|
ಪ್ರಕಟಿಸಿದ ದಿನಾಂಕ : 2009-12-31
ಜನನ: 18.09.1950 ನಿಧನ 30.12.2009
ನೀವೂ ಹೋದಿರಾ?
ಡಾ| ರಾಜ್ಕುಮಾರ್ ಹೋದಲ್ಲಿಗೆ ಡಾ| ವಿಷ್ಣುವರ್ಧನ್ ಸಹ ಹೋಗಿರುವುದು ದೊಡ್ಡ ಆಘಾತ ದಂತೆ ಕನ್ನಡ ಸಾಂಸ್ಕೃತಿಕ ರಂಗಕ್ಕೆ ಅನಿರೀಕ್ಷಿತವಾಗಿ ಸಿಡಿಲಿನಂತೆ ಬಡಿದಿದೆ.'ನಾನೇ ಬೇರೆ, ನನ್ ಸ್ಟೈಲೇ ಬೇರೆ' ಎಂಬ ಡಯಲಾಗ್ನ್ನು ಚಿತ್ರವೊಂದರಲ್ಲಿ ಹೇಳಿದ್ದ ವಿಷ್ಣುವರ್ಧನ್ ಸಾವಿನಲ್ಲೂ ಯಾವುದೇ ಸೂಚನೆ ಕೊಡದೆ ಮರೆಯಾಗಿ ಹೋಗಿದ್ದಾರೆ. ಬುದ್ಧಿವಂತ ಮನುಷ್ಯನನ್ನು ಸಾವು ಎಂದೂ ಆಶ್ಚರ್ಯ ಪಡಿಸುವುದಿಲ್ಲವಂತೆ. ಆದರೆ ನಾವು ಮನುಷ್ಯ ಮಾತ್ರರು, ದೇವರಲ್ಲ. ಬುದ್ಧಿ ವಂತರೂ ಅಲ್ಲ!
ವಿಷ್ಣುವರ್ಧನ್ರ ಸಾವು ಕೇವಲ ಒಬ್ಬ ನಟನ ಸಾವಲ್ಲ. ಸಾಂಸ್ಕೃತಿಕವಾಗಿ ನಾವು ಒಬ್ಬ ನಾಯಕ ನನ್ನು ಕಳೆದುಕೊಂಡಿದ್ದೇವೆ. ಭರವಸೆ ಇಲ್ಲದ ಹೊತ್ತಲ್ಲಿ ಬೆಳಕನ್ನು ಕಳೆದುಕೊಂಡ ಕನ್ನಡಿಗನಿಗೆ ಅನಾಥ ಪ್ರಜ್ಞೆ ಮಾತ್ರ ಉಳಿದಿದೆ.
ಕನ್ನಡಕ್ಕೆ ಸಾಂಸ್ಕೃತಿಕ ಐಕಾನ್ ಎಂಬಂತಿದ್ದ ಎಲ್ಲರೂ ಗೌರವಿಸುವಂತ ಐಕಾನ್ ಕಣ್ಮರೆಯಾ ಗಿದ್ದು ಶೂನ್ಯ ಭಾವನೆ ತಂದಿದೆ ಎಂದರೆ ಅದು ಕ್ಲೀಷೆಯಲ್ಲ. ನಿಜವಾದ ಅರ್ಥದಲ್ಲಿ ಕನ್ನಡದ ಪಾಲಿ ಗೆ ಈಗ ಶೂನ್ಯ ಆವರಿಸಿದೆ.
ಸಾಹಿತ್ಯದ ವಲಯದಲ್ಲಿ ತೇಜಸ್ವಿ ಮರೆಯಾದಾಗಲೂ ಮುಂದೆ ಯಾರು ದಾರಿ ತೋರುವವರು ಎಂಬ ಪ್ರಶ್ನೆ ಮೂಡಿತ್ತು. ಸಾಂಸ್ಕೃತಿಕ ವಲಯದಲ್ಲಿ ಅಭಯವಾಗಿ ಉಳಿಯಬಲ್ಲ ಐಕಾನ್ ರೂಪ ದಲ್ಲಿ ಇದ್ದವರು ವಿಷ್ಣುವರ್ಧನ್. ರಾಜ್ಯಕ್ಕೆ ಐಕಾನ್ಗಳೇ ಇಲ್ಲದ ಕ್ಷಣದಲ್ಲಿ ವಿಷ್ಣುವರ್ಧನ್ರ ಸಾವು ಕೇವಲ ಒಬ್ಬ ನಟನ ಸಾವಲ್ಲ. ಕನ್ನಡದ ಐಕಾನ್ ಒಂದರ ಸಾವು.
