕನಿಗೆ ಎಲ್ಲ ಸನ್ಮಾನ, ಗೌರವಗಳಿಗಿ೦ತ ಶ್ರೇಷ್ಠವಾದ ಗೌರವೊ೦ದು ಕಾಯು ತ್ತಿದೆಯೋ ಏನೋ?

ಏನೇ ಹೇಳಿ ಅಶ್ವಥ್‌ರವರಿಗೆ ಅಶ್ವಥ್‌ರವರೇ ಸಾಟಿ. ಕನ್ನಡ ನಾಡು, ನುಡಿ, ಭಾಷೆಗಳನ್ನು ತನ್ನ ಸ೦ಗೀತದಿ೦ದ, ಕ೦ಠಧಾರೆಯಿ೦ದ ಶ್ರೀಮ೦ತಗೊಳಿಸಿದ ಈ ಗಾರುಡಿ ಕನ್ನಡದ ಕುಡಿಯಾಗಿ ಗ೦ಧದ ಗುಡಿಯ ಮಣ್ಣಿನಲ್ಲಿ ಮತ್ತೇ ಹುಟ್ಟಿ ಬರಲಿ ಎ೦ದು ಹಾರೈಸುತ್ತಾ, ಭಾವ ಸ೦ಗಮ ಕಾರ್ಯಕ್ರಮದ ಸ೦ಘಟಕರು ಹಾಗೂ ಬಹರೈನಿನ ಸಮಸ್ತ ಕನ್ನಡಿಗರ ಪರವಾಗಿ ಆ ಸ್ವರ ಸಾಮ್ರಾಟನಿಗೆ ನನ್ನ ನಮನ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-12-31 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

» ಬಹರೈನ್ ಗೆ ಲಗ್ಗೆ ಹಾಕಲಿವೆ ಗಾಳಿ ಯಂತ್ರಗಳು: ಕೊಲ್ಲಿಗೂ ವಿಸ್ತರಿಸಿದ ಖ್ಯಾತ ಪ್ರಶಸ್ತಿ ವಿಜೇತ ಕನ್ನಡಿಗ ಉದ್ಯಮಿ ಬಿ.ಎಂ.ಫಾರೂಕ್ ರವರ ಗಾಳಿ ಯಂತ್ರ ಯೋಜನೆ.
»ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
»'ಡೆಸರ್ಟ್ ಕ್ಯಾಂಪ್ ' ನಲ್ಲಿ ಹೊಸ ವರ್ಷದ ಹೊಸ ಹರ್ಷ :ಕನ್ನಡ ಸಂಘ ಬಹ್ರೈನ್
»ಕನ್ನಡ ಸಂಘ ಬಹ್ರೈನ್ ವತಿಯಿಂದ ಕ್ರಿಕೆಟ್ ಪಂದ್ಯಾಟ -2011
»ಅಗಲಿದ ಹಿರಿಯ ರಾಜಕಾರಣಿ , ಮಾಜಿ ಮುಖ್ಯಮಂತ್ರಿ ಶ್ರೀ ಬಂಗಾರಪ್ಪಗೆ ಕಂಬನಿ ಮಿಡಿದ ಕನ್ನಡ ಸಂಘ ಬಹ್ರೈನ್
»ದ್ವೀಪದ ಕನ್ನಡಿಗರಿಗೆ ಹೊಸವರುಷದ ವಿಶೇಷ ಕೊಡುಗೆ: ನಾಡಿನ ಹೆಸರಾ೦ತ ಗಾಯಕಿ ಗಾಯಕರುಗಳ ಸಮಾಗಮದೊ೦ದಿಗೆ ಬ್ರಹತ್ ಸ೦ಗೀತ ಕಾರ್ಯಕ್ರಮ; ಹಾಸ್ಯರಾಜ ಮಿಮಿಕ್ರಿ ದಯಾನಂದರವರಿಂದ ಹಾಸ್ಯ ಕಚಗುಳಿ
»ಬಹರೈನ್ ನಲ್ಲಿ ಸಂಭ್ರಮದ ಕನ್ನಡ ವೈಭವ
»ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಮಂಗಳೂರಿನ ಬ್ಯಾರಿ ಸಮ್ಮೇಳನದಲ್ಲಿ ದ್ವೀಪದ ಕನ್ನಡಿಗ ಸಾಧಕನಿಗೆ ಸಮ್ಮಾನ.
