ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕೇರಳದ ಪ್ರೀತಿಯ ಸಿಸ್ಟರ್ ಈಗ ಸಂತ ಅಲ್ಫೋನ್ಸಾ

{Pope Benedict XVI arrives for the canonisation of Sister Alphonsa in Vatican City. (AP) }

ಕೇರಳದ ಕೋಟ್ಟಯಂನವರಾದ ಸಿಸ್ಟರ್ ಅಲ್ಫೋನ್ಸಾ ಅವರನ್ನು ಭಾನುವಾರ ವ್ಯಾಟಿಕನ್‌ನಲ್ಲಿ ಪೋಪ್ ಅವರು ಅಧಿಕೃತವಾಗಿ ಸಂತ ಪದವಿ ಘೋಷಿಸುವ ಮೂಲಕ ಇದು ಕೇರಳ ಮತ್ತು ಭಾರತದಲ್ಲಿರುವ ಕ್ರೈಸ್ತ ಸಮುದಾಯಕ್ಕೆ ಅವಿಸ್ಮರಣೀಯ ದಿನವಾದಂತಾಗಿದೆ.

ಪೋಪ್ ಬೆನೆಡಿಕ್ಟ್- XVI ಅವರು ರೋಮ್‌ನ ಸೈಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಆಕೆಗೆ ಸಂತ ಪದವಿಯನ್ನು ಅಧಿಕೃತವಾಗಿ ಘೋಷಿಸಿದ್ದು, ಭಾರತದ ಮೊದಲ ಮಹಿಳಾ ಸಂತರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದೇ ಸಂದರ್ಭ ಭಾರತ ಸರಕಾರವು ಸಂತ ಅಲ್ಫೋನ್ಸಾ ನೆನಪಿಗೆ ವಿಶೇಷ ನಾಣ್ಯವನ್ನೂ ಹೊರತರಲಿದೆ.

ಸಿಸ್ಟರ್ ಅಲ್ಫೋನ್ಸಾ ಈಗ ಸಂತ ಅಲ್ಫೋನ್ಸಾ ಆಗುತ್ತಿದ್ದಾರೆ. ಯೇಸುವಿನ ನಿಜ ಬೆಂಬಲಿಗರಾದ ಈ ಸಿಸ್ಟರ್, ಪ್ರೀತಿಯ ಬೆಳಕಾಗಿ ತಮ್ಮ ಜೀವನ ಸವೆಸಿದವರು. ಆಕೆಯನ್ನು ಪ್ರೀತಿಯ ದೀಪಸ್ತಂಭವೆಂದೇ ಕರೆಯಬಹುದು. ಶುದ್ಧ ಹೃದಯದ ನನ್ ದೇವರನ್ನು ಒಪ್ಪಿಕೊಂಡವರು,ಅಪ್ಪಿಕೊಂಡವರು.

ಅವರ ಜೀವನ ಅತ್ಯಂತ ಕಿರು ಅವಧಿಯದಾದರೂ ಆಕೆ ಮಾಡಿದ್ದು ಮಹಾನ್ ಸಾಧನೆ. 1910ರ ಆಗಸ್ಟ್ 19ರಂದು ಕೇರಳದ ಕುಡಮಲೂರ್ ಪ್ರದೇಶದಲ್ಲಿ ಜೋಸೆಫ್ ಮತ್ತು ಮೇರಿ ದಂಪತಿಯ ನಾಲ್ಕನೇ ಮಗುವಾಗಿ ಜನಿಸಿದ ಅಲ್ಫೋನ್ಸಾ ಅವರ ಪ್ರೀತಿಯ ಹೆಸರು ಅಣ್ಣಾಕುಟ್ಟಿ.

ಮೂರೂವರೆ ತಿಂಗಳ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡ ಅಣ್ಣಾಕುಟ್ಟಿ, ತಮ್ಮ ಸೋದರತ್ತೆ ಅಣ್ಣಮ್ಮ ಮುರಿಕ್ಕನ್ ಅವರ ಆಶ್ರಯದಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಸಂತ ತೆರೇಸಾ ಅವರ ದೂರದೃಷ್ಟಿಯಿಂದ ಆಕರ್ಷಿತರಾದ ಅವರು, ನನ್ ಆಗುವತ್ತ ಮನ ಮಾಡಿದರು ಹಾಗೂ ಎಲ್ಲಾ ವೈವಾಹಿಕ ಪ್ರಸ್ತಾಪಗಳನ್ನು ತಿರಸ್ಕರಿಸಿದರು.

ಆದರೆ ಕುಟುಂಬಿಕರು ಮದುವೆಗೆ ಒಪ್ಪುವಂತೆ ಬಲವಂತ ಮಾಡಿದಾಗ, ಹಠ ಹಿಡಿದ ಅಣ್ಣಾಕುಟ್ಟಿ, ಸುಡುತ್ತಿದ್ದ ಹೊಟ್ಟಿನ ರಾಶಿಯಲ್ಲಿ ಕಾಲಿರಿಸಿ ಸುಟ್ಟುಕೊಂಡಿದ್ದರು. ಇದರಿಂದಾಗಿ ಕುಟುಂಬಿಕರು ಆಕೆಗೆ ಕಾನ್ವೆಂಟ್ ಸೇರಲು ಅನುಮತಿ ನೀಡುವಂತಾಗಿತ್ತು.

