ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ತುಳುನಾಡ ವೈಭವ ಮೆರೆದ ಬಿ.ಡಿ.ಎನ್.ಇ: ಸಂಭ್ರಮದ ಹನ್ನೊಂದನೇ ವಾರ್ಷಿಕೋತ್ಸವ ಮನರಂಜಿಸಿದ ಕಾರ್ಯಕ್ರಮ

ವಿಶೇಷ ಅತಿಥಿಗಳಾಗಿ ಸಚಿನ್ ಸುವರ್ಣ, ವಿದ್ವಾನ್ ಪ್ರಮೋದ್ ಉಳ್ಳಾಲ್ . ಶ್ರೀ ಶೋಧನ್ ಪ್ರಸಾದ್ ಹಾಗೂ ಶ್ರೀಮತಿ ಪ್ರಸನ್ನ ಕುಕ್ಯನ್ ಅವರ ನಿರೂಪಣೆಯಲ್ಲಿ ಅತ್ಯಂತ ವ್ಯವಸ್ಥಿತ ವಾಗಿ ಜರುಗಿ ನೆರೆದ ಸಾವಿರಕ್ಕೂ ಹೆಚ್ಚು ಸದಸ್ಯರ ಮನರಂಜಿಸಿತು.

ದುಬೈ, ಅಕ್ಟೋಬರ್ ೧೧:  ಬಿಲ್ಲವರ ಸಂಘಟನೆಯಾದ ಬಿ.ಡಿ.ಎನ್.ಇ. (ಬಿಲ್ಲವಾಸ್ ದುಬೈ ಅಂಡ ನಾರ್ಥರ್ನ್ ಎಮಿರೇಟ್ಸ್) ತನ್ನ 11 ನೇ ವಾರ್ಷಿಕೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ ಕೊಂಡಿತು.

ದುಬೈ ದೇರಾದಲ್ಲಿರುವ ರಾಡಿಸನ್ ಸಾಸ್ ಹೋಟೆಲಿನ ಜಬೀಲ್ ಹಾಲ್ ಸಭಾಂಗಣದಲ್ಲಿ ಜರುಗಿದ ಉತ್ಸವದಲ್ಲಿ ಖ್ಯಾತ ಕನ್ನಡ ಹಾಗೂ ಹಿಂದಿ ಚಿತ್ರನಟ ಸಚಿನ್ ಸುವರ್ಣ ಹಾಗೂ ಖ್ಯಾತ ಭರತನಾಟ್ಯ ಕಲಾವಿದ ವಿದ್ವಾನ್ ಪ್ರಮೋದ್ ಉಳ್ಳಾಲ್ ಅವರು ಉಪಸ್ಥಿತರಿದ್ದು ವಿಶಿಷ್ಟ ಕಳೆ ನೀಡಿದ್ದರು.

ದಿನದುದ್ದಕ್ಕೂ ಹಲವು ಚಿಕ್ಕಪುಟ್ಟ ಸ್ಪರ್ಧೆಗಳನ್ನು ಸ್ಥಳದಲ್ಲಿಯೇ ಏರ್ಪಡಿಸಿ ವಿಜೇತರನ್ನು ಬಹುಮಾನಗಳಿಂದ ಪುರಸ್ಕರಿಸಲಾಯಿತು.

ಬೆಳೆಗ್ಗೆ ಹತ್ತು ಘಂಟೆಯಿಂದ ಸಂಜೆ ಆರು ಘಂಟೆಯವರೆಗೂ ನಡೆದ ಕಾರ್ಯಕ್ರಮ ಶ್ರೀ ಶೋಧನ್ ಪ್ರಸಾದ್ ಹಾಗೂ ಶ್ರೀಮತಿ ಪ್ರಸನ್ನ  ಕುಕಿಯನ್ ಅವರ ನಿರೂಪಣೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿ ನೆರೆದ ಸಾವಿರಕ್ಕೂ ಹೆಚ್ಚು ಸದಸ್ಯರ ಮನರಂಜಿಸಿತು.

ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ಕುಕ್ಕಿಯಾನ್ ಅವರು ಸಭೆಗೆ ಅತಿಥಿಗಳನ್ನು ಹಾಗೂ ಸದಸ್ಯರನ್ನು ಸ್ವಾಗತಿಸಿದರು. ಅಬುಧಾಬಿ ಕರ್ನಾಟಕ ಸಂಘದ ಅದ್ಯಕ್ಷ ಶ್ರೀ ಸರ್ವೋತ್ತಮ ಶೆಟ್ಟಿ, ಅಬುಧಾಬಿ ಬಿಲ್ಲವರ ಬಳಗದ ಶ್ರೀ ಮನೋಹರ ತೋನ್ಸೆ, ಧ್ವನಿ ಪ್ರತಿಷ್ಟಾಪನದ ಶ್ರೀ ಪ್ರಕಾಶ ರಾವ್ ಪಯ್ಯಾರ್, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ಪ್ರಭಾಕರ ಅಂಬಲಲ್ತೆರೆ, ನಿಕಟಪೂರ್ವ ಅಧ್ಯಕ್ಷ ಶ್ರೀ ಗಣೇಶ್ ರೈ ಸಹಿತ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದಿನದುದ್ದಕ್ಕೂ ಹಲವಾರು ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕಿಂತ ಇನ್ನೊಂದು ವಿಭಿನ್ನವಾಗಿ ಮನಸೆಳೆ ಯುವಂತಿದ್ದರೂ ಕಾರ್ಯಕ್ರಮಕ್ಕೆ ಕಿರೀಟಪ್ರಾಯವಾದುದು ಬಿ.ಡಿ.ಎನ್.ಇ. ಮಹಿಳಾ ವಿಭಾಗದ ಪ್ರಸ್ತುತಿ. ಸಾಕ್ಷಾತ್ ದುರ್ಗಾಮಾತೆ ರಥದಲ್ಲಿ ಸಭಿಕರ ನಡುವೆ ಮೆರವಣಿಗೆಯಲ್ಲಿ ಬರುತ್ತಿದ್ದ ದೃಶ್ಯ ಅತ್ಯಂತ ಮನೋಹರ ಹಾಗೂ ಚೇತೋಹಾರಿಯಾಗಿತ್ತು.

ಸರಳ ಪರಿಕರಗಳಿಂದ ಸ್ಥಳೀಯವಾಗಿ ತಯಾರಿಸಿದ ರಥದಲ್ಲಿ ಆಗಮಿಸಿದ ದುರ್ಗೆ ಎಲ್ಲರ ಮನಗೆದಳು. ತನ್ನ ಪಾರಿವಾರದಲ್ಲಿ ಹುಲಿವೇಶ, ಹಾಗೂ ಹಣತೆಗಳನ್ನು ಕೈಯಲ್ಲಿ ಹಿಡಿದ ಮಹಿಳೆಯರು ಯು.ಎಇ.ಇ.ಯಲ್ಲಿಯೇ ಪ್ರಥಮ ಬಾರಿಗೆ ಹೊಸತನ ನೀಡಿದರು.

ಸಭೆಯ ಸ್ವಾಗತ ಗೀತೆಯನ್ನು ರಘು ಮತ್ತು ತಂಡದವರು ಪ್ರಸ್ತುತ ಪಡಿಸಿದರು.

