ಉಗ್ರತಾಪ: ದಿಲ್ಲಿ , ಮುಂಬೈ, ಕೋಲ್ಕತಾ, ಗುಜರಾತ್ನಲ್ಲಿ ಕಟ್ಟೆಚ್ಚರ ಆತ್ಮಾಹುತಿ ದಾಳಿ ಭೀತಿ |
ಪ್ರಕಟಿಸಿದ ದಿನಾಂಕ : 2009-12-15
ಹೊಸದಿಲ್ಲಿ ,ಡಿ.೧೪: ಮುಂಬಯಿಯ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್, ಬಾಂಬೆ ಸ್ಟಾಕ್ ಎಕ್ಸ್ಚೇಂಜ್, ಕೋಲ್ಕತಾದ ಅಮೆರಿಕನ್ ಕಾನ್ಸುಲೇಟ್ಗಳ ಮೇಲೆ, ಗುಜರಾತಿನ ಮತ್ತು ದಿಲ್ಲಿಯ ಹಲವೆಡೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಹೆಚ್ಚಿರುವುದರಿಂದ ಈ ನಗರಗಳಲ್ಲಿ ಕಟ್ಟೆಚ್ಚರ ಸಾರಲಾಗಿದೆ.
ಈ ನಿಟ್ಟಿನಲ್ಲಿ ಎಚ್ಚರಿರುವಂತೆ ಗೃಹ ಖಾತೆಯು ಈಗಾಗಲೇ ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಗುಜರಾತ್ ಮತ್ತು ದಿಲ್ಲಿಯ ಸರಕಾರಗಳಿಗೆ ಸೂಚನೆ ನೀಡಿದ್ದು ಈ ಹಿನ್ನೆಲೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಉಗ್ರ ದಾಳಿಯ ಸಂಭಾವ್ಯತೆಯ ಹಿನ್ನೆಲೆಯಲ್ಲಿ ಪ್ರಮುಖ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಬಸ್ಸು ನಿಲ್ದಾಣ ಮತ್ತು ಹೆಸರಾಂತ ಹೊಟೇಲ್ ಗಳಿಗೆ ಸೂಕ್ತ ರಕ್ಷಣೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾಲಿಬಾನ್ ತರಬೇತಿ ಪಡೆದ `ಫಿದಾಯೀನ್' (ಆತ್ಮಹತ್ಯಾ ದಾಳಿ ) ಉಗ್ರರು ದಾಳಿ ನಡೆಸುವ ಸಲುವಾಗಿ ದೇಶದ ಅನೇಕ ನಗರಗಳಲ್ಲಿ ನುಸುಳಿ ಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಉನ್ನ ತ ಅಧಿಕಾರಿಗಳು ನೀಡಿದ್ದಾರೆ.
ಉಗ್ರರ ದಾಳಿಯ ಪ್ರಮುಖ ಗುರಿಗಳೆಂದರೆ ನಾಗಪುರದಲ್ಲಿರುವ ಆರ್ಎಸ್ಎಸ್ನ ಕೇಂದ್ರ ಕಚೇ ರಿ, ಕೋಲ್ಕತಾ ಬಂದರು ಮತ್ತು ಗುರುತಿಸ ಲ್ಪಡದ ಕೆಲವು ರಕ್ಷಣಾ ತಾಣಗಳು ಎನ್ನ ಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಡೆ ಗಳಲ್ಲಿ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲು ಸೂಚಿಸಲಾಗಿದೆ.
ಗುಪ್ತಚರ ವರದಿ ಪ್ರಕಾರ ದಿಲ್ಲಿಯಲ್ಲಿ ಮುಂದಿನ ಫೆಬ್ರವರಿ ತಿಂಗಳಲ್ಲಿ ವರ್ಲ್ಡ್ ಕಪ್ ಹಾಕಿ ನಡೆಯು ವ ವೇಳೆ ಉಗ್ರ ದಾಳಿ ನಡೆಯುವ ಸಾಧ್ಯತೆ ಹೆಚ್ಚಿದೆ. ಲಷ್ಕರ್-ಎ-ತಯ್ಯಬಾಕ್ಕೆ ನೆರವಾಗಲು ಬಂದ ಉಗ್ರರು ಗುಜರಾತಿನ ಹಲವೆಡೆಗಳಲ್ಲಿ ನಾಗರಿಕ ದಾಳಿ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಉಗ್ರರು `ಪಷ್ತೂನ್ ಸಮುದಾಯ' ದವರಂತೆ ವೇಷ ಧರಿಸಿ ಬರಬಹುದೆಂದೂ ಮೂಲಗಳು ತಿಳಿಸಿವೆ.