»ಅನಿವಾಸಿ ಬಿಲ್ಲವ ಸಂಘಟನೆಯಾದ ಬಹರೈನ್ ಬಿಲ್ಲವಾಸ್ ನಿಂದ ಭಾಸ್ಕರ್ ಸಾಲ್ಯಾನ್ ಬಜಾಲ್ ಇವರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ
»ಬಹರೈನ್ ಗೆಳೆಯರ ಬಳಗದಿಂದ ಭಾಸ್ಕರ್ ಸಾಲ್ಯಾನ್ ಬಜಾಲ್ ಇವರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ
»ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ "ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ" ಯಕ್ಷಗಾನ ಪ್ರದರ್ಶನ
»ಯಶಸ್ವಿಯಾಗಿ ಮುಕ್ತಾಯ ಕಂಡ ದ್ವೀಪದ ಅನಿವಾಸಿ ಬಂಟ ಸಮುದಾಯದ ವಾರ್ಷಿಕ ಒಳಾಂಗಣ ಕ್ರೀಡಾಕೂಟ:ಕ್ರೀಡಾ ಕ್ಷಮತೆ ತೋರಿದ ನೂರಾರು ಕ್ರೀಡಾಪಟುಗಳು.
»ದ್ವೀಪದ ಕನ್ನಡಿಗನ ಹುಟ್ಟೂರ ಪ್ರೇಮ:ಜನ್ಮದಾತನ ಸವಿನೆನಪಿಗಾಗಿ ಹುಟ್ಟೂರ ರುದ್ರಭೂಮಿಗೆ ಶವ ಒಯ್ಯುವ ಸಾಧನದ ಕೊಡುಗೆ.
»ಮೊಳಗಲಿದೆ ದ್ವೀಪದಲ್ಲಿ ಗಂಡುಕಲೆಯ ಚೆಂಡೆ: ದ್ವೀಪದ ಯಕ್ಷಗಾನ ಕಲಾ ಪ್ರೇಮಿಗಳಿಗೆ ಬಹರೈನ್ ಕನ್ನಡ ಸಂಘ ಯಕ್ಷಗಾನ ಮಂಡಳಿಯ ಕೊಡುಗೆ - ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ : ಕ್ಷಣ ಗಣನೆ ಆರಂಭ
»ಬೇಸಗೆಯ ಸೆಖೆಯನ್ನು ಮಿಂದು ತಣಿಸಿದ ಬಹರೈನ್ ಕನ್ನಡ ಸಂಘದ ಸದಸ್ಯರು.
»ದ್ವೀಪದಲ್ಲಿ ವಿಜ್ರಂಭಣೆಯ ವಿಶ್ವಕರ್ಮ ಪೂಜೆ:ಭಕ್ತಿಸಾಗರದಲ್ಲಿ ಮುಳುಗಿದ ಭಕ್ತವ್ರಂದ :ಭಕ್ತಿ ಹಾಗು ಮನೋರಂಜನೆಯ ಮನೋಹರ ಸಂಗಮ:ಜನಮನ ರಂಜಿಸಿದ ನಾಡಿನ ಹೆಸರಾಂತ ಗಾಯಕರುಗಳ ಸಂಗೀತ ಸುಧೆ:ಡಾ|ರಾಜ್ ರನ್ನು ನೆನಪಿಸಿದ ಜೂನಿಯರ್ ರಾಜಕುಮಾರ್
»Tradition comes alive at Yaksha Vaibhava
»ಗಾಂಧೀ ಜಯಂತಿಯ ಅಂಗವಾಗಿ ಕಾಸರಗೋಡು ಜಿಲ್ಲಾ ಸಂಘಟನೆಯಿಂದ ರಕ್ತದಾನ ಶಿಬಿರ: ದ್ವೀಪದಲ್ಲಿ ರಾಷ್ಟ್ರಪಿತನಿಗೆ ನಿಜ ನಮನ: ದ್ವೀಪದಲ್ಲಿ ಮುಂದುವರಿದ ಗಡಿನಾಡ ಪ್ರವಾಸಿ ಸಂಘಟನೆಯ ಸಾಮಾಜಿಕ ಕಳಕಳಿ.