ಊರಿನಿಂದ ಈ ಕಾರ್ಯಕ್ರಮಕ್ಕೆ ವಿಶೇಶವಾಗಿ ಆಗಮಿಸಿದ್ದ ವಿದ್ವಾನ್ ಪ್ರಮೋದ್ ಉಳ್ಳಾಲ್ ಅವರು ಅಲ್ಪಾವಧಿಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ತರಬೇತಿ ನೀಡಿ ಹಲವು ನಾಟ್ಯ ಪ್ರಾಕಾರಗಳನ್ನು ಪ್ರಸ್ತುತ ಪಡಿಸಿದರು. ತಮ್ಮ ಅಮೋಘ ನಾಟ್ಯದಿಂದ ಯು.ಎ.ಇ. ಜನತೆಗೆ ವಿಶಿಠ ಅನುಭವ ನೀಡಿದರು. ಪ್ರಮೋದ್ ಉಳ್ಳಾಲರೊಂದಿಗೆ ಕೀರ್ತಿ, ಶುಭಾ ಪುಶ್ಪಾಂಜಲಿ ಸ್ವಾಗತನೃತ್ಯ ದಿಂದ ಸಭಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಮಹಿಳಾ ವಿಭಾಗದ ಏಳು ಮಹಿಳೆಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರಾದಾಯಿಕ ಮೆರುಗು ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಜ್ಮಾನಿನ ರೇಡಿಯೋ 4 ನಲ್ಲಿ ರೇಡಿಯೋ ರಿರೂಪಕರಾಗಿರುವ ಹರ್ಷ ಪೂಜಾರಿಯವರು ತಮ್ಮ ಎಂದಿನ ವಾಕ್ಚಾತುರ್ಯದಿಂದ ಸಭಿಕರನ್ನು ರಂಜಿಸಿದರು.

ದಿನವಿಡೀ ಹಲವು ಕಾರ್ಯಕ್ರಮಗಳು ಪ್ರದರ್ಶಿತಗೊಂಡವು. ಫ್ಯಾಶನ್ ಷೋ 2050  ಪ್ರದರ್ಶನದಲ್ಲಿ 2050 ರಲ್ಲಿ ಉಡುಗೆಗಳು ಹೇಗಿರಬಹುದೆಂಬು ದನ್ನು ಪ್ರಸ್ತುತಪಡಿಸಿದ ಸದಸ್ಯರು ವಿವಿಧ ವೇಷಗಳಿಂದ ಪ್ರೇಕ್ಷಕರನ್ನು ದಂಗುಬಡಿಸಿದರು. ಓರ್ವ ಪಾತ್ರಧಾರಿ ಮೀಸೆಯ ಅರ್ಧಭಾಗ ತೆಗೆದಿದ್ದು, ಇನ್ನೋರ್ವರು ಒಂದು ಕಾಲಿಗೆ ಪ್ಯಾಂಟ್ ಒಂದು ಕಾಲಿಗೆ ಚೆಡ್ಡಿ ಧರಿಸಿ ಗಮನ ಸೆಳೆದರು.

ಓಷಿಯನ್ ಕಿಡ್ಸ್ ಪ್ರಸ್ತುತ ಪಡಿಸಿದ ಸಮೂಹನೃತ್ಯ, ಚಿಕ್ಕಮಕ್ಕಳು ಪ್ರಸ್ತುತಪಡಿಸಿದ ಸಮೂಹನೃತ್ಯ ರಂಜಿಸಿದವು. ತುಳುನಾಡ ವೈಭವ ಎಂಬ ಪ್ರದರ್ಶನದಲ್ಲಿ ಒಂದೇ ಹಾಡಿನ ಹೆನ್ನೆಲೆಯಲ್ಲಿ ತುಳುನಾಡ ಸಂಸ್ಕೃತಿ ಯನ್ನು ಬಿಂಬಿಸುವ ಒಂದು ಪ್ರಯತ್ನ ಅಮೋಘವಾಗಿತ್ತು. ಕೋಟಿ ಚೆನ್ನಯ, ನಾಟಿ, ಒನಕೆ, ಮೀನುಬಲೆ, ಯಕ್ಷಗಾನ ಮೊದಲಾದ ಕಲೆಗಳು ವೇದಿಕೆಯಲ್ಲಿ ಜೀವತಳೆದವು.

ಹಲವಾರು ಹಾಸ್ಯ ಕಿರು ರೂಪಕಗಳು ಪ್ರದರ್ಶನಗೊಂಡವು. ಹೋಟೆಲ್ ಮ್ಯಾನೇಜ್ ಮೆಂಟ್ ಊರಿನ ಹೋಟೆಲಿನ ದೃಶ್ಯವನ್ನು ತೋರ್ಪಡಿಸಿದರೆ ಇನ್ನೊಂದು ರೂಪಕದಲ್ಲಿ ಚಿಕ್ಕವಸ್ತುಗಳನ್ನು ದೊಡ್ಡದಗಿಸುವ ಯಂತ್ರ ಮಗುವನ್ನು ಹಿರಿಯಗಾಗಿಸಿ ಎಲ್ಲರನ್ನೂ ನಕ್ಕುನಗಿಸಿತು.

ಕಳೆದ ಮೂವತ್ತು ವರ್ಷಗಳಿಂದ ಯು.ಎ.ಇ.ಯಲ್ಲಿ ವಾಸವಾಗಿರುವ ಹಾಗೂ ತುಳು ಸಂಘಟಾನೆಗಳಿಗೆ ತಮ್ಮ ಸೇವೆ ಸಲ್ಲಿಸುತ್ತಾ ಬಂದಿರುವ ಹಿರಿಯರಾದ ವಾಮನ್ ಪೂಜಾರಿ ಹಾಗೂ ಅವರ ಧರ್ಮಪತ್ನಿ ಚಂದ್ರಿಕಾ ವಾಮನ ಪೂಜಾರಿಯವರನ್ನು ಶಾಲು ಹೊದೆಸಿ ಫಲಪುಷ್ಪ ಸ್ಮರಣಿಕೆಗಳೊಂದಿಗೆ ಸನ್ಮಾನಿಸಲಾಯಿತು.

ಸ್ವಾದಿಷ್ಟ ಮಧ್ಯಾಯನದ ಭೋಜನದ ಬಳಿಕ ಮತ್ತೆ ಪ್ರಾರಂಭವಾದ ಕಾರ್ಯಕ್ರಮಗಳು ಸಂಜೆಯವರೆಗೂ ಮುಂದುವರೆದವು.

ಬಿಲ್ಲವಸ್ ದುಬೈ ಅಂಡ್ ನಾರ್ರ್ಥನ್ ಎಮಿರೇಟ್ಸ್ ಮಹಿಳಾ ವಿಭಾಗ ಪ್ರಸ್ತುತಪಡಿಸಿದ ಗರ್ಭಾ ನೃತ್ಯ (ಕೋಲಾಟ) ಎಲ್ಲರ ಗಮನ ಸೆಳೆಯಿತು. ನಡುನಡುವೆ ರಾಜೇಶ್ ಬಜಲ್ ರವರು ಕೆಲವು ಕನ್ನಡ ಚಿತ್ರಗೀತೆಗಳಿಂದ ಮನರಂಜಿಸಿದರು.

