ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಮನಾಮಾ: ಮುತ್ತುಗಳ ದ್ವೀಪದಲ್ಲಿ ಕರುನಾಡ ವೈಭವ : ಸಂಧ್ಯಾ ಪೈ ಆಗಮನ ನಿರೀಕ್ಷೆ

ಕನ್ನಡ ವೈಭವದಲ್ಲಿ ಪಾಲ್ಗೊಳ್ಳಲು -ತರಂಗ- ಸಂಪಾದಕಿ ಸಂಧ್ಯಾ ಪೈ,

ಸತೀಶ್ ಪೈ, ರವಿಶಂಕರ್, ವಿದೂಶಿ ಸಹನಾಭಟ್ ಬಹರೇನಿಗೆ

ಮನಾಮಾ: ಅಕ್ಟೋಬರ್ 24: ಇದೇ ಬರುವ ನವೆಂಬರ್ 14 ರಂದು ಬಹರೇನ್ ದ್ವೀಪರಾಷ್ಟ್ರದಲ್ಲಿ ಕನ್ನಡ ಸಂಘ ಆಯೋಜಿಸುತ್ತಿರುವ ಕನ್ನಡ ಸಂಸ್ಕೃತಿ, ಕಲೆ ಭಾಷೆಗಳ ಹಿರಿಮೆ ಗರಿಮೆಯನ್ನು ಸಾರುವ ಬೃಹತ್ -ಕನ್ನಡ ವೈಭವ-ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಸಂಸ್ಥೆಯ ಜನಪ್ರಿಯ ವಾರಪತ್ರಿಕೆಯಾದ -ತರಂಗ-ದ ವ್ಯವಸ್ಥಾಪಕ ಸಂಪಾದಕಿ ಶ್ರೀಮತಿ ಸಂಧ್ಯಾ ಪೈ ಹಾಗೂ ರಾಷ್ಟ್ರಿಯ ದಿನಪತ್ರಿಕೆಯಾದ -ಉದಯವಾಣಿ- ಯ ವ್ಯವಸ್ಥಾಪಕ ಸಂಪಾದಕರಾದ  ಹಾಗೂ ಮಣಿಪಾಲ್ ಮೀಡಿಯಾ ನೆಟ್ ವರ್ಕ್  ಆಡಳಿತ ನಿರ್ದೇಶಕರಾದ  ಶ್ರೀ ಸತೀಶ್ ಪೈಯವರು ವಿಶೇಷ ಅತಿಥಿಗಳಾಗಿ ಆಹ್ವಾನಿತರಾಗಿದ್ದಾರೆ.

ಶ್ರೀಮತಿ ಸಂಧ್ಯಾ ಪೈಯವರು ಮಾಧ್ಯಮರಂಗದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಜನಪ್ರಿಯರಾಗಿದ್ದು ಪತ್ರಿಕೋದ್ಯಮದಲ್ಲಿ ಅವರು ಸಾಧಿಸಿರುವ ಸಾಧನೆಗಳಿಗಾಗಿ ಪ್ರತಿಷ್ಟಿತ -ಅತ್ತಿಮಬ್ಬೆ ಪ್ರಶಸ್ತಿ- ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.  -ಅತ್ತಿಮಬ್ಬೆ- ಪ್ರಶಸ್ತಿಯು ಓರ್ವ ಮಹಿಳೆಗೆ ಸಂದ ಪ್ರಥಮ ಗೌರವವಾಗಿದ್ದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.  ಅವರು ತಮ್ಮ ಕನಸಿನ ಕೂಸಾದ ಮಣಿಪಾಲ ಎಂಟರ್ ಟೈನ್ಮೆಂಟ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಮೂಲಕ ಕಿರುತೆರೆಯ ಪ್ರೇಕ್ಷಕರಿಗೆ -ಗುಪ್ತಗಾಮಿನಿ-, -ಯಾವ ಜನ್ಮದ ಮೈತ್ರಿ- ಮೊದಲಾದ ಜನಪ್ರಿಯ ಧಾರಾವಹಿಗಳನ್ನು ನೀಡಿ -ಆರ್ಯಭಟ- ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 

ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಭಾರತದಲ್ಲಿಯೇ ಮುದ್ರಣರಂಗದಲ್ಲಿ  ಉತ್ತುಂಗದಲ್ಲಿರುವ ಹೆಸರುಗಳಲ್ಲೊಂದು. ಇದರ ಆಡಳಿತ ನಿರ್ದೇಶಕರಾಗಿರುವ ಶ್ರೀ ಸತೀಶ್ ಪೈಯವರು ಪತ್ರಿಕೆಯ ಮುದ್ರಣ ಹಾಗೂ ವಿನ್ಯಾಸದಲ್ಲಿನ ಶ್ರೇಷ್ಠತೆಗೆ ಅನೇಕ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದಾರೆ.