1927ರಲ್ಲಿ ಪೆಂತಕೋಸ್ಟ್ ಹಬ್ಬದಂದು, ಅವರನ್ನು ಭರನಗನಂ ಎಂಬಲ್ಲಿನ ಕ್ಲಾರಿಸ್ಟ್ ಕಾನ್ವೆಂಟ್‌ಗೆ ಸೇರಿಸಲಾಯಿತು. 1928ರ ಆಗಸ್ಟ್ 2ರಂದು ಅವರಿಗೆ ಅಲ್ಫೋನ್ಸಾ ಎಂದು ನಾಮಕರಣ ಮಾಡಲಾಯಿತು.

ಅವರದೊಂದು ಅತ್ಯಂತ ವಿಶಿಷ್ಟ ವ್ಯಕ್ತಿತ್ವ. ಪ್ರಪಂಚದ ಕಣ್ಣಿಗೆ ಆಕೆ ಮಹತ್ಸಾಧನೆಯನ್ನೇನೂ ಮಾಡಲಿಲ್ಲ. ಎಲ್ಲವನ್ನೂ ಅವರು ವಿಶಾಲ ದೃಷ್ಟಿಕೋನದಿಂದ ನೋಡುತ್ತಿದ್ದರು. ದೈವೀಕ ಪ್ರಜ್ಞೆಯು ಆಕೆಯ ಹೃದಯದಲ್ಲಿ ಅರಳುತ್ತಿತ್ತು ಮತ್ತು ಅದುವೇ ಈಗ ಆಕೆಗೆ ಸಂತ ಪದವಿಯನ್ನೂ ತಂದು ಕೊಟ್ಟಿದೆ.

ಭೂಮಿಯ ಮೇಲೆ ಆಕೆ ಬದುಕಿದ್ದು ಕೇವಲ 36 ವರ್ಷ ಮಾತ್ರ. 1946ರ ಜುಲೈ 28ರಂದು ಯೇಸು ಪಾದ ಸೇರಿದ ಆಕೆಯ ಜೀವನದ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ.

ಆಕೆಯ ಸಮಾಧಿ ತಾಣವನ್ನು ಸಂದರ್ಶಿಸಿದ ಜನರಿಗೆ ಅದೆಷ್ಟೋ ಪವಾಡಗಳ ಅನುಭವವಾಗಿದೆ. ಅಲ್ಲಿಗೆ ಬಂದ ರೋಗಿಗಳು ಪವಾಡ ಸದೃಶವಾಗಿ ಗುಣಮುಖರಾಗಿದ್ದಾರೆ. ಅದರಲ್ಲಿ ಅತ್ಯಂತ ಉಲ್ಲೇಖಾರ್ಹವಾದುದು ಮತ್ತು ಆಕೆಯ ಸಂತ ಪದವಿಗೆ ಅಧಿಕೃತವಾಗಿ ಪರಿಗಣಿಸಲ್ಪಟ್ಟ ಪವಾಡ ಕಥನ ಜಿನಿಲ್ ಎಂಬ ಮಗುವಿನದು.

ಕೋಟ್ಟಯಂ ಜಿಲ್ಲೆಯ ಶಾಜಿ ಮತ್ತು ಲಿಸ್ಸಿ ಒಳುತೊಟ್ಟಿ ಮುನ್ನಾರಪಾರ ಎಂಬವರಿಗೆ ಜನಿಸಿದ ಜಿನಿಲ್ ಎಂಬ ಮಗು ಹುಟ್ಟಿನಿಂದಲೇ ವಕ್ರಪಾದ ಹೊಂದಿತ್ತು. ಏಟ್ಟುಮಾನೂರಿನ ವಿಮಲಾ ಆಸ್ಪತ್ರೆಯಲ್ಲಿ ಈ ಸೊಟ್ಟಗಿನ ಕಾಲುಗಳುಳ್ಳ ಮಗು ಜನಿಸಿತ್ತು. ಹೆತ್ತವರು ತೀವ್ರವಾಗಿ ನೊಂದುಕೊಂಡಿದ್ದರು.

ಆಸ್ಪತ್ರೆಗೆ ಮೊರೆ ಹೋದರವರು. ವೈದ್ಯರು ಚಿಕಿತ್ಸೆ ಆರಂಭಿಸಿದರು. ಮಗುವಿನ ಎರಡೂ ಕಾಲುಗಳಿಗೆ ಪ್ಲಾಸ್ಟರ್ ಹಾಕಲಾಯಿತು. ಮಗುವಿಗೆ ಇದು ತೀರಾ ಕಿರಿಕಿರಿಯಾಗುತ್ತಿತ್ತು ಮತ್ತು ಅಳು ನಿಲ್ಲಿಸಲೇ ಇಲ್ಲ. ಹೆತ್ತವರು ಮತ್ತೆ ವೈದ್ಯರಲ್ಲಿ ಕಷ್ಟ ತೋಡಿಕೊಂಡರು.

