ಅಂಬಲ್ತೆರೆ ವಿಷನ್ಸ್ ಚೊಚ್ಚಲ ಪ್ರದರ್ಶನ : ಯಶಸ್ವೀ ತುಳುನಾಟಕ ’ಗಂಗುನ ಗಮ್ಮತ್” ಪ್ರದರ್ಶನ |
ಪ್ರಕಟಿಸಿದ ದಿನಾಂಕ : 2008-10-18
ಸ್ಥಳೀಯ ಪ್ರತಿಭೆಗಳಿಂದ ಅತ್ಯುತ್ತಮ ಪ್ರದರ್ಶನ : ಹೊಸ ಅಧ್ಯಾಯಕ್ಕೆ ನಾಂದಿ
ದುಬೈ, ಅಕ್ಟೋಬರ್ ೧೮: ಕನ್ನಡಪರ ಚಟುವಟಿಕೆಗಳಲ್ಲಿ ಸದಾ ಒಂದಿಲ್ಲೊಂದು ಪ್ರಯತ್ನ ನಡೆಸುತ್ತಲೇ ಇರುವ ಶ್ರೀ ಪ್ರಭಾಕರ ಅಂಬಲೆತೆರೆ ಈ ನಿಟ್ಟಿನಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ವೇದಿಕೆಯೊಂದನ್ನು ಅಂಬಲ್ತೆರೆ ವಿಷನ್ಸ್ ಸ್ತಾಪಿಸುವುದರ ಮೂಲಕ ಪ್ರಮುಖ ಹೆಜ್ಜೆಯೂರಿದ್ದಾರೆ.
ನಿನ್ನೆ, ೧೭ನೇ ಅಕ್ಟೋಬರ್ ನಂದು ದುಬೈ ಇಂಡಿಯನ್ ಕಾನ್ಸುಲಟೆ ಹಾಲ್ ಸಭಾಂಗಣದಲ್ಲಿ ಕೇವಲ ಸ್ಥಳೀಯ ಕಲಾವಿದರ್ನ್ನೊಳಗೊಂಡ ತಂಡ ಶ್ರೀ ವಿಶ್ವನಾಥ ಶೆಟ್ಟಿಯವರ ನಿರ್ದೇಶನದಲ್ಲಿ ತುಳು ಹಾಸ್ಯ ನಾಟಕ ಗಂಗುನ ಗಮ್ಮತ್- ಅನ್ನು ಯಶನ್ವಿಯಾಗಿ ಪ್ರದರ್ಶಿಸಿ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.
ಸಂಜೆ ಮೂರುವರೆಯಿಂದ ಸಂಗೀತ ರಸಮಂಜರಿಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ರಾತ್ರೆ ಹತ್ತು ಘಂಟೆಯವರೆಗೂ ನಡೆಯಿತು. ಸಂಗಿತ ರಸಮಂಜರಿಯಲ್ಲಿ ಶ್ರೀ ರವಿರಾಜ್ ತಂತ್ರಿ ಸೇರಿದಂತೆ ಹಲವರು ತಮ್ಮ ಗಾಯನಪ್ರತ್ರಿಭೆಯನ್ನು ಪ್ರಚುರಪಡಿಸಿದರು.
ನಾಟಕದ ನಿರ್ಮಾಪಕ ಹಾಗೂ ನಿಯೋಜಕರಾದ ಶ್ರೀ ಪ್ರಭಾಕರ ಅಂಬಲ್ತೆರೆಯವರು ಕಾರ್ಯಕ್ರಮಕ್ಕೆ ಸಭಿಕರನ್ನು ಆಹ್ವಾನಿಸಿದರು. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟ್ಯ್, ಶಾರ್ಜಾ ಕರ್ನಾಟಕ ಸಂಘದ ಮಹಾಪೋಷಕರಾದ ಸ್ರ್ಹೀ ಮಾರ್ಕ್ ಡೆನ್ನಿಸ್, ಪ್ರಭಾಕರ ಅಂಬಲ್ತೆರೆ, ಶ್ರೀಮತಿ ಅಂಬಲ್ತೆರೆ, ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾದ ಸಿ.ಆರ್. ಶೆಟ್ಟಿ. ಡಾ. ಬಿ. ಕೆ ಯೂಸುಫ್, ಶ್ರೀ ಸುಜಯ್ ಬೆಂದೂರ್ ಹಾಗೂ ಷ್ರೀ ಮುರಳಿಯವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಸಾಂಪ್ರಾದಾಯಿಕ ಪ್ರಾರಂಭ ಕಂಡಿತು.
