ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಸಾಹಸಸಿಂಹ, ನಟ ಭಾರ್ಗವ ಡಾ. ವಿಷ್ಣುವರ್ಧನ್ ಪಂಚಭೂತಗಳಲ್ಲಿ ಲೀನ...

 ನಟ ಡಾ. ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ಸಂಜೆ ನೆರವೇರಿತು. 

ಬೆಂಗಳೂರು (ಐಎಎನ್ಎಸ್): ಹೃದಯಾಘಾತದಿಂದ ನಿಧನರಾದ ನಟ ಡಾ. ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆಇಲ್ಲಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನೆರವೇರಿತು.

ಮೈಸೂರಿನಲ್ಲಿ ನಿಧನರಾದ ವಿಷ್ಣು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲಿನ ಅವರ ನಿವಾಸಕ್ಕೆ ಬುಧವಾರ ಬೆಳಿಗ್ಗೆಯೆ ತರಲಾಯಿತು. ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸುಮಾರು 60 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ನಂತರ ನ್ಯಾಷನಲ್ ಕಾಲೇಜು ಮೈದಾನದಿಂದ ಹೊರಟ ಅವರ ಅಂತಿಮಯಾತ್ರೆ ಹನುಮಂತನಗರ, ಬನಶಂಕರಿ, ಪದ್ಮನಾಭನಗರ, ಚನ್ನಸಂದ್ರದ ಮೂಲಕ ಉತ್ತರಹಳ್ಳಿಯಲ್ಲಿನ ಅಭಿಮಾನ್ ಸ್ಟುಡಿಯೋಕ್ಕೆ ತರಲಾಯಿತು. ಅಲ್ಲಿಯೇ ಅವರ ಚಿತೆಗೆ ಹಿರಿಯ ಸಹೋದರ ರವಿ ಅಗ್ನಿಸ್ಪರ್ಶ ಮಾಡಿದರು.  
 
ಬೆಂಗಳೂರಿನಲ್ಲಿ ಕಲ್ಲುತೂರಾಟ, ನಾಲ್ವರಿಗೆ ಗಾಯ  
 
ಡಾ. ವಿಷ್ಣುವರ್ಧನ್ ಅವರು ವಿಧಿವಶರಾದ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನ ಕೆಲವೆಡೆ ಹಿಂಸಾಚಾರ ನಡೆದಿದ್ದು, ಪೊಲೀಸರು ಲಾಠಿಪ್ರಹಾರ ಹಾಗೂ ಅಶ್ರುವಾಯು ಸಿಡಿಸಿದ್ದಾರೆ. 

ಬೆಂಗಳೂರು (ಪಿಟಿಐ, ಐಎಎನ್ಎಸ್): ಡಾ. ವಿಷ್ಣುವರ್ಧನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಹರಡುತ್ತಿದ್ದಂತೆ ಬೆಂಗಳೂರು ನಗರದಲ್ಲಿ ನೀರವ ಮೌನ ನೆಲೆಸಿತು. ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಆದಾಗ್ಯೂ ನಗರದ ಕೆಲವೆಡೆ ಉದ್ರಿಕ್ತ ಗುಂಪುಗಳು ಕಲ್ಲುತೂರಾಟ ನಡೆಸಿವೆ.

ಪಾರ್ಥಿವ ಶರೀರವನ್ನಿರಿಸಿದ್ದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದ ಹೊರಗೆ ಜನಜಂಗುಳಿ ವಿಪರೀತವಾಗಿ ಗುಂಪನ್ನು ಚದುರಿಸಲು ಪೊಲೀಸರು ರಬ್ಬರ್ ಬುಲೆಟ್ ಗಳನ್ನು ಸಿಡಿಸಿದರು. ಇದರಿಂದ ನಾಲ್ವರು ಗಾಯಗೊಂಡಿದ್ದಾರೆ.

ಜಯನಗರ, ಬಸವನಗುಡಿ, ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆಗಳಲ್ಲಿ ಉದ್ರಿಕ್ತ ಅಭಿಮಾನಿಗಳು ಕಲ್ಲುತೂರಾಟ ನಡೆಸಿದ ಪರಿಣಾಮ ಹಲವು ವಾಹನಗಳಿಗೆ ಹಾನಿಯಾಗಿದೆ.