ಇಂತಹ ಕೇಸುಗಳಲ್ಲಿ ಇದು ಬಿಟ್ಟು ಬೇರೇನೂ ಮಾಡುವುದು ಸಾಧ್ಯವಿಲ್ಲ ಎಂಬುದು ವೈದ್ಯರ ಹೇಳಿಕೆ. ಈ ಸಂದರ್ಭ ಸಿಸ್ಟರ್ ಅಲ್ಫೋನ್ಸಾ ಮತ್ತು ಆಕೆಯ ಪವಾಡ ಶಕ್ತಿಯ ಬಗ್ಗೆ ಲಿಸ್ಸಿ ದಂಪತಿ ಕೇಳಿದ್ದರು. ಅವರು ಆ ಮಗುವನ್ನು ಸಿಸ್ಟರ್ ಅಲ್ಫೋನ್ಸಾ ಅವರ ಸಮಾಧಿ ಬಳಿ ತೆಗೆದುಕೊಂಡು ಹೋದರು. ಮಗುವನ್ನು ಸಮಾಧಿ ಮೇಲಿರಿಸಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.

ಅದೇ ದಿನ, ಸಂಜೆಯ ಪ್ರೇಯರ್ ವೇಳೆಗೆ, ಜಿನಿಲ್ ಕುಟುಂಬಕ್ಕೆ ಅಚ್ಚರಿ ಕಾದಿತ್ತು. ಈ ಮಗು ತನ್ನ ಕಾಲ ಮೇಲೆ ತಾನೇ ನಿಂತು ನಡೆಯತೊಡಗಿತ್ತು. ಇದನ್ನು ನೋಡಿದ ಹೆತ್ತವರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಇಂಥ ಹತ್ತು ಹಲವು ಪವಾಡಗಳಿಗೆ ಕಾರಣೀಕರ್ತರಾಗಿದ್ದ ಸಿಸ್ಟರ್ ಈಗ ಸಂತ ಪದವಿ ಪಡೆದಿರುವುದು ದೇಶದ ಕ್ರೈಸ್ತ ಸಮುದಾಯಕ್ಕೆ ಸಂಭ್ರಮೋಲ್ಲಾಸ ತಂದಿರುವ ಸಂಗತಿಯಾಗಿದೆ. 

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಟಿ.ಶಶಿಮೋಹನ್ | ವೆಬ್ ದುನಿಯ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-12

ಇತರ ಸಂಭಂದಪಟ್ಟ ವರದಿಗಳು
»
»ಸಂತ ಆಲ್ಛೋನ್ಸಾ ಹೆಸರಲ್ಲಿ ನಾಣ್ಯ
»ಅ.12 ರಂದು ಸಿಸ್ಟರ್‌ ಅಲ್ಫೋನ್ಸಾರಿಗೆ ಪೋಪ್‌ರಿಂದ ಸಂತ ಪದವಿ ಪ್ರದಾನ
»