ಬಹರೇನ್ ಕನ್ನಡ ಸಂಘ ಕಳೆದ ಮೂವತ್ತೆರೆಡು ವರ್ಷಗಳಿಂದ ಕೊಲ್ಲಿಯ ಮಣ್ಣಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಾ ಬಂದಿದೆ.  ತನ್ನ ಮಣ್ಣಿನ ಈ ಸೇವೆಗಾಗಿ ಸಂಘದ ಬೆಳ್ಳಿಹಬ್ಬದ ಶುಭ ಅವಸರದಲ್ಲಿ ಪ್ರತಿಷ್ಠಿತ ರಾಜ್ಯಪ್ರಶಸ್ತಿಯನ್ನೂ ಪಡೆದಿದೆ.  ಸಂಘದ ೩೨ ವರ್ಷಗಳ ಶ್ರೀಮಂತ ಇತಿಹಾಸದಲ್ಲಿ ನಾಡಿನ ಹಲವಾರು ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು, ಚಲನಚಿತ್ರ ನಟನಟಿಯರು, ನೃತ್ಯಕಲಾವಿದರು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.  ಇವರಲ್ಲಿ ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆ, ವರನಟ ಡಾ. ರಾಜಕುಮಾರ್, ಉಪೇಂದ್ರ, ಮಾಸ್ಟರ್ ಹಿರಣ್ಣಯ್ಯ, ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಗುರುಕಿರಣ್, ನಟ ನಿರ್ದೇಶಕ ಅರವಿಂದ್, ಮಂಜುಳಾ ಗುರುರಾಜ್, ಗಾಯಕ ಎಲ್. ಎನ್. ಶಾಸ್ತ್ರೀ ಮೊದಲಾದವರು ಒಳಗೊಂಡಿದ್ದಾರೆ.

ಕಿರುತೆರೆಯಲ್ಲಿ ಜನಪ್ರಿಯವಾಗಿದ್ದ -ಸಿಲ್ಲಿ ಲಲ್ಲಿ- ಹಾಸ್ಯ ಧಾರಾವಾಹಿಯ ಡಾ. ವಿಠ್ಠಲ್ ರಾವ್ -ವೇರಿ ಫೇಮಸ್ ಇನ್ ಸರ್ಜರಿ ಅಂಡ್ ಭರ್ಜರಿ ಎಂಬ ವಾಕ್ಯದ ಮೂಲಕ ಕರ್ನಾಟಕದ ಮನೆಮನೆಯ ಮಾತಾಗಿರುವ ನಟ ರವಿಶಂಕರ್ ಇದೇಗ ಬೆಳ್ಳಿತೆರೆಗೆ ತಮ್ಮ ಪ್ರಥಮ ಚಿತ್ರ -ಪಯಣ- ದಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಪಾದಾರ್ಪಣೆಯಿಡುತ್ತಿದ್ದಾರೆ.  ಕನ್ನಡ ವೈಭವದ ಸಂಭ್ರಮದಲ್ಲಿ ರವಿಶಂಕರ್ ಅವರು ತಮ್ಮ ಮಧುರ ಕಂಠದಿಂದ ಕಾರ್ಯಕ್ರಮಕ್ಕೆ ಕಳೆನೀಡಲಿದ್ದು ಹಲವು ಕನ್ನಡ ಹಾಡುಗಳನ್ನೂ ಹಾಡಲಿದ್ದಾರೆ.