ತುಳುನಾಡಿನ ಒಂದು ಪುರಾತನ ನೃತ್ಯಪ್ರಾಕಾರವಾರ ಕಣಗಿಲು ನೃತ್ಯದಲ್ಲಿ ತೆಂಗಿನಗರಿಗಳ ಸಾಂಪ್ರಾದಾಯಿಕ ಉಡುಗೆ ತೊಟ್ಟ ಸಮೂಹ ಉತ್ತಮ ಪ್ರದರ್ಶನ್ ನೀಡಿತು. ತಂಡದ ಮುಖ್ಯಸ್ಥ ಬಿದಿರಿನ ಬುಟ್ಟಿಯನ್ನು ಹಿಡಿದು ಗಣ್ಯರಿದ್ದಲ್ಲಿ ಸಂಭಾವನೆ ಬೇಡುವ ದೃಶ್ಯ ರಂಜಿಸಿತು. ಉಪಸ್ಥಿತರಿದ್ದ ಗಣ್ಯರು ಕಾಣಿಕೆ ನೀಡಿ ಅವರನ್ನು ಪ್ರೋತ್ಸಾಹಿಸಿದರು.

ಪೋಲೀಸ್ ವೇಷಧಾರಿಯೊಬ್ಬರು ಇಡಿಯ ಸಭಾಂಗಣದಲ್ಲಿ ತಿರುಗಿ ಊರಿನ ಸಾಮಾನ್ಯ ಪೋಲೀಸ್ ಅಧಿಕಾರಿ ತೋರುವ ದರ್ಪದಿಂದ ಕಾರ್ಯಕ್ರಮಕ್ಕೆ ಇನ್ನಷ್ಟು ರಂಗು ತಂದರು.

ಕಳೆದ ವರ್ಷ ಹತ್ತನೆಯ ಹಾಗೂ ಹನ್ನೆರಡೆಯ ವರ್ಗದ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಬಿಲ್ಲವ ಬಳಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೂಕ್ತ ಬಹುಮಾನಗಳೊಂದಿಗೆ ಪ್ರೋತ್ಸಾಹಿಸಲಾಯಿತು. ಈ ಪ್ರಶಸ್ತಿ ಪಡೆದ ನಾಲ್ವರೂ ಹೆಣ್ಣುಮಕ್ಕಳೆಂಬುದು ಒಂದು ವಿಷೇಶ.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತ ಶ್ರೀ ಉಮೇಶ್ ಕುಕ್ಕಿಯಾನ್ ಅವರು ಊರಿನಲ್ಲಿ ತಮ್ಮ ಸಂಘಟನೆ ನೀಡಿದ ಸಹಾಯಗಳ ಕಿರುಪರಿಚಯ ನೀಡಿದರು. ಈದುವರೆಗೂ ಶಿಕ್ಷಣಾರ್ಥ ಹಾಗೂ ವೈದ್ಯಕೀಯ ಮೊದಲಾದ ನೆರವುಗಳಿಗಾಗಿ ಒಟ್ಟು ಇಪ್ಪತ್ತಮೂರು ಲಕ್ಷ ರೂಪಾಯಿ ಗಳನ್ನು ನೀಡಿರುವುದನ್ನು ಅವರು ಪ್ರಚುರಪಡಿಸಿದರು.

ಆ ಬಳಿಕ ಮಾತನಾಡಿದ ಸರ್ವೋತ್ತಮ ಶೆಟ್ಟರು ತುಳುನಾಡಿನ ಮೂರು ಪ್ರಮುಖ ಸಂಘಟನೆಗಳಾದ ಬಿಲ್ಲವ, ಬಂಟ ,ಮೊಗವೀರರು ಹಾಗೂ ಇನ್ನಿತರ  ಸಂಘಟನೆಗಳು  ಸೇರಿ ಒಂದೇ ಸೂರಿನಡಿ ಕಾರ್ಯನಿರ್ವಹಿಸುವ ತಮ್ಮ ಅಭಿಲಾಷೆಯನ್ನು ತೋಡಿಕೊಂಡರು.

ನಾವು ಇಲ್ಲಿ ವ್ಯರ್ಥವಾಗಿ ವ್ಯಯಿಸುವ ದುಂದುವೆಚ್ಚಗಳಿಂದ ಊರಿನಲ್ಲಿ ಹಲವು ಹಸಿದ ಕುಟುಂಬಗಳಿಗೆ ಸಹಾಯ ನೀಡಬಹುದೆಂದು ಶ್ರೀ ಗಣೇಶ್ ರೈಯವರು ತಮ್ಮ ಭಾಷಣದಲ್ಲಿ ನುಡಿದರು. ಆ ಬಳಿಕ ಮಾತನಾಡಿದ ಮನೋಹರ ತೋನ್ಸೆಯವರು ಈಗಾಗಲೇ ನೀಡಿದ ಇಪ್ಪತ್ತಮ್ಮೂರು ಲಕ್ಷಕ್ಕೂ ಹೆಚ್ಚಿನ ಸಹಾಯ ಮುಂದಿನ ದಿನಗಳಲ್ಲಿ ನೀಡುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಕಡೆಯಲ್ಲಿ ಆಯೋಜಿಸಲಾಗಿದ್ದ ಲೈವ್ ಡೀಜೆ ಕಾರ್ಯಕ್ರಮದಲ್ಲಿ ಹಲವು ತೀವ್ರಗತಿಯ ಹಾಡುಗಳೂ ವೇದಿಕೆಯನ್ನು ನೃತ್ಯಾಕಣವನ್ನಾಗಿಸಿತು. ಮಕ್ಕಳಾದಿಯಾಗಿ ಹಿರಿಯರೆಲ್ಲರೂ ಕುಣಿದು ಕಪ್ಪಳಿಸಿ ಹಿಂದೆಂದೂ ಇಲ್ಲದಷ್ಟು ಸಂಭ್ರಮ ಮಟ್ಟರು.

ರಾಫೆಲ್ ಡ್ರಾ ಮೂಲಕ ಹಲವು ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು. ಮಂಗಳೂರಿಗೆ ರಿಟರ್ನ್ ಟಿಕೆಡ್, 25 ಗ್ರಾಂ ಚಿನ್ನ, ವಾಚುಗಳು ಅದೃಷ್ಟಶಾಲಿಗಳನ್ನು ಅರಸಿ ಬಂದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಕ್ವಾಲಿಟಿ ಐಸ್ ಕ್ರೀಂ ಸಂಸ್ಥೆ ಉಚಿತ ಐಸ್ ಕ್ರೀಂ ಕೂಪನ್ನುಗಳಿಂದ ಪ್ರೋತ್ಸಾಹಿಸಿತು.

ಅಂತಿಮವಾಗಿ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿಯವರು ವಂದ್ನಾರ್ಪಣೆ ಸಲ್ಲಿಸಿದರು.

 ಪ್ರದರ್ಶನದುದ್ದಕ್ಕೂ ಬೃಹತ್ ಪರದೆಗಳ ಮೇಲೆ ಸಂಘದ ಪ್ರಾಯೋಜಕರ ಹಾಗೂ ಸದಸ್ಯರ ವಿವರಗಳು ಮೂಡಿಬರುತ್ತಿದ್ದವು.