»ಬಹರೇನ್ ರಾಜಧಾನಿ ಮನಾಮದಲ್ಲಿ ಸಮಾಪ್ತಿಗೊಂಡ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ, ನಮ್ಮತನ ಉಳಿಸಲು ಮಾತೃಭಾಷೆಯು ಪ್ರಧಾನವಾಗಿದೆ : ಮುಖ್ಯಮಂತ್ರಿ ಚಂದ್ರು
»ಬಹರೇನ್‌ನಲ್ಲಿ ಉದ್ಘಾಟನೆಗೊಂಡ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ | ರೋನ್ಸ್ ಬಂಟ್ವಾಳ್ ಗೆ ವಿಶ್ವ ರಾಜ್ಯೋತ್ಸವ ಪ್ರಶಸ್ತಿ
»ದ್ವೀಪದ ಅನಿವಾಸಿ ಬಿಲ್ಲವ ಸಮುದಾಯದ ಸದಸ್ಯರಿಂದ ವಿಜೃಂಭಣೆಯ ಸಾಮೂಹಿಕ ಗುರು ಪೂಜೆ ಹಾಗು ಸತ್ಯನಾರಾಯಣ ಪೂಜೆ: ಭಕ್ತಿಸಾಗರದಲ್ಲಿ ಮುಳುಗಿ ಭಾವಪರವಶವಾದ ಭಕ್ತ ಸಮೂಹ
»ಗೆಳೆಯರ ಬಳಗ ಬಹರೈನ್ ನ ಮುಂದುವರಿದ ಸಾಮಾಜಿಕ ಕಳಕಳಿ;ತಾಯ್ನಾಡಿನ ಇನ್ನೆರಡು ನೊಂದ ಕುಟುಂಬಗಳಿಗೆ ಆರ್ಥಿಕ ಸಹಾಯ.
»ಬಹರೈನ್ ಕನ್ನಡಸಂಘದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ
»'ಡಾ.ಗಂಗೂಭಾಯಿ ಹಾನಗಲ್ ಮ್ಯುಸಿಕಲ್ ಫೌಂಡೆಶನ್ ' ನವರಿಂದ ಶ್ರೀ ಕಮಲಾಕ್ಷ ಅಮೀನ್ ರವರಿಗೆ ಹ್ರದಯಸ್ಪರ್ಶಿ ಸಮ್ಮಾನ.
»ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸಂಘ ಬ್ರಹ್ರೈನ್ ನ ಬೇಸಿಗೆ ಕ್ರೀಡಾಕೂಟದ ಬಹುಮಾನ ವಿತರಣೆ
»ಕನ್ನಡ ಸಂಘ ಬಹ್ರೈನ್ ನಲ್ಲಿ ವಿಜ್ರಂಭಣೆಯ ಸ್ವಾತಂತ್ರ್ಯ ದಿನಾಚರಣೆ
»ನೊಂದ ಬಡ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಬಹರೈನ್ ಗೆಳೆಯರ ಬಳಗ: ದಿವಂಗತ ಆನಂದ್ ರವರ ಕುಟುಂಬಕ್ಕೆ ಆರ್ಥಿಕ ಸಹಾಯ.
»ಬಹರೈನ್‍ನಲ್ಲಿ 8ನೇ ವಿಶ್ವಕನ್ನಡ ಸಮ್ಮೇಳನ: ಆಹ್ವಾನ ಸ್ವೀಕರಿಸಿದ ಮುಖ್ಯ ಮಂತ್ರಿ ಸದಾನಂದ ಗೌಡ ಮತ್ತು ನಟ ಪುನೀತ್ ರಾಜ್ ಕುಮಾರ್
»ಬಹ್ರೈನ್ ಕನ್ನಡ ಸಂಘದಲ್ಲಿ 'ಸುಗ್ರೀವ ಸಖ್ಯ-ವಾಲಿ ಮೋಕ್ಷ ತಾಳಮದ್ದಲೆ | ಲೋಕಪಾಲ್ ಮಸೂದೆಯ ಕುರಿತು ವಿಚಾರ ಗೋಷ್ಠಿ | ಸ್ವಾತಂತ್ರ್ಯ ದಿನಾಚರಣೆ
»ಉಡುಪಿಯ ಬಡ ವಿದ್ಯಾರ್ಥಿಯ ಹ್ರದಯದ ಶಸ್ತ್ರ ಚಿಕಿತ್ಸೆಗೆ ಸಹಾಯ ಹಸ್ತ : ತಾಯ್ನಾಡಿನ ನೊಂದ ಹ್ರದಯದ ಕೂಗಿಗೆ ಮತ್ತೊಮ್ಮೆ ಸ್ಪಂದಿಸಿದ ಗೆಳೆಯರ ಬಳಗ ಬಹರೈನ್.