ಇವರೊಂದಿಗೆ ಶಿರಸಿಯ ನಾಟ್ಯಾಂಜಲಿ ನೃತ್ಯಕಲಾಕೇಂದ್ರದ ನಿರ್ದೇಶಕಿ, ಅಂತಾರಾಷ್ಟ್ರೀಯ ಪ್ರಶಸ್ತಿವಿಜೇತ ಖ್ಯಾತಿಯ ಭರತನಾಟ್ಯ ಕಲಾವಿದೆ ವಿದುಷಿ ಶ್ರೀಮತಿ ಸಹನಾಭಟ್ ರವರೂ -ಕನ್ನಡ ವೈಭವ-ದಲ್ಲಿ ಪಾಲ್ಗೊಳ್ಳಲು ವಿಶೇಷವಾಗಿ ಬಹರೇನಿಗೆ ಆಗಮಿಸಲಿದ್ದಾರೆ.  -ಮೋಹಿನಿಯಟ್ಟಂ-, -ಕೂಚಿಪುಡಿ- ಮೊದಲಾದ ವಿವಿಧ ನೃತ್ಯಪ್ರಾಕಾರಗಳಲ್ಲಿ ವಿಶೇಷ ಪರಿಣಿತಿ ಪಡೆದಿರುವ ಇವರು ಸ್ವಯಂ ಪ್ರದರ್ಶನ ನೀಡುವುದಲ್ಲದೇ ಸಂಘದ ಸುಮಾರು ಐವತ್ತಕ್ಕೂ ಹೆಚ್ಚು ಕಲಾವಿದರಿಗೆ ತರಬೇತಿ ನೀಡಿ ಅವರಿಂದ ಒಂದು ಘಂಟೆಯ -ರಾಮಾಯಣ- ನೃತ್ಯಕಲಾರೂಪಕವನ್ನು ಸಾದರಪಡಿಸಲಿದ್ದಾರೆ.  -ರಾಮಾಯಣ- ನೃತ್ಯರೂಪಕವು ಅವರ್ ನಿರ್ದೇಶನ ಹಾಗೂ ಸಂಯೋಜನೆಯ ಪ್ರಸಿದ್ಧ ನೃತ್ಯರೂಪಕಗಳಲ್ಲೊಂದಾಗಿದೆ.   ಕರ್ನಾಟಕದ ಘನ ಸರ್ಕಾರದ ಪಂಚಾಯತ್ ರಾಜ್ಯ ಹಾಗೂ ಗ್ರಾಮೀಣ ಸಚಿವೆ ಶೋಭಾ ಕರಂದ್ಲಾಜೆ, ಕಾರ್ಕಳದ ಜನಪ್ರಿಯ ಶಾಸಕ ಗೋಪಾಲ ಭಂಡಾರಿಯವರು ಈ ಸಂಭಾವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಇಲ್ಲಿನ ಭಾರತೀಯ ರಾಯಭಾರಿಯಾಗಿರುವ ಕನ್ನಡಿಗರಾದ ಶ್ರೀಯುತ ಬಾಲಕೃಷ್ಣ ಶೆಟ್ಟಿಯವರೂ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಈ ಸಂಭಾವ್ಯ ಕಾರ್ಯಕ್ರಮಕ್ಕೆ ನಾಡಿನಿಂದ ಅಗಮಿಸಲಿರುವ ಗಣ್ಯರು, ಕಲಾವಿದರು, ರಾಜಕೀಯ ಮುತ್ಸದ್ದಿಗಳ ಪಟ್ಟಿಯು ಅಂತಿಮ ಹಂತದಲ್ಲಿದ್ದು ನಾಡಿನ ಇನ್ನಷ್ಟು ಸಾಂಸ್ಕೃತಿಕ ತಂಡಗಳು, ಸಿನೇಮಾ ತಾರೆಯರು -ಕನ್ನಡ ವೈಭವ-ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕನ್ನಡ ಸಂಘದ ಅಧ್ಯಕ್ಷರಾದ ಶ್ರೀಯುತ ಆಸ್ಟಿನ್ ಸಂತೋಷ್ ರವರು ಈ ಸಂದರ್ಭದಲ್ಲಿ -ಉದಯವಾಣಿ-ಗೆ ತಿಳಿಸಿದ್ದಾರೆ.

ಇತ್ತೀಚೆಗೆ ಉದ್ಘಾಟನೆಯಾದ ಅತ್ಯಾಧುನಿಕ, ಸುಸಜ್ಜಿತ ಹಾಗೂ ಎಲ್ಲಾ ರೀತಿಯ ಆಧುನಿಕ ತಂತ್ರಜ್ಞಾನವನ್ನೊಳಗೊಂಡ -ಕೇರಳ ಸಮಾಜ-ದ ಡೈಮಂಡ್ ಜುಬಿಲಿ ಹಾಲ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು ಈ ನೂತನ ಭವ್ಯ ಸಭಾಂಗಣದಲ್ಲಿ ಜರುಗಲಿರುವ ಪ್ರಥಮ ಕನ್ನಡ ಕಾರ್ಯಕ್ರಮವಾಗಲಿದೆ.