ಪ್ರತಿಸ್ಪಂದನ
panchajanya, kuwait
2008-10-13
hindhusthanadha hirimege matthondhu gari......
vincent bennis, bantwal now in israel
2008-10-12
This is a great news for all indians
shakeer kudregala, kudregala,mudigere
2008-10-12
ಇದು ಭಾರತದ ಕ್ರೈಸ್ತರಿಗೆ ಮಾತ್ರವಲ್ಲ ಎಲ್ಲ ಭಾರತೀಯರು ಹೆಮ್ಮೆ ಪಡುವಂತ ವಿಷಯ.ಪವಾಡಗಳ ಗಣಿಯಾಗಿರುವ ಸಂತ ಸಂತ ಅಲ್ಫೋನ್ಸಾ ರವರ ಆಶೀರ್ವಾದ ಎಲ್ಲರಿಗೂ ಸಿಗಲಿ.
Santosh, Udupi / Bahrain
2008-10-12
This is great news for Indians. I think such nuns seems to be a thing of past - atleast in Mangalore where we have new set of nuns defying section 144 and stoning the government officers. They must take take a look at the life of St.Alfonsa and Mother Theresa and learn from them.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಗೋಕರ್ಣದ ಅಶೋಕೆಗೆ ರಾಮಚಂದ್ರಾಪುರ ಮಠ?
»ವಿಶ್ವದ ಅತ್ಯ೦ತ ಕಿರಿಯ ನಿರ್ದೇಶಕ ಮಾಸ್ಟರ್ ಕಿಶನ್‌ಗೆ ಪ್ರಶಸ್ತಿ
»ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ
»ಎಚ್. ಶಕುಂತಳಾ ಭಟ್‌ಗೆ ಹೊರನಾಡ ರಾಜ್ಯೋತ್ಸವ ಪ್ರಶಸ್ತಿ
»ಜ್ಯೋತಿ ಕುಲಾಲ್‌ಗೆ ಪ್ರಗತಿಶೀಲ ರೈತ ಮಹಿಳೆ ಪ್ರಶಸ್ತಿ
»ರಾಜ್ಯಮಟ್ಟದ ಪ್ರತಿಭಾ ಕಾರಂಜಿ: ಪೂರ್ಣಿಮಾ ಪ್ರಥಮ ಸ್ಥಾನ
»ಕೊಡೇಕಲ್‌ನಲ್ಲಿ 401 ಜೋಡಿ sಸಾಮೊಹಿಕ ವಿವಾಹ
»ಚೆಂಬೂರು ಕರ್ನಾಟಕ ಸಂಘದಿಂದ ಸಾಹಿತ್ಯ ಸಹವಾಸ-2008 ಕಾರ್ಯಕ್ರಮ
»ತಬಲಾ ಜತೆಗೆ ಗಾಯನ ಲಿಮ್ಕಾ ದಾಖಲೆಯತ್ತ
»ಚೀನಾ ನೆಲದಲ್ಲಿ ಯಕ್ಷಗಾನ ಚೈನಾದಲ್ಲಿ ಪ್ರದರ್ಶನ ನೀಡಿದ ಮಹಿಳಾ ಯಕ್ಷಗಾನ ತಂಡ.
»ಹಿರಿಯಡಕ ಯಕ್ಷಗಾನ ಮೇಳ ಮತ್ತೆ ತಿರುಗಾಟ ಆರಂಭ
» 'ಕುರುಕ್ಷೇತ್ರಕ್ಕೊಂದು ಅಯೋಗ’ ಯಕ್ಷರಂಗ ಪ್ರಯೋಗ
»ಕೃಷ್ಣಪ್ರಸಾದ್, ಶರಾವತಿಗೆ ಕಂಬಳ ಕಲಾಪ್ರಶಸ್ತಿ
»ಕನ್ನಡದಲ್ಲಿರುವ ‘ಮಂಕುತಿಮ್ಮನ ಕಗ್ಗ' ಆಂಗ್ಲಕ್ಕೆ ಅನುವಾದದ ಕೃತಿ ಬಿಡುಗಡೆ