ತುಂಬಲಾಗದ ಶೂನ್ಯ: ಚಿತ್ರರಂಗದ ಕಂಬನಿ  
 
ನಾಯಕ ನಟ ವಿಷ್ಣುವರ್ಧನ್ ನಿಧನದ ಆಘಾತದಿಂದ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ತತ್ತರಿಸಿದೆ. ಅವರ ನಿಧನದಿಂದ ಉಂಟಾಗಿರುವ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ ಎಂದು ಚಿತ್ರರಂಗದ ಗಣ್ಯರು ಹೇಳಿದ್ದಾರೆ. 

ಬೆಂಗಳೂರು: ನಾಯಕ ನಟ ವಿಷ್ಣುವರ್ಧನ್ ನಿಧನದ ಆಘಾತದಿಂದ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ತತ್ತರಿಸಿದೆ. ಅವರ ನಿಧನದಿಂದ ಉಂಟಾಗಿರುವ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ ಎಂದು ಚಿತ್ರರಂಗದ ಗಣ್ಯರು ಹೇಳಿದ್ದಾರೆ. ಕೆಲವು ಪ್ರಮುಖರ ಪ್ರತಿಕ್ರಿಯೆಗಳು:

ನಿರ್ದೇಶಕ ಗಿರೀಶ್ ಕಾರ್ನಾಡ್: 'ಸ್ನೇಹ ಸ್ವಭಾವ ಮತ್ತು ಸಹ ನಟ ನಟಿಯರ ಜೊತೆಗೆ ಸ್ನೇಹಪೂರ್ಣ ಮಧುರ ಬಾಂಧವ್ಯ ಇಟ್ಟುಕೊಂಡಿದ್ದ ಕರ್ನಾಟಕ ಚಲನಚಿತ್ರೋದ್ಯಮ ಮಂಡಳಿ ಅಧ್ಯಕ್ಷೆ ಜಯಮಾಲಾ: 'ನನಗೆ ಈಗಲೂ ನಂಬಲಾಗುತ್ತಿಲ್ಲ. ಅವರು ಆರೋಗ್ಯವಂತರಾಗಿದ್ದರು. ನಾನು ಇದನ್ನು ನಿರೀಕ್ಷಿಸಿರಲೇ ಇಲ್ಲ. ಗಾಯಕ ಅಶ್ವತ್ಥ್ ನಿಧನ ಬಳಿಕ ಇದು ಎರಡನೇ ಆಘಾತ.

ನಿರ್ದೇಶಕ ಗಿರೀಶ್ ಕಾಸರವಳ್ಳಿ: ಕನ್ನಡ ಚಿತ್ರೋದ್ಯಮಕ್ಕೆ ಅವರು ನೀಡಿದ ಕಾಣಿಕ ಸ್ಮರಣೀಯ. ಅವರೊಬ್ಬ ಮಹಾನ್ ನಟ ಮತ್ತು ಸಾತ್ವಕ ವ್ಯಕ್ತಿಯಾಗಿದ್ದರು. ಅವರ ಹಠಾತ್ ನಿಧನದ ಆಘಾತದಿಂದ ನನಗೆ ಹೊರಬರಲು ಆಗುತ್ತಿಲ್ಲ. 
 
ಚಿತ್ರನಟಿ ಉಮಾಶ್ರೀ: 'ರಾಜಕುಮಾರ್ ಅವರ ಬಳಿಕ ಚಿತ್ರೋದ್ಯಮದ ಜನರಿಗೆ ಮಾದರಿಯಾಗಿದ್ದ ಅದ್ಭುತ ಕಲಾವಿದ ಮಾತ್ರವಲ್ಲ, ಮಹಾನ್ ವ್ಯಕ್ತಿಯನ್ನು ಸೆಳೆದುಕೊಳ್ಳುವ ಮೂಲಕ ಭಗವಂತ ಅನ್ಯಾಯ ಮಾಡಿದ್ದಾನೆ.ಖ್ಯಾತ ಹಿರಿಯರಾಗಿದ್ದ ರಾಜಕುಮಾರ್, ಈಗ ವಿಷ್ಣು ವರ್ಧನ್ ಅವರನ್ನು ಕಳೆದುಕೊಳ್ಳುವ ಮೂಲಕ ಕನ್ನಡ ಚಿತ್ರರಂಗ ಊನಗೊಂಡಿದೆ'.

