ದುಬೈ: ಯು.ಎಇ. ಅಮ್ಚಿಗೆಲೆ ಸಮಾಜ ಆಚರಿಸಲಿರುವ ಸತ್ಯನಾರಾಯಣ ಪೂಜೆ 17ನೇ ತಾರೀಖಿನಂದು |
ಪ್ರಕಟಿಸಿದ ದಿನಾಂಕ : 2008-10-14
ಪೂಜೆ, ಭಜನೆ, ಮಹಾ ಆರತಿ, ಮಹಾಪ್ರಸಾದ ವಿತರಣೆ
ದುಬೈ, ಅಕ್ಟೋಬರ್ 14: ನಗರದ ಕರಾಮಾ ಸೆಂಟರ್ ಆಡಿಟೋರಿಯಂನ ಕಟ್ಟಡದ ಅಂತಿಮ ಮಹಡಿಯಲ್ಲಿರುವ ಸಭಾಂಗಣದಲ್ಲಿ ಅಕ್ಟೋಬರ್ 17 ನೇ ಶುಕ್ರವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲು ಯು.ಎಇ. ಅಮ್ಚೆಗೆಲೆ ಸಮಾಜ್ ಸಕಲ ಸಿದ್ಧತೆಗಳನ್ನು ನಡೆಸಿದೆ.
ಕಾರ್ಯಕ್ರಮದ ವಿವರಗಳು ಈ ಕೆಳಗಿನಂತಿವೆ:
ಬೆಳಿಗ್ಗೆ 9:೦೦ ರಿಂದ 11:೦೦ ಪೂಜೆ 11:೦೦ ರಿಂದ 12:3೦ ಸತ್ಯನಾರಾಯಣ ಪೂಜೆಯ ಅಂಗವಾಗಿ ವಿಶೇಷ ಭಜನೆ 1:೦೦: ಮಹಾ ಆರತಿ 1:30: ಮಹಾ ಪ್ರಸಾದ ವಿತರಣೆ
17 ನೇ ತಾರೀಖು ಸಂಕ್ರಾಂತಿಯ ದಿವಸವೂ ಆಗಿದೆ. ಈ ದಿನ ಮಧ್ಯಾಹ್ನದ ಭೋಜನದ ಬದಲು ಫಲಹಾರವನ್ನು ವಿತರಿಸಲಾಗುವುದು. ಅಲ್ಲದೇ ಅಮ್ಚಿಗೆಲೆ ಸಮಾಜದ ಬಾಂಧವರಲ್ಲಿ ಸತ್ಯನಾರಾಯಣ ದೇವರಿಗೆ ಪ್ರತ್ಯೇಕವಾಗಿ ಪ್ರಣಾಮ ಸಲ್ಲಿಸುವವರಿಗೆ -ಸಂಕಲ್ಪ-ದ ವ್ಯವಸ್ಥೆ ಮಾಡಲಾಗುವುದು.
ಪೂಜೆಯ ದಿನದಂದು -ಸಂಕಲ್ಪ-ನೆರವೇರಿಸಲು ನೋಂದಾಯಿಸಿ ಕೊಂಡಿರುವ ಸದಸ್ಯರು ಬೆಳಿಗ್ಗೆ 8:30ಕ್ಕೆ ಮೊದಲು ಸ್ಥಳದಲ್ಲಿ ಹಾಜರಿರ ಬೇಕೆಂದು ಕೋರಲಾಗಿದೆ.
ಈ ವಿಶೇಷ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾಜದ ಬಾಂಧವರೊಂದಿಗೆ ಜೊತೆಯಾಗಿ ಕಳೆಯುವ ಹಾಗೂ ದೇವರ ಅನುಗ್ರಹಕ್ಕೆ ಪಾತ್ರರಾಗುವ ಉತ್ತಮ ಅವಕಾಶವನ್ನು ಸದುಪಯೋಗಿಸಿ ಕೊಳ್ಳುವಂತೆ ಯು.ಎಇ. ಅಮ್ಚಿಗೆಲೆ ಸಮಾಜ್ ತನ್ನೆಲ್ಲಾ ಸದಸ್ಯರಿಗೆ ಕರೆ ನೀಡಿದೆ.
ಹೆಚ್ಚಿನ ವಿವರ ಹಾಗೂ ನೋಂದಾವಣೆಗಾಗಿ ಈ ಕೆಳಗಿನವರನ್ನು ಸಂಪರ್ಕಿಸಲು ಕೋರಲಾಗಿದೆ.
ಸುದರ್ಶನ ಹೆಗ್ಡೆ- 050-5531192 ಅನಿಲ್ ಕಾಮತ್ -050-5441754 ಅಜಿತ್ ನಾಯಕ್ -050-5642801 ಗೋಪಾಲ್ ಪ್ರಭು -050-4731745
ಯು.ಎ.ಇ. ಅಮ್ಚಿಗೆಲೆ ಸಮಾಜ್ ಪ್ರಕಟಣೆ
ವರದಿಯ ವಿವರಗಳು |
 |
ಕೃಪೆ : ಯು.ಎ.ಇ. ಅಮ್ಚಿಗೆಲೆ ಸಮಾಜ್ ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-14
|
|
|