ವರದಿ: ಅರ್ಶದ್ ಹುಸೇನ್, ಚಿತ್ರಗಳು: ಸುಜಯ್ ಬೆಂದೂರ್

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-11


ಪ್ರತಿಸ್ಪಂದನ
N. Mohammed Hussain, Dammam
2008-10-11
It must have been a good programme as reported. Even though there are many tulu speaking people in Saudi Arabia, they are not united as people in UAE. We must give importance to the sentence given by Mr. Sarvotham shetty. thanks
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ಶುಕ್ರವಾರ ಅ.31 ರಂದು ಅಬುಧಾಬಿಯಲ್ಲಿ ಯಶಸ್ವೀ ತುಳುನಾಟಕ ’ಗಂಗುನ ಗಮ್ಮತ್”
»ಅಪಾರ್ಟಮೆಂಟ್ ನಲ್ಲಿ ಬೆಂಕಿ ದುರಂತ: ಅಣ್ಣ ತಂಗಿ ದಾರುಣ ಸಾವು
»ಟ್ಯಾಕ್ಸಿ ಕನಿಷ್ಟ ದರ: ದುಬೈಯಿಂದ ಶಾರ್ಜಕ್ಕೂ ಧಿರಹ್ಮ್ಸ್20
»ಅಬುಧಾಬಿ ಚಿತ್ರೋತ್ಸವಕ್ಕೆ ಕನ್ನಡದ ‘ದಾಟು’
»ಅಬುಧಾಬಿ: ’ಒಂದು ವಿಲಾ ಓಂದು ಕುಟುಂಬ' ಕಾನೂನು ಜಾರಿ
»ಶಾರ್ಜ - ದುಬೈ ಟ್ಯಾಕ್ಸಿ ಕನಿಷ್ಟ ಬಾಡಿಗೆ ದಿರಮ್ಸ್ 20ರಿಂದ
»ಅಜ್ಮಾನ್: ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಫಾರ್ಮ್.ಡಿ. ಹಾಗೂ ಡಿ.ಎಮ್.ಡಿ ಪದವಿಗಳ ಪ್ರಾರಂಭ
»ಅಬುಧಾಬಿ: ನಗರದಲ್ಲಿ ಅಕ್ಟೋಬರ್ 31 ರಂದು ಗಂಗುನ ಗಮ್ಮತ್ ತುಳುನಾಟಕ ಪ್ರದರ್ಶನ
»ಬೆಂಗಳೂರು: ಬಿಲ್ಲವ ಅಸೋಶಿಯನ್ ರಿಂದ ಬಿಲ್ಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ಗೆ ಸನ್ಮಾನ ಮಾನ್ಯತೆ
»ದುಬೈ: ವಿಲ್ಲಾ ಹಂಚಿಕೊಳ್ಳುತ್ತಿರುವ ಕುಟುಂಬಗಳಿಗೆ ತರವುಗೊಳಿಸಿದ್ದ ಗಡುವು ಮುಕ್ತಾಯ
»ದುಬೈ: ಕುಸಿಯುತ್ತಿರುವ ರೂಪಾಯಿ ಬೆಲೆ : ಎಕ್ಸ್ ಚೇಂಜ್ ಗಳಿಗೆ ಧಾವಿಸುತ್ತಿರುವ ಭಾರತೀಯರು
»ಶಾರ್ಜಾ: ಶಿಕ್ಷಕೌ ಖಾಸಗಿ ಟ್ಯೂಶನ್ ನೀಡುವುದು ಕಾನೂನಿಗೆ ವಿರುದ್ಧ : ಎಚ್ಚರಿಕೆ ಜಾರಿ
»ದುಬೈ: ಬರಲಿದೆ ಒಂಟೆ ಹಾಲಿನ ಚಾಕಲೇಟು
»ದುಬೈ: ಫೆರರೈಟ್ಸ್ ಯು.ಎ.ಇ. ಆಯೋಜಿಸಿರುವ ವೋಕಲ್ ಟಚ್ - ಗಾಯನಕಾರ್ಯಕ್ರಮ
»ಅಬುಧಾಬಿ : ಈಗ ಕಾರ್ಮಿಕರ ವಸತಿಗೂ ಕಾಯಕಲ್ಪ : ಸ್ವಚ್ಛತೆಗೆ ಆದ್ಯತೆ
»ಅಬುಧಾಬಿ: ಕರ್ನಾಟಕ ರಾಜ್ಯೋತ್ಸವ ಒಂದು ವಾರಕ್ಕೆ ಮುಂದೂಡಿಕೆ
»ದುಬೈ: ಭವ್ಯ ಎಲೆಕ್ಟ್ರಾನಿಕ್ಸ್ ಮಾರಾಟ ಉತ್ಸವ ಜಿ-ಟೆಕ್ಸ್ ಪ್ರಾರಂಭ : ಪೇಲವಗೊಂಡ ಪ್ರತಿಕ್ರಿಯೆ
»ಅಜ್ಮಾನ್: ಮೆಕೆಂಜೀ ಥೆರಪಿಯ ಸ್ನಾತಕೋತ್ತರ ವಿಭಾಗದಿಂದ ಎರಡನೇ ಭಾಗ ನೆರವೇರಿಕೆ
»ದುಬೈ: ಯು.ಎ.ಇ. ಅಮ್ಚಿಗೆಲೆ ಸಮಾಜ್ ಆಚರಿಸಿದ ಸತ್ಯನಾರಾಯಣ ಪೂಜೆ
»ಅಂಬಲ್ತೆರೆ ವಿಷನ್ಸ್ ಚೊಚ್ಚಲ ಪ್ರದರ್ಶನ : ಯಶಸ್ವೀ ತುಳುನಾಟಕ ’ಗಂಗುನ ಗಮ್ಮತ್” ಪ್ರದರ್ಶನ
»ದುಬೈ: ಪ್ರೇಕ್ಷಕರನ್ನು ರಂಜಿಸಿದ ಎಸ್.ಕೆ.ಎಮ್.ಸಿ. ಡೆಸರ್ಟ್ ಸ್ಟ್ರಿಂಗ್ಸ್
»ದುಬೈ: ಕಾರ್ಪೋರೇಶನ್ ಬ್ಯಾಂಕ್ ಬಡ್ದಿ ದರದಲ್ಲಿ ಏರಿಕೆ
»ದುಬೈ: ಸಾಗರ ವೈಭವವನ್ನು ಮೈಗೂಡಿಸಿಕೊಂಡ ವಿಶಿಷ್ಟ ಹೋಟೆಲ್ - ಅಟ್ಲಾಂಟಿಸ್