ಹಿರಿಯ ಚಿತ್ರ ನಟ ಕೆ.ಎಸ್. ಅಶ್ವಥ್: 'ನಾನು ನನ್ನ ರಾಮಾಚಾರಿಯನ್ನು (ನಾಗರ ಹಾವು ಚಿತ್ರದಲ್ಲಿ ವಿಷ್ಣು ವರ್ಧನ್ ಪಾತ್ರ) ಕಳೆದುಕೊಂಡಿದ್ದೇನೆ.

ಚಿತ್ರನಟ ಶ್ರೀನಾಥ್ ಮತ್ತು ಅಂಬರೀಷ್: 'ನಾವು ನಮ್ಮ ಸಹೋದರನನ್ನು ಕುಟುಂಬ ಸದಸ್ಯನನ್ನು ಕಳೆದುಕೊಂಡಿದ್ದೇವೆ. ಅವರ ಆಪ್ತ ಗೆಳೆಯ, ಮಾರ್ಗದರ್ಶಕರಾಗಿದ್ದರು. ಅವರು ಚೆಲ್ಲಿದ ಬೆಳಕು ಉದ್ಯಮದಲ್ಲಿ ನಮಗೆ ಸದಾ ಮಾರ್ಗದರ್ಶಕ'.

ಸಾಕ್ಷ್ಯ ಚಿತ್ರ ನಿರ್ಮಾಪಕ ಬಿ.ಎಸ್. ಮನೋಹರ್: 'ಗೋಕಾಕ್ ಚಳವಳಿಯ ಸಾಕ್ಷ್ಯ ಚಿತ್ರ ನಿರ್ಮಾಣದಲ್ಲಿ ವಿಷ್ಣು ವರ್ಧನ್ ಮತ್ತು ರಾಜಕುಮಾರ್ ಅವರು ನೀಡಿದ್ದ ಬೆಂಬಲ ಮರೆಯಲಾಗದ್ದು.'
 
ನಗರದ ಹಲವು ರಸ್ತೆಗಳಲ್ಲಿ ಟೈರ್ ಗಳನ್ನು ಹೊತ್ತಿಸಿ ಆಕ್ರೋಶ ಉದ್ರಿಕ್ತರು ವ್ಯಕ್ತಪಡಿಸಿದ್ದಾರೆ.

ಇದರಿಂದ ಅಂಗಡಿಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ಸಿನಿಮಾಮಂದಿರಗಳು ಮುಚ್ಚಿದ್ದು, ಬುಧವಾರ ಬಂದ್ ನಂತಹ ವಾತಾವರಣ ನೆಲೆಸಿತ್ತು.

ಬಾಳ `ಬಂಧನ' ಕಳಚಿಕೊಂಡ `ರಾಮಾಚಾರಿ' ಮೌನವಾಯಿತು `ಸಿಂಹ ಘರ್ಜನೆ'