»ಜನಮನ ಸೂರೆಗೊಂಡ ಹಿಂದೂಸ್ಥಾನೀ ಗಾಯನ
»ಲಿಯೋ ಫೆರ್ನಾಂಡಿಸ್ ಮತ್ತು ವಿಲ್ಸನ್ ಒಲಿವೆರಾ ಪಾಲಿಗೆ ಈ ಭಾರಿಯ ದಿವೋ ಸಾಹಿತ್ಯ ಪುರಸ್ಕಾರ-2008
»ಹಿರಿಯ ಕೊಂಕಣಿ ಸಾಹಿತಿ ರವೀಂದ್ರ ಕೇಲ್ಕರ್ ರಿಗೆ ಘನತೆಯ ಜ್ನಾನಪೀಟ ಪ್ರಶಸ್ತಿ
»ಸಂಧ್ಯಾ ಪೈ ಅವರ‘ಗಮ್ಮತ್ತಿನ ಕಥೆಗಳು’,ಮು೦ತಾದ 6 ಕೃತಿ ಬಿಡುಗಡೆ
»ಜನಪದ ಸಂಸ್ಕೃತಿಯ ಬೆಸುಗೆಗೆ ಅಪೂರ್ವ, ಅಪರೂಪ ಸುಗ್ಗಿ ಬೆನ್ನಿ
»ಅರಾಟೆ ಮಂಜುನಾಥಗೆ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ
»ವೈಷ್ಣವಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ: ರಾಜ್ಯಕ್ಕೆ ಹೆಮ್ಮೆ
»‘ನಿರ್ಭಯ ಸೂರ್ಯ’ ಕವನ ಸ೦ಕಲನ ಬಿಡುಗಡೆ
»ಪ್ರಕಾಶ ಚಂದ್ರ ಶಿಶಿಲ ಅವರಿಗೆ ಡಾಕ್ಟರೇಟ್
»ಪೆರ್ಣೆ: 26 ಜೋಡಿಗಳಿಗೆ ಕಂಕಣ ಭಾಗ್ಯ
»ಮೈಸೂರು:ಬೆಟ್ಟದ ನಂದಿಗೆ ಮಹಾಭಿಷೇಕ
»ಯಲ್ಲಾಪುರ:ಮನಸೂರೆಗೊ೦ಡ ಸಂಕಲ್ಪ ಉತ್ಸವ
»ರಾಜ್ಯಮಟ್ಟದ ತುಳು ಜನಪದ ಜಾತ್ರೆ: ತುಳುವೆರೆ ಆಯನೊ-2009
»ಕೇರಳ ರಾಜ್ಯ 4 ನೇ ಕನ್ನಡ ಸಮ್ಮೇಳನಕ್ಕೆ ಸಿದ್ಧತೆ
»ಸಾಹಿತ್ಯ ಕ್ಷೇತ್ರದಲ್ಲಿ ವಿಖ್ಯಾತರಾಗಿರುವ ಲೇಖಕ ಮಾಳಗಾಂವಕರ
»ಬಹುಮುಖ ಪ್ರತಿಭೆಯ ಯಕ್ಷ ಕಲಾವಿದ ಡಿ. ಮನೋಹರ ಕುಮಾರ್
»ಕನ್ನಡ ಬಾಷೆಗೆ ಶಾಸ್ತ್ರೀಯ ಸ್ಥಾನಮಾನಗಳಿಸುವಲ್ಲಿ ಹೋರಾಟ ನಡೆಸಿದ ಗಣ್ಯರಿಗೆ ಗೌರವ
»ಕವಿಯಲ್ಲಿ ಸಮಕಾಲೀನ ಪ್ರಜ್ಞೆ ಇರಬೇಕು- ಪ್ರಾ. ಸೀತಾರಾಮ್ ಶೆಟ್ಟಿ
»ಅರ್ಧ ಶಕ್ತಿ ಪೀಠ: ನಾಸಿಕ್ ಸಪ್ತಶೃಂಗಿ ದೇವಿ
»‘ಎದೆ ತುಂಬಿ ಹಾಡುವೆನು' ಕಾರ್ಯಕರಮದಲ್ಲಿ ಮಣಿಪಾಲದ ಕೋಗಿಲೆ ಮರಿಗೆ ಪ್ರಶಸ್ತಿ
»ಯಕ್ಷಗಾನದಲ್ಲಿನ ಬದಲಾವಣೆಗೆ ಕಲಾವಿದ, ಪ್ರೇಕ್ಷಕರಿಬ್ಬರು ಕಾರಣ: ಗಣಪತಿ ಶಾಸ್ತ್ರಿ
»ಸೂರ್ಯ ಶೇರಿಗಾರ್ ನಿಟ್ಟೂರು ಉಡುಪಿ ಇವರಿಗೆ ಸನ್ಮಾನ
»ಗದುಗಿನ ‘ರತ್ನ’ ಈಗ ‘ಭಾರತ ರತ್ನ’ ;ಎಲ್ಲೆಡೆ ಸಡಗರ,ಸ೦ಭ್ರಮ, ಹರ್ಷ
»ಜ.29 ರಿಂದಚಿತ್ರದುರ್ಗದಲ್ಲಿ 75ನೇ ಸಾಹಿತ್ಯ ಸಮ್ಮೇಳನ
»ಕನ್ನಡ ಸಾಹಿತ್ಯ ಪರಿಷತ್ ನ ಉಡುಪಿ ಜಿಲ್ಲಾ ಘಟಕ ಉದ್ಘಾಟನೆ:ಪರಿಷತ್ ಕಟ್ಟಡಕ್ಕೆ ಶೀಘ್ರವೇ ಮ೦ಜೂರಾತಿ- ಡಿಸಿ
»ನುಡಿಸಿರಿ ಉದ್ಘಾಟನೆಗೆ ನಿಸಾರ್, ಅಧ್ಯಕ್ಷತೆ ಕಣವಿ
