ಮನಾಮಾ: ಕೊಲ್ಲಿಯ ನೆಲದಲ್ಲಿ ಗಡಿನಾಡ ವೈಭವ : ಕಾಸರಗೋಡ್ ಉತ್ಸವ |
ಪ್ರಕಟಿಸಿದ ದಿನಾಂಕ : 2008-10-12
(ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್)
ಮಲಯಾಳಿ, ಕನ್ನಡ ಹಿಂದಿ ಗೀತೆಗಳಿಂದ ರಂಜಿಸಿದ ಕಾರ್ಯಕ್ರಮ : ರಾಯಭಾರಿಗಳ ಉಪಸ್ಥಿತಿ
ಮನಾಮಾ, ಅಕ್ಟೋಬರ್ 12: ಇಲ್ಲಿನ ಡೆಲ್ಮನ್ ಇಂಟರ್ ನ್ಯಾಶನಲ್ ಹೋಟೆಲಿನ ವಿಶಾಲವಾದ ಈಜುಕೊಳ ಆವರಣದಲ್ಲಿ ಜರುಗಿದ ಕಾಸರಗೋಡ್ ಉತ್ಸವವು ನೆರೆದ ಸಾವಿರಾರು ಜನರ ಕಣ್ಮನ ಸೂರೆಗೊಂಡಿತು.

ಖ್ಯಾತ ಗಾಯಕ ಕಾಂಞಂಗಾಡ್ ರಾಮಚಂದ್ರನ್ ರವರು ತಮ್ಮ ಕಂಠ ಮಾಧುರ್ಯದಿಂದ ಸುಮಾರು ಮೂರು ಘಂಟೆಗಳ ಕಾಲ ಸಂಗೀತ ಧಾರೆ ಹರಿಸಿದರು. ಕಾಸರಗೋಡಿನ ಶಾಸಕರಾದ ಶ್ರೀ ಸಿ.ಟಿ. ಅಹಮ್ಮದ್ ರವರು ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿದ್ದರೆ ಮುಖ್ಯ ಅತಿಥಿಯಾಗಿ ಭಾರತೀಯ ರಾಯಭಾರಿ ಶ್ರೀ ಬಾಲಕೃಷ್ಣ ಶೆಟ್ಟಿಯವರು ಉಪಸ್ಥಿತರಿದ್ದರು.

ಇಲ್ಲಿನ ಅನಿವಾಸಿ ಕಾಸರಗೋಡು ನಿವಾಸಿಗಳ ಸಂಘಟನೆಯಾದ ಕಾಸರಗೋಡ್ ಅಸೋಸಿಯೇಶನ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳು ಅಧ್ಯಕ್ಶ ದೂಮಣ್ಣ ರೈ ಹಾಗೂ ಇತರ ಇತರ ಪದಾಧಿಕಾರಿಗಳು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟನೆ ಕಂಡಿತು.

ಮನರಂಜನಾ ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿದ್ದ ಖ್ಯಾತ ಗಾಯಕ ಕಾಂಞಂಗಾಡ್ ರಾಮಚಂದ್ರನ್ ಅವರು ಜನಪ್ರಿಯ ಮಲಯಾಳಿ ಗೀತೆಗಳನ್ನು ಹಾಡಿ ರಂಜಿಸಿದರು. ಸ್ಥಳೀಯ ಗಾಯಕ, ಗಾಯಕಿಯರೂ ಇವರೊಂದಿಗೆ ದನಿಗೂಡಿಸಿ ಕನ್ನಡ ಹಿಂದಿ ಹಾಡುಗಳನ್ನು ಹಾಡಿದರೆ ನೃತ್ಯಪಟುಗಳು ವೈವಿಧ್ಯಮಯ ನೃತ್ಯಪ್ರದರ್ಶನ ನೀಡಿದರು.

ಭಾರತೀಯ ರಾಯಭಾರಿ ಬಾಲಕೃಷ್ಣ ಶೆಟ್ಟಿಯವರು ಮಧುರ ಕಂಠದ ಕಾಂಞಂಗಾಡ್ ರಾಮಚಂದ್ರನ್ ರವರಿಗೆ ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-12
|
|
|