ಬೆಂಗಳೂರು : ಕನ್ನಡ ಚಿತ್ರರಂಗದ ವಿಭಿನ್ನ ನಟ, ಅಭಿಮಾನಿಗಳ ಪಾಲಿನ ಸಾಹಸಸಿಂಹ, ನಟ ಭಾರ್ಗವ ಡಾ. ವಿಷ್ಣುವರ್ಧನ್ ಇಂದು ನಸುಕಿನ ಜಾವ ಇಹಲೋಕದ ಯಾತ್ರೆ ಮುಗಿಸಿದರು. ಅವರಿಗೆ ೫೯ ವರ್ಷ ವಯಸ್ಸಾಗಿತ್ತು. ಡಾ. ರಾಜ್ ನಂತರ ಕನ್ನಡ ಚಿತ್ರರಂಗದಲ್ಲಿ ಅಪೂರ್ವ ಅಭಿಮಾನಿ ಸಮೂಹವನ್ನು ಹೊಂದಿದ್ದ ಈ ಹಿರಿಯ ನಟನ ನಿಧನದಿಂದ ಕನ್ನಡ ಚಿತ್ರರಂಗದ `ಮುತ್ತಿನ ಹಾರ'ದಿಂದ ಅಮೂಲ್ಯ ಮುತ್ತೊಂದು ಕಳಚಿ ಬಿದ್ದಂತಾಗಿದೆ. `ವಂಶ ವೃಕ್ಷ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರೂ, ಪುಟ್ಟಣ್ಣ ಕಣಗಾಲ್ ಅವರ `ನಾಗರ ಹಾವು' ಚಿತ್ರದ ರಾಮಾಚಾರಿ ಪಾತ್ರ ವಿಷ್ಣು ಅವರಿಗೆ ಹೊಸ ಇಮೇಜ್ ಮತ್ತು ಅಸಂಖ್ಯ ಅಭಿಮಾನಿ ಬಳಗವನ್ನು ಸೃಷ್ಟಿಸಿತು. ಈ ಸಂದರ್ಭದಲ್ಲಿಯೇ ಪುಟ್ಟಣ್ಣ ಅವರು ಸಂಪತ್ ಕುಮಾರ್ ಎಂದಿದ್ದ ಅವರ ಮೂಲ ಹೆಸರನ್ನು ವಿಷ್ಣುವರ್ಧನ್ ಎಂದು ಬದಲಾಯಿಸಿದರು. ಪ್ರಖ್ಯಾತ ಹೊಯ್ಸಳ ದೊರೆ ವಿಷ್ಣುವರ್ಧನನಂತೆ ತನ್ನ ಪ್ರೀತಿಯ ಶಿಷ್ಯ ಖ್ಯಾತಿ ಹೊಂದಲಿ ಎಂಬುದು ಪುಟ್ಟಣ್ಣ ಅವರ ಬಯಕೆಯಾಗಿತ್ತು. ಗುರುವಿನ ಈ ಆಸೆಯನ್ನು ವಿಷ್ಣು ಹುಸಿಯಾಗಿಸಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ಅಭಿನಯಿಸಿ ಬಹುಭಾಷಾ ತಾರೆಯಾಗಿ ಕಂಗೊಳಿಸಿ `ಅಭಿನವ ಭಾರ್ಗವ' ಎಂದೆಣಿಸಿಕೊಂಡರು.