ಈ ಕಾರ್ಯಕ್ರಮದ ಬಗ್ಗೆ ಕನ್ನಡಿಗರು ಅತೀವ ಕುತೂಹಲ ತಳೆದಿದ್ದು  ಉತ್ಸುಕತೆಯಿಂದ ಎದುರುನೋಡುತ್ತಿದ್ದಾರೆ.  ಕೊಲ್ಲಿಯ ನೆಲದಲ್ಲಿ ಕನ್ನಡದ ಚಿಲುಮೆಯನ್ನು ಚಿಮ್ಮುತ್ತಿರುವ ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸಂಘ ಮತ್ತೊಮ್ಮೆ ಕನ್ನಡ ಡಿಂಡಿಮ ಬಾರಿಸಲು ಸನ್ನದ್ಧವಾಗಿದೆ.  ಬಹರೇನ್ ಕನ್ನಡಿಗರ ಪಾಲಿಗೆ ಬರಲಿರುವ -ಕನ್ನಡ ವೈಭವ- ಕಾರ್ಯಕ್ರಮ ಮತ್ತೊಂದು ಸ್ಮರಣೀಯ ಕಾರ್ಯಕ್ರಮವಾಗಿ ಮುತ್ತುಗಳ ದ್ವೀಪದ ಕನ್ನಡಿಗರ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲಿ ಬರೆದಿಡಬಹುದಾದಂತಹ ಮತ್ತೊಂದು ಕಾರ್ಯಕ್ರಮವಾಗುವುದರಲ್ಲಿ ಸಂಶಯವಿಲ್ಲ

ಚಿತ್ರ, ಬರಹ: ಕಮಲಾಕ್ಷ ಅಮೀನ್, ಬಹರೇನ್

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕಮಲಾಕ್ಷ ಅಮೀನ್, ಬಹರೇನ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-24


ಪ್ರತಿಸ್ಪಂದನ
sahana bhat, sirsi
2008-11-04
very good writings and good article .doing good job
abc, xyz
2008-10-24
Excellent we appreciate. Publish news like this instead of some communal related news which hurts one community
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

»ಮನಾಮಾ: ವಿಶ್ವದ ಕನಿಷ್ಟ ದುಬಾರಿ ನಗರಗಳ ಪಟ್ಟಿಯಲ್ಲಿ ಮನಾಮ ಮುಂಚೂಣಿಯಲ್ಲಿ
»ಮನಾಮಾ: ಜುಲೈ 27: ನಗರದಲ್ಲಿ ಅನಧಿಕೃತ ಟ್ಯಾಕ್ಸಿಗಳ ಹಾವಳಿ : ಪ್ರತಿದಿನ 15,000 ಬಹರೇನಿ ದಿನಾರ್ ನಷ್ಟ
»ಬಹರೇನ್: ಸಂಭ್ರಮ-2008ರ ಯಶಸ್ಸಿನಲ್ಲಿ ಭಾಗವಹಿಸಿದ ತಂಡಕ್ಕೆ ಅಭಿನಂದನಾ ಸಮಾರಂಭ