»ಕಲೆಯ ಉಳಿವಿಗೆ ಸಮಷ್ಟಿ ಯತ್ನ : ಹೇರಂಜಾಲು ಚಂದ್ರಶೇಖರ ಹೊಳ್ಳ
»ಬರವಣಿಗೆ ನನಗೆ ಸತ್ಯಾನ್ವೇಷಣೆ: ಭೈರಪ್ಪ
»ತೋನ್ಸೆ ಪಡುಮನೆ ಪಾರ೦ಪರಾಗತ ಕ೦ಬಳ
»ರಾಷ್ಟ್ರೀಯ ಭಾಷಾ ನೀತಿ ಜಾರಿಗೆ ಬರಗೂರು ಆಗ್ರಹ
»ಶಾಸ್ತ್ರೀಯ ಸ್ಥಾನ: ಪಿಐಎಲ್‌ ವಜಾಕ್ಕೆ ರಾಜ್ಯ ಆಗ್ರಹ
»ತುಳು ಭಾಷೆಗೆ ಎರಡು ಸಾವಿರ ವರ್‍ಷ ಇತಿಹಾಸ: ಪಾಲ್ತಾಡಿ ರಾಮಕೃಷ್ಣ ಆಚಾರ್
» ಈಗ ಎಲ್ಲೆಲ್ಲೂ ಹರಡುತ್ತಿದೆ ಕನನ್ನಡದ ಕಂಪು
»ಕೊಂಕಣಿ ಜನರು ಎಲ್ಲಾ ಕ್ಷೇತ್ರಗಳಲ್ಲಿ ಸೈಎನಿಸಿಕೊಳ್ಳಬೇಕು : ಖಾರ್ವಿ ಕರೆ
»ಮತಾಂತರ ಬೇಡ ದಲಿತ ಸಮುದಾಯಕ್ಕೆ ಪೇಜಾವರ ಶ್ರೀಗಳ ಕರೆ
»ಸಾಹಿತಿಗಳ ಸ್ವಸಹಾಯ ಸಂಘ ಉತ್ತಮ ಬೆಳವಣಿಗೆ: ಕಲ್ಕೂರ
»ಬ್ರಹ್ಮ ಕಲಶೋತ್ಸವ ಸಿದ್ಧತೆಯಲ್ಲಿ ಉದ್ದಂತೋಡು ತರವಾಡು
»ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ : ನಾಡೋಜನಿಗೆ ಹರ್ಷ
»ಮಾಧವ ಕುಲಕರ್ಣಿ, ಮೋಹನ ಸೋನಗೆ ಕಾಂತಾವರ ಪುರಸ್ಕಾರ ಪ್ರದಾನ
»ಶಾಸ್ತ್ರೀಯ ಭಾಷೆಗೆ ಪದ ಎರವಲು: ಕನ್ನಡ ಮನಸುಗಳ ದ್ವಂದ್ವ
»ರಾಜ್ಯೋತ್ಸವಕ್ಕೆ ಶಾಸ್ತ್ರೀಯ ಸಂಭ್ರಮ .
»ಧರ್ಮಸ್ಥಳ: ದೇವರು ಬಂದರು ಅಂಗಣದೆಡೆಗೆ...
»ಪಾಟೀಲ್ ಪುಟ್ಟಪ್ಪಗೆ ನೃಪತುಂಗ ಪ್ರಶಸ್ತಿ
»ಕನ್ನಡ ನಿಧಿ ಯೋಜನೆಗೆ 10ಕೋಟಿ ಸಂಗ್ರಹ
»ಯುಕ್ತಿ, ಶಕ್ತಿಗಳ ಹೋರಿ ಬೆದರಿಸುವ ಹಟ್ಟಿಹಬ್ಬ
»ಹಂಪಿ ಉತ್ಸವ: ಪರಂಪರೆ ನಡಿಗೆಗೆ ನಾ೦ದಿ
»ಯಕ್ಷಗಾನ ಶಿಕ್ಷಣಕ್ಕೆ ಪ್ರಮಾಣಪತ್ರದ ಮಾನ್ಯತೆ ಅಗತ್ಯ: ರಘುಪತಿ ಭಟ್
»ಜಾನಪದ ಸಾಹಿತಿ ಮುದೇನೂರು ಸಂಗಣ್ಣ ವಿಧಿವಶ
»‘ಯಕ್ಷಗಾನ ಧರ್ಮವೂ ಹೌದು’
»ಪೇಜಾವರ ಸದಾಶಿವರಾವ್ ಸ್ಮಾರಕ ಪ್ರಶಸ್ತಿಗೆ ಅರ್‍ಜಿ ಆಹ್ವಾನ
»ಬ೦ದಿದೆ ಸಡಗರದ ಹಬ್ಬ ದೀಪಾವಳಿ ,ನಿವಾರಿಸಲಿ ಮನದ ಅ೦ಧಕಾರದ ಹಾವಳಿ
»ಮರೆಯಾಗುತ್ತಿರುವ ಸಾ೦ಪ್ರದಾಯಿಕ ಗೂಡುದೀಪಗಳು
»ಗೋರುಚ ಜಾನಪದ ಅಕಾಡೆಮಿ ಅಧ್ಯಕ್ಷ
»ದಿಲ್ಲಿಯಲ್ಲಿ ಯಕ್ಷಲೋಕ ಸೃಷ್ಟಿಸಿದ ಕಾಸರಗೋಡಿನ ಬೊಂಬೆಗಳು
»ಪ್ರದೀಪ್ ಕುಮಾರ್ ಕಲ್ಕೂರರಿಗೆ ಸಾರ್ವಜನಿಕ ಅಭಿನಂದನೆ
»ಮಲೆನಾಡಗಿತ್ತಿಗೆ ದೀಪದೋಕುಳಿ
»ಮುಂಬೈ ಕನ್ನಡಿಗರ ಮನಗೆದ್ದ `ಉಷಾಹರಣ' ನಾಟಕ
»‘ವೈಟ್ ಟೈಗರ್’ ನಾಯಕ ಬೆಂಗಳೂರಿನವ
»ಬೆಳ್ಳಾರೆ: 3ನೇ ವರ್ಷದ ಶಾರದೋತ್ಸವ