೧೯೫೦ರಲ್ಲಿ ಮೈಸೂರಿನ ಚಾಮುಂಡಿಪುರದಲ್ಲಿ ಜನಿಸಿದ ವಿಷ್ಣುವರ್ಧನ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ವ್ಯಾಸಾಂಗವನ್ನು ಮುಗಿಸಿದರು. ಆ ಸಂದರ್ಭದಲ್ಲಿಯೇ ಕಲೆಯ ನಂಟು ಅಂಟಿಕೊಂಡಿತು. ೧೯೭೨ರಲ್ಲಿ ತೆರೆಕಂಡ ನಾಗರಹಾವು ಚಿತ್ರದಲ್ಲಿನ ಅಭಿನಯಕ್ಕೆ ಉತ್ತಮ ನಟ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ವಿಷ್ಣು ಕನ್ನಡ ಚಿತ್ರರಂಗದಲ್ಲಿ ಬಲವಾಗಿ ಬೇರೂರುವ ಸೂಚನೆಯನ್ನು ನೀಡಿದರು. `ನನ್ನ ಹಾಡು ನನ್ನದು... ನನ್ನ ರಾಗ ನನ್ನದು... ' ಎಂಬ ರೀತಿಯಲ್ಲಿಯೇ ವಿಭಿನ್ನ ಅಭಿನಯ ಶೈಲಿ ಮತ್ತು ಹಾವಭಾವಗಳಿಂದ ಎಲ್ಲಾ ವರ್ಗದ ಪ್ರೇಕ್ಷರಿಗೂ ವಿಷ್ಣು ಆಪ್ತವಾಗುತ್ತಾ ಹೋದರು. ನಂತರದಲ್ಲಿ ಇವರ ಸಾಲು ಸಾಲು ಸಾಹಸ ಪ್ರಧಾನ ಚಿತ್ರಗಳೇ ತೆರೆಕಂಡು ಅಭಿಮಾನಿಗಳ ಪಾಲಿಗೆ ವಿಷ್ಣು `ಸಾಹಸ ಸಿಂಹ'ನಾದರು. ಆದರೆ ೧೯೮೪ರಲ್ಲಿ ತೆರೆಕಂಡ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ `ಬಂಧನ' ಚಿತ್ರ ವಿಷ್ಣುವರ್ಧನ್ ಅವರ ವೃತ್ತಿ ಜೀವನದಲ್ಲಿಯೇ ಒಂದು ಮೈಲುಗಲ್ಲೆಂದು ಪರಿಗಣಿತವಾಗಿದೆ. ಇದುವರೆಗೆ ಸಾಹಸ ಸಿಂಹನಾಗಿದ್ದ ಈ ನಟ `ಬಂಧನ'ದ ಬಳಿಕ ಹೆಂಗಳೆಯರ ಪಾಲಿನ ನೆಚ್ಚಿನ ನಟನಾದರು. ವಿಷ್ಣುವರ್ಧನ್ ಅವರ ಅಭಿನಯ ಚತುರತೆಗೆ ಕನ್ನಡಿ ಹಿಡಿದ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗಿ ಈ ನಟನ ಜನಪ್ರಿಯತೆಯನ್ನು ಹೆಚ್ಚಿಸಿತು. ಇದರಲ್ಲಿ ಮುಖ್ಯವಾದುವೆಂದರೆ, `ಹೊಂಬಿಸಿಲು', `ಬಂಧನ', `ಸುಪ್ರಭಾತ', `ಲಾಲಿ', `ಲಾಲಿ', `ಮುತ್ತಿನ ಹಾರ', `ಲಯನ್ ಜಗಪತಿ ರಾವ್', `ವೀರಪ್ಪ ನಾಯ್ಕ', `ಮಾತಾಡ್ ಮಾತಾಡ್ ಮಲ್ಲಿಗೆ', `ಆಪ್ತ ಮಿತ್ರ', `ಕರ್ಣ'.. ಹೀಗೆ ಈ ಪಟ್ಟಿ ಬೆಳೆಯತ್ತಾ ಹೋಗುತ್ತದೆ. ವಿಷ್ಣುವರ್ಧನ್ - ಸುಹಾಸಿನಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯಾಗಿ ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ಆರತಿಗೆ ಸಲ್ಲುತ್ತದೆ. ಕನ್ನಡದ ಕಲಾರತ್ನ ಡಾ. ರಾಜ್ ಅವರೊಂದಿಗೆ `ಗಂಧದ ಗುಡಿ' ಚಿತ್ರದಲ್ಲಿ ಅಭಿನಯಿಸಿದ ಕೀರ್ತಿಯೂ ವಿಷ್ಣು ಅವರದ್ದು. ೧೯೭೫ರಲ್ಲಿ ನಟಿ ಭಾರತಿಯವರನ್ನು ಇವರು ವಿವಾಹದರು, ಈ ಜೋಡಿ ಚಿತ್ರ ರಂಗದ ಅದರ್ಶ ದಂಪತಿಗಳಾಗಿ ಹೆಸರುವಾಸಿಯಾಗಿದ್ದಾರೆ.

ಈ ಮೇರು ನಟ ಅನೇಕ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ. ೭ಬಾರಿ ದಕ್ಷಿಣ ಭಾರತದ ಪಿಲಂ ಫೇರ್ ಪ್ರಶಸ್ತಿ ಪಡೆದ ಹೆಗ್ಗಳಿಗೆ ಈ ನಟನದು. ಅಂತೆಯೇ ೭ ರಾಜ್ಯ ಪ್ರಶಸ್ತಿಗಳೂ ಇವರಿಗೆ ಸಂದಿವೆ. ೨೦೦೪ರಲ್ಲಿ ಫಿಲಂ ಫೇರ್ ಜೀವಮಾನದ ಪ್ರಶಸ್ತಿ ಲಭಿಸಿದೆ. ೨೦೦೯ ಡಾ. ರಾಜ್‌ಕುಮಾರ್ ಪ್ರಶಸ್ತಿ ಇವರಿಗೆ ಪ್ರಾಪ್ತವಾಗಿದೆ. ಇವರ ಅಭಿನಯದ `ಸುಪ್ರಭಾತ' ಚಿತ್ರವು ೮ ವಿವಿಧ ಪ್ರಶಸ್ತಿಗಳನ್ನು ಬಾಚಿಕೊಂಡಿರುವುದು ಕನ್ನಡ ಚಿತ್ರರಂಗದ ದಾಖಲೆಯಾಗಿಯೇ ಉಳಿದಿದೆ.

