ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಕ್ಷೀರ ಮಥನ |
ಪ್ರಕಟಿಸಿದ ದಿನಾಂಕ : 2008-10-16
ದೇವಿ ಭಾಗವತ ಹಾಗೂ ವಿಷ್ಣು ಪುರಾಣದಿಂದ ಅಲಂಕೃತ ಸುವರ್ಣ-ಭೂಮಿ ವಿಮಾನ ನಿಲ್ದಾಣ
ಬ್ಯಾಂಕಾಕ್, ಥಾಯ್ಲೆಂಡ್ ದೇಶದ ರಾಜಧಾನಿ. ವಿಮಾನ ನಿಲ್ದಾಣದ ಹೆಸರು ಸುವರ್ಣ ಭೂಮಿ. ಹೆಸರಿಗೆ ತಕ್ಕಂತೆ ಸುವರ್ಣ ವರ್ಣದಲ್ಲಿ ರಂಜಿತ ಒಳಾಂಗಣ. ಸುತ್ತಮುತ್ತ ಹಲವು ಧರ್ಮಗಳಿಂದ ಸುತ್ತುವರಿದಿದ್ದರೂ ಸುವರ್ಣ ಭೂಮಿಯೊಳಕ್ಕೆ ಹಿಂದೂ ಧರ್ಮದ ಚೇತನ. ದೇವಿ ಭಾಗವತ ಹಾಗೂ ವಿಷ್ಣು ಪುರಾಣಗಳ ಸಾಕ್ಷಾತ್ ದರ್ಶನ.

ಥಾಯ್ಲೆಂಡಿನ ನೆರೆಹೊರೆಯ ರಾಷ್ಟಗಳಾದ ಮಲೇಶಿಯಾ, ಇಂಡೋನೇಶಿಯಾ, ಕಾಂಬೋಡಿಯಾ ಮೊದಲಾದವುಗಳಲ್ಲಿ ಹಿಂದೂ ಧರ್ಮದ ಹೊರತಾಗಿ ಹಲವು ಧರ್ಮಗಳು ಆಚರಣೆಯಲ್ಲಿದ್ದರೂ ಎಲ್ಲರೂ ಹಿಂದೂ ಧರ್ಮವನ್ನು ಸಮಾನವಾಗಿ ಗೌರವಿಸುವುದು ರಾಷ್ಟ್ರೀಯ ಭಾವೈಕ್ಯತೆಗೆ ನಾಂದಿಯಾಗಿದೆ.

ಸಮುದ್ರಮಥನದ ಸುಂದರ ಚಿತ್ರಣಗಳನ್ನು ಅಧ್ಬುತ ಕಲಾವಂತಿಕೆ ಯೊಂದಿಗೆ ಪ್ರದರ್ಶಿಸಲಾಗಿದೆ. ಬ್ಯಾಂಕಾಕ್ ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ನೀಡುವ ಸೇತುವೆಗೆ ರಾಮ ಹೈವೇ (ಹೆದ್ದಾರಿ) ಎಂದು ನಾಮಕರಣ ಮಾಡಲಾಗಿದೆ. ಸುಂದರ ಕಲೆ ಪ್ರಯಾಣವನ್ನು ಹಸಿರಾಗಿರಿಸುತ್ತದೆ.

ವರದಿಯ ವಿವರಗಳು |
 |
ಕೃಪೆ : ಏರ್ ಪೋರ್ಟ್ ಸ್ವರ್ಣಭೂಮಿ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-16
|
|
| Santosh, Udupi / Bahrain | 2008-10-16 | | Hindus, though a minority in Thailand, get a lot of affection |
|