»ಸಾಮೂಹಿಕ ಆಚರಣೆಯಿಂದ ಧರ್ಮಜಾಗೃತಿ : ರಾಘವೇಶ್ವರ ಶ್ರೀಗಳು
»ಮಂಗಳೂರಿನ ಅರವಿಂದ್‌‌ ಅಡಿಗರಿಗೆ 'ಬೂಕರ್' ಪ್ರಶಸ್ತಿ’
»ಸಾಹಿತಿ ಆನಂದಿ ಸದಾಶಿವ ರಾವ್ ಇನ್ನಿಲ್ಲ
»ಚಾಮುಂಡಿಬೆಟ್ಟದಲ್ಲಿ ವಿಜೃಂಭಣೆಯ ಮಹಾರಥೋತ್ಸವ
»ಸನಾತನ ಧರ್ಮ ಅತ್ಯ೦ತ ದೊಡ್ಡ ಧರ್ಮ,ಉಳಿದ ಧರ್ಮ ಹುಟ್ಟಲು ಇದು ಕಾರಣ;ಸದಾನ೦ದ ಗೌಡ
»ಕೇರಳದ ಪ್ರೀತಿಯ ಸಿಸ್ಟರ್ ಈಗ ಸಂತ ಅಲ್ಫೋನ್ಸಾ
»ತುಳು ಅಕಾಡೆಮಿ ಅಧ್ಯಕ್ಷರಾಗಿ ಸಾಹಿತಿ ಪಾಲ್ತಾಡು ರಾಮಕೃಷ್ಣ ಆಚಾರ್
»ಮುಂಬೈಯಲ್ಲಿ ಸುಬ್ರಾಯ ಭಟ್ಟರಿಗೆ ಸನ್ಮಾನ
»ಗೋಕರ್ಣ ಪುನರುತ್ಥಾನಕ್ಕೆ ನಾಂದಿ
»ಕಾರಂತರು ಒಂದು ವಿಸ್ಮಯ: ಅಂಬಾತನಯ ಮುದ್ರಾಡಿ
»ಮಿತ್ತ ಬೈಲು ಯಮುನಕ್ಕ ತುಳುನಾಡಿನ ಸಾಂಸ್ಕೃತಿಕ ಕೃತಿ: ಡಿ.ಕೆ. ಚೌಟ
»ನಾದವೈಭವಂನ ಭಜನಾ ನಾದಾಭಿಯಾನಕ್ಕೆ ಚಾಲನೆ
»ಫ್ರೆಂಚ್ ಲೇಖಕ ಲೆ ಕ್ಲೇಜಿಯೊಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ
»ಇಸ್ಲಾ೦ ಧರ್ಮದ ಐದು ಆಧಾರ ಸ್ಥ೦ಭಗಳು
»ನಾಳೆ ನಗರದಲ್ಲಿ ಕಾರಂತ ಹುಟ್ಟು ಹಬ್ಬ
»ಮೂವರು ಗಣ್ಯರಿಗೆ ರಾಜ್ಯ ಮಟ್ಟದ ಪ್ರಶಸ್ತಿ
»ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಮೊತ್ತ 1 ಲಕ್ಷರು.ಗೆ ಏರಿಕೆ
»ಭಾರತೀಯ ತತ್ತಶಾಸ್ತ್ರ ಪ್ರವೇಶ ಗ್ರಂಥ ಲೋಕಾರ್ಪಣೆ
»ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ
»ಕರ್ನಾಟಕ ಸಾಹಿತ್ಯ ಪರಿಷತ್ ಉದಯ
»ಹೂವಿನಕೋಲಿಗೆ ಮನಸೋತ ಸೋನಿಯಾ
»ರವಿ ಬೆಳಗೆರೆ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ
»ಮಾನವೀಯತೆಯೇ ನಿಜವಾದ ಧರ್ಮ : ಶ್ರೀ ಪೂರ್ಣಕಾಮಾನಂದಜೀ
»`ಮಕ್ಕಳ ಮೊಲಕ ಕನ್ನಡ ಕಸ್ತೂರಿಯನ್ನು ಪಸರಿಸಿ'
»ಐತಿಹಾಸಿಕ ಮೈಸೂರು ದಸರಾಕ್ಕೆ ಸಿದ್ದಗಂಗಾಶ್ರೀ ಚಾಲನೆ
»ನವಮದ ಮಹತ್ವ ಹೊತ್ತ ನವರಾತ್ರಿ
»ಈದಲ್ ಫಿತ್ರ್ `ಮಾನವ ಮೈತ್ರಿಗೆ ರಮ್ಜಾನ್ ಸಂದೇಶ'
»ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಪ್ರಕಟ
»ಕಸಾಪಗೆ ಪರ್ಯಾಯವಾಗಿ ಕರ್ನಾಟಕ ಸಾಹಿತ್ಯ ಪರಿಷತ್!
»ಜಿಲ್ಲಾ ಕಾರಾಗೃಹದಲ್ಲಿ ಬಹುಭಾಷಾ ಕವಿಗೋಷ್ಟಿ !
»ದೆಹಲಿಯಲ್ಲಿ ಮಿಂಚಿದ ‘ಮಳೆಹಕ್ಕಿ’