ಮೂರೂವರೆ ದಶಕಗಳ ಸಾರ್ಥಕ ವೃತ್ತಿಜೀವನ ನಡೆಸಿದ ಈ ಮೇರು ನಟನ ಅಗಲುವಿಕೆಯಿಂದ ಕನ್ನಡ ಚಿತ್ರರಂಗದ ಆಧಾರವೊಂದು ಕುಸಿದಂತಾಗಿದೆ ಎಂದರೆ ಖಂಡಿತವಾಗಿಯೂ ಅತಿಶಯೋಕ್ತಿಯಾಗಲರಾದು. ಹಲವಾರು ಯುವ ನಟರಿಗೆ ಮಾದರಿಯಾಗಿ, ಚಿತ್ರೋದ್ಯಮದ ಹಿರಿಯಣ್ಣನಂತಿದ್ದ ವಿಷ್ಣುವರ್ಧನ್ ಅಗಲುವಿಕೆ ಅವರ ಅಭಿಮಾನಿ ಬಳಗವನ್ನು ದು:ಖದ ಮಡುವಿನಲ್ಲಿ ಮುಳುಗುವಂತೆ ಮಾಡಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-12-31 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಕನ್ನಡಿಗರಿಗೆ ಮತ್ತೊಂದು ಬರಸಿಡಿಲು....ನ್ಯಾಷನಲ್‌ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ದರ್ಶನ :.ಬಾಲಕೃಷ್ಣರವರ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ: .ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ೧೦ ಲಕ್ಷ ರು.
»ವಿಷ್ಣುವರ್ಧನ್ ಅಂತಿಮ ಯಾತ್ರೆಗೆ ಮಹಾಪೂರ
»ಹ್ರದಯಾಘಾತ: ಸಾಹಸಸಿ೦ಹ ಡಾ. ವಿಷ್ಣುವರ್ಧನ್ ಹಠಾತ್ ನಿಧನ