ತಮ್ಮ ಭಾಷಣದಲ್ಲಿ ಮಾತನಾಡುತ್ತಾ ಸರವೋತ್ತಮ ಶೆಟ್ಟಿಯವರು ಕನ್ನಡಪರ ಚಟುವಟಿಕೆಗಳಲ್ಲಿ ಎಂದಿಗೂ ತಮ್ಮ ಸಹಾಯಹಸ್ತ ಚಾಚುತ್ತಿರುವ ಅಂಬಲ್ತೆರೆಯವರ ಪ್ರಯತ್ನವನ್ನು ಶ್ಲಾಘಿಸಿ ಅಂಬಲ್ತೆರೆ ವಿಷನ್ಸ್ ಗೆ ತಮ್ಮ ಶುಭಹಾರೈಕೆ ನೀಡಿದರು. ಆ ಬಳಿಕ ಮಾತನಾಡಿದ ಡಾ. ಯೂಸುಫ್ ಅವರು ವಿದೇಶದಲ್ಲಿ ತುಳು ಭಾಷೆ ಹಾಗೂ ಸಂಸ್ಕೃತಿಗೆ ಲಭಿಸುತ್ತಿರುವ ಪ್ರೋತ್ಸಾಹಕ್ಕೆ ತಮ್ಮ ಮೆಚ್ಚುಗೆ ಸೂಚಿಸಿದರು. ದುಬೈ ಕರ್ನಾಟಕ ಸಂಘಾದ ಅಧ್ಯಕ್ಷರಾದ ಶ್ರೀ ಸಿ.ಆರ್. ಶೆಟ್ಟಿಯವರು ಮಾತನಾಡಿ ಅಂಬಲ್ತೆರೆ ವಿಶನ್ಸ್ ಗೆ ತಮ್ಮ ಪ್ರೋತ್ಸಾಹ ಎಂದೂ ಇರುವುದು ಎಂಬುದಾಗಿ ಪ್ರಕಟಿಸಿದರು.
ಸಭಾಕಾರ್ಯಕ್ರಮದ ಬಳಿಕ ಪ್ರದರ್ಶಿಸಲ್ಪಟ್ಟ ತುಳು ಹಾಸ್ಯ ನಾಟಕ ಗಂಗುನ ಗಮ್ಮತ್ ನೆರೆದವರನ್ನು ನಗೆಗಡಲಲ್ಲಿ ಮುಳುಗಿಸಿತು. ಗಂಗುನ ಪಾತ್ರದಲ್ಲಿ ನಿರ್ದೇಶಕ ವಿಶ್ವನಾಥ ಶೆಟ್ಟಿಯವರು ತಮ್ಮ ನೈಜ ಪ್ರತಿಭೆಯನ್ನು ಅನಾವರಣಗೊಳಿಸಿದರು. ಪಾತ್ರವರ್ಗದ ಎಲ್ಲರೂ ತಮ್ಮ ಪಾಲಿನ ಕರ್ತವ್ಯವನ್ನು ನಿಷ್ಟೆಯಿಂದ ನಿರ್ವಹಿಸಿ ನಾಟಕಕ್ಕೆ ಪ್ರಚಂಡ ಕರತಾಡನದ ಬಹುಮಾನವನ್ನು ಗಳಿಸಿದರು. ಒಂದರ್ಧ ಘಂಟೆ ನೋಡಿ ಹೋಗುತ್ತೇವೆ ಎಂದು ಉಢಾಫೆಯಿಂದ ಬಂದಿದ್ದವರು ಸಹಾ ಇಡಿಯ ನಾಟಕ ನೋಡಿ ಮೆಚ್ಚಿ ಹಿಂದಿರುಗಿದ್ದು ನಾಟಕದ ಎಲ್ಲಾ ಪಾತ್ರವರ್ಗದ ವಿಜಯದ ಸಂಕೇತ.
ಶ್ರೀ ಶೋಧನ್ ಪ್ರಸಾದ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಅಂತಿಮವಾಗಿ ಮುತ್ತಕ್ಕನ ಪಾತ್ರ ವಹಿಸಿದ ಶ್ರೀಮತಿ ಸಿಂಥಿಯಾ ಪಿಂಟೋ ಅವರು ಅತ್ಯುತ್ತಮ ನಟಿ ಹಾಗೂ ಗಿರಿಧರನ ಪಾತ್ರ ವಹಿಸಿದ್ದ ಶ್ರೀ ರಾಜೇಶ್ ಕುತ್ತರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯಿಂದ ಸನ್ಮಾನಿಸಲಾಯಿತು.