»ಐವರು ಗಣ್ಯರಿಗೆ ಅನುವಾದ ಅಕಾಡೆಮಿ ಗೌರವ ಪ್ರಶಸ್ತಿ
»ಚಾಂದ್ರಾಯಣ ವ್ರತ
»ಮತಾಂತರ ವಿರೋಧಿ ಕಾಯ್ದೆಗೆ ಪೇಜಾವರಶ್ರೀ ಆಗ್ರಹ
»ಶಿಶುನಾಳ ಶರೀಫರು
»ಶಿಕ್ಷಣದಲ್ಲಿ ಗಮಕ ಕಲೆ ಕಡ್ಡಾಯಕ್ಕೆ ಗೊತ್ತುವಳಿ ಮಂಡನೆ
»ವಿದೇಶದ ಕ್ರೈಸ್ತ ಶಾಲೆಗಳಲ್ಲಿ ವೇದಾಂತ ಪಾಠ!
»ಗೋಕರ್ಣ, ಮತಾಂತರ ಹಾಗೂ ನ್ಯೂ ಲೈಫ್!
»ವಸುಧೈವ ಕುಟುಂಬಕಮ್
»ವಿವೇಕಾನಂದ ಎಂಬ ವೀರ ಸನ್ಯಾಸಿ
»‘ಗೋಕರ್ಣ: ಸ್ಥಿರಾಸ್ತಿ ವರ್ಗಾವಣೆಯಾಗಿಲ್ಲ ’
» 8 ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ.ಗಮಕಿಗಳಿಗೆ ‘ಕುಮಾರವ್ಯಾಸ’ ಪ್ರಶಸ್ತಿ- ಆಚಾರ್ಯ
»ಹಿಂದೂ ಧರ್ಮ ಅಪಾರ್ಥಕ್ಕೆ ಒಳಗಾಗಿದೆಯೇ?
»`ಆದೇಶದಿಂದ ಕನ್ನಡದ ಕಳಕಳಿ ಮೊಡದು'
»ಕೋಳ್ಯೂರು ಅವರಿಗೆ ಮಂಡೆಚ್ಚ ಪ್ರಶಸ್ತಿ
»ಆತ್ಮಲಿಂಗ-ಭಕ್ತರ ಮಧ್ಯೆ ಮಠ ಗೋಡೆಯಾಗಲ್ಲ: ರಾಘವೇಶ್ವರ ಶ್ರೀ ಘೋಷಣೆ
»ಕಟೀಲಿನಲ್ಲಿ 19 ರಿಂದ ರಾಜ್ಯ ಗಮಕ ಕಲಾ ಸಮ್ಮೇಳನ
»ಗಂಗೂಬಾಯಿ, ಭೀಮಸೇನರಿಗೆ ಸವಾಯಿ ಗಂಧರ್ವ ಪ್ರಶಸ್ತಿ
»ರಾಘವೇಶ್ವರ ಸ್ವಾಮಿ ಪುರ ಪ್ರವೇಶ. ಗೋಕರ್ಣದಲ್ಲಿ ‘ಮಹಾಸಂಕಲ್ಪ ಸಮಾವೇಶ’.ಹಸ್ತಾಂತರಕ್ಕೆ ಸ್ವರ್ಣವಲ್ಲಿಶ್ರೀ ವಿರೋಧ
»ಹಿಂದಿ ಹೇರಿಕೆ ತಡೆಗೆ 12 ಸೂತ್ರಗಳು!!
»ಎಸೆಸೆಲ್ಸಿ ಪ್ರಥಮ ರ್‍ಯಾಂಕ್ ಪಡೆದಿದ್ದ ಅರವಿಂದ
»ದೇವಾಲಯಗಳ ಹಸ್ತಾಂತರ ಜಾತಿ ಸಂಘಷ೯ಕ್ಕೆ ಮೂಲವಾದೀತೇ ?
»ಅಧ್ಯಾತ್ಮಕ ಪಾಶ್ಚಾತ್ಯ ಸಂಸ್ಕೃತಿ ಧಕ್ಕೆಯಾಗದಿರಲಿ: ಕಲ್ಕೂರ
» ಅಮೆರಿಕದಲ್ಲಿ ಕನ್ನಡದ ಕ೦ಪು
»ನಲ್ಲೂರು - ಸಾರಥಿಯಾದ ಬಗೆ
»9/11- ಅವತ್ತು ಅಮೆರಿಕೆಯೇನು? ಇಡೀ ಜಗತ್ತೇ ನಡುಗಿತ್ತು!
»ಚೌತಿ ಹಬ್ಬ ಮತ್ತು ಪ್ಯಾಸೆಂಜರ್ ರೈಲಿನ ಪ್ರಯಾಣ!
»'ಬೂಕರ್' ಪ್ರಶಸ್ತಿ ಸಾಲಿನಲ್ಲಿ ಮಂಗಳೂರಿನ ಅರವಿಂದ್‌‌
»ಹೃದಯದಿಂದ ಸ್ಫುರಿಸಿದ ಭಾವ ದೀಪ್ತಿ ‘ಕಾವ್ಯ’: ಬಿ. ಕೃಷ್ಣ ಪೈ
»ವಯೋಲಿನ್ ಮಾಂತ್ರಿಕ ಕುನ್ನಕುಡಿ ವೈದ್ಯನಾಥನ್ ನಿಧನ
»ವಿಶ್ವ ಕನ್ನಡ ಸಮ್ಮೇಳನದ ಸುತ್ತ ಅನುಮಾನದ ಹುತ್ತ
»ಖ್ಯಾತ ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ ಅವರಿಗೆ ಯಕ್ಷ ಕಲಾನಿಧಿ ಪ್ರಶಸ್ತಿ ಪ್ರಧಾನ
»ಬೆಂಗಳೂರಿನಲ್ಲಿ ಯಕ್ಷ ಅಕಾಡೆಮಿ ಕೇಂದ್ರ : ಕುಂಬ್ಳೆ ಸುಂದರ ರಾವ್
»