ಸಿನಿಮಾ ನಟರಿಗೆ ಭಾರತದ ಮಂದಿಯ ಮನಸ್ಸಿನಲ್ಲಿ ದೊಡ್ಡ ಸ್ಥಾನ. ಅದು ಭಾಷೆ ಮತ್ತು ಭಾವು ಕತೆಗೆ ಸಂಬಂಧಿಸಿದ್ದು. ಆ ಕಾರಣದಿಂದಲೇ ಗೋಕಾಕ್ ಚಳವಳಿ, ಉರ್ದು ವಾರ್ತೆಗಳ ಪ್ರಸಾರದ ತಡೆ ಮುಂತಾದ ಚಳವಳಿಗಳಲ್ಲಿ ಕನ್ನಡ ಚಿತ್ರರಂಗದ ನಾಯಕರು ವಹಿಸಿದ ಪಾತ್ರ ಐತಿಹಾಸಿಕ.
ಒಬ್ಬ ನಟನ ಜೊತೆಗೆ ಯಶಸ್ಸು ಸದಾ ಅಂಟಿಕೊಂಡಿರುವುದು ಕಠಿಣ. ಸಣ್ಣ ಹುಡುಗನೊಬ್ಬ ಗ್ಯಾಸ್ ಟ್ಯಾಂಕಿನೊಳಗೆ ಬೆಂಕಿ ಕಡ್ಡಿ ಗೀರಿಕೊಂಡು ಹೋದ ಹಾಗೆ ನಟರ ಜೀವಮಾನ.
ಅದೇ ಕಾರಣಕ್ಕೆ ಅನೇಕ ನಾಯಕರು ಒಂದು ದಿನದ ಹೀರೋ ಆಗಿ ಮಾರನೆ ದಿನ ಮಾಯವಾಗಿ ಬಿಟ್ಟರು. ಆದರೆ ೩೭ ವರ್ಷಗಳ ಕಾಲ ಚಿತ್ರರಂಗದಲ್ಲಿ ನಾಯಕನಾಗಿ ತನ್ನ ಪ್ರತಿಭೆಯನ್ನು ಮೆರೆ ದವರು ವಿಷ್ಣು. ಸಮರ್ಪಣಾ ಮನೋಭಾವದಿಂದ ದುಡಿದಿದ್ದರಿಂದ ಮಾತ್ರ ಅವರೊಬ್ಬ `ಐಕಾನ್' ಆಗಿ ಬೆಳೆಯಲು ಸಾಧ್ಯವಾಯಿತು. ಹೀರೋ ಆದವ ಪ್ರತಿಯೊಂದು ಸಂಕಷ್ಟವನ್ನು ಎದುರಿಸಬೇ ಕಾಗುತ್ತದೆ. ಆದರೆ ಅದನ್ನು ಸಂಕಷ್ಟ ಎಂದು ತಿಳಿಯಬೇಕಾಗಿಲ್ಲ ಎಂಬ ಅರಿವು ಅವರಿಗಿತ್ತು.