»ಮನಾಮಾ: ಏಶಿಯನ್ ಕ್ರಿಕೆಟ್ ಕೌಂಸಿಲ್ ಟ್ರೋಫಿ ಯಲ್ಲಿ ಭಾಗವಹಿಸಲು ತೆರಳಿದ ಬಹರೇನ್ ತಂಡ
»ಮನಾಮಾ: ಪ್ಲಾಸ್ಟಿಕ್ ಮೇಲಿನ ನಿರ್ಭರತೆ ಕಡಿಮೆಗೊಳಿಸಲು ವಿನೂತನ ಕ್ರಮ : ಪ್ರತಿ ಚೀಲಕ್ಕೆ 20 ಫಿಲ್ಸ್
»ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಭಾರತೀಯ ರಾಯಭಾರಿ ನಿವಾಸಕ್ಕೆ ಭೇಟಿ
»ಬಹರೇನ್: ಹನ್ನೆರೆಡು ಮಹಡಿಗಳ ಎತ್ತರದಿಂದ ಬಿದ್ದೂ ಬದುಕಿದ ಕಾರ್ಮಿಕ
»ಬಹರೇನ್ : ವೀಸಾ ಆನ್ ಅರೈವಲ್ : ಶೀಘ್ರದಲ್ಲಿಯೇ ಭಾರತೀಯರಿಗೂ ಲಭ್ಯ
»ಹೊರದೇಶದಲ್ಲಿ ಅರಳಿದ ಎರೆಡು ಕನ್ನಡದ ಹೂವುಗಳು : ಭರತನಾಟ್ಯದಲ್ಲಿ ಭರವಸೆ ಮೂಡಿಸಿದ ಪೂಜಾ, ಶೃತಿ
»ಬಹರೇನ್: 2010 ರ ಪ್ರತಿಷ್ಟಿತ ಅಂತಾರಾಷ್ಟ್ರೀಯ ಏರ್ ಶೋ ಬಹರೇನ್ ತೆಕ್ಕೆಗೆ
»ಮನಾಮಾ: ದುಬಾರಿಯಾಗಲಿರುವ ಸಹಾಯವಾಣಿ : ಸಂಗ್ರಹವಾದ ಹಣ ಧರ್ಮಾರ್ಥಕಾರ್ಯಗಳಿಗೆ
»ಮನಾಮಾ: ನಾಲ್ಕು ಸಾವಿರ ಕಾರ್ಮಿಕರು ನಾಪತ್ತೆಯಾದ ಬಗ್ಗೆ ದೂರುಗಳು ದಾಖಲು
»ಬಹರೇನ್: ಕಿಂಗ್ ಫಹದ್ ಕಾಸ್ವೇಯಲ್ಲಿ ಕಾಯುತ್ತಿರುವ ಲಾರಿಗಳ ಸಾಲು
»ಬಹರೇನ್ : ಉದ್ಯೋಗ ವೀಸಾಗಳ ಮಹಾಪೂರದಲ್ಲಿ ಕೊಚ್ಚಿಹೋದ ಎಲ್.ಎಮ್.ಆರ್.ಎ.
»ಬಹರೇನ್: ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಿ ಬಾಂಧತ್ವ ಮೆರೆದ ಬಹರೇನ್ ಬಿಲ್ಲವಾಸ್
»ಡಾ.ವೀರೇಂದ್ರ ಹೆಗ್ಗಡೆಯವರಿಗೆ ಗುರು ಸಮಿತಿಯ ಗೌರವಾರ್ಹ ಸನ್ಮಾನ
»ಬಹರೇನ್: ಸಂಭ್ರಮದಲ್ಲಿ ಆಚರಿಸಲಾದ ಸಂಭ್ರಮ-2008: ಗರಿಮೆ ಮೂಡಿಸಿದ ಧರ್ಮಾಧಿಕಾರಿ.
»ಬಹರೇನ್: ಮಂಗಳೂರಿನ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಅಪಾರ : ಡಾ. ಹೆಗ್ಗಡೆ
»ಬಹರೇನ್: ಸಂಭ್ರಮದಲ್ಲಿ ಸಜ್ಜಾಗಿರುವ ಸಂಭ್ರಮ-2008