ಉಳಿದ ಪಾತ್ರವರ್ಗದಲ್ಲಿ ಕಿರಣ್ ಶೆಟ್ಟಿ, ದಿನೇಶ್ ಕೊರೆಯಾ, ಸಂತೋಷ್ ಪೂಜಾರಿ, ಆಲ್ವಿನ್ ಪಿಂಟೋ, ಚಾರ್ಲಿ ಕೊಂಬಳಕೆ, ಸಂದೀಪ್ ಬಿ.ಕೆ ., ಹರೀಶ್ ಕಾಮತ್, ನಿತಿನ್ ಕುಮಾರ್, ರಾಜೆಶ್ ಕುತ್ತರ್, ಶ್ರೀಮತಿ ಶಶಿ ಶೆಟ್ಟಿ, ಶ್ರೀಮತಿ ಜೆನೆಟ್ ಸೀಕ್ವೇರಾ, ಶ್ರೀಮತಿ ಸಿಂಥಿಯಾ ಪಿಂಟೋ, ಶ್ರೀಮತಿ ಪ್ರತಿಮಾ ಶೆಟ್ಟಿ, ಹಾಗೂ ಸಹಕಲಾವಿದರಾಗಿ ವಿವೆಟ್, ಸೆಲೆಯಿನ್, ಕುಮಾರಿ ಪ್ರಶೋಭಿತಾ ಅಂಬಲ್ತೆರೆ, ಹಾಗೂ ಉಷಾ ವಿಶ್ವನಾಥ್ ಅವರು ನಾಟಕ ಸುಗಮವಾಗಿ ನಡೆಯಲು ತಮ್ಮ ಕಾಣಿಕೆ ನೀಡಿದರು.
ನಾಟಕದ ಯಶಸ್ಸಿನಲ್ಲಿ ಪರೋಕ್ಷವಾಗಿ ಕಾರಣರಾಗಲು ಕಿಶೋರ್ ಗಟ್ಟಿ ಪ್ರಸಾದನ, ಸತೀಷ್ ಶೆಟ್ಟಿ ರಂಗಸಜ್ಜಿಕೆ ಹಾಗೂ ಇನ್ನೂ ಹಲವರು ಕಾರಣರಾಗಿದ್ದು ಎಲ್ಲರನ್ನೂ ಶ್ರೀ ಅಂಬಲ್ತೆರೆಯವರು ಹಾರ್ದಿಕವಾಗಿ ಅಭಿನಂದಿಸಿದರು.
ಎಲ್ಲಾ ನಟನಟಿಯರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಮುನ್ನೂರು ಜನರ ಸಾಮರ್ಥ್ಯದ ಸಭಾಂಗಣದ ಎಲ್ಲಾ ಆಸನಗಳು ಭರ್ತಿಯಾಗಿ ಇನ್ನೂ ಹಲವರು ನಿಂತೇ ಇಡಿಯ ನಾಟಕವನ್ನು ವೀಕ್ಷಿದರು.
ಚಿತ್ರಗಳು: ಸುಜಯ್ ಬೆಂದೂರ್
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-18
|
|
| Madhusudan, Sharjah | 2008-10-18 | | Congratulations to Mr. Ambaltare for giving encouragement to local artists. Surprised to note in the report of Gulf Kannadiga that the name of artist Mr. Sampath Shetty (Karunakara role) is not mentioned. The crowd participation till the end of the drama is ample proof of its success in all departments.
|
| Shashikant Shetty, Udupi-Shirva | 2008-10-18 | | Regarding vote of thanks, Mr. Prabhakar Ambalthare thanked each ... |
| Feroz , Yermal | 2008-10-18 | | Well done guys...it was a great effort by all of the them...but wat i noticed is that you have not mentioned the name of character played by karunaker i.e sampath shetty anywhere who has also done a very job whereas you have mentioned all the artist names.Well done Sampath keep the good work going on..... |
| Riyaz Ahmed, Bantwal | 2008-10-18 | | Good effort by local artists for tulu drama. All the best for future programs by amblatere vision |
|