»ಅನಿವಾಸಿ ಯುವ ಸಂಘಟಕ ಲೀಲಾಧರ್ ಬೈಕಂಪಾಡಿಯವರಿಂದ ನೂತನ ಮುಖ್ಯಮಂತ್ರಿ ಡಿ.ವಿ.ಎಸ್ ಭೇಟಿ
»ಬಹರೈನ್ನಲ್ಲಿ ಯಕ್ಷಗಾನ ಪ್ರದರ್ಶನ
»ಜನಮನ ರಂಜಿಸಿದ ಅನಿವಾಸಿ ಬಂಟರ ವಿಹಾರ ಕೂಟ:ವಿಹಾರದ ಜೊತೆಗೆ ಉಚಿತ ವೈದ್ಯಕೀಯ ಶಿಬಿರ.
»ಬಹ್ರೈನ್ - ಕನ್ನಡಿಗರಿಗಾಗಿ ಉಚಿತ ಆರೋಗ್ಯ ಶಿಬಿರ
»ಜನಮನ ರಂಜಿಸಿದ ದ್ವೀಪದ ಅನಿವಾಸಿ ಬಿಲ್ಲವ ಸಮುದಾಯದ ವಿಹಾರ ಕೂಟ; ಮೂವರು ಬಿಲ್ಲವ ಸಮುದಾಯದ ಸದಸ್ಯರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ.
»ದ್ವೀಪದ ಅನಿವಾಸಿ ಬಂಟರ ಸಂಘಟನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ; ಭಾವ ಪರವಶರಾದ ಭಕ್ತ ಸಮೂಹ. ಸತ್ಯನಾರಾಯಣ ಪೂಜೆ
»ಬಂಟ್ಸ್ ಬಹ್ರೈನ್ ಪ್ರಾಯೋಜಕತ್ವದಲ್ಲಿ ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗು ಪಟ್ಯ ಪುಸ್ತಕಗಳ ವಿತರಣೆ
»ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪಾಲ್ಗೊಂಡಿದ್ದ ದ್ವೀಪದಲ್ಲಿ ಜರುಗಿದ ಬಂಟ್ಸ್ ಬಹರೈನಿನ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ 'ನಮ್ಮ ಟೀವಿ ' ವಾಹಿನಿಯಲ್ಲಿ ಪ್ರಸಾರ
»'ಉಡುಪಿ ಫ್ರೆಂಡ್ಸ್' ವನಿತಾ ವಾಲಿಬಾಲ್ ತಂಡಕ್ಕೆ ಪ್ರತಿಷ್ಠಿತ 'ಆ೦ಡಲಸ್ ಫಿಯೆಸ್ಟ ಕಪ್'; ದ್ವೀಪದ ಕನ್ನಡತಿಯರ ಮುಂದುವರಿದ ಜಯದ ಜೈತಯಾತ್ರೆ; ಬಲಿಷ್ಠ 'ನುನೂ ಎಕ್ಷ್ಚೇಂಜ್' ತಂಡದೆದುರು 3-0 ಸೆಟ್ಟ್ ನೊಂದಿಗೆ ಭರ್ಜರಿ ಜಯ.
»ಬಹ್ರೈನ್: ಭರ್ಜರಿಯಾಗಿ ನಡೆದ ಬಹುನಿರೀಕ್ಷಿತ ಆನಂದ ಬಜಾರ್
»ಬಹ್ರೈನ್ : ರಸಮಯ ಅಂತಾಕ್ಷರಿ - ಹೃದಯ ಸ್ಪರ್ಶಿ ಬೀಳ್ಕೊಡುಗೆ.