»ಬಹರೇನ್: ಕೊಚಿನ್ ಗೆ ಹೋಗುವ ವಿಮಾನದಲ್ಲಿ ಹೆಚ್ಚುವರಿ ಲಗೇಜ್ ಸೌಲಭ್ಯ
»ಬಹರೇನ್: ಗುರುಸೇವಾ ಸಮಿತಿಯ ಹೊಸ ಕಾರ್ಯಕಾರಿ ಸಮಿತಿ ನೇಮಕ
»ಬಹರೇನ್: ಬಹರೇನ್ ಬಿಲ್ಲವ ಸಮುದಾಯದ ಹಿರಿಯನಿಗೆ ಶುಭವಿದಾಯ
»ಬಹರೇನ್: ಭಾರತೀಯ ವಾಣಿಜ್ಯೋದ್ಯಮಿಗೆ ಸನ್ಮಾನ
»ಬಹರೇನ್: ಬಂಟ್ಸ್ ಮಹಿಳಾ ದಿನ : ಉತ್ಸಾಹ ಉಲ್ಲಾಸ ಭರಿತ ಸಂತಸದ ದಿನ
»ಬಹರೇನ್: ಗುರುಸೇವಾ ಸಮಿತಿಯ ಅಧ್ಯಕ್ಷರಾಗಿ ರಾಜ್ ಕುಮಾರ್ ಆಯ್ಕೆ
»ಬಹರೇನ್: ಹಲವು ಭಾರತೀಯರಿಗೆ 80,000 ಬಹರೇನಿ ದಿನಾರ್ ಟೊಪ್ಪಿ ಹಾಕಿದ -ಗುರು-
»ಬಹರೇನ್: ನೀ ಕುಣಿದಾಗ - ಕನ್ನಡ ಸಂಘ ಬಹರೇನ್ ಆಯೋಜಿಸಿದ ನೃತ್ಯಸ್ಪರ್ಧೆ
»ಬಹರೇನ್: ಪ್ರಿನ್ಸ್ ಮತ್ತು ಪ್ರಿನ್ಸೆಸ್ ಸ್ಪರ್ಧೆ : ಕರ್ನಾಟಕ ಸೋಶಿಯಲ್ ಕ್ಲಬ್ ಪ್ರಸ್ತುತಪಡಿಸಿದ ಸುಂದರ ಕಾರ್ಯಕ್ರಮ
»ಬಹರೇನಿನಲ್ಲಿ ಕನ್ನಡ ಬರಹಗಾರರ ವೇದಿಕೆ ಉದ್ಘಾಟನೆ
»ಬಹರೇನ್ ಕನ್ನಡ ಸಂಘ ಆಯೋಜಿಸಿದ್ದ ಪ್ರಿನ್ಸ್ ಅಂಡ್ ಪ್ರಿನ್ಸೆಸ್ ಸ್ಪರ್ಧೆ ಅತ್ಯಂತ ಯಶಸ್ವಿ
»ಬಹರೇನ್ : ಕನ್ನಡ ಲೇಖಕರ ವೇದಿಕೆ ಶೀಘ್ರದಲ್ಲಿ : ಒಂದುಗೊಳ್ಳಲು ಲೇಖಕರಿಗೆ ಕರೆ
»ಬಹರೇನ್ : ಮೊಗವೀರ ಬಹರೇನ್ ಸಂಘದ ಅಧ್ಯಕ್ಶರಾಗಿ ಗಿರೀಶ್ ಇಡ್ಯ ಮರು ಆಯ್ಕೆ
»ಬಹರೇನ್: ಶ್ರೀ ಕಮಲಾಕ್ಷ ಅಮೀನ್ ಅವರಿಗೆ 'ಹೃದಯವಂತ ಪ್ರಶಸ್ತಿ' ಪ್ರದಾನ
»ಕನ್ನಡ ಸಂಘ ಬಹರೇನ್ ಏರ್ಪಡಿಸಿದ ಉತ್ಸಾಹಪೂರ್ಣ 7 ಸೈಡ್ ಫ್ಯಾಮಿಲಿ ಕ್ರಿಕೆಟ್ ಪಂದ್ಯಾಟ
»ಬಹರೇನ್ ಕನ್ನಡ ಸಂಘದ ವಿಜ್ರಂಭಣೆಯ ವಸಂತೋತ್ಸವ
»ಬಹರೇನ್ ಕನ್ನಡ ಸಂಘ ಆಯೋಜಿಸಿರುವ ವಸಂತೋತ್ಸವ - ಏಪ್ರಿಲ್ 3 ರಂದು
»ಬಹರೇನ್ : ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯರ ಶ್ಲಾಘನೆ
»ಬೆಂಕಿ ಹತ್ತಿದ ಕೊಠಡಿಯಿಂದ ಇಬ್ಬರು ಭಾರತೀಯ ಮಕ್ಕಳ ಪಾರು - ಫೈಸಲ್ ನ ಸಾಹಸ.