ತನಗೆ ಗೊತ್ತಿರುವುದನ್ನು ಸಮರ್ಥವಾಗಿ ನಿಭಾಯಿಸುತ್ತಾ ನಡೆದ ವಿಷ್ಣುವರ್ಧನ್ ಅನೇಕ ಅಡೆತಡೆ ಗಳನ್ನು ಎದುರಿಸಿದರೂ ತಮ್ಮ ಶಕ್ತಿ ಉಳಿಸಿಕೊಂಡರು. ನಟನಾಗುವುದು ಸುಲಭವಲ್ಲ, ಅದಕ್ಕಿಂತ ಮನುಷ್ಯನಾಗುವುದು ಇನ್ನೂ ಕಷ್ಟಕರ ಎನ್ನುವಾಗ ವಿಷ್ಣು ಇವೆರಡರ ಸಂಗಮದಂತಿದ್ದವರು.ಒಬ್ಬ ನಟನಾಗಿರುವುದು ಅತ್ಯಂತ ಕಠಿಣ ಸಂಗತಿಗಳಲ್ಲೊಂದು. ಆತನ ಬಳಿ ಯಾವುದೇ ಸೈನ್ಯವಿದ್ದ ರೂ ಆತ ಏಕಾಂಗಿ. ತನ್ನ ಏಕಾಗ್ರಚಿತ್ತತೆ, ಕಲ್ಪನೆ ಇವೆರಡೇ ಆತನ ಜಗತ್ತು. ಕೋಟಿಗೊಬ್ಬ ಜನ ನಾಯಕ ಹುಟ್ಟುವುದು ಅಂಥ ಏಕಾಂತದಲ್ಲೇ. ತನ್ನ ಸ್ವಾತಂತ್ರ್ಯದ ಜೊತೆಗೆ ತನಗೆ ಸಿಕ್ಕ ಜವಾ ಬ್ದಾರಿಯನ್ನೂ ಹೊತ್ತು ವಿಷ್ಣು `ಜನನಾಯಕ'ನಾಗಿ ಮೆರೆದರು.
ಬಂಧನ ಅವಿಸ್ಮರಣೀಯ: ನಟನೆ ಎಂದರೆ ಕೇವಲ ಮುಖವಾಡ ಹೊತ್ತು ಓಡಾಡುವುದಲ್ಲ. ಅನೇಕ ಭಾವನೆಗಳನ್ನು ತರಬೇಕಾಗುತ್ತದೆ, ಆ ಭಾವನೆಗಳನ್ನು ಬಚ್ಚಿಡಲಾಗದೇ, ತನ್ನನ್ನು ತೆರೆದುಕೊಳ್ಳುತ್ತಾ ಹೋದವರು ವಿಷ್ಣು. `ಬಂಧನ' `ಸುಪ್ರಭಾತ' `ಲಾಲಿ' `ಮುತ್ತಿನ ಹಾರ'ದಂತ ಚಿತ್ರಗಳಲ್ಲಿ ಅವರ ಅಭಿನಯ ಅವಿಸ್ಮರಣೀಯ.
ಒರಟುತನದ, ಸಣ್ಣ ಉದ್ವೇಗದ, ಬೆಂಕಿಯ ಕಿಡಿಯಂತ ಕಣ್ಣುಗಳನ್ನು ಯುವಜನರಲ್ಲಿ ತಂದ ನಟ ವಿಷ್ಣುವರ್ಧನ್. ನಗಿಸುವುದಕ್ಕೆ ಸಾಧ್ಯವಾದಂತೆಯೇ ಅಳಿಸುವುದಕ್ಕೂ ಸಾಧ್ಯವಿದೆ ಎಂಬುದನ್ನು ತೋರಿಸುವಷ್ಟು ಪಕ್ವತೆ ಮೆರೆದವರು.
ವಿಷ್ಣುವರ್ಧನ್ ಕಮಲ್ಹಾಸನ್ರಷ್ಟೇ ಪ್ರತಿಭಾವಂತರಾಗಿದ್ದರು. ಆದರೆ ಅವರು ಸ್ನೇಹ ಉಳಿಸಿ ಬೆಳೆಸುವಷ್ಟು ಜಾಣತನ ಮೆರೆಯಲಿಲ್ಲ. ಜಾಣರೆನ್ನಿಸಿಕೊಂಡ ನಿರ್ದೇಶಕರ ಬಳಿ ಸಣ್ಣಪುಟ್ಟ ದೂರು ಗಳಿಂದ ದೂರವೇ ಉಳಿದರು.