»ಅಜ್ಮಾನ್: ಗಲ್ಫ್ ಮೆಡಿಕಲ್ ಕಾಲೇಜು ಪ್ರಾರಂಭಿಸಿದ ಹೊಸ ಕೋರ್ಸುಗಳು : ಡಾಕ್ಟರ್ ಆಫ್ ಫಾರ್ಮಸಿ ಹಾಗೂ ಡಿ.ಎಮ್.ಡಿ
»ಅಬುಧಾಬಿ: ಅಬುಭಾಬಿ ಕನ್ನಡ ಫೆಲೋಶಿಪ್ ಆಚರಿಸಿದ ಸುಗ್ಗಿ ಉತ್ಸವ
»ದುಬೈ: ಯು.ಎಇ. ಅಮ್ಚಿಗೆಲೆ ಸಮಾಜ ಆಚರಿಸಲಿರುವ ಸತ್ಯನಾರಾಯಣ ಪೂಜೆ 17ನೇ ತಾರೀಖಿನಂದು
»ದುಬೈ: ಶುಕ್ರವಾರ ತುಳು ನಾಟಕ - ಗಂಗುನ ಗಮ್ಮತ್ ಪ್ರದರ್ಶನ
»ಶಾರ್ಜಾ: ಸಂಭ್ರಮದ ಈದ್ ಮಿಲನ್ ಆಚರಿಸಿದ ಶಾರ್ಜಾ ಆಮ್ಟೆಕ್ ಸಂಸ್ಥೆ : ನವಾಯತಿ ಕವಿಯ ಪರಿಚಯ
»ತುಳುನಾಡ ವೈಭವ ಮೆರೆದ ಬಿ.ಡಿ.ಎನ್.ಇ: ಸಂಭ್ರಮದ ಹನ್ನೊಂದನೇ ವಾರ್ಷಿಕೋತ್ಸವ ಮನರಂಜಿಸಿದ ಕಾರ್ಯಕ್ರಮ
»ಶಾರ್ಜಾ: ಗಿನ್ನೆಸ್ ದಾಖಲೆಗೆ ಎರೆಡು ಮುಕ್ಕಾಲು ಕಿ.ಮೀ ಉದ್ದದ ಬೆಲೂನ್ ಸರಪಳಿ
»ಅಬುಧಾಬಿ: ಕನ್ನಡ ಚಿತ್ರ -ಗುಲಾಬಿ ಟಾಕೀಸ್-14ನೇ ಅಕ್ಟೋಬರ್ ನಂದು ಪ್ರದರ್ಶನ
»ದುಬೈ: ಬಿಲ್ಲವರ ಬಳಗ 11ನೇ ವಾರ್ಷಿಕೋತ್ಸವ : ವಾಳ್ಟರ್ ನಂದಳಿಕೆ ಮತ್ತು ರಾಜಕುಮಾರ್ ರವರಿಗೆ ಸನ್ಮಾನ
»ಅಜ್ಮಾನ್: ಗಲ್ಫ್ ಮೆಡಿಕಲ್ ಕಾಲೇಜಿಗೆ ಮಲೇಶಿಯಾ ಪ್ರಧಾನ ಮಂತ್ರಿಗಳ ಭೇಟಿ
»ದುಬೈ: ಬಿ.ಡಿ.ಎನ್.ಇ. ಪ್ರಾಯೋಜಿಸಿರುವ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮ ಅಕ್ಟೋಬರ್ 10 ರಂದು
»ಶಿಕ್ಷಣ ಮಂತ್ರಿ ಶ್ರೀ ಕಾಗೇರಿ ವಿಶ್ವೇಶ್ವರ ಹೆಗಡೆಯವರ ಅಬುಧಾಬಿ ಭೇಟಿ : ವಿಶೇಷ ಸಂದರ್ಶನ
»ಯುಎಇಯಲ್ಲಿ 2.1 ಬಿಲಿಯನ್ ಡಾಲರ್‌ ಹೂಡಿಕೆ:ಶಾರುಕ್‌
»ದುಬೈ: ಒಂದು ಕಿ.ಮೀ. ಎತ್ತರದ ಕಟ್ಟಡ ನಿರ್ಮಿಸಲಿರುವ ನಖೀಲ್ ಸಂಸ್ಥೆ
»ದುಬೈ: ಶಿಕ್ಷಣ ಸಚಿವರನ್ನು ಸತ್ಕರಿಸಿದ ದುಬೈ ಕರ್ನಾಟಕ ಸಂಘ
»ದುಬೈ: ಈದ್ ಮಿಲನ್ ಕಾರ್ಯಕ್ರಮದಲ್ಲಿ ಭಾಗಿಯಾದ ಶಿಕ್ಷಣ ಸಚಿವರು
»ದುಬೈ: ವಾಯ್ಸ್ ಆಫ್ ಮ್ಯಾಂಗಲೋರ್ : ಡಾನಿ ಕೊರಿಯಾ, ಆಶಾ ಫೆರ್ನಾಂಡಿಸ್ ಅಂತಿಮ ಹಂತಕ್ಕೆ
»ದುಬೈ: ಭಟ್ಕಳದ ನವಾಯತರ ಸೌಹಾರ್ದ ಕೂಟದಲ್ಲಿ ಭಾಗವಹಿಸಿದ ಸಚಿವ ಕಾಗೇರಿ
»ಅಬುಧಾಬಿ: ನಗರದ ಜಾಯೆದ್ ಮಸೀದಿನಲ್ಲಿ ಈದ್ ನಮಾಜ್ ನಿರ್ವಹಿಸಿದ ಯು.ಎ.ಇ. ಅಧ್ಯಕ್ಷರು
»ದುಬೈ: ಎಸ್.ಕೆ.ಎಂ.ಸಿ. ಪ್ರಸ್ತುತಪಡಿಸಲಿದೆ - ವರ್ಷದ ಭವ್ಯ ಕಾರ್ಯಕ್ರಮ - ಡೆಸರ್ಟ್ ಸ್ಟ್ರಿಂಗ್ಸ್-2008
»ಅಬುಧಾಬಿ: ಚೀನಾದ ಡೈರಿ ವಸ್ತುಗಳಿಗೆ ಯು.ಎ.ಇ.ಯಲ್ಲಿ ನಿಷೇಧ
»ಅಬುಧಾಬಿ: ಕರ್ನಾಟಕ ರಾಜ್ಯೋತ್ಸವ ನವೆಂಬರ್ 7 ರಂದು
»ದುಬೈ: 11ನೇ ಸುಗ್ಗಿ ಉತ್ಸವ ಆಚರಿಸಲಿರುವ ಯೂನಿಟಿ ಕನ್ನಡ ಚರ್ಚ್-ದುಬೈ
»ದುಬೈ: ತಪ್ಪು ಮಾಡಿದವನ ಬಾಯಿಗೆ ಮಿಠಾಯಿ
»ದುಬೈ: ಈದ್ ರಜಾದಿನಗಳಲ್ಲಿ ಉಚಿತ ಪಾರ್ಕಿಂಗ್
»ಶಾರ್ಜಾ: ಅಪಘಾತದಲ್ಲಿ ಒಂಭತ್ತು ಲಾರಿ ಹಾಗೂ ಒಂದು ಬಸ್ಸು ಜಖಂ
» ಸಾಲದಿಂದ ಸಾವಿಗೆ..
»ದುಬೈ: ಅತ್ಯಂತ ಹೆಚ್ಚಿನ ವೇತನ ಪಡೆಯುವವರು ವಕೀಲರು
»ದುಬೈ: ಶಾಲಾ ಕಾಲೇಜುಗಳಿಗೆ ಒಟ್ಟು ಒಂಭತ್ತು ದಿನ ರಜೆ
»ಅಬುಧಾಬಿ: 320 ಮಿಲಿಯನ್ ದಿರ್ಹಾಂ ವಂಚಿಸಿದ ನಕಲಿ ಸಂಸ್ಥೆ
»ಖಾಸಗಿ ಕ್ಷೇತ್ರಕ್ಕೆ ಎರೆಡು ದಿನಗಳ ಈದ್ ರಜೆ. ಸರ್ಕಾರಿ ಕ್ಷೇತ್ರಕ್ಕೆ ಆರು ದಿನಗಳ ರಜೆ
»ಅಬುಧಾಬಿ: ನವೆಂಬರ್ 7 ರಂದು ಕರ್ನಾಟಕ ರಾಜ್ಯೋತ್ಸವ : ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ
»ಶಾರ್ಜಾ: ಕಾರುಗಳಿಂದ ಕದಿಯುತ್ತಿದ್ದ ಮೂವರು ಹದಿಹರೆಯದ ತಂಡದ ಬಂಧನ
»ದುಬೈ: ಕಾರ್ಪೋರಶನ್ ಬ್ಯಾಂಕಿನ ಪ್ರಥಮ ವಿದೇಶೀ ಕಾರ್ಯಾಲಯ ಪ್ರಾರಂಭ
»ದುಬೈ: ಮೂವತ್ತು ದಿನಗಳಲ್ಲಿ ವಿಲ್ಲಾಗಳನ್ನು ಹಂಚಿಕೊಳ್ಳುತ್ತಿರುವ ಕುಟುಂಬಗಳಿಗೆ ತೆರವುಗೊಳಿಸಲು ನೋಟೀಸ್
»ದುಬೈ: ಚರ್ಚುಗಳ ಮೇಲಿನ ಧಾಳಿ : ಯು.ಎ.ಇ.ಯಲ್ಲಿ ಸಕಲವರ್ಗದಿಂದ ಒಮ್ಮತದ ಖಂಡನೆ
»ದುಬೈ: ನಗರಕ್ಕೆ ಹೊಸ ಮಾರ್ಗಸೂಚಿ ವ್ಯವಸ್ಥೆ
»ದುಬೈ: ಬಿಲ್ಲವಾಸ್ ದುಬೈ ಮತ್ತು ಉತ್ತರ ಸಂಸ್ಥಾನ ಆಯೋಜಿಸಿರುವ ಸಾಂಸ್ಕೃತಿಕ ದಿನ ಅಕ್ಟೋಬರ್ ಹತ್ತರಂದು
» Fire at ERCO manufacturing unit near Khalid Port in Sharjah
»ದುಬೈ: ಶಾಲಾ ಶಿಕ್ಷಣವೆಚ್ಚವನ್ನು ಒಂದೂವರೆ ಪಟ್ಟು ಏರಿಸಲಿರುವ ಎರೆಡು ಪ್ರಮುಖ ಶಾಲೆಗಳು
»ದುಬೈ: ಕುರಾನ್ ಪಠಣ ಸ್ಪರ್ಧೆ ಗೆದ್ದ ಹದಿಮೂರು ವರ್ಷದ ಬಾಲಕ
»ದುಬೈ: ಇಫ್ತಾರ್ ಕೂಟ ಆಚರಿಸಿದ ಬ್ಯಾರೀಸ್ ಕಲ್ಚರಲ್ ಫೋರಂ; ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ 25 ಲಕ್ಷ ರೂ ಸಂಗ್ರಹ
»ಅಬುಧಾಬಿ: ಇಫ್ತಾರ್ ಕೂಟ ಆಚರಿಸಿದ ಬ್ಯಾರೀಸ್ ವೆಲ್ಫೇರ್ ಫೋರಂ
»ದುಬೈ: ಅಕ್ವೇರಿಯಂನಲ್ಲಿದ್ದ ಟೈಗರ್ ಶಾರ್ಕ್ ಕ್ರೋಧಿತ : ನಲವತ್ತು ಇತರ ಶಾರ್ಕ್ ಗಳಿಗೆ ಮೃತ್ಯುಪಾಶ
»ದುಬೈ: ವಿಮಾನದಲ್ಲಿ ಬಾಂಬ್ ಭೀತಿ ಹಬ್ಬಿಸಿದ್ದ ಬ್ರಿಟನ್ ನಾಗರಿಕರಿಗೆ 4 ತಿಂಗಳ ಜೈಲು
»ನಟ ಶಾರುಖ್ ಈಗ ದುಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ
»ಅಲ್ ಐನ್: ಇರಾನ್ ಭೂಕಂಪ - ಯು.ಎ.ಇ.ಯ ಹಲವೆಡೆ ಮತ್ತೊಮ್ಮೆ ಅದುರಿದ ಭೂಮಿ
»Expat Workers can Start Own Business
»ಅಬುಧಾಬಿ: ಕಾರ್ಮಿಕರ ವೇತನ ತಡಮಾಡಬೇಡಿ : ಸಂಸ್ಥೆಗಳಿಗೆ ಸರ್ಕಾರದ ಎಚ್ಚರಿಕೆ
»ದುಬೈ: ಸಾರ್ವಜನಿಕ ಸ್ಥಳದಲ್ಲಿ ಪಾನೀಯ ಕುಡಿದ ಆರೋಪ : 1000 ದಿರ್ಹಾಂ ದಂಡ
»ದುಬೈ: ಮೆಟ್ರೋ ರೈಲು ಪ್ರಾಯೋಗಿಕಾ ಚಾಲನೆಗೆ ಸಕಲ ಸಿದ್ಧತೆ
»ಅಬುಧಾಬಿ: ರಮಧಾನ್ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಮುಸ್ಲಿಮೇತರ ಬಾಂಧವರು
»ದುಬೈ: ಖರ್ಜೂರದ ಎಲೆಗಳಿಂದ ಪರಿಸರ ಸ್ನೇಹಿ ವಸ್ತುಗಳು
»ದುಬೈ: ದೆಹಲಿ ಬಾಂಬ್ ಸ್ಪೋಟ : ಆತಂಕದಲ್ಲಿ ಬಂಧುಗಳು, ಸಿಗದ ಫೋನ್ ಸಂಪರ್ಕ
»ದುಬೈ: ಒಂದೇ ಕೋಣೆಯಲ್ಲಿ ಹೆಚ್ಚಿನ ಒಂಟಿಜೀವಿಗಳಿಗೆ ಅವಕಾಶ ನೀಡುವ ಕಟ್ಟಡ ಮಾಲಿಕರಿಗೆ ದಂಡ
»ಅಬುಧಾಬಿ: ಚಿನ್ನದ ಬೆಲೆ ಕುಸಿತ : ಚಿನ್ನದಂಗಡಿಗಳಿಗೆ ಮುಗಿಬಿದ್ದ ಜನ
»ಶಾರ್ಜಾ: ಹತ್ತನೆಯ ವಾರ್ಷಿಕೋತ್ಸವ ಆಚರಿಸಿದ ಯೂನಿಟಿ ಕನ್ನಡ ಚರ್ಚ್
»ಅಜ್ಮಾನ್: ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಹೊಸ ವರ್ಷ ಆರಂಭ
»ದುಬೈ: ಇತ್ತೀಚೆಗೆ ಪ್ರಾರಂಭವಾದ ನೂರು ದುಬೈ ನೇತ್ರ ಚಿಕಿತ್ಸೆಗೆ ಸಾವಿರಾರು ಜನರ ದಂಡು
»ದುಬೈ: ಮೂರು ಸಾವಿರ ಕಾರ್ಮಿಕರಿಗೆ ಇಫ್ತಾರ್ ಒದಗಿಸುವ ಸೋನಾಪುರ್ ಟೆಂಟ್
»ದುಬೈ: ತಮ್ಮ ಏ.ಟಿ.ಎಮ್. ಪಿನ್ ಸಂಖ್ಯೆಗಳನ್ನು ಬದಲಿಸಿಕೊಳ್ಳಲು ಬ್ಯಾಂಕುಗಳಿಂದ ಆಗ್ರಹ