ಪ್ರತಿಸ್ಪಂದನ
santosh, dubai
2009-12-31
A another sad day in indian fim industry, a legnedary actor and a great human being passed away.. i will miss him..and all kannadigas too
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»`ಹಾಲ್ ಆಫ್ ಫೇಮ್'ಗೆ ಗಾವಸ್ಕರ್
»ಬಿಸಿಸಿಐ-ಸಹಾರಾ ಭಿನ್ನಮತ ಬಗೆಹರಿಯಲಿದೆ: ಗಂಗೂಲಿ ವಿಶ್ವಾಸ
»ರೀಲ್‌ಗೆ ರಾಜಕುಮಾರಿ ಡಯಾನಾ ರಿಯಲ್ ಸ್ಟೋರಿ
» ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
»ಉದ್ದೀಪನಾ ಮದ್ದು ಸೇವನೆ ಪ್ರಕರಣ: ಅಕ್ಕುಂಜೆ ಟೀಂ 2ವರ್ಷ ನಿಷೇಧಿಸಿ: ವಾಡಾ ಆಗ್ರಹ
»ಸೂಪರ್ ಸ್ಟಾರ್ ರಜನಿಕಾಂತ್ ಅವರ ’ಕೊಚಡಯ್ಯಾನ್’ಗೆ ದೀಪಿಕಾ ನಾಯಕಿ
»ಹಾಡು ಬರೆದ ಗೀತಪ್ರಿಯರಿಗೀಗ ಮಾತೇ ಬರುತ್ತಿಲ್ಲ
»ನಟಿ ಅಮೂಲ್ಯ ಗುಂಗಿನಲಿ ಬಸವರಾಜ್ ಬದುಕು ಬರ್ಬಾದ್
»ಕ್ರಿಕೆಟ್ ತಂಡಕ್ಕೆ ಕಡಿವಾಣ: ಹಾಕಿ ನೆರವಿಗೆ ನಿಂತ ಸಹರಾ
»ಕ್ಯಾನ್ಸರ್ ಗೆದ್ದ ಲೀಸಾ ರೇ ಹಸಮಣೆ ಏರಲು ಸಿದ್ಧ
»ನೂರು ಕೋಟಿ ದಾಟಿದ ಅಗ್ನಿಪಥ್ ಚಿತ್ರದ ಗಳಿಕೆ
»ತ್ರಿಕೋನ ಪ್ರೇಮಕತೆ: ಸೋನಂ ಕಪೂರ್‌ ಜೊತೆ ಸಿದ್ಧಾರ್ಥ್ ಮಲ್ಯ ಡೇಟಿಂಗ್
»ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸುವರ್ಣಾವಕಾಶ: ಪೇಸ್
»ಹಾಲಿವುಡ್ ಕಡೆ ಹಾರಿದ ದೇಸಿ ಬಾಯ್ಸ್ ಜೋಡಿ
»ಜೊತೆ ಜೊತೆಯಲಿ ಯೋಗಿ-ರಾಧಿಕಾ ಹ್ಯಾಟ್ರಿಕ್!
»ಅಮೇರ್ ಮತ್ತೊಂದು ಅವಕಾಶಕ್ಕೆ ಅರ್ಹರು: ಶೋಯಿಬ್ ಅಖ್ತರ್
»ಸಂಚಿತಾ ಕೈಯಲ್ಲಿ ತಮಿಳು, ಮನದಲ್ಲಿ ಕನ್ನಡ..!
»ಸ್ನೂಕರ್‌: ಆದಿತ್ಯ ಮೆಹ್ತಾಗೆ ರಾಷ್ಟ್ರೀಯ ಸ್ನೂಕರ್‌ ಚಾಂಪಿಯನ್‌ಶಿಪ್‌ನ ಪ್ರಶಸ್ತಿ
»ವರ್ತಮಾನದ ತೆಳು ಚಿತ್ರಣ: ಹಿಂದಿಚಿತ್ರ: ಗಲಿ ಗಲಿ ಚೋರ್ ಹೈ
»ಯುವರಾಜ್‌ಗೆ ಕ್ಯಾನ್ಸರ್; ಅಮೆರಿಕದಲ್ಲಿ ಚಿಕಿತ್ಸೆ ( Updated)
»ಬಾಲಿವುಡ್ ಚಿತ್ರ ನಿರ್ಮಾಪಕ ರಾಜ್ ಕನ್ವರ್ ಅಂತ್ಯಕ್ರಿಯೆ
»ದಿಗಂತ್, ಐಂದ್ರಿತಾ ಜೋಡಿಯ ಪಾರಿಜಾತ ಬಿಡುಗಡೆ
»ಶ್ವಾಸಕೋಶದ ಕ್ಯಾನ್ಸರ್: ಅಮೆರಿಕಾದಲ್ಲಿ ಕಿಮೊತೆರಪಿ ಚಿಕಿತ್ಸೆಗೊಳಗಾಗಲಿರುವ ಯುವರಾಜ್ ಸಿಂಗ್
»ಪ್ರೇಮಿಗಳ ದಿನ ಅರ್ಜುನ್ 'ಅದ್ದೂರಿ' ಆಡಿಯೋ ಬಿಡುಗಡೆ