ಸಾವಿನ ಕಲ್ಪನೆ: ಸಾವನ್ನು ಎಂದೂ ಊಹಿಸಲಾಗುವುದಿಲ್ಲ. ಆದರೆ ವಿಷ್ಣುವರ್ಧನ್ರ ಸಾವಿನ ಕಲ್ಪನೆ ಕೂಡಾ ಇರದ ನಮಗೆ ಸಮಯ ತನ್ನ ಮಾರಕಾಸ್ತ್ರಗಳಿಂದ ಅಸ್ತವ್ಯಸ್ತ ಮಾಡಿದೆ. ಅಸ್ತ ಮಾನವಾಗಿದೆ.ನಮ್ಮ ಪ್ರೀತಿಪಾತ್ರರ ಮೇಲೆ ಸಾವು ತನ್ನ ಕೈ ಹಾಕಿದಾಗಲೇ ನಮಗೆ ಸಾವಿನ ಅರ್ಥವಾಗುವುದು. ರಾಜಣ್ಣ ಹೋದಾಗ ಸಾವಿನ ಅನುಭವವಾಗಿದ್ದ ನಮಗೆ ವಿಷ್ಣುವರ್ಧನ್ರ ಸಾವು ಅದೇ ಅನುಭವವನ್ನು ಮರುಕಳಿಸಿದೆ.ಕನ್ನಡ ಚಿತ್ರರಂಗ ಈಗ `ಯಜಮಾನ'ನಿಲ್ಲದೆ ಮನೆ ಭಣಗುಡುತ್ತಿದೆ. ವಿಷ್ಣು ಜಾಗವನ್ನು ತುಂಬುವವರು ಯಾರು?.
ಅಂತಿಮ ಯಾತ್ರೆ
2.30 ಮುಂಜಾನೆ ೨.೩೦ಕ್ಕೆ ಮೈಸೂರಿನಲ್ಲಿ ನಿಧನ
6.30 ಪಾರ್ಥಿವ ಶರೀರ ವಿಷ್ಣು ಬೆಂಗಳೂರಿನ ನಿವಾಸಕ್ಕೆ
7.40 ವಿಷ್ಣು ನಿವಾಸಕ್ಕೆ ಸಿಎಂ ಭೇಟಿ
9.45 ರಿಂದ ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ಅಂತಿಮ ದರ್ಶನ
10.30 ಅಭಿಮಾನಿಗಳ ಆಕ್ರೋಶ, ಕಲ್ಲುತೂರಾಟ, ಲಾಠಿ, ಅಶ್ರುವಾಯು
1.30 ಉಕ್ಕೇರಿದ ಅಭಿಮಾನ: ಮೈಸೂರಲ್ಲಿ ಒಬ್ಬ ಆತ್ಮಹತ್ಯೆ
4.30 ಕೆಂಗೇರಿಯ ಅಭಿಮಾನ್ ಸ್ಟುಡಿಯೋದತ್ತ ಯಾತ್ರೆ
5.15 ದರ್ಶನ ಸಿಗದ ಅಭಿಮಾನಿಗಳಿಂದ ದಾಂಧಲೆ
5.30 ಪೊಲೀಸ್ ಆಯುಕ್ತ ಬಿದರಿ ಮೇಲೂ ಕಲ್ಲು
6.00 ಅಭಿಮಾನ್ ಸ್ಟುಡಿಯೋ ತಲಪಿದ ಕುಟುಂಬ ವರ್ಗ
7.00 ಸ್ಟುಡಿಯೋಗೆ ಆಗಮಿಸಿದ ವಿಷ್ಣು ಪಾರ್ಥಿವ ಶರೀರ
7.15 ಸಿಎಂ ಯಡಿಯೂರಪ್ಪ ಅಂತಿಮ ನಮನ
7.20 3 ಸುತ್ತು ಕುಶಾಲ ತೋಪು ಹಾರಿಸಿ ಸರ್ಕಾರಿ ಗೌರವ
7.30 ಪತ್ನಿ ಭಾರತಿ ಮತ್ತು ಕುಟುಂಬದವರ ನಮನ
8.00 ವೇದ ಘೋಷಗಳ ಮಧ್ಯೆ ವಿಷ್ಣು ಚಿತೆಗೆ ಅಗ್ನಿ ಸ್ಪರ್ಶ
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-12-31 00:00:00
|
|
|