»ಅಬುಧಾಬಿ, ಸೆಪ್ಟೆಂಬರ್ ೧೧: ಬ್ಯಾರೀಸ್ ವೆಲ್ಫೇರ್ ಫೋರಂ ಆಯೋಜಿಸಿರುವ ಇಫ್ತಾರ್ ಕೂಟ
»ದುಬೈ: ಮೆಟ್ರೋ ರೈಲು ನಿಲ್ದಾಣಗಳ ನಡುವಣ ಪ್ರಯಾಣ ಹತ್ತು ದಿರ್ಹಾಂಗಳಿಗೂ ಕಡಿಮೆ : ಆರ್.ಟಿ.ಎ.
»ದುಬೈ: ಫಲಾನುಭವಿಗಳಿಗೆ ಸಹಾಯಧನ ವಿತರಿಸಿದ ನಮ ತುಳುವೆರ್ ಯು.ಎ.ಇ.
»ದುಬೈ: ಇರಾನಿನಲ್ಲಿ ಭೂಕಂಪ : ಯು.ಎ.ಇ.ಯಲ್ಲೂ ನಡುಗಿದ ನೆಲ
»ದುಬೈ: ಸೆಂಟ್ ಮೇರೀಸ್ ಚರ್ಚ್ ನಲ್ಲಿ ಮೊಂತಿ ಉತ್ಸವ ಆಚರಿಸಿದ ಕೊಂಕಣಿ ಬಾಂಧವರು
»ಶಾರ್ಜಾ : ಟೈಂ ಪಾಸ್ ಮಾಡಲು ಹುಸಿಬಾಂಬ್ ಕರೆ : ಈಗ ಪೋಲೀಸರ ಅತಿಥಿ
»ದುಬೈ: ದಶಮಾನೋತ್ಸವ ಆಚರಿಸಲಿರುವ ಯೂನಿಟಿ ಕನ್ನಡ ಚರ್ಚ್ ದುಬೈ ಮತ್ತು ಶಾರ್ಜಾ
»Traffic at a standstill as new Salik gates come into effect
»ದುಬೈ: ಕಾಲೇಜ್ ಬಸ್ ದರದಲ್ಲಿ ನಾಲ್ಕು ಪಟ್ಟು ಏರಿಕೆ : ವಲಸೆ ಹೋಗುತ್ತಿರುವ ವಿದ್ಯಾರ್ಥಿನಿಯರು
»ದುಬೈ: ತುಂಬಿ ತುಳುಕುತ್ತಿರುವ ಮಸೀದಿಗಳಲ್ಲಿ ರಿಂಗ್ ಟೋನ್ ಹಾವಳಿ
»ಅಬುಧಾಬಿ: ಟ್ಯಾಕ್ಸಿಗಳಲ್ಲಿ ಜಿ.ಪಿ.ಎಸ್. ಅಳವಡಿಕೆ : ಪರಿಕ್ಷಾರ್ಥ ಓಡಾಟ ಪ್ರಾರಂಭ
»ಅಬುಧಾಬಿ: ಭಿಕ್ಷಾಟನೆ - ಪ್ರಾಯೋಜಕರಿಗೂ ಕಾನೂನಿನ್ವಯ ಕ್ರಮ
»Dh4 or Dh8 – New Salik Gates Add to Confusion
»ತುಳು ನಾಟಕ ಗಂಗುನ ಗಮ್ಮತ್ ದುಬೈಯಲ್ಲಿ: ಅಂಬಲತ್ತೆರೆಯವರ ತುಳು ಕಲಾಕೊಡುಗೆ
»ದುಬೈ: ಹತ್ತು ಲಕ್ಷ ಜನರಿಗೆ ನೇತ್ರಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನೂರ್ ಅಭಿಯಾನ ಪ್ರಾರಂಭ
»Major fire breaks out at Al Sha'ab football stadium in Sharjah
»Drivers on Al Maktoum Bridge will go toll-free every night
»ದುಬೈ: ಹೆಲಿಕಾಪ್ಟರ್ ದುರಂತದಲ್ಲಿ ಇಬ್ಬರು ಭಾರತೀಯರು ಸೇರಿ 7 ಮಂದಿ ಮೃತ್ಯು
»ದುಬೈ: ನಗರದಲ್ಲಿ ಗಣೇಶ ಚತುರ್ಥಿ : ಹಲವು ಮನೆಗಳಲ್ಲಿ ಗಣೇಶ ವಿಗ್ರಹ ಸ್ಥಾಪನೆ
»ದುಬೈ: ರಮಧಾನ್ ವಿಚಾರ ಸಂಕಿರಣ - ಕೆ.ಐ.ಕೆ.ಬಿ ಹಮ್ಮಿಕೊಂಡಿದ್ದ ಪ್ರಶ್ನೋತ್ತರ ಕಾರ್ಯಕ್ರಮ
»ದುಬೈ: ಗಲ್ಫ್ - ಯೂರೋಪ್ ರೈಲುದಾರಿಗೆ ನೀಲನಕ್ಷೆ
»ಅಬುಧಾಬಿ: ಶಿಕ್ಷಣ ಪಡೆಯುತ್ತಲೇ ಉದ್ಯೋಗ ನಿರ್ವಹಿಸಲು ಅನಿವಾಸಿ ವಿದ್ಯಾರ್ಥಿಗಳಿಗೆ ಅವಕಾಶ
»ದುಬೈ: 2012 ರ ವೇಳೆಗೆ ಹೈಬ್ರಿಡ್ ತಂತ್ರಜ್ಞಾನ ಪಡೆಯುವ ಸಾರಿಗೆ ವ್ಯವಸ್ಥೆ
»ಅಲ್ ಐನ್: ಸೆಪ್ಟೆಂಬರ್ ತಿಂಗಳಿಂದ ಕಡಿಮೆಯಾಗಲಿರುವ ಧಗೆ : ಹವಾಮಾನ ಇಲಾಖೆ
»ಯು.ಎ.ಇ: ಇಂದಿನಿಂದ ರಮಧಾನ್ ತಿಂಗಳ ಪ್ರಾರಂಭ
»ಅಬುಧಾಬಿ: ರಮಧಾನ್ ತಿಂಗಳಲ್ಲಿ ಭಿಕ್ಷಾಟನೆಗೆ ಪ್ರತಿಬಂಧನೆ
»ದುಬೈ: ಶೇಖ್ ಮೊಹಮ್ಮದರಿಂದ 777 ಖೈದಿಗಳಿಗೆ ಕ್ಷಮಾದಾನ
»ದುಬೈ: ಸಮುದ್ರದಲ್ಲಿ ಉದ್ಭವವಾಗುತ್ತಿರುವ ಭವ್ಯ ಬಂಗಲೆಗಳು
»ಯು.ಎ.ಇ.: ಸರ್ಕಾರಿ ಶಾಲೆಗಳಲ್ಲಿ ಅನಿವಾಸಿ ಮಕ್ಕಳಿಗೆ ಪ್ರವೇಶ ಅವಕಾಶ
»ದುಬೈ: ಬಿಲ್ಲವಾಸ್ ದುಬೈ ನಿರ್ವಹಿಸಿದ ಗುರುನಾರಾಯಣ ಪೂಜೆ
»ದುಬೈ: ಚೂಡಿ ಪೂಜೆ ನಿರ್ವಹಿಸಿದ ಅಮ್ಚಿಗೆಲೆ ಸಮಾಜ್ ಯು.ಎ.ಇ : ಮಹಾಪ್ರಸಾದ ವಿತರಣೆ