»ಬಹರೇನ್: ಬಹರೇನ್ ಕನ್ನಡ ಸಂಘದ ಅಧ್ಯಕ್ಷರಾಗಿ ಆಸ್ಟಿನ್ ಸಂತೋಷ್ ಆಯ್ಕೆ
»ಬಹರೇನ್: ಬಹರೇನ್ ಕನ್ನಡ ಸಂಘದ ಮಹಿಳಾ ಕೂಟ : ಉಲ್ಲಾಸಕರ ವಾತಾವರಣ
»ಬಹರೇನ್: ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ತರುವ ಯಾವುದೇ ಕ್ರಮಕ್ಕೆ ದಂಡಸಹಿತ ಜೈಲು ಸಂಭವ
»ಬಹರೇನ್: ಗಲ್ಫ್ ರಾಷ್ಟ್ರಗಳಲ್ಲೇ ಅತ್ಯಂತ ದೊಡ್ಡ ಪುಷ್ಪ ಪ್ರದರ್ಶನ
»ಫೆ. ೨೨: ಬಹ್ರೈನ್‌ನಲ್ಲಿ`ಕುಡ್ಲೋತ್ಸವ'
»ಬಹರೇನ್: ಯುವಕನ ಸಾವು ಸಂದೇಹಾಸ್ಪದ
»ಬಹರೇನ್: ಪರಿಚಾರಕನಿಗೆ ದುಬಾರಿಯಾಗಿ ಪರಿಣಮಿಸಿದ ನಂ. ೧
»ಬಹ್ರೈನ್‌ನಲ್ಲಿ ಪೊಲೀಸ್; ಬೆಂಗಳೂರಿನಲ್ಲಿ ಕಳ್ಳ!
»ಕನಿಷ್ಟ ವೇತನ ನೀಡದಿದ್ದರೆ ಕಾರ್ಮಿಕರ ಪೂರೈಕೆ ಇಲ್ಲ : ಭಾರತ ಸರ್ಕಾರದ ಎಚ್ಚರಿಕೆ
»ಬಹರೇನ್: ಕನಿಷ್ಟ ೧೦೦ ಬಹರೇನ್ ದಿನಾರ್ ವೇತನ ನಿಗದಿ : ಬಾಲಕೃಷ್ಣ ಶೆಟ್ಟಿ
»ಶುಕ್ರವಾರ ಪರೇಶ್ ರಾವಲ್ ರವರಿಂದ ಶಾದಿ ಅಟ್ ಬರಬಾದಿ.ಕಾಮ್
»೭೫೦ಕ್ಕೂ ಹೆಚ್ಚಿನ ಕಾರ್ಮಿಕರಿಂದ ಪ್ರತಿಭಟನೆ-ವೇತನ ಏರಿಕೆ ಬೇಡಿಕೆ
»ಬಹ್ರೇನ್‌ನಲ್ಲಿ ಮುಷ್ಕರ
»ಬಹರೇನ್ ಏರ್ ಗೆ ಸಂಭ್ರಮದ ಸ್ವಾಗತ
»೨೧ನೆಯ ಶತಮಾನದಲ್ಲಿ ಗಾಂಧಿವಾದ : ಬಹರೇನಿನಲ್ಲಿ ವಿಚಾರ ಸಂಕಿರಣ
»ಬಹರೇನ್ ಕನ್ನಡ ಸಂಘದ ವಾರ್ಷಿಕೋತ್ಸವ : ಸದಸ್ಯರಿಗಾಗಿ ಆನಂದ್ ಬಜಾರ್
»ಅಪರೂಪದ ವಿಶಿಷ್ಟ ಅಟಿಲ್-೨೦೦೮ ಆಹಾರ ಮೇಳ
»ವಿದೇಶೀ ಸಂಸ್ಥೆಗಳ ಮೇಲೆ ತೆರಿಗೆ ಪ್ರಸ್ತಾಪ
»ಬಹರೇನಿನಲ್ಲಿ ತುಳುನಾಡಿನ ಕಂಪನ್ನು ಹರಡಲಿರುವ ಕುಡ್ಲೋತ್ಸವ
»ಬಹರೇನ್ ಹಿರಿಯ ನಾಗರಿಕರಿಗೆಂದೇ ವಿಶೇಷ ಆಸ್ಪತ್ರೆ: ಕಾನೂ ಕೊಡುಗೆ
»ಸಂಭ್ರಮದ ಕನ್ನಡ ವೈಭವ-೨೦೦೭ ಆಚರಣೆ
»ಬಹರೇನಿನಲ್ಲಿ ೧೫ ಮಿಲಿಯನ್ ದಿನಾರ್ ವೆಚ್ಚದಲ್ಲಿ ರಂಗಮಂದಿರ ಸ್ಥಾಪನೆ
»ದಕ್ಷಿಣ ಕನ್ನಡ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ರಮಾನಾಥ ರೈಗೆ ಸಮ್ಮಾನ
»ಮೊಗವೀರ್ರ್ಸ್ ಬಹ್ರೈನ್: ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಪ್ರದಾನ
»ಬಹರೇನ್ ಬಂಟ್ಸ್ - ಸಂಭ್ರಮದ ಸಾಂಸ್ಕೃತಿಕ ವಿಹಾರಕೂಟ
»ಡಿ. ೨೧: ಬಹ್ರೈನ್‌ನಲ್ಲಿ `ಕನ್ನಡ ವೈಭವ'
»`ಬಹ್ರೈನ್ ರೇಡಿಯೋ': `ಕಸ್ತೂರಿ ಕನ್ನಡ' ವರ್ಷದ ಹರ್ಷಾಚರಣೆ ನಟಿ ಜಯಮಾಲಾ ವಿಶೇಷ ಸಂದರ್ಶನ
»ಭಾರತೀಯ ದೂತಾವಾಸದಲ್ಲಿ ನಾಟಕ
»ಕನ್ನಡ ಸಂಘದಲ್ಲಿ `ಕುಣಿಯೋಣ ಬನ್ನಿ - ೨೦೦೭'
»ಬಹರೈನ್: ದ್ವಿಗುಣಗೊಳ್ಳಲಿರುವ ಜನಸಂಖ್ಯೆ
»ಇಪ್ಪತ್ತರ ತಾರುಣ್ಯದಲ್ಲಿ - ಸ್ನೇಹಾ
»ಅಲ್ ಜಜೀರಾ ಬೆಂಕಿ ಅನಾಹುತ: ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಕಾರ್ಮಿಕರು.
»ಅನಿವಾಸಿಗಳ ಮೇಲೆ ಮುಸುಕುಧಾರಿ ಬಹರೈನಿ ನಾಗರಿಕರಿಂದ ಹಲ್ಲೆ
» ಕರ್ನಾಟಕ ಸೋಷಿಯಲ್ ಕ್ಲಬ್ ಆಯೋಜಿಸಿರುವ ವರ್ಷಾಂತ್ಯ ಬಜಾರ್:
»ಮಕ್ಕಳಿಗೆ ಪ್ರಿನ್ಸ್ ಹಾಗೂ ಪ್ರಿನ್ಸೆಸ್ ಸ್ಪರ್ಧೆ
»ಸೌದಿ ಅರೇಬಿಯಕ್ಕೆ ಪ್ರವೇಶ ಪಡೆಯಲು ಸುಲಭದ ದಾರಿ
»ಬಹರೈನ್ ನಲ್ಲಿ ಬಿಕ್ಷುಕರಿಗೆ ಜೈಲು!
»ಭಾರತಕ್ಕೆ ಸೌಹಾರ್ದಯುತ ಭೇಟಿ ನೀಡುತ್ತಿರುವ ಬಹರೇನ್ ಎಂಪಿಗಳ ನಿಯೋಗ
»೧.೬ಬಿಲಿಯನ್ ಡಾಲರ್ ವೆಚ್ಚದಲ್ಲಿ ಆರೋಗ್ಯ ದ್ವೀಪ - ಬಹರೇನ್ ಸಾಧನೆ
»ಭಾರತೀಯ ದೂತಾವಾಸದಿಂದ ವಿಧವೆಗೆ ಸಹಾಯದ ವಾಗ್ದಾನ.
»ಇವರನ್ನು ಇಲ್ಲಿ ಎಳೆ ತಂದವರಾರು?
»ಕ್ಷಿಪಣಿ ಧಾಳಿಗೆ ರಕ್ಷಾ ಕವಚ ಅಳವಳಿಸಿಕೊಳ್ಳುವ ಒತ್ತಾಸೆಯಲ್ಲಿ ಬಹ್ರೈನ್
»ಕತಾರ್ - ಬಹ್ರೈನ್ ನಡುವೆ ಹೊಸ ಸಾಗರ ಹೆದ್ದಾರಿ.
»ಸಹಾಯಧನ ಪಡೆದ ವಸ್ತುಗಳು ಕೇವಲ ಬಡವರಿಗಾಗಿ.
»ಚುರುಕುಗೊಂಡ ಕ್ಷಮಾದಾನ, 2200 ಜನರ ಮನವಿ ಆಯಾ ದೇಶಗಳ ದೂತಾವಾಸಗಳಿಗೆ
»ಕನ್ನಡ ಸಂಘದಲ್ಲಿ ಸಾಹಿತ್ಯ ಸಂಜೆ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri