ಭಾರತ್ ಬ್ಯಾಂಕ್ನ ನೂತನ ಕಾರ್ಯಾಧ್ಯಕ್ಷ-ವಾಸುದೇವ ಕೋಟ್ಯಾನ್ ಉಪಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಸಾಲಿಯಾನ್ |
ಪ್ರಕಟಿಸಿದ ದಿನಾಂಕ : 2008-10-17
{ಚಿತ್ರ ವರದಿ: ರೊನ್ಸ್ ಬಂಟ್ವಾಳ್}
ರಾಷ್ಟ್ರದ ಪ್ರತಿಷ್ಠಿತ ಜಾತೀಯ ಸಮೂದಾಯದಲ್ಲೊಂದಾದ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ರಾಜ್ಯ ಮಟ್ಟದ ಉತ್ಕೃಷ್ಟ ಸಹಕಾರಿ ಸಂಸ್ಥೆಯಾಗಿ ಪುರಸ್ಕೃತಗೊಂಡು ನೂರಾರು ಪ್ರಶಸ್ತಿಗಳನ್ನು ಪಡೆದ ತುಳು-ಕನ್ನಡಿಗರ ಭಾರತ್ ಕೋ. ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 2008- -2013ರ ಸಾಲಿನ ನೂತನ ಕಾರ್ಯಾಧ್ಯಕ್ಷರಾಗಿ ವಾಸುದೇವ ಆರ್. ಕೋಟ್ಯಾನ್ ಇವರು ಸರ್ವಾನುಮತದಿಂದ ಆಯ್ಕೆಗೊಂಡರೆ, ಉಪಕಾರ್ಯಾಧ್ಯಕ್ಷೆಯಾಗಿ ನ್ಯಾ| ರೋಹಿಣಿ ಜೆ. ಸಾಲಿಯಾನ್ ಇವರು ಐಕ್ಯಮತದಿಂದ ಆರಿಸಲ್ಪಟ್ಟರು.
ಇಂದಿಲ್ಲಿ ಬುಧವಾರ ಸಂಜೆ ಗೋರೆಗಾಂವ್ ಪೂರ್ವದ ಸೊನಾವಾಲಾ ರಸ್ತೆಂiiಲ್ಲಿನ ಸಾಮಂತ್ ಎಸ್ಟೇಟ್ನಲ್ಲಿರುವ ಬ್ಯಾಂಕ್ನ ಕೇಂದ್ರ ಕಚೇರಿ ಮಾರುತಿಗಿರಿಯಲ್ಲಿ ನಡೆದ ಬ್ಯಾಂಕ್ನ ನಿರ್ದೇಶಕ ಮಂಡಳಿಯ ಸಭೆಯ ಅಧ್ಯಕ್ಷತೆ ಚುನಾವಣಾಧಿಕಾರಿ ಎ. ಕೆ ಚವ್ಹಾಣ್ ವಹಿಸಿದ್ದು, ರಾಜ್ಯ ಸಹಕಾರಿ ಸೊಸಾಯ್ಟಿಗಳ ಕ್ರಮಾನುಸಾರ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ವೇದಿಕೆಯಲ್ಲಿ ಸಹಾಯಯಕ ಚುನಾವಣಾಧಿಕಾರಿಗಳಾದ ಪ್ರೊ| ಶೇಖರ್ ಪೂಜಾರಿ ಹಾಗೂ ಭಾರತ್ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಣಾಧಿ ಕಾರಿ ಜೆ.ಸಿ.ಪೂಜಾರಿ ಹಾಜರಿದ್ದು ಈ ನೇಮಕಾತಿಯನ್ನು ಪ್ರಕಟಿಸಿದರು.
ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ, ಬ್ಯಾಂಕ್ನ ನಿಕಟಪೂರ್ವ ಚೇರ್ಮೆನ್ ಜಯ ಸಿ.ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದು, ನೂತನ ಕಾರ್ಯಾಧ್ಯಕ್ಷ ವಾಸುದೇವ ಕೋಟ್ಯಾನ್ ಮತ್ತು ಉಪಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲಿಯಾನ್ ಇವರನ್ನು ಪುಷ್ಫಗುಪ್ಚವನ್ನಿತ್ತು ಶುಭ ಹಾರೈಸಿದರು.
ಹಾಗೂ ಎಲ್ಲಾ ನಿರ್ದೇಶಕರು ಮತ್ತು ಬ್ಯಾಂಕ್ ನೌಕರ ವೃಂದದ (ದ. ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ರಿ.) ಅಧ್ಯಕ್ಷ ರಮೇಶ್ ಟಿ. ಪೂಜಾರಿ ಮತ್ತು ಜತೆ ಕೋಶಾಧಿಕಾರಿ ದಿನೇಶ್ ಕೆ.ಸನೀಲ್ ಉಪಸ್ಥಿತರಿದ್ದು ಅಭಿನಂದಿಸಿದರು.
ಬ್ಯಾಂಕ್ನ ನಿರ್ದೇಶಕರು:
ಜಯ ಸಿ. ಸುವರ್ಣ (ಸುವರ್ಣ ಜಯ ಚಂದು), ಎಂ. ಬಿ.ಕುಕ್ಯಾನ್ (ಕುಕ್ಯಾನ್ ಮಹಾಬಲ ಬೂಬ),ಎಲ್. ವಿ. ಅವಿನ್ (ಅವಿನ್ ಲಿಂಗಪ್ಪ ವೆಂಕಪ್ಪ), ರಾಜಾ ವಿ. ಸಾಲ್ಯಾನ್ (ಸಾಲ್ಯಾನ್ ರಾಜಾ ವೊಡಿ ಪೂಜಾರಿ), ಜ್ಯೋತಿ ಕೆ. ಸುವರ್ಣ (ಸುವರ್ಣ ಜ್ಯೋತಿ ಕೃಷ್ಣ), ವೈ. ನಾಗೇಶ್ (ಯೆನಗುಡ್ಡೆ ನಾಗೇಶ್), ಶೇಖರ್ ಎಂ. ಕೋಟ್ಯಾನ್ (ಕೋಟ್ಯಾನ್ ಶೇಖರ್ ಮುತ್ತಯ್ಯ), ಶ್ರೀಮತಿ ಪುಪ್ಪಲತಾ ಎಸ್.ಸಾಲ್ಯಾನ್ (ಶ್ರೀಮತಿ ಸಾಲ್ಯಾನ್ ಪುಷ್ಫಲತಾ ನರ್ಸಪ್ಪ), ಮೋಹನ್ ಜಿ. ಪೂಜಾರಿ (ಪೂಜಾರಿ ಮೋಹನ್ ಗಿರಿಯ), ಚಂದ್ರಶೇಖರ್ ಎಸ್. ಪೂಜಾರಿ (ಪೂಜಾರಿ ಚಂದ್ರಶೇಖರ್ ಸೋಮಪ್ಪ), ಶಂಕರ್ ಡಿ. ಪೂಜಾರಿ (ಪೂಜಾರಿ ಶಂಕರ್ ದೇಜು), ಜಗನ್ನಾಥ್ ವಿ. ಕೋಟ್ಯಾನ್ (ಕೋಟ್ಯಾನ್ ಜಗನ್ನಾಥ್ ವೆಂಕಪ್ಪ), ಎಂ. ಬಿ. ಸನೀಲ್ (ಸನೀಲ್ ಮಹಾಬಲ ಬಾಡು), ರೋಹಿತ್ ಎಂ. ಸುವರ್ಣ (ಸುವರ್ಣ ರೋಹಿತಾಕ್ಷ ಮೋಹನ್ಚಂದ್ರ), ಶ್ರೀಧರ್ ಕೆ. ಕೋಟ್ಯಾನ್ (ಕೋಟ್ಯಾನ್ ಶ್ರೀಧರ ಕಾಂತಪ್ಪ), ಎನ್. ನಿತ್ಯಾನಂದ್ (ಎನ್. ನಿತ್ಯಾನಂದ್), ಭಾಸ್ಕರ್ ವಿ. ಸಾಲ್ಯಾನ್ (ಸಾಲ್ಯಾನ್ ಬಾಸ್ಕರ್ ಮುದ್ದು) ಹಾಗೂ ರತನ್ ಯು. ಸನೀಲ್ (ಸನಿಲ್ ರತನ್ ಉಮೇಶ್) ನೇಮಕಗೊಂಡಿರುವರು.
ವಾಸುದೇವ ಆರ್. ಕೋಟ್ಯಾನ್ : ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಹೆಜಮಾಡಿ ಇಲ್ಲಿಯವರಾದ ವಾಸುದೇವ ಆರ್. ಕೋಟ್ಯಾನ್ ಇವರು ಮೂಲ್ಕಿ ವಿಜಯ ಕಾಲೇಜಿನಲ್ಲಿ ಪದವಿಧರರಾಗಿ ಮುಂಬಯಿಯಲ್ಲಿ ಕಾನೂನು ಶಿಕ್ಷಣ ಅಭ್ಯಾಸಿಸಿ ಸದ್ಯ ಕೋಟ್ಯಾನ್ ಆಂಡ್ ಅಸೋಸಿಯೇಟ್ಸ್ ಎಂಬ ಹೆಸರಲ್ಲಿ ಟ್ಯಾಕ್ಸ್ ಕನ್ಸಲ್ಟೆಂಟ್ ನಡೆಸುತ್ತಿದ್ದಾರೆ.
ಶ್ರಿಯುತರು 1991 ರಿಂದ ಭಾರತ್ ಬ್ಯಾಂಕಿನ ಸತತ ನಿರ್ದೇಶಕರಾಗಿದ್ದು, ಕಳೆದ ನಿರಂತರ ಎಂಟು ವರ್ಷಗಳಿಂದ ಉಪ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಪ್ರಧಾನ ಕೋಶಾಧಿಕಾರಿ, ಪ್ರಸ್ತುತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ ಬದುಕಿಗೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡಿರುವ ಕೋಟ್ಯಾನ್ ಜನಪರ ಕಾಳಜಿಯ ಮಾನವೀಯ ಸಹೃದಯತೆವುಳ್ಳವರು. ಮಹಾನಗರದ ಸುಪ್ರಸಿದ್ಧ ಆಸ್ಪತ್ರೆಗಳ ನೂರಾರು ತಜ್ಞಾರುಗಳ ಪರಿಚಯ ಹೊಂದಿರುವ ಇವರು ಬಡ ಜನತೆಗೆ ರಿಯಾತಿ ನೀಡಿಸಿ ದುಬಾರಿ ವೆಚ್ಚಗಳಲ್ಲಿ ಅತೀ ರಿಯಾಯಿತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಕೊಡುವ ಕೈಂಕಾರ್ಯದಲ್ಲಿ ಸದಾ ನಿರತರಾಗಿದ್ದಾರೆ.
ವಾಸುದೇವರು ಹೆಜಮಾಡಿ ಬಿಲ್ಲವರ ಸಂಘ ನಿಯೋಜಿತ ಗುರು ಮಂದಿರ ಮತ್ತು ಬೈದರ್ಕಳ ಗರಡಿ ಇದರ ಜಿರ್ಣೋದ್ಧಾರದ ಕಾರ್ಯದಲ್ಲಿ ಸಕ್ರೀಯವಾಗಿ ಶ್ರಮಿಸಿದ್ದಾರೆ. ಬಡ-ಮುಗ್ಧ ವಿದ್ಯಾರ್ಥಿಗಳ ಶೈಕ್ಷಣಿಕ ಸವಲತ್ತಿಗಾಗಿ ಇವರ ನೆರವು ಅನನ್ಯ. ಇವರು ಜೀವನದಲ್ಲಿ ವಿಶಿಷ್ಟ ರೀತಿಯ ಶಿಸ್ತನ್ನು ಮೈ ಗೂಡಿಸಿ ಕೊಂಡಿದ್ದು, ತೆರೆಯ ಮರೆಯಲ್ಲೇ ಇದ್ದು ಸೇವಾ ನಿರತರಾಗಿದ್ದಾರೆ.
ನ್ಯಾ| ರೋಹಿಣಿ ಜೆ. ಸಾಲಿಯಾನ್ : ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬೋಳೂರು ಇಲ್ಲಿಯವರಾಗಿದ್ದಾರೆ.
ಮುಂಬಯಿಯಲ್ಲಿ ವಕೀಲ ವೃತ್ತಿಯಲ್ಲಿ ನಿರತರಾದ ಇವರು ವಿಶ್ವ ಪ್ರಸಿದ್ಧ ಮಹಿಳೆಯಲ್ಲೋರ್ವರೆಣಿಸಿದ್ದಾರೆ. ಸದ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವಾ ನಿರತರಾಗಿದ್ದಾರೆ. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾದಾರರಾಗಿರುವರು.
ವರದಿಯ ವಿವರಗಳು |
 |
ಕೃಪೆ : ರೊನ್ಸ್ ಬಂಟ್ವಾಳ್ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-17
|
|
|