»ದುಬೈ: ಕಾನೂನು ಉಲ್ಲಂಘನೆ : ನಾನೂರು ಕಾರ್ಮಿಕ ವಸತಿ ಕಟ್ಟಡಗಳು ಮುಚ್ಚುವ ಭೀತಿಯಲ್ಲಿ
»ಶಾರ್ಜಾ: ವಾಹನ ಪಾರ್ಕಿಂಗ್ ಮಾಡಲು ಹೊಸ ಕಟ್ಟಡ
»ದುಬೈ: ವಾರ್ಷಿಕ ಕುರಾನ್ ಪಠಣ ಸ್ಪರ್ಧೆಗೆ ಎಂಭತ್ತೈದು ಸ್ಪರ್ಧಿಗಳು
»ದುಬೈ: ಬರಲಿದೆ ತೆರೆದ ಆಕಾಶದ ಸಿನೇಮಾ ಮಂದಿರ
»ದುಬೈ: ಶಾಲಾ ಬಸ್ಸುಗಳ ಸುರಕ್ಷತೆಗಾಗಿ ಹೊಸ ನಿಯಮಾವಳಿ
»ಅಬುಧಾಬಿ: ಟ್ಯಾಕ್ಸಿ ಚಾಲಕರಿಗೆ ಕಮೀಶನ್ ವ್ಯವಸ್ಥೆ
»ದುಬೈ: ಬೆಂಕಿ ದುರ್ಘಟನೆ - ಇಬ್ಬರ ಬಂಧನ
»ಅಬುಧಾಬಿ: ಶಾಲಾ ವೆಚ್ಚದಲ್ಲಿ ಏರಿಕೆ ಕೋರಿ ಸಚಿವಾಲಯಕ್ಕೆ ಅರ್ಜಿ ಸಲ್ಲಿಕೆ
»ದುಬೈ: ಬೆಳಗ್ಗಿನ ಜಾವ ವಿಲ್ಲಾವೊಂದರಲ್ಲಿ ಬೆಂಕಿ : 11 ಸಾವು
»ದುಬೈ: ನಗರದಲ್ಲಿ ರಿಸಾರ್ಟ್ ಮತ್ತು ಗಾಲ್ಫ್ ಕೋರ್ಸ್ ನಿರ್ಮಿಸಲಿರುವ ಟೈಗರ್ ವುಡ್ಸ್
»ದುಬೈ: ಎಮಿರೇಟ್ಸ್ ರಸ್ತೆ ಸ್ಥಗಿತ ಪ್ರಕರಣ : ಎಲ್ಲಾ ಕಾಂಟ್ರಾಕ್ಟರುಗಳಿಗೆ ಎಚ್ಚರಿಕೆ
»ದುಬೈ: ಶಾಲಾ ಕಾಲೇಜು ಬಸ್ಸುಗಳಿಗೆ ಸಾಲಿಕ್ ಇಲ್ಲ : ಆರ್.ಟಿ.ಎ
»ದುಬೈ: ಎಮಿರೇಟ್ಸ್ ರಸ್ತೆಯಲ್ಲಿ ಪೈಪು ಸ್ಪೋಟ : ವಾಹನಸಂಚಾರ ಬಾಧಿತ
»ಅಬುಧಾಬಿ: ಅಣುಶಕ್ತಿ ಕೇವಲ ಶಾಂತಿಯುತ ಉದ್ದೇಶಗಳಿಗಾಗಿ :ಯು.ಎ.ಇ. ಸ್ಪಷ್ಟನೆ
»ದುಬೈ: ಒಂದು ವರ್ಷದ ಲೈಸನ್ಸ್ ಕಾನೂನು - ಹೊಸಬರಿಗೆ ಮಾತ್ರ.
»ಶಾರ್ಜಾ: ರಸ್ತೆ ಅಗಲ ಕಾರ್ಯಕ್ರಮದಿಂದ ಬಾಧೆಗೊಳಗಾದ ವಾಣಿಜ್ಯ ಸಂಸ್ಥೆಗಳಿಗೆ ಪರಿಹಾರ
»ದುಬೈ: ಹೊಸ ಲೈಸನ್ಸ್ ಪಡೆಯಬಯಸುವವರಿಗೆ ಥಿಯರಿ ಪಾಠಗಳು
»ದುಬೈ: ನಗರದಲ್ಲಿ ಶುಕ್ರವಾರ ಬ್ರಹ್ಮಶ್ರೀ ನಾರಾಯಣ ಗುರುರವರ 154ನೇ ಜನ್ಮತಿಥಿ
»ದುಬೈ: ಶುಕ್ರವಾರ ನಗರದಲ್ಲಿ -ಚೂಡಿ ಪೂಜೆ- ಆಯೋಜಿಸಿರುವ ಅಮ್ಚಿಗೆಲೆ ಸಮಾಜ್
»ದುಬೈ: ಶಾಪಿಂಗ್ ಮಾಲುಗಳ ವತಿಯಿಂದ ಉಚಿತ ಬಸ್ ಸೇವೆ
»ದುಬೈ: ಡ್ರೈವಿಂಗ್ ಲೈಸನ್ಸ್ ಕೇವಲ ಒಂದು ವರ್ಷಕ್ಕೆ ಅನ್ವಯ : ಉತ್ತಮ ಚಾಲಕರಿಗೆ ಮಾತ್ರ ನವೀಕರಣ
»ದುಬೈ: ರಮಧಾನ್ ತಿಂಗಳಲ್ಲಿ ತೋಪು ಹೊಡೆಯಲು ಇಪ್ಪತ್ತು ಪೋಲೀಸರ ನೇಮಕ
»ಶಾರ್ಜಾ: ಮರಳಿ ಶಾಲೆಗೆ : ಶಾರ್ಜಾ ಪೋಲೀಸರು ಪ್ರಾರಂಭಿಸಿದ ಅಭಿಯಾನ
»62ನೇ ಸ್ವಾತಂತ್ರೋತ್ಸವ ಆಚರಿಸಿದ ಶಾರ್ಜಾ ಕರ್ನಾಟಕ ಸಂಘ
»ದುಬೈ: ಅಮ್ಚಿಗೆಲೆ ಸಮಾಜ್ ಆಯೋಜಿಸಿರುವ ಚೂಡಿ ಪೂಜೆ 29 ಆಗಸ್ಟ್ ರಂದು
»ಅಜ್ಮಾನ್: ಗಲ್ಫ್ ಮೆಡಿಕಲ್ ಕಾಲೇಜು ಪ್ರಾರಂಭಿಸಿದ ಡಿ.ಎಮ್.ಡಿ ಪದವಿ
»ಅಬುಧಾಬಿ: ಐ ಲವ್ ಯೂ ಯು.ಎ.ಇ. ಅಭಿಯಾನ ಮುಂದಿನ ತಿಂಗಳಿಂದ
»ದುಬೈ: ದಂಡಗಳನ್ನು ಕಟ್ಟಲು ಚಾಲಕರಿಗೆ ಕಂತಿನ ಸೌಲಭ್ಯ
»ದುಬೈ: ವಿಮಾನ ನಿಲ್ದಾಣದ ಮೂರನೆಯ ಟರ್ಮಿನಲ್ ಅಕ್ಟೋಬರ್ 14ರಿಂದ ಕಾರ್ಯಾರಂಭ
»ದುಬೈ: ಒಂದೇ ಒಂದು ದಿರ್ಹಾಂ ಸಾಮಾಜಿಕ ಕರ್ತವ್ಯ ನಿಧಿಗೆ : ಅರ್ಹರಿಗೆ ನೀಡುವ ಬಾಳ್ವೆ
»ದುಬೈ: ವೀಸಾ ಬದಲಾವಣೆಗೆ ಕಿಶ್ ಸಹಿತ ನೆರೆದೇಶಗಳಿಗೆ ಹೋಗುವುದು ಈಗ ಸಂಭವನೀಯ
»ದುಬೈ: ವಾಹನ ಚಾಲನದ ವೇಳೆ ಧೂಮಪಾನ ನಿಷೇಧ ಕಾಯ್ದೆ : ಶೀಘ್ರದಲ್ಲಿ
»ದುಬೈ: ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರಿಗೆ ಉಚಿತ ತಂಪುಪಾನೀಯ
»ದುಬೈ: ಟ್ಯಾಕ್ಸಿ ಬೇಕೇ? : ಒಂದು ಎಸ್ಸೆಮ್ಮೆಸ್ ಕಳಿಸಿ ಸಾಕು
»