`ಗುಪ್ತಚರ ವರದಿಗಳಲ್ಲಿ ದಾಳಿಯ ಬಗ್ಗೆ `ಇದಮಿತ್ಥಂ' ಎಂದು ಹೇಳಿರದಿದ್ದರೂ ಕಟ್ಟೆಚ್ಚರ ವಹಿಸು ವಂತೆ ಸೂಚಿಸಲಾಗಿದೆ' ಎಂದಿರುವ ಪಶ್ಚಿಮ ಬಂಗಾಲ ಗೃಹ ಕಾರ್ಯದರ್ಶಿ ಅರ್ಧೇಂದು ಸೆನ್ `ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಜನರು ಹೆಚ್ಚು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಶಾಪಿಂಗ್ ಸೆಂಟರ್ಗಳು ಮತ್ತು ಬಸ್ಸು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ' ಎಂದರು.
ಭದ್ರತೆಯ ವಿಚಾರದಲ್ಲಿ ಎಚ್ಚರ ವಹಿಸುವಂತೆ ಡಿ. ೧೨ಕ್ಕೆ ಕೇಂದ್ರದಿಂದ ಸೂಚನೆ ಬಂದಿರುವುದಾ ಗಿ ಇದೇ ವೇಳೆ ಸೆನ್ ಹೇಳಿದರು.
ಉಗ್ರ ಸುದ್ದಿ: ಮುಂಬಯಿಯಲ್ಲಿ ಕಟ್ಟೆಚ್ಚರ
ಮುಂಬಯಿ, ಡಿ. ೧೪: ತಾಲಿಬಾನ್ ಉಗ್ರರು ಪ್ರವೇಶಿಸಿದ್ದಾರೆ ಎಂಬ ಗುಪ್ತ ಚರ ಮಾಹಿತಿ ಹಿನ್ನೆಲೆಯಲ್ಲಿ ನಗರಾ ದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.
ದೇಶದ ಆರ್ಥಿಕ ರಾಜಧಾನಿ ಮುಂಬಯಿ ನಗರದ ಪ್ರಮುಖ ಸಂಕೀರ್ಣಗಳಲ್ಲಿ ಉಗ್ರರು ಆತ್ಮಾ ಹುತಿ ದಾಳಿ ನಡೆಸುವರೆಂದು ಗುಪ್ತಚರ ಮಾಹಿತಿ ರವಾನೆಯಾಗಿದೆ.
ಭಾಭಾ ಅಣು ಸಂಶೋಧನಾ ಕೇಂದ್ರ, ಮುಂಬಯಿ ಶೇರು ಮಾರು ಕಟ್ಟೆ, ನಾಗಪುರದಲ್ಲಿರುವ ಆರೆಸ್ಸೆಸ್ ಮುಖ್ಯಾಲಯ, ಪೊವಾಯಿಯ ಜಲವಾಯು ವಿಹಾರ್ ಕೇಂದ್ರ ಮೊದಲಾದ ಪ್ರಮುಖ ಸಂಕೀರ್ಣ ಗಳ ಮೇಲೆ ಉಗ್ರರು ದಾಳಿ ನಡೆಸುವರೆಂದು ಎಚ್ಚರಿಸಲಾಗಿದೆ.
ಶಿವಸೇನಾ ಪ್ರಮುಖ ಬಾಳ್ ಠಾಕ್ರೆ, ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್ ಸೇರಿದಂತೆ ಪ್ರಮುಖ ವ್ಯಕ್ತಿ ಗಳನ್ನೂ ಉಗ್ರರು ಗುರಿಯಾಗಿಸಿ ಕೊಂಡಿದ್ದಾರೆ ಎಂದು ಹೇಳಲಾಗಿದೆ.
ತಾಜ್ಮಹಲ್ ಪಂಚತಾರಾ ಹೊಟೇಲ್ ಸಮೀಪದಲ್ಲಿರುವ ಹಳೆಯ ರೇಡಿಯೋ ಕ್ಲಬ್ಗೂ ಉಗ್ರ ರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಇತ್ತೀಚೆಗೆ ಗುಪ್ತಚರ ಘಟಕಗಳು ಪೊಲೀಸರಿಗೆ ಎಚ್ಚರಿಕೆಯ ಸಂದೇಶ ರವಾನಿಸಿವೆ.
೩ ಕಡೆಗಳಲ್ಲಿ ಕಡಲು ಆವರಿಸಿ ಕೊಂಡಿರುವ ಪರಿಸರದಲ್ಲಿರುವ ರೇಡಿಯೋ ಕ್ಲಬ್ಗೆ ಸಮುದ್ರ ಮಾರ್ಗವಾಗಿ ಆಗಮಿಸಿ ಸುಲಭದಲ್ಲಿ ದಾಳಿ ನಡೆಸುವ ಅಪಾಯವಿದ್ದು, ಕರಾವಳಿ ಕಾವಲು, ನೌಕಾಪಡೆ ಗಳನ್ನು ಜಾಗೃತ ಸ್ಥಿತಿಯಲ್ಲಿಡಲಾಗಿದೆ.
೨೬/೧೧ರ ದಾಳಿಯ ಬಳಿಕ ನಗರ ಸರ್ವ ರೈಲು ನಿಲ್ದಾಣಗಳಲ್ಲಿ ಬಂದೋಬಸ್ತ್ ಜಾರಿಯಲ್ಲಿದೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-12-15
|
|
|