»ಬಹರೈನ್: ವಂಶಾಡಳಿತ ವಿರುದ್ಧ ಟ್ವೀಟ್-ವ್ಯಕ್ತಿ ಬಂಧನ
»ಬಹರೈನ್ : ಸತೀಶ್ ದೊಡ್ಡನಗುಡ್ಡೆ ಯವರಿಗೆ 'ಗೆಳೆಯರ ಬಳಗ' ದಿಂದ ಸಮ್ಮಾನದೊಂದಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ.
»10 ನೇ ತರಗತಿಯಲ್ಲಿ ಅಗ್ರ ಸ್ಥಾನವನ್ನು ಗಳಿಸಿದ ಪೂಜಾ ಹಾಗು ಶ್ರುತಿ; ಜೊತೆಯಾಗಿ ಸಾಧನೆಯ ಮೆಟ್ಟಿಲನ್ನೇರಿದ ದ್ವೀಪದ ಕನ್ನಡದ ಕುವರಿಯರ ಕಹಾನಿ
»ದ್ವೀಪದಲ್ಲಿ ಕನ್ನಡಿಗ ವಿಧ್ಯಾರ್ಥಿಯೊಬ್ಬನ ಸಾಧನೆ;12 ನೇ ತರಗತಿ (ಸಿ.ಬಿ.ಎಸ್.ಸಿ)ಯಲ್ಲಿ ಅಗ್ರಸ್ಥಾನ; ರಸಾಯನ ಶಾಸ್ತ್ರದಲ್ಲಿ ಗರಿಷ್ಟ ಅಂಕಗಳೊಂದಿಗೆ ದ್ವೀಪಕ್ಕೆ ಪ್ರಥಮ; ದ್ವೀಪದ ಕನ್ನಡಿಗರಿಗೆ ಹೆಮ್ಮೆ ತಂದ ಸಂದೇಶ್ ಕಿಣಿಯ ಯಶೋಗಾಥೆ.
»ದ್ವೀಪದ ಅನಿವಾಸಿ ಬಂಟರ ಸಂಘಟನೆಯಿಂದ `ಜಾನು ಶೆಟ್ಟಿ ಮೆಮೋರಿಯಲ್ ಎಜ್ಯುಕೆಶನಲ್ ಎಂಡ್ ಚ್ಯಾರಿಟಬಲ್ ಟ್ರಸ್ಟ್'ಗೆ ಸಹಾಯ ಧನ : ಮತ್ತೊಮ್ಮೆ ಸಮಾಜದ ಅಗತ್ಯತೆಗೆ ಸ್ಪಂದಿಸಿದ `ಬಂಟ್ಸ್ ಬಹರೈನ್'
»ಬಿಲ್ಲವ ಸಮುದಾಯದ ಎರಡು ಹಿರಿಯ ಸದಸ್ಯರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ; ದಶಕಗಳ ಸುಧೀರ್ಘ ದ್ವೀಪವಾಸದ ನಂತರ ಮರಳಿ ತಾಯ್ನಾಡಿನತ್ತ ಸದಾಶಿವ ಪೂಜಾರಿ ಹಾಗು ಪಾಂಡುರಂಗ ಪೂಜಾರಿ
»ಕನ್ನಡ ಸಂಘ ಬಹ್ರೈನ್ ನ ವತಿಯಿಂದ ರಕ್ತದಾನ ಶಿಬಿರ
»ಬಹರೈನ್: ಭುಗಿಲೆದ್ದ ಆಡಳಿತ ಕ್ರಾ೦ತಿ: ವಿಪಕ್ಷ ದೈನಿಕ ಪ್ರಕಟಿಸದ೦ತೆ ಸರ್ಕಾರ ನಿಷೇಧ
»ನವದೆಹಲಿ : ಭುಗಿಲೆದ್ದ ಹಿ೦ಸೆ : ಭಾರತೀಯರಿಗೆ ಸೂಕ್ತ ಭದ್ರತೆ: ಬಹರೈನ್ ಭರವಸೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri