ಜಿ. ಎಸ್. ಬಿ ಸಭಾ ಕುವೈತ್ : ಏಳನೇ ವರ್ಷದ ಸಂಭ್ರಮದ ಆಚರಣೆ. |
ಪ್ರಕಟಿಸಿದ ದಿನಾಂಕ : 2009-12-21
ಕುವೈತನಲ್ಲಿರುವ ಜಿ.ಎಸ್.ಬಿ ಸಭಾದ ಸದಸ್ಯರಿಂದ ೭ನೆ ವರ್ಷದ ಕೊನೆಯ ತಿಂಗಳ ಭಜನೆಯು ಇತ್ತೀಚೆಗೆ ರಿಗ್ಗೈನಲ್ಲಿ ನಡೆಯಿತು. ಡಾ.ಸುರೆಂದ್ರ ನಾಯಕ್ ಕೆ.; ಪಿ ಗಣೇಶ್ ಪ್ರಭು, ಬಿ.ಪ್ರಕಾಶ್ ಪೈ, ಪುರುಶೋತ್ತಮ್ ನಾಯಕ್ ಜೆ., ಎಕನಾತ್ ವೆರ್ನೆಕರ್, ಗಿರೀಶ್ ಶೆಣೈ, ಪಿ. ವಿಶ್ವನಾಥ್ ಪ್ರಭು, ವಿಠೋಭ ಮೋ. ಪೈ, ದೀಪಕ್, ರೇಖಾ ಪೈ, ಚಿತ್ರಾ ಆಚಾರ್ಯ, ಸುಮನ ಪ್ರಭು, ಉಷ ಪ್ರಭು, ಸುಮ ಕಾಮತ್ ಭಜನೆಯಲ್ಲಿ ಸಹಕರಿಸಿದರು.
ಮಾಸ್ಟರ್ ಆದಿತ್ಯ, ಶ್ರೀ ಶ್ರೀನಾಥ್ ಭಟ್ಟ ರೊಂದಿಗೆ ತಬ್ಲಾದಲ್ಲಿ ಜೊತೆನೀಡಿದರು. ಈ ಸಂದರ್ಭ ದಲ್ಲಿ ದ್ವೀತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯ್ತುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಾದ ಸಚೀಂ ದ್ರ ನಾಯಕ್ ಕಾಪಾಡಿ ಹಾಗು ಪವನ್ ಪೈ ಕಟೀಲ್ ರನ್ನು ಕೂಟದ ಅಧ್ಯಕ್ಷ ಪಿ. ಗಣೇಶ್ ಪ್ರಭು ಅಭಿನಂದಿಸಿದರು. ಈ ವರ್ಷ ಕೂಟವು ಭಾರತದಲ್ಲಿನ ಅರ್ಹ ಜಿ.ಎಸ್.ಬಿ ಬಡ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಬಡ ರೋಗಿಗಳಿಗೆ ವೈದ್ಯಕೀಯ ವೆಚ್ಚವನ್ನು ಭರಿಸಿದ ವಿವರವನ್ನು ಖಜಾಂಚಿ ದಿನೇಶ್ ಕಾಮತ್ ನೀಡಿದರು.
ವರದಿಯ ವಿವರಗಳು |
 |
ಕೃಪೆ : ಮೋಹನ್ದಾಸ್ ಕಾಮತ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-12-21
|
|
|