»ಕಾಮನ್‌ವೆಲ್ತ್‌ ಗೆಮ್ಸ್‌ ಹಗರಣ: ಜಾಮೀನಿನಲ್ಲಿ ಬಿಡುಗಡೆ: ಸುರೇಶ್‌ ಕಲ್ಮಾಡಿಗೆ ಭವ್ಯ ಸ್ವಾಗತ!
»ಐಪಿ‌ಎಲ್ ಹರಾಜು: ಆರ್‌ಸಿಬಿ ತೆಕ್ಕೆಗೆ ವಿನಯ್ ಕುಮಾರ್ ( Upadated)
»ಕೊಡಿಗೇಹಳ್ಳಿ ಮಣ್ಣಲ್ಲಿ ಕರಿಬಸವಯ್ಯ ಲೀನ: ಅಂತಿಮ ದರ್ಶನಕ್ಕೆ ಜನಸಾಗರ(Updated)
»ಕ್ರಿಕೆಟ್ ಮಂಡಳಿ ಬೇ’ಸಹಾರ’: ಭಾರತ ತಂಡ ಪ್ರಾಯೋಜಕತ್ವ ಕೈಬಿಟ್ಟ ಸಹಾರ ಸಂಸ್ಥೆ
»ತಬ್ಬಿದ ಸಚಿನ್ ಜೋಷಿ; ಪ್ರಿಯಾಮಣಿ ತಬ್ಬಿಬ್ಬು..!
»ಚಿಂಗಾರಿ ಚಿತ್ರವಿಮರ್ಶೆ; ದರ್ಶನ್ ಅಭಿಮಾನಿಗಳಿಗೆ ಹಬ್ಬ
»ಬಣ್ಣ ಮಾತ್ರವಲ್ಲ, ಕರಿಬಸವಯ್ಯನ ಬದುಕೇ ಕತ್ತಲು..!
»ಬಿಸಿಸಿಐ ಪ್ರಾಯೋಜಕತ್ವಕ್ಕೆ ಸಹಾರಾ ಗುಡ್‌ಬೈ?...
»ಹಾಕಿ: ಗೋಲ್ ಕೀಪಿಂಗ್ ಕೋಚ್ ಆಗಿ ಸುಬ್ಬಯ್ಯ ನೇಮಕ
»ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
»ಪ್ರಭುದೇವಗೆ ಕೈ ಕೊಟ್ಟ ನಯನತಾರಾ: ಮತ್ತೆ ಕನ್ನಡಕ್ಕೆ?
»ಲವ್ಲಿ ಜೆನ್ನಿಯ ಮಧುರ ದಾಂಪತ್ಯ: ರಿತೇಶ್ ವರಿಸಿದ ಜೆನಿಲಿಯಾ
»ಶಿಸ್ತುಬದ್ಧ ಆಟ; ಕೊನೆಗೂ ಭಾರತಕ್ಕೆ ಒಲಿದ ವಿಜಯಲಕ್ಷ್ಮೀ..!
»ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
»ಶನಿವಾರ ನಡೆಯಲಿರುವ ಐಪಿಎಲ್ ಹರಾಜು; ಜಡೇಜಾ, ಮೆಕಲಮ್‌ಗೆ ಭಾರಿ ಡಿಮ್ಯಾಂಡ್
»ಕನ್ನಡದಲ್ಲಿ ಮತ್ತೆ ಬಣ್ಣಹಚ್ಚಲಿದ್ದಾರೆ ನಟಿ ನಯನತಾರಾ
»ಕಮಲ್ ಹಾಸನ್ ಬಿಗ್ ಬಜೆಟ್‌ ಚಿತ್ರಕ್ಕೆ ಕತ್ರಿನಾ ನಾಯಕಿ?
»ಕ್ರೀಡೆಯ ಮಹಾ ದುರಂತ; ಫುಟ್ಬಾಲ್ ಹಿಂಸಾಚಾರಕ್ಕೆ 73 ಬಲಿ;1000ಕ್ಕೂ ಹೆಚ್ಚು ಮಂದಿ ಗಾಯ
» ನಟಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್ ವಿವಾಹ: ತಾ.2ರ ರೋನ್ಸ್ ರವರ ಚಿತ್ರವರದಿಗಳು
»ಅಖಿಲ ಭಾರತ ಅಂತರ್ ವಿವಿ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಅಣ್ಣಾಮಲೈ ಚಾಂಪಿಯನ್, ಮಂಗಳೂರು ರನ್ನರ್ ಅಪ್
»ಕುಡಿದ ಅಮಲಿನಲ್ಲಿ ಶಾರುಕ್ ಖಾನ್ ಅಮಲಿನ ಅವತಾರ
»'ಗಂಡ ಹೆಂಡತಿ’ ಸಂಜನಾಗೆ ಬಿಕಿನಿ ಅಂದ್ರೆ ಭಯ!
»ಧೋನಿ ಸೂಕ್ತ ಟೆಸ್ಟ್ ನಾಯಕ: ಅಜರುದ್ದೀನ್
»ಸೆಹ್ವಾಗ್ ನಾಯಕರಾಗಲು ಅರ್ಹರಲ್ಲ: ಧೋನಿಗೆ ಅಕ್ರಂ ಸಾಥ್
»ಫೇಸ್‌ಲೆಸ್ ಫೇಸ್‌ಬುಕ್!: 12 ಎ‌ಎಂ‘ ಚಿತ್ರದ ಬಣ್ಣನೆ
»ಸಾನಿಯಾ ’ಬಾಬಿ’ಯ ಪಾಟ್ನರ್ ಆಗಲು ಖುರೇಷಿ ಬಯಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri