ಕುದ್ರೋಳಿ ಶಂಕರ್ ಸುವರ್ಣ ಎಸ್.ಇ.ಒ ನಿಯುಕ್ತಿ |
ಪ್ರಕಟಿಸಿದ ದಿನಾಂಕ : 2008-10-21
ಮುಂಬಯಿಯ ಹಿರಿಯ ಸಮಾಜ ಸೇವಕ, ಕಾಂಗ್ರೇಸ್ (ಐ) ಪಕ್ಷದ ಸಕ್ರೀಯ ಕಾರ್ಯಕರ್ತ, ಮಹಾರಾಷ್ಟ್ರ ರಾಜ್ಯದ ಮಾಜಿ ಗೃಹ ಸಚಿವ ಕೃಪಾ ಶಂಕರ್ ಸಿಂಗ್ ಇವರ ನಿಕಟವರ್ತಿ, ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಆಡಳಿತ ಸಮಿತಿಯ ಸದಸ್ಯರಾದ ಶಂಕರ್ ಕೆ.ಸುವರ್ಣ
ಇವರನ್ನು ಮಹಾರಾಷ್ಟ್ರ ರಾಜ್ಯ ಸರಕಾರವು ವಿಶೇಷ ಕಾರ್ಯಕಾರಿ ಅಧಿಕಾರಿಯನ್ನಾಗಿ ನಿಯುಕ್ತಿಗೊಳಿಸಿದೆ.
ಪ್ರಾಮಾಣಿಕ ಸಾಮಾಜಿಕ ಕಾರ್ಯಕರ್ತರಾದ ಇವರನ್ನು ಸರಕಾರವು 1982ರಿಂದ2013ರ ಈ ತನಕ ಒಟ್ಟು 5ನೇ ಬಾರಿಗೆ ಈ ನೇಮಕತಿ ಮಾಡಿದೆ.
ಮಹಾನಗರದ ಉತ್ತರ- ಪಶ್ಚಿಮ ಜಿಲ್ಲಾ ಕಾಂಗ್ರೆಸ್ (ಐ) ಸಮಿತಿಯ ಉಪಾಧ್ಯಕ್ಷ, ಸಂಜಯ್ ಗಾಂಧಿ, ನೀರಾದಾರ್ ಯೋಜನೆಯ ಪ್ರಾಧೀಕಾರದ ಸದಸ್ಯ, ಹಾಗೂ ಖಾರ್ ಶ್ರೀ ಶನೀಶ್ವರ ಸೇವಾ ಸಮಿತಿ (ರಿ.) ಇದರ ಅಧ್ಯಕ್ಷರಾಗಿಯೂ ಶಂಕರ್ ಸುವರ್ಣರು ಸಮಾಜ ಸೇವೆ ಸಲ್ಲಿಸುತ್ತಿದ್ದು, ಮೂಲತಃಮಂಗಳೂರು ಕುದ್ರೋಳಿ ಇಲ್ಲಿಯವರಾಗಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-21
|
|
|